ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Monsoon Laundry Tips: ಮಳೆಗಾಲದಲ್ಲಿ ಒಗೆದ ಬಟ್ಟೆಗಳ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ತಂತ್ರ ಪಾಲಿಸಿ
ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದೇ ಒಂದು ದೊಡ್ಡ ಸಮಸ್ಯೆ. ಹೌದು ಬಿಸಿಲಿನ ಕೊರತೆ, ಆರ್ದ್ರತೆಯ ಕಾರಣ ಬಟ್ಟೆ ಸರಿಯಾಗಿ ಒಣಗುವುದಿಲ್ಲ. ಹೀಗೆ ಸರಿಯಾಗಿ ಒಣಗದಿದ್ದರೆ, ಚೆನ್ನಾಗಿ ಒಗೆದ ಬಟ್ಟೆಗಳು ಸಹ ಕೊಳೆತ ವಾಸನೆ ಬರಲು ಪ್ರಾರಂಭಿಸುತ್ತವೆ. ಈ ಅಹಿತಕರ ವಾಸನೆಯನ್ನು ಹೋಗಲಾಡಿಸಲು ಹಾಗೂ ಬಟ್ಟೆ ವಾಸನೆ ಬರದಂತೆ ತಡೆಯಲು ಬಯಸಿದರೆ ಈ ಕೆಲವೊಂದು ಪದಾರ್ಥಗಳನ್ನು ಬಳಸಿ ಡ್ರೆಸ್ ವಾಶ್ ಮಾಡಿ.
- Malashree anchan
- Updated on: Aug 6, 2026
- 7:32 pm
Charm Pricing Strategy: ಬಹುತೇಕ ವಸ್ತುಗಳ ಬೆಲೆ 499, 999 ರೂ. ಏಕಿರುತ್ತವೆ, ಏನಿದು ಮಾರ್ಕೆಟಿಂಗ್ ಗಿಮಿಕ್?
ಅಮೆಜಾನ್, ಫ್ಲಿಪ್ಕಾರ್ಟ್ನಂತಹ ಇ-ಕಾಮರ್ಸ್ ಸೈಟ್ಗಳಿಂದ ಹಿಡಿದು ಪ್ರಮುಖ ಮಾಲ್, ಸೂಪರ್ ಮಾರ್ಕೆಟ್ಗಳಲ್ಲಿ ನಾವು ಖರೀದಿಸುವಂತಹ ವಸ್ತುಗಳ ಬೆಲೆ 99, 599, 999, ಅಥವಾ 19,999 ರೂ. ಈ ರೀತಿ ಇರುತ್ತವೆ. ಬಟ್ಟೆ, ಚಪ್ಪಲಿಯಿಂದ ಹಿಡಿದು ದಿನಸಿ ವಸ್ತುಗಳವರೆಗೆ ನಾವು ಖರೀದಿಸುವ ಬಹುತೇಕ ವಸ್ತುಗಳ ಬೆಲೆ ಸಂಖ್ಯೆ 99 ರಲ್ಲಿ ಕೊನೆಗೊಳ್ಳುತ್ತವೆ. ಪ್ರತಿಯೊಂದು ವಸ್ತುವಿನ ಬೆಲೆಯೂ "9" ಎಂಬ ಮಾಂತ್ರಿಕ ಸಂಖ್ಯೆಯಲ್ಲಿ ಏಕೆ ಕೊನೆಗೊಳ್ಳುತ್ತವೆ, ಇದರ ಹಿಂದಿರುವ ಮಾರ್ಕೆಟಿಂಗ್ ತಂತ್ರವೇನು ಎಂಬುದನ್ನು ತಿಳಿಯೋಣ ಬನ್ನಿ.
- Malashree anchan
- Updated on: Aug 6, 2026
- 6:23 pm
Hiroshima Day 2026: ಭೀಕರ ಪರಮಾಣು ದಾಳಿಗೆ ನಲುಗಿ ಹೋಗಿದ್ದ ಜಪಾನಿನ ಹಿರೋಷಿಮಾ ನಗರ ಇಂದು ಹೇಗಿದೆ?
ಎರಡನೇ ಮಹಾಯುದ್ಧದ ಸಮಯದಲ್ಲಿ ಆಗಸ್ಟ್ 6, 1945 ರಂದು ಹಿರೋಷಿಮಾದ ಮೇಲೆ ನಡೆದ ಪರಮಾಣು ಬಾಂಬ್ ದಾಳಿಯ ಕರಾಳ ದಿನದ ನೆನಪಿಗಾಗಿ ಪ್ರತಿ ವರ್ಷ ಹಿರೋಷಿಮಾ ದಿನವನ್ನು ಆಚರಿಸಲಾಗುತ್ತದೆ. ಇಂದು ಹಿರೋಷಿಮಾ ದಿನವನ್ನು ಆಚರಿಸಲಾಗುತ್ತಿದ್ದು, 81 ವರ್ಷಗಳ ಹಿಂದೆ ಭೀಕರ ಪರಮಾಣು ದಾಳಿಗೆ ನಲುಗಿ ಹೋಗಿದ್ದ ಹಿರೋಷಿಮಾ ನಗರ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Aug 6, 2026
- 10:48 am
Chanakya Niti: ವ್ಯಕ್ತಿಯ ಜೀವನವನ್ನು ನಾಶ ಮಾಡುವ ನಾಲ್ಕು ಪ್ರಮುಖ ಕೆಟ್ಟ ಅಭ್ಯಾಗಳು
ಆಚಾರ್ಯ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಸಂಗತಿಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿದ್ದಾರೆ. ಅವರು ಯಶಸ್ಸು, ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು, ಸುಖಕರ ದಾಂಪತ್ಯ ಜೀವನ ನಡೆಸುವುದು ಹೇಗೆ ಎಂಬಿತ್ಯಾದಿ ಅಂಶಗಳನ್ನು ಉಲ್ಲೇಖಿಸಿರುವಂತೆ ಕೆಲವೊಂದು ಅಭ್ಯಾಸಗಳಿಂದ ವ್ಯಕ್ತಿಯ ಜೀವನ ಸಂಪೂರ್ಣವಾಗಿ ನಾಶವಾಗುತ್ತದೆ ಎಂಬುದನ್ನು ಸಹ ಎಚ್ಚರಿದ್ದಾರೆ. ಹಾಗಿದ್ದರೆ ಯಾವ ಅಭ್ಯಾಸಗಳು ವ್ಯಕ್ತಿಯೊಬ್ಬನ ಜೀವನವನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Aug 5, 2026
- 8:46 pm
ಸ್ಪೂನ್ ಬಿಟ್ಟು ಕೈಯಲ್ಲಿ ಊಟ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ
ಹಿಂದಿನಿಂದಲೂ ನಮ್ಮ ಭಾರತದಲ್ಲಿ ಆಹಾರವನ್ನು ಸ್ಪೂನ್ ಬದಲು ಕೈಗಳಲ್ಲಿಯೇ ಸೇವಿಸಲಾಗುತ್ತದೆ. ಆದರೆ ಇಂದು ಅನೇಕರು ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಆಹಾರವನ್ನು ಸ್ಪೂನ್ನಲ್ಲಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಆಹಾರವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ಕೈಯಲ್ಲಿ ತಿನ್ನುವುದು. ಇದು ಇಂದ್ರೀಯಗಳನ್ನು ತೃಪ್ತಿಪಡಿಸುವುದಲ್ಲದೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಕೈಗಳಿಂದ ಆಹಾರ ತಿನ್ನುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು ಎಂಬುದರ ಪೂರ್ಣ ವಿವರ ಇಲ್ಲಿದೆ.
- Malashree anchan
- Updated on: Aug 5, 2026
- 8:12 pm
ಮನೆ ಟೆರೇಸ್ ಮೇಲೆ ಸುಲಭವಾಗಿ ಬೆಳೆಯಬಹುದು ಡ್ರ್ಯಾಗನ್ ಫ್ರೂಟ್; ಇದಕ್ಕಾಗಿ ಈ ಸಲಹೆ ಅನುಸರಿಸಿದರೆ ಸಾಕು
ಸುಮ್ಮನೆ ಜಾಗ ಏಕೆ ಖಾಲಿ ಬಿಡೋದು ಅಂದು ಅನೇಕರು ತಮ್ಮ ಮನೆಯ ಟೆರೇಸ್ ಮೇಲೆ ಸೊಪ್ಪು, ತರಕಾರಿ, ಹೂವಿನ ಗಿಡಗಳನ್ನು ಬೆಳೆಯುತ್ತಾರೆ. ತರಕಾರಿ ಮಾತ್ರವಲ್ಲದೆ ಡ್ರ್ಯಾಗನ್ ಹಣ್ಣನ್ನು ಸಹ ಈಸಿಯಾಗಿ ಟೆರೇಸ್ ಮೇಲೆ ಬೆಳೆಸಬಹುದು. ಹೌದು ಈ ಕೆಲವೊಂದು ನಿಯಮಗಳನ್ನು ಪಾಲಿಸುವ ಮೂಲಕ ಸುಲಭವಾಗಿ ಬಾಲ್ಕನಿ ಮತ್ತು ಟೆರೇಸ್ ಮೇಲೆ ಡ್ರ್ಯಾಗನ್ ಫ್ರೂಟ್ ಬೆಳೆಯಬಹುದು.
- Malashree anchan
- Updated on: Aug 5, 2026
- 7:21 pm
ದೂರ ಪ್ರಯಾಣ ಮಾಡುವಾಗ ವಾಂತಿ ಬರದಂತೆ ತಡೆಯಲು ಈ ಸಲಹೆಯನ್ನು ಪಾಲಿಸುವುದು ಉತ್ತಮ
ಅನೇಕರು ದೂರ ಪ್ರಯಾಣ ಮಾಡುವಾಗ ಅನಾನುಕೂಲತೆಗಳನ್ನು ಅನುಭವಿಸುತ್ತಾರೆ. ಸುಸ್ತು, ವಾಕರಿಗೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಲ್ಲಿ ಕೆಲವರು ಪ್ರಯಾಣದುದ್ದಕ್ಕೂ ವಾಂತಿ ಮಾಡುತ್ತಾರೆ. ಈ ಕಾರಣದಿಂದ ಪ್ರಯಾಣದ ಮೋಜು ಕೂಡ ಹಾಳಾಗುತ್ತದೆ. ಟ್ರಾವೆಲ್ ಮಾಡುವ ಸಂದರ್ಭದಲ್ಲಿ ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇದನ್ನು ತಡೆಗಟ್ಟಲು ಈ ಕೆಲವೊಂದು ಸಲಹೆಗಳನ್ನು ಪಾಲಿಸಿ ಮತ್ತು ಪ್ರಯಾಣವನ್ನು ಆನಂದಿಸಿ.
- Malashree anchan
- Updated on: Aug 5, 2026
- 6:00 pm
Better Sleep Tips: ಮಲಗುವ ಮುನ್ನ ಈ ಕೆಲಸ ಮಾಡಿದ್ರೆ, ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಬಹುದು
ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ 7 ರಿಂದ 8 ಗಂಟೆಗಳ ನಿದ್ರೆ ಪಡೆಯುವುದು ತುಂಬಾನೇ ಮುಖ್ಯ. ಆದರೆ ಇಂದಿನ ಒತ್ತಡದ ಜೀವನದಲ್ಲಿ ಅನೇಕರಿಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ನೀವು ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ನಿತ್ಯ ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿ, ಇದು ನಿಮಗೆ ನೆಮ್ಮದಿಯ ನಿದ್ರೆ ಪಡೆಯಲು ತುಂಬಾನೇ ಸಹಾಯ ಮಾಡುತ್ತವೆ.
- Malashree anchan
- Updated on: Aug 4, 2026
- 8:38 pm
White Clothes Cleaning Tips: ಬಿಳಿ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಲು, ಡ್ರೆಸ್ ವಾಶ್ ಮಾಡುವಾಗ ಈ ಟಿಪ್ಸ್ ಪಾಲಿಸಿ
ಬಿಳಿ ಬಣ್ಣದ ಬಟ್ಟೆಗಳು ಬಹು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದ ಅವುಗಳ ನಿರ್ವಹಣೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ನಿಮ್ಮ ನೆಚ್ಚಿನ ಬಿಳಿ ಬಟ್ಟೆ ಹಳದಿ ಬಣ್ಣಕ್ಕೆ ತಿರುಗದಂತೆ ನೋಡಿಕೊಳ್ಳಲು ಹಾಗೂ ಬಿಳಿ ಬಣ್ಣದ ಬಟ್ಟೆಯ ಮೇಲಿನ ಹಳದಿ ಕಲೆಗಳನ್ನು ತೆಗೆದು ಹಾಕಲು ಈ ಕೆಲವೊಂದು ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
- Malashree anchan
- Updated on: Aug 4, 2026
- 7:58 pm
Positive Energy Plants for Home: ಸಕಾರಾತ್ಮಕತೆಯನ್ನು ಹರಡುವ ಈ ಗಿಡಗಳನ್ನು ಪ್ರತಿ ಮನೆಯಲ್ಲೂ ನೆಡಬೇಕು
ಮನೆಯ ಸೌಂದರ್ಯವನ್ನು ಹೆಚ್ಚಿಸಲು ಮನೆಯಂಗಳ ಹಾಗೂ ಮನೆಯ ಒಳಗೆ ಗುಲಾಬಿ, ದಾಸವಾಳ, ಮನಿಪ್ಲಾಂಟ್, ಸ್ನೇಕ್ ಪ್ಲಾಂಟ್ ಅಂತೆಲ್ಲಾ ಒಂದಷ್ಟು ಗಿಡಗಳನ್ನು ನೆಡುತ್ತೇವೆ. ಈ ಪೈಕಿ ಈ ಕೆಲವೊಂದು ಗಿಡಗಳನ್ನು ನೆಡುವುದರಿಂದ ಮನೆಯ ಅಂದ ಹೆಚ್ಚಾಗುವುದಲ್ಲದೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯೂ ವೃದ್ಧಿಯಾಗುತ್ತಂತೆ. ನಿಮ್ಮ ಮನೆಯ ನಾಕಾರತ್ಮಕ ಶಕ್ತಿ ನಾಶವಾಗಿ ಧನಾತ್ಮಕ ಶಕ್ತಿ ವೃದ್ಧಿಯಾಗಬೇಕೆಂದರೆ ನೀವು ಕೂಡ ನಿಮ್ಮ ಮನೆಯಲ್ಲಿ ತಪ್ಪದೇ ಈ ಕೆಲವೊಂದು ಗಿಡಗಳನ್ನು ನೆಡಿ.
- Malashree anchan
- Updated on: Aug 4, 2026
- 7:09 pm
ಮಳೆನೀರಲ್ಲಿ ಮೊಬೈಲ್ ಫೋನ್ ನೆನೆದರೆ ಯಾವುದೇ ಚಿಂತೆ ಬೇಡ, ತಕ್ಷಣವೇ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ
ಜೋರು ಮಳೆ ಬರುವ ಸಂದರ್ಭದಲ್ಲಿ ನಾವು ಮನೆಯಿಂದ ಹೊರಗೆ ಹೋದರೆ ನಾವು ಒದ್ದೆಯಾಗುವುದರ ಜೊತೆಗೆ ಕೈಯಲ್ಲಿ ಅಥವಾ ಪಾಕೆಟ್ನಲ್ಲಿಟ್ಟಿದ್ದ ಮೊಬೈಲ್ ಕೂಡ ಒದ್ದೆಯಾಗುತ್ತದೆ. ಪೋನ್ ಏನಾದ್ರೂ ಸಂಪೂರ್ಣವಾಗಿ ಒದ್ದೆಯಾದರೆ ಇದರ ರಿಪೇರಿಗೆ ಇನ್ನೆಷ್ಟು ಖರ್ಚಾಗ್ಬೋದು ಎಂಬ ಟೆನ್ಷನ್ ಶುರುವಾಗುತ್ತದೆ. ಹೀಗೆ ನಿಮ್ಮ ಮೊಬೈಲ್ ಮಳೆಯಲ್ಲಿ ಒದ್ದೆಯಾದ್ರೆ ಚಿಂತೆ ಪಡುವ ಅಗತ್ಯವಿಲ್ಲ, ತಕ್ಷಣಕ್ಕೆ ಈ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಪಾಲಿಸಿ. ಈ ಮೂಲಕ ರಿಪೇರಿಗೆ ಸಾವಿರಾರು ರೂಪಾಯಿ ಖರ್ಚಾಗೋದನ್ನು ತಪ್ಪಿಸಿ.
- Malashree anchan
- Updated on: Aug 4, 2026
- 6:19 pm
ಬೆಳಗ್ಗೆ ಎದ್ದಾಕ್ಷಣ ಇವುಗಳನ್ನು ನೋಡುವುದರಿಂದ ಶುಭವಾಗುತ್ತಂತೆ
ದಿನದ ಆರಂಭ ಚೆನ್ನಾಗಿದ್ದರೆ, ಆ ಪೂರ್ಣ ದಿನವೇ ಉತ್ತಮವಾಗಿರುತ್ತದೆ ಅದಕ್ಕಾಗಿಯೇ ದಿನವನ್ನು ಸಕಾರಾತ್ಮಕತೆಯಿಂದ ಆರಂಭಿಸಬೇಕು ಮೊಬೈಲ್ ನೋಡಬಾರದು ಅನ್ನೋದು. ಮೊಬೈಲ್ ನೋಡಿದರೆ ಮನಸ್ಸಿಗೆ ಒತ್ತಡ ಉಂಟಾಗುತ್ತದೋ ಅದೇ ರೀತಿ ಈ ಒಂದಷ್ಟು ಶುಭ ವಿಷಯಗಳನ್ನು ನೋಡುವುದುದರಿಂದ ನಿಮ್ಮ ಸಂಪೂರ್ಣ ದಿನವೇ ಉತ್ತಮವಾಗಿರುತ್ತದೆ. ಅದಕ್ಕಾಗಿಯೇ ನಿತ್ಯ ಬೆಳಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿ.
- Malashree anchan
- Updated on: Aug 3, 2026
- 9:02 pm