ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Personality Test: ಕಣ್ಣಿನ ಬಣ್ಣದಿಂದ ತಿಳಿಯಬಹುದು ವ್ಯಕ್ತಿಯ ವ್ಯಕ್ತಿತ್ವದ ರಹಸ್ಯ
ವ್ಯಕ್ತಿತ್ವ ಪರೀಕ್ಷೆಯ ಹಲವು ವಿಧಾನಗಳಿವೆ. ಇವುಗಳ ಸಹಾಯದಿಂದ ಸ್ವತಃ ನಾವೇ ನಮ್ಮ ರಹಸ್ಯ ವ್ಯಕ್ತಿತ್ವ, ಗುಣ ಸ್ವಭಾವ, ಭಾವನಾತ್ಮಕ ನಿಲುವು, ಅಂತರ್ಮುಖಿಯೇ, ಬಹಿರ್ಮುಖಿಯೇ, ಶಾಂತ ಸ್ವಭಾವದವರೇ, ಕೋಪಿಷ್ಠರೇ ಇತ್ಯಾದಿ ರಹಸ್ಯಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್ನಲ್ಲಿ ಕಣ್ಣಿನ ಬಣ್ಣದ ಆಧಾರದ ಮೇಲೆ ನಿಮ್ಮ ಸೀಕ್ರೆಟ್ ಪರ್ಸನಾಲಿಟಿ ಹೇಗಿದೆ ಎಂಬುದುನ್ನು ಟೆಸ್ಟ್ ಮಾಡಿ.
- Malashree anchan
- Updated on: Dec 25, 2025
- 6:15 pm
Chanakya Niti: ಕೌಟುಂಬಿಕ ಕಲಹಗಳಿಗೆ ಮೂಲ ಕಾರಣವೇ ಈ ಅಂಶಗಳು ಎನ್ನುತ್ತಾರೆ ಚಾಣಕ್ಯರು
ಪ್ರತಿ ಕುಟುಂಬದಲ್ಲೂ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ಇದ್ದೇ ಇರುತ್ತವೆ. ಆದರೆ ಮನೆಯಲ್ಲಿ ನಿತ್ಯ ಜಗಳಗಳು, ಕಲಹಗಳು ನಡೆದರೆ ಮನೆಯ ನೆಮ್ಮದಿ, ಸಂತೋಷವೆಲ್ಲಾ ಹಾಳಾಗುತ್ತದೆ. ಹೀಗೆ ಅಪಶ್ರುತಿ ಉಂಟಾಗಲು, ಜಗಳಗಳು ಏರ್ಪಡಲು ಈ ಕೆಲವು ತಪ್ಪುಗಳೇ ಮುಖ್ಯ ಕಾರಣ, ಅದನ್ನು ಸರಿಪಡಿಸಿದರೆ ಖಂಡಿತವಾಗಿಯೂ ಮನೆಯಲ್ಲಿ ಸಂತೋಷ, ಶಾಂತಿ ನೆಲೆಸುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Dec 25, 2025
- 3:34 pm
Good Governance Day 2025: ಉತ್ತಮ ಆಡಳಿತ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು?
ಸರ್ಕಾರದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿಯ ಪ್ರಯುಕ್ತ ಪ್ರತಿ ವರ್ಷ ಭಾರತದಲ್ಲಿ 'ಉತ್ತಮ ಆಡಳಿತ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
- Malashree anchan
- Updated on: Dec 25, 2025
- 10:01 am
Christmas 2025: ಯೇಸುಕ್ರಿಸ್ತರ ಜನ್ಮ ದಿನಾಚರಣೆಯ ಸಂಭ್ರಮ; ಕ್ರಿಸ್ಮಸ್ ಹಬ್ಬದ ಇತಿಹಾಸ, ಮಹತ್ವವನ್ನು ತಿಳಿಯಿರಿ
ಕ್ರಿಸ್ಮಸ್ ಹಬ್ಬವು ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಕ್ರಿಸ್ಮಸ್ ಕೇವಲ ಧಾರ್ಮಿಕ ಆಚರಣೆಯಲ್ಲ, ಪ್ರೀತಿ, ಕರುಣೆ, ಶಾಂತಿ ಮತ್ತು ಮಾನವೀಯತೆಯ ಸಂಕೇತವಾಗಿದೆ. ಈ ಹಬ್ಬದ ಇತಿಹಾಸವೇನು, ಕ್ರಿಸ್ಮಸ್ ಹಬ್ಬ ಆರಂಭವಾಗಿದ್ದು ಹೇಗೆ ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
- Malashree anchan
- Updated on: Dec 24, 2025
- 5:58 pm
ಉಪ್ಪು ಹೆಚ್ಚಾಗಿ ಅಡುಗೆ ಕೆಟ್ಟು ಹೋದ್ರೆ, ರುಚಿ ಸರಿದೂಗಿಸಲು ಈ ಸರಳ ಸಲಹೆಯನ್ನು ಪಾಲಿಸಿ
ಅಡುಗೆಗೆ ಉಪ್ಪು ತುಂಬಾನೇ ಮುಖ್ಯ. ಹೌದು ಉಪ್ಪು ಕಡಿಮೆಯಾದರೂ ಅಥವಾ ಉಪ್ಪು ಹೆಚ್ಚಾದರೂ ಅಡುಗೆಯ ರುಚಿ ಕೆಟ್ಟು ಹೋಗುತ್ತದೆ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ಉಪ್ಪನ್ನು ಹಾಕುಬೇಕು. ಆದ್ರೆ ಕೆಲವೊಂದು ಬಾರಿ ಅಡುಗೆಗೆ ಉಪ್ಪು ಹೆಚ್ಚಾಗುವ ಸಾಧ್ಯತೆ ಇರುತ್ತವೆ. ಇಂತಹ ಸಂದರ್ಭದಲ್ಲಿ ಅಡುಗೆ ಕೆಟ್ಟು ಹೋಯ್ತಲ್ವಾ ಎಂದು ಚಿಂತೆ ಮಾಡುವ ಬದಲು ಈ ಕೆಲವೊಂದು ಟಿಪ್ಸ್ ಪಾಲಿಸುವ ಮೂಲಕ ರುಚಿಯನ್ನು ಸರಿದೂಗಿಸಬಹುದು.
- Malashree anchan
- Updated on: Dec 24, 2025
- 3:13 pm
National Consumer Rights Day 2025: ಒಬ್ಬ ಜವಾಬ್ದಾರಿಯುತ ಗ್ರಾಹಕರಾಗಿ ನಿಮ್ಮ ಹಕ್ಕುಗಳೇನು, ತಿಳಿದುಕೊಳ್ಳಿ
ಗ್ರಾಹಕರಾಗಿ, ನಮಗೆ ಕೆಲವು ಹಕ್ಕುಗಳು ಮತ್ತು ಸಂಬಂಧಿತ ಜವಾಬ್ದಾರಿಗಳಿವೆ. ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಯಾವುದೇ ವಸ್ತುಗಳನ್ನು ಖರೀದಿ ಮಾಡುವ ಮೊದಲು ಮತ್ತು ನಂತರ ಆ ಹಕ್ಕುಗಳ ಬಗ್ಗೆ ತಿಳಿದಿರಬೇಕು ಎಂಬ ಉದ್ದೇಶದಿಂದ ಗ್ರಾಹಕರಿಗೆ ತಮ್ಮ ಹಕ್ಕುಳ ಬಗ್ಗೆ ಶಿಕ್ಷಣ ನೀಡಲು ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 24 ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.
- Malashree anchan
- Updated on: Dec 24, 2025
- 10:31 am
Chanakya Niti: ಸಾಲ ತೆಗೆದುಕೊಳ್ಳುವ, ನೀಡುವ ಮೊದಲು ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಿ
ಬಹುತೇಕ ಹೆಚ್ಚಿನವರು ಮನೆ ಕಟ್ಟುವಾಗ, ಮದುವೆ ಮಾಡುವಾಗ, ಬ್ಯುಸಿನೆಸ್ ಮಾಡುವ ಸಂದರ್ಭದಲ್ಲಿ ಸಾಲ ಪಡೆಯುತ್ತಾರೆ. ಹೀಗೆ ಸಾಲ ತೆಗೆದುಕೊಳ್ಳುವಾಗ ಮತ್ತು ಮುಖ್ಯವಾಗಿ ಸಾಲ ಕೊಡುವಾಗ ಒಂದಷ್ಟು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಈ ಸಾಲದ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.
- Malashree anchan
- Updated on: Dec 23, 2025
- 7:54 pm
ಕ್ರಿಸ್ಮಸ್, ನ್ಯೂ ಇಯರ್ಗೆ ಟ್ರಿಪ್ ಹೋಗೋ ಪ್ಲಾನ್ ಇದ್ಯಾ? ಹಾಗಿದ್ರೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ
ಕ್ರಿಸ್ಮಸ್ ಮತ್ತು ಹೊಸ ವರ್ಷದ ರಜಾದಿನಗಳಲ್ಲಿ ಬಹುತೇಕರು ಟ್ರಿಪ್ ಹೋಗ್ತಾರೆ. ಹೌದು ಕೆಲಸದ ಒತ್ತಡದಿಂದ ಕೊಂಚ ಬ್ರೇಕ್ ತೆಗೆದುಕೊಂಡು ರಿಲ್ಯಾಕ್ಸ್ ಆಗಲು ಫ್ರೆಂಡ್ಸ್, ಫ್ಯಾಮಿಲಿ ಜೊತೆ ಟ್ರಿಪ್ ಹೋಗ್ತಾರೆ. ಈ ಬಾರಿ ನೀವು ಸಹ ಟ್ರಿಪ್ ಪ್ಲಾನ್ ಮಾಡಿದ್ದೀರಾ? ನಿಮ್ಮ ಈ ಪ್ರವಾಸ ಸ್ಮರಣೀಯವಾಗಿರಬೇಕೆಂದರೆ ತಪ್ಪಿಯೂ ಈ ಸಮಯದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಬೇಡಿ. ಏಕೆಂದರೆ ಪ್ರವಾಸದ ಸಂತೋಷ ಹಾಳಾಗುವುದರ ಜೊತೆಗೆ ನಿಮ್ಮ ಜೇಬಿಗೂ ಕತ್ತರಿ ಬೀಳಬಹುದು ಎಚ್ಚರ.
- Malashree anchan
- Updated on: Dec 23, 2025
- 3:02 pm
National Farmers Day 2025: ರೈತನೇ ದೇಶದ ಬೆನ್ನೆಲುಬು, ಜಗದ ಹಸಿವು ನೀಗಿಸುವ ಅನ್ನದಾತನಿಗೊಂದು ನಮನ
ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಲಕ್ಷಾಂತರ ಜನರ ಜೀವನೋಪಾಯ ಮತ್ತು ದೇಶದ ಆಹಾರ ಭದ್ರತೆ, ಹೆಚ್ಚಿನ ಪಾಲಿನ ಆರ್ಥಿಕತೆ ಕೃಷಿಯನ್ನೇ ಅವಲಂಬಿಸಿದೆ. ಈ ಕೃಷಿ ಸಂಸ್ಕೃತಿ ಮತ್ತು ಅನ್ನದಾತರ ಕೊಡುಗೆ, ಕಠಿಣ ಪರಿಶ್ರಮಗಳನ್ನು ಗೌರವಿಸಲು, ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಧ್ವನಿ ಎತ್ತಲು ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
- Malashree anchan
- Updated on: Dec 23, 2025
- 9:34 am
ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಲ್ಲಿ ಈ ಗಿಡಗಳನ್ನು ನೆಡಿ
ಪ್ರತಿ ಮನೆಯಲ್ಲೂ ಸಹ ಹಲ್ಲಿಗಳ ಕಾಟ ಇದ್ದೇ ಇರುತ್ತದೆ. ಎಷ್ಟೇ ಸರ್ಕಸ್ ಮಾಡಿದ್ರೂ ಸಹ ಇವುಗಳನ್ನು ನಿರ್ಮೂಲನೆ ಮಾಡುವುದು ಸಖತ್ ಕಷ್ಟದ ಕೆಲಸ. ಹೀಗಿರುವಾಗ ಯಾವುದೇ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು ಈ ಕೆಲವು ಗಿಡಗಳನ್ನು ನೆಡುವ ಮೂಲಕ ಹಲ್ಲಿಗಳ ಕಾಟದಿಂದ ಸುಲಭ ಪರಿಹಾರವನ್ನು ಪಡೆಯಬಹುದು ಜೊತೆಗೆ ಮನೆಯೊಳಗೆ ಹಲ್ಲಿ ಬಾರದಂತೆ ತಡೆಯಬಹುದು. ಆ ಗಿಡಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
- Malashree anchan
- Updated on: Dec 22, 2025
- 5:23 pm
Christmas 2025: ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲೇ ಬಲು ಸುಲಭವಾಗಿ ತಯಾರಿಸಿ ಆರೋಗ್ಯಕರ ಡ್ರೈಫ್ರೂಟ್ ಕೇಕ್
ವಿಶ್ವದೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುವ ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನೂ ದಿನಗಣನೆ ಶುರುವಾಗಿದೆ. ಕೇಕ್ ಇಲ್ಲದೆ ಈ ಹಬ್ಬ ಪೂರ್ಣ ಆಗೋದೆ ಇಲ್ಲ. ಸಾಮಾನ್ಯವಾಗಿ ಬಹುತೇಕರು ಹಬ್ಬಕ್ಕೆ ತಮಗೆ ಬೇಕಾದ ಕೇಕ್ಗಳನ್ನು ಮಾರುಕಟ್ಟೆಗಳಿಂದ ಖರೀದಿ ಮಾಡ್ತಾರೆ. ಆದ್ರೆ ಆರೋಗ್ಯದ ದೃಷ್ಟಿಯಿಂದ ಅವುಗಳನ್ನು ತಿನ್ನುವುದು ಅಷ್ಟು ಒಳ್ಳೆಯದಲ್ಲ. ಹೀಗಿರುವಾಗ ನೀವು ಮನೆಯಲ್ಲಿಯೇ ಬಹಳ ಈಸಿಯಾಗಿ ಹೆಲ್ತಿ ಡ್ರೈಫೂಟ್ಸ್ ಕೇಕ್ ತಯಾರಿಸಬಹುದು. ಈ ಡ್ರೈಫ್ರೂಟ್ಸ್ ಕೇಕ್ ರೆಸಿಪಿ ಇಲ್ಲಿದೆ.
- Malashree anchan
- Updated on: Dec 22, 2025
- 3:25 pm
National Mathematics Day 2025: ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಗೊತ್ತಾ?
ಗಣಿತ ಕ್ಷೇತ್ರಕ್ಕೆ ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಕೊಡುಗೆ ಅಪಾರ. ಹಾಗಾಗಿ ಇವರ ಕೊಡುಗೆಗಳನ್ನು ಸ್ಮರಿಸಲು, ಸಾಧನೆಗಳನ್ನು ಗೌರವಿಸಲು ಹಾಗೂ ಗಣಿತದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
- Malashree anchan
- Updated on: Dec 22, 2025
- 10:12 am