ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Chanakya Niti: ಇಂತಹ ಮಕ್ಕಳನ್ನು ಪಡೆದ ಪೋಷಕರೇ ನಿಜವಾದ ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯ
ಪ್ರತಿಯೊಬ್ಬ ಪೋಷಕರ ಸಂತೋಷ ಮಕ್ಕಳ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲೂ ಮಕ್ಕಳು ಜೀವನದಲ್ಲಿ ಯಶಸ್ಸು ಗಳಿಸಿದರೆ ತಂದೆ-ತಾಯಿ ಬಹಳಷ್ಟು ಖುಷಿಪಡುತ್ತಾರೆ. ಯಶಸ್ಸು ಒಂದುಕಡೆಯಾದರೆ, ಈ ಕೆಲವೊಂದು ಗುಣಗಳನ್ನು ಹೊಂದಿರುವ ಮಕ್ಕಳನ್ನು ಹೊಂದಿರುವ ಪೋಷಕರೇ ನಿಜವಾದ ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯ. ಪೋಷಕರಿಗೆ ಅದೃಷ್ಟವನ್ನು ತಂದುಕೊಡುವ, ಗೌರವವನ್ನು ಹೆಚ್ಚಿಸುವ ಮಕ್ಕಳ ಆ ಗುಣಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Feb 3, 2026
- 8:43 pm
ಹಲ್ಲುಜ್ಜಲು ಎಷ್ಟು ಪ್ರಮಾಣದ ಟೂತ್ಪೇಸ್ಟ್ ಬಳಸುವುದು ಸೂಕ್ತ?
ಬಾಯಿಯ ನೈರ್ಮಲ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ದಿನಕ್ಕೆರಡು ಬಾರಿ ಹಲ್ಲುಜ್ಜುವುದು ಅತೀ ಅವಶ್ಯಕ. ಹೆಚ್ಚಿನವರು ಹಲ್ಲನ್ನು ಬಿಳಿಯಾಗಿಸಲು ಹೆಚ್ಚಿನ ಪ್ರಮಾಣದ ಟೂತ್ಪೇಸ್ಟ್ ಬಳಸುತ್ತಾರೆ ಮತ್ತು ಇದು ತುಂಬಾನೇ ಪ್ರಯೋಜನಕಾರಿ ಎಂದು ಭಾವಿಸುತ್ತಾರೆ. ಆದರೆ ಇದು ನಿಜಕ್ಕೂ ಪ್ರಯೋಜನಕಾರಿಯೇ? ಹಲ್ಲುಜ್ಜಲು ಎಷ್ಟು ಪ್ರಮಾಣದ ಟೂತ್ಪೇಸ್ಟ್ ಬಳಸುವುದು ಸೂಕ್ತ ಎಂಬ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
- Malashree anchan
- Updated on: Feb 3, 2026
- 5:37 pm
ಈ ಕೆಲವು ಬಟ್ಟೆಗಳನ್ನು ವಾಷಿಂಗ್ ಮಷಿನ್ನಲ್ಲಿ ತೊಳೆಯಬಾರದು, ಕೈಯಲ್ಲಿ ಒಗೆದರೆ ಉತ್ತಮ
ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ವಾಷಿಂಗ್ ಮಷಿನ್ ಇದ್ದೇ ಇದೆ. ಕೆಲಸ ಸುಲಭವಾಗುತ್ತದೆ, ಸಮಯ ಕೂಡ ಉಳಿತಾಯವಾಗುತ್ತದೆ ಎಂಬ ಕಾರಣದಿಂದ ಬಹುತೇಕ ಹೆಚ್ಚಿನವರು ತಮ್ಮೆಲ್ಲಾ ಬಟ್ಟೆಗಳನ್ನು ವಾಷಿಂಗ್ ಮಷಿನ್ನಲ್ಲಿಯೇ ತೊಳೆಯುತ್ತಾರೆ. ಆದರೆ ಹೀಗೆ ಎಲ್ಲಾ ಬಟ್ಟೆಗಳನ್ನು ಮಷಿನ್ನಲ್ಲಿ ತೊಳೆಯುವುದು ಸೂಕ್ತವಲ್ಲ, ಕೆಲವೊಂದು ಬಟ್ಟೆಗಳನ್ನು ಕೈಯಲ್ಲಿ ತೊಳೆದರೆಯೇ ಉತ್ತಮ. ಯಾವ ಬಟ್ಟೆಗಳನ್ನು ವಾಷಿಂಗ್ ಮಷಿನ್ನಲ್ಲಿ ತೊಳೆಯಬಾರದು ಎಂಬುದನ್ನು ತಿಳಿಯಿರಿ.
- Malashree anchan
- Updated on: Feb 3, 2026
- 3:44 pm
ರಾತ್ರಿ ಮಲಗುವ ಮುನ್ನ ಮಾಡುವ ಈ ತಪ್ಪುಗಳು ನಿಮ್ಮ ನಿದ್ರೆಗೆ ಭಂಗ ತರಬಹುದು ಎಚ್ಚರ!
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಮತೋಲಿತ ಆಹಾರ ಸೇವನೆ ಎಷ್ಟು ಮುಖ್ಯವೋ ಅದೇ ರೀತಿ ನಿದ್ರೆಯೂ ಅಷ್ಟೇ ಮುಖ್ಯ. ಆದರೆ ಇಂದಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೇ ನಮ್ಮ ಕೆಲವು ಅಭ್ಯಾಸಗಳಂತೆ. ಹಾಗಿದ್ರೆ ನಿದ್ರೆಗೆ ಭಂಗ ತರುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Feb 2, 2026
- 8:40 pm
Chanakya Niti: ಸ್ನೇಹಿತರು, ಸಂಬಂಧಿಕರಿಗೆ ಹಣ ಸಾಲ ನೀಡುವ ಮುನ್ನ ನೀವು ಈ ಪ್ರಶ್ನೆಗಳನ್ನು ಕೇಳಲೇಬೇಕು
ಸಂಬಂಧಿಕರು, ಸ್ನೇಹಿತರು ಆರ್ಥಿಕ ಸಹಾಯ ಅಥವಾ ಸಾಲವನ್ನು ಕೇಳುತ್ತಲೇ ಇರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅನೇಕರು ಹಿಂದು ಮುಂದು ನೋಡದೆ ಹಣ ಕೊಟ್ಟುಬಿಡುತ್ತಾರೆ, ಕೊನೆಗೆ ತಾವು ಸಾಲವಾಗಿ ನೀಡಿದ ಹಣ ವಾಪಾಸ್ ಸಿಗದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿ ನಿಮಗೆ ಎದುರಾಗಬಾರದೆಂದರೆ, ನಿಮ್ಮ ಹತ್ತಿರದವರಿಗೆ ಸಾಲ ನೀಡುವ ಮೊದಲು ಈ ಪ್ರಶ್ನೆಗಳನ್ನು ಅವರ ಬಳಿ ಕೇಳಲೇಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
- Malashree anchan
- Updated on: Feb 2, 2026
- 6:24 pm
ಬಿಳಿ ಬಟ್ಟೆಯ ಮೇಲಿನ ಹಠಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿವೆ ಸರಳ ಉಪಾಯ
ಬಿಳಿ ಬಟ್ಟೆಗಳು ನೋಡಲು ತುಂಬಾನೇ ಸುಂದರವಾಗಿ ಕಾಣುತ್ತದೆ ನಿಜ, ಆದ್ರೆ ಈ ಬಣ್ಣದ ಬಟ್ಟೆಯ ಮೇಲೆ ಒಂದು ಸಣ್ಣ ಕಲೆಯಾದ್ರೂ ಸಹ ಅದನ್ನು ಹೋಗಲಾಡಿಸುವುದು ತುಂಬಾನೇ ಕಷ್ಟಕರ. ಜೊತೆಗೆ ಕ್ರಮೇಣ ಕಲೆಯಾದ ಬಿಳಿ ಬಣ್ಣದ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಬಟ್ಟೆಯ ಸೌಂದರ್ಯವೇ ಹಾಳಾಗಿಬಿಡುತ್ತದೆ. ಹೀಗಿರುವಾಗ ಜಸ್ಟ್ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಬಿಳಿ ಬಟ್ಟೆಗಳ ಹಠಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಿ.
- Malashree anchan
- Updated on: Feb 2, 2026
- 3:53 pm
ಊಟ ಮಾಡಿದ ತಕ್ಷಣ ಟೀ ಕುಡಿದ್ರೆ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಗೊತ್ತಾ?
ನಮ್ಮಲ್ಲಿ ಹಲವರಿಗೆ ಊಟವಾದ ತಕ್ಷಣ ಬಿಸಿ ಬಿಸಿ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಊಟ ಮಾಡಿದ ನಂತರ ಬರುವ ನಿದ್ರೆ, ಆಲಸ್ಯವನ್ನು ಹೋಗಲಾಡಿಸಲು ಹಲವರು ಚಹಾ ಕುಡಿಯುತ್ತಾರೆ. ಆದರೆ ಈ ಒಂದು ಸಣ್ಣ ಅಭ್ಯಾಸವು ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
- Malashree anchan
- Updated on: Feb 1, 2026
- 5:34 pm
Chanakya Niti: ಈ ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಬಹುದು… ಎಚ್ಚರ!
ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಮನುಷ್ಯನನ್ನು ಕ್ರಮೇಣ ಮಾನಸಿಕವಾಗಿ ದುರ್ಬಲಗೊಳಿಸುವ ಕೆಟ್ಟ ಅಭ್ಯಾಸಗಳ ಬಗ್ಗೆ ವಿವರಿಸಿದ್ದಾರೆ. ಅವುಗಳನ್ನು ತಕ್ಷಣ ಸರಿಪಡಿಸದಿದ್ದರೆ, ಕಾಲಾನಂತರದಲ್ಲಿ ವ್ಯಕ್ತಿಯ ಮಾನಸಿಕ ಶಕ್ತಿಯೇ ಕುಗ್ಗಿ ಹೋಗಬಹುದು. ಹಾಗಿದ್ರೆ ಚಾಣಕ್ಯರು ತಿಳಿಸಿರುವ ಆ ಕೆಟ್ಟ ಅಭ್ಯಾಸಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
- Malashree anchan
- Updated on: Feb 1, 2026
- 3:41 pm
Indian Coast Guard Day 2026: ದೇಶದ ಕಡಲ ಗಡಿಗಳನ್ನು ರಕ್ಷಣೆ ಮಾಡುವಲ್ಲಿ ಕರಾವಳಿ ಭದ್ರತಾ ಪಡೆಗಳ ಪಾತ್ರ ಮಹತ್ತರವಾದದ್ದು
ಭಾರತೀಯ ಕರಾವಳಿ ಕಾವಲು ಪಡೆ ದೇಶದ ಕಡಲ ಗಡಿ ಭದ್ರತೆಯ ಪ್ರಮುಖ ಶಕ್ತಿಯಾಗಿದ್ದು, ಕಡಲ ಪ್ರದೇಶಗಳನ್ನು ರಕ್ಷಿಸುವಲ್ಲಿ, ಕಡಲ್ಗಳ್ಳತನ ಮತ್ತು ಕಳ್ಳಸಾಗಣೆ ತಡೆಗಟ್ಟುವಲ್ಲಿ, ಕಡಲ ವಿಪತ್ತುಗಳಿಂದ ಜನರನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾಗಿ ಕರಾವಳಿ ಭದ್ರತಾ ಪಡೆಗಳ ಸಿಬ್ಬಂದಿಗಳ ಧೈರ್ಯ ಮತ್ತು ತ್ಯಾಗವನ್ನು ಗೌರವಿಸಲು ಭಾರತೀಯ ಕರಾವಳಿ ಕಾವಲು ಪಡೆ ದಿನವನ್ನು ಪ್ರತಿವರ್ಷ ಫೆಬ್ರವರಿ 1 ರಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
- Malashree anchan
- Updated on: Feb 1, 2026
- 9:28 am
Chanakya Niti: ಜೀವನದಲ್ಲಿ ಸಂಕಷ್ಟ ಎದುರಾಗಬಾರದೆಂದರೆ ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಡಿ
ಆಚಾರ್ಯ ಚಾಣಕ್ಯರು ಯಶಸ್ಸನ್ನು ಸಾಧಿಸಲು ಹಲವಾರು ತತ್ವಗಳನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಯಶಸ್ಸಿನ ಜೊತೆಜೊತೆಗೆ ಯಾವುದೇ ಕಷ್ಟಗಳು ಎದುರಾಗದೆ ಒತ್ತಡ ರಹಿತ ಜೀವನವನ್ನು ನಡೆಸಲು ಒಂದಷ್ಟು ವೈಯಕ್ತಿಕ ವಿಚಾರಗಳನ್ನು ರಹಸ್ಯವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ನಾವು ಯಾರೊಂದಿಗೂ ಹಂಚಿಕೊಳ್ಳಬಾರದ ಆ ವೈಯಕ್ತಿಕ ವಿಚಾರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Jan 31, 2026
- 4:52 pm
ಶೂನಿಂದ ಬರುವ ಕೆಟ್ಟ ವಾಸನೆಯನ್ನು ತೊಡೆದು ಹಾಕಲು ಈ ಸಿಂಪಲ್ ಟಿಪ್ಸ್ ಪಾಲಿಸಿ
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಹ ಶೂ ಧರಿಸುತ್ತಾರೆ. ಈ ಶೂಗಳನ್ನು ಎಷ್ಟೇ ಕ್ಲೀನ್ ಆಗಿ ಇಟ್ಟುಕೊಂಡರೂ ಸಹ ಬೆವರಿನ ಕಾರಣದಿಂದಾಗಿ ಆಗಾಗ್ಗೆ ಕೆಟ್ಟ ವಾಸನೆ ಬರುತ್ತದೆ. ಖಂಡಿತವಾಗಿಯೂ ಈ ದುರ್ವಾಸನೆ ಮುಜುಗರವನ್ನು ಉಂಟುಮಾಡುತ್ತದೆ. ಹೀಗಿರುವಾಗ ಈ ವಾಸನೆಯನ್ನು ಸುಲಭವಾಗಿ ತೊಡೆದುಹಾಕಲು ಈ ಸರಳ ಸಲಹೆಯನ್ನು ಪಾಲಿಸಿ.
- Malashree anchan
- Updated on: Jan 31, 2026
- 3:15 pm
International Zebra Day 2026: ಜೀಬ್ರಾ ದಿನವನ್ನು ಆಚರಿಸುವುದೇಕೆ? ಇದರ ಹಿಂದಿನ ಕಾರಣವನ್ನು ತಿಳಿಯಿರಿ
ಜೀಬ್ರಾಗಳು ಹೆಚ್ಚಾಗಿ ಆಫ್ರಿಕನ್ ಖಂಡದಾದ್ಯಂತ, ಕೀನ್ಯಾ ಮತ್ತು ಇಥಿಯೋಪಿಯಾದ ಅರೆ-ಮರುಭೂಮಿ ಪ್ರದೇಶಗಳಲ್ಲಿ ಮತ್ತು ನಮೀಬಿಯಾ, ಅಂಗೋಲಾ ಮತ್ತು ದಕ್ಷಿಣ ಆಫ್ರಿಕಾದ ಗುಡ್ಡಗಾಡು ಪ್ರದೇಶಗಳಲ್ಲಿ ಕಂಡುಬರುವ ಪ್ರಾಣಿಗಳಾಗಿದ್ದು, ಆವಾಸಸ್ಥಾನದ ನಷ್ಟ, ಬೇಟೆಯ ಕಾರಣದಿಂದ ಅಳಿವಿನಂಚಿಗೆ ತಲುಪಿವೆ. ಹಾಗಾಗಿ ಜೀಬ್ರಾಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜನವರಿ 31 ರಂದು ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸಲಾಗುತ್ತದೆ.
- Malashree anchan
- Updated on: Jan 31, 2026
- 10:14 am