AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್​

Author - TV9 Kannada

anchanmadhushree@gmail.com

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಈ ಬೇಸಿಗೆಯಲ್ಲಿ ಫ್ರಿಡ್ಜ್‌ ನೀರು ಕುಡಿಯೋದ್ರಿಂದ ಏನಾಗುತ್ತೆ ಗೊತ್ತಾ?

ಈ ಬೇಸಿಗೆಯಲ್ಲಿ ಫ್ರಿಡ್ಜ್‌ ನೀರು ಕುಡಿಯೋದ್ರಿಂದ ಏನಾಗುತ್ತೆ ಗೊತ್ತಾ?

ಬೇಸಿಗೆಯ ಋತುವನಲ್ಲಿ ಬಿಸಿಲ ಬೇಗೆಯಿಂದ ಪಾರಾಗಾಲು ಜನ ಏನಾದ್ರೂ ತಣ್ಣನೆಯ ವಸ್ತುಗಳನ್ನು ಸೇವನೆ ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ಪ್ರತಿನಿತ್ಯ ಫ್ರಿಡ್ಜ್‌ನಲ್ಲಿರುವ ಕೋಲ್ಡ್‌ ನೀರನ್ನೇ ಗಟಗಟನೇ ಕುಡಿಯುತ್ತಾರೆ. ಹೀಗೆ ನಿತ್ಯ ಕೋಲ್ಡ್‌ ನೀರನ್ನು ಕುಡಿಯೋದು ಒಳ್ಳೆಯದೇ? ಇದರಿಂದ ಏನಾದ್ರೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯೇ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಪತಿ ಪತ್ನಿಯರು ಈ ಸರಳ ಸೂತ್ರ ಪಾಲಿಸಿದರೆ ದಾಂಪತ್ಯ ಜೀವನ ಹಾಲು-ಜೇನಿನಂತೆ ಇರುವುದು ಖಂಡಿತ

ಪತಿ ಪತ್ನಿಯರು ಈ ಸರಳ ಸೂತ್ರ ಪಾಲಿಸಿದರೆ ದಾಂಪತ್ಯ ಜೀವನ ಹಾಲು-ಜೇನಿನಂತೆ ಇರುವುದು ಖಂಡಿತ

ಗಂಡ ಹೆಂಡತಿಯರ ನಡುವಿನ ಒಗ್ಗಟ್ಟು, ಪ್ರೀತಿ, ವಿಶ್ವಾಸ, ನಂಬಿಕೆಯೇ ಸಂತೋಷಮಯವಾದ ದಾಂಪತ್ಯ ಜೀವನದ ರಹಸ್ಯ. ಆದ್ರೆ ಇಂದಿನ ಕಾರ್ಯನಿರತ ಜೀವನದಲ್ಲಿ ಬಹುತೇಕ ಹೆಚ್ಚಿನ ದಂಪತಿಗಳ ನಡುವೆ ಮನಸ್ತಾಪ, ಮುನಿಸು, ಜಗಳಗಳೇ ಹೆಚ್ಚಾಗಿದ್ದು, ದಾಂಪತ್ಯ ಜೀವನದಲ್ಲಿ ಸಂತೋಷ ಅನ್ನೋದೇ ಸಿಗುತ್ತಿಲ್ಲ. ಹೀಗಿರುವಾಗ ಪತಿ ಪತ್ನಿಯರು ಈ ಕೆಲವೊಂದು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ದಾಂಪತ್ಯ ಜೀವನದಲ್ಲಿ ಸದಾಕಾಲ ಸಂತೋಷ ನೆಲೆಸುವಂತೆ ನೋಡಿಕೊಳ್ಳಬಹುದು.

World Intellectual Property Day 2026: ಬೌದ್ಧಿಕ ಆಸ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ

World Intellectual Property Day 2026: ಬೌದ್ಧಿಕ ಆಸ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ

ಕೃತಿಸ್ವಾಮ್ಯ, ಪೇಟೆಂಟ್‌, ಟ್ರೇಡ್‌ಮಾರ್ಕ್‌ಗಳು, ಕೈಗಾರಿಕಾ ವಿನ್ಯಾಸಗಳು, ಭೌಗೋಳಿಕ ಸೂಚನೆಗಳು, ವ್ಯಾಪಾರ ರಹಸ್ಯಗಳು ವಿವಿಧ ಬೌದ್ಧಿಕ ಆಸ್ತಿಗಳಾಗಿದ್ದು, ಈ ಆಸ್ತಿ ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾಗಿವೆ. ಇದನ್ನು ರಚಿಸಿದ ಸೃಜನಾತ್ಮಕ ವ್ಯಕ್ತಿಯೇ ಇದಕ್ಕೆ ವಾರಸುದಾರನಾಗಿರುವ ಕಾರಣ ಆ ವ್ಯಕ್ತಿಯ ಅನುಮತಿಯಿಲ್ಲದೆ ಆತನ ವಿಚಾರಧಾರೆಗಳನ್ನು ಬಳಕೆ ಮಾಡುವಂತಿಲ್ಲ. ಒಬ್ಬ ವ್ಯಕ್ತಿಯ ಈ ಅಮೂಲ್ಯವಾದ ಬೌದ್ಧಿಕ ಆಸ್ತಿಯ ಹಕ್ಕಿನ ಬಗ್ಗೆ ಹಾಗೂ ಬೌದ್ಧಿಕ ಆಸ್ತಿಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಏಪ್ರಿಲ್‌ 26 ರಂದು ವಿಶ್ವ ಬೌದ್ಧಿಕ ಆಸ್ತಿಯ ದಿನವನ್ನು ಆಚರಿಸಲಾಗುತ್ತದೆ.

Chanakya Niti: ಈ ಅಭ್ಯಾಸಗಳು ನಿಮ್ಮನ್ನು ಒಂಟಿಯಾನ್ನಾಗಿಸುತ್ತದೆ ಎಚ್ಚರ!

Chanakya Niti: ಈ ಅಭ್ಯಾಸಗಳು ನಿಮ್ಮನ್ನು ಒಂಟಿಯಾನ್ನಾಗಿಸುತ್ತದೆ ಎಚ್ಚರ!

ಆಚಾರ್ಯ ಚಾಣಕ್ಯರ ಪ್ರಕಾರ ನಮ್ಮ ಅಭ್ಯಾಸಗಳು ಮತ್ತು ಆಲೋಚನಾ ವಿಧಾನಗಳು ನಮ್ಮ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅದರಲ್ಲೂ ಕೆಲವೊಂದು ಕೆಟ್ಟ ಅಭ್ಯಾಸಗಳು, ತಪ್ಪುಗಳು ಕ್ರಮೇಣ ನಮ್ಮನ್ನು ಒಂಟಿತನಕ್ಕೆ ದೂಡುತ್ತವೆ. ಇದರಿಂದಾಗಿ ಜೀವನಪರ್ಯಂತ ಒಂಟಿಯಾಗಿಯೇ ಇರಬೇಕಾಗುತ್ತದೆ. ಹಾಗಿದ್ದರೆ ಒಂಟಿತನಕ್ಕೆ ಕಾರಣವಾಗುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ನಿಂಬೆ ರಸ ಹಚ್ಚುವುದರಿಂದ ನಿಜಕ್ಕೂ ಕೂದಲು ಬಿಳಿಯಾಗುತ್ತದೆಯೇ? ಸತ್ಯಾಸತ್ಯತೆ ತಿಳಿಯಿರಿ

ನಿಂಬೆ ರಸ ಹಚ್ಚುವುದರಿಂದ ನಿಜಕ್ಕೂ ಕೂದಲು ಬಿಳಿಯಾಗುತ್ತದೆಯೇ? ಸತ್ಯಾಸತ್ಯತೆ ತಿಳಿಯಿರಿ

ಕೂದಲಿಗೆ ನಿಂಬೆ ರಸ ಹಚ್ಚಬಾರದು, ಈ ರೀತಿ ಮಾಡುವುದರಿಂದ ಕೂದಲು ಬೇಗನೆ ಬಿಳಿಯಾಗುತ್ತದೆ ಅನ್ನೋ ಮಾತನ್ನು ನೀವು ಕೂಡ ಕೇಳಿರಬಹುದಲ್ವಾ. ಆದ್ರೆ ನಿಜಕ್ಕೂ ನಿಂಬೆ ರಸ ತಲೆಗೂದಲಿಗೆ ಹಚ್ಚುವುದರಿಂದ ಕೂದಲು ಬಿಳಿಯಾಗುತ್ತಾ, ನಿಂಬೆ ರಸ ಹಚ್ಚುವುದರಿಂದ ಕೂದಲಿಗೆ ಪ್ರಯೋಜನಗಳು ಲಭಿಸುತ್ತಾ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

World Malaria Day 2026: ಮಲೇರಿಯಾ ಜ್ವರ ಹೇಗೆ ಹರಡುತ್ತದೆ? ಈ ರೋಗ ಬರದಂತೆ ತಡೆಗಟ್ಟಲು ಏನು ಮಾಡಬೇಕು?

World Malaria Day 2026: ಮಲೇರಿಯಾ ಜ್ವರ ಹೇಗೆ ಹರಡುತ್ತದೆ? ಈ ರೋಗ ಬರದಂತೆ ತಡೆಗಟ್ಟಲು ಏನು ಮಾಡಬೇಕು?

ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಜನರು ಮಲೇರಿಯಾ ರೋಗಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಈ ಮಾರಕ ಕಾಯಿಲೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್‌ 25 ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಊಟವಾದ ತಕ್ಷಣ ಮಾಡುವ ಈ ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು

ಊಟವಾದ ತಕ್ಷಣ ಮಾಡುವ ಈ ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ನಾವು ಆರೋಗ್ಯಲರ ಆಹಾರವನ್ನು ಸೇವಿಸುತ್ತ ಗಮನ ಹರಿಸುತ್ತೇವೆ. ಆದರೆ ಊಟದ ಬಳಿಕ ಮಾಡುವ ಕೆಲವೊಂದು ತಪ್ಪುಗಳನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತೇವೆ. ಊಟವಾದ ತಕ್ಷಣ ಮಾಡುವಂತಹ ಈ ಸಣ್ಣ ತಪ್ಪುಗಳು ಹೊಟ್ಟೆಯ ಆರೋಗ್ಯವನ್ನು ಕ್ರಮೇಣ ಹದಗೆಡಿಸಬಹುದು. ಹಾಗಾಗಿ ಈ ಊಟವಾದ ಬಳಿಕ ಎಂದಿಗೂ ಈ ಕೆಲವೊಂದು ತಪ್ಪುಗಳನ್ನು ಮಾಡಲು ಹೋಗಬೇಡಿ.

ನೀವು ಆತ್ಮೀಯರಿಗೆ ಸಾಲ ಕೊಟ್ಟ ಹಣವನ್ನು ವಾಪಸ್‌ ಪಡೆಯಲು ಈ ಸಲಹೆ ಪಾಲಿಸಿ

ನೀವು ಆತ್ಮೀಯರಿಗೆ ಸಾಲ ಕೊಟ್ಟ ಹಣವನ್ನು ವಾಪಸ್‌ ಪಡೆಯಲು ಈ ಸಲಹೆ ಪಾಲಿಸಿ

ಅನೇಕ ಬಾರಿ ಕಷ್ಟದಲ್ಲಿರುವ ಸ್ನೇಹಿತರು, ಬಂಧುಗಳಿಗೆ ಸಾಲದ ರೂಪದಲ್ಲಿ ಹಣವನ್ನು ನೀಡುವ ಮೂಲಕ ನಮ್ಮ ಕೈಲಾದಷ್ಟು ಆರ್ಥಿಕ ನೆರವನ್ನು ನೀಡುತ್ತೇವೆ. ಕೆಲವೊಂದು ಬಾರಿ ಸ್ನೇಹಿತರು ನಾವು ಸಾಲದ ರೂಪದಲ್ಲಿ ಕೊಟ್ಟ ಹಣವನ್ನು ಮರಳಿ ಕೊಡುವುದಿಲ್ಲ. ಇಂತಹ ಸಂದರ್ಭದಲ್ಲಿ ಅನೇಕರು ಹಣವನ್ನು ವಾಪಸ್‌ ಕೇಳಲು ಹಿಂಜರಿಯುತ್ತಾರೆ. ಹೀಗಿರುವಾಗ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಸಂಬಂಧ ಹಾಳಾಗದ ರೀತಿಯಲ್ಲಿ ನಿಮ್ಮ ಹಣವನ್ನು ವಾಪಸ್‌ ಪಡೆಯಿರಿ.

ಚಿಂತೆಯೆಲ್ಲಾ ಬಿಟ್ಟು ಸಂತೋಷದಿಂದ ಜೀವನ ನಡೆಸಲು ಈ ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು

ಚಿಂತೆಯೆಲ್ಲಾ ಬಿಟ್ಟು ಸಂತೋಷದಿಂದ ಜೀವನ ನಡೆಸಲು ಈ ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು

ಇಂದಿನ ಈ ಒತ್ತಡದ ಜೀವನಶೈಲಿಯಲ್ಲಿ ಸಂತೋಷವನ್ನು ಕಂಡುಕೊಳ್ಳುವುದೇ ಹೆಚ್ಚಿನವರಿಗೆ ಸವಾಲಿನ ಸಂಗತಿಯಾಗಿದೆ. ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲ ಎಂದು ಬಹುತೇಕರು ಪ್ರತಿನಿತ್ಯ ಚಿಂತೆ ಮಾಡುತ್ತಾ ಕುಳಿತುಬಿಡುತ್ತಾರೆ. ಹೀಗೆ ಚಿಂತಿಸಿದರೆ ಫಲವಿಲ್ಲ, ಬದಲಿಗೆ ಜೀವನದಲ್ಲಿ ಕೆಲವು ಸರಳ ವಿಷಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂತೋಷದ ಜೀವನವನ್ನು ನಡೆಸಬಹುದು.

ಮನುಷ್ಯನ ದೇಹದ ಯಾವ ಭಾಗ ಅತೀ ಕೊಳಕಾಗಿರುವುದು ಗೊತ್ತಾ?

ಮನುಷ್ಯನ ದೇಹದ ಯಾವ ಭಾಗ ಅತೀ ಕೊಳಕಾಗಿರುವುದು ಗೊತ್ತಾ?

ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸ್ನಾನ ಮಾಡುತ್ತೇವೆ. ಅದರಲ್ಲೂ ದೇಹದ ಈ ಒಂದು ಭಾಗದ ಸ್ವಚ್ಛತೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಂತೆ. ಏಕೆಂದರೆ ದೇಹದ ಈ ಒಂದು ಭಾಗ ಹೆಚ್ಚಿನ ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ಸಂಗ್ರಹಿಸುತ್ತದೆ. ಅದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಕೆಟ್ಟ ವಾಸನೆಯನ್ನು ಉಂಟುಮಾಡುವುದಲ್ಲದೆ ಸೋಂಕುಗಳಿಗೂ ಕಾರಣವಾಗುತ್ತವೆ. ಹಾಗಿದ್ರೆ ದೇಹದ ಯಾವ ಭಾಗ ಅತಿ ಹೆಚ್ಚು ಕೊಳಕಾಗಿರುವುದು ಎಂಬುದನ್ನು ನೋಡೋಣ ಬನ್ನಿ.

World Earth Day 2026: ನಮ್ಮ ಬದುಕಿಗೆ ಇರುವುದೊಂದೇ ಪೃಥ್ವಿ; ಭೂಮಿ ತಾಯಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ

World Earth Day 2026: ನಮ್ಮ ಬದುಕಿಗೆ ಇರುವುದೊಂದೇ ಪೃಥ್ವಿ; ಭೂಮಿ ತಾಯಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಭೂಮಿ ಸಕಲ ಜೀವರಾಶಿಗಳ ಆಶ್ರಯ ತಾಣ. ಭೂಮಿಯೊಂದೇ ಪ್ರತಿ ಜೀವಿಯ ಬದುಕಿಗೆ ನೆಲೆ. ಭೂಮಿ ಸುರಕ್ಷಿತವಾಗಿದ್ದರೆ ಮಾತ್ರ ಸಕಲ ಜೀವಗಳ ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ಮನುಷ್ಯನ ಸ್ವಾರ್ಥ ಚಟುವಟಿಕೆಗಳ ಕಾರಣ ಭೂಮಿಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಈ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಗಾಗಿ ಸಕಲ ಜೀವ ಸಂಕುಲಗಳ ಉಳಿವಿಗಾಗಿ ಪರಿಸರ ಮತ್ತು ಭೂಮಿಯನ್ನು ರಕ್ಷಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಏಪ್ರಿಲ್‌ 22 ರಂದು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ.

Chanakya Niti: ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಜೀವನದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ ಚಾಣಕ್ಯ

Chanakya Niti: ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಜೀವನದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ, ಒಬ್ಬ ವ್ಯಕ್ತಿಯನ್ನು ಯಶಸ್ಸಿನಿಂದ ದೂರವಿಡುವ ಮತ್ತು ಆತನ ವಿನಾಶಕ್ಕೆ ಕಾರಣವಾಗುವ ಹಲವಾರು ತಪ್ಪುಗಳನ್ನು ಪಟ್ಟಿ ಮಾಡಿದ್ದಾರೆ. ನೀವು ಯಶಸ್ವಿ ಜೀವನವನ್ನು ನಡೆಸಲು ಬಯಸಿದರೆ, ಆ ತಪ್ಪುಗಳನ್ನು ಅರ್ಥಮಾಡಿಕೊಂಡು ತಿದ್ದಿ ಜೀವನ ನಡೆಸುವುದು ತುಂಬಾನೇ ಮುಖ್ಯ. ಹಾಗಿದ್ರೆ ನಮ್ಮ ಯಶಸ್ಸಿಗೆ ಮುಳ್ಳಾಗುವ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.