ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
International Day Against Drug Abuse 2026: ಮಾದಕ ವಸ್ತುಗಳ ಚಟವು ಸಂಪೂರ್ಣ ಜೀವನವನ್ನೇ ಹಾಳು ಮಾಡುತ್ತೆ, ಹುಷಾರ್!
ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಯುವಕರು, ಹದಿಹರೆಯದ ಮಕ್ಕಳು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಈ ವ್ಯಸನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲದೆ, ಇದರಿಂದ ಯುವಕರ ಸುಂದರ ಭವಿಷ್ಯವೇ ಹಾಳಾಗುತ್ತಿದೆ. ಹಾಗಾಗಿ ಮಾದಕ ವ್ಯಸನದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಯುವಕರು, ಮಕ್ಕಳನ್ನು ಮಾದಕ ವ್ಯಸನದಿಂದ ರಕ್ಷಿಸಲು, ಜೂನ್ 26 ರಂದು ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
- Malashree anchan
- Updated on: Jun 26, 2026
- 9:29 am
Chanakya Niti: ಶ್ರೀಮಂತಿಕೆ ಗಳಿಸಲು ಬಯಸುವವರು ಈ ಗೋಲ್ಡನ್ ರೂಲ್ಸ್ಗಳನ್ನು ತಪ್ಪದೇ ಪಾಲಿಸಿ
ಶ್ರೀಮಂತಿಕೆಯನ್ನು ಗಳಿಸಬೇಕು, ಸಾಕಷ್ಟು ಹಣ ಸಂಪಾದನೆ ಮಾಡಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಅನೇಕರಿಗೆ ಎಷ್ಟೇ ಸಂಪಾದನೆ ಮಾಡಿದರೂ ಸಹ ಸಾಕಷ್ಟು ಹಣ ಗಳಿಸಲು ಸಾಧ್ಯವಾಗುವುದಿಲ್ಲ. ನೀವು ಕೂಡ ಇದೇ ಪರಿಸ್ಥಿತಿಯಲ್ಲಿ ಇದ್ದೀರಾ? ಹಾಗಿದ್ರೆ ಚಾಣಕ್ಯರ ಈ ಗೋಲ್ಡನ್ ರೂಲ್ಸ್ಗಳನ್ನು ಪಾಲಿಸಿ, ಖಂಡಿತವಾಗಿಯೂ ನೀವು ಲೈಫಲ್ಲಿ ರಿಚ್ ಆಗ್ತೀರಿ.
- Malashree anchan
- Updated on: Jun 25, 2026
- 8:43 pm
ಮನೆಯಲ್ಲಿಯೇ ತಯಾರಿಸಬಹುದು ಶುದ್ಧ ಕೊಬ್ಬರಿ ಎಣ್ಣೆ; ಅದು ಹೇಗೆ ಅಂತೀರಾ?
ತೆಂಗಿನ ಎಣ್ಣೆ ಅಡುಗೆಗೆ ಮಾತ್ರವಲ್ಲದೆ ಚರ್ಮ ಮತ್ತು ಕೂದಲಿನ ಆರೈಕೆಗೂ ಉತ್ತಮ ಆಯ್ಕೆಯಾಗಿದೆ. ಬಹುತೇಕರು ಈ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಯಿಂದಲೇ ಖರೀದಿ ಮಾಡುತ್ತಾರೆ. ಆದರೆ ಈ ಎಣ್ಣೆ ಪರಿಶುದ್ಧವಾಗಿರುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಹೀಗಿರುವಾಗ ಸ್ವಲ್ಪ ಟೈಂ ಮಾಡಿಕೊಂಡು ಮನೆಯಲ್ಲಿಯೇ ಯಾವುದೇ ಕಲಬೆರಕೆ ಇಲ್ಲದ ಶುದ್ಧ ಕೊಬ್ಬರಿ ಎಣ್ಣೆಯನ್ನು ತಯಾರಿಸಬಹುದು. ಮನೆಯಲ್ಲಿಯೇ ಕೊಬ್ಬರಿ ಎಣ್ಣೆ ತಯಾರಿಸುವುದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
- Malashree anchan
- Updated on: Jun 25, 2026
- 7:29 pm
ಪುರುಷರು ಮದುವೆಗೂ ಮುನ್ನ ಸಂಗಾತಿಯ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು
ಮದುವೆ ಅನ್ನೋದು ಜೀವನದ ಪ್ರಮುಖ ಫಟ್ಟವಾಗಿದ್ದು, ಈ ದಾಂಪತ್ಯ ಜೀವನ ಸದಾ ಕಾಲ ಸಂತೋಷವಾಗಿರಲು ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯ. ಈ ವಿಷಯದಲ್ಲಿ ಮಾಡುವ ಸಣ್ಣ ತಪ್ಪು ಕೂಡ ಸಂಪೂರ್ಣ ಜೀವನವನ್ನು ಹಾಳು ಮಾಡಬಹುದು. ಹಾಗಾಗಿ ಇಂದಿನ ಈ ದಿನಗಳಲ್ಲಿ ವಿಶೇಷವಾಗಿ ಹುಡುಗರು ಮದುವೆಗೂ ಮುನ್ನ ಸಂಗಾತಿಯ ಬಗೆಗಿನ ಈ ಕೆಲವೊಂದಿಷ್ಟು ವಿಚಾರಗಳ ಬಗ್ಗೆ ತಿಳಿಯಲೇಬೇಕು.
- Malashree anchan
- Updated on: Jun 25, 2026
- 6:42 pm
Personality Test: ಈ ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
ಪ್ರತಿಯೊಬ್ಬರ ವ್ಯಕ್ತಿತ್ವವೂ ಭಿನ್ನ ವಿಭಿನ್ನವಾಗಿರುತ್ತದೆ. ನಮ್ಮಲ್ಲಿ ಕೆಲವೊಂದು ನಿಗೂಢ ಗುಣಸ್ವಭಾವ ಅಡಗಿರುತ್ತವೆ. ಅದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ನಿಮಗೂ ಸಹ ನೀವು ಎಮೋಷನಲ್ ವ್ಯಕ್ತಿಯೇ ಅಥವಾ ಪ್ರಾಕ್ಟಿಕಲ್ ಆಗಿ ಯೋಚಿಸುವ ವ್ಯಕ್ತಿಯೇ ಎಂಬುದನ್ನು ತಿಳಿಯುವ ಕುತೂಹಲವಿದೆಯೇ? ಹಾಗಿದ್ದರೆ ಈ ಚಿತ್ರದಲ್ಲಿ ಮೊದಲು ನಿಮಗೆ ಕಾಣಿಸಿದ್ದೇನು ಎಂಬುದರ ಆಧಾರದ ಮೇಲೆ ನಿಮ್ಮ ಸೀಕ್ರೆಟ್ ಪರ್ಸನಾಲಿಟಿಯನ್ನು ತಿಳಿದುಕೊಳ್ಳಿ.
- Malashree anchan
- Updated on: Jun 24, 2026
- 9:08 pm
ಮಲ್ಟಿಗ್ರೈನ್ ಹಿಟ್ಟು Vs ಗೋಧಿ ಹಿಟ್ಟು: ತೂಕ ಇಳಿಕೆಗೆ ಯಾವುದು ಹೆಚ್ಚು ಸಹಕಾರಿ, ತಜ್ಞರ ಸಲಹೆ ಏನು?
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದ್ದು, ತೂಕ ಇಳಿಸಿಕೊಳ್ಳಲು, ಸರಿಯಾದ ದೇಹ ತೂಕವನ್ನು ಕಾಪಾಡಿಕೊಳ್ಳಲು ಡಯಟ್ ಪಾಲನೆ ಮಾಡುತ್ತಾರೆ. ಈ ಡಯಟ್ ಪ್ಲಾನ್ನಲ್ಲಿ ಚಪಾತಿ ಅಥವಾ ರೊಟ್ಟಿ ಇದ್ದೇ ಇರುತ್ತದೆ. ಕೆಲವರು ತೂಕ ಇಳಿಕೆಗೆ ಗೋಧಿ ಹಿಟ್ಟಿನ ಚಪಾತಿ ಸೇವನೆ ಮಾಡಿದರೆ, ಇನ್ನೂ ಕೆಲವರು ಬಹುಧಾನ್ಯ ಹಿಟ್ಟಿನ ರೊಟ್ಟಿ ಅಥವಾ ಚಪಾತಿ ಸೇವನೆ ಮಾಡುತ್ತಾರೆ. ಇವೆರಡರಲ್ಲಿ ತೂಕ ಇಳಿಕೆಗೆ ಯಾವುದು ಹೆಚ್ಚು ಸಹಾಯಕ, ಈ ಬಗ್ಗೆ ತಜ್ಞರ ಅಭಿಪ್ರಾಯವನ್ನು ತಿಳಿದುಕೊಳ್ಳಿ.
- Malashree anchan
- Updated on: Jun 24, 2026
- 7:48 pm
ಈ ಪ್ರಪಂಚದಲ್ಲಿ ಜನ ಅತೀ ಹೆಚ್ಚು ಸೇವಿಸುವ ಹಣ್ಣು ಯಾವುದು ಗೊತ್ತೇ?
ಪ್ರಪಂಚದಾದ್ಯಂತ ಅನೇಕ ಬಗೆಯ ಹಣ್ಣುಗಳು ಲಭ್ಯವಿದೆ. ಈ ಹಣ್ಣುಗಳು ತಿನ್ನಲು ರುಚಿಕ ಮಾತ್ರವಲ್ಲದೆ ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ. ಅದಕ್ಕಾಗಿ ಪ್ರತಿಯೊಬ್ಬರೂ ಹಣ್ಣು ಸೇವನೆ ಮಾಡಲು ಇಷ್ಟಪಡುತ್ತಾರೆ. ಆದ್ರೆ ಯಾವ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ ಎಂಬ ಬಗ್ಗೆ ನಿಮಗೆ ಗೊತ್ತಿದೆಯೇ? ಈ ಕುರಿತ ಇಂಟರೆಸ್ಟಿಂಗ್ ಸಂಗತಿಯನ್ನು ತಿಳಿದುಕೊಳ್ಳಿ.
- Malashree anchan
- Updated on: Jun 24, 2026
- 5:27 pm
ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಲೇಬೇಡಿ
ರಾತ್ರಿ ಮಲಗುವ ಮುನ್ನ ನಾವು ತಿಳಿದೋ ತಿಳಿಯದೆಯೋ ಮಾಡುವಂತಹ ಕೆಲವೊಂದು ತಪ್ಪುಗಳು ನಿದ್ರೆಯನ್ನು ಹಾಳು ಮಾಡುವುದು ಮಾತ್ರವಲ್ಲದೆ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ನಿಮ್ಮಲ್ಲೂ ಈ ಕೆಲವು ಅಭ್ಯಾಸಗಳಿದ್ದರೆ, ಅವುಗಳನ್ನು ಬದಲಾಯಿಸಿಕೊಳ್ಳಿ, ಇಲ್ಲದಿದ್ದರೆ ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
- Malashree anchan
- Updated on: Jun 23, 2026
- 8:53 pm
Chanakya Niti: ಶ್… ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಯಾರ ಬಳಿಯೂ ಶೇರ್ ಮಾಡಿಕೊಳ್ಳಬೇಡಿ
ಇಂದಿನ ಈ ಸಾಮಾಜಿಕ ಮಾಧ್ಯಮ ಯುಗದಲ್ಲಿ, ಜನ ತಮ್ಮ ಜೀವನದ ಸಣ್ಣ ವಿವರಗಳನ್ನು ಸಹ ಆನ್ಲೈನ್ನಲ್ಲಿ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಈ ರೀತಿ ಪ್ರತಿಯೊಂದು ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ತರವಲ್ಲ, ಕುರುಡಾಗಿ ನಂಬಿ ಎಲ್ಲಾ ಸೀಕ್ರೆಟ್ಗಳನ್ನು ಇತರರ ಬಳಿ ಹಂಚಿಕೊಂಡರೆ ಮೋಸ ಹೋಗುವ, ಗೌರವವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಾದ್ದರೆ ಯಾವೆಲ್ಲಾ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಸೂಕ್ತವಲ್ಲ ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Jun 23, 2026
- 7:29 pm
ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ? ಇದರ ಹಿಂದಿನ ಕಾರಣವೇನು ಗೊತ್ತೇ?
ಜೈನ ಧರ್ಮದಲ್ಲಿ ಶ್ವೇತಾಂಬರರು ಮತ್ತು ದಿಗಂಬರರು ಎಂಬ ಎರಡು ಪಂಥಗಳಿದ್ದು, ಈ ಎರಡೂ ಪಂಥದ ಸನ್ಯಾಸಿಗಳು ಕಟ್ಟುನಿಟ್ಟಾದ, ಶಿಸ್ತಿನ ಜೀವನವನ್ನು ನಡೆಸುತ್ತಾರೆ. ಶ್ವೇತಾಂಬರ ಸಾಧುಗಳು ತಮ್ಮ ದೇಹದ ಮೇಲೆ ಬಿಳಿ ಬಣ್ಣದ ಹತ್ತಿ ಬಟ್ಟೆಯನ್ನು ಧರಿಸಿದರೆ, ದಿಗಂಬರ ಪಂಥದ ಸನ್ಯಾಸಿಗಳು ಬಟ್ಟೆಗಳನ್ನು ಧರಿಸುವುದೇ ಇಲ್ಲ. ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನು ಏಕೆ ಧರಿಸುವುದಿಲ್ಲ ಮತ್ತು ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.
- Malashree anchan
- Updated on: Jun 23, 2026
- 6:42 pm
International Olympic Day 2026: ಒಲಿಂಪಿಕ್ ದಿನವನ್ನು ಏಕೆ ಆಚರಿಸಲಾಗುತ್ತದೆ ಅದರ ಮಹತ್ವವೇನು?
ಕ್ರೀಡೆ ಆರೋಗ್ಯಕರ ಜೀವನಶೈಲಿ ಮತ್ತು ಸಹೋದರತ್ವದ ಸಂಕೇತವಾಗಿದ್ದು, ಕ್ರೀಡೆಯು ನಮ್ಮನ್ನು ಫಿಟ್ ಆಗಿರಿಸುವುದು ಮಾತ್ರವಲ್ಲದೆ ದೈಹಿಕ ಮತ್ತು ಆರೋಗ್ಯವನ್ನು ವೃದ್ಧಿಸಲು, ಶಿಸ್ತು, ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಲು ಮತ್ತು ತಂಡದ ಕೆಲಸವನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಕ್ರೀಡೆಯ ಈ ಮಹತ್ವ ಹಾಗೂ ಜನರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿಯನ್ನು ಬೆಳೆಸಲು ಪ್ರತಿವರ್ಷ ಜೂನ್ 23 ರಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆಯ ಬಗ್ಗೆ ತಿಳಿಯೋಣ.
- Malashree anchan
- Updated on: Jun 23, 2026
- 9:34 am
ಮರಣ ಹೊಂದಿದ ವ್ಯಕ್ತಿಯ ಮೂಗಿಗೆ ಹತ್ತಿಯನ್ನಿಡುವುದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ತಿಳಿಯಿರಿ
ಹುಟ್ಟು ಸಹಜ, ಸಾವು ನಿಶ್ಚಿತ. ಹುಟ್ಟಿದ ಪ್ರತಿಯೊಬ್ಬರೂ ಸಾಯಲೇಬೇಕು. ಹೀಗೆ ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಆತನ ಅಂತ್ಯಕ್ರಿಯೆಗೂ ಮುನ್ನ ಮೃತ ದೇಹದ ಕಿವಿ ಮತ್ತು ಮೂಗಿಗೆ ಹತ್ತಿಯನ್ನು ಇಡಲಾಗುತ್ತದೆ. ಅಷ್ಟಕ್ಕೂ ಮರಣ ಹೊಂದಿದ ವ್ಯಕ್ತಿಯ ಮೂಗಿಗೆ ಹತ್ತಿಯನ್ನು ಇಡುವುದೇಕೆ, ಅದರ ಹಿಂದಿನ ವೈಜ್ಞಾನಿಕ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.
- Malashree anchan
- Updated on: Jun 22, 2026
- 9:11 pm