ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
ನಿಮ್ಮ ಮನೆಯಲ್ಲಿ ದಾಸವಾಳ ಗಿಡ ಇದೆಯೇ? ವಾಸ್ತು ಪ್ರಕಾರ ಈ ದಿಕ್ಕಿನಲ್ಲಿಟ್ಟರೆ ಸಂಪತ್ತು ನಿಮ್ಮದಾಗುತ್ತದೆ!
ದಾಸವಾಳ ಗಿಡವು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲ, ವಾಸ್ತು ಶಾಸ್ತ್ರದಲ್ಲಿಯೂ ವಿಶೇಷ ಮಹತ್ವ ಪಡೆದಿದೆ. ವಾಸ್ತು ನಂಬಿಕೆಗಳ ಪ್ರಕಾರ ದಾಸವಾಳ ಗಿಡವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಟ್ಟರೆ ಮನೆಗೆ ಸಕಾರಾತ್ಮಕ ಶಕ್ತಿ, ನೆಮ್ಮದಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎನ್ನಲಾಗುತ್ತದೆ. ವಾಸ್ತು ನಂಬಿಕೆಗಳ ಪ್ರಕಾರ ದಾಸವಾಳದ ಕೆಂಪು ಹೂವನ್ನು ದೇವರಿಗೆ ಅರ್ಪಿಸುವುದರಿಂದ ಮನೆಯಲ್ಲಿ ಶುಭ ವಾತಾವರಣ ನಿರ್ಮಾಣವಾಗುತ್ತದೆ.
- Malashree anchan
- Updated on: Jul 17, 2026
- 7:57 am
ವಿಚಿತ್ರ ಮೂಢನಂಬಿಕೆಗಳು! ಜಗತ್ತಿನ ಈ 6 ನಂಬಿಕೆಗಳ ಬಗ್ಗೆ ಕೇಳಿದರೆ ನಿಮಗೂ ಅಚ್ಚರಿ ಆಗುತ್ತೆ
ಜಗತ್ತಿನ ವಿವಿಧ ದೇಶಗಳಲ್ಲಿ ಇಂದಿಗೂ ಹಲವಾರು ವಿಚಿತ್ರ ಮೂಢನಂಬಿಕೆಗಳು ಜೀವಂತವಾಗಿವೆ. ಹೊಸ ವರ್ಷದ ಮೊದಲ ದಿನ ಮನೆ ಶುಚಿಗೊಳಿಸಬಾರದು, ರಾತ್ರಿ ಯಾರಾದರೂ ಹೆಸರು ಕರೆದರೆ ತಕ್ಷಣ ಪ್ರತಿಕ್ರಿಯಿಸಬಾರದು, ಬ್ಯಾಗ್ ಅನ್ನು ನೆಲದ ಮೇಲೆ ಇಡಬಾರದು ಸೇರಿದಂತೆ ಹಲವು ನಂಬಿಕೆಗಳು ಜನರಲ್ಲಿ ಪ್ರಚಲಿತದಲ್ಲಿವೆ.
- Malashree anchan
- Updated on: Jul 17, 2026
- 7:15 am
Kia Syros EV: ಕಿಯಾದ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರು ಅನಾವರಣ: 526 ಕಿ.ಮೀ. ವ್ಯಾಪ್ತಿ 25,000ಕ್ಕೆ ಬುಕ್ಕಿಂಗ್
ಭಾರತದಲ್ಲಿ ಕಿಯಾ ತನ್ನ ಹೊಸ ಸೈರೋಸ್ EVಗೆ ಪ್ರೀ-ಬುಕಿಂಗ್ ಆರಂಭಿಸಿದೆ. ಈ ಎಲೆಕ್ಟ್ರಿಕ್ SUV ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದ್ದು, ಗರಿಷ್ಠ 526 ಕಿಮೀ ರೇಂಜ್ ನೀಡುತ್ತದೆ. 100 kW DC ಫಾಸ್ಟ್ ಚಾರ್ಜರ್ ಮೂಲಕ ಕೇವಲ 39 ನಿಮಿಷಗಳಲ್ಲಿ 10% ರಿಂದ 80% ಚಾರ್ಜ್ ಮಾಡಬಹುದು. ಇದರಲ್ಲಿರುವ ಹಲವು ಪ್ರೀಮಿಯಂ ವೈಶಿಷ್ಟ್ಯಗಳು ಇದನ್ನು ಆಕರ್ಷಕ ಎಲೆಕ್ಟ್ರಿಕ್ SUV ಆಗಿ ಮಾಡಿವೆ.
- Malashree anchan
- Updated on: Jul 16, 2026
- 12:07 pm
Tech Tips: ಪಾರ್ಟ್ನರ್ ಜೊತೆ ಖಾಸಗಿ ಸಮಯ ಕಳೆಯುವಾಗ ಈ ಫೋನ್ ಸೆಟ್ಟಿಂಗ್ಸ್ ತಪ್ಪದೇ ಆಫ್ ಮಾಡಿ
ಸ್ಮಾರ್ಟ್ಫೋನ್ನ ಕೆಲವು ಸೆಟ್ಟಿಂಗ್ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಅನಗತ್ಯವಾಗಿ ಹಂಚಿಕೊಳ್ಳುವ ಅಪಾಯವನ್ನು ಹೆಚ್ಚಿಸಬಹುದು. ವಿಶೇಷವಾಗಿ ಸಂಗಾತಿಯೊಂದಿಗೆ ಖಾಸಗಿ ಸಮಯ ಕಳೆಯುವಾಗ Google Assistant ಅಥವಾ Siri, ಮೈಕ್ರೋಫೋನ್, ಕ್ಯಾಮೆರಾ ಮತ್ತು ಲೊಕೇಶನ್ ಪ್ರವೇಶದಂತಹ ಸೆಟ್ಟಿಂಗ್ಗಳನ್ನು ಪರಿಶೀಲಿಸಿ ಅಗತ್ಯವಿಲ್ಲದಿದ್ದರೆ ಆಫ್ ಮಾಡುವುದು ಉತ್ತಮ.
- Malashree anchan
- Updated on: Jul 16, 2026
- 11:18 am
Rain Water: ನೇರವಾಗಿ ಮಳೆ ನೀರು ಕುಡಿಯುವುದು ಸುರಕ್ಷಿತವೇ? ತಜ್ಞರು ಹೇಳಿದ ಸತ್ಯ
Rainwater drinking: ಮಳೆ ನೀರು ನೇರವಾಗಿ ಆಕಾಶದಿಂದ ಬೀಳುವುದರಿಂದ ಅದು ಸಂಪೂರ್ಣ ಶುದ್ಧವಾಗಿರುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಶುದ್ಧೀಕರಿಸದ ಮಳೆ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ. ಮಳೆ ಹನಿಗಳು ಭೂಮಿಗೆ ತಲುಪುವ ಮುನ್ನ ಗಾಳಿಯಲ್ಲಿರುವ ಧೂಳು, ಹೊಗೆ, ರಾಸಾಯನಿಕ ಕಣಗಳು, ಬ್ಯಾಕ್ಟೀರಿಯಾ ಹಾಗೂ ವೈರಸ್ಗಳ ಸಂಪರ್ಕಕ್ಕೆ ಬರುವ ಸಾಧ್ಯತೆ ಇದೆ.
- Malashree anchan
- Updated on: Jul 16, 2026
- 10:30 am
Kids Sleep: ಸ್ಕೂಲ್ನಿಂದ ಬಂದ ತಕ್ಷಣ ಮಕ್ಕಳನ್ನು ಮಲಗಿಸಬಹುದೇ?
ಶಾಲೆಯಿಂದ ಮನೆಗೆ ಬಂದ ತಕ್ಷಣ ಮಕ್ಕಳು ಮಲಗುವುದು ಒಳ್ಳೆಯದೇ? ಈ ಪ್ರಶ್ನೆ ಅನೇಕ ಪೋಷಕರನ್ನು ಕಾಡುತ್ತದೆ. ತಜ್ಞರ ಪ್ರಕಾರ, ಮಕ್ಕಳು ತುಂಬಾ ದಣಿದಿದ್ದರೆ 20-30 ನಿಮಿಷಗಳ ಸಣ್ಣ ನಿದ್ದೆ ತೆಗೆದುಕೊಳ್ಳಬಹುದು. ಆದರೆ ಹೆಚ್ಚು ಹೊತ್ತು ಮಲಗಿದರೆ ರಾತ್ರಿ ನಿದ್ರೆಯ ವೇಳಾಪಟ್ಟಿ ಹಾಳಾಗುವ ಸಾಧ್ಯತೆ ಇದೆ. ಮಕ್ಕಳ ವಯಸ್ಸಿಗೆ ತಕ್ಕಷ್ಟು ರಾತ್ರಿ ನಿದ್ರೆ, ಪೌಷ್ಟಿಕ ಆಹಾರ ಹಾಗೂ ನಿಯಮಿತ ದಿನಚರಿ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾಗಿದೆ.
- Malashree anchan
- Updated on: Jul 16, 2026
- 9:55 am
Auto Tips: ವಿವಿಧ ರೀತಿಯ ಹೈಬ್ರಿಡ್ ಕಾರುಗಳು ಯಾವುವು?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ?
ಇಂಧನ ಉಳಿತಾಯ ಮತ್ತು ಉತ್ತಮ ಮೈಲೇಜ್ ನೀಡುವ ಕಾರಣದಿಂದ ಹೈಬ್ರಿಡ್ ಕಾರುಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಹೈಬ್ರಿಡ್ ಕಾರುಗಳು ಒಂದೇ ರೀತಿಯಲ್ಲ. ಪ್ಯಾರಲೆಲ್ ಹೈಬ್ರಿಡ್, ಸೀರೀಸ್ ಹೈಬ್ರಿಡ್, ಪ್ಲಗ್-ಇನ್ ಹೈಬ್ರಿಡ್ (PHEV) ಮತ್ತು ಮೈಲ್ಡ್ ಹೈಬ್ರಿಡ್ ಎಂಬ ನಾಲ್ಕು ಪ್ರಮುಖ ವಿಧಗಳಿವೆ. ಪ್ರತಿಯೊಂದು ವ್ಯವಸ್ಥೆಯ ಕಾರ್ಯವಿಧಾನ, ಬ್ಯಾಟರಿ ಬಳಕೆ ಮತ್ತು ಇಂಧನ ಉಳಿತಾಯದ ಸಾಮರ್ಥ್ಯ ವಿಭಿನ್ನವಾಗಿರುತ್ತದೆ.
- Malashree anchan
- Updated on: Jul 15, 2026
- 4:43 pm
ಈಗಿನ ಮೊಬೈಲ್ಗಳಲ್ಲಿ ತೆಗೆದು ಬದಲಾಯಿಸಬಹುದಾದ ಬ್ಯಾಟರಿ ಏಕೆ ಇಲ್ಲ? ಇಲ್ಲಿದೆ ಅಚ್ಚರಿಯ ಕಾರಣ
Tech Utility: ಒಂದು ಕಾಲದಲ್ಲಿ ಮೊಬೈಲ್ಗಳ ಬ್ಯಾಟರಿಯನ್ನು ಸುಲಭವಾಗಿ ತೆಗೆದು ಹೊಸದನ್ನು ಹಾಕಬಹುದಾಗಿತ್ತು. ಆದರೆ ಇಂದಿನ ಬಹುತೇಕ ಸ್ಮಾರ್ಟ್ಫೋನ್ಗಳಲ್ಲಿ ಸೀಲ್ಡ್ ಅಥವಾ ನಾನ್-ರಿಮೂವಬಲ್ ಬ್ಯಾಟರಿಯೇ ಕಾಣಸಿಗುತ್ತದೆ. ಈ ಬದಲಾವಣೆಯ ಹಿಂದೆ ಹಲವು ತಾಂತ್ರಿಕ ಕಾರಣಗಳಿವೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
- Malashree anchan
- Updated on: Jul 15, 2026
- 4:15 pm
ಸಂಬಂಧ ಹಾಳಾಗದಿರಲು 35 ವರ್ಷದೊಳಗೆ ಈ 4 ವೈವಾಹಿಕ ಪಾಠಗಳನ್ನು ಕಲಿಯಿರಿ
ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಬಾಂಧವ್ಯ ಉಳಿಸಿಕೊಳ್ಳಲು ಪ್ರೀತಿ ಮಾತ್ರ ಸಾಕಾಗುವುದಿಲ್ಲ. ಪರಸ್ಪರ ಗೌರವ, ಮುಕ್ತ ಸಂವಹನ, ಅರ್ಥೈಸಿಕೊಳ್ಳುವ ಮನೋಭಾವ ಹಾಗೂ ಹೋಲಿಕೆ ಮಾಡದ ಅಭ್ಯಾಸವೂ ಮುಖ್ಯ. 35 ವರ್ಷದೊಳಗೆ ಪ್ರತಿಯೊಬ್ಬ ದಂಪತಿಯೂ ಕಲಿಯಬೇಕಾದ 4 ಪ್ರಮುಖ ವೈವಾಹಿಕ ಪಾಠಗಳನ್ನು ಸಂಬಂಧ ತಜ್ಞೆ ಕೋಮಲ್ ವಿವರಿಸಿದ್ದಾರೆ.
- Malashree anchan
- Updated on: Jul 15, 2026
- 1:36 pm
‘‘ನನ್ನ ಮಗ ಬಾತ್ರೂಮ್ನಲ್ಲಿ ಹೆಚ್ಚು ಸಮಯ ಕಳೆಯುತ್ತಾನೆ’’ ಎಂದ ತಾಯಿಗೆ ಮನೋವೈದ್ಯರ ಉತ್ತರವೇನು ನೋಡಿ
ಮಗು ಬಾತ್ರೂಮ್ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ ಆತಂಕಪಡಬೇಕೇ? ಮಕ್ಕಳ ದೇಹದ ಬದಲಾವಣೆಗಳು, ಅವರ ವರ್ತನೆ ಮತ್ತು ಪೋಷಕರು ಹೇಗೆ ಮಾತನಾಡಬೇಕು ಎಂಬುದರ ಕುರಿತು ಮನೋವೈದ್ಯರ ಮಹತ್ವದ ಸಲಹೆ ತಿಳಿಯಿರಿ. ಮುಖ್ಯವಾಗಿ ಇಂತಹ ಸಂದರ್ಭಗಳಲ್ಲಿ ಆತಂಕ ಅಥವಾ ಗದರಿಕೆಗಿಂತ ತಿಳುವಳಿಕೆಯಿಂದ ನಡೆದುಕೊಳ್ಳುವುದು ಅತ್ಯಂತ ಮುಖ್ಯ.
- Malashree anchan
- Updated on: Jul 15, 2026
- 12:28 pm
Chanakya Niti: ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಈ ವಿಷಯಗಳನ್ನು ನಿಯಂತ್ರಿಸಲು ಕಲಿಯಿರಿ
ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಜೀವನದಲ್ಲಿ ಮುಂದುವರೆಯಲು ಬಯಸುವವರು ಒಂದಷ್ಟು ವಿಷಯಗಳನ್ನು ನಿಯಂತ್ರಿಸಲು ಕಲಿಯಲೇಬೇಕು, ಇಲ್ಲದಿದ್ದರೆ ಪ್ರಗತಿಯ ಹಾದಿ ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಿದ್ರೆ ಜೀವನದಲ್ಲಿ ಮುಂದುವರೆಯಲು ಯಾವೆಲ್ಲಾ ವಿಷಯಗಳನ್ನು ನಿಯಂತ್ರಿಸಬೇಕು ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Jul 13, 2026
- 9:41 pm
ಹೊಳೆಯುವ ತ್ವಚೆ ನಿಮ್ಮದಾಗಲು ಬೆಳಗಿನ ದಿನಚರಿಯಲ್ಲಿ ತಪ್ಪದೇ ಈ ಕಾರ್ಯಗಳನ್ನು ಮಾಡಿ
ತ್ವಚೆಯನ್ನು ಆರೋಗ್ಯಕರವಾಗಿಡಲು, ತ್ವಚೆಯ ಹೊಳಪನ್ನು ಹೆಚ್ಚಿಸಲು ಅನೇಕರು ದುಬಾರಿ ಸ್ಕಿನ್ಕೇರ್ಗಳ ಮೊರೆ ಹೋಗ್ತಾರೆ. ಆದರೆ ಈ ಸ್ಕಿನ್ಕೇರ್ಗಳನ್ನು ಪಾಲಿಸಿದರೂ ಅಂದುಕೊಂಡ ಫಲಿತಾಂಶ ಸಿಗೋದೇ ಇಲ್ಲ. ಹೀಗಿರುವಾಗ ಬೆಳಗಿನ ದಿನಚರಿಯಲ್ಲಿ ಈ ಕೆಲವೊಂದು ಅಭ್ಯಾಸಗಳನ್ನು ಪಾಲಿಸುವ ಮೂಲಕ ಹೊಳೆಯುವ ಮತ್ತು ಆರೋಗ್ಯಕರ ತ್ವಚೆಯನ್ನು ನಿಮ್ಮದಾಗಿಸಬಹುದು.
- Malashree anchan
- Updated on: Jul 13, 2026
- 8:24 pm