AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಏಸ್‌ನೊಂದಿಗೆ ತ್ರಿಚಕ್ರ ವಾಹನ ನಿರ್ವಾಹಕರ ಆದಾಯದಲ್ಲಿ ಹೆಚ್ಚಳ: ಈ ಬಗ್ಗೆ ಅಶೋಕ್ ಗೋಯಲ್ ಏನ್ ಹೇಳ್ತಾರೆ?

ಟಾಟಾ ಏಸ್‌ನೊಂದಿಗೆ ತ್ರಿಚಕ್ರ ವಾಹನ ನಿರ್ವಾಹಕರು ಗಿಗ್ ಗಳಿಕೆಯನ್ನು ಮೀರಿ ಸ್ಥಿರ, ಆದಾಯವುಳ್ಳ ವ್ಯವಹಾರಗಳತ್ತ ಸಾಗುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಜನರು ಇದನ್ನೇ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಟಾಟಾ ಏಸ್ ಅನೇಕರ ಬದುಕಿಗೆ ದಾರಿ ದೀಪವಾಗಿದೆ. ಬಗ್ಗೆ ಅಶೋಕ್ ಗೋಯಲ್ ವಿವರಿಸಿದ್ದಾರೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ

ಸಾಯಿನಂದಾ
|

Updated on:Aug 29, 2025 | 7:27 PM

Share

ಅನೇಕ ಸಣ್ಣ ವ್ಯಾಪಾರಿಗಳಿಗೆ, ವಾಹನ ನಿರ್ವಾಹಕರಿಗೆ ಈ ತ್ರಿಚಕ್ರ ವಾಹನಗಳು ಬಹಳ ಹಿಂದಿನಿಂದಲೂ ಜೀವನೋಪಾಯದ ಏಕೈಕ ಆಯ್ಕೆಯಾಗಿದೆ. ದೊಡ್ಡ ವಾಹನಗಳನ್ನು ಖರೀದಿಸುವ ಅಗತ್ಯತೆ ಇರಬಹುದು, ಖರೀದಿಸುವ ಯೋಜನೆಯನ್ನು ಹಾಕಿಕೊಂಡಿರಬಹುದು. ಆದರೆ ಆರ್ಥಿಕವಾಗಿ ಸಶಕ್ತರಲ್ಲದ ಕಾರಣ ಅಂತಹ ವಾಹನಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಇದೀಗ ಟಾಟಾ ಏಸ್ (Tata Ace) ಆ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಅಭಿವೃದ್ಧಿ ಹೊಂದಲು ಅವಕಾಶ ನೀಡುತ್ತಿದೆ. ಹೌದು, ಇಂದು, ಟಾಟಾ ಏಸ್ ನಿಜವಾದ ಅಪ್‌ಗ್ರೇಡ್ ಅನ್ನು ಸಕ್ರಿಯಗೊಳಿಸಿದ್ದು, ಇದು ಗಿಗ್ ಕೆಲಸದಿಂದ ಸುಸ್ಥಿರ ವ್ಯಾಪಾರ ಹಾಗೂ ಬೆಳವಣಿಗೆಗೆ ದಾರಿ ಮಾಡಿಕೊಡುತ್ತಿದೆ ಎಂದು ಬಿಎಲ್‌ಆರ್‌ ಲಾಜಿಸ್ಟಿಕ್‌ ಎಂಡಿ ಅಶೋಕ್‌ ಗೋಯಲ್ (Ashok Goyal) ತಿಳಿಸಿದ್ದಾರೆ.

ತನ್ನ ಹೆಚ್ಚಿನ ಪೇಲೋಡ್, ಕ್ರಾಸ್-ಸೆಕ್ಟರ್ ಬಳಕೆಯ ಸುಲಭತೆ ಹಾಗೂ ವಿಶ್ವಾಸಾರ್ಹ ಸೇವಾ ಜಾಲದೊಂದಿಗೆ, ಟಾಟಾ ಏಸ್ ಆಪರೇಟರ್‌ಗಳಿಗೆ FMCG, ಇ-ಕಾಮರ್ಸ್, ಕಿರಾನಾ ಪೂರೈಕೆ ಸೇರಿದಂತೆ ವಿವಿಧ ಈವೆಂಟ್‌ಗಳಿಂದ ಆದಾಯವನ್ನು ಗಳಿಸಲು ಅನುವು ಮಾಡಿಕೊಡುತ್ತಿದೆ. NBFC ಗಳ ಮೂಲಕ ಸಾಲಗಳಿಗೆ ಸುಲಭ ಪ್ರವೇಶವನ್ನು ಪಡೆಯಬಹುದು. ಮುದ್ರಾ ಮತ್ತು PMEGP ಯಂತಹ ಸರ್ಕಾರಿ ಯೋಜನೆಗಳು ಈ ಬೆಳವಣಿಗೆಯನ್ನು ಹೆಚ್ಚು ಸುಲಭವಾಗಿಸುತ್ತಿವೆ. ಇದರ ಜೊತೆಗೆ, ಕಂಪನಿಯು ಕಡಿಮೆ ನಿರ್ವಹಣಾ ವೆಚ್ಚಗಳೊಂದಿಗೆ ದೀರ್ಘಾವಧಿಯ ಉಳಿತಾಯವನ್ನು ಖಚಿತಪಡಿಸುತ್ತಿದೆ. ಜನರು ಪ್ರಗತಿ ಸಾಗಿಸುತ್ತಿದ್ದರೆ ದೇಶವು ಪ್ರಗತಿಯತ್ತ ಸಾಗಲು ಸಾಧ್ಯ ಅವರು ಎಂದಿದ್ದಾರೆ.

ಟಾಟಾ ಎಸ್ ತ್ರಿಚಕ್ರ ವಾಹನ ಚಾಲಕರಿಗೆ ಜೀವನವನ್ನು ಸುಧಾರಿಸಲು, ತಮ್ಮ ಕೆಲಸವನ್ನು ವೈವಿಧ್ಯಗೊಳಿಸಲು ಮತ್ತು ಪೋರ್ಟರ್‌ನಿಂದ ಅಮೆಜಾನ್‌ನಿಂದ ಫ್ಲಿಪ್‌ಕಾರ್ಟ್ ಲಾಜಿಸ್ಟಿಕ್ಸ್‌ವರೆಗೆ ವೇದಿಕೆಗಳಲ್ಲಿ ಬೆಳೆಯಲು ಅವಕಾಶವನ್ನು ನೀಡುತ್ತಿದೆ ಎಂದು ಅಶೋಕ್ ಗೋಯಲ್ ಹೇಳಿದ್ದಾರೆ.

ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Fri, 29 August 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ