ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ
International Day of Happiness 2025 : ಅಂತಾರಾಷ್ಟ್ರೀಯ ಸಂತೋಷ ದಿನ ಆಚರಿಸುವುದು ಏಕೆ? ಈ ದಿನದ ಇತಿಹಾಸ, ಮಹತ್ವವೇನು? ಇಲ್ಲಿದೆ ಮಾಹಿತಿ
ಸಂತೋಷ ಯಾರಿಗೆ ತಾನೇ ಬೇಡ ಹೇಳಿ? ನಮ್ಮ ಖುಷಿ, ಸಂತೋಷವನ್ನು ನಮ್ಮಲ್ಲೇ ನಾವು ಕಂಡುಕೊಳ್ಳಬೇಕು. ಸಂತೋಷಕ್ಕಾಗಿ ಒಂದು ದಿನವನ್ನು ಮೀಸಲಿಡಲಾಗಿದ್ದು ಅದುವೇ ಅಂತಾರಾಷ್ಟ್ರೀಯ ಸಂತೋಷ ದಿನ. ಪ್ರತಿವರ್ಷ ಮಾರ್ಚ್ 20ರಂದು ಅಂತಾರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. 2013ರಿಂದ ವಿಶ್ವಸಂಸ್ಥೆಯು ಈ ದಿನದ ಆಚರಣೆಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿತ್ತು. ಅಂದಿನಿಂದ ಪ್ರತಿ ವರ್ಷ ಸಂತೋಷದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.
- Sainandha P
- Updated on: Mar 20, 2025
- 7:38 am
World Sparrow Day 2025 : ಗುಬ್ಬಚ್ಚಿಗಳ ದಿನಾಚರಣೆ ಶುರುವಾದದ್ದು ಹೇಗೆ? ಇತಿಹಾಸ, ಮಹತ್ವ ತಿಳಿಯಿರಿ
ಸ್ವಾರ್ಥಭರಿತ ಜೀವನ ಶೈಲಿ ಹಾಗೂ ಹೆಚ್ಚುತ್ತಿರುವ ಶಬ್ದ ಮಾಲಿನ್ಯದಿಂದಾಗಿ ಗುಬ್ಬಚ್ಚಿಗಳು ಅಳಿವಿನಂಚಿಗೆ ತಲುಪಿದೆ. ಹಿಂದೆಲ್ಲ ಮನೆಯಂಗಳದಲ್ಲಿ ಕಾಣಸಿಗುತ್ತಿದ್ದ ಪುಟ್ಟ ಪುಟ್ಟ ಗುಬ್ಬಚ್ಚಿಗಳು ಕಾಣದಂತಾಗಿದೆ. ಈ ಗುಬ್ಬಚ್ಚಿಗಳನ್ನು ರಕ್ಷಿಸಲು ಮತ್ತು ಆ ಸಂತತಿಗಳ ಉಳಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಒಂದು ದಿನವನ್ನು ಮೀಸಲಾಗಿಡಲಾಗಿದ್ದು ಅದುವೇ ವಿಶ್ವ ಗುಬ್ಬಚ್ಚಿ ದಿನ. ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಶುರುವಾದದ್ದು ಹೇಗೆ? ಈ ದಿನದ ಇತಿಹಾಸ, ಮಹತ್ವ ಸೇರಿದಂತೆ ಇನ್ನಷ್ಟು ಮಾಹಿತಿ ಇಲ್ಲಿದೆ.
- Sainandha P
- Updated on: Mar 19, 2025
- 3:10 pm
Personality Test : ಸೌಂದರ್ಯ ಹೆಚ್ಚಿಸುವ ಕುತ್ತಿಗೆಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ
ಪ್ರಪಂಚದಲ್ಲಿರುವ ವ್ಯಕ್ತಿಗಳು ಒಂದೇ ರೀತಿ ಇರುವುದಿಲ್ಲ. ಸನ್ನಿವೇಶ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಹೇಗೆ ವರ್ತಿಸುತ್ತಾರೆ ಎನ್ನುವ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಣಯಿಸುತ್ತದೆ. ಆದರೆ ದೇಹದ ಪ್ರತಿಯೊಂದು ಅಂಗಗಳು ವ್ಯಕ್ತಿತ್ವ ಹಾಗೂ ಗುಣಸ್ವಭಾವವನ್ನು ಹೇಳುತ್ತದೆ. ಕಣ್ಣು, ಕಿವಿ, ಬಾಯಿ, ನಾಲಗೆ, ಹಣೆ ಹಾಗೂ ಹುಬ್ಬುಗಳ ಆಕಾರದಿಂದಲೇ ವ್ಯಕ್ತಿಯ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಬಹುದು. ಅದೇ ರೀತಿ ವ್ಯಕ್ತಿಯ ಕುತ್ತಿಗೆ ಉದ್ದ ನೋಡಿ ವ್ಯಕ್ತಿಯೂ ನಿಗೂಢ ಗುಣಸ್ವಭಾವ ತಿಳಿಯಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.
- Sainandha P
- Updated on: Mar 19, 2025
- 2:40 pm
ಬೇಸಿಗೆಯಲ್ಲಿ ಈ ಪಾನೀಯ ದೇಹಕ್ಕೆ ತಂಪು, ತ್ವಚೆಗೂ ಪ್ರಯೋಜನಕಾರಿ
ಬಿರು ಬಿಸಿಲಿನಲ್ಲಿ ಹೊರಗೆ ಹೋಗುವುದೆಂದರೆ ತಲೆ ನೋವಿನ ಕೆಲಸ. ಹೌದು, ಬೇಸಿಗೆಯಲ್ಲಿ ಸುಡು ಬಿಸಿಲಿನಿಂದ ಚರ್ಮದ ಕಾಂತಿ ಮಂದವಾಗುವುದು, ಸನ್ ಬರ್ನ್ ಸಮಸ್ಯೆ ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಹೆಚ್ಚಿನವರು ಮನೆಯಲ್ಲೇ ರೋಸ್ ವಾಟರ್, ಸೌತೆಕಾಯಿ ಮೊದಲಾದವುಗಳನ್ನು ಬಳಸಿ ತ್ವಚೆ ಆರೈಕೆ ಮಾಡುತ್ತಾರೆ. ಆದರೆ ಆಹಾರದಲ್ಲಿ ಈ ಹಣ್ಣಿನ ಜ್ಯೂಸ್ ಸೇರಿಸಿಕೊಳ್ಳುವ ಮೂಲಕ ಹೊಳಪುಳ್ಳ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಹಣ್ಣಿನ ರಸವು ಚರ್ಮವನ್ನು ತಂಪಾಗಿಸಿ ಕಾಂತಿಯುತ ಉಳಿಯುವಂತೆ ಮಾಡುತ್ತದೆ.
- Sainandha P
- Updated on: Mar 19, 2025
- 2:15 pm
Summer Gardening Tips : ಸುಡುವ ಬಿಸಿಲಿಗೆ ಹೂವಿನ ಗಿಡಗಳು ಒಣಗದಂತೆ ತಡೆಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಬೇಸಿಗೆ ಕಾಲ ಬಂತೆಂದರೆ ಸೂರ್ಯನು ತನ್ನ ಪ್ರಕಾಶವಾದ ಕಿರಣಗಳಿಂದ ನೆತ್ತಿಯನ್ನು ಸುಡುತ್ತಾನೆ. ಅದಲ್ಲದೇ, ಈ ಬೇಸಿಗೆ ಋತು ಮುಗಿಯುವ ಹೊತ್ತಿಗೆ ಅದೆಷ್ಟು ಗಿಡಗಳು ಬಾಡಿ ಅವುಗಳ ಸಂತತಿಯೇ ಅಳಿದು ಹೋಗಿರುತ್ತದೆ. ಹೀಗಾಗಿ ಬೇಸಿಗೆಕಾಲದಲ್ಲಿ ಮನೆಯಂಗಳದಲ್ಲಿರುವ ಹೂವಿನಗಿಡಗಳ ಬಗ್ಗೆ ಸ್ವಲ್ಪ ಮಟ್ಟಿಗಾದರೂ ಮುತುವರ್ಜಿ ವಹಿಸಬೇಕು. ಕೆಲವು ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಈ ಬಿರುಬಿಸಿಲಿನಲ್ಲಿಯೂ ನಿಮ್ಮ ಮನೆಯಲ್ಲಿರುವ ಈ ಹೂವಿನ ತೋಟವು ಹಸಿರಾಗಿರುತ್ತದೆ. ಹಾಗಾದ್ರೆ ಈ ಇಲ್ಲಿದೆ ಸಿಂಪಲ್ ಟಿಪ್ಸ್
- Sainandha P
- Updated on: Mar 19, 2025
- 9:10 am
ನಿಮ್ಮ ಮದುವೆಗೆ ಲೆಹೆಂಗಾ ಅಥವಾ ಶೇರ್ವಾನಿ ಖರೀದಿ ಮಾಡ್ತಿದ್ದೀರಾ? ನಿಮ್ಮ ಸ್ಕಿನ್ ಟೋನ್ ಗೆ ಯಾವ ಬಣ್ಣದ ಬಟ್ಟೆ ಬೆಸ್ಟ್?
ಮದುವೆಗೆ ಎಷ್ಟು ತಯಾರಿ ನಡೆಸಿದರೂ ಕಡಿಮೆಯೇ, ಧರಿಸುವ ಉಡುಗೆ ತೊಡುಗೆ, ಮೇಕಪ್ ಸೇರಿದಂತೆ ಹೀಗೆ ನಾನಾ ರೀತಿಯ ತಯಾರಿಗಳಿರುತ್ತದೆ. ಒಂದು ವೇಳೆ ನೀವು ಮದುವೆ ದಿನ ಅಥವಾ ರಿಸೆಪ್ಶನ್ ಗೆ ಚರ್ಮದ ಬಣ್ಣಕ್ಕೆ ಅನುಗುಣವಾಗಿ ಲೆಹೆಂಗಾ ಅಥವಾ ಶೇರ್ವಾನಿ ಆಯ್ಕೆ ಮಾಡಲು ಬಯಸಿದರೆ ಕೆಲವು ಸಲಹೆಗಳು ಖಂಡಿತವಾಗಿ ನಿಮಗೆ ಉಪಯೋಗಕ್ಕೆ ಬರುತ್ತದೆ. ಈ ನಿಮ್ಮ ಚರ್ಮದ ಬಣ್ಣಕ್ಕೆ ಅನುಗುಣವಾಗಿ ಈ ಬಣ್ಣದ ಬಟ್ಟೆಗಳ ಖರೀದಿಯೂ ನಿಮ್ಮ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ, ಈ ಕುರಿತಾದ ಕೆಲವು ಸಲಹೆಗಳು ಇಲ್ಲಿವೆ.
- Sainandha P
- Updated on: Mar 19, 2025
- 8:06 am
Raw Papaya vs Ripe Papaya: ಇವೆರಡರಲ್ಲಿ ಕೂದಲಿನ ಬೆಳವಣಿಗೆಗೆ ಯಾವುದು ಉತ್ತಮ? ಇಲ್ಲಿದೆ ಮಾಹಿತಿ
ಎಲ್ಲರೂ ಇಷ್ಟಪಟ್ಟು ಸವಿಯುವ ಹಣ್ಣುಗಳಲ್ಲಿ ಪಪ್ಪಾಯ ಕೂಡ ಒಂದು. ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈ ಹಣ್ಣಿನ ಆರೋಗ್ಯ ಪ್ರಯೋಜನಗಳು ಅಧಿಕ. ಅದರಲ್ಲಿಯೂ ಈ ಚರ್ಮ ಮತ್ತು ಕೂದಲು ಆರೈಕೆಯಲ್ಲಿ ಪಪ್ಪಾಯ ಪಾತ್ರ ಬಹುದೊಡ್ಡದಿದೆ. ಈ ಕೂದಲಿನ ಆರೈಕೆಗೆ ಕಚ್ಚಾ ಅಥವಾ ಮಾಗಿದ ಪಪ್ಪಾಯಿ ಇದರಲ್ಲಿ ಯಾವುದು ಉತ್ತಮ ಎನ್ನುವ ಗೊಂದಲ ಅನೇಕರಲ್ಲಿ ಇರಬಹುದು. ಆದರೆ ಆರೋಗ್ಯಕರ ಕೂದಲನ್ನು ಉತ್ತೇಜಿಸಲು ಕಚ್ಚಾ ಅಥವಾ ಮಾಗಿದ ಪಪ್ಪಾಯಿ ಹೇಗೆ ಸಹಾಯ ಮಾಡುತ್ತವೆ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.
- Sainandha P
- Updated on: Mar 18, 2025
- 2:43 pm
Personality Test : ನಿಮ್ಮ ಹೆಸರಿನ ಕೊನೆಯ ಅಕ್ಷರ ಯಾವುದು? ಹೇಳುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ
ಎಲ್ಲಾ ವ್ಯಕ್ತಿಗಳ ವ್ಯಕ್ತಿತ್ವ ಒಂದೇ ರೀತಿ ಇರುವುದಿಲ್ಲ. ಆದರೆ ವ್ಯಕ್ತಿತ್ವ ತಿಳಿಯಬೇಕಂದರೆ ವ್ಯಕ್ತಿಯ ಜೊತೆಗೆ ಬೆರೆಯಬೇಕಿಲ್ಲ, ಹೆಸರು ಸಾಕಂತೆ. ಹುಟ್ಟಿದ ಮಗುವಿಗೆ ಯಾವ ಅಕ್ಷರದಿಂದ ಹೆಸರು ಇಡಬೇಕು ಎಂದು ಜಾತಕ ನೋಡುತ್ತೇವೆ. ಜಾತಕದಲ್ಲಿ ಯಾವ ಅಕ್ಷರ ಬರುತ್ತದೆಯೋ ಆ ಅಕ್ಷರದಿಂದಲೇ ಹೆಸರು ಇಡುತ್ತೇವೆ. ಈ ವೇಳೆ ಹೆಸರಿನ ಕೊನೆಯ ಅಕ್ಷರದ ಬಗ್ಗೆ ಗಮನ ಹರಿಸುವುದಿಲ್ಲ. ಇಂಗ್ಲಿಷ್ ವರ್ಣಮಾಲೆಯ ಯಾವ ಅಕ್ಷರದಿಂದ ನಿಮ್ಮ ಹೆಸರು ಕೊನೆಗೊಳ್ಳುತ್ತದೆಯೋ ಅದುವೇ ನಿಮ್ಮ ಬಗ್ಗೆ ಹೇಳುತ್ತವೆಯಂತೆ. ಹೆಸರಿನ ಕೊನೆಯ ಅಕ್ಷರದಿಂದ ವ್ಯಕ್ತಿಯ ವ್ಯಕ್ತಿತ್ವ, ಇಷ್ಟಗಳು ಹಾಗೂ ಹವ್ಯಾಸ ಸೇರಿದಂತೆ ಇನ್ನಿತ್ತರ ಕುತೂಹಲಕಾರಿ ಅಂಶಗಳನ್ನು ತಿಳಿಯಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.
- Sainandha P
- Updated on: Mar 18, 2025
- 12:32 pm
ರಸಭರಿತ ತಾಜಾ ಕಲ್ಲಂಗಡಿ ಹಣ್ಣು ಖರೀದಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಬೇಸಿಗೆ ಆರಂಭವಾಗುತ್ತಿದ್ದಂತೆ ಮಾರುಕಟ್ಟೆ ತುಂಬೆಲ್ಲಾ ಕಲ್ಲಂಗಡಿ ಹಣ್ಣುಗಳದ್ದೇ ಕಾರುಬಾರು ಶುರುವಾಗುತ್ತದೆ. ಕೆಂಪು ಮತ್ತು ರಸಭರಿತ ಕಲ್ಲಂಗಡಿ ಸಿಕ್ಕರೆ ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ ಹೆಚ್ಚು. ನೀರಿನಾಂಶ ಹೇರಳವಾಗಿರುವ ಈ ಕಲ್ಲಂಗಡಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು. ಇದರ ನಿಯಮಿತ ಸೇವನೆಯಿಂದ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಇಷ್ಟೆಲ್ಲಾ ಆರೋಗ್ಯ ಲಾಭವಿರುವ ಕಲ್ಲಂಗಡಿ ಹಣ್ಣು ಅಗ್ಗದ ಬೆಲೆಗೆ ಸಿಗುತ್ತದೆ ಎಂದಾದರೆ ಖರೀದಿ ಮಾಡಿ ತರುವವರೇ ಹೆಚ್ಚು. ಆದರೆ ರಸಭರಿತ ಹಾಗೂ ತಾಜಾ ಕಲ್ಲಂಗಡಿ ಖರೀದಿಸುವುದು ಹೇಗೆ? ಹಣ್ಣನ್ನು ಖರೀದಿಸುವಾಗ ಈ ಕೆಲವು ಟಿಪ್ಸ್ ಪಾಲಿಸುವುದು.
- Sainandha P
- Updated on: Mar 17, 2025
- 5:45 pm
Hair Care: ಕೂದಲಿನ ಆರೈಕೆಗೆ ಪರಿಣಾಮಕಾರಿ ಅಲೋವೆರಾ ಜೆಲ್; ಅತಿಯಾಗಿ ಬಳಸಿದ್ರೆ ಅಡ್ಡಪರಿಣಾಮಗಳೇ ಹೆಚ್ಚು
ಇಂದಿನ ಕಳಪೆ ಮಟ್ಟದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದಾಗಿ ತಲೆಯಲ್ಲಿ ಹೊಟ್ಟು, ಕೂದಲು ಉದುರುವಿಕೆ, ಕೂದಲು ಬೆಳ್ಳಗಾಗುವುದು, ಬೋಳು ತಲೆ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮನೆಯಂಗಳದಲ್ಲಿರುವ ಅಲೋವೆರಾ ಸಸ್ಯದ ಪಾತ್ರ ದೊಡ್ಡದು. ಹೆಚ್ಚಿನವರು ಕೂದಲಿನ ಆರೈಕೆಯಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಲೋಳೆಸರವನ್ನು ಹೆಚ್ಚಾಗಿ ಬಳಸುತ್ತಾರೆ. ಕೂದಲನ್ನು ಆರೋಗ್ಯವಾಗಿಡುವಲ್ಲಿ ಅಲೋವೆರಾಕ್ಕಿಂತ ಮಿಗಿಲಾದ ಪರಿಹಾರವಿಲ್ಲ. ಆದರೆ ಇದರ ಅತಿಯಾದ ಬಳಕೆಯೂ ಕೂದಲಿನ ಮೇಲೆ ವ್ಯತಿರಿಕ್ತವಾದ ಪರಿಣಾಮಗಳನ್ನು ಬಿರುತ್ತದೆ ಆ ಕುರಿತಾದ ಮಾಹಿತಿ ಇಲ್ಲಿದೆ.
- Sainandha P
- Updated on: Mar 17, 2025
- 3:41 pm
ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದರೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ ಎಂದರ್ಥ
ಮಕ್ಕಳನ್ನು ಬೆಳೆಸುವುದು ಕಷ್ಟದ ಕೆಲಸ. ಈಗಿನ ಮಕ್ಕಳಿಗೆ ಪೋಷಕರು ಹಾಗೂ ಶಿಕ್ಷಕರು ಬೈಯುವಂತಿಲ್ಲ. ಮೊಬೈಲ್ ಕೊಡಲಿಲ್ಲವೆಂದು, ಶಿಕ್ಷಕರು ಬೈದರೆಂದು, ಗೆಳೆಯ ದೂರಾದನೆಂದು ಹೀಗೆ ಸಣ್ಣ ಪುಟ್ಟ ವಿಷಯಗಳಿಗೆ ಆತ್ಮಹತ್ಯಾಯಂತಹ ಆಲೋಚನೆಗಳನ್ನು ಮಾಡುತ್ತಾರೆ. ಸಣ್ಣ ಸಣ್ಣ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಕೊನೆಯ ಪರಿಹಾರ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಒಂದು ವೇಳೆ ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಈ ಬಗ್ಗೆ ಪೋಷಕರು ಜಾಗೃತರಾಗುವುದು ಮುಖ್ಯ. ಕೆಟ್ಟ ಅಲೋಚನೆಗಳು ಕಂಡು ಬಂದರೆ ಆ ತಕ್ಷಣವೇ ಸೂಕ್ತ ಮನೋವೈದ್ಯರನ್ನು ಭೇಟಿ ನೀಡುವುದು ಮುಖ್ಯ, ಈ ಕುರಿತಾದ ಮಾಹಿತಿ ಇಲ್ಲಿದೆ.
- Sainandha P
- Updated on: Mar 17, 2025
- 12:52 pm
ನೀವು ಚಿಕನ್ ಟಿಕ್ಕಾ ಮಸಾಲಾ ಕೇಳಿ ಇರ್ತೀರಾ, ಇದು ಚಿಕನ್ ಟಿಕ್ಕಾ ಮಸಾಲಾ ಕೇಕ್ : ಅಮೇರಿಕಾದ ಖ್ಯಾತ ಬಾಣಸಿಗ ಹೊಸ ಪ್ರಯೋಗ
ಇತ್ತೀಚೆಗಿನ ದಿನಗಳಲ್ಲಿ ಈ ವಿಯರ್ಡ್ ಫುಡ್ ಕಾಂಬಿನೇಷ್ ಗಳ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದೇ ರೀತಿ ಅಮೆರಿಕದ ಖ್ಯಾತ ಬಾಣಸಿಗ ಜೋಶ್ ಎಲ್ಕಿನ್ ಆಹಾರದಲ್ಲಿ ವಿಶೇಷ ಪ್ರಯೋಗ ಮಾಡಿದ್ದು, ಚಿಕನ್ ಟಿಕ್ಕಾ ಮಸಾಲಾವನ್ನು ಕೇಕ್ ರೂಪಕ್ಕೆ ಬದಲಾಯಿಸಿದ್ದಾರೆ. ಈ ಚಿಕನ್ ಟಿಕ್ಕಾ ಮಸಾಲಾ ಕೇಕ್ ತಯಾರಿಸುವ ವಿಧಾನವು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
- Sainandha P
- Updated on: Mar 17, 2025
- 12:18 pm