ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ
Video: ಬೆಂಗಳೂರಿನಲ್ಲಿ ತಡರಾತ್ರಿ ಯುವತಿಯ ನೆರವಿಗೆ ಬಂದ ಅಪರಿಚಿತರು
ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಅನ್ನೋದೇ ಇಲ್ಲ. ರಾತ್ರಿ ಬಿಡಿ ಹಗಲಿನಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟ. ಕೆಲವು ಘಟನೆಗಳನ್ನು ನೋಡುವಾಗ ಬೆಂಗಳೂರು ಹೆಣ್ಮಕ್ಳಗೆ ಎಷ್ಟು ಸೇಫ್ ಅನ್ನೋ ಪ್ರಶ್ನೆ ಮೂಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿದೆ ಈ ಘಟನೆ. ಒಬ್ಬಂಟಿ ಯುವತಿಗೆ ತಡರಾತ್ರಿ 3 ಗಂಟೆಗೆ ಅಪರಿಚಿತ ವ್ಯಕ್ತಿಗಳಿಬ್ಬರೂ ನೆರವಾಗಿದ್ದಾರೆ. ವಿಡಿಯೋ ಮಾಡಿ ನೆರವಾದ ವ್ಯಕ್ತಿಗಳನ್ನು ನೆನಪಿಸಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 6, 2026
- 5:28 pm
Video: ಚಿಂತೆಯಿಲ್ಲದ ಬಾಲ್ಯ; ಅಡುಗೆಯಾಟ ಆಡಿ ಸಂಭ್ರಮಿಸಿದ ಪುಟಾಣಿಗಳು
ಈಗಿನ ಕಾಲದ ಮಕ್ಕಳಿಗೆ ಅಡುಗೆ ಮನೆಯಾಟ, ಮಣ್ಣಲ್ಲಿ ಆಟ ಆಡುವುದೆಂದರೆ ತಿಳಿಯುವುದೇ ಇಲ್ಲ. ಅವರದ್ದೇನಿದ್ದರೂ ಮೊಬೈಲ್ಯೇ ಪ್ರಪಂಚ. ಆದರೆ ಇದೀಗ ಬಾಲ್ಯವನ್ನು ನೆನಪಿಸುವ ವಿಡಿಯೋವೊಂದು ವೈರಲ್ ಆಗಿದೆ. ಪುಟಾಣಿಗಳೆಲ್ಲಾ ಸೇರಿ ಅಡುಗೆ ಮನೆಯಾಟ ಆಡುವುದಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ, ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 6, 2026
- 11:04 am
Video: 30 ದಿನಗಳ ಈ ಪ್ಲ್ಯಾನ್ ಅನುಸರಿಸಿದ್ರೆ ಬೆಂಗಳೂರಿನಲ್ಲಿ ಬದುಕೋದು ಸುಲಭ ಎಂದ ಮಹಿಳೆ
ಬೆಂಗಳೂರು ಜೀವನ ಅಷ್ಟು ಸುಲಭವಲ್ಲ. ಹೊಸಬರು ಇಲ್ಲಿಗೆ ಬಂದರೆ ಈ ನಗರಕ್ಕೆ ಹೊಂದಿಕೊಳ್ಳೋದು ಕಷ್ಟವಾಗುತ್ತದೆ. ಆದರೆ ಇದೀಗ ಬೆಂಗಳೂರಿನಲ್ಲಿ ವಾಸಿಸುವ ಬಂಗಾಳಿ ಮಹಿಳೆಯೊಬ್ಬರು ನಗರಕ್ಕೆ ಹೊಸದಾಗಿ ಬಂದವರಿಗೆ 30 ದಿನಗಳಲ್ಲಿ ಹೇಗೆ ಹೊಂದಿಕೊಳ್ಳೋದು ಎಂದು ವಿವರಿಸಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 5, 2026
- 7:24 pm
Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಕಂಡು ಹಿಡಿಯಬಲ್ಲಿರಾ
ಮೆದುಳಿಗೆ ಕಸರತ್ತು ನೀಡುವ ಆಟಗಳನ್ನು ಆಡುವುದರಲ್ಲಿರುವ ಮಜಾನೇ ಬೇರೆ. ಹೀಗಾಗಿ ಹೆಚ್ಚಿನವರು ಬಿಡುವು ಸಿಕ್ಕಾಗಲೆಲ್ಲಾ ಇಂತಹ ಒಗಟಿನ ಚಿತ್ರಗಳನ್ನು ಬಿಡಿಸುತ್ತಾರೆ. ಇದೀಗ ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಬೆಕ್ಕನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಟ್ರಿಕ್ಕಿ ಒಗಟು ಬಿಡಿಸಿ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಿಕೊಳ್ಳಿ ನೋಡೋಣ.
- Sainandha P
- Updated on: Apr 5, 2026
- 3:22 pm
National Maritime day 2026: ಏಪ್ರಿಲ್ 5ರಂದೇ ರಾಷ್ಟ್ರೀಯ ಕಡಲ ದಿನವನ್ನು ಆಚರಿಸುವುದು ಏಕೆ?
ದೇಶದ ಆರ್ಥಿಕ ಅಭಿವೃದ್ಧಿಗೆ ಸಮುದ್ರಯಾನವೇ ಮೂಲಧಾರ. ಹೀಗಾಗಿ ಬಹುತೇಕ ದೇಶಗಳು ವಾಣಿಜ್ಯ ಚಟುವಟಿಕೆಗಳಿಗೆ ಈ ಸಮುದ್ರಯಾನವನ್ನು ಅವಲಂಬಿಸಿದೆ. ಅದಲ್ಲದೇ, ಈ ಭಾರತೀಯ ಆರ್ಥಿಕತೆಯ ಮೂಲ ವರಮಾನವೇ ಈ ಬಂದರುಗಳು. ಹೀಗಾಗಿ ಸಮುದ್ರಯಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಎಪ್ರಿಲ್ 5ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.
- Sainandha P
- Updated on: Apr 5, 2026
- 10:33 am
Video: ತನ್ನ ಕಂದಮ್ಮನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕನಿಗೆ ಧನ್ಯವಾದ ತಿಳಿಸಿದ ಯುವಕ
ಪ್ರಾಣಿಗಳೇ ಗುಣದಲಿ ಮೇಲು ಎನ್ನುವ ಮಾತಿದೆ. ಇದಕ್ಕೆ ನೈಜ ಉದಾಹರಣೆ ಎನ್ನುವಂತಿದೆ ಈ ದೃಶ್ಯ. ತಾಯಾನೆಯೊಂದು ತನ್ನ ಕಂದಮ್ಮನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕನಿಗೆ ಧನ್ಯವಾದ ತಿಳಿಸಿದೆ. ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದ್ದು, ಆನೆಯ ಒಳ್ಳೆಯ ಗುಣವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 3, 2026
- 5:17 pm
Video: ಅಪ್ಪನಿಗೆ ತನ್ನ ತಾಯಿ ಮೆಲ್ಲನೆ ಹೊಡೆಯುತ್ತಿದ್ದಂತೆ ಜೋರಾಗಿ ಗದರಿದ ಕಂದಮ್ಮ
ಪುಟಾಣಿಗಳೇ ಹಾಗೆ, ತಾವು ಇಷ್ಟ ಪಡುವವರು ಬೇರೆಯವರ ಮೇಲೆ ಹೆಚ್ಚು ಪ್ರೀತಿ ತೋರಿದರೆ ಹೊಟ್ಟೆ ಕಿಚ್ಚು ಪಟ್ಟುಕೊಳ್ಳುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಿಗೂ ತನ್ನ ತಂದೆಯ ಮೇಲೆ ಯಾರು ಗದರುವಂತಿಲ್ಲ. ಒಂದು ವೇಳೆ ಗದರಿದರೆ ಮುಗಿದೇ ಹೋಯ್ತು, ತನ್ನ ಕೋಪವನ್ನೆಲ್ಲಾ ಎದುರಿಗಿರುವ ವ್ಯಕ್ತಿಯ ಮೇಲೆ ತೋರಿಸಿ ಬಿಡುತ್ತಾರೆ. ಇದೀಗ ತಂದೆಯ ಮಡಿಲಿನಲ್ಲಿ ಮಲಗಿರುವ ಕಂದಮ್ಮ ತನ್ನ ತಾಯಿಯ ಮೇಲೆ ಗದರಿದೆ. ಈ ಪುಟಾಣಿಯ ಬೈಗುಳದ ಹಿಂದಿನ ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 3, 2026
- 11:33 am
Optical Illusion: ಬುದ್ಧಿವಂತರಿಗೊಂದು ಸವಾಲ್; ಜಸ್ಟ್ 9 ಸೆಕೆಂಡುಗಳಲ್ಲಿ ಈ ಗಾರ್ಡನ್ನಲ್ಲಿರುವ ಚಿಟ್ಟೆಯನ್ನು ಗುರುತಿಸಬಲ್ಲಿರಾ
ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಟ್ರೆಂಡಿಂಗ್ ಆಗುತ್ತಿದೆ. ಹೀಗಾಗಿ ಹೆಚ್ಚಿನವರು ಈ ಚಿತ್ರಗಳತ್ತ ಸಹಜವಾಗಿ ಗಮನ ಹರಿಸುತ್ತಾರೆ. ಆದರೆ ಈ ಟ್ರಿಕ್ಕಿ ಚಿತ್ರಗಳು ಬುದ್ಧಿವಂತಿಕೆ ಹಾಗೂ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೀಗ ಇಂತಹದೊಂದು ಚಿತ್ರ ವೈರಲ್ ಆಗಿದ್ದು ಉದ್ಯಾನವನದಲ್ಲಿರುವ ಬಣ್ಣದ ಚಿಟ್ಟೆಯನ್ನು ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿನಾ.
- Sainandha P
- Updated on: Apr 2, 2026
- 6:30 pm
Video: ಕೈಗಳಿಲ್ಲದಿದ್ದರೂ ಮಗನಿಗೆ ಬಾಯಿಂದಲೇ ತುತ್ತು ನೀಡಿದ ತಾಯಿ, ವೈರಲ್ ಆಯ್ತು ದೃಶ್ಯ
ತಾಯಿ ಅಂದರೆ ತ್ಯಾಗ, ಪ್ರೀತಿಗೆ ಇನ್ನೊಂದು ಹೆಸರು. ಮಕ್ಕಳ ಆರೈಕೆ ಹಾಗೂ ಬೆಳವಣಿಗೆಯಲ್ಲಿ ತಾಯಿ ಪ್ರಮುಖ ಪಾತ್ರವಹಿಸುತ್ತಾಳೆ. ತನ್ನ ನೋವು ಕಷ್ಟವನ್ನು ಮಕ್ಕಳ ಮುಂದೆ ತೋರಿಸಿಕೊಳ್ಳದೇ ಮಕ್ಕಳಿಗಾಗಿ ತನ್ನ ಜೀವನವನ್ನು ಮೀಸಲಿಡುತ್ತಾಳೆ. ಈ ದೃಶ್ಯ ನೋಡಿದ್ರೆ ಈ ಮಾತು ನಿಜವೆನಿಸುತ್ತದೆ. ತಾಯಿಯೊಬ್ಬಳು ಕೈಗಳಿಲ್ಲದಿದ್ದರೂ ದೈಹಿಕ ಕೊರತೆಯನ್ನು ಮೆಟ್ಟಿ ನಿಂತು ತನ್ನ ಮಗನಿಗೆ ಬಾಯಿಂದಲೇ ತುತ್ತು ನೀಡಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 2, 2026
- 4:18 pm
Video: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ
ಪುಟಾಣಿಗಳು ಏನು ಮಾಡಿದ್ರೂ ಮುದ್ದಾಗಿ ಕಾಣಿಸ್ತಾರೆ. ಕೋಪಿಸಿಕೊಂಡರಂತೂ ಇನ್ನು ಮುದ್ದಾಗಿ ಕಾಣುವ ಈ ಪುಟ್ಟ ಮಕ್ಕಳನ್ನು ಅಪ್ಪಿ ಮುದ್ದಾಡಬೇಕೆನಿಸುತ್ತದೆ. ಈ ಪುಟಾಣಿಗಳಕೋಪ, ಮುನಿಸು ಹೀಗೆ ಆಟ ತುಂಟಾಟದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಪುಟಾಣಿಯೊಂದು ನಡುರಸ್ತೆಯಲ್ಲಿ ತನ್ನ ತಂದೆಯ ಮೇಲೆ ಕೋಪಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 2, 2026
- 11:16 am
Viral: ಎಂಟು ವರ್ಷಗಳ ಕಾಲ ಕೆಲಸ ಮಾಡಿದ ಬಾಸ್ನ್ನು ವಜಾಗೊಳಿಸಿದ ಕಂಪನಿ ನಿರ್ಧಾರದಿಂದ ಉದ್ಯೋಗಿ ಶಾಕ್
ಈಗಿನ ಕಾಲದಲ್ಲಿ ಕೆಲಸಗಿಟ್ಟಿಸಿಕೊಳ್ಳುವುದು ಒಂದು ರೀತಿಯ ಕಷ್ಟ ಅದನ್ನು ಉಳಿಸಿಕೊಳ್ಳುವುದು ಮತ್ತೊಂದು ರೀತಿಯ ಸವಾಲು. ಹೀಗಾಗಿ ಯಾವುದೇ ಉದ್ಯೋಗಕ್ಕೂ ಗ್ಯಾರಂಟಿ ಇಲ್ಲ. ಏಕಾಏಕಿ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರಕ್ಕೆ ಬರುತ್ತೆ. ಇಲ್ಲೊಬ್ಬರು ಉದ್ಯೋಗಿ ತನ್ನ ಬಾಸ್ನ್ನು ಅಂತಹ ಪರಿಸ್ಥಿತಿಯಲ್ಲಿ ನೋಡಿದ್ದಾರೆ. ಎಂಟು ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ್ದ ಬಾಸ್ನ್ನು ಯಾವುದೇ ಸೂಚನೆ ನೀಡದೇ ವಜಾಗೊಳಿಸಿದ್ದಾರೆ. ತನ್ನ ಕಣ್ಣಾರೆ ನಡೆದ ಘಟನೆಯನ್ನು ಉದ್ಯೋಗಿ ಹಂಚಿಕೊಂಡಿದ್ದು, ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗಿದೆ.
- Sainandha P
- Updated on: Apr 1, 2026
- 5:44 pm
Video: ಎಷ್ಟು ಚಂದ ಈ ಬಾಂಧವ್ಯ; ಅಪ್ಪನಿಗೆ ತನ್ನ ಪುಟ್ಟ ಕೈಗಳಿಂದ ಕೈ ತುತ್ತು ನೀಡಿದ ಪುಟಾಣಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಭಾವನಾತ್ಮಕ ವಿಡಿಯೋಗಳು ನೆಟ್ಟಿಗರ ಹೃದಯ ಗೆಲ್ಲುವುದು ಸರ್ವೇ ಸಾಮಾನ್ಯ. ಇಲ್ಲೊಬ್ಬಳು ಪುಟಾಣಿ ತನ್ನ ತಂದೆಯ ಪಾಲಿಗೆ ತಾಯಿಯಾಗಿದ್ದಾಳೆ. ಕೆಲಸದಲ್ಲಿ ಬ್ಯುಸಿಯಾಗಿದ್ದ ತಂದೆಗೆ ಕೈ ತುತ್ತು ನೀಡಿ ತಾಯಿ ಪ್ರೀತಿ ನೀಡಿದ್ದಾಳೆ. ಈ ಮಧುರ ಬಾಂಧವ್ಯ ಸಾರುವ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 1, 2026
- 11:19 am