ಕಲ್ಲುಗಳ ಕೋಟೆ ಮಧ್ಯೆ ನಿಂತನೀರು: ಯಾಮಾರಿ ನೀರಿಗಿಳಿದ್ರೆ ಪ್ರಾಣಕ್ಕೇ ಕುತ್ತು!

ಕೋಲಾರ: ಅದು ಸುಂದರ ಬೆಟ್ಟಗಳ ನಡುವೆ ಇರುವ ಸುಂದರ ನೀರಿನ ಕೆರೆ. ಸ್ವಿಮ್ಮಿಂಗ್ ಮಾಡಬಯಸುವ ಯುವಕರನ್ನು, ಪ್ರತ್ಯೇಕವಾಗಿ ಕಾಲ ಕಳೆಯುವ ಪ್ರೇಮಿಗಳನ್ನು ಆಕರ್ಷಿಸಬಲ್ಲ ಸ್ಥಳ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅದು ನಿಗೂಢವಾಗಿ ಪ್ರಾಣ ತೆಗೆಯುವ ಸ್ಪಾಟ್ ಕೂಡ ಹೌದು. ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬೆಟ್ಟದಲ್ಲಿರುವ ಕಲ್ಲುಗಳನ್ನು ರಸ್ತೆಕಾಮಗಾರಿಗಾಗಿ ಬಳಸಲಾಗಿದೆ. ಬಂಡೆ ಒಡೆದಿದ್ರಿಂದ ಆ ಜಾಗದಲ್ಲಿ ಬೃಹದಾಕಾರವಾದ ಕಂದಕ ಸೃಷ್ಟಿಯಾಗಿದೆ. ಅಲ್ಲಿ ನೀರಿನ ಸೆಲೆಯೊಡೆದು ಕೆರೆ ನಿರ್ಮಾಣವಾಗಿದೆ. ಇಲ್ಲಿರುವ ನೀರನ್ನ ಯಾರೇ ನೋಡಿದ್ರು ಒಂದು ಸಾರಿ ಆ ನೀರಿನಲ್ಲಿ […]

ಕಲ್ಲುಗಳ ಕೋಟೆ ಮಧ್ಯೆ ನಿಂತನೀರು: ಯಾಮಾರಿ ನೀರಿಗಿಳಿದ್ರೆ ಪ್ರಾಣಕ್ಕೇ ಕುತ್ತು!

Updated on: Feb 03, 2020 | 5:30 PM

ಕೋಲಾರ: ಅದು ಸುಂದರ ಬೆಟ್ಟಗಳ ನಡುವೆ ಇರುವ ಸುಂದರ ನೀರಿನ ಕೆರೆ. ಸ್ವಿಮ್ಮಿಂಗ್ ಮಾಡಬಯಸುವ ಯುವಕರನ್ನು, ಪ್ರತ್ಯೇಕವಾಗಿ ಕಾಲ ಕಳೆಯುವ ಪ್ರೇಮಿಗಳನ್ನು ಆಕರ್ಷಿಸಬಲ್ಲ ಸ್ಥಳ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅದು ನಿಗೂಢವಾಗಿ ಪ್ರಾಣ ತೆಗೆಯುವ ಸ್ಪಾಟ್ ಕೂಡ ಹೌದು.

ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬೆಟ್ಟದಲ್ಲಿರುವ ಕಲ್ಲುಗಳನ್ನು ರಸ್ತೆಕಾಮಗಾರಿಗಾಗಿ ಬಳಸಲಾಗಿದೆ. ಬಂಡೆ ಒಡೆದಿದ್ರಿಂದ ಆ ಜಾಗದಲ್ಲಿ ಬೃಹದಾಕಾರವಾದ ಕಂದಕ ಸೃಷ್ಟಿಯಾಗಿದೆ. ಅಲ್ಲಿ ನೀರಿನ ಸೆಲೆಯೊಡೆದು ಕೆರೆ ನಿರ್ಮಾಣವಾಗಿದೆ. ಇಲ್ಲಿರುವ ನೀರನ್ನ ಯಾರೇ ನೋಡಿದ್ರು ಒಂದು ಸಾರಿ ಆ ನೀರಿನಲ್ಲಿ ಇಳಿದು ಈಜಾಡಬೇಕು, ಆಟವಾಡಬೇಕು ಅನ್ಸುತ್ತೆ.

ಮೋಜು ಮಸ್ತಿ ಹೆಸರಲ್ಲೇ ಪ್ರಾಣ ಕಳೆದುಕೊಳ್ಳುತ್ತಿರುವ ಯುವಕರು:
ಆದ್ರೆ ಈ ಸುಂದರ ಪ್ರದೇಶ ಸಾವಿನ ಕೂಪ ಅನ್ನೋದು ಅಷ್ಟೇ ಸತ್ಯ. ಇಲ್ಲಿ ಈಜಾಡಲು ಬಂದ ಹತ್ತಾರು ಯುವಕರುಗಳು ನಿಗೂಢವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಪ್ರದೇಶವನ್ನು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನಿರ್ಭಂದಿತ ಪ್ರದೇಶವಾಗಿ ಮಾಡಿದೆ. ಹೀಗಿದ್ರು ಕದ್ದು ಮುಚ್ಚಿ ಇಲ್ಲಿಗೆ ಬರುವ ಯುವಕ ಯುವತಿಯರು ಮೋಜು ಮಸ್ತಿ ಹೆಸರಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಇನ್ನು ವೀಕೆಂಡ್ ಬಂದ್ರೆ ಸಾಕು ಇಲ್ಲಿಗೆ ಯುವಕ, ಯುವತಿಯರು ಬಂದು ಸೇರ್ತಾರೆ. ಪೊಲೀಸ್ ಇಲಾಖೆಯ ನಿರ್ಭಂದವನ್ನು ಲೆಕ್ಕಿಸದೆ ಎಂಜಾಯ್ ಮಾಡಿಕೊಂಡು ಹೋಗ್ತಾರೆ. ಅಕ್ಕಪಕ್ಕದ ಜಮೀನುಗಳ ಮಾಲೀಕರು ಈ ಸ್ಥಳಕ್ಕೆ ಹೋಗದಂತೆ ತಿಳಿಸಿದ್ರು, ಅವರ ಮಾತಿಗೆ ಬೆಲೆ ಕೊಡದೆ ಇಲ್ಲಿ ಬಂದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಈ ನೀರಿನ ತಳದಲ್ಲಿ ಚೂಪಾದ ಕಲ್ಲು ಇದ್ದು, ಮೇಲಿಂದ ಡೈಹೊಡೆದಾಗ ಚುಚ್ಚಿ ಯುವಕರು ಸಾವನ್ನಪ್ಪುತ್ತಿದ್ದಾರೆ ಅನ್ನೋದು ಸ್ಥಳೀಯರ ಮಾತು.

ಒಟ್ಟಾರೆ ಸುಂದರ ಪ್ರಕೃತಿಯ ಮಧ್ಯೆ ಇರುವ ಸುಂದರ ನೀರಿನ ಹಳ್ಳ, ಎಷ್ಟು ಸುಂದರವೋ ಅಷ್ಟೇ ಮಾರಕ. ಇಲ್ಲಿಯ ತನ ಸುಮಾರು 20 ಕ್ಕೂ ಹೆಚ್ಚು ಜನ ಇಲ್ಲಿ ಪ್ರಾಣ ಕಳೆದುಕೊಂಡಿದ್ದು, ಇನ್ನಾದ್ರು ಪೊಲೀಸ್​ ಇಲಾಖೆ ಮತ್ತು ಜಿಲ್ಲಾಡಳಿತ ಈ ಸರಣಿ ಸಾವಿಗೆ ಬ್ರೇಕ್​ ಹಾಕಬೇಕಿದೆ.



Published On - 5:26 pm, Mon, 3 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us