ಗಲ್ಲಿ ಗಲ್ಲಿಯಲ್ಲೂ ಬಣ್ಣಗಳ ಮೆರುಗು: ವೆಂಕಟರಮಣ ರಥೋತ್ಸವದಲ್ಲಿ ಓಕುಳಿಯಾಟ!

ಮಂಗಳೂರು: ಅಲ್ಲಿ ಟೆನ್ಷನ್​ಗೆ ಜಾಗವಿಲ್ಲ. ಮಸ್ತಿಗಂತೂ ಬರವೇ ಇಲ್ಲ. ಜಾತ್ರೆಯಂತೆ ಜನ ಸೇರ್ತಾರೆ. ನಾವೆಲ್ಲಾ ಒಂದೇ ಅನ್ನೋ ಸಂದೇಶ ಸಾರ್ತಾರೆ. ಬಣ್ಣದೋಕುಳಿ ಆಡಿ ಇಡೀ ದಿನ ಖುಷಿಯ ಅಲೆಯಲ್ಲಿ ತೇಲ್ತಾರೆ. ಆದ್ರೆ, ಏನ್ ಮಾಡೋದು ನಾವೆಲ್ಲಾ ಆ ಚಾನ್ಸ್ ಮಿಸ್ ಮಾಡ್ಕೊಂಡ್ವಿ. ಬಟ್ ಅಲ್ಲಿನ ಹಬ್ಬದಾಟ ನೋಡಿ ಖುಷಿ ಪಡಬಹುದು. ಕೈಯಲ್ಲಿ ಬಣ್ಣ.. ಎದುರಲ್ಲಿ ಫ್ರೆಂಡ್ಸ್.. ಎಂಜಾಯ್ ಮೂಡ್.. ಕಿವಿಗೆ ಅಪ್ಪಳಿಸೋ ಮಸ್ತ್ ಮ್ಯೂಸಿಕ್.. ಇಷ್ಟೆಲ್ಲಾ ಒಂದೇ ಕಡೆ ಇದ್ಮೇಲೆ ಇವ್ರೆಲ್ಲಾ ಸುಮ್ಮನೆ ಇರ್ತಾರಾ.. ಚಾನ್ಸೇ ಇಲ್ಲ.. […]

ಗಲ್ಲಿ ಗಲ್ಲಿಯಲ್ಲೂ ಬಣ್ಣಗಳ ಮೆರುಗು: ವೆಂಕಟರಮಣ ರಥೋತ್ಸವದಲ್ಲಿ ಓಕುಳಿಯಾಟ!

Updated on: Feb 02, 2020 | 9:51 PM

ಮಂಗಳೂರು: ಅಲ್ಲಿ ಟೆನ್ಷನ್​ಗೆ ಜಾಗವಿಲ್ಲ. ಮಸ್ತಿಗಂತೂ ಬರವೇ ಇಲ್ಲ. ಜಾತ್ರೆಯಂತೆ ಜನ ಸೇರ್ತಾರೆ. ನಾವೆಲ್ಲಾ ಒಂದೇ ಅನ್ನೋ ಸಂದೇಶ ಸಾರ್ತಾರೆ. ಬಣ್ಣದೋಕುಳಿ ಆಡಿ ಇಡೀ ದಿನ ಖುಷಿಯ ಅಲೆಯಲ್ಲಿ ತೇಲ್ತಾರೆ. ಆದ್ರೆ, ಏನ್ ಮಾಡೋದು ನಾವೆಲ್ಲಾ ಆ ಚಾನ್ಸ್ ಮಿಸ್ ಮಾಡ್ಕೊಂಡ್ವಿ. ಬಟ್ ಅಲ್ಲಿನ ಹಬ್ಬದಾಟ ನೋಡಿ ಖುಷಿ ಪಡಬಹುದು.

ಕೈಯಲ್ಲಿ ಬಣ್ಣ.. ಎದುರಲ್ಲಿ ಫ್ರೆಂಡ್ಸ್.. ಎಂಜಾಯ್ ಮೂಡ್.. ಕಿವಿಗೆ ಅಪ್ಪಳಿಸೋ ಮಸ್ತ್ ಮ್ಯೂಸಿಕ್.. ಇಷ್ಟೆಲ್ಲಾ ಒಂದೇ ಕಡೆ ಇದ್ಮೇಲೆ ಇವ್ರೆಲ್ಲಾ ಸುಮ್ಮನೆ ಇರ್ತಾರಾ.. ಚಾನ್ಸೇ ಇಲ್ಲ.. ನಮ್ ಏರಿಯಾದಲ್ಲಿ ನಾವೇ ಕಿಂಗು.. ದಿನವೂ ರಂಗು ರಂಗು ಅಂತಾ ಮಸ್ತಿ ಮಾಡೋದೇ.. ಕುಣಿದು ಕುಪ್ಪಳಿಸೋದೇ.

ರಥಸಪ್ತಮಿಯ ಪ್ರಯುಕ್ತ ಓಕುಳಿಯಾಟ:
ಅಂದ್ಹಾಗೆ, ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ಮಂಗಳೂರಿನಲ್ಲಿ ವೆಂಕಟರಮಣ ದೇವರ ರಥೋತ್ಸವ ನಡೀತು. ಅದ್ರಲ್ಲೂ ಇವತ್ತಂತೂ ಕಲರ್​ಫುಲ್ ವಾತಾವರಣವೇ ಸೃಷ್ಟಿಯಾಗಿತ್ತು. ಸಾವ್ರ ಸಾವ್ರ ಜನ ಒಂದೇ ಕಡೆ ಸೇರಿ ಓಕುಳಿ ಆಡಿ ಖುಷಿಪಟ್ರು. ಯುವ ಸಮೂಹವಂತೂ ಸಖತ್ ಆಗಿ ಕುಣಿದು ಕುಪ್ಪಳಿಸಿದ್ರು.

ಇನ್ನು, ರಥೋತ್ಸವ ನಡೆದ ಬಳಿಕ ದೇವರಿಗೆ ವಿಶೇಷ ಮಜ್ಜನ ಕಾರ್ಯ ನಡೆದು ಬಳಿಕ ದೇವರನ್ನ ಗರ್ಭಗುಡಿಯಲ್ಲಿ ತಂದಿಡ್ತಾರೆ. ದೇವರ ಈ ಮಜ್ಜನವನ್ನೇ ಭಕ್ತರು ಬಣ್ಣದ ಹಬ್ಬವನ್ನಾಗಿ ಆಚರಿಸ್ತಾರೆ. ಅದ್ರಂತೆ ಇವತ್ತು ಜನ ಮುಂಜಾನೆಯಿಂದ್ಲೇ ಬಣ್ಣದ ಆಟದಲ್ಲಿ ಮುಳುಗಿ ಎಂಜಾಯ್ ಮಾಡಿದ್ರು. ವಿಶೇಷ ಅಂದ್ರೆ ಈ ಓಕುಳಿಯಲ್ಲಿ ಗುಲಾಬಿ ಬಣ್ಣ ಮಾತ್ರ ಬಳಸಬೇಕು ಅನ್ನೋ ನಿಯಮ ಇದೆ. ಹೀಗಾಗಿ ಜನ ಹೆಚ್ಚಾಗಿ ಗುಲಾಬಿ ಬಣ್ಣವನ್ನೇ ಓಕುಳಿಗೆ ಬಳಸಿದ್ರು. ಟೆನ್ಷನ್​ಗೆ ಗೋಲಿ ಹೊಡೆದು ಮಸ್ತಿ ಮಾಡಿದ್ರು.













sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us