ಮದುವೆ ಶಾಪಿಂಗ್​ ವೇಳೆ ಯುವತಿಯ ಮೇಲೆ ಭಗ್ನ ಪ್ರೇಮಿ ಹಲ್ಲೆ

ಶಾಪಿಂಗ್​ಗೆಂದು ಮನೆಯಿಂದ ಹೊರ ಬಂದಿದ್ದ ವೇಳೆ ಯುವತಿ ಮೇಲೆ ಭಗ್ನ ಪ್ರೇಮಿ ಹಲ್ಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಮದ್ದೂರು ಮೂಲದ ನಿತ್ಯಶ್ರೀ(27) ಹಲ್ಲೆಗೊಳಗಾದ ಯುವತಿ. ಮದುವೆಯಾಗುವಂತೆ ಯುವತಿ ಮನೆ ಮುಂದೆ ಬಂದು ಯುವಕ ಪೀಡಿಸುತ್ತಿದ್ದ. ಆದರೆ ಯುವಕನ ಜೊತೆ ಮದುವೆಗೆ ಯುವತಿ ನಿರಾಕರಿಸಿದ್ದರು. ನಂತರ ಯುವತಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಜೂನ್​ನಲ್ಲಿ ಮದುವೆಗೆ ದಿನಾಂಕ ಸಹ ನಿಗದಿಯಾಗಿತ್ತು. ಹಾಗಾಗಿ ಇಂದು ಬೆಳಗ್ಗೆ 11.30ರ ಸುಮಾರಿಗೆ ಶಾಪಿಂಗ್​ಗೆಂದು ಯುವತಿ ಮನೆಯಿಂದ ಹೊರ ಬಂದಿದ್ದರು. ಬಟ್ಟೆ […]

ಮದುವೆ ಶಾಪಿಂಗ್​ ವೇಳೆ ಯುವತಿಯ ಮೇಲೆ ಭಗ್ನ ಪ್ರೇಮಿ ಹಲ್ಲೆ
ಸಾಧು ಶ್ರೀನಾಥ್​ Edited By:

Updated on: May 27, 2020 | 2:49 PM

ಶಾಪಿಂಗ್​ಗೆಂದು ಮನೆಯಿಂದ ಹೊರ ಬಂದಿದ್ದ ವೇಳೆ ಯುವತಿ ಮೇಲೆ ಭಗ್ನ ಪ್ರೇಮಿ ಹಲ್ಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಮದ್ದೂರು ಮೂಲದ ನಿತ್ಯಶ್ರೀ(27) ಹಲ್ಲೆಗೊಳಗಾದ ಯುವತಿ.

ಮದುವೆಯಾಗುವಂತೆ ಯುವತಿ ಮನೆ ಮುಂದೆ ಬಂದು ಯುವಕ ಪೀಡಿಸುತ್ತಿದ್ದ. ಆದರೆ ಯುವಕನ ಜೊತೆ ಮದುವೆಗೆ ಯುವತಿ ನಿರಾಕರಿಸಿದ್ದರು. ನಂತರ ಯುವತಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಜೂನ್​ನಲ್ಲಿ ಮದುವೆಗೆ ದಿನಾಂಕ ಸಹ ನಿಗದಿಯಾಗಿತ್ತು. ಹಾಗಾಗಿ ಇಂದು ಬೆಳಗ್ಗೆ 11.30ರ ಸುಮಾರಿಗೆ ಶಾಪಿಂಗ್​ಗೆಂದು ಯುವತಿ ಮನೆಯಿಂದ ಹೊರ ಬಂದಿದ್ದರು. ಬಟ್ಟೆ ಶಾಪಿಂಗ್​ ಮಾಡಲು ಮನೆಯಿಂದ ಯುವತಿ ಹೊರ ಬಂದಿದ್ದರು.

ಈ ವೇಳೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿಶಾಲ್ ಮಾರ್ಟ್ ಬಳಿ ಯುವತಿ ಮೇಲೆ ಭಗ್ನ ಪ್ರೇಮಿ ಮಚ್ಚಿನಿಂದ ಅಟ್ಯಾಕ್ ಮಾಡಿ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾಗಿ ಗಂಭೀರವಾಗಿ ಯುವತಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಹಲ್ಲೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 2:47 pm, Wed, 27 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us