ರಾಜಾ ಅಮರೇಶ್ವರ ನಾಯಕ

ರಾಜಾ ಅಮರೇಶ್ವರ ನಾಯಕ
ರಾಯಚೂರು BJPBJP
Lost

ಕಾಂಗ್ರೆಸ್​ನ ಭದ್ರಕೋಟೆ ಎನಿಸಿದ್ದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೇಸರಿ ಕಮಲ ಅರಳಲು ಕಾರಣರಾದವರಲ್ಲಿ ರಾಜಾ ಅಮರೇಶ್ವರ ನಾಯಕ ಒಬ್ಬರು. 2019ರ ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್​ನಲ್ಲಿ ಅಚ್ಚರಿಯ ಗೆಲುವು ಸಾಧಿಸಿದವರು ಅವರು. 66 ವರ್ಷದ ರಾಜಾ ಅಮರೇಶ್ವರ ನಾಯಕ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಮೂಲತಃ ಕಾಂಗ್ರೆಸ್ಸಿಗರೇ ಆಗಿದ್ದಾರೆ. ಕಾನೂನು ಪದವಿ ಓದಿರುವ ಇವರು 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು. ಆ ಚೊಚ್ಚಲ ಅವಧಿಯಲ್ಲೇ ಅವರು ಸಚಿವ ಸ್ಥಾನ ಪಡೆದಿದ್ದರು. ಬಂಗಾರಪ್ಪ ಮತ್ತು ವೀರಪ್ಪ ಮೊಯಿಲ್ ಸಿಎಂ ಆಗಿದ್ದ ಅವಧಿಯಲ್ಲಿ ರಾಜ್ಯ ಖಾತೆ ನಿಭಾಯಿಸಿದ್ದರು. 1999ರ ಚುನಾವಣೆಯಲ್ಲಿ ಎರಡನೇ ಬಾರಿ ಕಾಂಗ್ರೆಸ್ ಟಿಕೆಟ್​ನಿಂದ ಗೆದ್ದು ಸಿಎಂ ಎಸ್​ಎಂ ಕೃಷ್ಣ ಅವಧಿಯಲ್ಲಿಯೂ ಸಂಪುಟ ದರ್ಜೆ ಸಚಿವ ಸ್ಥಾನ ಪಡೆದಿದ್ದರು. 2013ರಲ್ಲಿ ಕಾಂಗ್ರೆಸ್​ನಿಂದ ಜೆಡಿಎಸ್ ಸೇರಿದರು. ಬಳಿಕ 2014ರಲ್ಲಿ ಬಿಜೆಪಿ ಪಕ್ಷಕ್ಕೆ ವಲಸೆ ಹೋದರು. 2019ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಸಂಸದ ಬಿ.ವಿ. ನಾಯಕ ವಿರುದ್ಧ ಭರ್ಜರಿ ಗೆಲುವು ಸಾಧಿಸಿ, ಆ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಕಮಲ ಅರಳುವಂತೆ ಮಾಡಿದರು.

ಹೆಸರುRaja Amareshwara Naik ವಯಸ್ಸು66 Years ಲಿಂಗ Male ಲೋಕಸಭಾ ಕ್ಷೇತ್ರರಾಯಚೂರು
ಅಪರಾಧ ಹಿನ್ನೆಲೆNo ಸ್ಥಿರ ಸಂಪತ್ತು ₹ 8.9Crore ಒಟ್ಟು ಆಸ್ತಿ ಮೌಲ್ಯ₹ 0 ಶೈಕ್ಷಣಿಕ ಅರ್ಹತೆGraduate Professional
All the information available on this page has been provided by Association for Democratic Reforms (ADR) | MyNeta and sourced from election affidavits available in the public domain of Election Commission of India ADRMy Neta
ವಿಡಿಯೋ