ಎಸ್ ಮುನಿಸ್ವಾಮಿ
ಕೋಲಾರ
ಬಿಜೆಪಿ
ಬಿಜೆಪಿ
Lost
ಎಸ್ ಮುನಿಸ್ವಾಮಿ (ಸಾದಪ್ಪ ಮುನಿಸ್ವಾಮಿ) ಭಾರತೀಯ ಜನತಾ ಪಕ್ಷದ ಕೋಲಾರ ಕ್ಷೇತ್ರದ ಸಂಸದ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಮತ್ತು ಏಳು ಬಾರಿ ಸಂದರಾಗಿದ್ದ ಕೆಹೆಚ್ ಮುನಿಯಪ್ಪ ಅವರನ್ನು ಸೋಲಿಸುವ ಮೂಲಕ ಇಡೀ ರಾಜ್ಯವೇ ಕೋಲಾರದತ್ತ ತಿರುಗಿನೋಡುವಂತೆ ಮಾಡಿದ್ದರು. ಕಾಡುಗೋಡಿ ಪಂಚಾಯತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದ ಮುನಿಸ್ವಾಮಿ ನಂತರ 2015 ರಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು ಕಾಡುಗೋಡಿ ವಾರ್ಡ್ನಿಂದ ಕಾರ್ಪೊರೇಟರ್ ಆಗಿದ್ದರು. 2018 ರಲ್ಲಿ ಕಾಂಗ್ರೆಸ್ನ ಸಂಪತ್ ರಾಜು ವಿರುದ್ಧ ಮೇಯರ್ ಚುನಾವಣೆಯಲ್ಲಿ ಸೋತಿದ್ದರು. ಆ ಬಳಿಕ 2019ರಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾದರು.