ದ್ವಾರಕೀಶ್ ಕುಟುಂಬ ನನಗೂ 2 ಕೋಟಿ ಹಣ ನೀಡಬೇಕು ಎಂದ ಕೆ ಮಂಜು

ಬೆಂಗಳೂರು: ದ್ವಾರಕೀಶ್ ಕುಟುಂಬ ಹಾಗೂ ಜಯಣ್ಣ ನಡುವೆ ನಡೆದ ಗಲಾಟೆ ವಿಚಾರ ಸಂಬಂಧಿಸಿ ನಿನ್ನೆ ಜಯಣ್ಣ ಜೊತೆ ಕೆ.ಮಂಜು ಕೂಡ ಇದ್ರು ಅನ್ನೋ ಮಾತು ಹೇಳಿ ಬಂದಿತ್ತು. ಈ ವಿಚಾರವಾಗಿ ಇಂದು ನಿರ್ಮಾಪಕ ಕೆ ಮಂಜು ಸ್ಪಷ್ಟನೆ ನೀಡಿದ್ದಾರೆ. ದ್ವಾರಕೀಶ್ ಅವ್ರ ಬಗ್ಗೆ ನನಗೆ ತುಂಬಾ ಗೌರವ ಇದೆ. ರಾಮ ಶಾಮ ಭಾಮ ಸಿನಿಮಾ ಮಾಡುವಾಗ ನನಗೂ ಹಣ ಸಹಾಯ ಮಾಡಿದ್ದಾರೆ. ಯೋಗಿ ದ್ವಾರಕೀಶ್ ಅವ್ರಿಗೆ ನಾನು ಸಾಲ ಕೊಡಿಸಿದ್ದೇನೆ. ಅವನಿಗೆ ಸಿನಿಮಾ ಅಂದ್ರೆ ಪ್ರಾಣ. ದ್ವಾರಕೀಶ್ […]

ದ್ವಾರಕೀಶ್ ಕುಟುಂಬ ನನಗೂ 2 ಕೋಟಿ ಹಣ ನೀಡಬೇಕು ಎಂದ ಕೆ ಮಂಜು

Updated on: Feb 03, 2020 | 3:23 PM

ಬೆಂಗಳೂರು: ದ್ವಾರಕೀಶ್ ಕುಟುಂಬ ಹಾಗೂ ಜಯಣ್ಣ ನಡುವೆ ನಡೆದ ಗಲಾಟೆ ವಿಚಾರ ಸಂಬಂಧಿಸಿ ನಿನ್ನೆ ಜಯಣ್ಣ ಜೊತೆ ಕೆ.ಮಂಜು ಕೂಡ ಇದ್ರು ಅನ್ನೋ ಮಾತು ಹೇಳಿ ಬಂದಿತ್ತು. ಈ ವಿಚಾರವಾಗಿ ಇಂದು ನಿರ್ಮಾಪಕ ಕೆ ಮಂಜು ಸ್ಪಷ್ಟನೆ ನೀಡಿದ್ದಾರೆ.

ದ್ವಾರಕೀಶ್ ಅವ್ರ ಬಗ್ಗೆ ನನಗೆ ತುಂಬಾ ಗೌರವ ಇದೆ. ರಾಮ ಶಾಮ ಭಾಮ ಸಿನಿಮಾ ಮಾಡುವಾಗ ನನಗೂ ಹಣ ಸಹಾಯ ಮಾಡಿದ್ದಾರೆ. ಯೋಗಿ ದ್ವಾರಕೀಶ್ ಅವ್ರಿಗೆ ನಾನು ಸಾಲ ಕೊಡಿಸಿದ್ದೇನೆ. ಅವನಿಗೆ ಸಿನಿಮಾ ಅಂದ್ರೆ ಪ್ರಾಣ. ದ್ವಾರಕೀಶ್ ಕುಟುಂಬ ನನಗೂ ಎರಡೂ ಕೋಟಿ ಹಣ ನೀಡಬೇಕು.

ಆಯುಷ್ಮಾನ್ ಭವ ಸಿನಿಮಾವನ್ನ 9ಕೋಟಿಗೆ ನಾನು ವಿತರಣೆಗೆ ಕೇಳಿದ್ದೆ. ಸಿನಿಮಾ ನಿರ್ಮಾಣದ ಸಮಯದಲ್ಲಿ 50ಲಕ್ಷ ಸಾಲ ಕೊಡಿಸಿದ್ದೇನೆ. ತಾತ್ಕಾಲಿಕವಾಗಿ ಸಮಸ್ಯೆ ಆಗಿರಬಹುದು ಆದರೆ ಮುಂದಿನ ದಿನಗಳಲ್ಲಿ ದ್ವಾರಕೀಶ್ ಹಣ ಕೊಡ್ತಾರೆ. ಈ ಸಮಸ್ಯೆಯಲ್ಲಿ ನನ್ನನ್ನು ಎಳೆಯುತ್ತಿದ್ದಾರೆ. ನನಗೂ‌ ಇದಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Published On - 3:21 pm, Mon, 3 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us