ರಾಕ್​ಲೈನ್ ವೆಂಕಟೇಶ್ ಮೊಮ್ಮಗಳ ಧ್ವನಿಯಲ್ಲಿ ಕೃಷ್ಣ ಜನಾರ್ಧನ

ರಾಕ್​ಲೈನ್ ವೆಂಕಟೇಶ್ ನಿರ್ಮಾಪಕರಾಗಿ, ನಟನಾಗಿ ಹೆಸರು ಮಾಡಿದ್ದು ಗೊತ್ತಿದೆ. ಆದ್ರೀಗ ಅವರ ಮೊಮ್ಮಗಳು ಗಾಯಕಿಯಾಗಿ ಸಾಂಸ್ಕೃತಿಕ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ರಾಕ್​ಲೈನ್ ಪುತ್ರ ಯತೀಶ್ ಅವರ ಪುತ್ರಿ ಶರಯೂ ಗಾಯಕಿಯಾಗಿ ಗುರುತಿಸಿಕೊಳ್ತಿದ್ದಾರೆ. ಕೃಷ್ಣ ಜನಾರ್ಧನ ಹಾಡಿನ ರೀಮಿಕ್ಸ್ ಹಾಡಿಗೆ ಶರಯೂ ದನಿ ನೀಡಿದ್ದಾಳೆ. ಶ್ರೀ ಕೃಷ್ಣನ ಅವತಾರವನ್ನು ಪರಿಚಯಿಸುವ ಕೃಷ್ಣ ಜನಾರ್ಧನ ಹಾಡು ಸುಮಧುರವಾಗಿ ಮೂಡಿಬಂದಿದೆ. ಅನುಪಮ ಈ ಹಾಡನ್ನ ರಚಿಸಿ ಸಂಯೋಜಿಸಿದ್ದಾರೆ. ಶರಯೂ ಮಲ್ಲೇಶ್ವರಂನ ಬ್ರಿಗೇಡ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದು, ಸಂಗೀತದಲ್ಲಿ ಅಪಾರ ಆಸಕ್ತಿ […]

ರಾಕ್​ಲೈನ್ ವೆಂಕಟೇಶ್ ಮೊಮ್ಮಗಳ ಧ್ವನಿಯಲ್ಲಿ ಕೃಷ್ಣ ಜನಾರ್ಧನ
ಆಯೇಷಾ ಬಾನು

Updated on: Aug 16, 2020 | 8:38 AM

ರಾಕ್​ಲೈನ್ ವೆಂಕಟೇಶ್ ನಿರ್ಮಾಪಕರಾಗಿ, ನಟನಾಗಿ ಹೆಸರು ಮಾಡಿದ್ದು ಗೊತ್ತಿದೆ. ಆದ್ರೀಗ ಅವರ ಮೊಮ್ಮಗಳು ಗಾಯಕಿಯಾಗಿ ಸಾಂಸ್ಕೃತಿಕ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ರಾಕ್​ಲೈನ್ ಪುತ್ರ ಯತೀಶ್ ಅವರ ಪುತ್ರಿ ಶರಯೂ ಗಾಯಕಿಯಾಗಿ ಗುರುತಿಸಿಕೊಳ್ತಿದ್ದಾರೆ.

ಕೃಷ್ಣ ಜನಾರ್ಧನ ಹಾಡಿನ ರೀಮಿಕ್ಸ್ ಹಾಡಿಗೆ ಶರಯೂ ದನಿ ನೀಡಿದ್ದಾಳೆ. ಶ್ರೀ ಕೃಷ್ಣನ ಅವತಾರವನ್ನು ಪರಿಚಯಿಸುವ ಕೃಷ್ಣ ಜನಾರ್ಧನ ಹಾಡು ಸುಮಧುರವಾಗಿ ಮೂಡಿಬಂದಿದೆ. ಅನುಪಮ ಈ ಹಾಡನ್ನ ರಚಿಸಿ ಸಂಯೋಜಿಸಿದ್ದಾರೆ. ಶರಯೂ ಮಲ್ಲೇಶ್ವರಂನ ಬ್ರಿಗೇಡ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದು, ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಶರಯೂ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾಳೆ.

Published On - 8:36 am, Sun, 16 August 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us