ಡ್ರಾಪ್ ಕೊಡುವ ನೆಪದಲ್ಲಿ ದರೋಡೆಗೈಯುತ್ತಿದ್ದ ಆರೋಪಿಗಳು ಅಂದರ್

ನೆಲಮಂಗಲ: ಡ್ರಾಪ್ ಕೊಡುವ ನೆಪದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆಗೈಯುತ್ತಿದ್ದ ನಾಲ್ವರು ದರೋಡೆಕೋರರನ್ನು ನೆಲಮಂಗಲ ನಗರ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ರಾಹುತನಹಳ್ಳಿ ಚೇತನ್(38), ಮಾಕಳಿ ಸುರೇಂದ್ರ ಬಾಬು(30), ಶಿವನಪುರ ನಸ್ರುಲ್ಲಾ(43), ಕೃಷ್ಣ ಸಿಂಗ್(35) ಬಂಧಿತರು. ಬಂಧಿತ ದರೋಡೆಕೋರರಿಂದ ಒಂದು ಕಾರು, 30ಸಾವಿರ ನಗದು, ಲ್ಯಾಪ್‌ಟಾಪ್, ವಿವಿಧ ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್​ಗಳು, ಡೆಬಿಟ್ ಕಾರ್ಡ್ ಸೇರಿದಂತೆ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾರದ ಹಿಂದೆ ನೆಲಮಂಗಲ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ PDO ಹರೀಶ್ ಅವರಿಗೆ ಡ್ರಾಪ್ ಕೊಡುವ […]

ಡ್ರಾಪ್ ಕೊಡುವ ನೆಪದಲ್ಲಿ ದರೋಡೆಗೈಯುತ್ತಿದ್ದ ಆರೋಪಿಗಳು ಅಂದರ್
ಸಾಧು ಶ್ರೀನಾಥ್​ Edited By:

Updated on: Jun 20, 2020 | 5:13 PM

ನೆಲಮಂಗಲ: ಡ್ರಾಪ್ ಕೊಡುವ ನೆಪದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆಗೈಯುತ್ತಿದ್ದ ನಾಲ್ವರು ದರೋಡೆಕೋರರನ್ನು ನೆಲಮಂಗಲ ನಗರ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ರಾಹುತನಹಳ್ಳಿ ಚೇತನ್(38), ಮಾಕಳಿ ಸುರೇಂದ್ರ ಬಾಬು(30), ಶಿವನಪುರ ನಸ್ರುಲ್ಲಾ(43), ಕೃಷ್ಣ ಸಿಂಗ್(35) ಬಂಧಿತರು.

ಬಂಧಿತ ದರೋಡೆಕೋರರಿಂದ ಒಂದು ಕಾರು, 30ಸಾವಿರ ನಗದು, ಲ್ಯಾಪ್‌ಟಾಪ್, ವಿವಿಧ ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್​ಗಳು, ಡೆಬಿಟ್ ಕಾರ್ಡ್ ಸೇರಿದಂತೆ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾರದ ಹಿಂದೆ ನೆಲಮಂಗಲ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ PDO ಹರೀಶ್ ಅವರಿಗೆ ಡ್ರಾಪ್ ಕೊಡುವ ನೆಪದಲ್ಲಿ ಹತ್ತಿಸಿಕೊಂಡು ದರೋಡೆಗೈದಿದ್ದರು. ಪ್ರಕರಣ ಸಂಬಂಧ ಆರೋಪಿಗಳನ್ನ ‌ಬಂಧಿಸಲು ಹೆಚ್ಚುವರಿ ಎಸ್​ಪಿ ಸಜೀತ್ ತಂಡ ರಚಿಸಿದ್ರು. ಇದೀಗ ನೆಲಮಂಗಲ CPIಶಿವಣ್ಣ ನೇತೃತ್ವದಲ್ಲಿ ಅರೋಪಿಗಳನ್ನು ಬಂಧಿಸಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us