ಯುವಕನ ಶವ ಪತ್ತೆ: ಸಾವಿನ ಸುತ್ತ ಸಂಶಯದ ಹುತ್ತ..

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಿಂದ ಹರಿಹರಕ್ಕೆ ಬಸ್ಸ್​ನಲ್ಲಿ ಪ್ರಯಾಣಿಸಿದ ಬಸ್ಸ್ ಟಿಕೇಟ್ ಯುವಕನ ಜೇಬಿನಲ್ಲಿ ಸಿಕ್ಕಿದೆ.

ಯುವಕನ ಶವ ಪತ್ತೆ: ಸಾವಿನ ಸುತ್ತ ಸಂಶಯದ ಹುತ್ತ..
ಸಾಂದರ್ಭಿಕ ಚಿತ್ರ
sandhya thejappa Edited By: ಸಾಧು ಶ್ರೀನಾಥ್​

Updated on: Dec 07, 2020 | 11:14 AM

ದಾವಣಗೆರೆ: ಜಿಲ್ಲೆಯ ಹರಿಹರದ ಗುತ್ತೂರು ಗ್ರಾಮದಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದ್ದು, 30 ರಿಂದ 35 ವರ್ಷದೊಳಗಿನ ಯುವಕನೆಂದು ಅಂದಾಜಿಲಾಗಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಿಂದ ಹರಿಹರಕ್ಕೆ ಬಸ್​ನಲ್ಲಿ ಪ್ರಯಾಣಿಸಿದ ಬಸ್​ ಟಿಕೆಟ್ ಯುವಕನ ಜೇಬಿನಲ್ಲಿ ಸಿಕ್ಕಿದೆ. ಗುತ್ತೂರು ಗ್ರಾಮದ ಮುಖ್ಯ ರಸ್ತೆ ಬಳಿ ಶವ ಪತ್ತೆಯಾಗಿದ್ದು, ಇಟ್ಟಿಗೆ ಭಟ್ಟಿಯಲ್ಲಿ ಕೆಲಸಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಸಾವಿಗೆ ನೈಜ ಕಾರಣ ಸಿಗದೇ ಹಲವು ಸಂಶಯಗಳು ಹುಟ್ಟು ಹಾಕಿದ್ದು, ಸದ್ಯಕ್ಕೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಅಪರಿಚಿತರಿಂದ ರಾತ್ರೋರಾತ್ರಿ ಅಂತ್ಯಕ್ರಿಯೆಗೆ ಸಿದ್ಧತೆ: JCB ಜಖಂ, ಅರೆಸ್ಟ್

sandhya thejappa
Follow Us