ರಸ್ತೆ ಮೇಲೆಯೇ ರಾಗಿ ಕಣ: ಜಾರಿಬಿದ್ದು ಸಾವನ್ನಪ್ಪಿದ ಬೈಕ್ ಸವಾರ, ಇನ್ನಾದ್ರು ಎಚ್ಚೆತ್ಕೊಳ್ಳಿ!

ಚಾಮರಾಜನಗರ: ರಸ್ತೆಯ ಮೇಲೆ ಹಾಕಿದ್ದ ರಾಗಿ ಹುಲ್ಲಿನಿಂದಾಗಿ ನಿಯಂತ್ರಣ ತಪ್ಪಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕರಕಲಮಾದಹಳ್ಳಿ ಬಳಿ ನಡೆದಿದೆ. ಅನಿಲ್ ಕುಮಾರ್ (45) ಮೃತ ಬೈಕ್ ಸವಾರ. ಒಕ್ಕಣೆಗೆ ರಸ್ತೆ ಮೇಲೆ ಹಾಕಿದ್ದ ರಾಗಿ ಹುಲ್ಲಿನ ಮೇಲೆ ಚಲಿಸುವಾಗ ನಿಯಂತ್ರಣ ತಪ್ಪಿ ಟೆಂಪೋಗೆ ಬೈಕ್ ಡಿಕ್ಕಿಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಅನಿಲ್ ಕುಮಾರ್ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಓಮ್ನಿ ಸುಟ್ಟು ಹೋಗಿತ್ತು.. ಯಾಕೆ ಗೊತ್ತಾ!? […]

ರಸ್ತೆ ಮೇಲೆಯೇ ರಾಗಿ ಕಣ: ಜಾರಿಬಿದ್ದು ಸಾವನ್ನಪ್ಪಿದ ಬೈಕ್ ಸವಾರ, ಇನ್ನಾದ್ರು ಎಚ್ಚೆತ್ಕೊಳ್ಳಿ!
ಸಾಧು ಶ್ರೀನಾಥ್​

Updated on: Jan 15, 2020 | 11:26 AM

ಚಾಮರಾಜನಗರ: ರಸ್ತೆಯ ಮೇಲೆ ಹಾಕಿದ್ದ ರಾಗಿ ಹುಲ್ಲಿನಿಂದಾಗಿ ನಿಯಂತ್ರಣ ತಪ್ಪಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕರಕಲಮಾದಹಳ್ಳಿ ಬಳಿ ನಡೆದಿದೆ. ಅನಿಲ್ ಕುಮಾರ್ (45) ಮೃತ ಬೈಕ್ ಸವಾರ.

ಒಕ್ಕಣೆಗೆ ರಸ್ತೆ ಮೇಲೆ ಹಾಕಿದ್ದ ರಾಗಿ ಹುಲ್ಲಿನ ಮೇಲೆ ಚಲಿಸುವಾಗ ನಿಯಂತ್ರಣ ತಪ್ಪಿ ಟೆಂಪೋಗೆ ಬೈಕ್ ಡಿಕ್ಕಿಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಅನಿಲ್ ಕುಮಾರ್ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓಮ್ನಿ ಸುಟ್ಟು ಹೋಗಿತ್ತು.. ಯಾಕೆ ಗೊತ್ತಾ!?
ಎರಡು ದಿನಗಳ ಹಿಂದೆಯಷ್ಟೇ ಮಾರುತಿ ಓಮ್ನಿ ಕಾರು ಹೊತ್ತಿ ಉರಿದಿತ್ತು. ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ರಸ್ತೆಯ ಮೇಲೆ ಹಾಕಿದ್ದ ಹುರುಳಿ ಸಿಪ್ಪೆಯಿಂದ ಕಾರಿನ ಎಂಜಿನ್​ ಹೀಟ್​ ಆಗಿ ಓಮ್ನಿ ಸುಟ್ಟು ಹೋಗಿತ್ತು. ರಸ್ತೆಯ ಮೇಲೆಯೇ ಹೀಗೆ ಕಣ ಹಾಕುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಹೀಗಾಗಿ ಇನ್ನಾದ್ರು ನಮ್ಮ ರೈತಾಪಿ ಜನ ಎಚ್ಚೆತ್ತುಕೊಳ್ಳಬೇಕಾಗಿದೆ.

Published On - 12:10 pm, Tue, 31 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us