Lad in Dharwad; ಸಿದ್ದರಾಮಯ್ಯನವರ ಜನಪ್ರಿಯತೆ ದೇಶದೆಲ್ಲೆಡೆ ಹೆಚ್ಚುತ್ತಿದೆ: ಸಂತೋಷ್ ಲಾಡ್, ಸಚಿವ

|

Updated on: Jun 26, 2023 | 1:17 PM

ಬೇರೆ ರಾಜ್ಯಗಳಲ್ಲೂ ಸಿದ್ದರಾಮಯ್ಯ ಜನಪ್ರಿಯತೆ ಹೆಚ್ಚುತ್ತಿದೆ ಮೊನ್ನೆ ತಮಿಳುನಾಡಿಗೂ ಹೋಗಿ ಬಂದಿದ್ದಾರೆ ಎಂದು ಲಾಡ್ ಹೇಳಿದರು,

ಧಾರವಾಡ: ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಬಗ್ಗೆ ಭಾರೀ ಮೆಚ್ಚುಗೆಯ ಮಾತಾಡಿದರು. ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಸಚಿವರು ಸಿದ್ದರಾಮಯ್ಯನವರ ಜನಪ್ರಿಯತೆ ದೇಶದೆಲ್ಲೆಡೆ ಹಬ್ಬಿದೆ, ಅವರು ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ ಎಂದು ಲಾಡ್ ಹೇಳಿದರು. ಮಹಾರಾಷ್ಟ್ರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಮಾಡಿದ ಭಾಷಣಕ್ಕೆ ದೀರ್ಘ ಕರತಾಡನ ವ್ಯಕ್ತವಾದ ಬಳಿಕ ಅವರನ್ನು ರಾಷ್ಟ್ರಮಟ್ಟದ ರಾಜಕಾರದಲ್ಲಿ ಬಳಸುವ ಯೋಚನೆ ಕಾಂಗ್ರೆಸ್ ಪಕ್ಷಕ್ಕಿರುವಂತಿದೆ. ಅವರಿಗೆ ಬೇರೆ ರಾಜ್ಯಗಳಲ್ಲೂ ಜನಪ್ರಿಯತೆ ಹೆಚ್ಚುತ್ತಿದೆ. ಮೊನ್ನೆ ತಮಿಳುನಾಡಿಗೂ ಹೋಗಿ ಬಂದಿದ್ದಾರೆ ಎಂದ ಲಾಡ್ ಅವರ ಪ್ರಧಾನ ಮಂತ್ರಿ ಹುದ್ದೆಗೆ (Prime Ministerial candidate) ಅಭ್ಯರ್ಥಿಯೇ ಅಂತ ಕೇಳಿದ ಪ್ರಶ್ನೆಗೆ, ಆ ಸಂಗತಿಯನ್ನು ಸಾಹೇಬರನ್ನೇ (ಸಿದ್ದರಾಮಯ್ಯ) ಕೇಳಬೇಕು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us on