
DK Shivakumar
ಕಾಂಗ್ರೆಸ್ ಪಕ್ಷದ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದ ಶಾಸಕರು. ಇವರ ಅಭಿಮಾನಿಗಳು ಇವರನ್ನು ಕನಕಪುರ ಬಂಡೆ ಎಂದೇ ಕೊಂಡಾಡುತ್ತಾರೆ. ಸದ್ಯ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಬ್ರ್ಯಾಂಡ್ ಬೆಂಗಳೂರು ಕನಸು ಹೊತ್ತು ಬೆಂಗಳೂರಿನ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ 2023ರ ಚುನಾವಣೆಯ ನೇತೃತ್ವ ವಹಿಸಿಕೊಂಡಿದ್ದ ಇವರು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪ್ರಥಮ ಪುತ್ರರಾಗಿ 15ನೇ ಮೇ, 1962ರಂದು ಡಿಕೆಶಿ ಜನಿಸಿದರು. ಇವರು ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಯುವ ಕಾಂಗ್ರೆಸ್ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದ್ರು.
ಮೇಕೆದಾಟು ಯೋಜನೆಗಾಗಿ 160 ಕಿ.ಮೀ ಪಾದಯಾತ್ರೆ, 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಾತಂತ್ರ್ಯ ನಡಿಗೆ, ರಾಹುಲ್ ಗಾಂಧಿ ಅವರ ಜೊತೆ ಭಾರತ್ ಜೋಡೋ ಯಾತ್ರೆ, ನಾ ನಾಯಕಿ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡುವಂತಹ ಯಶಸ್ವಿ ಕಾರ್ಯಕ್ರಮಗಳನ್ನು ಮಾಡಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ರಾಜ್ಯದಲ್ಲಿ 136 ಸ್ಥಾನಗಳನ್ನು ಪಡೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿದರೆ ಪಕ್ಷಕ್ಕೆ ವಾಪಸ್ಸು ಹೋಗೋದು ಸಾಧ್ಯವಿಲ್ಲ: ಬಸನಗೌಡ ಯತ್ನಾಳ್
ಬಿಜೆಪಿ ತನ್ನ ಮೇಲೆ ಮತ್ತು ತಾನು ಬಿಜೆಪಿ ಮೇಲೆ ಅವಲಂಬಿತರಾಗಿರುವುದನ್ನು ಒಪ್ಪಿಕೊಳ್ಳುವ ಬಸನಗೌಡ ಯತ್ನಾಳ್, ಕೊಲೆಯಾದ ಹಿಂದೂ ಕಾರ್ಯಕರ್ತರ ಕುಟುಂಬಗಳಿಗೆ ನ್ಯಾಯ ಕೊಡಿಸುವುದು ರಾಜ್ಯ ಬಿಜೆಪಿ ಘಟಕಕ್ಕೆ ಸಾಧ್ಯವಾಗಲ್ಲ ಎಂದು ಹೇಳಿದರು. ವಾಪಸ್ಸು ಬಿಜೆಪಿಗೆ ಹೋಗಲ್ಲ ಅಂತ ಯತ್ನಾಳ್ ಮತ್ತು ಈಶ್ವರಪ್ಪ ಹೇಳೋದು ಗಮನಿಸಿದರೆ ಇವರಾಗೇ ಪಕ್ಷ ಬಿಟ್ಟು ಬಂದಿದ್ದಾರೇನೋ ಅನಿಸುತ್ತದೆ!
- Arun Belly
- Updated on: Jun 23, 2025
- 2:40 pm
ಇಂದು ರಾಯಚೂರಿಗೆ ಅಗಮಿಸಲಿದ್ದಾರೆ ಸಿದ್ದರಾಮಯ್ಯ, ಶಿವಕುಮಾರ್; ಭದ್ರತೆಗೆ ಬಿಗಿ ಪೊಲೀಸ್ ಬಂದೋಬಸ್ತ್
ಸಿಎಂ, ಡಿಸಿಎಂ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ರಾಯಚೂರಿಗೆ ಆಗಮಿಸುತ್ತಿರುವುದರಿಂದ ಭದ್ರತೆ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ರಾಯಚೂರು ಮತ್ತು ಯರಗೇರಾದಲ್ಲಿ ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಯೊಬ್ಬರು, ನಿಯೋಜನೆಗೊಂಡಿರುವ ಪೊಲೀಸರಿಗೆ ಕಾರ್ಯಕ್ರಮದ ವಿವರಣೆ ಮತ್ತು ಇವತ್ತಿನ ಜವಾಬ್ದಾರಿಗಳನ್ನು ವಿವರಿಸುತ್ತಿದ್ದಾರೆ.
- Arun Belly
- Updated on: Jun 23, 2025
- 10:20 am
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಸಂಚಲನ ಮೂಡಿಸಿದ ಕೈ ಶಾಸಕ
ಕರ್ನಾಟಕದಲ್ಲಿ ಮತ್ತೆ ಸಿಎಂ ಕುರ್ಚಿ ಮುಸುಕಿನ ಗುದ್ದಾಟ ಮುನ್ನಲೆಗೆ ಬಂದಿದೆ. ಇನ್ನುಳಿದ ಎರಡುವರೆ ವರ್ಷ ಕಾಲ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಅವರ ಬೆಂಬಲಿಗ ಶಾಸಕರು ಒತ್ತಾಯಿಸುತ್ತಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯನವರನ್ನೆ ಮುಂದುವರಿಸಬೇಕೆಂದು ಇವರ ಬೆಂಬಲಿಗರು ಒತ್ತಾಸೆಯಾಗಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟ ನಡೆದಿದೆ. ಇದರ ಮಧ್ಯೆ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು, ಮಾದಪ್ಪನಾಣೆಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ.
- Ramesh B Jawalagera
- Updated on: Jun 22, 2025
- 3:12 pm
ರಾಜಣ್ಣ 75ನೇ ಹುಟ್ಟುಹಬ್ಬಕ್ಕೆ ಆಗಮಿಸಿದ ಶಿವಕುಮಾರ್ ವೇದಿಕೆಯ ಮೇಲೆ ಆತ್ಮೀಯವಾಗಿ ಹರಟಿದರು!
ವೇದಿಕೆಗೆ ಶಿವಕುಮಾರ್ ಆಗಮಿಸಿದಾಗ ನೆರೆದಿದ್ದ ಜನ ಶಿಳ್ಳೆ ಚಪ್ಪಾಳೆಯೊಂದಿಗೆ ಅವರನ್ನು ಸ್ವಾಗತಿಸಿದರು. ರಾಜಣ್ಣ ಅವರ ಮಗ ರಾಜೇಂದ್ರ ರಾಜಣ್ಣ ಶಿವಕುಮಾರ್ರನ್ನು ವೇದಿಕೆಗೆ ಕರೆತಂದರು. ಶಿವಕುಮಾರ್ ಮತ್ತು ರಾಜಣ್ಣ ಅಕ್ಕಪಕ್ಕದಲ್ಲಿ ಕುಳಿತಿದ್ದರು ಮತ್ತು ಅವರ ನಡುವೆ ಗಹನವಾದ ಚರ್ಚೆ ನಡೆದಿತ್ತು. ತಮ್ಮ ಭಾಷಣದಲ್ಲೂ ಉಪ ಮುಖ್ಯಮಂತ್ರಿಯವರು ಸಹಕಾರ ಸಚಿವರನ್ನು ವಿಶೇಷವಾಗಿ ಕೊಂಡಾಡಿದರು.
- Arun Belly
- Updated on: Jun 21, 2025
- 8:59 pm
ಯಾವ ಆರೋಪಕ್ಕೂ ಗಮನ ನೀಡದೆ ಸಿಎಂ ಸಿದ್ದರಾಮಯ್ಯ ನಿದ್ರೆಗೆ ಜಾರಿದ್ದಾರೆ: ಆರ್ ಅಶೋಕ, ವಿಪಕ್ಷ ನಾಯಕ
ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ ಸುಲಿಗೆಯ ಸುಳಿಗೆ ಸಿಕ್ಕಿದೆ, ಯಾವುದೇ ತಪ್ಪು ನಡೆದಿಲ್ಲ, ತಪ್ಪು ಮಾಡಿದವರನ್ನು ಗಲ್ಲುಗಂಬಕ್ಕೆ ಏರಿಸುತ್ತೇವೆ ಎಂದು ಎಂದು ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಹೇಳುತ್ತಾರೆ. ಎಷ್ಟು ಜನರನ್ನು ಅವರು ಗಲ್ಲಿಗೇರಿಸುತ್ತಾರೆ? ಎಲ್ಲ 224 ಕ್ಷೇತ್ರಗಳಲ್ಲೂ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಅಶೋಕ ಹೇಳಿದರು.
- Arun Belly
- Updated on: Jun 21, 2025
- 2:29 pm
ಪಾಟೀಲ್ ಮಾತಾಡಿದ್ದು ಅರ್ಥವಾಗಿಲ್ಲ, ಅವರು ಹೇಳಿದ್ದನ್ನು ಒಪ್ಪೋದು ಸಾಧ್ಯವಿಲ್ಲ: ಡಿಕೆ ಶಿವಕುಮಾರ್
ಬಿಅರ್ ಪಾಟೀಲ್ ಮತ್ತು ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫ್ರಾಜ್ ಖಾನ್ ನಡುವೆ ನಡೆದ ಸಂಭಾಷಣೆಯ ಆಡಿಯೋ ವೈರಲ್ ಆಗಿ ಮಾತಾಡಿದ್ದು ತಾನೇ ಎಂದು ಖುದ್ದು ಪಾಟೀಲ್ ಇವತ್ತು ಬೆಂಗಳೂರಲ್ಲಿ ಹೇಳಿದ್ದರೂ ಶಿವಕುಮಾರ್ ಅದನ್ನು ಒಪ್ಪುತ್ತಿಲ್ಲ. ವಿರೋಧ ಪಕ್ಷದ ನಾಯಕರು ಹಿಂದೆ ಬಸವರಾಜ ರಾಯರೆಡ್ಡಿ ಮಾಡಿದ ಆರೋಪವನ್ನು ಉಲ್ಲೇಖಿಸಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನುತ್ತಿದ್ದಾರೆ.
- Arun Belly
- Updated on: Jun 21, 2025
- 1:25 pm
ರಾಜಣ್ಣ 75ನೇ ಹುಟ್ಟುಹಬ್ಬ ನಿಮಿತ್ತ ತುಮಕೂರಲ್ಲಿ ನಾಳೆ ಅದ್ದೂರಿ ಕಾರ್ಯಕ್ರಮ, ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
ಹೊರಗಿನಿಂದ 2,000 ಬಸ್ ಸೇರಿದಂತೆ ಸುಮಾರು 4,000 ವಾಹನಗಳಲ್ಲಿ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರುತ್ತಿದ್ದಾರೆ, ಟ್ರಾಫಿಕ್ ಸಮಸ್ಯೆ ಎದುರಾಗುವ ಸಮಸ್ಯೆ ಇರೋದ್ರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಎಸ್ಪಿ ಅಶೋಕ್ ಮನವಿ ಮಾಡಿದರು. 14 ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಮತ್ತು ರೂಟ್ ಮ್ಯಾಪ್ ಸಹ ಸಾಮಾಜಿಕ ಜಾಲತಾಣಗಗಳಲ್ಲಿ ಶೇರ್ ಮಾಡಲಾಗಿದೆ ಎಂದು ಅವರು ಹೇಳಿದರು.
- Arun Belly
- Updated on: Jun 20, 2025
- 8:52 pm
ಬಯ್ಯುತ್ತೇನೆ ಎಂಬ ಕಾರಣಕ್ಕೆ ವಿಜಯೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ: ಬಸನಗೌಡ ಯತ್ನಾಳ್
ಚಕ್ರವರ್ತಿ ಸೂಲಿಬೆಲೆ ಇತಿಹಾಸ ಮತ್ತು ನಮ್ಮ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಮಾತಾಡುತ್ತಾರೆ, ಮೊಘಲರು ಮತ್ತು ಬೇರೆ ರಾಜರು ನಮ್ಮ ಸಂಸ್ಕೃತಿಯನ್ನು ಹಾಳು ಮಾಡಿದ್ದರ ಬಗ್ಗೆ ಮಾತಾಡುತ್ತಾರೆ, ಲವ್ ಜಿಹಾದ್ ಯಾಕಾಗುತ್ತಿದೆ ಅಂತ ವಿವರಿಸುತ್ತಾರೆ, ಹಾಗಾಗೇ ಅವರ ಮಾತಿನ ಮೇಲೆ ಅಂಕುಶ ಸಾಧಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಯತ್ನಾಳ್ ಹೇಳಿದರು.
- Arun Belly
- Updated on: Jun 20, 2025
- 4:53 pm
ಕುಮಾರಸ್ವಾಮಿ ಸರ್ಕಾರ ರಚಿಸುವ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಅಂದಿದ್ದರು; ನಾನು ಬಟ್ಟೆ ಗಿಫ್ಟ್ ಮಾಡೋಣ ಅಂದ್ಕೊಂಡಿದ್ದೆ: ಶಿವಕುಮಾರ್
ಬಟ್ಟೆ ಕೊಡು-ತೆಗೆದುಕೊಳ್ಳುವ ವಿಚಾರದಲ್ಲಿ ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವಿನ ಕದನ ಮುಂದುವರಿದಿದೆ. ಲೂಟಿ ಹೊಡೆದ ಹಣದಲ್ಲಿ ಶಿವಕುಮಾರ್ ಕೊಡುವ ಬಟ್ಟೆ ತೆಗೆದುಕೊಳ್ಳುವ ದಾರಿದ್ರ್ಯ ಬಂದಿಲ್ಲ ಅಂತ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಅವರ ಸರ್ಕಾರ ರಚಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದರು, ನಾನು ಬಟ್ಟೆ ರೂಪದಲ್ಲಿ ಗಿಫ್ಟ್ ಕೊಡೋಣ ಅಂದುಕೊಂಡಿದ್ದೆ ಎಂದರು.
- Arun Belly
- Updated on: Jun 20, 2025
- 2:49 pm
ಶಿವಕುಮಾರ್ ಲೂಟಿ ಹೊಡೆದ ಹಣದಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗೆ ಬಂದಿಲ್ಲ: ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ಶಿವಕುಮಾರ್ ನಡುವೆ ಜಗಳ ನಡೆಯುತ್ತಿರುತ್ತದೆ, ಜಗಳ ನಿಂತರೆ ಮಾತ್ರ ಜನಕ್ಕೆ ಆಶ್ಚರ್ಯವಾದೀತು! ಡಿಕೆ ಸುರೇಶ್ ಬಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಕೇಳಿದಾಗ ಕುಮಾರಸ್ವಾಮಿ, ಅವರಲ್ಲಿ ಈಗ ಅಧಿಕಾರ ಇದೆ, ಯಾವ ಅಧ್ಯಕ್ಷಗಿರಿಯನ್ನು ಬೇಕಾದರೂ ಪಡೆದುಕೊಳ್ಳಬಲ್ಲರು, ಅದರ ವಿಷಯದಲ್ಲಿ ಮಾತಾಡಲು ಇದು ಸಮಯವಲ್ಲ, ಸೂಕ್ತ ಸಮಯದಲ್ಲಿ ಮಾತಾಡುವೆ ಎಂದರು.
- Arun Belly
- Updated on: Jun 20, 2025
- 1:49 pm