ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್ ಮಾಧ್ಯಮದಿಂದ. ಒನ್ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಬಸ್ನಲ್ಲಿ ಸಿಕ್ಕಿಬಿದ್ದಿದ್ದೇ ರೋಚಕ
ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡೆಸೆಕೆರೆ ಗ್ರಾಮದ (Hindisgere village) ತೋಟದ ಮನೆಯಲ್ಲಿ ಮಂಜುಳಾ ಕೊಲೆ ಪ್ರಕರಣದ (Manjula Murder Case) ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸೆಂಬರ್ 1ರಂದು ತೋಟದ ಮನೆಯಲ್ಲಿ ಮಂಜುಳಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ದಿನವೇ ಮಧು ಎಂಬಾತನ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅದರ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಕಾರ್ಯಚರಣೆ ನಡೆಸಿ ಹಂತಕ ಮಧುನನ್ನು ಪುಣೆಯಲ್ಲಿ ಬಂಧಿಸಿದ್ದಾರೆ. ವಿಶೇಷ ಅಂದ್ರೆ ಪೊಲೀಸರೇ ಹೋಗಿ ಬಂಧಿಸಿಲ್ಲ. ಬಸ್ ಡ್ರೈವರ್ನಿಂದ ಆರೋಪಿಯನ್ನು ಲಾಕ್ ಮಾಡಿಸಿದ್ದಾರೆ. ಹಾಗಾದ್ರೆ, ಹಂತಕ ಮಧು ಎಲ್ಲಿಗೆ ಹೊರಟ್ಟಿದ್ದ? ಹೇಗೆ ಸಿಕ್ಕಿಬಿದ್ದ ಎನ್ನುವ ಮಾಹಿತಿಯನ್ನು ಎಸ್ಪಿಯವರು ಬಿಚ್ಚಿಟ್ಟಿದ್ದಾರೆ.
- Ramesh B Jawalagera
- Updated on: Dec 4, 2025
- 9:44 pm
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ಲ್ಯಾಪ್ಟಾಪ್ನಲ್ಲಿ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್
ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚಳದ ಬಗ್ಗೆ ಉಪಲೋಕಾಯುಕ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಮುಗಿಬಿದ್ದಿದೆ. ಈ ಹಿಂದೆ ಇದ್ದ ತಮ್ಮ ಸರ್ಕಾರದ ಮೇಲೆ ಶೇ.40 ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ಗೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆರ್ ಅಶೋಕ್ ಅವರು, ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವುದನ್ನು ಲ್ಯಾಪ್ಟಾಲ್ನಲ್ಲಿ ತೋರಿಸಿದರು.
- Ramesh B Jawalagera
- Updated on: Dec 4, 2025
- 5:27 pm
ನನಗಿಂತ ಸುಂದರವಾಗಿ ಕಾಣ್ತಿದ್ದಾರೆ ಅಂತಾ ಸ್ವಂತ ಮಗು ಸೇರಿ 4 ಮಕ್ಕಳನ್ನು ಕೊಂದ ಮಹಿಳೆ!
ಹರಿಯಾಣದ ಪಾಣಿಪತ್ನಲ್ಲಿ ನಡೆದ ಸರಣಿ ಕೊಲೆ ಪ್ರಕರಣವೊಂದು ಜನರನ್ನು ಬೆಚ್ಚಿಬೀಳಿಸಿದೆ. ತಾಯಿ-ಮಕ್ಕಳ ಬಾಂಧವ್ಯವೆಂಬುದು ಪ್ರಕೃತಿಯೇ ನೀಡಿದ ಅಪೂರ್ವ ಕೊಡುಗೆ. ಆದರೆ ಇಲ್ಲೊಬ್ಬ ತಾಯಿ ತನ್ನ ಸ್ವಂತ ಮಗುವನ್ನು ಸೇರಿದಂತೆ ಸಂಬಂಧಿಕರ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ನೌಲ್ತಾ ಗ್ರಾಮದ 32 ವರ್ಷದ ಪೂನಂ ಎಂಬ ಮಹಿಳೆ ಕಳೆದ ಎರಡು ವರ್ಷಗಳಲ್ಲಿ, ತನ್ನದೇ ಮೂರು ವರ್ಷದ ಮಗುವೂ ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
- Ramesh B Jawalagera
- Updated on: Dec 4, 2025
- 4:25 pm
ಪ್ರವಾಸದ ಆಸೆಯಲ್ಲಿ ಕೆಂಪೇಗೌಡ ಏರ್ಪೋರ್ಟ್ಗೆ ಬಂದವರು ಅತಂತ್ರ, ಪ್ಲ್ಯಾನ್ಗಳೆಲ್ಲ ಉಲ್ಟಾ
ಕೆಂಪೇಗೌಡ ಏರ್ಪೋಟ್ ನಲ್ಲಿ ಇಂದು (ಡಿಸೆಂಬರ್ 04) ಸಹ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಮುಂದುವರೆದಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇಂಡಿಗೋ ವಿಮಾನಗಳ ವ್ಯತ್ಯಯದಿಂದ 6 ದಿನದ ಟ್ರಿಪ್ 5 ದಿನಕ್ಕೆ ಮೊಟಕುಗೊಂಡಿದೆ. ಇದರಿಂದ ವಿದೇಶ ಪ್ರವಾಸಕ್ಕೆಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಅತಂತ್ರವಾಗಿದ್ದು, ಏನು ಮಾಡಬೇಕೆಂದು ದಿಕ್ಕುತೋಚದೇ ಪರದಾಡುತ್ತಿದ್ದಾರೆ.
- Ramesh B Jawalagera
- Updated on: Dec 4, 2025
- 3:19 pm
ಪುತ್ರನ ವಿರುದ್ಧ ಮಸಲತ್ತು ನಡೆಯುತ್ತಿದ್ದಂತೆಯೇ ದೆಹಲಿಗೆ ಹಾರಿದ ಯಡಿಯೂರಪ್ಪ
ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯಲ್ಲೂ ಬಣ ರಾಜಕಾರಣ ಗರಿಗೆದರಿದೆ. ಕಮಲ ಪಡೆಯ ಒಂದು ತಂಡ ದೆಹಲಿಯಲ್ಲಿ ಮೊಕ್ಕಾಂ ಹೂಡಿ, ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದೆ. ಈ ನಡುವೆ ಬಿ.ಎಸ್. ಯಡಿಯೂರಪ್ಪ ಕೂಡ ದೆಹಲಿಗೆ ಹಾರಿರೋದು ಕುತೂಹಲ ಮೂಡಿಸಿದೆ. ಹೌದು.. ಭಿನ್ನಮತದ ಬೇಗುದಿ ಬಿಜೆಪಿ ಮನೆಯಲ್ಲಿ ಬೇಯುತ್ತಿದೆ. ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ದೆಹಲಿ ಕದ ತಟ್ಟಿತ್ತೋ, ಹಾಗೆಯೇ ಬಿಜೆಪಿಯ ಬದಲಾವಣೆಯ ಬಿರುಗಾಳಿಯೂ ಬಿಜೆಪಿ ವರಿಷ್ಠರ ಅಂಗಳಕ್ಕೆ ಬಿದ್ದಿದೆ. ತಂಡೋಪತಂಡವಾಗಿ ದೆಹಲಿಗೆ ತೆರಳಿದ್ದ ರೆಬೆಲ್ಸ್ ನಾಯಕರನ್ನ ಭೇಟಿ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಇಷ್ಟು ಮಾತ್ರವಲ್ಲ ತಮಗೆ ಯಾರ ವಿರುದ್ಧ ಅಸಮಾಧಾನ ಇದ್ಯೋ ಅಂತವರ ವಿರುದ್ಧ ಸರಣಿ ದೂರು ಕೊಟ್ಟು, ತಕ್ಕ ಶಾಸ್ತಿ ಮಾಡುವಂತೆ ಮನವಿ ಮಾಡಿದೆ.
- Ramesh B Jawalagera
- Updated on: Dec 4, 2025
- 2:49 pm
ಡಿ.8ರ ಸಭೆ ಬರಲಾಗಲ್ಲ: ಕಾರಣ ಸಮೇತ ಸಿದ್ದರಾಮಯ್ಯಗೆ ಮರುಪತ್ರ ಬರೆದ ಸಚಿವ ಜೋಶಿ
ಕರ್ನಾಟಕದ ಅಭಿವೃದ್ಧಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರದ ಗಮನ ಸೆಳೆಯಲೆಂದು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಡಿಸೆಂಬರ್ 8ರಂದು ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಸಭೆ ಕರೆದಿದ್ದರು. ಆದ್ರೆ, ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಸಭೆಗೆ ಬರಲಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿಎಂಗೆ ಮರುಪತ್ರ ಬರೆದಿದ್ದಾರೆ. ಹಾಗಾದ್ರೆ, ಪತ್ರದಲ್ಲೇನಿದೆ ಎನ್ನುವ ವಿವರ ಈ ಕೆಳಗಿನಂತಿದೆ.
- Ramesh B Jawalagera
- Updated on: Dec 3, 2025
- 10:13 pm
ಮನೆಯ ಎಸಿ ಸರ್ವಿಸ್ ಮಾಡಲು ಬಂದು ಕಾರಿಗೆ ಕಲ್ಲು ಹೊಡೆದ್ರು: ಘಟನೆ ಬಿಚ್ಚಿಟ್ಟ ನಿವೃತ್ತ ಪೊಲೀಸ್
ನಿವೃತ್ತ ಪೊಲೀಸ್ ಇನ್ಸಪೆಕ್ಟರ್ ಕಾರಿಗೆ ಕಲ್ಲು ಹೊಡೆದಿರುವ ಘಟನೆ ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಿಶಿನಕುಂಟೆಯ ಕಲ್ಪತರು ಲೇಔಟ್ ನಲ್ಲಿ ನಡೆದಿದೆ. ಮನೆ ಎಸಿ ಸರ್ವೀಸ್ ಮಾಡಲು ಬಂದವರು ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಹೊನ್ನಪ್ಪ ಎಂಬುವರ ಮನೆಯ ಕಾರಿಗೆ ಕಲ್ಲು ಹೊಡೆದಿದ್ದಾರೆ. ಹೊನ್ನಪ್ಪ ನೆಲಮಂಗಲದ ಅರಿಶಿನಕುಂಟೆಯ ಕಲ್ಪತರು ಲೇಔಟ್ ನಲ್ಲಿ ಎರಡು ವರ್ಷದ ಹಿಂದೆ ಮನೆ ಕಟ್ಟಿಸಿಕೊಂಡು ಬಂದಿದ್ದರು. ಮನೆಯಲ್ಲಿ ಎಸಿ ವರ್ಕ್ ಆಗ್ತಿರಲಿಲ್ಲ ಅಂತ ಸರ್ವೀಸ್ ಸೆಂಟರ್ ಗೆ ಕರೆ ಮಾಡಿದ್ದಾರೆ. ಆದ್ರೆ ಸರಿಯಾಗಿ ರೆಸ್ಪಾನ್ಸ್ ಮಾಡಿರಲಿಲ್ಲ. ಇದರಿಂದ ಹೊನ್ನಪ್ಪ ಕಂಪನಿಗೆ ಫೋನ್ ಮಾಡಿ ಕಂಪ್ಲೆಂಟ್ ಮಾಡಿದ್ದಾರೆ.
- Ramesh B Jawalagera
- Updated on: Dec 3, 2025
- 9:01 pm
ಹಸೆಮಣೆ ಏರಿದ ಮರುದಿನವೇ ಮದುಮಗ ಸಾವು: ಹೊಸ ಜೀವನ ಮಾಡಲು ಬಿಡ್ಲಿಲ್ಲ ವಿಧಿ
ಮದುವೆಯಾಗಿ ಹೊಸ ಬಾಳನ್ನು ಆರಂಭಿಸಬೇಕಿದ್ದ ಯುವಕನೊಬ್ಬ, ಹಸೆಮಣೆ ಏರಿದ ಮರುದಿನವೇ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತಪುರದ ನಿವಾಸಿಯಾಗಿರುವ ರಮೇಶ್(30) ಮೃತ ದುರ್ದೈವಿ. ಮದುವೆಯ ಬಳಿಕ ಹೆಂಡ್ತಿ ಮನೆಗೆ ಹೋಗಿದ್ದು, ಅಲ್ಲಿ ದೇವರ ದರ್ಶನ ಪಡೆಯಲು ತೆರಳಿದ ಸಂದರ್ಭದಲ್ಲಿ ಯುವಕನಿಗೆ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ, ದುರದೃಷ್ಟವಶಾತ್ ಮಾರ್ಗ ಮಧ್ಯದಲ್ಲಿಯೇ ರಮೇಶ್ ಕೊನೆಯುಸಿರೆಳೆದಿದ್ದಾನೆ.
- Ramesh B Jawalagera
- Updated on: Dec 3, 2025
- 7:43 pm
ಕರ್ನಾಟಕದಲ್ಲಿ ಹೊಸ ಹೈಟೆಕ್ ರೂಪದಲ್ಲಿ RC, DL: ಏನಿದರ ವಿಶೇಷ? ಬೆಲೆ ಎಷ್ಟು?
ಕರ್ನಾಟಕದಲ್ಲಿ ಇಂದಿನಿಂದ ಚಾಲನಾ ಪರವಾನಗಿ(ಡಿಎಲ್) ಹಾಗೂ ವಾಹನ ನೋಂದಣಿ ಪ್ರಮಾಣಪತ್ರ (ಆರ್ಸಿ) ಮತ್ತಷ್ಟು ಸ್ಮಾರ್ಟ್ ಆಗಲಿದೆ. ಹೌದು...ಸಾರಿಗೆ ಇಲಾಖೆಯಿಂದ ಇಂದು (ಡಿಸೆಂಬರ್ 03) ಆಯೋಜಿಸಲಾಗಿದ್ದ ಆರ್ಸಿ ಹೊಸ ಸ್ಮಾರ್ಟ್ ಕಾರ್ಡ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿ ಸಲ್ಲಿಸಿದವರಿಗೆ ಹೊಸ ಆರ್ಸಿ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಹೊಸ ಕಾರ್ಡ್ ಕ್ಯೂಆರ್ ಕೋಡ್ ಅಳವಡಿಕೆ ಮಾಡಲಾಗಿದ್ದು. ಸ್ಕ್ಯಾನ್ ಮಾಡಿ ಕಾರ್ಡ್ ಮಾಹಿತಿ ಪಡೆಯಬಹುದು. ಒಂದು ಕಾರ್ಡ್ ಗೆ 200 ರೂ ಶುಲ್ಕ ನಿಗದಿಪಡಿಸಲಾಗಿದ್ದು, ಇದರಲ್ಲಿ 135 ರೂ ಸರ್ಕಾರಕ್ಕೆ 64.46.ಸೇವಾದಾರರ ಪಾಲು ಎಂದು ಮಾಹಿತಿ ನೀಡಿದರು.
- Ramesh B Jawalagera
- Updated on: Dec 3, 2025
- 7:05 pm
ಕಾಂಗ್ರೆಸ್ನಲ್ಲಿ ಸಹಿ ಸಂಗ್ರಹ: ನಾಟಿ ಕೋಳಿ ರುಚಿ ಸವಿದರೂ ಕುರ್ಚಿ ಕಾಳಗ ಶಾಂತವಾಗಿಲ್ವಾ?
ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ನಡೆದ ಮುಸುಕಿನ ಗುದ್ದಾಟ ಸದ್ಯಕ್ಕೆ ಶಾಂತವಾದಂತಿದೆ. ಪರಸ್ಪರ ಒಬ್ಬರ ಮನೆಗೆ ಒಬ್ಬರು ಹೋಗಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುವ ಮೂಲಕ ಗೊಂದಲ ಬಗೆರಿಸಿಕೊಂಡಿದ್ದಾರೆ. ಆದರೂ ಬೂದಿಮುಚ್ಚಿದ ಕೆಂಡದಂತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹಿ ಸಂಗ್ರಹದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
- Ramesh B Jawalagera
- Updated on: Dec 3, 2025
- 5:39 pm
ಕರ್ನಾಟಕ ರಾಜಭವನ ಹೆಸರು ಸಹ ಬದಲಾವಣೆ: ಹೊಸ ಹೆಸರು ಏನು ಗೊತ್ತಾ?
ಕೆಲವು ರಾಜ್ಯಗಳಲ್ಲಿರುವ ರಾಜ್ಯಪಾಲರ ನಿವಾಸಗಳ ಹೆಸರುಗಳನ್ನು ಬದಲಿಸಲಾಗಿದೆ. ರಾಜಭವನ ಎಂದಿರುವುದನ್ನು ಲೋಕಭವನ ಎಂದು ಬದಲಾಯಿಸಲಾಗಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ತ್ರಿಪುರಾ, ಉತ್ತರಖಂಡ ರಾಜ್ಯಗಳಲ್ಲಿ ಈಗಾಗಲೇ ರಾಜಭವನದ ಹಸೆರು ಬದಲಿಸಲಾಗಿದೆ. ಅದರಂತೆ ಬೆಂಗಳೂರಿನಲ್ಲಿರುವ ರಾಜಭವನದ ಹೆಸರು ಸಹ ಬದಲಾವಣೆ ಮಾಡಲಾಗಿದ್ದು, ಹೊಸ ಹೆಸರು ನಾಮಕರಣ ಮಾಡಲಾಗಿದೆ.
- Ramesh B Jawalagera
- Updated on: Dec 3, 2025
- 4:25 pm
ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು: ನೂಕಾಟ, ತಳ್ಳಾಟ
ಶ್ರೀರಂಗಪಟ್ಟಣದಲ್ಲಿ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಹನುಮ ಮಾಲಾಧಾರಿಗಳು ಜಾಮಿಯಾ ಮಸೀದಿ ಕಡೆ ನುಗ್ಗಲು ಯತ್ನಿಸಿರುವ ಘಟನೆ ನಡೆದಿದ್ದು, ಈ ವೇಳೆ ಪೊಲೀಸರು ಹನುಮ ಮಾಲಾಧಾರಿಗಳನ್ನು ತಡೆದು ನಿಲ್ಲಿಸಿದರು. ಇದರಿಂದ ಪೊಲೀಸರು ಹಾಗೂ ಹನುಮ ಮಾಲಾಧಾರಿಗಳ ನಡುವೆ ತಳ್ಳಾಟ, ನೂಕಾಟ ಉಂಟಾಯ್ತು. ಇದೇ ವೇಳೆ ಹನುಮ ಮಾಲಾಧಾರಿಗಳು, ಕೇಸರಿ ಧ್ವಜ ತಿರುಗಿಸಿ ಮಸೀದಿ ಜಾಗ ನಮ್ಮದು ಎಂದು ಘೋಷಣೆ ಮೊಳಗಿತು. ಅಲ್ಲದೇ ಜಾಮಿಯಾ ಮಸೀದಿಯಲ್ಲಿರುವವನು ಹನುಮಂತ ಎಂದು ಘೋಷಣೆ ಕೂಗಿ ಬೂದುಗುಂಬಳ ಇಳಿ ತೆಗೆದು ಒಡೆದರು
- Ramesh B Jawalagera
- Updated on: Dec 3, 2025
- 3:43 pm