AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎರಡೂ ಕ್ಷೇತ್ರಗಳಿಗೆ 16-16 ನಾಯಕರನ್ನೊಳಗೊಂಡ ಉಸ್ತುವಾರಿ ಸಮಿತಿಗಳನ್ನು ರಚಿಸಿದ್ದಾರೆ. ಬಾಗಲಕೋಟೆಗೆ ವಸಂತ್ ಕುಮಾರ್ ಮತ್ತು ದಾವಣಗೆರೆಗೆ ಮಂಜುನಾಥ್ ಭಂಡಾರಿ ಅವರನ್ನು ಸಂಚಾಲಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ
CongressImage Credit source: google
ಪ್ರಸನ್ನ ಗಾಂವ್ಕರ್​
| Edited By: |

Updated on: Mar 08, 2026 | 10:43 PM

Share

ಬೆಂಗಳೂರು, ಮಾರ್ಚ್​ 08: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ (by-election) ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar)​ ಎರಡೂ  ಕ್ಷೇತ್ರಕ್ಕೆ 16-16 ನಾಯಕರನ್ನೊಳಗೊಂಡ ಉಸ್ತುವಾರಿ ಸಮಿತಿ ರಚನೆ ಮಾಡಿದ್ದಾರೆ. ಬಾಗಲಕೋಟೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್ ಮತ್ತು ದಾವಣಗೆರೆಗೆ ಕಾಱಧ್ಯಕ್ಷ ಮಂಜುನಾಥ್ ಭಂಡಾರಿ ಸಂಚಾಲಕರಾಗಿದ್ದಾರೆ.

ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಮತ್ತೋರ್ವ ಮಾಜಿ ಸಚಿವ ವಿಎಸ್​​​ ಮೇಟಿ ನಿಧನದಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಕೂಡ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಿಗೆ ಶೀಘ್ರದಲ್ಲೇ ಉಪಚುನಾವಣೆ ನಡೆಯುವ ಹಿನ್ನಲೆ ಇದೀಗ ಚುನಾವಣಾ ಸಿದ್ಧತೆಗಳನ್ನು ಕೈಗೊಳ್ಳಲು ಚುನಾವಣಾ ಆಯೋಗ ಉಸ್ತುವಾರಿ ಸಮಿತಿಯನ್ನು ನೇಮಕ ಮಾಡಿದೆ.

ದಾವಣಗೆರೆ ಉಪ ಚುನಾವಣೆ ಉಸ್ತುವಾರಿ ಸಮಿತಿ ಸದಸ್ಯರು

  • ಮಂಜುನಾಥ್ ಭಂಡಾರಿ, ಎಂ.ಎಲ್.ಸಿ/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ – ಸಂಚಾಲಕ
  • ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ
  • ಸಚಿವ ಕೆ.ಎಚ್. ಮುನಿಯಪ್ಪ
  • ಸಚಿವ ಜಮೀರ್ ಅಹಮದ್ ಖಾನ್​​
  • ಸಚಿವ ಈಶ್ವರ್ ಖಂಡ್ರೆ
  • ಸಚಿವ ಕೃಷ್ಣ ಬೈರೇಗೌಡ
  • ಸಚಿವ ಶರಣಪ್ರಕಾಶ್ ಪಾಟೀಲ್​
  • ಸಚಿವ ಪ್ರಿಯಾಂಕ್ ಖರ್ಗೆ
  • ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​​
  • ಸಚಿವ ಸಂತೋಷ್ ಲಾಡ್​
  • ಸಚಿವ ಮಧು ಬಂಗಾರಪ್ಪ
  • ಸಲೀಂ ಅಹಮದ್, ಮುಖ್ಯ ಸಚೇತಕರು, ವಿಧಾನ ಪರಿಷತ್ತು
  • ತನ್ವೀರ್ ಸೇಠ್, ಶಾಸಕರು/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ, ಮಾಜಿ ಸಚಿವ
  • ಮಾಜಿ ಎಂಎಲ್​ಸಿ ವಿ.ಆರ್. ಸುದರ್ಶನ್​
  • ಮಾಜಿ ಸಚಿವ ಎಚ್.ಎಂ. ರೇವಣ್ಣ
  • ಮಾಜಿ ಸಚಿವ ಎಚ್. ಆಂಜನೇಯ

ಬಾಗಲಕೋಟೆ ಉಪ ಚುನಾವಣೆ ಉಸ್ತುವಾರಿ ಸಮಿತಿ ಸದಸ್ಯರು

  • ವಸಂತ ಕುಮಾರ್, ಎಂ.ಎಲ್.ಸಿ/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ – ಸಂಚಾಲಕರು
  • ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ
  • ಸಚಿವ ಸತೀಶ್ ಜಾರಕಿಹೊಳಿ
  • ಸಚಿವ ಎಂ ಬಿ ಪಾಟೀಲ್​​
  • ಸಚಿವ ಶಿವಾನಂದ ಪಾಟೀಲ್​​
  • ಸಚಿವ ಶಿವರಾಜ್ ತಂಗಡಗಿ
  • ಸಚಿವ ಶರಣಬಸಪ್ಪ ದರ್ಶನಾಪುರ
  • ಸಚಿವ ಬೈರತಿ ಸುರೇಶ್​​
  • ಸಚಿವ ರಹೀಮ್ ಖಾನ್​
  • ಶಾಸಕ ಸಿ.ಎಸ್. ನಾಡಗೌಡ
  • ಮಾಜಿ ಸಚಿವ ರಾಜಶೇಖರ್ ಪಾಟೀಲ್​​
  • ಶಾಸಕ ವಿಜಯಾನಂದ ಕಾಶಪ್ಪನವರ್​
  • ಎಂಎಲ್​ಸಿ ಎಫ್.ಎಚ್. ಜಕ್ಕಪ್ಪನವರ್​​
  • ಎಂಎಲ್​ಸಿ ಬಸನಗೌಡ ಬಾದರ್ಲಿ
  • ಮಾಜಿ ಎಂಎಲ್​ಸಿ ಸೋಮಣ್ಣ ಬೇವಿನಮರದ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us