Karnataka
ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವಾಗಿದೆ ಹಾಗೂ ದೇಶದ ಆರನೆಯ ದೊಡ್ಡ ರಾಜ್ಯ. ಕರ್ನಾಟಕವನ್ನು ಹಿಂದೆ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು, ಇದು ಭಾರತದ ನೈಋತ್ಯ ಪ್ರದೇಶದ ರಾಜ್ಯವಾಗಿದೆ. ಇದು 1 ನವೆಂಬರ್ 1956 ರಂದು ರಾಜ್ಯಗಳ ಮರುಸಂಘಟನೆ ಕಾಯ್ದೆಯ ಅಂಗೀಕಾರದೊಂದಿಗೆ ಮೈಸೂರು ರಾಜ್ಯವಾಗಿ ರೂಪುಗೊಂಡಿತು ಮತ್ತು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇತರ ನಾಲ್ಕು ದಕ್ಷಿಣ ಭಾರತದ ಸಹೋದರಿ ರಾಜ್ಯಗಳೊಂದಿಗೆ ಭೂ ಗಡಿಯನ್ನು ಹೊಂದಿರುವ ಏಕೈಕ ದಕ್ಷಿಣ ರಾಜ್ಯ ಕರ್ನಾಟಕ. ಈ ರಾಜ್ಯವು 191,791 km2 (74,051 ಚದರ ಮೈಲಿ), ಅಥವಾ ಭಾರತದ ಒಟ್ಟು ಭೌಗೋಳಿಕ ಪ್ರದೇಶದ 5.83 ಪ್ರತಿಶತದಷ್ಟು ವಿಸ್ತೀರ್ಣವನ್ನು ಹೊಂದಿದೆ.
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO: ಎಗ್ಗಿಲ್ಲದೆ ಬಸ್ಗಳಲ್ಲಿ ಗೂಡ್ಸ್ ಸಾಗಾಟ
ಚಿತ್ರದುರ್ಗದ ಗೊರ್ಲುತ್ತು ಕ್ರಾಸ್ ಬಳಿ ಸೀ ಬರ್ಡ್ ಬಸ್ ದುರಂತ ಪ್ರಕರಣ ಪ್ರಯಾಣಿಕರನ್ನೇ ಬೆಚ್ಚಿ ಬೀಳಿಸಿದೆ. ಆದ್ರೆ ಇಷ್ಟೆಲ್ಲ ಅವಾಂತರವಾದ್ರೂ ಇನ್ನೂ ಕೂಡ ಆರ್ ಟಿ ಓ ಅಧಿಕಾರಿಗಳು ಎಚ್ಚೆತ್ತುಕೊಳ್ತಿಲ್ಲ. ಬೆಂಗಳೂರಿನಿಂದ ಬೇರೆ ಬೇರೆ ಸ್ಥಳಗಳಿಗೆ ಹೋಗುವಂತಹ ಖಾಸಗಿ ಬಸ್ ಗಳಲ್ಲಿ ಪರ್ಮಿಷನ್ ಇಲ್ಲದೆ ಗೂಡ್ಸ್ ಮೆಟಿರಿಯಲ್ ಸಾಗಾಟ ಮಾಡಲಾಗ್ತಿದೆ. ಬಸ್ ಗಳ ಟಾಪ್ ಹಾಗೂ ಲಗೇಜ್ ಬಾಕ್ಸ್ ಗಳಲ್ಲಿ ಎಲ್ಲಿ ನೋಡಿದ್ರೂ ಕೂಡ ಗೂಡ್ಸ್ ಮೆಟಿರಿಯಲ್ ತುಂಬಿಕೊಂಡು ಹೋಗ್ತಾರೆ, ಪ್ರಯಾಣಿಕರ ಲಗೇಜ್ ಇಡೋದಕ್ಕೂ ಜಾಗ ಇಲ್ಲದಂತದ ಪರಿಸ್ಥಿತಿ ಎದುರಾಗಿದೆ ಅಂತ ಪ್ರಯಾಣಿಕರು ಆರೋಪ ಮಾಡ್ತಿದ್ದಾರೆ. ರಾಜಾರೋಷವಾಗಿ ಎಷ್ಟೇ ಗೂಡ್ಸ್ ಮೆಟಿರಿಯಲ್ ತುಂಬಿದ್ರೂ ಆರ್ ಟಿ ಓ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕೇರ್ ಲೆಸ್ ಆಗಿದ್ದಾರೆ.
- Ramesh B Jawalagera
- Updated on: Dec 27, 2025
- 10:34 pm
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 31ರಂದು ಮದ್ಯ ಮಾರಾಟದ ಅವಧಿಯನ್ನು ವಿಸ್ತರಿಸಿ ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ, ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ.
- Ramesh B Jawalagera
- Updated on: Dec 27, 2025
- 10:20 pm
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಮೇಲ್ಜಾತಿ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಲಿಂಗದೀಕ್ಷೆ ಪಡೆದಿದ್ದ ದಲಿತ ಕುಟುಂಬ
ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಹತ್ಯೆ ಇಡೀ ಮಾನವ ಕುಲವೇ ನಾಚುವಂತಹ ಅಮಾನವೀಯ ಘಟನೆ. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಗರ್ಭಿಣಿ ಮಗಳನ್ನೇ ಹೆತ್ತ ತಂದೆ ಬರ್ಬರ ಕೊಲೆ ಮಾಡಿದ್ದ. ಈ ಘಟನೆ ಇಡೀ ದೇಶಾದ್ಯಂತ ದೊಡ್ಡ ಸದ್ದು ಮಾಡಿದೆ. ಮೇಲ್ಜಾತಿ ಯುವತಿಯನ್ನು ಮದುವೆಯಾಗಿದ್ದಕ್ಕೆ ದಲಿತ ಕುಟುಂಬ ಲಿಂಗದೀಕ್ಷೆ ಪಡೆದುಕೊಂಡು ಬಸವತತ್ವ ಪಾಲಿಸುತ್ತಿತ್ತು ಎನ್ನುವ ಅಂಶ ಬೆಳಕಿಗೆ ಬಂದಿದೆ.
- Sanjayya Chikkamath
- Updated on: Dec 27, 2025
- 9:56 pm
SSLC ಫಲಿತಾಂಶ ಸುಧಾರಣೆ ಮಾಡುವ ಶಿಕ್ಷಕರಿಗೆ ಬಂಪರ್ ಗಿಫ್ಟ್ ಘೋಷಿಸಿದ ಸರ್ಕಾರ
ಎಸ್ಎಸ್ಎಲ್ಸಿ ಫಲಿತಾಂಶ ಕುಸಿತವಾಗುತ್ತಿದೆ. ಇದರಿಂದ ಸರ್ಕಾರ ಮೇಲೇತ್ತಲು ಹೊಸ ತಂತ್ರರೂಪಿಸಿದೆ. 2025-26 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಈ ವರ್ಷ 75% ಫಲಿತಾಂಶ ಸಾಧಿಸುವ ಟಾರ್ಗೇಟ್ ಸಿಎಂ ಸಿದ್ಧರಾಮಯ್ಯ ನೀಡಿದ್ದಾರೆ. ಈ ನಡುವೆ ಸರ್ಕಾರದ ಇತರೆ ಕೆಲಸಗಳ ನಡುವೆ ಫಲಿತಾಶಂ ಸುಧಾರಣೆ ಶಿಕ್ಷಕರಿಗೆ ಜಾಲೆಂಜ್ ಎದುರಾಗಿದ್ದು, ಈಗ ಸರ್ಕಾರ ಫಲಿತಾಂಶ ಸುಧಾರಣೆ ಮಾಡುವ ಶಿಕ್ಷಕರಿಗೆ ಗಿಫ್ಟ್ ನೀಡಲು ಮುಂದಾಗಿದೆ.
- Vinay Kashappanavar
- Updated on: Dec 27, 2025
- 9:16 pm
ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳ ಅಜ್ಜನ ಜಾತ್ರೆಗೆ ಸಿದ್ಧತೆ: ಈ ಬಾರಿ ಭಕ್ತರಿಗೆ ಏನು ಸ್ಪೆಷಲ್ ಗೊತ್ತಾ?
ಕೊಪ್ಪಳದ ಗವಿಮಠ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧ. ಜನವರಿ 1 ರಿಂದ 18 ರವರೆಗೆ ನಡೆಯುವ ಮಹಾ ದಾಸೋಹದಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ರಾಜ್ಯಪಾಲರ ಸಮ್ಮುಖದಲ್ಲಿ ರಥೋತ್ಸವ ನಡೆಯಲಿದೆ. ಈ ಬಾರಿ ಮಹಾ ದಾಸೋಹದಲ್ಲಿ ಏನು ಸ್ಪೆಷಲ್ ಎಂಬ ಮಾಹಿತಿ ಇಲ್ಲಿದೆ.
- Shivakumar Pattar
- Updated on: Dec 27, 2025
- 8:46 pm
ಗೋಮಾಂಸ ಸಾಗಿಸುವಾಗ ತಡೆದು ನೈತಿಕ ಪೊಲೀಸ್ಗಿರಿ: ಮಗಳನ್ನು ಬಿಟ್ಟು ಓಡಿಹೋದ ತಂದೆ
ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಮುಂದುವರೆದಿದೆ. ದ್ವಿಚಕ್ರ ವಾಹನದಲ್ಲಿ ಗೋಮಾಂಸ ಸಾಗಿಸುವಾಗ ತಡೆದು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನೈತಿಕ ಪೊಲೀಸ್ ಗಿರಿ ನಡೆಸಿದವರ ವಿರುದ್ಧ ಹಾಗೂ ಅಕ್ರಮ ಗೋಮಾಂಸ ಸಾಗಾಟ ಮಾಡಿದವರ ವಿರುದ್ಧ ಬಜ್ಪೆ ಠಾಣೆಯಲ್ಲಿ ಸ್ವತಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.
- Pruthviraj
- Updated on: Dec 27, 2025
- 8:16 pm
ರಾಹುಲ್ ಗಾಂಧಿ ಬತ್ತಳಿಕೆಯಲ್ಲಿ ಸಿಎಂ ಕುರ್ಚಿ ತೀರ್ಮಾನ: ಸಂಕ್ರಾಂತಿ ಬಳಿಕ ರಾಜಕೀಯ ಕ್ರಾಂತಿ?
ರಾಷ್ಟ್ರ ರಾಜಕಾರಣದ ಹೆಡ್ ಕ್ವಾಟ್ರಸ್ ದೆಹಲಿ ಇಂದು (ಡಿಸೆಂಬರ್ 27) ರಾಜ್ಯದ ಸಿಎಂ ಕುರ್ಚಿ ಬೆಳವಣಿಗೆಗೆ ಏನಾದ್ರು ಸಾಕ್ಷಿ ಆಗಲಿದ್ಯಾ ಎಂಬ ಕುತೂಹಲ ಮೂಡಿತ್ತು. ಯಾಕಂದ್ರೆ ಸಿಎಂ ಸಿದ್ದರಾಮಯ್ಯ CWC ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಬಳಿಕ ರಾಜ್ಯದ ಬಗ್ಗೆ ಏನಾದರೂ ಮಾತನಾಡುತ್ತಾರಾ ಎನ್ನುವುದು ಕೈ ಪಾಳಯದಲ್ಲಿಕುತೂಹಲ ಮೂಡಿಸಿತ್ತು. ಆದ್ರೆ ಇದ್ಯಾವುದು ಆಗದೇ ಸಿಎಂ ಭೇಟಿ ಬರೀ CWC ಸಭೆಗೆ ಸೀಮಿತವಾಗಿದೆ. ಸಿಎಂ ಕಸರತ್ತು ಮಾಡಿದ್ದರಾದರೂ ಅದು ಸಾಧ್ಯವಾಗಿಲ್ಲ. ಅಷ್ಟಕ್ಕೂ ದಿಲ್ಲಿಯಲ್ಲಿ ಆಗಿದ್ದೇನು? ಸಂಕ್ರಾಂತಿ ಬಳಿಕ ರಾಜಕೀಯ ಕ್ರಾಂತಿ ಆಗುತ್ತಾ?
- Ramesh B Jawalagera
- Updated on: Dec 27, 2025
- 7:33 pm
ಆತ ಬಿಟ್ರೂ ಆಕೆ ಬಿಡ್ಲಿಲ್ಲ: ವ್ಯಕ್ತಿಯನ್ನು ಬಲಿ ಪಡೆಯಿತಾ ಮಹಿಳೆಯ ಅಕ್ರಮ ಸಂಬಂಧ?
ಆತನಿಗೆ ಮದುವೆಯಾಗಿ ಪತ್ನಿ ಮಕ್ಕಳಿದ್ದರು. ಕಾರುಗಳನ್ನು ಇಟ್ಟುಕೊಂಡು ಬಾಡಿಗೆಗೆ ಓಡಿಸುವ ಕಾಯಕ ಮಾಡಿಕೊಂಡಿದ್ದ. ತಾನು ಆಯ್ತು ತನ್ನ ಸಂಸಾರ ಆಯ್ತು ಅಂದುಕೊಂಡಿದ್ರೆ ಚನ್ನಾಗಿರುತ್ತಿತ್ತು. ಆದ್ರೆ ಇನ್ನೊಬ್ಬಳ ಸಹವಾಸ ಮಾಡಿ ಇದೀಗ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದು, ವಿವಾಹಿತ ವ್ಯಕ್ತಿಯ ದುಡುಕಿನ ನಿರ್ಧಾರದ ಹಿಂದೆ ಮಹಿಳೆ ಪಾತ್ರದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಏನಿದು ಪ್ರಕರಣ? ವಿವಾಹಿತ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ಯಾಕೆ ಎನ್ನುವ ವಿವರ ಇಲ್ಲಿದೆ.
- Bheemappa Patil
- Updated on: Dec 27, 2025
- 6:45 pm
ದೂರು ನೀಡಿದ ವಿವಾಹಿತ ಮಹಿಳೆಯನ್ನೇ ಪಟಾಯಿಸಿದ ‘ಪೋಲಿ’ಸಪ್ಪ: ನ್ಯಾಯಕ್ಕಾಗಿ ಪತಿ ಹೋರಾಟ
ಕೌಟುಂಬಿಕ ಕಲಹದಿಂದ ದೂರು ನೀಡಿದ್ದ ಮಹಿಳೆಯೊಂದಿಗೆ ಓರ್ವ ಪೊಲೀಸ್ ಅಧಿಕಾರಿ ಅನೈತಿಕ ಸಂಬಂಧ ಬೆಳೆಸಿ, ಸಂಸಾರವನ್ನೇ ಹಾಳು ಮಾಡಿರುವಂತಹ ಗಂಭೀರ ಆರೋಪವೊಂದು ಕೇಳಿಬಂದಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವುದೂ ಬೆಳಕಿಗೆ ಬಂದಿದೆ. ನ್ಯಾಯ ಒದಗಿಸಬೇಕಾದವರೇ ಕುಟುಂಬ ನಾಶಪಡಿಸಿದ್ದರಿಂದ ಆಕ್ರೋಶ ವ್ಯಕ್ತವಾಗಿದೆ. ವಿಜಯಪುರ ಪೊಲೀಸರು ತನಿಖೆ ನಡೆಸಿದ್ದಾರೆ.
- Ashok Yadalli
- Updated on: Dec 27, 2025
- 6:42 pm
ಚಾಮರಾಜನಗರ: ಗಸ್ತು ತೆರಳಿದ್ದಾಗ ಹುಲಿ ದಾಳಿ; ಅರಣ್ಯ ಇಲಾಖೆ ಸಿಬ್ಬಂದಿ ಬಲಿ
ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮರಳಹಳ್ಳಿ ಬಳಿ ಹುಲಿ ದಾಳಿಗೆ ಅರಣ್ಯ ಇಲಾಖೆಯ ಕಳ್ಳಬೇಟೆ ತಡೆ ಶಿಬಿರದ ವಾಚರ್ ಸ್ಥಳದಲ್ಲೇ ದುರಂತ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಗಸ್ತಿಗೆ ತೆರಳಿದ್ದ ವೇಳೆ ಹುಲಿ ಏಕಾಏಕಿ ದಾಳಿ ಮಾಡಿದೆ. ಬಂಡೀಪುರ ಸಿಎಫ್ ಪ್ರಭಾಕರನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
- Suraj Prasad SN
- Updated on: Dec 27, 2025
- 5:48 pm
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇನ್ನೂ ಇದೀಗ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಿಎಂ ಕುರ್ಚಿ ಕಾದಾಟದ ವಿಚಾರವಾಗಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ.
- Ramesh B Jawalagera
- Updated on: Dec 27, 2025
- 5:17 pm
ಸರಗಳ್ಳರ ಹಾವಳಿಗೆ ಮಹಿಳೆಯ ಕಿವಿ ಕಟ್; ಹೊಲಿಗೆ ಹಾಕಿದ ವೈದ್ಯರು: ಆಗಿದ್ದೇನು?
ವಿಜಯಪುರ ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ದಿವಟಗೇರಿ ಗಲ್ಲಿಯಲ್ಲಿ ಮಹಿಳೆಯೊಬ್ಬರ ಮೇಲೆ ಅಮಾನುಷವಾಗಿ ದಾಳಿ ನಡೆಸಿ ಕಿವಿ ಕತ್ತರಿಸಿ ಚಿನ್ನದ ಮಾಂಗಲ್ಯ ಮತ್ತು ಕಿವಿಯೋಲೆಯನ್ನು ಮುಸುಕುಧಾರಿಗಳು ಕಳವು ಮಾಡಿರುವಂತಹ ಘಟನೆ ನಡೆದಿದೆ. ಆ ಮೂಲಕ ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಮುಂದುವರಿದಿದೆ.
- Ashok Yadalli
- Updated on: Dec 27, 2025
- 4:55 pm