Karnataka
ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವಾಗಿದೆ ಹಾಗೂ ದೇಶದ ಆರನೆಯ ದೊಡ್ಡ ರಾಜ್ಯ. ಕರ್ನಾಟಕವನ್ನು ಹಿಂದೆ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು, ಇದು ಭಾರತದ ನೈಋತ್ಯ ಪ್ರದೇಶದ ರಾಜ್ಯವಾಗಿದೆ. ಇದು 1 ನವೆಂಬರ್ 1956 ರಂದು ರಾಜ್ಯಗಳ ಮರುಸಂಘಟನೆ ಕಾಯ್ದೆಯ ಅಂಗೀಕಾರದೊಂದಿಗೆ ಮೈಸೂರು ರಾಜ್ಯವಾಗಿ ರೂಪುಗೊಂಡಿತು ಮತ್ತು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇತರ ನಾಲ್ಕು ದಕ್ಷಿಣ ಭಾರತದ ಸಹೋದರಿ ರಾಜ್ಯಗಳೊಂದಿಗೆ ಭೂ ಗಡಿಯನ್ನು ಹೊಂದಿರುವ ಏಕೈಕ ದಕ್ಷಿಣ ರಾಜ್ಯ ಕರ್ನಾಟಕ. ಈ ರಾಜ್ಯವು 191,791 km2 (74,051 ಚದರ ಮೈಲಿ), ಅಥವಾ ಭಾರತದ ಒಟ್ಟು ಭೌಗೋಳಿಕ ಪ್ರದೇಶದ 5.83 ಪ್ರತಿಶತದಷ್ಟು ವಿಸ್ತೀರ್ಣವನ್ನು ಹೊಂದಿದೆ.
ಬೆಂಗಳೂರಿನಲ್ಲಿ ಕೋಳಿ ಮೊಟ್ಟೆ ದರ ಏರಿಕೆ: ಕ್ರಿಸ್ಮಸ್, ಹೊಸ ವರ್ಷ ಹಿನ್ನೆಲೆ ಬೇಡಿಕೆ ಹೆಚ್ಚಳ
Bangalore Egg Price: ದಿನದಿಂದ ದಿನಕ್ಕೆ ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರತ್ತಿದೆ. ಈ ಸಾಲಿಗೆ ಇದೀಗ ಕೋಳಿ ಮೊಟ್ಟೆಯೂ ಸೇರಿದೆ. ಕ್ರಿಸ್ಮಸ್, ಹೊಸ ವರ್ಷ ಬೆಂಗಳೂರಿನಲ್ಲಿ ಕೋಳಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಮೊಟಟೆಯ ಕೊರತೆ ಎದುರಾಗಿದ್ದು, ಇದರಿಂದ ಮೊಟ್ಟೆ ಬೆಲೆ ಏರಿಕೆ ಆಗಿದೆ ನೋಡಿ.
- Kiran Surya
- Updated on: Dec 5, 2025
- 8:28 am
ಕರ್ನಾಟಕ ಹವಾಮಾನ ವರದಿ: ರಾಜ್ಯಯದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ
Karnataka Weather: ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತು ಕರಾವಳಿ ಪ್ರದೇಶದಲ್ಲಿ ಇಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ವಾತಾವರಣ ಮುಂದುವರೆಯಲಿದ್ದು, ಬೆಂಗಳೂರಿನಲ್ಲಿಯೂ ಮಂಜು ಮುಸುಕಿದ ವಾತಾವರಣದ ಮುನ್ಸೂಚನೆ ಇದೆ.
- Bhavana Hegde
- Updated on: Dec 5, 2025
- 7:26 am
Daily Devotional: ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜನ್ಮ ದಿನಾಂಕ ಅಥವಾ ಜಾತಕ ಇಲ್ಲದವರು ತಮ್ಮ ಭವಿಷ್ಯದ ಬಗ್ಗೆ ಆತಂಕ ಪಡಬೇಕಾಗಿಲ್ಲ. ಅಂತಹವರಿಗೆ ಧರ್ಮಶಾಸ್ತ್ರಗಳಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಸೂರ್ಯ ನಮಸ್ಕಾರ, ಆದಿತ್ಯ ಹೃದಯಂ, ಋಣ ವಿಮೋಚಕ ಅಂಗಾರಕ ಸ್ತೋತ್ರ, ವಿಷ್ಣು ಸಹಸ್ರನಾಮ ಮತ್ತು ಹನುಮಾನ್ ಚಾಲೀಸಾದಂತಹ ಆಚರಣೆಗಳು ಶುಭ ಫಲಗಳನ್ನು ತರಬಲ್ಲವು.
- Bhavana Hegde
- Updated on: Dec 5, 2025
- 6:53 am
Horoscope Today 05 December: ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 5ರ ಶುಕ್ರವಾರದ ದೈನಂದಿನ ರಾಶಿ ಭವಿಷ್ಯವನ್ನು ನೀಡಿದ್ದಾರೆ. ಈ ದಿನ ಗುರು ಗ್ರಹದ ಮಿಥುನ ರಾಶಿಗೆ ಸಂಚಾರ, ರೋಹಿಣಿ ನಕ್ಷತ್ರದ ಪ್ರಭಾವ ಮತ್ತು ಪ್ರಮುಖ ಯೋಗಗಳು ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವನ್ನು ವಿವರಿಸಿದ್ದಾರೆ. ಆರ್ಥಿಕ, ಆರೋಗ್ಯ, ಕೌಟುಂಬಿಕ ಮತ್ತು ವೃತ್ತಿ ಜೀವನದ ಕುರಿತು ವಿವರವಾದ ಫಲಗಳನ್ನು ತಿಳಿಸಿದ್ದಾರೆ.
- Bhavana Hegde
- Updated on: Dec 5, 2025
- 6:48 am
IndiGo flights: 550 ಇಂಡಿಗೋ ವಿಮಾನಗಳ ಸಂಚಾರ ರದ್ದು, ಬೆಂಗಳೂರು ಸೇರಿ ಹಲವೆಡೆ ಪ್ರಯಾಣಿಕರ ಒದ್ದಾಟ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ಸತತ ಮೂರನೇ ದಿನವೂ ವ್ಯತ್ಯಯವಾಗಿದ್ದು, ಬೆಂಗಳೂರು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ 550 ವಿಮಾನಗಳ ಸಂಚಾರ ದಿಢೀರ್ ರದ್ದಾಗಿವೆ. ಪೈಲಟ್ಗಳು, ಸಿಬ್ಬಂದಿ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಹಾಗಾದರೆ ಏಕಾಏಕಿ ಪೈಟಲ್, ಸಿಬ್ಬಂದಿ ಕೊರೆ ಆಗಿದ್ದು ಹೇಗೆ? ಹೀಗಾಗಲು ಅಸಲಿ ಕಾರಣ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.
- Ganapathi Sharma
- Updated on: Dec 5, 2025
- 6:48 am
ಗದಗ ಚಿನ್ನದಂಗಡಿ ದೋಚಿ ಬಸ್ ಸ್ಟ್ಯಾಂಡ್ನಲ್ಲಿ ಹಾಲು ಕುಡಿದಿದ್ದ; ಇಲ್ಲಿದೆ ಸಿಸಿಟಿವಿ ದೃಶ್ಯ
ಗದಗದ ಚಿನ್ನದಂಗಡಿ ದೋಚಿದ್ದ ಗುಜರಾತ್ ಮೂಲದ ಕಳ್ಳ ಕೊನೆಗೂ ಸೆರೆಸಿಕ್ಕಿದ್ದಾನೆ. ಕಳ್ಳತನ ನಡೆದ 6 ಗಂಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಅಂತಾರಾಜ್ಯ ಕಳ್ಳನನ್ನು ಸದ್ಯ ಗದಗ ಜಿಲ್ಲಾ ಪೊಲೀಸ ಬಂಧಿಸಿದ್ದಾರೆ. ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಕಳ್ಳನ ಚಲನವನಲದ ದೃಶ್ಯ ಸೆರೆಯಾಗಿತ್ತು. ವಿಡಿಯೋ ನೋಡಿ.
- Sanjeev Pandre
- Updated on: Dec 4, 2025
- 10:41 pm
ಮಂಗಳೂರಿನಲ್ಲಿ ವೇಣುಗೋಪಾಲ್ ಎದುರು ಡಿಕೆ ಡಿಕೆ ಘೋಷಣೆ: ಡಿಕೆಶಿ ಆಪ್ತನಿಗೆ ಹೈಕಮಾಂಡ್ ಬಿಗ್ ಶಾಕ್
ಸಿದ್ದರಾಮಯ್ಯ ಸರ್ಕಾರ ಮೊನ್ನೆ ಎರಡುವರೆ ವರ್ಷ ಪೂರೈಸುತ್ತಿದ್ದಂತೆಯೇ ಅಧಿಕಾರ ಹಂಚಿಕೆ ಕದನ ಜೋರಾಗಿತ್ತು. ಡಿಕೆ ಶಿವಕುಮಾರ್ ಹಾಗೂ ಅವರ ಬಣ ಸಿಎಂ ಕುರ್ಚಿ ಬೇಕೇಬೇಕೆಂದು ಪಟ್ಟು ಹಿಡಿದು ನಾನಾ ಕಸರತ್ತು ನಡೆಸಿತ್ತು. ಕೊನೆಗೆ ಹೈಕಮಾಂಡ್ ಮಧ್ಯೆಪ್ರವೇಶಿಸಿ ಸಿಎಂ ಮತ್ತು ಡಿಸಿಎಂಗೆ ಕರೆ ಮಾಡಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ ಗೊಂದಲ ಬಗೆಹರಿಸುವಂತೆ ಸೂಚಿಸಿತ್ತು. ಅದರಂತೆ ಎಲ್ಲಾ ಆಗಿ ಶಾಂತವಾಗಿತ್ತು. ಆದ್ರೆ, ಎಐಸಿಸಿ ಪ್ರಧಾನಿ ಕಾರ್ಯದರ್ಶಿ ವೇಣುಗೋಪಾಲ್ ಮಂಗಳೂರಿಗೆ ಆಗಮಿಸಿದ್ದ ವೇಳೆ ಡಿಕೆ ಡಿಕೆ ಘೋಷಣೆ ಮೊಳಗಿತ್ತು. ಈ ಸಂಬಂಧ ಇದೀಗ ಡಿಕೆಶಿ ಆಪ್ತನಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ.
- Pruthviraj
- Updated on: Dec 4, 2025
- 10:33 pm
ಮದ್ವೆಯಾಗಿದ್ರೂ ಅತ್ತೆ ಮಗಳ ಮೇಲಾಸೆ: ಆಕೆ ದೂರವಾದ ಸಿಟ್ಟಿಗೆ ಮಾವ ಮಾಡಿದ್ದೇನು ಗೊತ್ತಾ?
ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ಗೃಹಿಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನದ ಬಳಿಕ ಹಂತಕ ಪೊಲೀಸರಿಗೆ ಸಿಕ್ಕಿಬಿದ್ದಾನೆ. ತನ್ನಿಂದ ದೂರವಾದ ಸಿಟ್ಟಿಗೆ ಅತ್ತೆ ಮಗಳನ್ನೇ ಆರೋಪಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಸದ್ಯ ಆಲ್ದೂರು ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
- Ashwith Mavinaguni
- Updated on: Dec 4, 2025
- 10:02 pm
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಬಸ್ನಲ್ಲಿ ಸಿಕ್ಕಿಬಿದ್ದಿದ್ದೇ ರೋಚಕ
ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡೆಸೆಕೆರೆ ಗ್ರಾಮದ (Hindisgere village) ತೋಟದ ಮನೆಯಲ್ಲಿ ಮಂಜುಳಾ ಕೊಲೆ ಪ್ರಕರಣದ (Manjula Murder Case) ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸೆಂಬರ್ 1ರಂದು ತೋಟದ ಮನೆಯಲ್ಲಿ ಮಂಜುಳಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ದಿನವೇ ಮಧು ಎಂಬಾತನ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅದರ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಕಾರ್ಯಚರಣೆ ನಡೆಸಿ ಹಂತಕ ಮಧುನನ್ನು ಪುಣೆಯಲ್ಲಿ ಬಂಧಿಸಿದ್ದಾರೆ. ವಿಶೇಷ ಅಂದ್ರೆ ಪೊಲೀಸರೇ ಹೋಗಿ ಬಂಧಿಸಿಲ್ಲ. ಬಸ್ ಡ್ರೈವರ್ನಿಂದ ಆರೋಪಿಯನ್ನು ಲಾಕ್ ಮಾಡಿಸಿದ್ದಾರೆ. ಹಾಗಾದ್ರೆ, ಹಂತಕ ಮಧು ಎಲ್ಲಿಗೆ ಹೊರಟ್ಟಿದ್ದ? ಹೇಗೆ ಸಿಕ್ಕಿಬಿದ್ದ ಎನ್ನುವ ಮಾಹಿತಿಯನ್ನು ಎಸ್ಪಿಯವರು ಬಿಚ್ಚಿಟ್ಟಿದ್ದಾರೆ.
- Ramesh B Jawalagera
- Updated on: Dec 4, 2025
- 9:44 pm
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಬೆಂಗಳೂರು ಏರ್ಪೋರ್ಟ್ನಲ್ಲಿ ಪ್ರಯಾಣಿಕರ ಗೋಳಾಟ ನೋಡಿ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ಗೆ ದೆಹಲಿಯಿಂದ ಬರಬೇಕಿದ್ದ ಇಂಡಿಗೋ ವಿಮಾನ 12 ಗಂಟೆ ವಿಳಂಬದಿಂದ ಪ್ರಯಾಣಿಕರು ಪರದಾಡಿದ್ದಾರೆ. 3 ದಿನದಲ್ಲಿ ಇಂಡಿಗೋ ವಿಮಾನಗಳ 205 ಸಂಚಾರ ರದ್ದಾಗಿದೆ. ವಿಮಾನಗಳು ನಿಂತಲ್ಲೇ ನಿಂತಿದ್ರೆ, ಪ್ರಯಾಣಿಕರು ಡಿಪಾರ್ಚರ್ ಗೇಟ್ ಬಳಿ ಕೂರಲು ಜಾಗವಿಲ್ಲದೆ ದಿಕ್ಕೆಟ್ಟಿದ್ರು.
- Naveen Kumar
- Updated on: Dec 4, 2025
- 9:10 pm