
Karnataka
ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವಾಗಿದೆ ಹಾಗೂ ದೇಶದ ಆರನೆಯ ದೊಡ್ಡ ರಾಜ್ಯ. ಕರ್ನಾಟಕವನ್ನು ಹಿಂದೆ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು, ಇದು ಭಾರತದ ನೈಋತ್ಯ ಪ್ರದೇಶದ ರಾಜ್ಯವಾಗಿದೆ. ಇದು 1 ನವೆಂಬರ್ 1956 ರಂದು ರಾಜ್ಯಗಳ ಮರುಸಂಘಟನೆ ಕಾಯ್ದೆಯ ಅಂಗೀಕಾರದೊಂದಿಗೆ ಮೈಸೂರು ರಾಜ್ಯವಾಗಿ ರೂಪುಗೊಂಡಿತು ಮತ್ತು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇತರ ನಾಲ್ಕು ದಕ್ಷಿಣ ಭಾರತದ ಸಹೋದರಿ ರಾಜ್ಯಗಳೊಂದಿಗೆ ಭೂ ಗಡಿಯನ್ನು ಹೊಂದಿರುವ ಏಕೈಕ ದಕ್ಷಿಣ ರಾಜ್ಯ ಕರ್ನಾಟಕ. ಈ ರಾಜ್ಯವು 191,791 km2 (74,051 ಚದರ ಮೈಲಿ), ಅಥವಾ ಭಾರತದ ಒಟ್ಟು ಭೌಗೋಳಿಕ ಪ್ರದೇಶದ 5.83 ಪ್ರತಿಶತದಷ್ಟು ವಿಸ್ತೀರ್ಣವನ್ನು ಹೊಂದಿದೆ.
ಅಜ್ಜಿ ಮೃತದೇಹಕ್ಕೆ ಪೂಜೆ ಸಲ್ಲಿಸಿ ದುಃಖದಲ್ಲಿಯೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ
ಇಂದು ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಿವೆ. ಆದರೆ ಗದಗ ಜಿಲ್ಲೆಯಲ್ಲಿ ಅಜ್ಜಿಯ ಸಾವಿನ ನೋವಿನಲ್ಲೂ ವಿದ್ಯಾರ್ಥಿನಿ ಧೈರ್ಯದಿಂದ ಪರೀಕ್ಷೆ ಬರೆದ ಘಟನೆ ನಡೆದಿದೆ. ಮತ್ತೊಂದು ಘಟನೆಯಲ್ಲಿ, ಪರೀಕ್ಷಾ ಕೇಂದ್ರದಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದ ಬಳಿಕ ಮತ್ತೆ ಪರೀಕ್ಷೆಗೆ ಹಾಜರಾದ ಘಟನೆ ನಡೆದಿದೆ.
- Sanjeev Pandre
- Updated on: Mar 21, 2025
- 6:04 pm
Karnataka Budget session: ಸಭಾಧ್ಯಕ್ಷನ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಿದ ಸ್ಪೀಕರ್ ಯುಟಿ ಖಾದರ್
ಸಭಾಧ್ಯಕ್ಷ ಖಾದರ್ ಸದಸ್ಯರನ್ನು ಸಸ್ಪೆಂಡ್ ಮಾಡುವ ಮೊದಲು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್, ಬಿಜೆಪಿ ಶಾಸಕರು ತಮ್ಮ ವರ್ತನೆಯಿಂದ ಸ್ಪೀಕರ್ ಸ್ಥಾನಕ್ಕೆ ಅಗೌರವ ತಂದಿದ್ದಾರೆ, ಅವರ ವರ್ತನೆಯನ್ನು ಸದನ ಕ್ಷಮಿಸುವುದು ಸಾಧ್ಯವಿಲ್ಲ, ಅವರನ್ನು ಸಸ್ಪೆಂಡ್ ಮಾಡಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ನಂತರ ಖಾದರ್ ಶಾಸಕರ ಹೆಸರುಗಳನ್ನು ಓದಿ ವಜಾ ಮಾಡಿರುವುದಾಗಿ ಘೋಷಿಸುತ್ತಾರೆ.
- Arun Belly
- Updated on: Mar 21, 2025
- 5:46 pm
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನನ್ನ ಹೊರಹಾಕಿದ ಮಾರ್ಷಲ್ಸ್
ಸ್ಪೀಕರ್ ಪೀಠಕ್ಕೆ ಅಪಮಾನ ಮಾಡಿದ್ದಾರೆಂದು ಬಿಜೆಪಿ 18 ಶಾಸಕರನ್ನು 6 ತಿಂಗಳ ಕಾಲ ವಿಧಾನಸಭೆ ಕಲಾಪದಿಂದ ಸಸ್ಪೆಂಡ್ ಮಾಡಿ ಸ್ಪೀಕರ್ ರೂಲಿಂಗ್ ಹೊರಡಿಸಿದರು. ಬಳಿಕ ಮಾರ್ಷಲ್ಸ್, ಒಬ್ಬೊಬ್ಬರನ್ನೇ ಎತ್ತಿಕೊಂಡು ಹೋಗಿ ಆಚೆ ಹಾಕಿದರು. ಇನ್ನು ಸ್ಫೀಕರ್ ಅವರ ಈ ಕ್ರಮಕ್ಕೆ ಬಿಜೆಪಿ ನಾಯಕರು ಖಂಡಿಸಿದ್ದಾರೆ. ಇನ್ನು ಮಾರ್ಷಲ್ಸ್ ಹೇಗೆ ಎತ್ತಿಕೊಂಡು ಹೊರಹಾಕುತ್ತಿದ್ದಾರೆ ನೋಡಿ.
- Ramesh B Jawalagera
- Updated on: Mar 21, 2025
- 5:33 pm
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ದಾವಣಗೆರೆ ಜಿಲ್ಲಾ ನ್ಯಾಯಾಧೀಶರ ಮನೆಗೆ ಕಳ್ಳತನ ಮಾಡಲು ಐದು ಜನರ ತಂಡ ಪ್ರಯತ್ನಿಸಿ ವಿಫಲವಾಗಿದೆ. ಕುಂದುವಾಡದ ತುಂಗಭದ್ರಾ ಬಡಾವಣೆಯಲ್ಲಿ ಘಟನೆ ನಡೆದಿದೆ. ಜಡ್ಜ್ ಮನೆಗೆ ಹಿಂದಿನ ಬಾಗಿಲಿನಿಂದ ಕಳ್ಳತನಕ್ಕೆ ಕಳ್ಳರು ಬಂದಿದ್ದು, ಈ ವೇಳೆ ಜಡ್ಜ್ ಮನೆಗೆ ಭದ್ರತೆ ನೀಡಿದ್ದ ಪೊಲೀಸರು ಕಂಡು ಓಡಿ ಹೋಗಿದ್ದಾರೆ.
- Basavaraj Doddamani
- Updated on: Mar 21, 2025
- 5:21 pm
Karnataka Assembly Session: ಕಾಂಗ್ರೆಸ್ ಎಮ್ಮೆಲ್ಸಿ ಪುಟ್ಟಣ್ಣರಿಂದ ಆಕ್ಷೇಪಾರ್ಹ ಪದ ಬಳಕೆ, ವಿಪಕ್ಷ ಸದಸ್ಯರಿಂದ ಗಲಾಟೆ
ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರಾದರೂ ಸಾಧ್ಯವಾಗಲ್ಲ. ಪುಟ್ಟಣ್ಣ ಅವರು ಬಳಸಿದ ಪದವನ್ನು ಕಡತದಿಂದ ತೆಗೆದುಹಾಕಿರುವುದಾಗಿ ಹೊರಟ್ಟಿ ಅವರು ಹೇಳುತ್ತಾರೆ, ಅದರೆ ವಿಪಕ್ಷಗಳ ಸದಸ್ಯರು ಮಾತ್ರ ಸುಮ್ಮನಾಗಲ್ಲ. ಅಸಲಿಗೆ ಸಿದ್ದರಾಮಯ್ಯ ಮತ್ತ ಶಿವಕುಮಾರ್ ಪರಿಷತ್ನೊಳಗೆ ಬಂದ ಬಳಿಕ ಗಲಾಟೆ ಮತ್ತಷ್ಟು ಜೋರು ಹಿಡಿಯುತ್ತದೆ.
- Arun Belly
- Updated on: Mar 21, 2025
- 4:41 pm
ಗಲಾಟೆ-ಗದ್ದಲ: ವಿಧಾನಸಭೆ ಕಲಾಪದಿಂದ 6 ತಿಂಗಳವರೆಗೆ 18 ಬಿಜೆಪಿ ಸದಸ್ಯರ ಅಮಾನತು
ಸದನದಲ್ಲಿ ಭಾರೀ ಗಲಾಟೆ ಗದ್ದಲ ಎಬ್ಬಿಸಿದ್ದರಿಂದ ವಿಪಕ್ಷ ಬಿಜೆಪಿಯ 18 ಸದಸ್ಯರನ್ನು ಅಮಾನತು ಮಾಡಲಾಗಿದೆ. ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಆರೋಪ ಮೇಲೆ 8 ಸದಸ್ಯರರುಗಳನ್ನು ವಿಧಾನಸಭೆ ಕಲಾಪದಿಂದ 6 ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ರೂಲಿಂಗ್ ಹೊರಡಿಸಿದ್ದಾರೆ. ಏಕೆ ಅಮಾನತು? ಯಾಕಾಗಿ ಗದ್ದಲ? ಅಮಾನತುಗೊಂಡುವರು ಯಾರ್ಯಾರು?
- Web contact
- Updated on: Mar 21, 2025
- 5:29 pm
ಅಂಗನವಾಡಿಯಲ್ಲಿ ಮಗು ಹಠ ಮಾಡುತ್ತೆಂದು ಕೈಗೆ ಬರೆ: ಡೈಪರ್ಗೆ ಖಾರದಪುಡಿ ಹಾಕಿ ವಿಕೃತಿ!
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜಕಟ್ಟೆ ಗ್ರಾಮದ ಅಂಗನವಾಡಿ ಸಹಾಯಕಿಯಿಂದ ಎರಡು ವರ್ಷದ ಮಗುವಿನ ಮೇಲೆ ವಿಕೃತಿ ಮೆರೆಯಲಾಗಿದೆ. ಹಠ ಮಾಡುತ್ತಿದ್ದ ಎಂಬ ಕಾರಣಕ್ಕೆ ಮಗುವಿನ ಕೈಗೆ ಬರೆ ಎಳೆದು ಡೈಪರ್ಗೆ ಖಾರದಪುಡಿ ಹಾಕಿದ್ದಾರೆ. ಪೋಷಕರ ದೂರಿನ ಮೇರೆಗೆ ಅಂಗನವಾಡಿ ಸಹಾಯಕಿಯನ್ನು ಅಮಾನತುಗೊಳಿಸಲಾಗಿದೆ.
- Syed Nizamuddin
- Updated on: Mar 21, 2025
- 4:11 pm
ಪ್ರೀತ್ಸೆ ಎಂದು 19ರ ಯುವತಿ ಹಿಂದೆ ಬಿದ್ದ 47ರ ವ್ಯಕ್ತಿ: ಅಂಕಲ್ ಕಿರುಕುಳಕ್ಕೆ ವಿದ್ಯಾರ್ಥಿನಿ ದುರಂತ ಸಾವು
ಅವಳು ಸ್ಟೂಡೆಂಟ್, ಆತ 47 ವರ್ಷದ ಅಂಕಲ್. ಆದ್ರೆ, ಮಗಳ ವಯಸ್ಸಿನ ಯುವತಿಗೆ ಪ್ರೀತ್ಸೆ.. ಪ್ರೀತ್ಸೆ ಎಂದು ದುಂಬಾಲು ಬಿದ್ದಿದ್ದ. ಅಷ್ಟೇ ಅಲ್ಲ ಮದುವೆಯಾಗುವಂತೆ ಕಿರುಕುಳ ನೀಡಿದ್ದಾನೆ. ಸಾಲದಕ್ಕೆ ಮದುವೆಗೆ ಒಪ್ಪದಿದ್ದರೆ ಇಬ್ಬರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಗೊಂಡ 9 ವರ್ಷದ ಯುವತಿ ದುರಂತ ಸಾವು ಕಂಡಿದ್ದಾಳೆ.
- Sanjeev Pandre
- Updated on: Mar 21, 2025
- 4:06 pm
ಕರ್ನಾಟಕ ಬಂದ್: ಸಾರಿಗೆ ಸಂಘಟನೆಗಳಿಗೆ ಪೊಲೀಸ್ ನೋಟಿಸ್, ಕಾನೂನು ಕ್ರಮದ ಎಚ್ಚರಿಕೆ
ಮಾರ್ಚ್ 22ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಎಂಇಎಸ್ನ ಪುಂಡಾಟ, ಕಳಸಾ-ಬಂಡೂರಿ ಯೋಜನೆ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮುಂತಾದ ವಿಷಯಗಳನ್ನು ಒತ್ತಾಯಿಸಿ ಈ ಬಂದ್ಗೆ ಕರೆ ನೀಡಲಾಗಿದೆ. ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ನೈತಿಕ ಬೆಂಬಲ ಸೂಚಿಸಿದ್ದು, ನಾಳೆ ಎಂದಿನಂತೆ ಬಸ್ ಸಂಚಾರವಿರಲಿದೆ ಎಂದು ತಿಳಿಸಿದೆ. ಬೆಂಗಳೂರಿನಲ್ಲಿ ಬಿಗಿ ಭದ್ರತೆಗೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
- Kiran Surya
- Updated on: Mar 21, 2025
- 3:24 pm
ಸರ್ಕಾರ ಹನಿ ಟ್ರ್ಯಾಪ್ ಪ್ರಕರಣದ ತನಿಖೆ ನಡೆಸಿದರೆ ಸತ್ಯ ಹೊರಬರಲ್ಲ, ಸಿಬಿಐನಿಂದಲೇ ಆಗಬೇಕು: ಎಸ್ಆರ್ ವಿಶ್ವನಾಥ್
ಇವತ್ತಿನ ಕಲಾಪದಲ್ಲಿ ಬಿಜೆಪಿಯ ಶಾಸಕರು ಸ್ಪೀಕರ್ ಪೀಠದತ್ತ ನುಗ್ಗಿ ಗಲಾಟೆ ಮಾಡುವುದರ ಜೊತೆಗೆ ಪೇಪರ್ಗಳನ್ನು ಹರಿದು ಸಭಾಧ್ಯಕ್ಷರ ಮೇಲೆ ಎಸೆದಿದ್ದನ್ನು ಎಸ್ಅರ್ ವಿಶ್ವನಾಥ್ ಸಮರ್ಥಿಸಿಕೊಂಡರು. ಬಿಜೆಪಿ ಶಾಸಕರು ಅರಚಾಡಿದರೂ ಮಾತಿಗೆ ಮನ್ನಣೆ ಸಿಗದಿದ್ದರೆ ಏನು ಮಾಡಲಾದೀತು? 2009ರಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ನ ಸಿದ್ದರಾಮಯ್ಯ ಸ್ಪೀಕರ್ ಜೊತೆ ಹೇಗೆ ನಡೆದುಕೊಂಡಿದ್ದರು ಅಂತ ಚೆನ್ನಾಗಿ ಗೊತ್ತು ಎಂದು ಶಾಸಕ ಹೇಳಿದರು.
- Arun Belly
- Updated on: Mar 21, 2025
- 3:12 pm