ದಾವಣಗೆರೆಯ ನಾಲ್ವರಿಗೆ ಜೈನ ಸನ್ಯಾಸ ಧೀಕ್ಷೆ: ಸನ್ಯಾಸತ್ವ ಪಡೆಯುವುದರ ಹಿಂದಿದೆ ಈ ಬಲವಾದ ಕಾರಣ
ದಾವಣಗೆರೆ ಜೈನ ಸಮುದಾಯದಲ್ಲಿ ಅಚ್ಚರಿಯ ಸನ್ಯಾಸ ದೀಕ್ಷೆ: ಉನ್ನತ ಶಿಕ್ಷಣ ಪಡೆದ ಇಬ್ಬರು ಯುವತಿಯರು ಹಾಗೂ ಅವರೊಂದಿಗೆ ಇಬ್ಬರು ಪೋಷಕರು ಆಧ್ಯಾತ್ಮಿಕ ಮಾರ್ಗಕ್ಕೆ ಅಡಿ ಇಟ್ಟಿದ್ದಾರೆ. ಕೋಟ್ಯಾಧಿಪತಿಗಳ ಮಕ್ಕಳು, ಎಂಬಿಎ ಪದವೀಧರೆಯೂ ಸೇರಿ ಸಂಪತ್ತು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇವರ ಇಬ್ಬರು ಗಂಡು ಮಕ್ಕಳೂ ಈಗಾಗಲೇ ಸನ್ಯಾಸಿಗಳಾಗಿದ್ದು, ಇಡೀ ಕುಟುಂಬವೇ ಆಧ್ಯಾತ್ಮದತ್ತ ಮುಖ ಮಾಡಿದೆ. ದಾವಣಗೆರೆ ಚೌಕಿಪೇಟೆಯಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆಯ ಗಮನ ಸೆಳೆದಿದೆ.
- Basavaraj Doddamani
- Updated on: Mar 3, 2026
- 10:22 pm
ಎಲೆಕ್ಷನ್ಗೆ 2 ವರ್ಷ ಮೊದಲೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಬಿಎಸ್ವೈ ವಿರುದ್ಧ ಭುಗಿಲೆದ್ದ ಆಕ್ರೋಶ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಆದ್ರೆ, ಎರಡು ವರ್ಷ ಮೊದಲೇ ಬಿ.ಎಸ್. ಯಡಿಯೂರಪ್ಪ ಅವರು ದಾವಣಗೆರೆ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದಾರೆ. ಇದರಿಂದ ಪಕ್ಷದಲ್ಲಿ ಅಸಮಾಧಾನ ಭುಗಿಲೆದಿದ್ದು, ಬಿಎಸ್ವೈ ವಿರುದ್ಧ ಸ್ವಪಕ್ಷೀಯ ಮುಖಂಡರು ತಿರುಗಿಬಿದ್ದಿದ್ದಾರೆ.
- Basavaraj Doddamani
- Updated on: Mar 3, 2026
- 6:23 pm
Jain Sanyasa Deeksha: ದಾವಣಗೆರೆಯ ಜೈನ ಸಮಾಜದ ನಾಲ್ವರಿಂದ ಸನ್ಯಾಸ ದೀಕ್ಷೆ ಸ್ವೀಕಾರ
ದಾವಣಗೆರೆಯಲ್ಲಿ ಮಾರ್ಚ್ 4ರಂದು ಐತಿಹಾಸಿಕ ಜೈನ್ ದೀಕ್ಷಾ ಮಹೋತ್ಸವ ನಡೆಯಲಿದೆ. ಪ್ರಸಿದ್ಧ ಉದ್ಯಮಿ ದಂಪತಿ ಸೇರಿ ಎಂಬಿಎ ಮತ್ತು ಬಿಕಾಂ ಪದವೀಧರರಾದ ಇಬ್ಬರು ಯುವತಿಯರು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಜೈನ ಗುರು ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಸಮ್ಮುಖದಲ್ಲಿ ಈ ಅಪರೂಪದ ಆಧ್ಯಾತ್ಮಿಕ ಘಟನೆ ಜರುಗಲಿದೆ.
- Basavaraj Doddamani
- Updated on: Mar 3, 2026
- 11:50 am
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ದಾವಣಗೆರೆ ಕೆಂಪು ಮಣ್ಣಿನ ಕುಸ್ತಿ: ಬೆಣ್ಣೆನಗರಿಯಲ್ಲಿ ಮಿಂಚಿದ ವಿದೇಶಿ ಪೈಲ್ವಾನ್ಗಳು
ದಾವಣಗೆರೆಯ ದುಗ್ಗಮ್ಮ ಜಾತ್ರೆಯು ಭಕ್ತಿ, ಪರಂಪರೆ ಮತ್ತು ಶೌರ್ಯದ ಪ್ರತೀಕ. ಈ ಬಾರಿಯ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯು ಜನಮನ ಸೆಳೆಯಿತು. ದೇಶ-ವಿದೇಶಗಳ ಪೈಲ್ವಾನ್ರು ಭಾಗವಹಿಸಿ ರೋಚಕ ಸೆಣಸಾಟ ನಡೆಸಿದರು. ಇರಾನ್, ಮಹಾರಾಷ್ಟ್ರದ ನಡುವಿನ ಅಂತಿಮ ಪಂದ್ಯ ಡ್ರಾ ಆಯಿತು. ಈ ಜಾತ್ರೆಯು ದೇಸಿ ಹಾಗೂ ಜಾಗತಿಕ ಕುಸ್ತಿ ಕಣವಾಗಿ ಖ್ಯಾತಿ ಗಳಿಸಿದೆ. ಫೋಟೋಸ್ ಇಲ್ಲಿವೆ.
- Basavaraj Doddamani
- Updated on: Mar 2, 2026
- 5:10 pm
‘ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ’: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಇರಾನ್-ಇಸ್ರೇಲ್ ಯುದ್ಧದ ಆತಂಕದ ನಡುವೆಯೂ, ಇರಾನ್ ಕುಸ್ತಿಪಟು ಮಿರ್ಜಾ ದಾವಣಗೆರೆಯ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾ ಪ್ರೇಮ ಮೆರೆದರು. ಮಹಾರಾಷ್ಟ್ರದ ರವಿರಾಜ್ ವಿರುದ್ಧ ರೋಚಕ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು. ಮಿರ್ಜಾ ಅವರ ಧೈರ್ಯ ಮತ್ತು ಹಿಂದೂಸ್ತಾನದ ಬಗೆಗಿನ ಅವರ ಪ್ರೀತಿ ದಾವಣಗೆರೆಯ ಜನರನ್ನು ಗೆದ್ದಿತು, ಗೌರವಾರ್ಥವಾಗಿ 1 ಲಕ್ಷ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
- Basavaraj Doddamani
- Updated on: Mar 2, 2026
- 2:02 pm
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಗೊಂದಲ ಮತ್ತು ಅನಿಶ್ಚಿತತೆಯ ಬಗ್ಗೆ ಸತೀಶ್ ಜಾರಕಿಹೊಳಿ ಅವರು ಮಾತನಾಡಿದ್ದಾರೆ. ಶಾಸಕರು, ಕಾರ್ಯಕರ್ತರು ಮತ್ತು ಅಧಿಕಾರಿಗಳಲ್ಲಿ ಸ್ಪಷ್ಟತೆಯ ಕೊರತೆಯಿದೆ ಎಂಬುದನ್ನು ಒಪ್ಪಿಕೊಂಡಿರುವ ಅವರು, ಪರಿಸ್ಥಿತಿ ತಿಳಿಗೊಳಿಸಲು ಹೈಕಮಾಂಡ್ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್ನಿಂದ ಸ್ಪಷ್ಟ ನಿರ್ದೇಶನ ಬಂದರೆ ಮಾತ್ರ ಈ ಗೊಂದಲ ನಿಲ್ಲುತ್ತದೆ ಎಂದು ಹೇಳಿದ್ದಾರೆ.
- Basavaraj Doddamani
- Updated on: Mar 2, 2026
- 1:29 pm
ತಾಯ್ನಾಡಿನಲ್ಲಿ ಯುದ್ಧದ ಕಾರ್ಮೋಡ: ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ದಾವಣಗೆರೆಯ ದುಗ್ಗಮ್ಮ ಜಾತ್ರೆ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್ನ ಮಿರ್ಜಾ ಪೈಲ್ವಾನ್ ಪ್ರೇಕ್ಷಕರ ಮನ ಗೆದ್ದರು. ತಮ್ಮ ದೇಶದ ಯುದ್ಧದ ನಡುವೆಯೂ, ದಾವಣಗೆರೆಯ ಮಣ್ಣಿನ ಅಖಾಡದಲ್ಲಿ ಮಹಾರಾಷ್ಟ್ರದ ರವಿರಾಜ್ ವಿರುದ್ಧ ಸಮಬಲದ ಹೋರಾಟ ನಡೆಸಿ ಮೆಚ್ಚುಗೆ ಗಳಿಸಿದರು. ಭಾರತೀಯರ ಪ್ರೀತಿ ಮತ್ತು ಅದ್ಭುತ ಕ್ರೀಡಾಭಿಮಾನವನ್ನು ಮಿರ್ಜಾ ಹಾಡಿ ಹೊಗಳಿದರು, ಇದು ಅವರಿಗೆ ಧೈರ್ಯ ನೀಡಿದೆ ಎಂದು ಹೇಳಿದರು.
- Basavaraj Doddamani
- Updated on: Mar 2, 2026
- 9:11 am
ದಾವಣಗೆರೆ-ಬೆಂಗಳೂರು ಪ್ರಯಾಣಕ್ಕೆ ಎರಡೂವರೆ ಗಂಟೆ ಸಾಕು! ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧ
ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗವು 2027ಕ್ಕೆ ವೇಳೆಗೆ ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದ ದಾವಣಗೆರೆ-ಬೆಂಗಳೂರು ನಡುವಿನ ಪ್ರಯಾಣ ಕೇವಲ 2.5 ಗಂಟೆಗೆ ಇಳಿಯಲಿದೆ. ಮಧ್ಯ ಕರ್ನಾಟಕದ ಅಭಿವೃದ್ಧಿಗೆ ಇದು ಮಹತ್ವದ ತಿರುವು ನೀಡಲಿದ್ದು, ವ್ಯಾಪಾರ, ಶಿಕ್ಷಣ, ಉದ್ಯೋಗ ಕ್ಷೇತ್ರಗಳಿಗೆ ದೊಡ್ಡ ಉತ್ತೇಜನ ಸಿಗಲಿದೆ.
- Basavaraj Doddamani
- Updated on: Feb 27, 2026
- 8:06 am
‘ನಮ್ಮ ಬದುಕು ಹಾಳು ಮಾಡಬೇಡಿ’: ದಾವಣಗೆರೆಯಲ್ಲಿ ಪ್ಲಾಟಿನಮ್-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು
ದಾವಣಗೆರೆ ಜಿಲ್ಲೆಯ ಉಬ್ರಾಣಿಯಲ್ಲಿ ಪ್ಲಾಟಿನಂ ಮತ್ತು ಮ್ಯಾಂಗನೀಸ್ ನಿಕ್ಷೇಪಗಳ ಶೋಧಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಆದರೆ, ರೈತರು ತಮ್ಮ ಭೂಮಿ ಮತ್ತು ಅಡಿಕೆ ತೋಟಗಳ ರಕ್ಷಣೆಗಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 2006ರಲ್ಲೂ ಇದೇ ರೀತಿಯ ಯೋಜನೆಯನ್ನು ವಿರೋಧಿಸಿ ಕೈಬಿಡಲಾಗಿತ್ತು. ಈ ಬಾರಿಯೂ ರೈತರು ತಮ್ಮ ಜೀವನೋಪಾಯ ಹಾಳಾಗುವುದನ್ನು ತಪ್ಪಿಸಲು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
- Basavaraj Doddamani
- Updated on: Feb 25, 2026
- 12:12 pm
ದಾವಣಗೆರೆ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ: ಇಡೀ ರಾತ್ರಿ ದೇಗುಲದ ಆವರಣದಲ್ಲೇ ಕಾದು ಕುಳಿತ ಡಿಸಿ, ಎಸ್ಪಿ
ದಾವಣಗೆರೆ ದುರ್ಗಾಂಬಿಕಾ ಜಾತ್ರೆಯು ಅದ್ಧೂರಿಯಾಗಿ ನಡೆಯುತ್ತಿದ್ದು, ಜಿಲ್ಲಾಡಳಿತವು ಪ್ರಾಣಿಬಲಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಡಿಸಿ, ಸಿಇಓ, ಎಸ್ಪಿ ಸೇರಿ ಅಧಿಕಾರಿಗಳು ರಾತ್ರಿಯಿಡೀ ಸ್ಥಳದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಸಿಸಿಟಿವಿ ಮತ್ತು ಡ್ರೋನ್ಗಳ ಮೂಲಕ ನಿಗಾ ವಹಿಸಲಾಗಿದೆ. ಭಕ್ತರು ಭಕ್ತಿಭಾವದಿಂದ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
- Basavaraj Doddamani
- Updated on: Feb 25, 2026
- 10:33 am
ದಂಪತಿ ಕೈ, ಕಾಲು ಕಟ್ಟಿ ಸಿನಿಮಾ ಮಾದರಿ ದರೋಡೆ: 4 ತಿಂಗಳ ಬಳಿಕ ಖಾಕಿ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರಿನಲ್ಲಿ ವೃದ್ಧ ದಂಪತಿಯ ಮನೆಯಲ್ಲಿ 8.4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ ಖತರ್ನಾಕ್ ದರೋಡೆ ಗ್ಯಾಂಗ್ ಅನ್ನು ಪೊಲೀಸರು ನಾಲ್ಕು ತಿಂಗಳ ಬಳಿಕ ಬಂಧಿಸಿದ್ದಾರೆ. ತಮಿಳುನಾಡು ಮೂಲದ ಐವರು ಆರೋಪಿಗಳಿಂದ 14 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗ್ಯಾಂಗ್ ರಾಜ್ಯದ ಹಲವೆಡೆ ಇದೇ ರೀತಿಯ ದರೋಡೆ ಕೃತ್ಯಗಳಲ್ಲಿ ಭಾಗಿಯಾಗಿರೋದು ತನಿಖೆಯಿಂದ ತಿಳಿದುಬಂದಿದೆ.
- Basavaraj Doddamani
- Updated on: Feb 24, 2026
- 5:49 pm
ದಾವಣಗೆರೆ: ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು
ದಾವಣಗೆರೆಯ ಗೋಗುದ್ದು ಗ್ರಾಮದಲ್ಲಿ 15 ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತನನ್ನು ಗ್ರಾಮದ ಚಮನ್ಸಾಬ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಜಾಮಿಲ್ ಎಂದು ಗುರುತಿಸಲಾಗಿದೆ. ರಾಜ್ಯದ ಯುವ ಜನರಲ್ಲಿ ಹಾರ್ಟ್ ಅಟ್ಯಾಕ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದು ಆತಂಕ ಹೆಚ್ಚಿಸಿದೆ.
- Basavaraj Doddamani
- Updated on: Feb 24, 2026
- 12:41 pm