ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.
Kammaragatte Karnika: ಭೂಲೋಕದ ಮುತ್ತು ಗಗನಕ್ಕೆ ಏರಿತಾಲೇ; ನಾಗರ ಪಂಚಮಿಯಂದು ದುಂಡಯ್ಯ ಕಾರ್ಣಿಕ ನುಡಿ
ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿರುವ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ನಾಗರ ಪಂಚಮಿ ಹಬ್ಬದ ಸಂದರ್ಭದಲ್ಲಿ ದುಂಡಯ್ಯ ಕಾರ್ಣಿಕ ಪೂಜಾರಿ ಅವರು ನುಡಿದ ಕಾರ್ಣಿಕವು ಭಕ್ತರಲ್ಲಿ ಭರವಸೆ ಮೂಡಿಸಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಈ ಧಾರ್ಮಿಕ ವಿಧಿ ನೆರವೇರಿತು.
- Basavaraj Doddamani
- Updated on: Aug 18, 2026
- 12:13 pm
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ನೂತನ ಸಚಿವರಾಗಿ ಕೆಎಸ್ ಬಸವಂತಪ್ಪ ಅವರು ಇಂದು (ಆಗಸ್ಟ್ 08) ಮೊದಲ ಬಾರಿಗೆ ಸ್ವಕ್ಷೇತ್ರ ಮಾಯಕೊಂಡಕ್ಕೆ ಆಗಮಿಸಿದ್ದು, ಅವರ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ನೂತನ ಮಂತ್ರಿಗೆ ಹೂಗುಚ್ಚ ನೀಡಿ ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದ್ದಾರೆ. ಆದ್ರೆ, ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಹೌದು....ಬಸವಂತಪ್ಪನವರನ್ನು ಬರಮಾಡಿಕೊಳ್ಳುವ ಬರದಲ್ಲಿದ್ದ ಅಭಿಮಾನಿಯೊಬ್ಬರ ಜೇಬಿಗೆ ಕತ್ತರಿ ಹಾಕಿ ಒಂದು ಲಕ್ಷ ರೂಪಾಯಿ ದೋಚಿಕೊಂಡು ಹೋಗಿದ್ದಾರೆ. ಹೌದು....ನೀರ್ಥಡಿ ಗ್ರಾಮದ ಸಂತೋಷ ಎನ್ನುವಾತ ಸಚಿವರ ಸ್ವಾಗತಕ್ಕೆ ಬಂದು 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
- Basavaraj Doddamani
- Updated on: Aug 8, 2026
- 5:51 pm
ಪೌರಕಾರ್ಮಿಕ ದಂಪತಿಯ ಪುತ್ರನಿಗೂ ಸಿಕ್ತು ಸಚಿವ ಸ್ಥಾನ! ಪೌರಕಾರ್ಮಿಕರಾಗಿಯೂ ಕೆಲಸ ಮಾಡಿದ್ದ ಕೆಎಸ್ ಬಸವಂತಪ್ಪ ರಾಜಕೀಯ ಪಯಣ ಹೀಗಿದೆ
Who Is KS Basavanthappa: ಪೌರಕಾರ್ಮಿಕ ದಂಪತಿಯ ಪುತ್ರನಾಗಿ ಬೆಳೆದು, ಸ್ವತಃ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದ ಕೆಎಸ್ ಬಸವಂತಪ್ಪ ಇದೀಗ ಸಚಿವರಾಗುತ್ತಿದ್ದಾರೆ. 2018ರಲ್ಲಿ ಸೋತರೂ 2023ರಲ್ಲಿ 34000 ಮತಗಳ ಅಂತರದಲ್ಲಿ ಮಾಯಕೊಂಡದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಅವರ ರಾಜಕೀಯ ಪಯಣ ಗಮನ ಸೆಳೆದಿದೆ.
- Basavaraj Doddamani
- Updated on: Aug 3, 2026
- 2:20 pm
ಜೀರೋ ಟ್ರಾಫಿಕ್ನಲ್ಲೇ ಕೈಕೊಟ್ಟ ಆಂಬ್ಯುಲೆನ್ಸ್: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಮಾರ್ಗ ಮಧ್ಯೆ ಸಾವು
Davangere baby death: ದಾವಣಗೆರೆ ಮನಕುಲುಕುವ ಘಟನೆಗೆ ಸಾಕ್ಷಿಯಾಗಿದೆ. ಶ್ವಾಸಕೋಶದ ತೀವ್ರ ಸೋಂಕಿನಿಂದ ಬಳಲುತ್ತಿದ್ದ ಮೂರೂವರೆ ತಿಂಗಳ ಮಗುವನ್ನು ಉಡುಪಿಯ ಮಣಿಪಾಲ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮೂಲಕ ಕರೆದೊಯ್ಯುತ್ತಿದ್ದ ವೇಳೆ ಆಂಬ್ಯುಲೆನ್ಸ್ ಟೈಯರ್ ಸ್ಫೋಟಗೊಂಡಿದೆ. ಪರಿಣಾಮ ಸೂಕ್ತ ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದೆ.
- Basavaraj Doddamani
- Updated on: Jul 31, 2026
- 9:32 pm
ಹರಿಹರ ಪಂಚಮಸಾಲಿ ಮಠದಲ್ಲಿ ಮತ್ತೆ ಭಜನೆ, ಪೂಜೆ ಶುರು: ಟ್ರಸ್ಟ್ ವಿರುದ್ಧ ಹೋರಾಟಕ್ಕೆ ಸಜ್ಜಾದ ವಚನಾನಂದ ಸ್ವಾಮೀಜಿ
Harihara Panchamasali Matha: ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಮಠದಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಆವರಿಸಿದ್ದ ಮೌನ ಮತ್ತು ಉದ್ವಿಗ್ನ ವಾತಾವರಣ ಈಗ ತಿಳಿಯಾಗುತ್ತಿದ್ದು, ಹೊಸ ಗಾಳಿ ಬೀಸತೊಡಗಿದೆ. ಮಠದಲ್ಲಿ ಇದೀಗ ಪೂಜಾ ಕೈಂಕರ್ಯಗಳು ಪುನರಾರಂಭಗೊಂಡಿವೆ.
- Basavaraj Doddamani
- Updated on: Jul 30, 2026
- 8:12 pm
ಸ್ಮಶಾನದ ಜಾಗದ ಮೇಲೂ ಕಣ್ಣು: ಹೆತ್ತವರ ಸಮಾಧಿಯನ್ನೂ ಬಿಡದೆ ಧ್ವಂಸಗೊಳಿಸಿ ವಿಕೃತಿ
Davanagere News: ದಾವಣಗೆರೆ ತಾಲೂಕಿನ ಆವರಗೆರೆಯಲ್ಲಿ ಆಸ್ತಿ ಆಸೆಗೆ ಬಿದ್ದ ಕಿಡಿಗೇಡಿಗಳು ಕೋರ್ಟ್ ಆದೇಶ ಉಲ್ಲಂಘಿಸಿ, ಮಡಿವಾಳ ಸಮಾಜದ 75 ವರ್ಷ ಹಳೆಯ ಸ್ಮಶಾನದಲ್ಲಿದ್ದ 50ಕ್ಕೂ ಹೆಚ್ಚು ಪೂರ್ವಜರ ಸಮಾಧಿಗಳನ್ನು ಟ್ರ್ಯಾಕ್ಟರ್ ಮುಖಾಂತರ ಧ್ವಂಸಗೊಳಿಸಿದ್ದಾರೆ. ಸ್ಮಶಾನ ದಾವಣಗೆರೆ ನಗರಕ್ಕೆ ಹೊಂದಿಕೊಂಡಿರುವ ಕಾರಣ ಜಾಗಕ್ಕೆ ಬೆಲೆ ಬಂದಿರೋದೆ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎನ್ನಲಾಗ್ತಿದೆ.
- Basavaraj Doddamani
- Updated on: Jul 27, 2026
- 12:56 pm
NEET ಹೋರಾಟದ ವಿಡಿಯೋ ಅಲ್ಲ, ಬಿಹಾರ ಅಪಘಾತದ್ದು ಅಂದಿದ್ದಕ್ಕೆ ಸಿಟಿ ರವಿ ಏನಂದ್ರು ನೋಡಿ
ಸಿ.ಟಿ. ರವಿ ತಮ್ಮ "ಮುಲ್ಲಾ" ಹೇಳಿಕೆಯನ್ನು ಸಮರ್ಥಿಸಿಕೊಂಡು, ಯಾವುದೇ ಭಯವಿಲ್ಲದೆ ಅದನ್ನು ಪುನರುಚ್ಚರಿಸುವುದಾಗಿ ಹೇಳಿದರು. ದೆಹಲಿಯ ನೀಟ್ ಪ್ರತಿಭಟನೆ ವೇಳೆ ಪೆಟ್ರೋಲ್ ಟ್ಯಾಂಕ್ಗೆ ಬೆಂಕಿ ಹಚ್ಚಿದ ಮುಲ್ಲಾನನ್ನು ಉದ್ದೇಶಿಸಿ ಮಾತನಾಡಿರುವುದಾಗಿ ಸ್ಪಷ್ಟಪಡಿಸಿದರು. ಇದರ ಜೊತೆಗೆ, ನೀಟ್ ಪರೀಕ್ಷಾ ಸೋರಿಕೆ ತನಿಖೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರ ಶೀಘ್ರ ಕ್ರಮವನ್ನು ಶ್ಲಾಘಿಸಿದ ಸಿ.ಟಿ. ರವಿ, ಕೆಪಿಎಸ್ಸಿ ಭ್ರಷ್ಟಾಚಾರದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್ಐಟಿ ತನಿಖೆಗೆ ಆಗ್ರಹಿಸಿದರು.
- Basavaraj Doddamani
- Updated on: Jul 26, 2026
- 10:48 pm
SP Warning Rowdysheeters: ರೌಡಿಶೀಟರ್ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್ಪಿ ಡಾ. H T ಶೇಖರ್
ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಮಹತ್ವದ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಅವರ ನೇತೃತ್ವದಲ್ಲಿ, ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ 145 ರೌಡಿಶೀಟರ್ಗಳಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.
- Basavaraj Doddamani
- Updated on: Jul 22, 2026
- 11:40 am
87 ಕೇಸ್ ಭೇದಿಸಿದ ದಾವಣಗೆರೆ ಪೊಲೀಸರು: ಚಿನ್ನ, ಬೆಳ್ಳಿ ಸೇರಿ 3.91 ಕೋಟಿ ರೂ. ಸ್ವತ್ತು ವಾರಸುದಾರರಿಗೆ ಹಸ್ತಾಂತರ
ದಾವಣಗೆರೆ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 87 ಪ್ರಕರಣಗಳನ್ನು ಭೇದಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿನ್ನಾಭರಣ ಸೇರಿದಂತೆ ಬರೋಬ್ಬರಿ 3.91 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ದಾವಣಗೆರೆ ಪೊಲೀಸರ ಕಾರ್ಯಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆಗಳು ವ್ಯಕ್ತವಾಗಿವೆ.
- Basavaraj Doddamani
- Updated on: Jul 21, 2026
- 9:53 pm
ನ್ಯಾಯಕ್ಕಾಗಿ ಹೆತ್ತ ತಾಯಿಯ ಕೊಳೆತ ಶವವನ್ನೇ ಬೈಕ್ನಲ್ಲಿ ತಂದ ಮಕ್ಕಳು! ಎಫ್ಐಆರ್ ದಾಖಲು
ದಾವಣಗೆರೆ ಜಿಲ್ಲೆಯ ಅದಾಪುರದಲ್ಲಿ ತಾಯಿಯ ಸಾವು ಕೊಲೆ ಎಂದು ಶಂಕಿಸಿ, ಇಬ್ಬರು ಪುತ್ರರು ರಾತ್ರೋರಾತ್ರಿ ಸಮಾಧಿ ಅಗೆದು ಕೊಳೆತ ಶವವನ್ನು ಬೈಕ್ನಲ್ಲಿ ಆಸ್ಪತ್ರೆಗೆ ತಂದ ಆಘಾತಕಾರಿ ಘಟನೆ ನಡೆದಿದೆ. ಮರು ಮರಣೋತ್ತರ ಪರೀಕ್ಷೆಗಾಗಿ ಮಕ್ಕಳು ನಡೆಸಿದ ಈ ಭೀಕರ ಹೋರಾಟ ಈಗ ಅವರ ಪಾಲಿಗೆ ಮುಳುವಾಗಿದ್ದು, ಕಾನೂನು ಉಲ್ಲಂಘನೆಯ ಹಿನ್ನೆಲೆಯಲ್ಲಿ ಅವರ ವಿರುದ್ಧವೇ ಎಫ್ಐಆರ್ ದಾಖಲಾಗಿದೆ.
- Basavaraj Doddamani
- Updated on: Jul 20, 2026
- 10:58 am
ಪೋಕ್ಸೋ ಕೇಸ್: ದಾವಣಗೆರೆ ಜಿಲ್ಲಾ ವಿಶೇಷ ಕೋರ್ಟ್ನಿಂದ ವಚನಾನಂದ ಶ್ರೀಗೆ ಜಾಮೀನು ಮಂಜೂರು
Vachanananda Swamiji: ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗೆ ದಾವಣಗೆರೆ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ಸೂಚನೆ ಬೆನ್ನಲ್ಲೇ ಶ್ರೀಗಳು ರೆಗ್ಯುಲರ್ ಬೇಲ್ ಪಡೆದುಕೊಂಡಿದ್ದಾರೆ. ಈಗಾಗಲೇ ವಚನಾನಂದ ಶ್ರೀ ವಿರುದ್ಧ 7 ಮಕ್ಕಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದ್ದು, ಮಕ್ಕಳನ್ನು ಸ್ನಾನದ ಕೋಣೆ ಹಾಗೂ ಮಲಗುವ ರೂಂಗೆ ಕರೆದು ಲೈಂಗಿಕ ಕಿರುಕುಳ ನೀಡಿರುವ ಆರೋಪ ಸ್ವಾಮೀಜಿ ಮೇಲಿದೆ.
- Basavaraj Doddamani
- Updated on: Jul 13, 2026
- 3:57 pm
ಸ್ವಪಕ್ಷೀಯರೇ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ರು: ಬೇಸರ ಹೊರಹಾಕಿದ ವಿಜಯೇಂದ್ರ
ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನ ಪಕ್ಷದಲ್ಲಿ ಬಾರೀ ಕೋಲಾಹಲ ಸೃಷ್ಟಿಸಿದೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನ ಹಣೆಯಲೆಂದೇ ಅಡ್ಡಮತದಾನ ಷಡ್ಯಂತ್ರ ನಡೆದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಸ್ವತಃ ವಿಜಯೇಂದ್ರ ಅವರೇ ಬಹಿರಂಗವಾಗಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
- Basavaraj Doddamani
- Updated on: Jul 7, 2026
- 9:51 pm