ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.
ದಾವಣಗೆರೆ: ಗಾಯಗೊಂಡು ಬಿದ್ದಿದೆ ಎಂದು ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಚಿರತೆ ದಾಳಿ!
ದಾವಣಗೆರೆ ತಾಲೂಕಿನ ಆನಗೋಡು ಬಳಿ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಬಿದ್ದಿದ್ದ ಚಿರತೆ ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆಯೇ ಏಕಾಏಕಿ ದಾಳಿ ನಡೆಸಿದ ಘಟನೆ ನಡೆದಿದೆ. ನಂತರ ಅರಿವಳಿಕೆ ನೀಡಿ ಸೆರೆಹಿಡಿದು ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಗಾಯಾಳು ಸಿಬ್ಬಂದಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
- Basavaraj Doddamani
- Updated on: Sep 8, 2026
- 3:00 pm
ದಾವಣಗೆರೆ ಆನೆಕೊಂಡ ಬಸವೇಶ್ವರ ಕಾರ್ಣೀಕ: ಭವಿಷ್ಯದ ಸಂಕಷ್ಟದ ಕುರಿತು ಎಚ್ಚರಿಕೆ ನುಡಿ!
ದಾವಣಗೆರೆ ನಗರದ ಐತಿಹಾಸಿಕ ಆನೆಕೊಂಡ ಬಸವೇಶ್ವರ ಸ್ವಾಮಿಯ ಕಾರ್ಣೀಕೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದಿದ್ದು, ಪೂಜಾರಿಯವರು ದೈವವಾಣಿ ನುಡಿದರು. "ಕೆಂಪಗೊಂದೀಹಾವಳಿ ಹೆಚ್ಚಾದೀತಲೇ ಎಚ್ಚರ" ಎಂಬ ಕಾರ್ಣೀಕವು ಬರುವ ದಿನಗಳಲ್ಲಿ ನಾಡಿಗೆ ದೊಡ್ಡ ಮಟ್ಟದ ಸಂಕಷ್ಟ ಹಾಗೂ ಆಪತ್ತು ಎದುರಾಗುವ ಸೂಚನೆಯಾಗಿದೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.
- Basavaraj Doddamani
- Updated on: Sep 8, 2026
- 8:15 am
ದಾವಣಗೆರೆಯ ತುಲಾಭವನಕ್ಕೆ ಮಾರುಹೋದ ಆಕ್ಸ್ಫರ್ಡ್ ವಿವಿ! ತೂಕ-ಅಳತೆ ಸಾಧನಗಳ ಕುರಿತು ಉಪನ್ಯಾಸಕ್ಕೆ ಬಸವರಾಜ್ ಯಳಮಲ್ಲಿಗೆ ಆಹ್ವಾನ
ದಾವಣಗೆರೆಯ ತುಲಾಭವನದಲ್ಲಿ 5,360ಕ್ಕೂ ಹೆಚ್ಚು ತೂಕ ಮತ್ತು ಅಳತೆ ಸಾಧನಗಳನ್ನು ಸಂಗ್ರಹಿಸಲಾಗಿದೆ. ಈ ವಿಚಾರ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದು, ಇದೀಗ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಗಮನವನ್ನೂ ಸೆಳೆದಿದೆ. ಈ ಅಪರೂಪದ ಸಂಗ್ರಹದ ಕುರಿತು ಉಪನ್ಯಾಸ ನೀಡಲು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಬಸವರಾಜ್ ಯಳಮಲ್ಲಿಗೆ ಆಹ್ವಾನ ನೀಡಿದೆ.
- Basavaraj Doddamani
- Updated on: Sep 5, 2026
- 8:11 am
ಸತ್ಯಕ್ಕೆ ಮತ್ತೊಂದು ಹೆಸರೇ ‘ದೇವಿಯ ಗಂಟೆ’: ಕೋರ್ಟ್ ಮೆಟ್ಟಿಲೇರದ ವ್ಯಾಜ್ಯಗಳಿಗೆ ನ್ಯಾಯ ತೀರ್ಪು ನೀಡುತ್ತಾಳೆ ದಾವಣಗೆರೆಯ ದುರ್ಗಾಂಬಿಕೆ!
ದಾವಣಗೆರೆಯ ದುರ್ಗಾಂಬಿಕಾ ದೇಗುಲದಲ್ಲಿ ಶತಮಾನಗಳಿಂದ ಒಂದು ವಿಶಿಷ್ಟ ಪದ್ಧತಿ ಇದೆ. ಅದುವೇ ದೇವಿಯ ಗಂಟೆ. ಹಣಕಾಸು, ಭೂಮಿ, ಅಥವಾ ದಾಂಪತ್ಯ ಕಲಹದಂತಹ ಯಾವುದೇ ವ್ಯಾಜ್ಯಗಳಲ್ಲಿ ಸತ್ಯವನ್ನು ಸಾಬೀತುಪಡಿಸಲು ಈ ಗಂಟೆಯನ್ನು ಬಡಿಯಲಾಗುತ್ತದೆ. ಸುಳ್ಳು ಹೇಳಿ ಗಂಟೆ ಬಡಿದರೆ ದೇವಿಯ ಶಾಪ ತಟ್ಟುತ್ತದೆ ಎಂಬ ಬಲವಾದ ನಂಬಿಕೆಯಿದೆ. ಇದು ಸತ್ಯಕ್ಕೆ ಮತ್ತೊಂದು ಹೆಸರು, ವಿವಾದಗಳಿಗೆ ಅಂತ್ಯ ಹಾಡುವ ದೈವಿಕ ವಿಧಾನವಾಗಿದೆ.
- Basavaraj Doddamani
- Updated on: Sep 4, 2026
- 7:20 pm
ಹಳ್ಳಿ, ಇಲಿ ಜ್ವರ ಆಯ್ತು ಈಗ ಹೊಸದಾಗಿ ಒಕ್ಕರಿಸಿದ ‘ಕೊಕ್ಕರೆ ರೋಗ’: ಏನಿದು ಕಾಯಿಲೆ?
ಹಕ್ಕಿ ಜ್ವರ, ಇಲಿ ಜ್ವರ ಕೇಳಿದ್ದೇವೆ. ಆದರೆ ಇದೀಗ ಹೊಸದಾಗಿ ಕೊಕ್ಕರೆ ಕಾಯಿಲೆ ಬಂದಿದೆ. ಈ ಕೊಕ್ಕರೆ ರೋಗ ಕೋಳಿಗಳಿಗೆ ಬರಲಿದ್ದು, ಒಮ್ಮೆ ಒಂದು ಕೋಳಿಗೆ ಬಂದರೆ ಸಾಕು ಕ್ಷಣದಲ್ಲಿ ಇಡೀ ಕೋಳಿ ಫಾರ್ಮ್ ಸರ್ವನಾಶ ಮಾಡುತ್ತೆ. ಅಷ್ಟು ಭಯಾನಕವಾಗಿದೆ ಈ ಕಾಯಿಲೆ. ಹಾಗಾದರೆ ಏನಿದು ಕೊಕ್ಕರೆ ಕಾಯಿಲೆ? ಯಾಕೆ ಬರುತ್ತೆ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
- Basavaraj Doddamani
- Updated on: Sep 3, 2026
- 9:03 pm
ದಾವಣಗೆರೆ: ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಾಲನಾಯಕನಕೋಟೆ ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಗೆ ಕನ್ನ ಹಾಕಲಾಗಿದೆ. ಸುನಂದಮ್ಮ ಎಂಬುವವರ ಮನೆಯಿಂದ 40 ಗ್ರಾಂ ಚಿನ್ನ, ಬೆಳ್ಳಿ ಮತ್ತು ನಗದು ಕಳ್ಳತನವಾಗಿದೆ. ಕುಟುಂಬಸ್ಥರು ಸಂಬಂಧಿಕರ ಮನೆಗೆ ತೆರಳಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬಿಳಿಚೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Basavaraj Doddamani
- Updated on: Sep 3, 2026
- 12:53 pm
ದಾವಣಗೆರೆ ಬಂದ್: ಹದಡಿ ರಸ್ತೆ ತಡೆದು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಸಾರಿಗೆ ಬಸ್ ಸಂಚಾರಕ್ಕೆ ತಡೆ
ಭದ್ರಾ ಡ್ಯಾಂನಿಂದ ಮೇಲ್ದಂಡೆ ಯೋಜನೆಗೆ ನೀರು ಬಿಡುಗಡೆ ಆದೇಶ ಹಾಗೂ ಗುಟ್ಕಾ ನಿಷೇಧ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ದಾವಣಗೆರೆ ಬಂದ್ಗೆ ಕರೆ ನೀಡಿದೆ. ಹದಡಿ ರಸ್ತೆ ಬಂದ್ ಮಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೂ ತಡೆಯೊಡ್ಡಿದರು.
- Basavaraj Doddamani
- Updated on: Sep 1, 2026
- 9:25 am
ಖಾಸಗಿ ಬ್ಯಾಂಕ್ ಕಿರುಕುಳ ಆರೋಪ! ಸಿಬ್ಬಂದಿ ಮಿಸ್ಸಿಂಗ್, ಆತ್ಮಹತ್ಯೆ ಶಂಕೆ!
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಖಾಸಗಿ ಬ್ಯಾಂಕ್ ಸಿಬ್ಬಂದಿ ಮೋಹನ್ ಕುಮಾರ್ ಬ್ಯಾಂಕ್ ಕಿರುಕುಳ ಹಾಗೂ ಸಾಲದ ಬಾಧ್ಯತೆಗೆ ಬೇಸತ್ತು ವಿಡಿಯೋ ಮಾಡಿ ನಾಪತ್ತೆಯಾಗಿದ್ದಾರೆ. ಹೊನ್ನಾಳಿಯ ತುಂಗಾ ನಾಲೆಯಲ್ಲಿ ಬೈಕ್ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ನೊಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
- Basavaraj Doddamani
- Updated on: Aug 30, 2026
- 7:18 pm
ಗುಟ್ಕಾ ನಿಷೇಧ ಮತ್ತು ಭದ್ರಾ ನೀರು ವಿವಾದ: ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನೆ
ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರು ಗುಟ್ಕಾ ನಿಷೇಧ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಬಿಡುವ ಸರ್ಕಾರದ ಆದೇಶಗಳನ್ನು ವಿರೋಧಿಸಿ ಬೃಹತ್ ಪಾದಯಾತ್ರೆ ನಡೆಸಿದ್ದಾರೆ. ಈ ನಿರ್ಧಾರಗಳು ಲಕ್ಷಾಂತರ ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಆರೋಪಿಸಿ, ಪ್ರತಿಭಟನಾಕಾರರು ಆದೇಶಗಳನ್ನು ಹಿಂಪಡೆಯಲು ಆಗ್ರಹಿಸಿದ್ದಾರೆ. ಸೋಮವಾರ ದಾವಣಗೆರೆ ಬಂದ್ಗೆ ಕರೆ ನೀಡಲಾಗಿದೆ.
- Basavaraj Doddamani
- Updated on: Aug 29, 2026
- 10:21 am
ದಾವಣಗೆರೆಯಲ್ಲಿ ಭಾರಿ ಹೈಡ್ರಾಮಾ: ಟೈರ್ಗೆ ಬೆಂಕಿ ಹಚ್ಚಿ ಅಡಕೆ ಬೆಳಗಾರರಿಂದ ಆಕ್ರೋಶ; ನೂರಾರು ರೈತರು ವಶಕ್ಕೆ
Davangere Farmers Protest: ರಾಜ್ಯ ಸರ್ಕಾರದ ಗುಟ್ಕಾ ನಿಷೇಧ ಆದೇಶ ಹಿಂಪಡೆಯುವುದು ಹಾಗೂ ಅಪ್ಪರ್ ಭದ್ರಾ ಯೋಜನೆಗೆ ಅನ್ಯಾಯವಾಗಿ ನೀರು ಬಿಡುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಮತ್ತು ರೈತರು ಕೈಗೊಂಡಿದ್ದ ಬೃಹತ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಎಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ 200ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹೈಡ್ರಾಮಾವೇ ನಡೆದಿದೆ.
- Basavaraj Doddamani
- Updated on: Aug 28, 2026
- 8:04 pm
ಮುಂದಿನ ಚುನಾವಣೆಯಲ್ಲಿ ಮಧು ಬಂಗಾರಪ್ಪ ಶಾಸಕನಾದ್ರೆ ಕಾವಿ ಬಿಚ್ಚುತ್ತೇನೆ: ಪ್ರಣವಾನಂದ ಸ್ವಾಮೀಜಿ ಸವಾಲು
ಪ್ರಣವಾನಂದ ಸ್ವಾಮೀಜಿ ಅವರು ಸಚಿವ ಮಧು ಬಂಗಾರಪ್ಪನವರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ತೆಗೆಸಿದ್ದಾರೆ ಎಂದು ಆರೋಪಿಸಿ ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಮಧು ಬಂಗಾರಪ್ಪ ಶಾಸಕನಾದ್ರೆ ನಾನು ಕಾವಿ ಬಟ್ಟೆ ಬಿಚ್ಚಿ ಹಾಕುತ್ತೇವೆ ಎಂದು ಸವಾಲು ಸಹ ಹಾಕಿದ್ದಾರೆ.
- Basavaraj Doddamani
- Updated on: Aug 27, 2026
- 8:27 pm
Farmers Protest Against Gutkha Ban: ಗುಟ್ಕಾ ನಿಷೇಧ ಖಂಡಿಸಿ ಅಡಿಕೆ ಬೆಳೆಗಾರರ ಪ್ರತಿಭಟನೆ: ಹೊನ್ನಾಳಿಯಿಂದ ಪಾದಯಾತ್ರೆ
ಗುಟ್ಕಾ ನಿಷೇಧನಿರ್ಧಾರವನ್ನು ವಿರೋಧಿಸಿ ಹೊನ್ನಾಳಿ ಅಡಿಕೆ ಬೆಳೆಗಾರರು ಬೃಹತ್ ಪಾದಯಾತ್ರೆ ನಡೆಸಿದ್ದಾರೆ. ಹೊನ್ನಾಳಿಯ ಹಿರೇಕಲ್ ಮಠದಿಂದ ಪ್ರಾರಂಭವಾದ ಈ ಪಾದಯಾತ್ರೆಯಲ್ಲಿ ರೈತರು, ರೈತ ಮೋರ್ಚಾ ಸದಸ್ಯರು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ನಾಳೆ ದಾವಣಗೆರೆಯಲ್ಲಿ ಅಡಿಕೆ ಬೆಳಗಾರರ ಬೃಹತ್ ಪ್ರತಿಭಟನಾ ಸಭೆ ನಡೆಯಲಿದ್ದು, ಎಸಿ ಕಚೇರಿ ಮುತ್ತಿಗೆಗೂ ನಿರ್ಧರಿಸಲಾಗಿದೆ.
- Basavaraj Doddamani
- Updated on: Aug 27, 2026
- 12:35 pm