ಮೊಬೈಲ್ನಲ್ಲಿ ಮಾತನಾಡುತ್ತಾ ಹಳಿ ದಾಟುತ್ತಿದ್ದ ಯುವತಿಗೆ ರೈಲು ಡಿಕ್ಕಿ: ಸಾವು
ಹರಿಹರ ರೈಲು ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ. ಮೊಬೈಲ್ನಲ್ಲಿ ಮಾತನಾಡುತ್ತಾ ಹಳಿ ದಾಟುತ್ತಿದ್ದ 23 ವರ್ಷದ ಎಂಬಿಎ ವಿದ್ಯಾರ್ಥಿನಿಗೆ ರೈಲು ಡಿಕ್ಕಿ ಹೊಡೆದಿದೆ. ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ ಮೂಲದ ಶ್ರಾವಣಿ ಮೈಸೂರಿನಲ್ಲಿ ಎಂಬಿಎ ಓದುತ್ತಿದ್ದರು ಮತ್ತು ಶುಭ ಕಾರ್ಯಕ್ಕಾಗಿ ಹರಿಹರಕ್ಕೆ ಬಂದಿದ್ದರು. ಪೊಲೀಸರು ಘಟನಾ ಸ್ಥಳ ಪರಿಶೀಲಿಸಿದ್ದಾರೆ.
- Basavaraj Doddamani
- Updated on: Apr 30, 2025
- 2:54 pm
ದಾವಣಗೆರೆಯ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದಾಪುರ ಕೆರೆಯಲ್ಲಿ 7ನೇ ಶತಮಾನದ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆಯಾಗಿದೆ. 5 ಅಡಿ ಉದ್ದದ ಈ ಶಾಸನವು ಹಳೆಗನ್ನಡದಲ್ಲಿ 17 ಸಾಲುಗಳನ್ನು ಹೊಂದಿದೆ. ಇದು ಬಳ್ಳಾವಿ ನಾಡಿನ ಆಡಳಿತ ಮತ್ತು ತೆರಿಗೆ ವಿನಾಯಿತಿಗಳ ಕುರಿತು ಮಾಹಿತಿ ಒಳಗೊಂಡಿದೆ.
- Basavaraj Doddamani
- Updated on: Apr 30, 2025
- 12:05 pm
ದಾವಣಗೆರೆ: ಹಿಡಿಯುವಾಗ ಕೊರಳಿಗೆ ಸುತ್ತಿಕೊಂಡ ಕೇರೆ ಹಾವು! ಆಮೇಲೇನಾಯ್ತು? ವಿಡಿಯೋ ನೋಡಿ
ದಾವಣಗೆರೆಯ ಸ್ನೇಕ್ ಬಸಣ್ಣ ಹಾವು ಹಿಡಿಯವುದರಲ್ಲಿ ಎಕ್ಸ್ಪರ್ಟ್. ಆಗಾಗ ಅಲ್ಲಲ್ಲಿ ಹಾವು ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಾರೆ. ಆದರೆ, ಚಾಲಾಕಿ ಹಾವೊಂದು ಅವರನ್ನೇ ಯಾಮಾರಿಸಿದೆ. ಹಿಡಿಯುವ ಸಂದರ್ಭದಲ್ಲಿ ಅವರ ಕೊರಳನ್ನೇ ಸುತ್ತಿಕೊಂಡು ಭೀತಿ ಹುಟ್ಟಿಸಿದೆ. ಕೊನೆಗೆ ಅವರು ಅದ್ಹೇಗೋ ಹಾವಿನ ಕುಣಿಕೆಯಿಂದ ಬಚಾವಾಗಿ ಅದನ್ನು ಸೆರೆಹಿಡಿದಿದ್ದಾರೆ. ವಿಡಿಯೋ ಇಲ್ಲಿದೆ.
- Basavaraj Doddamani
- Updated on: Apr 30, 2025
- 10:03 am
3000 ರೂ, 3 ಕೆಜಿ ಮಟನ್ ಕೊಟ್ಟರೂ ಮನೆಯ ಇ-ಸ್ವತ್ತು ಆಗುತ್ತಿಲ್ಲ: ಪಿಡಿಒ ವಿರುದ್ಧ ಹೀಗೊಂದು ಲಂಚದ ಆರೋಪ!
ಸರ್ಕಾರಿ ಕಚೇರಿಗಳಲ್ಲಿ, ಪೋಲಿಸ್ ಇಲಾಖೆಯ ಕಚೇರಿಗಳಲ್ಲಿ ಲಂಚ ಕೇಳುವ ಬಗ್ಗೆ, ಲಂಚಕ್ಕಾಗಿ ಪೀಡಿಸುವ ಕುರಿತು ಆಗಾಗ ಆರೋಪಗಳನ್ನು ಕೇಳುತ್ತಿರುತ್ತೇವೆ. ಆದರೆ ದಾವಣಗೆರೆಯನ್ನು ವಿಚಿತ್ರ ಲಂಚ ಪ್ರಕರಣ ವರದಿಯಾಗಿದೆ. ಜಗಳೂರು ತಾಲೂಕಿನ ಹನಮಂತಾಪುರ ಗ್ರಾಮದಲ್ಲಿ ವಿಭಿನ್ನ ಆರೋಪವೊಂದು ಕೇಳಿಬಂದಿದೆ. ಅದೇನು ಎಂಬ ಮಾಹಿತಿ ಇಲ್ಲಿದೆ.
- Basavaraj Doddamani
- Updated on: Apr 17, 2025
- 9:07 am
ದಾವಣಗೆರೆ: ಅನೈತಿಕ ಸಂಬಂಧ ಆರೋಪಿಸಿ ಮಹಿಳೆ ಮೇಲೆ ಹಲ್ಲೆ, 6 ಮಂದಿ ಅರೆಸ್ಟ್
ಅನೈತಿಕ ಸಂಬಂಧ ಆರೋಪಿಸಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಆರು ಮಂದಿ ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 9 ರಂದು ನಡೆದ ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಲ್ಲೆಗೊಳಗಾದ ಮಹಿಳೆ ಏಪ್ರಿಲ್ 19 ರಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಲಿದ್ದಾರೆ. ಪೊಲೀಸರು ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
- Basavaraj Doddamani
- Updated on: Apr 16, 2025
- 5:33 pm
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ಶಿವಶಂಕರಪ್ಪ ವಾಗ್ದಾಳಿ
ಕರ್ನಾಟಕ ಸರ್ಕಾರ ಜಾತಿಗಣತಿ ವರದಿ ಬಿಡುಗಡೆಗೆ ಮುಂದಾಗಿರುವುದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿರೋಧಿಸಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನು ನಿರ್ಲಕ್ಷಿಸಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಮಹಾಸಭಾ ಈಗಾಗಲೇ ಸಭೆ ನಡೆಸಿದೆ ಮತ್ತು ಹೋರಾಟಕ್ಕೆ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
- Basavaraj Doddamani
- Updated on: Apr 15, 2025
- 10:16 pm
ದಾವಣಗೆರೆ: ಬರಡು ಭೂಮಿಯಲ್ಲೂ ಸೇಬು ಬೆಳೆದು ಯಶಸ್ವಿಯಾದ ರೈತ
ದಾವಣಗೆರೆ ಜಿಲ್ಲೆಯ ಜಗಳೂರಿನ ಬರಡು ಭೂಮಿಯಲ್ಲಿ ಚಿತ್ರದುರ್ಗದ ರೈತ ರುದ್ರಮುನಿ ಕಾಶ್ಮೀರಿ ಸೇಬುಗಳನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ಮಾತ್ರ ಬೆಳೆಯುವ ಈ ಸೇಬುಗಳು ಬಯಲು ಸೀಮೆಯಲ್ಲಿ ಬೆಳೆದಿರುವುದು ಅಚ್ಚರಿಯ ಸಂಗತಿ. ಇವರ ಈ ಯಶಸ್ಸು ಇತರ ರೈತರಿಗೆ ಸ್ಫೂರ್ತಿಯಾಗಿದೆ. ಕಡಿಮೆ ನೀರಿನ ಅವಶ್ಯಕತೆ ಹೊಂದಿರುವ ಇಸ್ರೇಲ್ ತಳಿಯ ಸೇಬುಗಳನ್ನು ಬೆಳೆದಿರುವುದು ಇಲ್ಲಿ ಗಮನಾರ್ಹ.
- Basavaraj Doddamani
- Updated on: Apr 15, 2025
- 9:51 pm
ದಾವಣಗೆರೆ: ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ ಪಲ್ಲಕ್ಕಿ
ಐತಿಹಾಸಿಕ ಕೊಕ್ಕನೂರ ಆಂಜನೇಯ ಉತ್ಸವ ದಾವಣಗೆರೆ ಜಿಲ್ಲೆಯ ಪ್ರಖ್ಯಾತ ಉತ್ಸವಗಳಲ್ಲೊಂದು. ಇಲ್ಲಿನ ಆಂಜನೇಯ ಸ್ವಾಮಿ ನೋಟಿನ ಪಲ್ಲಕ್ಕಿ ಉತ್ಸವವೂ ಅಷ್ಟೇ ಮಹತ್ವದ್ದು. ಈ ನೋಟಿನ ಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು. ಭಕ್ತರು ನೋಟು ಸಮರ್ಪಣೆ ಮಾಡಿ ಹರಕೆ ತೀರಿಸಿಕೊಂಡರು. ಉತ್ಸವದ ವಿಡಿಯೋ ಇಲ್ಲಿದೆ ನೋಡಿ.
- Basavaraj Doddamani
- Updated on: Apr 9, 2025
- 11:16 am
ಘರ್ಜಿಸಿದ ನಮ್ಮ ರಾಜ್ಯದ ಹೆಮ್ಮೆಯ ದೇಶಿ ತಳಿ ಮುಧೋಳ್ ಶ್ವಾನ
ದಾವಣಗೆರೆಯಲ್ಲಿ ಏಪ್ರಿಲ್ 7 ರಂದು ನಡೆದ 7ನೇ ವಾರ್ಷಿಕ ರಾಜ್ಯಮಟ್ಟದ ಡಾಗ್ ಮತ್ತು ಕ್ಯಾಟ್ ಶೋ ಅತ್ಯಂತ ಯಶಸ್ವಿಯಾಯಿತು. ಕರ್ನಾಟಕ, ಮಹಾರಾಷ್ಟ್ರ, ಕೇರಳ ಮುಂತಾದ ರಾಜ್ಯಗಳಿಂದ 200 ಕ್ಕೂ ಹೆಚ್ಚು ನಾಯಿಗಳು ಭಾಗವಹಿಸಿದವು. ವಿವಿಧ ತಳಿಯ ನಾಯಿಗಳು ಮತ್ತು ಬೆಕ್ಕುಗಳು ತಮ್ಮ ಸೌಂದರ್ಯ ಮತ್ತು ಚಲನವಲನಗಳಿಂದ ಎಲ್ಲರ ಗಮನ ಸೆಳೆದವು. ದೇಶಿಯ ಮುಧೋಳ್ ನಾಯಿಗಳಿಗೆ ಪ್ರತ್ಯೇಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
- Basavaraj Doddamani
- Updated on: Apr 7, 2025
- 11:02 pm
ದಾವಣಗೆರೆಯಲ್ಲೊಂದು ಅಮಾನುಷ ಕೃತ್ಯ: ಮರಕ್ಕೆ ಕಟ್ಟಿ ಗುಪ್ತಾಂಗಕ್ಕೆ ಇರುವೆ ಬಿಟ್ಟು ಚಿತ್ರಹಿಂಸೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಹಕ್ಕಿಪಿಕ್ಕಿ ಬಾಲಕರ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಕಳ್ಳತನದ ಆರೋಪದ ಮೇಲೆ ಇಬ್ಬರು ಬಾಲಕರಿಗೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಲಾಗಿದೆ. ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ. ಸದ್ಯ ಒಂಬತ್ತು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಒಬ್ಬನ್ನು ವಶಕ್ಕೆ ಪಡೆಯಲಾಗಿದೆ.
- Basavaraj Doddamani
- Updated on: Apr 6, 2025
- 10:44 am
ಬುರ್ಖಾ ಧರಿಸಿ ಬಂದು ಬೆಳ್ಳಿ ಲೋಟ ಖರೀದಿ ನಾಟಕ: 1.13 ಕೋಟಿ ರೂ. ಮೌಲ್ಯದ ಒಡವೆ ಕಳವು
ಚಿನ್ನದ ಕಳ್ಳರು ದಾವಣಗೆರೆ ಪೊಲೀಸರನ್ನು ಬೇನ್ನು ಬಿಡದೇ ಕಾಡುತ್ತಿದ್ದಾರೆ. ಇತ್ತೀಚೆಗೆ ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 17 ಕೆಜಿ ಚಿನ್ನ ವಶಪಡಿಸಿದ್ದ ಪೊಲೀಸರು, ದರೋಡ ಗ್ಯಾಂಗ್ ಸೆರೆ ಹಿಡಿದಿದ್ದರು. ಆದರೆ, ಈಗ ಲೇಡಿ ಗ್ಯಾಂಗ್ ಕಾಟ ಶುರುವಾಗಿದೆ. ಲೇಡಿ ಗ್ಯಾಂಗ್ ಒಂದು ಕೆಜಿಗೂ ಹೆಚ್ಚು ಚಿನ್ನ ಎಗರಿಸಿದೆ. ಬಂಗಾರದ ಅಂಗಡಿಯಲ್ಲಿ ಹೊಂಚುಹಾಕಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಬುರ್ಖಾಧಾರಿಗಳು ಎಗರಿಸಿದ್ದಾರೆ.
- Basavaraj Doddamani
- Updated on: Apr 4, 2025
- 3:33 pm
ದಾವಣಗೆರೆ: ಜಾತ್ರೆಗೆ ಬಂದಿದ್ದ ದಲಿತ ಮಹಿಳೆ ಮೇಲೆ ಬಸ್ನಲ್ಲಿ ಲೈಂಗಿಕ ದೌರ್ಜನ್ಯ ಯತ್ನ
ದಾವಣಗೆರೆಯಲ್ಲಿ ಖಾಸಗಿ ಬಸ್ನಲ್ಲಿ ದಲಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಚಾಲಕ, ನಿರ್ವಾಹಕ ಮತ್ತು ಏಜೆಂಟ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಕಿರುಚಾಟದಿಂದಾಗಿ ಸಾರ್ವಜನಿಕರು ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಉಚ್ಚಂಗಿದುರ್ಗದ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Basavaraj Doddamani
- Updated on: Apr 2, 2025
- 4:42 pm