AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯ ನಾಲ್ವರಿಗೆ ಜೈನ ಸನ್ಯಾಸ ಧೀಕ್ಷೆ: ಸನ್ಯಾಸತ್ವ ಪಡೆಯುವುದರ ಹಿಂದಿದೆ ಈ ಬಲವಾದ ಕಾರಣ

ದಾವಣಗೆರೆ ಜೈನ ಸಮುದಾಯದಲ್ಲಿ ಅಚ್ಚರಿಯ ಸನ್ಯಾಸ ದೀಕ್ಷೆ: ಉನ್ನತ ಶಿಕ್ಷಣ ಪಡೆದ ಇಬ್ಬರು ಯುವತಿಯರು ಹಾಗೂ ಅವರೊಂದಿಗೆ ಇಬ್ಬರು ಪೋಷಕರು ಆಧ್ಯಾತ್ಮಿಕ ಮಾರ್ಗಕ್ಕೆ ಅಡಿ ಇಟ್ಟಿದ್ದಾರೆ. ಕೋಟ್ಯಾಧಿಪತಿಗಳ ಮಕ್ಕಳು, ಎಂಬಿಎ ಪದವೀಧರೆಯೂ ಸೇರಿ ಸಂಪತ್ತು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇವರ ಇಬ್ಬರು ಗಂಡು ಮಕ್ಕಳೂ ಈಗಾಗಲೇ ಸನ್ಯಾಸಿಗಳಾಗಿದ್ದು, ಇಡೀ ಕುಟುಂಬವೇ ಆಧ್ಯಾತ್ಮದತ್ತ ಮುಖ ಮಾಡಿದೆ. ದಾವಣಗೆರೆ ಚೌಕಿಪೇಟೆಯಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆಯ ಗಮನ ಸೆಳೆದಿದೆ.

ದಾವಣಗೆರೆಯ ನಾಲ್ವರಿಗೆ ಜೈನ ಸನ್ಯಾಸ ಧೀಕ್ಷೆ: ಸನ್ಯಾಸತ್ವ ಪಡೆಯುವುದರ ಹಿಂದಿದೆ ಈ ಬಲವಾದ ಕಾರಣ
ದಾವಣಗೆರೆ ಜೈನ ಸಮುದಾಯ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Mar 03, 2026 | 10:22 PM

Share

ಇಡೀ ದೇಶವೇ ಅಚ್ಚರಿ ಪಟ್ಟುವ ದಿಟ್ಟ ನಿರ್ಧಾರ ತೆಗೆದುಕೊಂಡ ಕುಟುಂಬವೊಂದರ ಕಥೆ ಇದು. ಲೈಫ್​​ನ್ನು ಎಂಜಾಯಿ ಮಾಡಬಬೇಕಾದ ವಯಸ್ಸಿ ಅವರದ್ದು, ಆದರೆ ಸನ್ಯಾಸತ್ವ ಸ್ವೀಕಾರ ಮಾಡುವ ಮೂಲಕ ಆಧ್ಯಾತ್ಮಿಕತೆ ಕಡೆ ಸಾಗಿರುವುದು ಇಡೀ ಜಿಲ್ಲೆಯನ್ನೇ ಅಚ್ಚರಿಗೊಳಿಸಿದೆ. ಇದು ದಾವಣಗೆರೆ ನಗರದ ಚೌಕಿಪೇಟೆಯಲ್ಲಿ ನಡೆದ ಘಟನೆ. ಈ ಪ್ರದೇಶವನ್ನು ದೊಡ್ಡ ವಾಣಿಜ್ಯ ಪ್ರದೇಶ ಎಂದು ಕರೆಯುತ್ತಾರೆ. ಇಲ್ಲಿನ ಜೈನ ಮಂದಿರದ ಬಳಿ ವಿಶೇಷವಾದ ಸಂಭ್ರಮ, ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಹಬ್ಬಕ್ಕೆ ಬಂದವರು ಯುವ ಸಮೂಹ,  ಜೈನ ಗುರು ಆಚಾರ್ಯ ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಅವರು ಸಮ್ಮುಖದಲ್ಲಿ ನಾಲ್ವರಿಗೆ ನಾಳೆ (ಮಾ.4) ಸನ್ಯಾಸ ಧೀಕ್ಷೆ ನೀಡಲಾಗುವುದು.

ಧೀಕ್ಷೆಗೂ ಮೊದಲು ರಾಜಬೀದಿಯಲ್ಲಿ ಸನ್ಯಾಸತ್ವ ಪಡೆಯುವರ ಭವ್ಯ ಮೆರವಣಿಯಲ್ಲಿ ಬರುತ್ತಾರೆ. ಇದರಲ್ಲಿ ಮೊದಲೇ ದೀಕ್ಷೆ ಪಡೆಯುವವರು 30 ವರ್ಷದ ಕ್ರುನಾಲಿ ಬೇನ್, ದಾವಣಗೆರೆ ನಗರದ ಕಮಲೇಶ್ ಜೈನ್ ಹಾಗೂ ಬಬಿತಾ ಜೈನ್ ದಂಪತಿಗಳ ಪುತ್ರಿ. ಕ್ರುನಾಲಿ ಜೈನ್ ಪುಣೆಯ ಸಿಂಬೋಸಿಸ್ ಕಾಲೇಜಿನಿಂದ ಎಂಬಿಎ ಮುಗಿಸಿ ಓದು ಮುಗಿದ ಬಳಿಕ ಸನ್ಯಾಸತ್ವಕ್ಕೆ ಮುಂದಾಗಿದ್ದಾರೆ. ಇನ್ನು ಎರಡನೇಯವರು 28 ವರ್ಷದ ದೀಕ್ಷಿತ ಬೇನ್. ಅರುಣ್ ಕುಮಾರ್ ಜೈನ್- ಅನ್ನಪೂರ್ಣ ಬಾಯಿ ದಂಪತಿಗಳ ಪುತ್ರಿ. ಇವರು ದಾವಣಗೆರೆಯಲ್ಲಿ ಬಿಕಾಂ ಮುಗಿಸಿದ್ದಾರೆ. ಈ ಇಬ್ಬರು ಕೋಟ್ಯಾಧೀಶ್ವರರ ಮಕ್ಕಳು. ಮೇಲಾಗಿ ಉನ್ನತ ಶಿಕ್ಷಣ ಪಡೆದವರು. ಸನ್ಯಾಸತ್ವ ಸ್ವೀಕರಿಸಿದ್ರೆ ಮಾತ್ರ ಸುಖ ಎಂದು ಈ ಯುವತಿಯರು ಹೇಳುತ್ತಾರೆ.

ಇನ್ನು ಈ ಇಬ್ಬರು ಯುವತಿಯರು ಸನ್ಯಾಸತ್ವ ಸ್ವೀಕರಿಸಿದ ನಂತರ, ಮತ್ತೆ 52 ವರ್ಷ ಭರತ್ ಜೈನ್ ಹಾಗೂ 50 ವರ್ಷದ ಆರತಿ ಬೇನ್ ಅವರಿಗೆ ಸನ್ಯಾಸತ್ವ ನೀಡಲಾಗುವುದು.  ದಾವಣಗೆರೆಯ ಲಲಿತ್ ಗಾರ್ಮೇಟ್ ನ ಮಾಲೀಕರು. ಎಲ್ಲವನ್ನ ಬಿಟ್ಟು ಆಧ್ಯಾತ್ಮದ ಕಡೆ ಬಂದಿದ್ದಾರೆ. ಇಲ್ಲಿ ಇನ್ನೊಂದು ವಿಶೇಷ ಅಂದ್ರೆ ಈ ದಂಪತಿಗಳಿಗೆ ಇಬ್ಬರು ಗಂಡ ಮಕ್ಕಳಿದ್ದರು. ಅವರಿಬ್ಬರೂ ಮೂರು ವರ್ಷದ ಹಿಂದೆ ಜೈನ್ ಸನ್ಯಾಸತ್ವ ದೀಕ್ಷೆಯನ್ನು ಪಡೆದ್ದಾರೆ. ಈಗ ಅವರ ಹೆಸರು ಮಗ್ನಶೇಖರ್ ವಿಜಯ್ ಜಿ ಮಹಾರಾಜ್ ಹಾಗೂ ಪೂರ್ಣ ಶೇಖರ್ ವಿಜಯ್ ಜಿ ಮಹರಾಜ್ ಎಂದಾಗಿದೆ. ಹೀಗೆ ಇದ್ದ ಇಬ್ಬರು ಗಂಡು ಮಕ್ಕಳು ಸನ್ಯಾಸ ಸ್ವೀಕರಿಸಿ ಮೂರು ವರ್ಷವಾಗಿದೆ. ಈಗ ತಂದೆ ತಾಯಿ ಸಹ ಇದೇ ದಾರಿ ಹಿಡಿದಿದ್ದಾರೆ. ಜೀವನ ನೋಡಿ ಬಿಟ್ಟಿದ್ದೇನೆ. ಇನ್ನೇನಿದ್ದರು ಈ ಜೀವ ದೇವರ ಸೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಾವಣಗೆರೆಯ ಜೈನ ಸಮಾಜದ ನಾಲ್ವರಿಂದ ಸನ್ಯಾಸ ದೀಕ್ಷೆ ಸ್ವೀಕಾರ

ಕಳೆದ ಕೆಲ ದಿನಗಳ ಹಿಂದೆ ಓರ್ವ ರ್ಯಾಂಕ್ ವಿಜೇತ ಇಂಜಿನೀಯರಿಂಗ್ ಓದಿದವಳು ಸನ್ಯಾಸಿನಿ ಆಗ ಧೀಕ್ಷೆ ಪಡೆದಿದ್ದಳು. ಮುಂದಿನ ವಾರದಲ್ಲಿ ಇನ್ನು ನಾಲ್ವರು ಯುವತಿಯರು ಧೀಕ್ಷೆಗೆ ಸಜ್ಜಾಗಿದ್ದಾರೆ. ಹೀಗೆ ಯುವ ಜನಾಂಗ ಇಂತಹ ಆಧುನಿಕ ಯುಗದಲ್ಲಿ ಸನ್ಯಾಸದಂತಹ ಅತ್ಯಂತ ಕಠಿಣ ವೃತದ ಜೀವನಕ್ಕೆ ಮುಂದಾಗುವುದು ಅಚ್ಚರಿ ಮೂಡಿಸಿದೆ. ಬರಿಗಾಲಿನಲ್ಲಿ ನಡಿಗೆಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರವಾಸ ಮಾಡಬೇಕು. ಸೂರ್ಯೋಧಯಕ್ಕೆ ಮೊದಲು ಸೂರ್ಯಾಸ್ತದ ನಂತರ ಆಹಾರ ಸೇವನೆ ನಿಷೇಧ. ಇಂತದ ದಿಟ್ಟ ನಿರ್ಧಾರಕ್ಕೆ ನಿಖರ ಕಾರಣ ಮಾತ್ರ ನಿಗೂಢವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:21 pm, Tue, 3 March 26

Follow Us
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ