‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ್ರಿಯಾಂಕಾ ಗಾಂಧಿ ಆಕ್ರೋಶ
"ದೇಶದ ಯುವಜನತೆಯ ಮೇಲೆ ಪೆಲೆಟ್ ಗನ್ಗಳು ಮತ್ತು ಎಕೆ-47 ಬಂದೂಕುಗಳನ್ನು ಪ್ರಯೋಗಿಸುವ ಅಗತ್ಯವೇನಿತ್ತು? ಅವರೇನು ಭಯೋತ್ಪಾದಕರಾ? ಪೆಲೆಟ್ ಗನ್ ಬಳಸಲು ಆದೇಶ ನೀಡಿದವರು ಯಾರು? ಪ್ರಧಾನಿ ಮೋದಿಯವರೋ? ಅಥವಾ ಗೃಹ ಸಚಿವರೋ? ಅವರು ಇದಕ್ಕೆ ಉತ್ತರಿಸಲೇಬೇಕು. ಇಡೀ ದೇಶವೇ ಈ ಪ್ರಶ್ನೆಯನ್ನು ಕೇಳುತ್ತಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಪ್ರಶ್ನೆಯಲ್ಲ. ಇಡೀ ದೇಶವೇ ಇದಕ್ಕೆ ಉತ್ತರವನ್ನು ಬಯಸುತ್ತಿದೆ" ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ನವದೆಹಲಿ, ಜುಲೈ 28: ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ಕಾಯ್ದೆ ತಿದ್ದುಪಡಿ ವಿಧೇಯಕದ ಕುರಿತ ಲೋಕಸಭೆಯ ಚರ್ಚೆಯ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ. ಇದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಅವರೇನು ಭಯೋತ್ಪಾದಕರಾ? ಎಂದು ಪ್ರಿಯಾಂಕಾ ಗಾಂಧಿ (Priyanka Gandhi) ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಜುಲೈ 20ರಂದು ನಡೆದ ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆಯನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ, ವಿದ್ಯಾರ್ಥಿಗಳ ವಿರುದ್ಧ ಅಶ್ರುವಾಯು ಮತ್ತು ಪೆಲೆಟ್ ಗನ್ಗಳನ್ನು ಬಳಸುವ ಅಗತ್ಯವೇನಿತ್ತು? ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
“ದೇಶದ ಯುವಜನತೆಯ ಮೇಲೆ ಪೆಲೆಟ್ ಗನ್ಗಳು ಮತ್ತು ಎಕೆ-47 ಬಂದೂಕುಗಳನ್ನು ಪ್ರಯೋಗಿಸುವ ಅಗತ್ಯವೇನಿತ್ತು? ಅವರೇನು ಭಯೋತ್ಪಾದಕರಾ? ಪೆಲೆಟ್ ಗನ್ ಬಳಸಲು ಆದೇಶ ನೀಡಿದವರು ಯಾರು? ಪ್ರಧಾನಿ ಮೋದಿಯವರೋ? ಅಥವಾ ಗೃಹ ಸಚಿವರೋ? ಅವರು ಇದಕ್ಕೆ ಉತ್ತರಿಸಲೇಬೇಕು. ಇಡೀ ದೇಶವೇ ಈ ಪ್ರಶ್ನೆಯನ್ನು ಕೇಳುತ್ತಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಪ್ರಶ್ನೆಯಲ್ಲ. ಇಡೀ ದೇಶವೇ ಇದಕ್ಕೆ ಉತ್ತರವನ್ನು ಬಯಸುತ್ತಿದೆ” ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

