Bigg Boss Kannada
ಅತಿ ದೊಡ್ಡ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ಗೆ ಸ್ಥಾನ ಇದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭ ಆಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು.
ಕನ್ನಡದಲ್ಲಿ ಬಿಗ್ ಬಾಸ್ 12ನೇ ಸೀಸನ್ ಆರಂಭ ಆಗಲಿದೆ. ಒಂದು ಒಟಿಟಿ ಹಾಗೂ ಒಂದು ಮಿನಿ ಸೀಸನ್ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. 17-18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರುತ್ತಾರೆ. 100 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯುತ್ತದೆ.
ಬಿಗ್ ಬಾಸ್ ಒಳಗೆ ಹೋದ ಬಳಿಕ ಹೊರ ಜಗತ್ತಿನ ಜೊತೆಗಿನ ಸಂಪರ್ಕ ಕಳೆದು ಹೋಗುತ್ತದೆ. ಬಿಗ್ ಬಾಸ್ನಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಯಾರ ಮೇಲಾದರೂ ಕೈ ಮಾಡಿದರೆ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಗೆದ್ದ ಸ್ಪರ್ಧಿಗೆ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಸಿಗುತ್ತದೆ. ಸುದೀಪ್ ನಿರೂಪಣೆಯಿಂದ ಬಿಗ್ ಬಾಸ್ ಕನ್ನಡದ ರಂಗು ಹೆಚ್ಚಿದೆ.
ಇನ್ನೂ ಹೆಚ್ಚು ಓದಿ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ ಮಾಡಿದ ಸ್ಪರ್ಧಿ
'ಬಿಗ್ ಬಾಸ್ ಅಗ್ನಿಪರೀಕ್ಷೆ' ವೇದಿಕೆಯಲ್ಲಿ ಸ್ಪರ್ಧಿ ಪೂರ್ಣಿಮಾ ಶೋ ಹಾಗೂ ನಿರ್ಣಾಯಕರ ವಿರುದ್ಧವೇ ಪಕ್ಷಪಾತದ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ಕೋಪಗೊಂಡ ನಿರ್ಣಾಯಕರಾದ ವಿನಯ್ ಗೌಡ, ಶೋ ಮೇಲೆ ನಂಬಿಕೆ ಇಲ್ಲದಿದ್ದರೆ ತಕ್ಷಣ ವಾಕ್ ಔಟ್ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದ್ದು, ವೇದಿಕೆಯಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ.
- Rajesh Duggumane
- Updated on: Aug 29, 2026
- 9:33 am
ಬಿಗ್ಬಾಸ್ ಅಗ್ನಿಪರೀಕ್ಷೆ: ಗೋಲ್ಡನ್ ಟಿಕೆಟ್ ಪಡೆಯಲು ಸ್ಪರ್ಧಿಗಳ ಹರಸಾಹಸ
Bigg Boss Kannada season 13: ಬಿಗ್ಬಾಸ್ ಕನ್ನಡ ಸೀಸನ್ 13ರ ಬಿಗ್ಬಾಸ್ ಅಗ್ನಿಪರೀಕ್ಷೆ ಚಾಲ್ತಿಯಲ್ಲಿದ್ದು, ಆಕಾಂಕ್ಷಿಗಳಿಗೆ ನಾನಾ ರೀತಿಯ ಟಾಸ್ಕ್ಗಳನ್ನು ಕೊಡಲಾಗುತ್ತಿದೆ. ಬಿಗ್ಬಾಸ್ನ ಗೋಲ್ಡನ್ ಟಿಕೆಟ್ ಪಡೆಯಲು ಸ್ಪರ್ಧಿಗಳು ನಾನಾ ರೀತಿಯ ಹರಸಾಹಸಗಳನ್ನು ಮಾಡುತ್ತಿದ್ದಾರೆ. ಶ್ರುತಿ, ವಿನಯ್, ಸಂಗೀತಾ, ಚಂದನ್ ಶೆಟ್ಟಿ ಅವರುಗಳು ಜಡ್ಜ್ಗಳಾಗಿದ್ದಾರೆ. ವಿಡಿಯೋ ನೋಡಿ...
- Manjunatha C
- Updated on: Aug 29, 2026
- 8:27 am
ಸಂಗೀತಾ ಶೃಂಗೇರಿ-ವಿನಯ್ ಗೌಡ ಸ್ಪೆಷಲ್ ಪೋಸ್ಟ್; ಬಿಗ್ ಬಾಸ್ ಜೋಡಿಯ ಹೊಸ ಸಾಹಸವೇನು?
ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಇತ್ತೀಚೆಗೆ ಒಟ್ಟಿಗೆ ಇರುವ ಫೋಟೋ ಒಂದನ್ನು ಹಂಚಿಕೊಂಡು 'ಮುಂದೇನು?' ಎಂಬ ಕುತೂಹಲಕಾರಿ ಕ್ಯಾಪ್ಷನ್ ನೀಡಿದ್ದಾರೆ. 'ಹರ ಹರ ಮಹಾದೇವ' ಧಾರಾವಾಹಿಯಿಂದ ಆರಂಭವಾಗಿ ಬಿಗ್ ಬಾಸ್ ಹಾಗೂ ಅಗ್ನಿಪರೀಕ್ಷೆಯವರೆಗೆ ಸಾಗಿಬಂದ ಈ ಜೋಡಿ ಇದೀಗ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
- Rajesh Duggumane
- Updated on: Aug 27, 2026
- 12:18 pm
‘ಬಿಗ್ ಬಾಸ್ ಅಗ್ನಿ ಪರೀಕ್ಷೆ’ಯಲ್ಲಿ ಹೈ-ವೋಲ್ಟೇಜ್ ಕಾದಾಟ: ಗೆಲುವಿಗಾಗಿ ಬಿರುಸಿನ ಪೈಪೋಟಿ
'ಬಿಗ್ ಬಾಸ್ ಅಗ್ನಿ ಪರೀಕ್ಷೆ' ಪ್ರೋಮೋದಲ್ಲಿ ಬಲೂನ್ ಟಾಸ್ಕ್ ಮೂಲಕ ಸ್ಪರ್ಧೆ ತೀವ್ರಗೊಂಡಿದೆ. ಲೀಡರ್ಬೋರ್ಡ್ನಲ್ಲಿ ಶೂನ್ಯ ಅಂಕದಲ್ಲಿದ್ದ ಚಂದನ್ ತಂಡ ಗೆಲುವಿಗಾಗಿ ಹೋರಾಡುತ್ತಿದ್ದು, ಪ್ರತಿಯೊಂದು ಪಾಯಿಂಟ್ಗಾಗಿ ತಂಡಗಳ ನಡುವೆ ರೋಮಾಂಚಕ ಕಾದಾಟ ನಡೆಯುತ್ತಿದೆ. 'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ: ಗೆಲುವಿಗಾಗಿ ಬಿರುಸಿನ ಪೈಪೋಟಿ.
- Rajesh Duggumane
- Updated on: Aug 25, 2026
- 8:50 am
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ; ವೋಟಿಂಗ್ ಪ್ರಕ್ರಿಯೆ ಆರಂಭ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಿಂದ ಮುಖ್ಯ ಮನೆಗೆ ಕಳುಹಿಸಲು 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ವೀಕ್ಷಕರಿಗೆ ನೀಡಲಾಗಿದೆ. ಜಿಯೋ ಹಾಟ್ಸ್ಟಾರ್ನಲ್ಲಿ ವೋಟಿಂಗ್ ಲೈವ್ ಆಗಿದೆ. ಕಠಿಣ ಟಾಸ್ಕ್ಗಳನ್ನು ಎದುರಿಸುತ್ತಿರುವ ಸ್ಪರ್ಧಿಗಳಲ್ಲಿ ಯಾರು ಬಿಗ್ ಬಾಸ್ ಫ್ಲೈಟ್ ಏರಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದ್ದು, ಅಭಿಮಾನಿಗಳು ಈಗಲೇ ವೋಟ್ ಮಾಡಬಹುದಾಗಿದೆ.
- Rajesh Duggumane
- Updated on: Aug 24, 2026
- 9:32 am
‘ಗೆಟೌಟ್ ಅನ್ನೋದಲ್ಲ ಬೇಡ’; ವಿನಯ್ ಗೌಡಗೆ ನೇರವಾಗಿ ಹೇಳಿದ ಸ್ಪರ್ಧಿ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಶೋನಲ್ಲಿ ವಿನಯ್ ಗೌಡ ಸ್ಪರ್ಧಿಗಳಿಗೆ ನೀಡಿದ ‘ಗೆಟ್ ಔಟ್’ ಕೌಂಟರ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅವರ ಆ್ಯಟಿಟ್ಯೂಡ್ ಮತ್ತು ಪದಬಳಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪರ್ಧಿಯೊಬ್ಬರು ನೇರವಾಗಿಯೇ ತಿರುಗೇಟು ನೀಡಿದ್ದಾರೆ. ಈ ಘಟನೆಯ ಬಳಿಕ ವಿನಯ್ ಗೌಡ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಹಾಗೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
- Rajesh Duggumane
- Updated on: Aug 24, 2026
- 7:40 am
ಸೆಪ್ಟೆಂಬರ್ 6ರಂದು ‘ಬಿಗ್ ಬಾಸ್ ಕನ್ನಡ 13’ ಶುರು; ಅಧಿಕೃತವಾಗಿ ತಿಳಿಸಿದ ಕಿಚ್ಚ ಸುದೀಪ್
ವೀಕ್ಷಕರು ಭಾರಿ ಕಾತರದಿಂದ ಕಾಯುತ್ತಿರುವ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನ ಹೊಸ ಆವೃತ್ತಿ ಸೆಪ್ಟೆಂಬರ್ 6ರಂದು ಶುರು ಆಗಲಿದೆ. ಕಿಚ್ಚ ಸುದೀಪ್ ಅವರು ನಿರೂಪಕನಾಗಿ ಶೋ ನಡೆಸಿಕೊಡಲಿದ್ದಾರೆ. ಸೆಪ್ಟೆಂಬರ್ 6ರಂದು ‘ಬಿಗ್ ಬಾಸ್ ಕನ್ನಡ 13’ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ಈಗ ಪ್ರೋಮೋ ಬಿಡುಗಡೆ ಆಗಿದೆ.
- Madan Kumar
- Updated on: Aug 21, 2026
- 9:31 pm
‘ಇನ್ಸೈಡ್.. ಔಟ್ಸೈಡ್..’ ಕಾರಣಕ್ಕೆ ‘ಆರ್ಯಭಟ’ ವಿನಯ್ ಗೌಡ ಫುಲ್ ಟ್ರೋಲ್; ಖಡಕ್ ತಿರುಗೇಟು
Vinay Gowda: ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ವೃತ್ತಕ್ಕೆ 'ಇನ್ಸೈಡ್-ಔಟ್ಸೈಡ್' ಎಂದಿದ್ದ ನಟ ವಿನಯ್ ಗೌಡ ತಮ್ಮನ್ನು 'ಆರ್ಯಭಟ' ಎಂದು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ್ದಾರೆ. ನೆಗೆಟಿವ್ ಕಾಮೆಂಟ್ಗಳಿಂದಲೇ ನನ್ನ ಪ್ರೊಫೈಲ್ ವೈರಲ್ ಆಗುತ್ತಿದ್ದು ಪುಕ್ಕಟೆ ಮಾರ್ಕೆಟಿಂಗ್ ಮಾಡುತ್ತಿದ್ದೀರಿ ಎಂದು ತಿರುಗೇಟು ಕೊಟ್ಟಿದ್ದಾರೆ.
- Rajesh Duggumane
- Updated on: Aug 20, 2026
- 7:43 am
ವಿನಯ್ ಮಾತಿಗೆ ಹೆದರಿ ‘ಅಗ್ನಿಪರೀಕ್ಷೆ’ಯಿಂದ ಅರ್ಧಕ್ಕೆ ನಡೆದ ಅಮುಕು ಡುಮುಕು ಮಂಜು
ಸೋಶಿಯಲ್ ಮೀಡಿಯಾ ಸ್ಟಾರ್ ಅಮುಕು ಡುಮುಕು ಮಂಜು ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದಿಂದ ಅರ್ಧದಲ್ಲೇ ಹೊರನಡೆದಿದ್ದಾರೆ. ನಟಿ ಸಂಗೀತಾ ಅವರನ್ನು ಇಂಪ್ರೆಸ್ ಮಾಡುವ ಟಾಸ್ಕ್ ನಿರಾಕರಿಸಿದಾಗ ಜಡ್ಜ್ ವಿನಯ್ ಗೌಡ ಸಿಟ್ಟಿಗೆದ್ದರು. ಈ ಮಾತಿನ ಚಕಮಕಿಯಿಂದ ಬೇಸತ್ತ ಮಂಜು ವೇದಿಕೆಯಿಂದ ದಿಢೀರ್ ನಿರ್ಗಮಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
- Rajesh Duggumane
- Updated on: Aug 17, 2026
- 2:54 pm
ಬಿಗ್ಬಾಸ್ ಗೆದ್ದವರಿಗೆ ಸಿಗುವ ಹಣವೆಷ್ಟು? ಕಟ್ ಆಗುವುದೆಷ್ಟು? ವಿವರಿಸಿದ ಮಾಜಿ ವಿನ್ನರ್
Bigg Boss Kannada: ಬಿಗ್ಬಾಸ್ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನ ಸಿಗುವುದೇನೋ ನಿಜ ಆದರೆ ಅದು ಕೈಗೆ ಬರುವಷ್ಟರಲ್ಲಿ ಸಾಕಷ್ಟು ಹಣ ಕಟ್ ಆಗಿ ಸರ್ಕಾರ ಇನ್ನಿತರೆಗಳ ಪಾಲಾಗಿರುತ್ತದೆ. ಕಾರಿನ ಕತೆಯೂ ಸಹ ಭಿನ್ನ ಏನಲ್ಲ. ಬಿಗ್ಬಾಸ್ ಗೆದ್ದವರಿಗೆ ಕೊನೆಗೆ ಕೈಗೆ ಬರುವುದೆಷ್ಟು ಎಂಬುದನ್ನು ವಿವರಿಸಿದ್ದಾರೆ ಈ ಹಿಂದೆ ಬಿಗ್ಬಾಸ್ ಗೆದ್ದಿರುವ ಸ್ಪರ್ಧಿ.
- Manjunatha C
- Updated on: Aug 16, 2026
- 8:03 pm
ಬಿಗ್ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
Bigg Boss Kannada 13: ಯಾರು ಬಿಗ್ಬಾಸ್ ಮನೆಯ ಒಳಗೆ ಹೋಗುತ್ತಾರೆ ಎಂಬುದನ್ನು ಜಡ್ಜ್ಗಳು ನಿರ್ಧರಿಸುತ್ತಾರೆ. ಶ್ರುತಿ, ಚಂದನ್ ಶೆಟ್ಟಿ, ಸಂಗೀತಾ, ವಿನಯ್ ಅವರುಗಳು ಆಕಾಂಕ್ಷಿಗಳಿಗೆ ಪ್ರಶ್ನೆಗಳನ್ನು ಕೇಳಿ ಅರ್ಹರನ್ನು ಆಯ್ಕೆ ಮಾಡುತ್ತಾರೆ. ಇದೀಗ ಅಪ್ಪ-ಮಗ ಇಬ್ಬರೂ ಒಟ್ಟಿಗೆ ಬಿಗ್ಬಾಸ್ ಮನೆಯ ಒಳಗೆ ಹೋಗಲು ಬಂದಿದ್ದರು. ಆದರೆ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಕಳಿಸಲು ಅವಕಾಶ ಇದೆ ಎಂದಾಗ ಬಿಗ್ಬಾಸ್ ವೇದಿಕೆಯಲ್ಲೇ ಅಪ್ಪ-ಮಗನ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ವಿಡಿಯೋ ನೋಡಿ...
- Manjunatha C
- Updated on: Aug 15, 2026
- 9:25 pm
‘ಜಡ್ಜ್ ಆಗಿ ತಪ್ಪುಮಾಡಿದೆ’; ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಟ್ರೋಲ್ಸ್ನಿಂದ ಸಂಗೀತಾ ಶೃಂಗೇರಿ ಕಂಗಾಲು
'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋ ಜಡ್ಜ್ಗಳಾದ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಸೋಶಿಯಲ್ ಮೀಡಿಯಾ ಟ್ರೋಲ್ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲಾಗುತ್ತಿರುವ ನೆಗೆಟಿವ್ ಕಾಮೆಂಟ್ಗಳನ್ನು ವಿನಯ್ ಎಂಜಾಯ್ ಮಾಡುತ್ತಿರುವುದನ್ನು ಕಂಡು ಸಂಗೀತಾ ಶೃಂಗೇರಿ ಸೆಟ್ನಲ್ಲೇ ವಿನಯ್ ವಿರುದ್ಧವಾಗಿ ಕಿಡಿಕಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
- Rajesh Duggumane
- Updated on: Aug 14, 2026
- 2:49 pm