Bigg Boss Kannada
ಅತಿ ದೊಡ್ಡ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ಗೆ ಸ್ಥಾನ ಇದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭ ಆಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು.
ಕನ್ನಡದಲ್ಲಿ ಬಿಗ್ ಬಾಸ್ 12ನೇ ಸೀಸನ್ ಆರಂಭ ಆಗಲಿದೆ. ಒಂದು ಒಟಿಟಿ ಹಾಗೂ ಒಂದು ಮಿನಿ ಸೀಸನ್ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. 17-18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರುತ್ತಾರೆ. 100 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯುತ್ತದೆ.
ಬಿಗ್ ಬಾಸ್ ಒಳಗೆ ಹೋದ ಬಳಿಕ ಹೊರ ಜಗತ್ತಿನ ಜೊತೆಗಿನ ಸಂಪರ್ಕ ಕಳೆದು ಹೋಗುತ್ತದೆ. ಬಿಗ್ ಬಾಸ್ನಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಯಾರ ಮೇಲಾದರೂ ಕೈ ಮಾಡಿದರೆ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಗೆದ್ದ ಸ್ಪರ್ಧಿಗೆ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಸಿಗುತ್ತದೆ. ಸುದೀಪ್ ನಿರೂಪಣೆಯಿಂದ ಬಿಗ್ ಬಾಸ್ ಕನ್ನಡದ ರಂಗು ಹೆಚ್ಚಿದೆ.
ಗಿಲ್ಲಿ ವಿರುದ್ಧ ನೆಗೆಟಿವ್ ಪಿಆರ್ ಮಾಡ್ತಿರೋದು ಯಾರು? ದೊಡ್ಡ ಸಾಕ್ಷಿ ತಂದ ಫ್ಯಾನ್ಸ್
ವಿನಯ್ ಗೌಡರ ಹೇಳಿಕೆಯಂತೆ ಗಿಲ್ಲಿ ವಿರುದ್ಧ ವ್ಯವಸ್ಥಿತ ನೆಗೆಟಿವ್ ಪ್ರಚಾರ ನಡೆಯುತ್ತಿದೆ. ಕೆಲವು ಪಿಆರ್ ಏಜೆನ್ಸಿಗಳು ನಕಲಿ ಪೋಸ್ಟ್ಗಳನ್ನು ಬಳಸಿ ಅವರ ಜನಪ್ರಿಯತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿವೆ. ಗಿಲ್ಲಿ ಅಭಿಮಾನಿಗಳು ಇದನ್ನ ಖಚಿತಪಡಿಸಲು ಮೂರು ಒಂದೇ ರೀತಿಯ ಪೋಸ್ಟ್ಗಳನ್ನು ಪತ್ತೆ ಹಚ್ಚಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಈ ಕುತಂತ್ರದ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ.
- Rajesh Duggumane
- Updated on: Jan 3, 2026
- 3:01 pm
‘ಸಾರಿ, ಸಾರಿ, ಸಾರಿ’; ಸುದೀಪ್ ಹಾಗೂ ಫ್ಯಾನ್ಸ್ ಬಳಿ ಆರ್ಯವರ್ಧನ್ ಗುರೂಜಿ ಬಹಿರಂಗ ಕ್ಷಮೆ
ಆರ್ಯವರ್ಧನ್ ಗುರೂಜಿ ಸುದೀಪ್ ಮತ್ತು ಬಿಗ್ ಬಾಸ್ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆ ಕೇಳಿದ್ದಾರೆ. ಅಭಿಮಾನಿಗಳಿಂದ ತೀವ್ರ ವಿರೋಧ ಎದುರಿಸಿದ ನಂತರ, ಗುರೂಜಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ. "ಮಾತನಾಡುವ ಭರದಲ್ಲಿ ಹೇಳಿದ್ದೇನೆ, ನೋವಾಗಿದ್ದರೆ ಕ್ಷಮಿಸಿ" ಎಂದು ಸುದೀಪ್ ಮತ್ತು ಅವರ ಅಭಿಮಾನಿಗಳಿಗೆ ಆರ್ಯವರ್ಧನ್ ಗುರೂಜಿ ಮನವಿ ಮಾಡಿದ್ದಾರೆ.
- Rajesh Duggumane
- Updated on: Jan 3, 2026
- 1:10 pm
ಈ ವಾರ ಬಿಗ್ ಬಾಸ್ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಬಿಗ್ ಬಾಸ್ ಕನ್ನಡ ಸೀಸನ್ 12ರ ಕೊನೆಯ ವಾರಗಳು ಚಾಲ್ತಿಯಲ್ಲಿ ಇವೆ. ಈ ವಾರ ಸುದೀಪ್ ಅವರು ಆಗಮಿಸುತ್ತಿದ್ದಾರೆ. ಅವರು ಹಲವು ವಿಷಯಗಳನ್ನು ಚರ್ಚೆ ಮಾಡಲಿದ್ದಾರೆ. ಈ ವಾರ ಅವರು ಚರ್ಚೆ ಮಾಡಬೇಕಿರುವ ವಿಷಯ ಕೂಡ ದೊಡ್ಡದು ಇದೆ. ಆ ಬಗ್ಗೆ ಇಲ್ಲಿದೆ ವಿವರ.
- Rajesh Duggumane
- Updated on: Jan 3, 2026
- 9:04 am
ಅಶ್ವಿನಿ ಗೌಡಗೆ ಮಾತಿನ ಮೂಲಕವೇ ಬುದ್ಧಿ ಕಲಿಸಿದ ಗಿಲ್ಲಿ ನಟ
Gilli Lesson to Ashwini: ಗಿಲ್ಲಿ ನಟ ಅವರು ಬಿಗ್ ಬಾಸ್ ಸೀಸನ್ 12ರಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರಿಗೂ ಅಶ್ವಿನಿಗೂ ಸಾಕಷ್ಟು ಕಿತ್ತಾಟ ನಡೆಯುತ್ತಲೇ ಇರುತ್ತದೆ. ಈಗ ಅವರು ಅಶ್ವಿನಿಗೆ ಮಾತಿನ ಮೂಲಕ ಬುದ್ಧಿ ಕಲಿಸಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
- Shreelaxmi H
- Updated on: Jan 3, 2026
- 7:55 am
ಕ್ಯಾಪ್ಟನ್ಸಿ ನಂಗೇ ಕೊಡಿ ಎಂದು ಬಿಗ್ ಬಾಸ್ ಬಳಿ ಹಠ ಹಿಡಿದ ಅಶ್ವಿನಿ; ಇದೆಂಥಾ ಲಾಜಿಕ್?
ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಅಶ್ವಿನಿ ಗೌಡ ಅವರ ನಡೆ ಈಗ ಚರ್ಚೆ ಹುಟ್ಟುಹಾಕಿದೆ. ಧನುಶ್ ಎದುರು ಸೋತ ಬಳಿಕ, ನಿಯಮ ಪಾಲನೆಯಲ್ಲಿ ಉಂಟಾದ ದೋಷವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಅಶ್ವಿನಿ ಪ್ರಯತ್ನಿಸಿದರು. ಧನುಶ್ ಬಳಿ ಕ್ಯಾಪ್ಟನ್ಸಿಗಾಗಿ ಮನವಿ ಮಾಡಿದ್ದು, 'ಸಂತ್ರಸ್ತೆ ಕಾರ್ಡ್' ಆಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.
- Rajesh Duggumane
- Updated on: Jan 3, 2026
- 7:27 am
ಬಿಗ್ ಬಾಸ್ ಕನ್ನಡ: ‘ಅಶ್ವಿನಿ ಗೌಡ ಸೋಲಬೇಕು ಅಂತ ಬಯಸುವವರೇ ಜಾಸ್ತಿ ಜನ ಇದ್ದಾರೆ’
ಅಶ್ವಿನಿ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ಸ್ಟ್ರಾಂಗ್ ಸ್ಪರ್ಧಿ ಹೌದು. ಆದರೆ ಅವರಿಗೆ ಗಿಲ್ಲಿ, ರಾಶಿಕಾ, ಧನುಶ್ ಮುಂತಾದ ಸ್ಪರ್ಧಿಗಳು ಕೂಡ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ತಮ್ಮ ಸೋಲನ್ನು ಅನೇಕರು ಬಯಸುತ್ತಿದ್ದಾರೆ ಎಂದು ಅಶ್ವಿನಿ ಗೌಡ ಅವರಿಗೆ ಅನಿಸಲು ಶುರು ಆಗಿದೆ.
- Madan Kumar
- Updated on: Jan 2, 2026
- 10:36 pm
ಬಿಗ್ ಬಾಸ್: ಈ ಮಹಿಳಾ ಸ್ಪರ್ಧಿಗೆ 150 ಬಾಡಿಗಾರ್ಡ್ಸ್? ಬಯಲಾಯ್ತು ಅಸಲಿ ವಿಷಯ
ಇವರು ಫ್ಯಾಕ್ಟರಿ ಹೊಂದಿದ್ದಾರೆ. ನೂರಾರು ಮಂದಿಗೆ ಕೆಲಸ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಇವರು ಫೇಮಸ್. ಇವರಿಗೆ ಬರೋಬ್ಬರಿ 150 ಮಂದಿ ಬಾಡಿಗಾರ್ಡ್ಸ್ ಇದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆ ವದಂತಿಗೆ ಈಗ ಸ್ಪಷ್ಟನೆ ನೀಡಲಾಗಿದೆ. ಅಂದಹಾಗೆ, ಇದು ತಾನ್ಯಾ ಮಿತ್ತಲ್ ಕುರಿತಾದ ಸುದ್ದಿ. ತಮ್ಮ ಬಗ್ಗೆ ಹಬ್ಬಿರುವ ಅಂತೆ-ಕಂತೆಗಳ ಬಗ್ಗೆ ತಾನ್ಯಾ ಮಾತಾಡಿದ್ದಾರೆ.
- Madan Kumar
- Updated on: Jan 2, 2026
- 3:50 pm
ಗಿಲ್ಲಿ ಬಳಿ ಕ್ಷಮೆ ಕೇಳಿದ ಧ್ರುವಂತ್; ಆ ಒಂದು ಘಟನೆ ಎಲ್ಲವನ್ನೂ ಬದಲಿಸಿತು?
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಧ್ರುವಂತ್ ಗಿಲ್ಲಿಗೆ ಕ್ಷಮೆ ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸದಾ ಗಿಲ್ಲಿ ಜೊತೆ ಕಿತ್ತಾಡುತ್ತಿದ್ದ ಧ್ರುವಂತ್, ಹೊಸ ವರ್ಷದಂದು ಗಿಲ್ಲಿಯ ರ್ಯಾಪ್ ಹಾಡು ಕೇಳಿ ಮನಸೋತರು. ತಮ್ಮ ಬಗ್ಗೆ ಹಾಡಿನಲ್ಲಿದ್ದ ಸಕಾರಾತ್ಮಕ ಸಾಲುಗಳಿಂದ ಪ್ರಭಾವಿತರಾಗಿ, ತಮ್ಮ ಹಿಂದಿನ ನಡವಳಿಕೆಗಾಗಿ ಗಿಲ್ಲಿ ಬಳಿ ಕ್ಷಮೆ ಯಾಚಿಸಿದರು ಎನ್ನಲಾಗಿದೆ.
- Rajesh Duggumane
- Updated on: Jan 2, 2026
- 1:17 pm
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಬಿಗ್ ಬಾಸ್ ಮನೆಯಲ್ಲಿ ಈ ವಾರ ಬಂಪರ್ ಅವಕಾಶ ಸಿಕ್ಕಿದೆ. ಕೊನೆಯ ಕ್ಯಾಪ್ಟನ್ ಯಾರು ಆಗುತ್ತಾರೆ ಎನ್ನುವ ಪ್ರಶ್ನೆ ಮೂಡಿತ್ತು. ಕೊನೆಗೂ ಉತ್ತರ ಸಿಕ್ಕಿದೆ. ಧನುಷ್ ಅವರು ಕ್ಯಾಪ್ಟನ್ ಏನೋ ಆಗಿದ್ದಾರೆ. ಆದರೆ, ಅದು ಮೋಸದಿಂದವೇ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.
- Rajesh Duggumane
- Updated on: Jan 2, 2026
- 8:26 am
ಗಿಲ್ಲಿ ಬಿಗ್ ಬಾಸ್ ಒಳಗೆ ಹಾಗೆ ಇರೋದು ಏಕೆ? ಗೆಳೆಯನಿಂದ ಸಿಕ್ತು ಉತ್ತರ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ತಮ್ಮ ಸರಳ ಸ್ವಭಾವದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಡೆನುಡಿ, ಬದುಕಿನ ವಿಧಾನ ಸದಾ ಕುತೂಹಲ ಮೂಡಿಸಿದೆ. ಹೊರಗಿನ ಜೀವನವನ್ನು ಬಿಗ್ ಬಾಸ್ನಲ್ಲೂ ಮುಂದುವರಿಸಿದ್ದಾರೆ ಎಂದು ಅವರ ಸ್ನೇಹಿತರು ದೃಢಪಡಿಸಿದ್ದಾರೆ. ಇದೇ ಅವರ ಜನಪ್ರಿಯತೆಗೆ ಕಾರಣವಾಗಿ, ಫಿನಾಲೆಗೆ ತಲುಪಲು ಸಹಾಯ ಮಾಡಿದೆ.
- Shreelaxmi H
- Updated on: Jan 2, 2026
- 7:48 am
‘ಐ ಲವ್ ಯುವರ್..’ ಎಂದು ಗಿಲ್ಲಿಗೆ ಹೇಳಿದ ರಕ್ಷಿತಾ; ಶಾಕ್ ಆದ ಕಾವ್ಯಾ
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿಗೆ ಗಿಲ್ಲಿ ಮೇಲೆ ವಿಶೇಷ ಒಲವಿದೆ. ‘ಗಿಲ್ಲಿಯಂತಹ ಹುಡುಗ ಬೇಕು’ ಎಂದಿದ್ದ ರಕ್ಷಿತಾ, ಈಗ ‘ಐ ಲವ್ ಯುವರ್ ಲೈಫ್’ ಎಂದು ಹಾಡಿದ್ದಾರೆ. ಅವರ ಕೀಟಲೆ ಸ್ವಭಾವ ರಕ್ಷಿತಾಗೆ ಇಷ್ಟವಾಗಿದೆ. ಕಾವ್ಯಾ ಘಟನೆಯಿಂದ ಶಾಕ್ ಆದರ. ರಕ್ಷಿತಾ ಹಾಗೂ ಗಿಲ್ಲಿ ಫಿನಾಲೆ ತಲುಪುವ ಕನಸು ಕಾಣುತ್ತಿದ್ದಾರೆ.
- Rajesh Duggumane
- Updated on: Jan 2, 2026
- 7:32 am
ಗೆಲ್ಲೋ ಮೊದಲೇ ಅಶ್ವಿನಿ ಎದುರು ಬೀಗಿದ ಗಿಲ್ಲಿ ನಟ; ಕೊನೆಗೆ ಸಿಕ್ಕಿದ್ದು ಸೋಲು
ಗಿಲ್ಲಿ ನಟ ಬಿಗ್ ಬಾಸ್ ಟಾಸ್ಕ್ನಲ್ಲಿ ಗೆಲುವಿಗೂ ಮೊದಲೇ ಸಂಭ್ರಮಿಸಿ ವಿವಾದಕ್ಕೆ ಸಿಲುಕಿದ್ದಾರೆ. ಅಶ್ವಿನಿ ಎದುರು ಸುಲಭ ಗೆಲುವು ಎಂದು ಬೀಗಿದ ಗಿಲ್ಲಿ ಕೊನೆಗೆ ಸೋಲನುಭವಿಸಿದರು. ತಮ್ಮ ಸೋಲನ್ನು ಒಪ್ಪಿಕೊಳ್ಳದ ಗಿಲ್ಲಿ, ಅಶ್ವಿನಿ ಗೆಲುವಿಗೆ ಧನುಷ್ ಕಾರಣ ಎಂದು ವಾದಿಸಿದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
- Rajesh Duggumane
- Updated on: Jan 2, 2026
- 7:02 am