AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada

Bigg Boss Kannada

ಅತಿ ದೊಡ್ಡ ರಿಯಾಲಿಟಿ ಶೋಗಳ ಪೈಕಿ ಬಿಗ್​ ಬಾಸ್​ಗೆ ಸ್ಥಾನ ಇದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭ ಆಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು.

ಕನ್ನಡದಲ್ಲಿ ಬಿಗ್ ಬಾಸ್ 12ನೇ ಸೀಸನ್ ಆರಂಭ ಆಗಲಿದೆ. ಒಂದು ಒಟಿಟಿ ಹಾಗೂ ಒಂದು ಮಿನಿ ಸೀಸನ್ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್​ ನಡೆಸಿಕೊಡುತ್ತಿದ್ದಾರೆ. 17-18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರುತ್ತಾರೆ. 100 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯುತ್ತದೆ.

ಬಿಗ್ ಬಾಸ್​ ಒಳಗೆ ಹೋದ ಬಳಿಕ ಹೊರ ಜಗತ್ತಿನ ಜೊತೆಗಿನ ಸಂಪರ್ಕ ಕಳೆದು ಹೋಗುತ್ತದೆ. ಬಿಗ್ ಬಾಸ್​ನಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಯಾರ ಮೇಲಾದರೂ ಕೈ ಮಾಡಿದರೆ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಗೆದ್ದ ಸ್ಪರ್ಧಿಗೆ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಸಿಗುತ್ತದೆ. ಸುದೀಪ್ ನಿರೂಪಣೆಯಿಂದ ಬಿಗ್ ಬಾಸ್ ಕನ್ನಡದ ರಂಗು ಹೆಚ್ಚಿದೆ.

ಇನ್ನೂ ಹೆಚ್ಚು ಓದಿ

ಶನಿವಾರವರೇ ನಡೆಯಿತು ಎಲಿಮಿನೇಷನ್; ಪ್ರಮುಖ ಸ್ಪರ್ಧಿಯೇ ಔಟ್

Bigg Boss Kannada 12 Elimination: ಬಿಗ್ ಬಾಸ್ ಕನ್ನಡ 12ರಲ್ಲಿ ಈ ವಾರ ಸುದೀಪ್ ಅನುಪಸ್ಥಿತಿಯಲ್ಲಿ ಶನಿವಾರವೇ ಅನಿರೀಕ್ಷಿತ ಎಲಿಮಿನೇಷನ್ ನಡೆದಿದೆ. ಮನೆಯವರಿಗೆ ಶಾಕ್ ನೀಡಿ ಒಬ್ಬರನ್ನು ಹೊರಹಾಕಲಾಗಿದೆ. ಡಬಲ್ ಎಲಿಮಿನೇಷನ್ ಭಾನುವಾರ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಮೊದಲೇ ಒಬ್ಬರು ಔಟ್ ಆಗಿರುವುದು ಕುತೂಹಲ ಮೂಡಿಸಿದೆ.

ಬಿಗ್ ಬಾಸ್ ಆದೇಶಕ್ಕೆ ನಲುಗಿ ಹೋದ ಗಿಲ್ಲಿ ನಟ; ಇದಕ್ಕೆ ಕಾರಣ ರಘು-ಸೂರಜ್?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟರು ತಾವು ಈ ವಾರ ಕ್ಯಾಪ್ಟನ್ ಎಂದು ಭಾವಿಸಿದ್ದರು. ಫ್ಯಾಮಿಲಿ ವೀಕ್‌ನಲ್ಲಿ ಅವರಿಗೆ ಹೆಚ್ಚು ವೋಟ್ ಬಿದ್ದಿದ್ದವು. ಆದರೆ, ಬಿಗ್ ಬಾಸ್ ಅನಿರೀಕ್ಷಿತ ಟ್ವಿಸ್ಟ್ ನೀಡಿದ್ದು, ಗಿಲ್ಲಿಗೆ ಮತ್ತೊಬ್ಬ ಸ್ಪರ್ಧಿಯೊಂದಿಗೆ ಟಾಸ್ಕ್ ಆಡಿ ಕ್ಯಾಪ್ಟನ್ ಆಗುವ ಸವಾಲು ಎದುರಾಯಿತು. ಅಂತಿಮವಾಗಿ ಗಿಲ್ಲಿ ಟಾಸ್ಕ್ ಗೆದ್ದು ಕ್ಯಾಪ್ಟನ್ ಆದರು.

ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ಆರಂಭದಲ್ಲೇ ನಿಯಮ ಮುರಿದಿದ್ದಕ್ಕೆ ಬಿಗ್ ಬಾಸ್ ಎಚ್ಚರಿಕೆ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿದ್ದಾರೆ. ಅದು ಕೂಡ ಟಾಸ್ಕ್ ಆಡಿ ಎಂಬುದು ವಿಶೇಷ. ಗಿಲ್ಲಿ ನಟ ಅವರು ಇಷ್ಟು ದಿನ ಕ್ಯಾಪ್ಟನ್ ಆಗಿಲ್ಲ ಎಂಬ ಬೇಸರ ಇತ್ತು. ಈ ಬೇಸರ ಪೂರ್ಣಗೊಳ್ಳುವ ಸಮಯ ಬಂದಿದೆ. ಅವರು ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.

ಗಿಲ್ಲಿ ಬಗ್ಗೆ ಗುಟ್ಟಾಗಿ ಮಾತಾಡಿದ ಕಾವ್ಯಾ ಫ್ಯಾಮಿಲಿ: ಕೂಡಲೇ ಹೊರಗೆ ಕಳಿಸಿದ ಬಿಗ್ ಬಾಸ್

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಫಿನಾಲೆ ಹತ್ತಿರ ಆಗುತ್ತಿದೆ. ಹಾಗಾಗಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಎಲ್ಲ ಸ್ಪರ್ಧಿಗಳ ಕುಟುಂಬದವರು ಒಬ್ಬೊಬ್ಬರಾಗಿಯೇ ಬಿಗ್ ಬಾಸ್ ಮನೆಗೆ ಬಂದು ಹೋಗುತ್ತಿದ್ದಾರೆ. ಇತ್ತೀಚೆಗೆ ಕಾವ್ಯಾ ಅವರ ಸಹೋದರ ಕಾರ್ತಿಕ್ ಹಾಗೂ ತಾಯಿ ಸಾವಿತ್ರಿ ಅವರು ಬಿಗ್ ಬಾಸ್ ಮನೆಗೆ ಬಂದಿದ್ದರು. ಆಗ ಒಂದು ತಪ್ಪು ಮಾಡಿದರು.

ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ

ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬದ ಸದಸ್ಯರು ಬಿಗ್ ಬಾಸ್ ಮನೆಗೆ ಬಂದು ಮಾತನಾಡುತ್ತಿದ್ದಾರೆ. ಸ್ಪಂದನಾ ಅವರ ತಂದೆ, ತಾಯಿ ಸಹ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಮಗಳ ಬಗ್ಗೆ ಮಾತಾಡಿದ್ದಾರೆ.

ಗಿಲ್ಲಿ ಬಗ್ಗೆ ಇದ್ದ ದೊಡ್ಡ ಅನುಮಾನ ಕ್ಲಿಯರ್ ಮಾಡಿದ ತಂದೆ-ತಾಯಿ

ಬಿಗ್ ಬಾಸ್ ಕನ್ನಡ 12 ಫ್ಯಾಮಿಲಿ ವೀಕ್‌ನಲ್ಲಿ ಗಿಲ್ಲಿಯ ತಂದೆ-ತಾಯಿ ಕುಳ್ಳಯ್ಯ ಮತ್ತು ಸವಿತಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಿಲ್ಲಿಯ ತಾಯಿ ಸವಿತಾ, ಗಿಲ್ಲಿಯ ವರ್ತನೆಯ ಬಗ್ಗೆ ಸ್ಪಷ್ಟನೆ ನೀಡಿದರು. ಹೊರಗಿರುವಂತೆಯೇ ಗಿಲ್ಲಿ ಮನೆಯಲ್ಲೂ ಇದ್ದಾನೆ, ನಾಟಕವಾಡುತ್ತಿಲ್ಲ ಎಂದು ಹೇಳಿ ಅನುಮಾನಗಳನ್ನು ನಿವಾರಿಸಿದರು. ಈ ಭೇಟಿ ಗಿಲ್ಲಿಗೆ ಹೊಸ ಹುರುಪು ನೀಡಿದೆ.

ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅಬ್ಬರದಲ್ಲಿ ರಿಲೀಸ್ ಆಯ್ತು ರಘು ನಟನೆಯ ಸಿನಿಮಾ

ರಘು ಅವರು ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿಯಾಗಿ ಸದ್ದು ಮಾಡುತ್ತಿದ್ದಾರೆ. ಅವರು ನಟಿಸಿರುವ 'ವೃಷಭ' ಸಿನಿಮಾ ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ತೆರೆಕಂಡಿದೆ. ಮೋಹನ್ ಲಾಲ್ ಚಿತ್ರದಲ್ಲಿ ರಘು ವಿಲನ್ ಆಗಿ ಕಾಣಿಸಿಕೊಂಡಿದ್ದು, ಭಯಾನಕ ಮೇಕ್ಓವರ್‌ನಿಂದಾಗಿ ಅವರನ್ನು ಗುರುತಿಸುವುದು ಕಷ್ಟವಾಗಿದೆ. 'ಕಾಂತಾರ: ಚಾಪ್ಟರ್ 1' ನಲ್ಲೂ ಅವರು ಇದೇ ರೀತಿಯ ಪಾತ್ರ ಮಾಡಿದ್ದರು.

ಗಿಲ್ಲಿ ಕ್ಯಾಪ್ಟನ್ ಮಾಡಲು ಬಿಗ್ ಬಾಸ್​ನಿಂದಲೇ ಪ್ಲ್ಯಾನ್? ಸೂರಜ್ ಆರೋಪ

ಬಿಗ್ ಬಾಸ್ ಕನ್ನಡ ಸೀಸನ್ 12ರ ಫ್ಯಾಮಿಲಿ ವೀಕ್‌ನಲ್ಲಿ ಸ್ಪರ್ಧಿ ಗಿಲ್ಲಿ ಕ್ಯಾಪ್ಟನ್ ಆಗುವ ನಿರೀಕ್ಷೆ ಹೆಚ್ಚಿದೆ. ಹಲವು ಕುಟುಂಬದ ಸದಸ್ಯರು ಗಿಲ್ಲಿಯೇ ಕ್ಯಾಪ್ಟನ್ ಆಗಬೇಕೆಂದು ಬಯಸಿದ್ದಾರೆ. ಗಿಲ್ಲಿಯ ಮನರಂಜನೆ ಮತ್ತು ಬದಲಾದ ಆಟವನ್ನು ಎಲ್ಲರೂ ಮೆಚ್ಚಿದ್ದಾರೆ. ಇದು ಬಿಗ್ ಬಾಸ್‌ನ ತಂತ್ರ ಎಂದು ಸೂರಜ್ ಹೇಳಿದ್ದಾರೆ.ಇದು ಚರ್ಚೆಗೆ ಗ್ರಾಸವಾಗಿದೆ.

ಕಾವ್ಯಾ ಜತೆ ಮದುವೆ ಬಗ್ಗೆ ಮನಸಾರೆ ಮಾತಾಡಿದ ಗಿಲ್ಲಿ: ಆ ಕಡೆಯಿಂದ ಬಂದ ಉತ್ತರ ಏನು?

ಇಷ್ಟು ದಿನ ರೇಗಿಸುತ್ತಿದ್ದ ಗಿಲ್ಲಿ ನಟ ಅವರು ಈಗ ನೇರವಾಗಿ ಮದುವೆ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಕಾವ್ಯಾ ಪೋಷಕರು ಬಿಗ್ ಬಾಸ್ ಮನೆಗೆ ಬಂದಾಗ ಮದುವೆ ಬಗ್ಗೆ ಮಾತನಾಡಬೇಕು ಎಂದು ಗಿಲ್ಲಿ ಪ್ಲ್ಯಾನ್ ಮಾಡಿದ್ದಾರೆ. ಡಿಸೆಂಬರ್ 25ರ ಸಂಚಿಕೆಯಲ್ಲಿ ಈ ಪ್ಲ್ಯಾನ್ ಆಗಿದೆ. ಆ ಮಾತು ಕೇಳಿಸಿಕೊಂಡು ಕಾವ್ಯಾ ಅವರು ಪ್ರತಿಕ್ರಿಯಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ; ಮಾಡಿದ ಕಂಪ್ಲೇಂಟ್ ಏನು?

ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ಜೋರಾಗಿಯೇ ನಡೆದಿದೆ. ಗಿಲ್ಲಿ ಕುಟುಂಬದವರು ಆಗಮಿಸಿ ಇಡೀ ಮನೆಯ ಖುಷಿಯನ್ನು ಹೆಚ್ಚಿಸಿದ್ದಾರೆ. ಪ್ರೀತಿಯಿಂದ ಗಿಲ್ಲಿಯನ್ನು ಅಪ್ಪಿದ್ದಾರೆ. ಇದರ ಜೊತೆಗೆ ಕೂದಲು ಬಾಚಿಕೊಳ್ಳುವ ಬಗ್ಗೆಯೂ ಚರ್ಚೆಗಳು ನಡೆದವು. ಆ ಬಗ್ಗೆ ಇಲ್ಲಿದೆ ವಿವರ.

ಕಾಮಿಡಿ ವಿಷಯದಲ್ಲಿ ಗಿಲ್ಲಿನ ತೆಗಳಿದ್ದ ಧನುಷ್​​ಗೆ ತಾಯಿಯಿಂದಲೇ ಮುಖಭಂಗ

ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದ್ದು, ಧನುಷ್ ತಾಯಿ ದೊಡ್ಮನೆಗೆ ಆಗಮಿಸಿದ್ದಾರೆ. ಯಾವಾಗಲೂ ಗಿಲ್ಲಿ ಕಾಮಿಡಿಯನ್ನು ಟೀಕಿಸುತ್ತಿದ್ದ ಧನುಷ್‌ಗೆ ಅವರ ತಾಯಿಯಿಂದಲೇ ಮುಖಭಂಗವಾಗಿದೆ. ತಾಯಿ ಗಿಲ್ಲಿ ಕಾಮಿಡಿಯನ್ನು ಬಹುವಾಗಿ ಮೆಚ್ಚಿ, 'ಗಿಲ್ಲಿ ಇಲ್ಲದಿದ್ದರೆ ಬೇಸರವಾಗುತ್ತಿತ್ತು' ಎಂದು ಹೇಳಿದ್ದಾರೆ. ಇದು ಧನುಷ್ ಹಾಗೂ ಇಡೀ ಮನೆಯವರಿಗೆ ಅಚ್ಚರಿ ಮೂಡಿಸಿದೆ. ಗಿಲ್ಲಿಯ ಜನಪ್ರಿಯತೆಯನ್ನು ಇದು ಸಾರಿ ಹೇಳಿದೆ.

ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ಮಾತು ಕೇಳಿ ಬಿದ್ದುಬಿದ್ದು ನಕ್ಕ ಅಶ್ವಿನಿ ಗೌಡ ತಾಯಿ

ಅಶ್ವಿನಿ ಗೌಡ ತಾಯಿ ಅವರು ಗಿಲ್ಲಿ ಜೊತೆ ಮಾತನಾಡಿ, ‘ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ. ಚೆನ್ನಾಗಿರಿ’ ಎಂದು ಸಲಹೆ ನೀಡಿದ್ದಾರೆ. ಅವರನ್ನು ಅತ್ತೆ ಎಂದು ಕರೆಯಲು ಗಿಲ್ಲಿ ಶುರು ಮಾಡಿದರು. ಈ ಕ್ಷಣ ಸಖತ್ ಫನ್ ಆಗಿದೆ. ಡಿಸೆಂಬರ್ 24ರ ಸಂಚಿಕೆಯ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.