Bigg Boss Kannada
ಅತಿ ದೊಡ್ಡ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ಗೆ ಸ್ಥಾನ ಇದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭ ಆಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು.
ಕನ್ನಡದಲ್ಲಿ ಬಿಗ್ ಬಾಸ್ 12ನೇ ಸೀಸನ್ ಆರಂಭ ಆಗಲಿದೆ. ಒಂದು ಒಟಿಟಿ ಹಾಗೂ ಒಂದು ಮಿನಿ ಸೀಸನ್ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. 17-18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರುತ್ತಾರೆ. 100 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯುತ್ತದೆ.
ಬಿಗ್ ಬಾಸ್ ಒಳಗೆ ಹೋದ ಬಳಿಕ ಹೊರ ಜಗತ್ತಿನ ಜೊತೆಗಿನ ಸಂಪರ್ಕ ಕಳೆದು ಹೋಗುತ್ತದೆ. ಬಿಗ್ ಬಾಸ್ನಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಯಾರ ಮೇಲಾದರೂ ಕೈ ಮಾಡಿದರೆ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಗೆದ್ದ ಸ್ಪರ್ಧಿಗೆ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಸಿಗುತ್ತದೆ. ಸುದೀಪ್ ನಿರೂಪಣೆಯಿಂದ ಬಿಗ್ ಬಾಸ್ ಕನ್ನಡದ ರಂಗು ಹೆಚ್ಚಿದೆ.
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು ಗೊತ್ತಾ?
ಬಿಗ್ ಬಾಸ್ ಮನೆಯ ಒಳಗೆ ಮೊಟ್ಟೆ ಕಳ್ಳತನ ಆಗಿದೆ! ಗಿಲ್ಲಿ ನಟ ಅವರು ಊಟ ಮಾಡುತ್ತಿದ್ದಾಗ ಈ ರೀತಿ ಆಗಿದೆ. ಗಿಲ್ಲಿ ಅವರ ತಟ್ಟೆಯಲ್ಲಿ ಇದ್ದ ಮೊಟ್ಟೆಯನ್ನು ಪಕ್ಕದಲ್ಲೇ ಕುಳಿತಿದ್ದ ರಜತ್ ಅವರು ಕದ್ದಿದ್ದಾರೆ. ಡಿ.16ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ.
- Madan Kumar
- Updated on: Dec 16, 2025
- 5:40 pm
ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ, ಮಹಿಳಾ ಸ್ಪರ್ಧಿ ವಿನ್ನರ್; ಭವಿಷ್ಯ ನುಡಿದ ಜ್ಯೋತಿಷಿ
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಸಮೀಪಿಸುತ್ತಿದೆ. ಗಿಲ್ಲಿ ನಟ ಗೆಲ್ಲುತ್ತಾರೆಂಬ ಚರ್ಚೆ ಜೋರಾಗಿದೆ. ಆದರೆ, ಜ್ಯೋತಿಷಿ ಪ್ರಶಾಂತ್ ಕಿಣಿ, ಗಿಲ್ಲಿ ಬಿಗ್ ಬಾಸ್ ವಿನ್ನರ್ ಆಗುವುದಿಲ್ಲ, ಬದಲಿಗೆ ಮಹಿಳಾ ಸ್ಪರ್ಧಿಯೇ ಈ ಬಾರಿ ಟ್ರೋಫಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ಗಿಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದು ತಿಂಗಳಲ್ಲಿ ಯಾರು ವಿನ್ನರ್ ಎಂಬುದು ಬಹಿರಂಗವಾಗಲಿದೆ.
- Rajesh Duggumane
- Updated on: Dec 16, 2025
- 11:17 am
‘ನೀನು ಬಿಗ್ ಬಾಸ್ನ ಮಂಗ ಮಾಡೋಕಾಗಲ್ಲ’; ರಕ್ಷಿತಾ ಸಣ್ಣ ಬುದ್ಧಿ ಎಕ್ಸ್ಪೋಸ್ ಮಾಡಿದ ಧ್ರುವಂತ್
ಬಿಗ್ ಬಾಸ್ ಸೀಕ್ರೆಟ್ ರೂಂನಲ್ಲಿ ಧ್ರುವಂತ್ ರಕ್ಷಿತಾ ಶೆಟ್ಟಿ ಅವರ 'ಸಣ್ಣ ಬುದ್ಧಿ'ಯನ್ನು ಎಕ್ಸ್ಪೋಸ್ ಮಾಡಿದ್ದಾರೆ. ರಕ್ಷಿತಾ ಅವರ ಬದಲಾವಣೆ, ಕಾವ್ಯಾ ನಾಮಿನೇಷನ್ ಕುರಿತ ವಾದವನ್ನು ಧ್ರುವಂತ್ ಸೂಕ್ಷ್ಮವಾಗಿ ಗಮನಿಸಿದ್ದಾರೆ. 'ನೀನು ಬಿಗ್ ಬಾಸ್ನ ಮಂಗ ಮಾಡೋಕಾಗಲ್ಲ' ಎಂದು ಧ್ರುವಂತ್ ಹೇಳಿಕೆ ವೈರಲ್ ಆಗಿದೆ.
- Rajesh Duggumane
- Updated on: Dec 16, 2025
- 9:55 am
ಧ್ರುವಂತ್ನ ಸೀಕ್ರೆಟ್ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್ಗೆ ಕಾಡ್ತಿದೆ ತಪ್ಪಿತಸ್ಥ ಭಾವನೆ?
ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ರೂಂ ಟಾಸ್ಕ್ ಈ ವಾರ ಆರಂಭ ಆಗಿದೆ. ರಕ್ಷಿತಾ ಹಾಗೂ ಧ್ರುವಂತ್ನ ಬಿಗ್ ಬಾಸ್ನ ಸೀಕ್ರೆಟ್ ರೂಂನಲ್ಲಿ ಇರಿಸಲಾಗಿದೆ. ಈ ನಿರ್ಧಾರದ ಬಗ್ಗೆ ಬಿಗ್ ಬಾಸ್ಗೆ ತಪ್ಪಿತಸ್ಥ ಭಾವನೆ ಕಾಡುತ್ತಿದೆ ಎಂದು ಧ್ರುವಂತ್ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿ ಇದೆ ವಿವರ.
- Rajesh Duggumane
- Updated on: Dec 16, 2025
- 8:50 am
ಧ್ರುವಂತ್, ರಕ್ಷಿತಾ ಶೆಟ್ಟಿ ಇನ್ನೂ ಔಟ್ ಆಗಿಲ್ಲ ಎಂಬ ರಹಸ್ಯ ಪತ್ತೆ ಹಚ್ಚಿದ ರಘು
ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಈಗ ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ. ಟಿವಿ ಮೂಲಕ ಎಲ್ಲವನ್ನೂ ನೋಡುತ್ತಿದ್ದಾರೆ. ಅವರಿಬ್ಬರು ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ ಎಂಬುದು ಮನೆಮಂದಿಗೆ ತಿಳಿದಿಲ್ಲ. ಆದರೆ ರಘು ಅವರಿಗೆ ರಹಸ್ಯ ಗೊತ್ತಾಗಿದೆ. ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ರಘು ಅವರು ಅಸಲಿ ವಿಚಾರವನ್ನು ಪತ್ತೆ ಹಚ್ಚಿದ್ದಾರೆ.
- Madan Kumar
- Updated on: Dec 15, 2025
- 10:26 pm
ಸೀಕ್ರೆಟ್ ರೂಮ್ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಒಂದೇ ರೂಮ್ನಲ್ಲಿ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರು ಇದ್ದಾರೆ. ಇದು ಸೀಕ್ರೆಟ್ ರೂಮ್. ಅಲ್ಲಿಂದಲೇ ಅವರು ಬಿಗ್ ಬಾಸ್ ಮನೆಯ ಆಟವನ್ನು ನೋಡುತ್ತಿದ್ದಾರೆ. ಆಗ ಅವರಿಬ್ಬರ ನಡುವೆ ಚರ್ಚೆ ನಡೆದಿದೆ. ಧ್ರುವಂತ್ ಕೇಳಿದ ಒಂದು ಸಿಂಪಲ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ಓವರ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
- Madan Kumar
- Updated on: Dec 15, 2025
- 6:23 pm
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಕ್ಷಿತಾ ಶೆಟ್ಟಿ ಅವರು ಎಲಿಮಿನೇಟ್ ಆಗಿಲ್ಲ. ಅವರನ್ನು ಸೀಕ್ರೆಟ್ ರೂಂನಲ್ಲಿ ಕೂರಿಸಲಾಗಿದೆ. ಅವರಿಗೆ ಈಗ ಹೊಸ ಚಿಂತೆ ಶುರವಾಗಿದೆ. ಏನು ಆ ಚಿಂತೆ? ಆ ಬಗ್ಗೆ ಇಲ್ಲಿದೆ ವಿವರ. ಅವರು ಚಿಂತೆಯನ್ನು ಯಾರು ದೂರ ಮಾಡುತ್ತಾರೆ ನೋಡಬೇಕಿದೆ.
- Rajesh Duggumane
- Updated on: Dec 15, 2025
- 8:19 am
ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಕೆಲವರಿಗೆ ಮಾತ್ರ ಬಯ್ಯೋದೇಕೆ? ಕಿಚ್ಚನೇ ಕೊಟ್ಟರು ಉತ್ತರ
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಸ್ಪರ್ಧಿಗಳನ್ನು ಏಕೆ ಬಯ್ಯುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಉತ್ತಮವಾಗಿ ಆಡುವವರು ಸಣ್ಣ ತಪ್ಪುಗಳಿಂದ ಹಾಳಾಗಬಾರದೆಂಬ ಕಾರಣಕ್ಕೆ ಅವರನ್ನು ತಿದ್ದುತ್ತಾರೆ. ದುರ್ಬಲ ಸ್ಪರ್ಧಿಗಳ ಮೇಲೆ ಶಕ್ತಿ ವ್ಯಯಿಸುವುದಿಲ್ಲ. ಪ್ರತೀ ಶನಿವಾರದ ಸಂಚಿಕೆಗೂ ಮುನ್ನ, ಸೂಕ್ತ ಮಾಹಿತಿ ಪಡೆಯಲು ಇಡೀ ವಾರದ ಎಪಿಸೋಡ್ಗಳನ್ನು ವೀಕ್ಷಿಸಿ ಸಿದ್ಧರಾಗುತ್ತಾರೆ ಎಂದು ಸುದೀಪ್ ತಿಳಿಸಿದ್ದಾರೆ.
- Shreelaxmi H
- Updated on: Dec 15, 2025
- 7:57 am
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಬಗ್ಗೆ ಸುದೀಪ್ ಕೊಟ್ಟರು ಮಾಹಿತಿ
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗಿದ್ದು, ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಪ್ರಮುಖ ಮಾಹಿತಿ ನೀಡಿದ್ದಾರೆ. ಜನವರಿಯಲ್ಲಿ ಫಿನಾಲೆ ನಡೆಯಲಿದೆ. ಈ ವೇಳೆ ಓವರ್ಕಾನ್ಫಿಡೆನ್ಸ್ ಬೇಡ ಎಂದು ಸುದೀಪ್ ಎಚ್ಚರಿಸಿದ್ದಾರೆ. ಕಪ್ ಗೆಲ್ಲಲು ಕಡಿಮೆ ಸ್ಪರ್ಧಿಗಳು ಮಾತ್ರ ಉಳಿದಿದ್ದು, ಮಧ್ಯ ವಾರದ ಎಲಿಮಿನೇಷನ್ ಮತ್ತು ಡಬಲ್ ಎಲಿಮಿನೇಷನ್ ಕೂಡ ಇರಲಿದೆ.
- Shreelaxmi H
- Updated on: Dec 15, 2025
- 7:35 am
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಸುದೀಪ್ ಸತತ 12 ಸೀಸನ್ಗಳಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಿರೂಪಣೆ ಮಾಡಿದ್ದಾರೆ. 12ನೇ ಸೀಸನ್ ನಡೆಸಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಗೊಂದಲ ಇತ್ತು. ಮೊದಲು ಬೇಡ ಎಂದು, ನಂತರ ಸುದೀಪ್ ಒಪ್ಪಿಕೊಂಡರು. ಆ ಬಗ್ಗೆ ಟಿವಿ9 ಸಂದರ್ಶನದಲ್ಲಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
- Madan Kumar
- Updated on: Dec 14, 2025
- 2:28 pm
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಸುದೀಪ್ ಎದುರು ಗಿಲ್ಲಿ ಓಪನ್ ಚಾಲೆಂಜ್
ರಜತ್ ಕಿಶನ್ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮಕ್ಕೆ ಬಂದಾಗಿನಿಂದ ಗಿಲ್ಲಿ ನಟ ಜತೆ ಆಪ್ತವಾಗಿದ್ದರು. ಆದರೆ ಈಗ ಅವರ ಹಾವಭಾವ ಬದಲಾಗಿದೆ. ಗಿಲ್ಲಿ ಅವರು ಕಿಚ್ಚ ಸುದೀಪ್ ಎದುರಲ್ಲೇ ಬಹಿರಂಗ ಸವಾಲು ಹಾಕಿದ್ದಾರೆ.
- Madan Kumar
- Updated on: Dec 14, 2025
- 9:03 am
ಅಕ್ಕ-ತಂಗಿ ಬಳಿ ಹೀಗೆ ಮಾತಾಡ್ತಿದ್ರಾ? ಸೂರಜ್ ಮಾತು ರಾಶಿಕಾ ಎದೆಗೆ ಚುಚ್ತು
ಈ ವಾರ ರಾಶಿಕಾ ಅವರು ಕ್ಯಾಪ್ಟನ್ ಆದರು. ಈ ಆಟದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದು ಚೈತ್ರಾ ಅವರಾಗಿತ್ತು. ಚೈತ್ರಾ ಅವರು ಸರಿಯಾಗಿ ಉಸ್ತುವಾರಿ ಮಾಡಿದ್ದಾರೆ ಎಂಬ ವಾದ ಸೂರಜ್ ಅವರದ್ದಾಗಿತ್ತು. ಇದನ್ನು ಸೂರಜ್ ಅವರು ಮನಸ್ಸಿನಲ್ಲೇ ಇಟ್ಟುಕೊಂಡಿದ್ದರು. ಮನಸ್ಸಿನಲ್ಲಿ ಇದ್ದಿದ್ದನ್ನು ನೇರವಾಗಿ ಹೇಳಿಲ್ಲ ಸೂರಜ್. ಇದು ಕಿತ್ತಾಟಕ್ಕೆ ಅನುವು ಮಾಡಿಕೊಟ್ಟಿತ್ತು.
- Shreelaxmi H
- Updated on: Dec 14, 2025
- 6:21 am