AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada

Bigg Boss Kannada

ಅತಿ ದೊಡ್ಡ ರಿಯಾಲಿಟಿ ಶೋಗಳ ಪೈಕಿ ಬಿಗ್​ ಬಾಸ್​ಗೆ ಸ್ಥಾನ ಇದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭ ಆಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು.

ಕನ್ನಡದಲ್ಲಿ ಬಿಗ್ ಬಾಸ್ 12ನೇ ಸೀಸನ್ ಆರಂಭ ಆಗಲಿದೆ. ಒಂದು ಒಟಿಟಿ ಹಾಗೂ ಒಂದು ಮಿನಿ ಸೀಸನ್ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್​ ನಡೆಸಿಕೊಡುತ್ತಿದ್ದಾರೆ. 17-18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರುತ್ತಾರೆ. 100 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯುತ್ತದೆ.

ಬಿಗ್ ಬಾಸ್​ ಒಳಗೆ ಹೋದ ಬಳಿಕ ಹೊರ ಜಗತ್ತಿನ ಜೊತೆಗಿನ ಸಂಪರ್ಕ ಕಳೆದು ಹೋಗುತ್ತದೆ. ಬಿಗ್ ಬಾಸ್​ನಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಯಾರ ಮೇಲಾದರೂ ಕೈ ಮಾಡಿದರೆ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಗೆದ್ದ ಸ್ಪರ್ಧಿಗೆ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಸಿಗುತ್ತದೆ. ಸುದೀಪ್ ನಿರೂಪಣೆಯಿಂದ ಬಿಗ್ ಬಾಸ್ ಕನ್ನಡದ ರಂಗು ಹೆಚ್ಚಿದೆ.

ಇನ್ನೂ ಹೆಚ್ಚು ಓದಿ

‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ ಮಾಡಿದ ಸ್ಪರ್ಧಿ

'ಬಿಗ್ ಬಾಸ್ ಅಗ್ನಿಪರೀಕ್ಷೆ' ವೇದಿಕೆಯಲ್ಲಿ ಸ್ಪರ್ಧಿ ಪೂರ್ಣಿಮಾ ಶೋ ಹಾಗೂ ನಿರ್ಣಾಯಕರ ವಿರುದ್ಧವೇ ಪಕ್ಷಪಾತದ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ಕೋಪಗೊಂಡ ನಿರ್ಣಾಯಕರಾದ ವಿನಯ್ ಗೌಡ, ಶೋ ಮೇಲೆ ನಂಬಿಕೆ ಇಲ್ಲದಿದ್ದರೆ ತಕ್ಷಣ ವಾಕ್ ಔಟ್ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದ್ದು, ವೇದಿಕೆಯಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ.

ಬಿಗ್​​ಬಾಸ್ ಅಗ್ನಿಪರೀಕ್ಷೆ: ಗೋಲ್ಡನ್ ಟಿಕೆಟ್ ಪಡೆಯಲು ಸ್ಪರ್ಧಿಗಳ ಹರಸಾಹಸ

Bigg Boss Kannada season 13: ಬಿಗ್​​ಬಾಸ್ ಕನ್ನಡ ಸೀಸನ್ 13ರ ಬಿಗ್​​ಬಾಸ್ ಅಗ್ನಿಪರೀಕ್ಷೆ ಚಾಲ್ತಿಯಲ್ಲಿದ್ದು, ಆಕಾಂಕ್ಷಿಗಳಿಗೆ ನಾನಾ ರೀತಿಯ ಟಾಸ್ಕ್​​ಗಳನ್ನು ಕೊಡಲಾಗುತ್ತಿದೆ. ಬಿಗ್​ಬಾಸ್​​ನ ಗೋಲ್ಡನ್ ಟಿಕೆಟ್ ಪಡೆಯಲು ಸ್ಪರ್ಧಿಗಳು ನಾನಾ ರೀತಿಯ ಹರಸಾಹಸಗಳನ್ನು ಮಾಡುತ್ತಿದ್ದಾರೆ. ಶ್ರುತಿ, ವಿನಯ್, ಸಂಗೀತಾ, ಚಂದನ್ ಶೆಟ್ಟಿ ಅವರುಗಳು ಜಡ್ಜ್​​ಗಳಾಗಿದ್ದಾರೆ. ವಿಡಿಯೋ ನೋಡಿ...

ಸಂಗೀತಾ ಶೃಂಗೇರಿ-ವಿನಯ್ ಗೌಡ ಸ್ಪೆಷಲ್ ಪೋಸ್ಟ್; ಬಿಗ್ ಬಾಸ್ ಜೋಡಿಯ ಹೊಸ ಸಾಹಸವೇನು?

ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಇತ್ತೀಚೆಗೆ ಒಟ್ಟಿಗೆ ಇರುವ ಫೋಟೋ ಒಂದನ್ನು ಹಂಚಿಕೊಂಡು 'ಮುಂದೇನು?' ಎಂಬ ಕುತೂಹಲಕಾರಿ ಕ್ಯಾಪ್ಷನ್ ನೀಡಿದ್ದಾರೆ. 'ಹರ ಹರ ಮಹಾದೇವ' ಧಾರಾವಾಹಿಯಿಂದ ಆರಂಭವಾಗಿ ಬಿಗ್ ಬಾಸ್ ಹಾಗೂ ಅಗ್ನಿಪರೀಕ್ಷೆಯವರೆಗೆ ಸಾಗಿಬಂದ ಈ ಜೋಡಿ ಇದೀಗ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

‘ಬಿಗ್ ಬಾಸ್ ಅಗ್ನಿ ಪರೀಕ್ಷೆ’ಯಲ್ಲಿ ಹೈ-ವೋಲ್ಟೇಜ್ ಕಾದಾಟ: ಗೆಲುವಿಗಾಗಿ ಬಿರುಸಿನ ಪೈಪೋಟಿ

'ಬಿಗ್ ಬಾಸ್ ಅಗ್ನಿ ಪರೀಕ್ಷೆ' ಪ್ರೋಮೋದಲ್ಲಿ ಬಲೂನ್ ಟಾಸ್ಕ್ ಮೂಲಕ ಸ್ಪರ್ಧೆ ತೀವ್ರಗೊಂಡಿದೆ. ಲೀಡರ್‌ಬೋರ್ಡ್‌ನಲ್ಲಿ ಶೂನ್ಯ ಅಂಕದಲ್ಲಿದ್ದ ಚಂದನ್ ತಂಡ ಗೆಲುವಿಗಾಗಿ ಹೋರಾಡುತ್ತಿದ್ದು, ಪ್ರತಿಯೊಂದು ಪಾಯಿಂಟ್‌ಗಾಗಿ ತಂಡಗಳ ನಡುವೆ ರೋಮಾಂಚಕ ಕಾದಾಟ ನಡೆಯುತ್ತಿದೆ. 'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ: ಗೆಲುವಿಗಾಗಿ ಬಿರುಸಿನ ಪೈಪೋಟಿ.

ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ; ವೋಟಿಂಗ್ ಪ್ರಕ್ರಿಯೆ ಆರಂಭ

‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಿಂದ ಮುಖ್ಯ ಮನೆಗೆ ಕಳುಹಿಸಲು 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ವೀಕ್ಷಕರಿಗೆ ನೀಡಲಾಗಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ವೋಟಿಂಗ್ ಲೈವ್ ಆಗಿದೆ. ಕಠಿಣ ಟಾಸ್ಕ್‌ಗಳನ್ನು ಎದುರಿಸುತ್ತಿರುವ ಸ್ಪರ್ಧಿಗಳಲ್ಲಿ ಯಾರು ಬಿಗ್ ಬಾಸ್ ಫ್ಲೈಟ್ ಏರಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದ್ದು, ಅಭಿಮಾನಿಗಳು ಈಗಲೇ ವೋಟ್ ಮಾಡಬಹುದಾಗಿದೆ.

‘ಗೆಟೌಟ್ ಅನ್ನೋದಲ್ಲ ಬೇಡ’; ವಿನಯ್​ ಗೌಡಗೆ ನೇರವಾಗಿ ಹೇಳಿದ ಸ್ಪರ್ಧಿ

‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಶೋನಲ್ಲಿ ವಿನಯ್ ಗೌಡ ಸ್ಪರ್ಧಿಗಳಿಗೆ ನೀಡಿದ ‘ಗೆಟ್ ಔಟ್’ ಕೌಂಟರ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅವರ ಆ್ಯಟಿಟ್ಯೂಡ್ ಮತ್ತು ಪದಬಳಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪರ್ಧಿಯೊಬ್ಬರು ನೇರವಾಗಿಯೇ ತಿರುಗೇಟು ನೀಡಿದ್ದಾರೆ. ಈ ಘಟನೆಯ ಬಳಿಕ ವಿನಯ್ ಗೌಡ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಹಾಗೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸೆಪ್ಟೆಂಬರ್ 6ರಂದು ‘ಬಿಗ್ ಬಾಸ್ ಕನ್ನಡ 13’ ಶುರು; ಅಧಿಕೃತವಾಗಿ ತಿಳಿಸಿದ ಕಿಚ್ಚ ಸುದೀಪ್

ವೀಕ್ಷಕರು ಭಾರಿ ಕಾತರದಿಂದ ಕಾಯುತ್ತಿರುವ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನ ಹೊಸ ಆವೃತ್ತಿ ಸೆಪ್ಟೆಂಬರ್ 6ರಂದು ಶುರು ಆಗಲಿದೆ. ಕಿಚ್ಚ ಸುದೀಪ್ ಅವರು ನಿರೂಪಕನಾಗಿ ಶೋ ನಡೆಸಿಕೊಡಲಿದ್ದಾರೆ. ಸೆಪ್ಟೆಂಬರ್ 6ರಂದು ‘ಬಿಗ್ ಬಾಸ್ ಕನ್ನಡ 13’ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ಈಗ ಪ್ರೋಮೋ ಬಿಡುಗಡೆ ಆಗಿದೆ.

‘ಇನ್‌ಸೈಡ್.. ಔಟ್‌ಸೈಡ್..’ ಕಾರಣಕ್ಕೆ ‘ಆರ್ಯಭಟ’ ವಿನಯ್ ಗೌಡ ಫುಲ್ ಟ್ರೋಲ್; ಖಡಕ್ ತಿರುಗೇಟು

Vinay Gowda: ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ವೃತ್ತಕ್ಕೆ 'ಇನ್‌ಸೈಡ್-ಔಟ್‌ಸೈಡ್' ಎಂದಿದ್ದ ನಟ ವಿನಯ್ ಗೌಡ ತಮ್ಮನ್ನು 'ಆರ್ಯಭಟ' ಎಂದು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ್ದಾರೆ. ನೆಗೆಟಿವ್ ಕಾಮೆಂಟ್‌ಗಳಿಂದಲೇ ನನ್ನ ಪ್ರೊಫೈಲ್ ವೈರಲ್ ಆಗುತ್ತಿದ್ದು ಪುಕ್ಕಟೆ ಮಾರ್ಕೆಟಿಂಗ್ ಮಾಡುತ್ತಿದ್ದೀರಿ ಎಂದು ತಿರುಗೇಟು ಕೊಟ್ಟಿದ್ದಾರೆ.

ವಿನಯ್ ಮಾತಿಗೆ ಹೆದರಿ ‘ಅಗ್ನಿಪರೀಕ್ಷೆ’ಯಿಂದ ಅರ್ಧಕ್ಕೆ ನಡೆದ ಅಮುಕು ಡುಮುಕು ಮಂಜು

ಸೋಶಿಯಲ್ ಮೀಡಿಯಾ ಸ್ಟಾರ್ ಅಮುಕು ಡುಮುಕು ಮಂಜು ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದಿಂದ ಅರ್ಧದಲ್ಲೇ ಹೊರನಡೆದಿದ್ದಾರೆ. ನಟಿ ಸಂಗೀತಾ ಅವರನ್ನು ಇಂಪ್ರೆಸ್ ಮಾಡುವ ಟಾಸ್ಕ್ ನಿರಾಕರಿಸಿದಾಗ ಜಡ್ಜ್ ವಿನಯ್ ಗೌಡ ಸಿಟ್ಟಿಗೆದ್ದರು. ಈ ಮಾತಿನ ಚಕಮಕಿಯಿಂದ ಬೇಸತ್ತ ಮಂಜು ವೇದಿಕೆಯಿಂದ ದಿಢೀರ್ ನಿರ್ಗಮಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಬಿಗ್​​ಬಾಸ್ ಗೆದ್ದವರಿಗೆ ಸಿಗುವ ಹಣವೆಷ್ಟು? ಕಟ್ ಆಗುವುದೆಷ್ಟು? ವಿವರಿಸಿದ ಮಾಜಿ ವಿನ್ನರ್

Bigg Boss Kannada: ಬಿಗ್​ಬಾಸ್ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನ ಸಿಗುವುದೇನೋ ನಿಜ ಆದರೆ ಅದು ಕೈಗೆ ಬರುವಷ್ಟರಲ್ಲಿ ಸಾಕಷ್ಟು ಹಣ ಕಟ್ ಆಗಿ ಸರ್ಕಾರ ಇನ್ನಿತರೆಗಳ ಪಾಲಾಗಿರುತ್ತದೆ. ಕಾರಿನ ಕತೆಯೂ ಸಹ ಭಿನ್ನ ಏನಲ್ಲ. ಬಿಗ್​​ಬಾಸ್​​ ಗೆದ್ದವರಿಗೆ ಕೊನೆಗೆ ಕೈಗೆ ಬರುವುದೆಷ್ಟು ಎಂಬುದನ್ನು ವಿವರಿಸಿದ್ದಾರೆ ಈ ಹಿಂದೆ ಬಿಗ್​​ಬಾಸ್ ಗೆದ್ದಿರುವ ಸ್ಪರ್ಧಿ.

ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ

Bigg Boss Kannada 13: ಯಾರು ಬಿಗ್​​ಬಾಸ್ ಮನೆಯ ಒಳಗೆ ಹೋಗುತ್ತಾರೆ ಎಂಬುದನ್ನು ಜಡ್ಜ್​​ಗಳು ನಿರ್ಧರಿಸುತ್ತಾರೆ. ಶ್ರುತಿ, ಚಂದನ್ ಶೆಟ್ಟಿ, ಸಂಗೀತಾ, ವಿನಯ್ ಅವರುಗಳು ಆಕಾಂಕ್ಷಿಗಳಿಗೆ ಪ್ರಶ್ನೆಗಳನ್ನು ಕೇಳಿ ಅರ್ಹರನ್ನು ಆಯ್ಕೆ ಮಾಡುತ್ತಾರೆ. ಇದೀಗ ಅಪ್ಪ-ಮಗ ಇಬ್ಬರೂ ಒಟ್ಟಿಗೆ ಬಿಗ್​​ಬಾಸ್ ಮನೆಯ ಒಳಗೆ ಹೋಗಲು ಬಂದಿದ್ದರು. ಆದರೆ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಕಳಿಸಲು ಅವಕಾಶ ಇದೆ ಎಂದಾಗ ಬಿಗ್​​ಬಾಸ್ ವೇದಿಕೆಯಲ್ಲೇ ಅಪ್ಪ-ಮಗನ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ವಿಡಿಯೋ ನೋಡಿ...

‘ಜಡ್ಜ್​ ಆಗಿ ತಪ್ಪುಮಾಡಿದೆ’; ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಟ್ರೋಲ್ಸ್​ನಿಂದ ಸಂಗೀತಾ ಶೃಂಗೇರಿ ಕಂಗಾಲು

'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋ ಜಡ್ಜ್‌ಗಳಾದ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಸೋಶಿಯಲ್ ಮೀಡಿಯಾ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲಾಗುತ್ತಿರುವ ನೆಗೆಟಿವ್ ಕಾಮೆಂಟ್‌ಗಳನ್ನು ವಿನಯ್ ಎಂಜಾಯ್ ಮಾಡುತ್ತಿರುವುದನ್ನು ಕಂಡು ಸಂಗೀತಾ ಶೃಂಗೇರಿ ಸೆಟ್‌ನಲ್ಲೇ ವಿನಯ್ ವಿರುದ್ಧವಾಗಿ ಕಿಡಿಕಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಣ್ಣೂರಿನಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಬೀಳುತ್ತಿದ್ದ ವೃದ್ಧನ ರಕ್ಷಣೆ
ಕಣ್ಣೂರಿನಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಬೀಳುತ್ತಿದ್ದ ವೃದ್ಧನ ರಕ್ಷಣೆ
ನಾಗೇಂದ್ರ ಜತೆಗೆ ಜನಾರ್ದನ ರೆಡ್ಡಿ. ರೇಣುಕಾಚಾರ್ಯಗೂ ಸಂಕಷ್ಟ?
ನಾಗೇಂದ್ರ ಜತೆಗೆ ಜನಾರ್ದನ ರೆಡ್ಡಿ. ರೇಣುಕಾಚಾರ್ಯಗೂ ಸಂಕಷ್ಟ?
ನೇಪಾಳ ಪ್ರವಾಹ: ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ನೇಪಾಳ ಪ್ರವಾಹ: ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶೇಷ ಪೂಜೆ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶೇಷ ಪೂಜೆ
ನೇಪಾಳ ಪ್ರವಾಹದಲ್ಲಿ ಸಿಲುಕಿರೋ ಕನ್ನಡಿಗರಿಗೆ ಧೈರ್ಯ ತುಂಬಿದ ಸಿಎಂ
ನೇಪಾಳ ಪ್ರವಾಹದಲ್ಲಿ ಸಿಲುಕಿರೋ ಕನ್ನಡಿಗರಿಗೆ ಧೈರ್ಯ ತುಂಬಿದ ಸಿಎಂ
ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನೆ
ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನೆ
34 ಕಾಲೇಜು ಹಾಸ್ಟೆಲ್ ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
34 ಕಾಲೇಜು ಹಾಸ್ಟೆಲ್ ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ