Bigg Boss Kannada
ಅತಿ ದೊಡ್ಡ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ಗೆ ಸ್ಥಾನ ಇದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭ ಆಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು.
ಕನ್ನಡದಲ್ಲಿ ಬಿಗ್ ಬಾಸ್ 12ನೇ ಸೀಸನ್ ಆರಂಭ ಆಗಲಿದೆ. ಒಂದು ಒಟಿಟಿ ಹಾಗೂ ಒಂದು ಮಿನಿ ಸೀಸನ್ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. 17-18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರುತ್ತಾರೆ. 100 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯುತ್ತದೆ.
ಬಿಗ್ ಬಾಸ್ ಒಳಗೆ ಹೋದ ಬಳಿಕ ಹೊರ ಜಗತ್ತಿನ ಜೊತೆಗಿನ ಸಂಪರ್ಕ ಕಳೆದು ಹೋಗುತ್ತದೆ. ಬಿಗ್ ಬಾಸ್ನಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಯಾರ ಮೇಲಾದರೂ ಕೈ ಮಾಡಿದರೆ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಗೆದ್ದ ಸ್ಪರ್ಧಿಗೆ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಸಿಗುತ್ತದೆ. ಸುದೀಪ್ ನಿರೂಪಣೆಯಿಂದ ಬಿಗ್ ಬಾಸ್ ಕನ್ನಡದ ರಂಗು ಹೆಚ್ಚಿದೆ.
ಈ ವಾರ ಒಬ್ಬರಲ್ಲ ಇಬ್ಬರು ಔಟ್? ಟ್ವಿಸ್ಟ್ ಕೊಡಲು ಬಿಗ್ ಬಾಸ್ ರೆಡಿ
ಬಿಗ್ ಬಾಸ್ ಕನ್ನಡ 12ರಲ್ಲಿ ನಾಟಕೀಯ ತಿರುವುಗಳು ಎದುರಾಗುತ್ತಾ ಇದೆ. ರಕ್ಷಿತಾ, ಧ್ರುವಂತ್ ಸೀಕ್ರೆಟ್ ರೂಂನಿಂದ ಮರಳಲಿದ್ದು, ಇಬ್ಬರು ಡಬಲ್ ಎಲಿಮಿನೇಷನ್ ಮೂಲಕ ಹೊರಹೋಗುವ ಸಾಧ್ಯತೆ ಇದೆ. ಈ ಬಾರಿ ವೋಟಿಂಗ್ ಲೈನ್ ತೆರೆದಿಲ್ಲ. ಸ್ಪರ್ಧಿಗಳ ಸಂಖ್ಯೆ ಕಡಿತಗೊಳಿಸುವ ಅನಿವಾರ್ಯತೆ ಇರುವುದರಿಂದ ಈ ನಿರ್ಧಾರ ತಳೆಯುವ ನಿರೀಕ್ಷೆ ಇದೆ. ದೊಡ್ಮನೆ ಆಟ ಮತ್ತಷ್ಟು ರೋಚಕವಾಗುತ್ತಿದೆ.
- Rajesh Duggumane
- Updated on: Dec 19, 2025
- 12:59 pm
ಚೈತ್ರಾ ಕುಂದಾಪುರ ಕಣ್ಣೀರು ಫೇಕಾ? ಹೌದೆನ್ನಲು ಸಾಕ್ಷಿ ತಂದ ನೆಟ್ಟಿಗರು
ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಈ ವಾರ ತೋರಿದ ವರ್ತನೆ ಚರ್ಚೆಗೆ ಗ್ರಾಸವಾಗಿದೆ. ರಜತ್ ‘ಸುಳ್ಳಿ’ ಎಂದಿದ್ದಕ್ಕೆ ಅವರು ಕಳೆದ ಸೀಸನ್ನಂತೆ ಭಾವನಾತ್ಮಕ ದೃಶ್ಯ ಸೃಷ್ಟಿಸಿದರು. ಕಣ್ಣೀರು ಹಾಕಿ, ಕುಂಕುಮ ಹಚ್ಚಿಕೊಳ್ಳುವ ಮೂಲಕ ಗಮನ ಸೆಳೆಯಲು ಯತ್ನಿಸಿದರು ಎನ್ನಲಾಗುತ್ತಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚೈತ್ರಾ ಅವರ ವರ್ತನೆ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
- Rajesh Duggumane
- Updated on: Dec 19, 2025
- 11:41 am
ರವಿಚಂದ್ರನ್ ಎದುರೇ ರಾಜಾರೋಷವಾಗಿ ಸುಳ್ಳು ಹೇಳಿದ ಗಿಲ್ಲಿ; ಕಂಡು ಹಿಡಿದ ಕ್ರೇಜಿಸ್ಟಾರ್
ಬಿಗ್ ಬಾಸ್ ಮನೆಯಲ್ಲಿ ‘ಪ್ಯಾರ್’ ಸಿನಿಮಾ ಪ್ರಚಾರಕ್ಕೆ ಬಂದಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ಸ್ಪರ್ಧಿ ಗಿಲ್ಲಿ ಹೇಳಿದ ಸುಳ್ಳು ಪ್ರೇಮಕಥೆಯನ್ನು ಬಯಲು ಮಾಡಿದ್ದಾರೆ. ‘ರಾಜಾಹುಲಿ’ ಚಿತ್ರದ ಪ್ರೇಮಕಥೆಯನ್ನೇ ತನ್ನದೆಂದು ಹೇಳಿದ ಗಿಲ್ಲಿಯ ಸುಳ್ಳನ್ನು ರವಿಚಂದ್ರನ್ ಸುಲಭವಾಗಿ ಗುರುತಿಸಿದರು. ಈ ಘಟನೆ ಬಿಗ್ ಬಾಸ್ ವೀಕ್ಷಕರ ಗಮನ ಸೆಳೆದಿದ್ದು, ರವಿಚಂದ್ರನ್ ಬುದ್ಧಿವಂತಿಕೆಯನ್ನು ಪ್ರಶಂಸಿಸಲಾಗಿದೆ.
- Rajesh Duggumane
- Updated on: Dec 19, 2025
- 7:20 am
ರಘು ಬಳಿಕ ಕಾವ್ಯಾಗೂ ಗೊತ್ತಾಗಿದೆ ಬಿಗ್ ಬಾಸ್ ಸೀಕ್ರೆಟ್ ರೂಮ್ ರಹಸ್ಯ
ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ ಎಂಬುದು ಈಗ ಒಬ್ಬೊಬ್ಬರಿಗೆ ತಿಳಿಯುತ್ತಿದೆ. ಈ ಮೊದಲು ರಘು ಅವರಿಗೆ ಅನುಮಾನ ಬಂದಿತ್ತು. ಅಲ್ಲದೇ ಅವರು ಆ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದರು. ಈಗ ಕಾವ್ಯ ಶೈವ ಅವರಿಗೂ ಸೀಕ್ರೆಟ್ ರೂಮ್ನ ವಿಚಾರ ಗೊತ್ತಾಗಿದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ.
- Madan Kumar
- Updated on: Dec 18, 2025
- 10:56 pm
ಸೀಕ್ರೆಟ್ ರೂಮ್ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ: ಕಂಗಾಲಾದ ಧ್ರುವಂತ್
ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ. ಅಲ್ಲಿಯೂ ಅವರಿಗೆ ಚಟುವಟಿಕೆಗಳನ್ನು ನೀಡಲಾಗಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಅವರಿಬ್ಬರ ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಹಾಗಾಗಿ ಪದೇ ಪದೇ ಜಗಳ ಆಡುತ್ತಿದ್ದಾರೆ. ಇಬ್ಬರ ಅಭಿಪ್ರಾಯಗಳು ಬೇರೆ ಬೇರೆ ಆಗಿವೆ. ಧ್ರುವಂತ್ ಮಾತುಗಳಿಂದ ರಕ್ಷಿತಾ ಕೋಪಗೊಂಡಿದ್ದಾರೆ.
- Madan Kumar
- Updated on: Dec 18, 2025
- 5:00 pm
ಗೆಲ್ಲಲಾಗದೆ ಅಶ್ವಿನಿ ವಿರುದ್ಧ ಸುಳ್ಳು ಆರೋಪ ಮಾಡಿದ್ರಾ ಕಾವ್ಯಾ? ಇಲ್ಲಿದೆ ಸಾಕ್ಷಿ
ಬಿಗ್ ಬಾಸ್ ಟಾಸ್ಕ್ನಲ್ಲಿ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ಮಧ್ಯೆ ದೊಡ್ಡ ಜಗಳ ನಡೆದಿತ್ತು. ಸೈರನ್ ಬಳಿಕವೂ ಅಶ್ವಿನಿ ಕುಳಿತೇ ಇದ್ದರು ಎಂದು ಕಾವ್ಯಾ ಆರೋಪಿಸಿದ್ದರು. ಆದರೆ, ವೈರಲ್ ವಿಡಿಯೋದಲ್ಲಿ ಅಶ್ವಿನಿ ನಿಯಮ ಪಾಲಿಸಿರುವುದು ಸ್ಪಷ್ಟವಾಗಿದೆ. ಕಾವ್ಯಾ ಆರೋಪ ಸುಳ್ಳೆಂದು ಹಲವರು ಅಭಿಪ್ರಾಯಪಟ್ಟಿದ್ದು, ಬಿಗ್ ಬಾಸ್ ಮನೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿದೆ.
- Rajesh Duggumane
- Updated on: Dec 18, 2025
- 12:05 pm
ಬಾಯಿ ಬಿಟ್ಟರೆ ಬರೀ ಸುಳ್ಳು, ಮೋಸದ ಆಟ: ಚೈತ್ರಾ ಮೇಲೆ ಆರೋಪ; ದೇವರ ಮುಂದೆ ಕಣ್ಣೀರು
‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಚೈತ್ರಾ ಕುಂದಾಪುರ ಮೇಲೆ ಆರೋಪಗಳ ಮಳೆ ಸುರಿಸಲಾಗಿದೆ. ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ, ಆಟದಲ್ಲಿ ಮೋಸ ಮಾಡುತ್ತಾರೆ ಎಂದು ಆರೋಪ ಮಾಡಲಾಗಿದೆ. ರಜತ್ ಮತ್ತು ಗಿಲ್ಲಿಯ ಮಾತಿನ ಕಾಟ ತಾಳಲಾರದೇ ಚೈತ್ರಾ ಅವರು ದೇವರ ಮುಂದೆ ಕಣ್ಣೀರು ಸುರಿಸಿದ್ದಾರೆ.
- Madan Kumar
- Updated on: Dec 17, 2025
- 10:45 pm
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ ಸ್ನೇಹಿತ್
ಮಾಜಿ ಬಿಗ್ ಬಾಸ್ ಸ್ಪರ್ಧಿ ಸ್ನೇಹಿತ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಯಾರು ಗೆಲ್ಲಬೇಕು ಎಂಬ ಪ್ರಶ್ನೆಗೆ ಸ್ನೇಹಿತ್ ಉತ್ತರ ನೀಡಿದ್ದಾರೆ. ಟಿವಿ9 ಜೊತೆ ಮಾತನಾಡಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಅಶ್ವಿನಿ ಗೌಡ ಅವರೇ ಗೆಲ್ಲಬೇಕು’ ಎಂದು ಸ್ನೇಹಿತ್ ಹೇಳಿದ್ದಾರೆ.
- Mangala RR
- Updated on: Dec 17, 2025
- 9:34 pm
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
‘ಬಿಗ್ ಬಾಸ್’ ಶೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಈ ಕುರಿತು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಅವರ ನಿರೂಪಣೆ ಬಗ್ಗೆ ಕೆಲವರು ಪ್ರಶ್ನೆ ಮಾಡಿದ್ದಾರೆ. ಅಂಥವರಿಗೆ ವಿನಯ್ ಗೌಡ ಖಡಕ್ ತಿರುಗೇಟು ನೀಡಿದ್ದಾರೆ.
- Mangala RR
- Updated on: Dec 17, 2025
- 8:40 pm
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ಶೈವ ಅವರು ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿರೋಕೆ ಇಷ್ಟಪಡುತ್ತಾರೆ. ಅವರು ಹೆಚ್ಚು ರೌದ್ರಾವತಾರ ತೋರಿಸಿದ್ದು ಕಡಿಮೆ. ಈಗ ಅವರ ರೌದ್ರಾವತಾರಕ್ಕೆ ಇಡೀ ಮನೆ ನಡುಗಿ ಹೋಗಿದೆ. ಅಷ್ಟಕ್ಕೂ ಅಲ್ಲಾಗಿದ್ದೇನು? ಇಲ್ಲಿದೆ ವಿವರ. ಈ ಫೈಟ್ನಿಂದ ಕಾವ್ಯಾ ಮೈಲೇಜ್ ಹೆಚ್ಚೋ ಸಾಧ್ಯತೆ ಇದೆ.
- Rajesh Duggumane
- Updated on: Dec 17, 2025
- 8:31 am
ರಜತ್ ಫ್ಯಾಮಿಲಿ ಬಗ್ಗೆ ಮಾತನಾಡಿದ ಚೈತ್ರಾ ಕುಂದಾಪುರ: ದೊಡ್ಮನೆಯಲ್ಲಿ ಬಿಗ್ ಫೈಟ್
ಟಾಸ್ಕ್ ಆಡುವಾಗ ಚೈತ್ರಾ ಕುಂದಾಪುರ ಅವರು ನಿಯಮಗಳನ್ನು ಮುರಿದಿದ್ದಾರೆ ಎಂಬುದು ರಜತ್ ಆರೋಪ. ಅದೇ ಕಾರಣಕ್ಕೆ ಚೈತ್ರಾ ಕುಂದಾಪುರ ಮತ್ತು ರಜತ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರು ಆಗಿದೆ. ಜಗಳದ ಭರದಲ್ಲಿ ಚೈತ್ರಾ ಕುಂದಾಪುರ ಅವರು ರಜತ್ ಫ್ಯಾಮಿಲಿಯ ಬಗ್ಗೆ ಮಾತನಾಡಿದ್ದಾರೆ.
- Madan Kumar
- Updated on: Dec 16, 2025
- 11:10 pm
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು ಗೊತ್ತಾ?
ಬಿಗ್ ಬಾಸ್ ಮನೆಯ ಒಳಗೆ ಮೊಟ್ಟೆ ಕಳ್ಳತನ ಆಗಿದೆ! ಗಿಲ್ಲಿ ನಟ ಅವರು ಊಟ ಮಾಡುತ್ತಿದ್ದಾಗ ಈ ರೀತಿ ಆಗಿದೆ. ಗಿಲ್ಲಿ ಅವರ ತಟ್ಟೆಯಲ್ಲಿ ಇದ್ದ ಮೊಟ್ಟೆಯನ್ನು ಪಕ್ಕದಲ್ಲೇ ಕುಳಿತಿದ್ದ ರಜತ್ ಅವರು ಕದ್ದಿದ್ದಾರೆ. ಡಿ.16ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ.
- Madan Kumar
- Updated on: Dec 16, 2025
- 5:40 pm