Bigg Boss Kannada
ಅತಿ ದೊಡ್ಡ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ಗೆ ಸ್ಥಾನ ಇದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭ ಆಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು.
ಕನ್ನಡದಲ್ಲಿ ಬಿಗ್ ಬಾಸ್ 12ನೇ ಸೀಸನ್ ಆರಂಭ ಆಗಲಿದೆ. ಒಂದು ಒಟಿಟಿ ಹಾಗೂ ಒಂದು ಮಿನಿ ಸೀಸನ್ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. 17-18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರುತ್ತಾರೆ. 100 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯುತ್ತದೆ.
ಬಿಗ್ ಬಾಸ್ ಒಳಗೆ ಹೋದ ಬಳಿಕ ಹೊರ ಜಗತ್ತಿನ ಜೊತೆಗಿನ ಸಂಪರ್ಕ ಕಳೆದು ಹೋಗುತ್ತದೆ. ಬಿಗ್ ಬಾಸ್ನಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಯಾರ ಮೇಲಾದರೂ ಕೈ ಮಾಡಿದರೆ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಗೆದ್ದ ಸ್ಪರ್ಧಿಗೆ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಸಿಗುತ್ತದೆ. ಸುದೀಪ್ ನಿರೂಪಣೆಯಿಂದ ಬಿಗ್ ಬಾಸ್ ಕನ್ನಡದ ರಂಗು ಹೆಚ್ಚಿದೆ.
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಕ್ಷಿತಾ ಶೆಟ್ಟಿ ಅವರು ಎಲಿಮಿನೇಟ್ ಆಗಿಲ್ಲ. ಅವರನ್ನು ಸೀಕ್ರೆಟ್ ರೂಂನಲ್ಲಿ ಕೂರಿಸಲಾಗಿದೆ. ಅವರಿಗೆ ಈಗ ಹೊಸ ಚಿಂತೆ ಶುರವಾಗಿದೆ. ಏನು ಆ ಚಿಂತೆ? ಆ ಬಗ್ಗೆ ಇಲ್ಲಿದೆ ವಿವರ. ಅವರು ಚಿಂತೆಯನ್ನು ಯಾರು ದೂರ ಮಾಡುತ್ತಾರೆ ನೋಡಬೇಕಿದೆ.
- Rajesh Duggumane
- Updated on: Dec 15, 2025
- 8:19 am
ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಕೆಲವರಿಗೆ ಮಾತ್ರ ಬಯ್ಯೋದೇಕೆ? ಕಿಚ್ಚನೇ ಕೊಟ್ಟರು ಉತ್ತರ
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಸ್ಪರ್ಧಿಗಳನ್ನು ಏಕೆ ಬಯ್ಯುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಉತ್ತಮವಾಗಿ ಆಡುವವರು ಸಣ್ಣ ತಪ್ಪುಗಳಿಂದ ಹಾಳಾಗಬಾರದೆಂಬ ಕಾರಣಕ್ಕೆ ಅವರನ್ನು ತಿದ್ದುತ್ತಾರೆ. ದುರ್ಬಲ ಸ್ಪರ್ಧಿಗಳ ಮೇಲೆ ಶಕ್ತಿ ವ್ಯಯಿಸುವುದಿಲ್ಲ. ಪ್ರತೀ ಶನಿವಾರದ ಸಂಚಿಕೆಗೂ ಮುನ್ನ, ಸೂಕ್ತ ಮಾಹಿತಿ ಪಡೆಯಲು ಇಡೀ ವಾರದ ಎಪಿಸೋಡ್ಗಳನ್ನು ವೀಕ್ಷಿಸಿ ಸಿದ್ಧರಾಗುತ್ತಾರೆ ಎಂದು ಸುದೀಪ್ ತಿಳಿಸಿದ್ದಾರೆ.
- Shreelaxmi H
- Updated on: Dec 15, 2025
- 7:57 am
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಬಗ್ಗೆ ಸುದೀಪ್ ಕೊಟ್ಟರು ಮಾಹಿತಿ
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗಿದ್ದು, ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಪ್ರಮುಖ ಮಾಹಿತಿ ನೀಡಿದ್ದಾರೆ. ಜನವರಿಯಲ್ಲಿ ಫಿನಾಲೆ ನಡೆಯಲಿದೆ. ಈ ವೇಳೆ ಓವರ್ಕಾನ್ಫಿಡೆನ್ಸ್ ಬೇಡ ಎಂದು ಸುದೀಪ್ ಎಚ್ಚರಿಸಿದ್ದಾರೆ. ಕಪ್ ಗೆಲ್ಲಲು ಕಡಿಮೆ ಸ್ಪರ್ಧಿಗಳು ಮಾತ್ರ ಉಳಿದಿದ್ದು, ಮಧ್ಯ ವಾರದ ಎಲಿಮಿನೇಷನ್ ಮತ್ತು ಡಬಲ್ ಎಲಿಮಿನೇಷನ್ ಕೂಡ ಇರಲಿದೆ.
- Shreelaxmi H
- Updated on: Dec 15, 2025
- 7:35 am
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಸುದೀಪ್ ಸತತ 12 ಸೀಸನ್ಗಳಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಿರೂಪಣೆ ಮಾಡಿದ್ದಾರೆ. 12ನೇ ಸೀಸನ್ ನಡೆಸಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಗೊಂದಲ ಇತ್ತು. ಮೊದಲು ಬೇಡ ಎಂದು, ನಂತರ ಸುದೀಪ್ ಒಪ್ಪಿಕೊಂಡರು. ಆ ಬಗ್ಗೆ ಟಿವಿ9 ಸಂದರ್ಶನದಲ್ಲಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
- Madan Kumar
- Updated on: Dec 14, 2025
- 2:28 pm
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಸುದೀಪ್ ಎದುರು ಗಿಲ್ಲಿ ಓಪನ್ ಚಾಲೆಂಜ್
ರಜತ್ ಕಿಶನ್ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮಕ್ಕೆ ಬಂದಾಗಿನಿಂದ ಗಿಲ್ಲಿ ನಟ ಜತೆ ಆಪ್ತವಾಗಿದ್ದರು. ಆದರೆ ಈಗ ಅವರ ಹಾವಭಾವ ಬದಲಾಗಿದೆ. ಗಿಲ್ಲಿ ಅವರು ಕಿಚ್ಚ ಸುದೀಪ್ ಎದುರಲ್ಲೇ ಬಹಿರಂಗ ಸವಾಲು ಹಾಕಿದ್ದಾರೆ.
- Madan Kumar
- Updated on: Dec 14, 2025
- 9:03 am
ಅಕ್ಕ-ತಂಗಿ ಬಳಿ ಹೀಗೆ ಮಾತಾಡ್ತಿದ್ರಾ? ಸೂರಜ್ ಮಾತು ರಾಶಿಕಾ ಎದೆಗೆ ಚುಚ್ತು
ಈ ವಾರ ರಾಶಿಕಾ ಅವರು ಕ್ಯಾಪ್ಟನ್ ಆದರು. ಈ ಆಟದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದು ಚೈತ್ರಾ ಅವರಾಗಿತ್ತು. ಚೈತ್ರಾ ಅವರು ಸರಿಯಾಗಿ ಉಸ್ತುವಾರಿ ಮಾಡಿದ್ದಾರೆ ಎಂಬ ವಾದ ಸೂರಜ್ ಅವರದ್ದಾಗಿತ್ತು. ಇದನ್ನು ಸೂರಜ್ ಅವರು ಮನಸ್ಸಿನಲ್ಲೇ ಇಟ್ಟುಕೊಂಡಿದ್ದರು. ಮನಸ್ಸಿನಲ್ಲಿ ಇದ್ದಿದ್ದನ್ನು ನೇರವಾಗಿ ಹೇಳಿಲ್ಲ ಸೂರಜ್. ಇದು ಕಿತ್ತಾಟಕ್ಕೆ ಅನುವು ಮಾಡಿಕೊಟ್ಟಿತ್ತು.
- Shreelaxmi H
- Updated on: Dec 14, 2025
- 6:21 am
ಬಿಗ್ ಬಾಸ್ ಎಲಿಮಿನೇಷನ್ನಲ್ಲಿ ಈ ವಾರ ಇರಲಿದೆ ದೊಡ್ಡ ಟ್ವಿಸ್ಟ್
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅನಿರೀಕ್ಷಿತ ಟ್ವಿಸ್ಟ್ಗಳು ಮುಂದುವರಿದಿವೆ. ರಜತ್ ಮತ್ತು ಚೈತ್ರಾ ವೈಲ್ಡ್ ಕಾರ್ಡ್ ಆಗಿ ಪ್ರವೇಶಿಸಿದ್ದಾರೆ. ಇದಾದ ಬಳಿಕ ಆಟದ ಸ್ಟೈಲ್ ಚೇಂಜ್ ಆಗಿದೆ. ಈ ವಾರ ಎಲಿಮಿನೇಷನ್ ಇಲ್ಲ ಎನ್ನಲಾಗುತ್ತಿದೆ. ನಾಮಿನೇಟ್ ಆದ ಘಟಾನುಘಟಿಗಳು ಸೇಫ್ ಆಗಲಿದ್ದಾರೆ.
- Rajesh Duggumane
- Updated on: Dec 13, 2025
- 12:23 pm
ಗಿಲ್ಲಿ ಜೊತೆ ಒಂದು ಸಿನಿಮಾ ಮಾಡ್ತೀನಿ; ಶಿವರಾಜ್ಕುಮಾರ್ ಹೀಗೆ ಹೇಳಿದ್ರು
ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟರ ಜನಪ್ರಿಯತೆ ಹೆಚ್ಚಿದೆ. ಶಿವಣ್ಣನ ಮೆಚ್ಚುಗೆ ಹಾಗೂ ಸಿನಿಮಾ ಆಫರ್ ಪಡೆದ ಗಿಲ್ಲಿ, 'ಡೆವಿಲ್' ಚಿತ್ರದಲ್ಲಿ ಗಮನ ಸೆಳೆದಿದ್ದಾರೆ. ರಿಯಾಲಿಟಿ ಶೋಗಳಿಂದ ಸ್ಯಾಂಡಲ್ವುಡ್ಗೆ ಕಾಲಿಟ್ಟ ಇವರಿಗೆ ಈಗ ಹೆಚ್ಚಿನ ಸಿನಿಮಾ ಆಫರ್ಗಳು ಬರುತ್ತಿವೆ. ಗಿಲ್ಲಿಯ ವಿಶಿಷ್ಟ ಕಾಮಿಡಿ ಟೈಮಿಂಗ್ ಜನರನ್ನು ಸೆಳೆದಿದೆ, ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡುತ್ತಿದೆ.
- Shreelaxmi H
- Updated on: Dec 13, 2025
- 8:29 am
ಈ ವಾರದ ಪಂಚಾಯ್ತಿಯಲ್ಲಿ ಸುದೀಪ್ ಚರ್ಚೆ ಮಾಡಬೇಕಿರೋ ವಿಷಯಗಳು ಯಾವವು? ಇದೆ ದೊಡ್ಡ ಪಟ್ಟಿ
ಈ ವಾರದ ಬಿಗ್ ಬಾಸ್ ಕನ್ನಡ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಅವರು ಚರ್ಚಿಸಬಹುದಾದ ಪ್ರಮುಖ ವಿಷಯಗಳ ಪಟ್ಟಿ ಇಲ್ಲಿದೆ. ಅಶ್ವಿನಿ ಗೌಡ ಮತ್ತು ರಜತ್ ಕಿತ್ತಾಟ, ಚೈತ್ರಾ ಫೇವರಿಟಿಸಂ ಆರೋಪಗಳು, ಹಾಗೂ ಟಾಸ್ಕ್ನಲ್ಲಿನ ಸ್ಪರ್ಧಿಗಳ ಉತ್ತಮ ಪ್ರದರ್ಶನಗಳು ಚರ್ಚೆಗೆ ಬರಲಿವೆ. ಕಾವ್ಯಾ ಶೈವ ಅವರನ್ನು ಗಿಲ್ಲಿ ಅಳಿಸಿದ ವಿಷಯ ಕೂಡ ಚರ್ಚೆ ಆಗಬಹುದು.
- Rajesh Duggumane
- Updated on: Dec 13, 2025
- 8:04 am
ಎಲ್ಲರ ಎದುರು ಬಯಲಾಯ್ತು ಗಿಲ್ಲಿ ಅಸಲಿ ಬಣ್ಣ: ನಿಜವಾಯ್ತು ಕಾವ್ಯಾ ಅನುಮಾನ
ಇತ್ತೀಚಿನ ಸಂಚಿಕೆಯಲ್ಲಿ ಕಾವ್ಯಾ ಅವರು ಗಿಲ್ಲಿಯ ಚುಚ್ಚು ಮಾತುಗಳನ್ನು ಕೇಳಿ ನೋವಿನಿಂದ ಕಣ್ಣೀರು ಹಾಕಿದ್ದರು. ಆದರೆ ಗಿಲ್ಲಿ ಅವರು ಆ ರೀತಿ ನಡೆದುಕೊಂಡಿದ್ದಕ್ಕೆ ಸೀಕ್ರೆಟ್ ಟಾಸ್ಕ್ ಕಾರಣವೇ ಹೊರತು ಅದು ಅವರ ನಿಜ ವ್ಯಕ್ತಿತ್ವ ಅಲ್ಲ. ಸೀಕ್ರೆಟ್ ಟಾಸ್ಕ್ ರಹಸ್ಯವನ್ನು ಎಲ್ಲರ ಎದುರಲ್ಲೂ ಈಗ ಬಯಲು ಮಾಡಲಾಗಿದೆ. ಹೊಸ ಎಪಿಸೋಡ್ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Dec 12, 2025
- 10:39 pm
ಈ ವಾರದ ಕಿಚ್ಚನ ಚಪ್ಪಾಳೆ ಗಿಲ್ಲಿಗೆ ಸಿಗಬೇಕು: ಅಭಿಮಾನಿಗಳ ಒತ್ತಾಯ
ಈ ವಾರ ಬಿಗ್ ಬಾಸ್ ನೀಡಿದ ಸೀಕ್ರೆಟ್ ಟಾಸ್ಕ್ಗಳನ್ನು ಗಿಲ್ಲಿ ನಟ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಗಿಲ್ಲಿ ಬಗ್ಗೆ ವೀಕ್ಷಕರಿಗೆ ಎಷ್ಟು ಅಭಿಮಾನ ಇದೆ ಎಂಬುದಕ್ಕೆ ನೂರಾರು ಕಮೆಂಟ್ಗಳು ಸಾಕ್ಷಿ ಆಗುತ್ತಿವೆ. ಈ ವಾರದ ಕಿಚ್ಚನ ಚಪ್ಪಾಳೆ ಗಿಲ್ಲಿಗೆ ಸಿಗಬೇಕು ಎಂದು ಅವರ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.
- Madan Kumar
- Updated on: Dec 12, 2025
- 9:18 pm
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಇತ್ತೀಚಿನ ದಿನಗಳಲ್ಲಿ ಅಶ್ವಿನಿ ಗೌಡ ಅವರು ಸೈಲೆಂಟ್ ಆಗಿದ್ದರು. ಆದರೆ ಈಗ ಮತ್ತೆ ಅವರು ಅಬ್ಬರಿಸಲು ಶುರು ಮಾಡಿದ್ದಾರೆ. ‘ಈ ದುರಹಂಕಾರ ನಮ್ಮ ಹತ್ತಿರ ನಡೆಯೋದೇ ಇಲ್ಲ’ ಎಂದು ಚೈತ್ರಾ ಕುಂದಾಪುರ ಅವರು ಅಶ್ವಿನಿಗೆ ಹೇಳಿದ್ದಾರೆ. ಡಿ.12ರ ಎಪಿಸೋಡ್ ಪ್ರೋಮೋ ಇಲ್ಲಿದೆ ನೋಡಿ.
- Madan Kumar
- Updated on: Dec 12, 2025
- 5:23 pm