
Bigg Boss Kannada
ಅತಿ ದೊಡ್ಡ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ಗೆ ಸ್ಥಾನ ಇದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭ ಆಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು.
ಕನ್ನಡದಲ್ಲಿ ಬಿಗ್ ಬಾಸ್ 10ನೇ ಸೀಸನ್ ಆರಂಭ ಆಗಿದೆ. ಒಂದು ಒಟಿಟಿ ಹಾಗೂ ಒಂದು ಮಿನಿ ಸೀಸನ್ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. 17-18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರುತ್ತಾರೆ. 100 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯುತ್ತದೆ.
ಬಿಗ್ ಬಾಸ್ ಒಳಗೆ ಹೋದ ಬಳಿಕ ಹೊರ ಜಗತ್ತಿನ ಜೊತೆಗಿನ ಸಂಪರ್ಕ ಕಳೆದು ಹೋಗುತ್ತದೆ. ಬಿಗ್ ಬಾಸ್ನಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಯಾರ ಮೇಲಾದರೂ ಕೈ ಮಾಡಿದರೆ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಗೆದ್ದ ಸ್ಪರ್ಧಿಗೆ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಸಿಗುತ್ತದೆ. ಸುದೀಪ್ ನಿರೂಪಣೆಯಿಂದ ಬಿಗ್ ಬಾಸ್ ಕನ್ನಡದ ರಂಗು ಹೆಚ್ಚಿದೆ.
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ
ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಅವರ 2ನೇ ಮದುವೆ ಅದ್ದೂರಿಯಾಗಿ ನೆರವೇರಿದೆ. ಮದುವೆ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಅವರ ಕಾಸ್ಟ್ಯೂಮ್ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ಉತ್ತರ ನೀಡಿದರು. ಮುಂದಿನ ಪ್ಲ್ಯಾನ್ಸ್ ಯಾವ ರೀತಿ ಇದೆ ಎಂಬುದನ್ನು ಕೂಡ ಅವರು ವಿವರಿಸಿದರು.
- Madan Kumar
- Updated on: Mar 2, 2025
- 2:49 pm
ಬಿಗ್ ಬಾಸ್ನಿಂದ ಸಿನಿಮಾಗಳು ಬರುತ್ತೆ ಅನ್ನೋದು ಸುಳ್ಳು; ಕರಾಳ ಸತ್ಯ ಹೇಳಿದ ಧರ್ಮ ಕೀರ್ತಿರಾಜ್
ಧರ್ಮ ಕೀರ್ತಿರಾಜ್ ಅವರು ಬಿಗ್ ಬಾಸ್ ಕಾರ್ಯಕ್ರಮದಿಂದ ಸಿನಿಮಾ ಆಫರ್ಗಳು ಬರುತ್ತವೆ ಎಂಬ ನಂಬಿಕೆ ತಪ್ಪು ಎಂದು ಹೇಳಿದ್ದಾರೆ. ಬಿಗ್ ಬಾಸ್ ಮೂಲಕ ಅವರು ಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸಿದ್ದಾರೆ ಮತ್ತು ತಮ್ಮ ಬಗ್ಗೆ ಜನರಿಗೆ ತಿಳುವಳಿಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಒಳ್ಳೆಯ ಸಿನಿಮಾಗಳ ಮೂಲಕ ಅವರು ಜನರನ್ನು ಮೆಚ್ಚಿಸುವ ಭರವಸೆ ಹೊಂದಿದ್ದಾರೆ.
- Rajesh Duggumane
- Updated on: Mar 1, 2025
- 11:56 am
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ತುಂಬಾ ಅದ್ದೂರಿಯಾಗಿ ಹಂಪಿ ಉತ್ಸವ ನಡೆಯುತ್ತಿದೆ. ಇದರಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ವಿಜೇತ ಹನುಮಂತ ಲಮಾಣಿ ಸಹ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ವೇದಿಕೆಯಲ್ಲಿ ಅವರು ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಹುಲಿಗೆ ಜೈ ಎಂದು ನಿರೂಪಕರು ಜೈಕಾರ ಹಾಕಿದರು. ಆ ವಿಡಿಯೋ ಇಲ್ಲಿದೆ..
- Madan Kumar
- Updated on: Feb 28, 2025
- 9:41 pm
ರಿಲೀಸ್ಗೆ ರೆಡಿ ಆಯ್ತು ಮೋಕ್ಷಿತಾ ಪೈ ಹೊಸ ಸಿನಿಮಾ; ಡಿಗ್ಲಾಮ್ ಲುಕ್ನಲ್ಲಿ ಮಿಂಚಲಿದ್ದಾರೆ ನಟಿ
ಮೋಕ್ಷಿತಾ ಪೈ ಅವರು 'ಮಿಡಲ್ ಕ್ಲಾಸ್ ರಾಮಾಯಣ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭಾಗವಹಿಸಿದ ನಂತರ ಅವರಿಗೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಹೆಚ್ಚಿನ ಅವಕಾಶಗಳು ಬರುತ್ತಿವೆ. ಈ ಸಿನಿಮಾ ಬೇಸಿಗೆ ರಜೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೋಕ್ಷಿತಾ ಅವರ ಪಾತ್ರ ಮತ್ತು ಸಿನಿಮಾದ ಕಥಾವಸ್ತುವಿನ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.
- Web contact
- Updated on: Feb 28, 2025
- 3:10 pm
‘ನಾನೇನು ಬಿಟ್ಟಿ ಬಿದ್ದಿದೀನಾ?’; ಮತ್ತೆ ರೌದ್ರಾವತಾರ ತೋರಿಸಿದ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ತಾವು ಏನು ಎಂಬುದನ್ನು ತೋರಿಸಿದ್ದಾರೆ. ಆಗ ಅವರು ಅನೇಕ ಬಾರಿ ಕೋಪಗೊಂಡಿದ್ದು ಇದೆ. ಈಗ ಅವರು ಮತ್ತೆ ರೌದ್ರಾವತಾರ ತೋರಿಸಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.
- Rajesh Duggumane
- Updated on: Feb 28, 2025
- 9:03 am
ಸುದೀಪ್ ಹಿಡಿದುಕೊಂಡ ಹನುಮಂತನ ಕೈಗೆ ಭಾರೀ ಬೇಡಿಕೆ; ಅಭಿಮಾನಿಗಳು ಮಾಡ್ತಿರೋದೇನು?
ಹನುಮಂತ ಅವರ ಖ್ಯಾತಿ ಹೆಚ್ಚಾಗಿದೆ. ಸುದೀಪ್ ಅವರು ಹನುಮಂತನ ಕೈ ಎತ್ತುವ ಮೂಲಕ ವಿನ್ನರ್ ಎಂದು ಘೋಷಣೆ ಮಾಡಿದರು. ಹನುಮಂತ ಈ ವಿಚಾರಕ್ಕೆ ಸಾಕಷ್ಟು ಖುಷಿಪಟ್ಟಿದ್ದಾರೆ. ಈಗ ಅವರು ಒಂದು ಅಚ್ಚರಿಯ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
- Rajesh Duggumane
- Updated on: Feb 24, 2025
- 8:18 am
ತ್ರಿವಿಕ್ರಂ ಪಾಲಿಗೆ ಒಲಿದ ಅದೃಷ್ಟ; ಹೊಸ ಸೀರಿಯಲ್ಗೆ ಹೀರೋ ಆದ ಬಿಗ್ ಬಾಸ್ ರನ್ನರ್ಅಪ್
ಬಿಗ್ ಬಾಸ್ ಕನ್ನಡ ಸೀಸನ್ 11 ರನ್ನರ್ ಅಪ್ ತ್ರಿವಿಕ್ರಂ ಅವರಿಗೆ ಕಲರ್ಸ್ ಕನ್ನಡದ ಹೊಸ ಧಾರಾವಾಹಿ ‘ಮುದ್ದು ಸೊಸೆ’ಯಲ್ಲಿ ನಾಯಕನ ಪಾತ್ರ ದೊರೆತಿದೆ. ಬಿಗ್ ಬಾಸ್ ನಂತರ ಅವರಿಗೆ ಹಲವು ಅವಕಾಶಗಳು ಬಂದಿವೆ ಎಂದು ತಿಳಿದುಬಂದಿದೆ. ಈ ಧಾರಾವಾಹಿಯಲ್ಲಿ ವಿದ್ಯಾ ಎಂಬ ಹುಡುಗಿಯೊಂದಿಗೆ ಅವರ ಪ್ರೇಮಕಥೆ ಶುರುವಾಗುತ್ತದೆ. ತ್ರಿವಿಕ್ರಂ ಸದ್ಯ ಸಿಸಿಎಲ್ ನಲ್ಲೂ ತೊಡಗಿಸಿಕೊಂಡಿದ್ದಾರೆ.
- Rajesh Duggumane
- Updated on: Feb 24, 2025
- 7:28 am
ಹನುಮಂತ-ಕುರಿ ಪ್ರತಾಪ್ ಕಾಮಿಡಿಗೆ ಪ್ರೇಕ್ಷಕರು ಫುಲ್ ಫ್ಲ್ಯಾಟ್
ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಬಾರಿ ಹಾಸ್ಯ ಮಾಡಿದ್ದು ಇದೆ. ಅವರು ಸಾಕಷ್ಟು ಬಾರಿ ನಗಿಸಿದ್ದಾರೆ. ಈಗ ಅವರು ‘ಮಜಾ ಟಾಕೀಸ್’ ಹಾಗೂ ‘ಬಾಯ್ಸ್ vs ಗರ್ಲ್ಸ್’ ಮಹಾ ಮಿಲನದಲ್ಲಿ ಹೈಲೈಟ್ ಆಗಿದ್ದಾರೆ. ಅವರು ಮಾಡಿರೋ ಕಾಮಿಡಿ ಎಲ್ಲ ಕಡೆಗಳಲ್ಲಿ ಗಮನ ಸೆಳೆದಿದೆ.
- Rajesh Duggumane
- Updated on: Feb 23, 2025
- 8:14 am
ಹುಬ್ಬಳ್ಳಿ ವೇದಿಕೆಯಲ್ಲೂ ಹನುಮಂತನ ಮದುವೆ ಮಾತು; ಬಿಗ್ ಬಾಸ್ ವಿನ್ನರ್ ಹೇಳಿದ್ದೇನು?
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ವಿನ್ನರ್ ಆದ ಬಳಿಕ ಹನುಮಂತ ಅವರ ಜನಪ್ರಿಯತೆ ಹೆಚ್ಚಾಗಿದೆ. ಈಗ ಜನರು ಅವರ ಮದುವೆ ಬಗ್ಗೆ ವಿಚಾರಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಕೂಡ ಹನುಮಂತನಿಗೆ ಮದುವೆ ಕುರಿತು ಪ್ರಶ್ನೆ ಎದುರಾಗಿದೆ. ಮನಸ್ಸಿನ ಮಾತು ಹೇಳು ಎಂದು ಕಾರ್ಯಕ್ರಮದ ನಿರೂಪಕರು ಒತ್ತಾಯ ಮಾಡಿದ್ದಾರೆ.
- Madan Kumar
- Updated on: Feb 22, 2025
- 5:44 pm
ಹುಬ್ಬಳ್ಳಿ ಗಾಳಿಪಟ ಉತ್ಸವದಲ್ಲಿ ಬಿಗ್ ಬಾಸ್ ವಿಜೇತ ಹನುಮಂತ, ಕರತಾಡನ ಮತ್ತು ಶಿಳ್ಳೆಯೊಂದಿಗೆ ಸ್ವಾಗತ!
ವರದಿಗಳ ಪ್ರಕಾರ ಬಿಗ್ ಬಾಸ್ ಸೀಸನ್ 11 ನಡೆಯುತ್ತಿದ್ದಾಗ ಹನುಮಂತಗೆ ಅತಿಹೆಚ್ಚು ವೋಟು ಉತ್ತರ ಕರ್ನಾಟಕ ಭಾಗದಿಂದ ಲಭ್ಯವಾಗಿವೆ. ಹಾಗಂತ ದಕ್ಷಿಣ ಮತ್ತು ಮಧ್ಯ ಕರ್ನಾಟಕದವರು ಅವರಿಗೆ ವೋಟು ನೀಡಿಲ್ಲ ಅಂತೇನೂ ಇಲ್ಲ. ಸಮಗ್ರ ಕರ್ನಾಟಕದ ಜನತೆ ಅವರನ್ನು ವೋಟು ನೀಡಿ ಪ್ರೋತ್ಸಾಹಿಸಿದೆ. ವೇದಿಕೆಯ ಮೇಲಿಂದ ಹನುಮಂತ ತನಗೆ ವೋಟು ಮಾಡಿದ ಜನತೆಗೆ ಧನ್ಯವಾದ ಸಲ್ಲಿಸುತ್ತಾರೆ.
- Arun Belly
- Updated on: Feb 22, 2025
- 10:34 am