ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
‘ಆಸೆ’ ಧಾರಾವಾಹಿ ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ರಾ ಅಮೃತಾ ರಾಮಮೂರ್ತಿ?
ನಟಿ ಅಮೃತಾ ರಾಮಮೂರ್ತಿ ಜನಪ್ರಿಯ ಧಾರಾವಾಹಿಯೊಂದನ್ನು ತೊರೆದ ಕಾರಣ ಬಹಿರಂಗಪಡಿಸಿದ್ದಾರೆ. ಧಾರಾವಾಹಿ ಸೆಟ್ನಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳ ಕೊರತೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ. ವಿಲನ್ ಪಾತ್ರದ ವೈಯಕ್ತಿಕ ಪರಿಣಾಮ ಮತ್ತು ಮಾನಸಿಕ ಅಶಾಂತಿಯೂ ಅವರ ನಿರ್ಧಾರಕ್ಕೆ ಕಾರಣವಾಗಿತ್ತು.
- Rajesh Duggumane
- Updated on: Apr 30, 2026
- 10:14 am
‘ಅವಳ ಪರಿಸ್ಥಿತಿ ನೋಡಿದ್ರೆ ಬೇಸರವಾಗುತ್ತೆ’; ಶೋಭಿತಾ ಬಗ್ಗೆ ನಾಗ ಚೈತನ್ಯ ಮಾತು
ನಾಗ ಚೈತನ್ಯ ಅವರು ಪತ್ನಿ ಶೋಭಿತಾ ಧುಲಿಪಾಲ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ಶೋಭಿತಾ ಬಾಳಲ್ಲಿ ಬಂದ ರೀತಿ, ಪ್ರೀತಿ, ಮದುವೆ ಕುರಿತು ವಿವರಿಸಿದ್ದಾರೆ. ತಮ್ಮ ಹಿಂದಿನ ಸಂಬಂಧಕ್ಕೆ ಶೋಭಿತಾ ಕಾರಣವಲ್ಲ ಎಂದು ಸ್ಪಷ್ಟಪಡಿಸಿ, ಹೇಟ್ ಕಮೆಂಟ್ಸ್ಗಳಿಂದ ಶೋಭಿತಾ ಅನುಭವಿಸಿದ ನೋವು ನೋಡಿ ಬೇಸರವಾಗಿದೆ ಎಂದಿದ್ದಾರೆ. ಪ್ರಬುದ್ಧವಾಗಿ ವರ್ತಿಸಿದ ಶೋಭಿತಾ ಅವರನ್ನು ‘ನಿಜವಾದ ಹೀರೋ’ ಎಂದು ನಾಗ ಚೈತನ್ಯ ಕೊಂಡಾಡಿದ್ದಾರೆ.
- Rajesh Duggumane
- Updated on: Apr 30, 2026
- 8:46 am
ಸಖತ್ ಬೋಲ್ಡ್ ಆಗಿದೆ ‘ಎಪಿಕ್’ ಟೀಸರ್; ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಾದ ‘ಬೇಬಿ’ ನಟಿ
‘ಎಪಿಕ್’ ಚಿತ್ರದ ಬೋಲ್ಡ್ ಟೀಸರ್ ಬಿಡುಗಡೆಯಾಗಿದೆ. ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಇದರಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ಬೋಲ್ಡ್ ದೃಶ್ಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ವೈಷ್ಣವಿಗೆ ಪ್ರಶ್ನೆ ಕೇಳಿದ್ದಾರೆ. ಅವರು ಸಿಟ್ಟಾಗಿ ಉತ್ತರ ನೀಡಲು ಹಿಂದೇಟು ಹಾಕಿದ್ದಾರೆ. ನಿರ್ದೇಶಕರು ಪರಿಸ್ಥಿತಿ ನಿಭಾಯಿಸಿದ್ದಾರೆ.
- Rajesh Duggumane
- Updated on: Apr 30, 2026
- 7:41 am
ಮೂವರು ಸ್ಟಾರ್ ನಟಿಯರ ಸಿನಿಮಾ ವಿಳಂಬಕ್ಕೆ ಪ್ರಿಯಾಂಕಾ ಕಾರಣ? ವಿವರಿಸಿದ ನಿರ್ದೇಶಕ
ಫರ್ಹಾನ್ ಅಖ್ತರ್ ಅವರ ಕನಸಿನ ಯೋಜನೆ, ಬಹು ನಿರೀಕ್ಷಿತ 'ಜೀ ಲೇ ಜರಾ' ಸಿನಿಮಾ ವಿಳಂಬವಾಗುತ್ತಿರುವುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ನಟಿಸಬೇಕಿದ್ದ ಈ ಮಹಿಳಾ ಪ್ರಧಾನ ರೋಡ್ ಟ್ರಿಪ್ ಚಿತ್ರ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ. ಇದರ ಬಗ್ಗೆ ಫರ್ಹಾನ್ ಅಖ್ತರ್ ಪ್ರತಿಕ್ರಿಯಿಸಿದ್ದು, ಕಳೆದ ನಾಲ್ಕೂವರೆ ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ, ಕಾರಣಾಂತರಗಳಿಂದ ವಿಳಂಬವಾಗುತ್ತಿದೆ ಎಂದು ಹೇಳಿದ್ದಾರೆ.
- Rajesh Duggumane
- Updated on: Apr 30, 2026
- 7:05 am
ಜಪಾನ್ಗೆ ಲಗ್ಗೆ ಇಡಲು ರೆಡಿಯಾದ ‘ಧುರಂಧರ್’ ಸಿನಿಮಾ; ಹೆಚ್ಚಲಿದೆ ಗಳಿಕೆ
ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಈಗಾಗಲೇ ವಿಶ್ವದಾದ್ಯಂತ 1,328 ಕೋಟಿಗೂ ಹೆಚ್ಚು ಗಳಿಸಿ ದೊಡ್ಡ ಯಶಸ್ಸು ಕಂಡಿದೆ. ಈಗ ಈ ಚಿತ್ರ ಜುಲೈ 10ರಂದು ಜಪಾನ್ನಲ್ಲಿ ಜಪಾನಿ ಭಾಷೆಗೆ ಡಬ್ ಆಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಭಾರತೀಯ ಆಕ್ಷನ್ ಚಿತ್ರಗಳಿಗೆ ಜಪಾನ್ನಲ್ಲಿ ಉತ್ತಮ ಬೇಡಿಕೆಯಿದ್ದು, 'ಕೆಜಿಎಫ್' ಮತ್ತು 'ಆರ್ಆರ್ಆರ್' ಯಶಸ್ಸು ಇದಕ್ಕೆ ಸಾಕ್ಷಿ. ಜಪಾನ್ ಬಿಡುಗಡೆಯಿಂದ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
- Rajesh Duggumane
- Updated on: Apr 29, 2026
- 5:06 pm
‘ಟಾಕ್ಸಿಕ್’ ಜಾಗ ತುಂಬಲು ಬರ್ತಿದೆ ‘ಮ್ಯಾಂಗೋ ಪಚ್ಚ’; ಕಿಚ್ಚನ ಘೋಷಣೆ
ಕಿಚ್ಚ ಸುದೀಪ್ ಘೋಷಿಸಿದಂತೆ ಸಂಚಿತ್ ಸಂಜೀವ್ ಅವರ ಚೊಚ್ಚಲ ಚಿತ್ರ 'ಮ್ಯಾಂಗೋ ಪಚ್ಚ' ಜೂನ್ 5 ರಂದು ತೆರೆಗೆ ಬರಲಿದೆ. 'ಟಾಕ್ಸಿಕ್' ಚಿತ್ರದ ಬಿಡುಗಡೆ ವಿಳಂಬಗೊಂಡ ಹಿನ್ನೆಲೆಯಲ್ಲಿ ಈ ದಿನಾಂಕವನ್ನು ಲಾಕ್ ಮಾಡಲಾಗಿದೆ. ಮೈಸೂರಿನಲ್ಲಿ 2001-2011ರ ಘಟನೆಗಳನ್ನು ಆಧರಿಸಿದ ಈ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ವಿವೇಕ್ ನಿರ್ದೇಶನವಿದೆ. ಟ್ರೇಲರ್ ಮೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
- Rajesh Duggumane
- Updated on: Apr 29, 2026
- 1:03 pm
‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ಸುಪ್ರೀಂಕೋರ್ಟ್ ಮೊರೆ ಹೋದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರು ಈ ಪ್ರಕರಣದಲ್ಲಿ ಎ2 ಆರೋಪಿ. ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನನ್ನು ಸುಪ್ರೀಂಕೊರ್ಟ್ ರದ್ದು ಮಾಡಿತ್ತು. ಈಗ ಜಾಮೀನು ಕೊಡುವಂತೆ ಅವರು ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
- Rajesh Duggumane
- Updated on: Apr 29, 2026
- 11:49 am
ಹಿಟ್ ಸಿಗದೆ ಒದ್ದಾಡುತ್ತಿರುವ ಹೀರೋ ಜೊತೆ ಡೇಟಿಂಗ್ ಶುರು ಹಚ್ಚಿಕೊಂಡ ಪೂಜಾ ಹೆಗ್ಡೆ
ಇತ್ತೀಚೆಗೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಸಿನಿಮಾ ಯಶಸ್ಸು ಕಾಣುತ್ತಿಲ್ಲ. ಅವರು ರೋಹನ್ ಮೆಹ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದಿ. ವಿನೋದ್ ಮೆಹ್ರಾ ಪುತ್ರ ರೋಹನ್, 'ಬಜಾರ್' ನಟ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದಾರೆ. ಇವರ ಸಂಬಂಧದ ಕುರಿತು ಯಾವುದೇ ಅಧಿಕೃತ ದೃಢೀಕರಣವಿಲ್ಲ.
- Rajesh Duggumane
- Updated on: Apr 29, 2026
- 11:19 am
Toxic Movie Release Postponed: ‘ತಾಳ್ಮೆಯಿಂದ ಇರಿ’; ‘ಟಾಕ್ಸಿಕ್’ ರಿಲೀಸ್ ಮತ್ತೆ ಮುಂದಕ್ಕೆ; ಕಾರಣ ಬಿಚ್ಚಿಟ್ಟ ಯಶ್
ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ: ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಜೂನ್ 4ಕ್ಕೆ ನಿಗದಿಯಾಗಿದ್ದ ಬಿಡುಗಡೆಯನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಸಲುವಾಗಿ ಮುಂದಕ್ಕೆ ಹಾಕಲಾಗಿದೆ. 'ಸಿನಿಮಾ ಕಾನ್'ನಲ್ಲಿ ಸಿಕ್ಕ ಪ್ರತಿಕ್ರಿಯೆಯಿಂದ ಯಶ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಭಿಮಾನಿಗಳಿಗೆ ನಿರಾಸೆಯಾಗಿದ್ದರೂ, ವಿಶ್ವಮಟ್ಟದ ಸಿನಿಮಾವನ್ನು ನೀಡುವ ಭರವಸೆ ನೀಡಿದ್ದಾರೆ.
- Rajesh Duggumane
- Updated on: Apr 29, 2026
- 10:57 am
ನಾನೇನು ಹೀರೋಯಿನ್ ಆಗಿ ನಟಿಸ್ತಿದೀನಾ? ಕೆಣಕಲು ಬಂದವರಿಗೆ ಅಭಿಷೇಕ್ ಬಚ್ಚನ್ ಖಡಕ್ ತಿರುಗೇಟು
ಅಮಿತಾಭ್ ಬಚ್ಚನ್ ಅವರ ಮಗನಾಗಿದ್ದರೂ, ಅಭಿಷೇಕ್ ಬಚ್ಚನ್ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಿಕ್ಕಿಲ್ಲ ಎಂದು ಸದಾ ಟ್ರೋಲ್ ಮಾಡಲಾಗುತ್ತದೆ. ಸೋಲೋ ಹೀರೋ ಆಗಿ ನಟಿಸದ ಬಗ್ಗೆ ಇತ್ತೀಚೆಗೆ ಬಂದ ಪ್ರಶ್ನೆಗೆ, ‘ನಾನೇನು ಹೀರೋಯಿನ್ ಆಗಿ ನಟಿಸುತ್ತಿದ್ದೇನಾ?’ ಎಂದು ಖಡಕ್ ತಿರುಗೇಟು ನೀಡಿದ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಟ್ರೋಲ್ ಮಾಡುವವರಿಗೆ ಇದು ದಿಟ್ಟ ಉತ್ತರವಾಗಿದೆ.
- Rajesh Duggumane
- Updated on: Apr 29, 2026
- 9:02 am
‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ಪ್ರಭಾಕರ್ ಮಾತು ನೆನೆದ ವಿನೋದ್
ಪ್ರಭಾಕರ್ ಅವರು ನೂರಾರು ಸಿನಿಮಾಗಳನ್ನು ಮಾಡಿದವರು. ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಅವರು ಹೆಸರು ಮಾಡಿದ್ದರು. ಪ್ರಭಾಕರ್ ಇಷ್ಟೆಲ್ಲ ಹೆಸರು ಮಾಡಿದರೂ ಅವರಿಗೆ ಚಿತ್ರರಂಗ ಹಾಗೂ ಸಿನಿಮಾ ಅರ್ಥವಾಗಿಲ್ಲವಂತೆ. ಈ ಬಗ್ಗೆ ಅವರು ವಿನೋದ್ ಬಳಿ ಹೇಳಿದ್ದರಂತೆ. ಆ ವಿಷಯವನ್ನು ವಿನೋದ್ ನೆನಪಿಸಿಕೊಂಡಿದ್ದಾರೆ.
- Rajesh Duggumane
- Updated on: Apr 29, 2026
- 8:32 am
ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ
ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ 'ಧುರಂಧರ್' ಸರಣಿಯ ಭಾರಿ ಯಶಸ್ಸಿನ ನಂತರ ಮತ್ತೆ ಒಂದಾಗುತ್ತಿದ್ದಾರೆ. 'ಧುರಂಧರ್ 2' ಚಿತ್ರ 'ಬಾಹುಬಲಿ 2' ದಾಖಲೆ ಮುರಿದಿದ್ದು, ಈ ಕಾಂಬಿನೇಷನ್ ಮೇಲೆ ಭಾರಿ ನಿರೀಕ್ಷೆ ಇದೆ. ಆದಿತ್ಯ ಧರ್ ಅವರ ಮುಂದಿನ ಚಿತ್ರಕ್ಕೆ ರಣವೀರ್ ಸೂಕ್ತ ಎಂದು ಅನಿಸಿದ್ದು, ಸ್ಕ್ರಿಪ್ಟ್ ಕೆಲಸಗಳು ಪ್ರಗತಿಯಲ್ಲಿವೆ. ಈ ಸಿನಿಮಾ 2027 ರಲ್ಲಿ ಸೆಟ್ಟೇರುವ ನಿರೀಕ್ಷೆ ಇದೆ.
- Rajesh Duggumane
- Updated on: Apr 29, 2026
- 7:39 am