ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
‘666 ಆಪರೇಷನ್ ಡ್ರೀಮ್ ಥಿಯೇಟರ್’ ಟೀಸರ್; ಏಜೆಂಟ್ ಪ್ರಕಾಶ್ ಆಗಿ ಬಂದ ಶಿವಣ್ಣ
'666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದ ಅದ್ದೂರಿ ಟೀಸರ್ ಬಿಡುಗಡೆಯಾಗಿದೆ. ಶಿವಣ್ಣ ಮತ್ತು ಡಾಲಿ ಧನಂಜಯ್ ಅವರ ಖಡಕ್ ರೆಟ್ರೋ ಲುಕ್ ಎಲ್ಲರ ಗಮನ ಸೆಳೆದಿದೆ. ಡಾ. ರಾಜ್ಕುಮಾರ್ ಅವರ ಬಾಂಡ್ ಸಿನಿಮಾಗಳನ್ನು ನೆನಪಿಸುವ ಈ ಟೀಸರ್ನಲ್ಲಿ, ಶಿವಣ್ಣ ತಂದೆಯಂತೆಯೇ ಕಾಣಿಸಿಕೊಂಡು ಅಭಿಮಾನಿಗಳಿಗೆ ರೋಮಾಂಚನ ನೀಡಿದ್ದಾರೆ. ಹೇಮಂತ್ ಎಂ. ರಾವ್ ನಿರ್ದೇಶನದ ಈ ಚಿತ್ರವನ್ನು ವೈಶಾಕ್ ಜೆ ಫಿಲ್ಮ್ಸ್ ಅಡಿಯಲ್ಲಿ ವೈಶಾಕ್ ಜೆ ಗೌಡ ನಿರ್ಮಿಸುತ್ತಿದ್ದಾರೆ.
- Rajesh Duggumane
- Updated on: Jul 3, 2026
- 5:30 pm
‘ಇಷ್ಟು ಕೆಟ್ಟ ಸಿನಿಮಾ ನೋಡಿಲ್ಲ’; ‘ಆಲ್ಫಾ’ ನೋಡಿ ನೇರ ವಿಮರ್ಶೆ ತಿಳಿಸಿದ ಫ್ಯಾನ್ಸ್
ಆಲಿಯಾ ಭಟ್ ನಟನೆಯ ಬಹುನಿರೀಕ್ಷಿತ 'ಆಲ್ಫಾ' ಸಿನಿಮಾ ಪ್ರೇಕ್ಷಕರಿಂದ ತೀವ್ರ ನಕಾರಾತ್ಮಕ ವಿಮರ್ಶೆಗಳನ್ನು ಎದುರಿಸುತ್ತಿದೆ. ಟ್ರೇಲರ್ ಹಂತದಿಂದಲೇ ಟೀಕೆಗೆ ಒಳಗಾಗಿದ್ದ ಈ ಚಿತ್ರವನ್ನು ನೋಡಿದ ಅಭಿಮಾನಿಗಳು ‘ಇದು ಅತ್ಯಂತ ಕಳಪೆ ಸಿನಿಮಾ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಅಡಿಯಲ್ಲಿ ಮೂಡಿಬಂದರೂ, ಪ್ರೇಕ್ಷಕರು ಚಿತ್ರವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಿದ್ದಾರೆ.
- Rajesh Duggumane
- Updated on: Jul 3, 2026
- 3:03 pm
ಬಾಕ್ಸ್ ಆಫೀಸ್ನಲ್ಲಿ ಮೆಗಾ ಫೈಟ್; ರಜನಿಕಾಂತ್ ‘ಜೈಲರ್ 2’ ಜೊತೆ ಚಿರಂಜೀವಿ ‘ವಿಶ್ವಂಭರ’ ಕ್ಲ್ಯಾಶ್?
ದಸರಾ ಹಬ್ಬದ ರಜೆಗಳ ಸವಿಯ ನಡುವೆ ದಕ್ಷಿಣ ಭಾರತದ ಇಬ್ಬರು ದೈತ್ಯ ನಟರ ಸಿನಿಮಾಗಳು ಮುಖಾಮುಖಿಯಾಗಲು ಸಜ್ಜಾಗಿವೆ. ಅಕ್ಟೋಬರ್ 15 ರಂದು ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ತೆರೆಗೆ ಬರಲಿದ್ದರೆ, ಅದರ ಮರುದಿನವೇ ಅಂದರೆ ಅಕ್ಟೋಬರ್ 16 ರಂದು ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಿಶ್ವಂಭರ' ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಮೆಗಾ ಕ್ಲ್ಯಾಶ್ ಬಾಕ್ಸ್ ಆಫೀಸ್ನಲ್ಲಿ ಭಾರಿ ಪೈಪೋಟಿ ಸೃಷ್ಟಿಸಲಿದೆ.
- Rajesh Duggumane
- Updated on: Jul 3, 2026
- 10:54 am
ಬೋಲ್ಡ್ ಲುಕ್ನಲ್ಲಿ ಮಿಂಚಿದ ನಟಿ ಮಾಳವಿಕಾ ಮೋಹನ್
ಖ್ಯಾತ ನಟಿ ಮಾಳವಿಕಾ ಮೋಹನ್ ಅವರು ಸದ್ಯ ತಮ್ಮ ಬೋಲ್ಡ್ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.
- Rajesh Duggumane
- Updated on: Jul 3, 2026
- 11:43 am
ಕನ್ನಡಕ್ಕೆ ಮರಳಿದ ಸುಂದರಿ ಪ್ರಿಯಾಂಕಾ ಮೋಹನ್
'ಒಂದ್ ಕಥೆ ಹೇಳ್ಲಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ನಟಿ ಪ್ರಿಯಾಂಕಾ ಮೋಹನ್ ಎಲ್ಲರ ಗಮನ ಸೆಳೆದರು.
- Rajesh Duggumane
- Updated on: Jul 3, 2026
- 10:14 am
ಹಿಂದಿಯನ್ನು ರಾಜ ಭಾಷೆ ಎಂದು ಕರೆದ ಪವನ್ ಕಲ್ಯಾಣ್; ಕೇಳಿ ಬಂತು ಟೀಕೆ
ಪವನ್ ಕಲ್ಯಾಣ್ ಅವರ 'ಹಿಂದಿ ರಾಜ ಭಾಷೆ' ಹೇಳಿಕೆ ದಕ್ಷಿಣ ಭಾರತದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಹಿಂದೆ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಪವನ್, ಈಗ ತಮ್ಮ ನಿಲುವನ್ನು ಬದಲಾಯಿಸಿರುವುದಕ್ಕೆ ಪ್ರಾದೇಶಿಕ ಭಾಷಾ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ ಎಂಬ ಸಂವಿಧಾನದ ನಿಯಮವನ್ನು ನೆನಪಿಸುತ್ತಾ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಜನಸೇನಾ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
- Rajesh Duggumane
- Updated on: Jul 3, 2026
- 9:38 am
‘ಆಲ್ಫಾ’ ಚಿತ್ರಕ್ಕೆ ಮೊದಲ ದಿನ 9 ಸಾವಿರ ಶೋ; ಗಳಿಕೆ ಮಾತ್ರ ಒಂದಂಕಿ?
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ, ಆಲಿಯಾ ಭಟ್ ನಟನೆಯ 'ಆಲ್ಫಾ' ಚಿತ್ರಕ್ಕೆ ದೇಶಾದ್ಯಂತ 9,000 ಕ್ಕೂ ಹೆಚ್ಚು ಶೋಗಳು ಸಿಕ್ಕಿವೆ. ಆದರೆ, ಮೊದಲ ದಿನದ ಗಳಿಕೆ ಕೇವಲ 7 ಕೋಟಿ ರೂಪಾಯಿ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಭಾರಿ ಸ್ಕ್ರೀನ್ಗಳನ್ನು ಪಡೆದರೂ ಬಾಕ್ಸ್ ಆಫೀಸ್ನಲ್ಲಿ ನಿರಾಶೆ ಮೂಡಿಸಿರುವುದು ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿದೆ. ಈ ಮಹಿಳಾ ಪ್ರಧಾನ ಚಿತ್ರಕ್ಕೆ ನಿರೀಕ್ಷಿತ ಆರಂಭಿಕ ಓಪನಿಂಗ್ ಸಿಕ್ಕಿಲ್ಲ.
- Rajesh Duggumane
- Updated on: Jul 3, 2026
- 8:39 am
ಮಾಜಿ ಅತ್ತಿಗೆ ಸಮಂತಾಗೆ ಅಖಿಲ್ ಅಕ್ಕಿನೇನಿ ಅಭಿನಂದನೆ
ನಟಿ ಸಮಂತಾ ರುತ್ ಪ್ರಭು ಅವರ ಮಾಜಿ ಮೈದುನ ಅಖಿಲ್ ಅಕ್ಕಿನೇನಿ, ಸಮಂತಾರವರ ಹೊಸ ಸಿನಿಮಾ 'ಮಾ ಇಂಟಿ ಬಂಗಾರಂ' ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಖಿಲ್-ಸಮಂತಾ ನಡುವಿನ ಉತ್ತಮ ಬಾಂಧವ್ಯವನ್ನು ಇದು ಸಾಬೀತುಪಡಿಸಿದೆ. ಇತ್ತೀಚೆಗೆ ಸಮಂತಾ ತಾವು ಗರ್ಭಿಣಿ ಎಂದು ಘೋಷಿಸಿದ್ದು, ಹೊಸ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಈ ಬೆಳವಣಿಗೆಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.
- Rajesh Duggumane
- Updated on: Jul 3, 2026
- 8:48 am
ತಂದೆ ವಿಜಯ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಜೇಸನ್; ಎಲ್ಲವೂ ಸರಿ ಆಯ್ತು?
ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ರಾಜಕೀಯದಲ್ಲಿ ಯಶಸ್ವಿಯಾದರೂ, ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ವದಂತಿಗಳು ಹರಡಿದ್ದವು. ವಿಶೇಷವಾಗಿ ಪತ್ನಿಯಿಂದ ವಿಚ್ಛೇದನ ಹಾಗೂ ಮಗ ಜೇಸನ್ ಸಂಜಯ್ ಜೊತೆಗಿನ ಭಿನ್ನಾಭಿಪ್ರಾಯದ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಇತ್ತೀಚಿನ ವಿಡಿಯೋದಲ್ಲಿ ಸಂಜಯ್ ತಮ್ಮ ತಂದೆಯ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ಮೂಲಕ ಎಲ್ಲಾ ವದಂತಿಗೆ ತೆರೆ ಎಳೆದಿದ್ದಾರೆ ಮತ್ತು ಕುಟುಂಬದ ದೃಢ ಸಂಬಂಧವನ್ನು ಜಗತ್ತಿಗೆ ಸಾರಿದ್ದಾರೆ.
- Rajesh Duggumane
- Updated on: Jul 3, 2026
- 7:05 am
ಇನ್ನು ಮುಂದೆ ಸಿನಿಮಾ ನಿರ್ದೇಶನ ಮಾಡಲ್ಲ; ನಿವೃತ್ತಿ ಘೋಷಿಸಿದ ಆಲಿಯಾ ಭಟ್ ತಂದೆ
ಬಾಲಿವುಡ್ನ ದಿಕ್ಸೂಚಿ ನಿರ್ದೇಶಕ ಮಹೇಶ್ ಭಟ್ ಅವರು ಚಿತ್ರ ನಿರ್ದೇಶನಕ್ಕೆ ಅಧಿಕೃತವಾಗಿ ನಿವೃತ್ತಿ ಘೋಷಿಸುವ ಮೂಲಕ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದ್ದಾರೆ. ಇಂದಿನ ಸಿನಿಮಾಗಳಲ್ಲಿ ಕಂಟೆಂಟ್ ಮೊದಲೇ ನಿರ್ಧಾರವಾಗುವುದರಿಂದ ನಿರ್ದೇಶಕರಿಗೆ ಸೃಜನಾತ್ಮಕ ಸ್ವಾತಂತ್ರ್ಯ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಇನ್ನು ಮುಂದೆ ಮೆಗಾಫೋನ್ ಹಿಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಐದು ದಶಕಗಳ ಸುದೀರ್ಘ ವೃತ್ತಿಜೀವನ ಮುಗಿಸಿರುವ ಅವರು, ಇನ್ನು ಮುಂದೆ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ (ಮೆಂಟರ್) ನೀಡುವತ್ತ ಗಮನಹರಿಸುವುದಾಗಿ ತಿಳಿಸಿದ್ದಾರೆ.
- Rajesh Duggumane
- Updated on: Jul 2, 2026
- 1:44 pm
ಒಂದೇ ತಿಂಗಳಲ್ಲಿ ಗಣೇಶ್ ನಟನೆಯ ಎರಡು ಸಿನಿಮಾಗಳು ರಿಲೀಸ್; ಅಭಿಮಾನಿಗಳಿಗೆ ಡಬಲ್ ಹಬ್ಬ
ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನದಂದು ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಿದ್ದು, ಅಕ್ಟೋಬರ್ 2026ರ ಒಂದೇ ತಿಂಗಳಲ್ಲಿ ಅವರ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಗಣೇಶ್ ನಟನೆಯ 'ಪಿನಾಕ' ಸೇರಿದಂತೆ ಎರಡು ಬಹುನಿರೀಕ್ಷಿತ ಸಿನಿಮಾಗಳು ಕೇವಲ 14 ದಿನಗಳ ಅಂತರದಲ್ಲಿ ತೆರೆಗೆ ಬರಲಿವೆ. ಇದು ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ತಂದಿದ್ದರೂ, ಎರಡು ಪ್ರಮುಖ ಚಿತ್ರಗಳ ನಡುವೆ ಇಷ್ಟು ಕಡಿಮೆ ಅಂತರವಿರುವುದು ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತು ಥಿಯೇಟರ್ ಹಂಚಿಕೆಗೆ ಸವಾಲಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
- Rajesh Duggumane
- Updated on: Jul 2, 2026
- 12:09 pm
ಸಾಕ್ಷಿದಾರನಿಗೆ ಬೆದರಿಕೆ ಹಾಕಿ ಅರೆಸ್ಟ್ ಆದ ಆ ಮೂವರು ದರ್ಶನ್ ಫ್ಯಾನ್ಸ್ ಇವರೇ ನೋಡಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಮುಖ ಸಾಕ್ಷಿದಾರ ಸಂದೀಪ್ ಅವರಿಗೆ ಬೆದರಿಕೆ ಹಾಕಿದ ಮೂವರು ದರ್ಶನ್ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕಿದ್ದ ಪುನೀತ್, ವೇಣು, ಸುಹಾಸ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಬಂಧನಗಳು ಪ್ರಕರಣದ ತನಿಖೆಗೆ ಹೊಸ ತಿರುವು ನೀಡಿವೆ.
- Rajesh Duggumane
- Updated on: Jul 2, 2026
- 11:01 am