ಪತ್ರಿಕೋದ್ಯಮಕ್ಕೆ ಕಾಲಿಟ್ಟು ಏಳು ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
ಸುಭಾಷಿಣಿ ಸಾವಿನ ಸುತ್ತ ಅನುಮಾನದ ಹುತ್ತ
ತಮಿಳು ಕಿರುತೆರೆ ನಟಿ ಸುಭಾಷಿಣಿ ಸುಬ್ತಮಣಿಯಂ ಅವರು ನಿಧನ ಹೊಂದಿದ್ದಾರೆ.
- Rajesh Duggumane
- Updated on: Apr 7, 2026
- 2:23 pm
ಸಾಯುವುದಕ್ಕೂ ಎರಡು ದಿನ ಮೊದಲು ಕಿರುತೆರೆ ನಟಿ ಸುಭಾಷಿಣಿ ಎಷ್ಟು ಖುಷಿಯಿಂದ ಇದ್ರು ನೋಡಿ
Actress Subhashini Death: ತಮಿಳು ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ ಏಪ್ರಿಲ್ 6ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. 'ಕಯಲ್' ಧಾರಾವಾಹಿಯಿಂದ ಜನಪ್ರಿಯರಾಗಿದ್ದ ಸುಭಾಷಿಣಿ, ಸಾಯುವುದಕ್ಕೂ ಮುನ್ನ ಸಂತೋಷದ ವಿಡಿಯೋ ಹಂಚಿಕೊಂಡಿದ್ದರು.
- Rajesh Duggumane
- Updated on: Apr 7, 2026
- 1:07 pm
ಕನ್ನಡದಲ್ಲಿ ಅಂಬರೀಷ್, ತೆಲುಗಿನಲ್ಲಿ ಪ್ರಭಾಸ್; ಇಬ್ಬರೂ ರೆಬೆಲ್ ಸ್ಟಾರ್ ಮಧ್ಯೆ ಇದೆ ಸಾಮ್ಯತೆ
ಕನ್ನಡದ ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ತೆಲುಗಿನ ಪ್ರಭಾಸ್ ನಡುವೆ ಊಟದ ವಿಷಯದಲ್ಲಿ ವಿಶೇಷ ಸಾಮ್ಯತೆ ಇದೆ. ಇಬ್ಬರೂ ಎಲ್ಲರಿಗೂ ಊಟ ಹಾಕಿಸುವುದನ್ನು ಅಪಾರವಾಗಿ ಇಷ್ಟಪಡುತ್ತಿದ್ದರು. ಪ್ರಭಾಸ್ ಅಂಬರೀಷ್ ಅವರಂತೆಯೇ ಸೆಟ್ನಲ್ಲಿರುವವರಿಗೂ ಔದಾರ್ಯದಿಂದ ಊಟ ನೀಡುತ್ತಾರೆ, ತಮ್ಮ ಕುಟುಂಬದ ಊಟದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.
- Rajesh Duggumane
- Updated on: Apr 7, 2026
- 12:22 pm
ಒಂದೇ ಚಿತ್ರದಲ್ಲಿ ಇಬ್ಬರು ಬಿಗ್ ಬಾಸ್ ವಿನ್ನರ್ಸ್; ಗಮನ ಸೆಳೆದ ‘ಎಲ್ರ ಕಾಲೆಳಿಯುತ್ತೆ ಕಾಲ’ ಟ್ರೇಲರ್
‘ಎಲ್ರ ಕಾಲೆಳಿಯುತ್ತೆ ಕಾಲ’ ಚಿತ್ರವು ಚಂದನ್ ಶೆಟ್ಟಿ ಮತ್ತು ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಹಾಸ್ಯ-ಗಂಭೀರ ಮಿಶ್ರಿತ ಕನ್ನಡಿಗರ ಬಹುನಿರೀಕ್ಷಿತ ಚಿತ್ರವಾಗಿದೆ. ನಟ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಸಿನಿಮಾ ಏಪ್ರಿಲ್ 17ರಂದು ಬಿಡುಗಡೆಯಾಗಲಿದೆ. ಗಡಿಯಾರ ಇಲ್ಲದಿದ್ದರೂ ಸಮಯದ ಸೆಳೆತ ತಪ್ಪದು ಎಂಬ ವಿಶಿಷ್ಟ ಕಥಾಹಂದರವನ್ನು ರೆಟ್ರೊ ಶೈಲಿಯಲ್ಲಿ ಹೇಳಲಾಗಿದೆ.
- Rajesh Duggumane
- Updated on: Apr 7, 2026
- 10:49 am
‘ಅದ್ಭುತ ಅನುಭವ’; ಐಪಿಎಲ್ ನಡುವೆ ‘ಧರುಂಧರ್ 2’ ನೋಡಿ ವಿಮರ್ಶೆ ತಿಳಿಸಿದ ವಿರಾಟ್
Virat Kohli News: ವಿರಾಟ್ ಕೊಹ್ಲಿ ಅವರು 'ಧುರಂಧರ್ 2' ಚಿತ್ರ ವೀಕ್ಷಿಸಿ ಹಾಡಿಹೊಗಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನೋಡಿದ ಅದ್ಭುತ ಸಿನಿಮಾ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದಿತ್ಯ ಧಾರ್ ಅವರ ನಿರ್ದೇಶನ ಮತ್ತು ರಣವೀರ್ ಸಿಂಗ್ ಅವರ ನಟನೆಯನ್ನು ಶ್ಲಾಘಿಸಿದ್ದಾರೆ.
- Rajesh Duggumane
- Updated on: Apr 7, 2026
- 10:50 am
ಇದು ಪಾಕ್ ಲೀಗ್ ವಿಡಿಯೋನಾ? ವೈರಲ್ ಆದ ವಿಡಿಯೋ ಹಿಂದಿನ ಅಸಲಿಯತ್ತೇನು?
ಪಾಕಿಸ್ತಾನ ಪ್ರೀಮಿಯರ್ ಲೀಗ್ ಎಂದರೆ ಸಾಕು ಅಲ್ಲಿ ಒಂದು ಪ್ರೊಫೆಷನಿಸಂ ಇರೋದಿಲ್ಲ ಎಂದು ಎಲ್ಲರೂ ಮಾತನಾಡುತ್ತಾರೆ. ಈಗ ಒಂದು ವಿಡಿಯೋ ವೈರಲ್ ಆಗಿದೆ. ಇದು ಪಿಎಸ್ಎಲ್ ವಿಡಿಯೀ ಎಂದು ಹೇಳಲಾಗಿದೆ. ಆದರೆ, ಅಸಲಿಗೆ ಇದು ಪಿಎಸ್ಎಲ್ ಲೀಗ್ ಪಂದ್ಯವಲ್ಲ. ಆ ಬಗ್ಗೆ ಇಲ್ಲಿದೆ ವಿವರ.
- Rajesh Duggumane
- Updated on: Apr 7, 2026
- 12:25 pm
‘ಪ್ರೀತಿನೇ ಎಲ್ಲಾ ಅಲ್ಲ, ಆದರೆ, ಪ್ರೀತಿ ಇಲ್ದೆ ಏನೂ ಇಲ್ಲ’; ತ್ರಿಷಾ ಮಾರ್ಮಿಕ ಪೋಸ್ಟ್
ನಟಿ ತ್ರಿಷಾ ಕೃಷ್ಣನ್ ವಿಜಯ್ ಜೊತೆಗಿನ ಅಕ್ರಮ ಸಂಬಂಧದ ಆರೋಪದಿಂದ ಸುದ್ದಿಯಲ್ಲಿದ್ದಾರೆ. ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ನಟಿಯೊಂದಿಗೆ ಪತಿಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ತ್ರಿಷಾ ಪ್ರೀತಿ ಕುರಿತು ಹಂಚಿಕೊಂಡ ಇನ್ಸ್ಟಾಗ್ರಾಮ್ ಪೋಸ್ಟ್ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ವಿಜಯ್ ಹಾಗೂ ತ್ರಿಷಾ ದಶಕಗಳಿಂದಲೂ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.
- Rajesh Duggumane
- Updated on: Apr 7, 2026
- 7:39 am
ಆರ್ಸಿಬಿ ಮ್ಯಾಚ್ಗಳಲ್ಲಿ ಸದಾ ಅನುಷ್ಕಾ ಶರ್ಮಾ ಪಕ್ಕ ಕೂರುವ ಈ ಸುಂದರಿ ಯಾರು?
ಅನುಷ್ಕಾ ಶರ್ಮಾ ಪಕ್ಕ ಕುಳಿತಿರುವ ಹುಡುಗಿ ಯಾರು ಎಂಬುದನ್ನು ಪತ್ತೆ ಹಚ್ಚಲು ಅನೇಕರು ಎಐ ಟೂಲ್ಗಳನ್ನು ಬಳಕೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಈ ವೇಳೆ ಅನೇಕರಿಗೆ ತಪ್ಪು ಮಾಹಿತಿ ಸಿಕ್ಕಿದೆ. ಅನುಷ್ಕಾ ಶರ್ಮಾ ಅವರ ಅತ್ತಿಗೆ ಭಾವನಾ ಕೊಹ್ಲಿ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಎಂದಿದ್ದಾರೆ.
- Rajesh Duggumane
- Updated on: Apr 7, 2026
- 7:26 am
ಸುಧಾರಾಣಿ-ಶಿವಣ್ಣನ ಸಂಬಂಧದ ಬಗ್ಗೆ ಅಪಪ್ರಚಾರ; ಶ್ವಾನಗಳ ಮೂಲಕ ಉತ್ತರ ಕೊಟ್ಟ ನಟಿ
ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ, AI ಸೃಷ್ಟಿಯ ತಪ್ಪು ಮಾಹಿತಿಯಿಂದ ಸೆಲೆಬ್ರಿಟಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ನಟಿ ಸುಧಾರಾಣಿ ಕೂಡ ತಮ್ಮ ಬಗ್ಗೆ ಹರಡಿದ 'ಫೇಕ್ ನ್ಯೂಸ್' ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೂಟ್ಯೂಬರ್ಗಳು ವೀವ್ಸ್ಗಾಗಿ ಸೆಲೆಬ್ರಿಟಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಹಾನಿ ಉಂಟುಮಾಡುತ್ತಿದೆ.
- Rajesh Duggumane
- Updated on: Apr 6, 2026
- 3:07 pm
‘ಜೈ ಹನುಮಾನ್’ ಸಿನಿಮಾ ಶೂಟ್ ಆರಂಭಕ್ಕೂ ಮೊದಲೇ ಮಹತ್ವದ ಬದಲಾವಣೆ
ಕಾಂತಾರ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ 'ಜೈ ಹನುಮಾನ್' ಸಿನಿಮಾದಲ್ಲಿ ಹನುಮಾನ್ ಪಾತ್ರ ಮಾಡುತ್ತಿದ್ದಾರೆ. ಫೆಬ್ರವರಿಯಲ್ಲಿ ಮುಹೂರ್ತ ಕಂಡ ಈ ಚಿತ್ರದಲ್ಲಿ ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಿಮಿಷ್ ರವಿ ಬದಲಿಗೆ ಎಸ್ ತಿರುನವುಕ್ಕರಸು ಛಾಯಾಗ್ರಾಹಕರಾಗಿ ಸೇರ್ಪಡೆಯಾಗಿದ್ದಾರೆ.
- Rajesh Duggumane
- Updated on: Apr 6, 2026
- 1:11 pm
ನೆಲವೇ ಹಾಸಿಗೆ, ಕಟ್ಟೆಯೇ ತಲೆದಿಂಬು; ಪ್ರಭುದೇವ ಎಷ್ಟು ಸಿಂಪಲ್ ನೋಡಿ
ನಟ, ನಿರ್ದೇಶಕ ಹಾಗೂ ಸಿನಿಮಾ ನಿರ್ಮಾಪಕ, ಕೊರಿಯೋಗ್ರಾಫರ್ ಅವರು ಸಿಂಪಲ್ ಆಗಿ ಜೀವನ ನಡೆಸಿದ್ದಾರೆ. ಅವರು ನೆಲದಮೇಲೆ ಮಲಗಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಅವರ ಸರಳತೆ ಮೆಚ್ಚಲೇಬೇಕು.
- Rajesh Duggumane
- Updated on: Apr 6, 2026
- 11:59 am
ವಿವಾಹ ಆದ ‘ಮನದ ಕಡಲು’ ಸಿನಿಮಾ ನಟ ಸುಮುಖ್
2024ರಲ್ಲಿ ಬಂದ ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾದಲ್ಲಿ ಸುಮುಖ್ ನಟಿಸಿದ್ದರು.
- Rajesh Duggumane
- Updated on: Apr 6, 2026
- 9:50 am