AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆ

Senior Sub-Editor - TV9 Kannada

rajesh.hegde@tv9.com

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow On:
ಕ್ಯಾಲಿಫೋರ್ನಿಯಾದಲ್ಲಿ ಯಶ್ ನೋಡಿ ‘ಡ್ಯಾಡಿಸ್ ಹೋಂ’ ಎಂದ ಫ್ಯಾನ್ಸ್

ಕ್ಯಾಲಿಫೋರ್ನಿಯಾದಲ್ಲಿ ಯಶ್ ನೋಡಿ ‘ಡ್ಯಾಡಿಸ್ ಹೋಂ’ ಎಂದ ಫ್ಯಾನ್ಸ್

'ರಾಮಾಯಣ' ಸಿನಿಮಾದ ಪ್ರಚಾರಕ್ಕಾಗಿ ಅಮೆರಿಕಕ್ಕೆ ತೆರಳಿರುವ ರಾಕಿಂಗ್ ಸ್ಟಾರ್ ಯಶ್, ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ಈವೆಂಟ್‌ನಲ್ಲಿ ಭಾರಿ ಸದ್ದು ಮಾಡಿದ್ದಾರೆ. ಯಶ್ ಅವರನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಭಾರತೀಯ ಅಭಿಮಾನಿಗಳು ಮುಗಿಬಿದ್ದಿದ್ದು, ಇದೇ ವೇಳೆ ಅವರ ಮುಂದಿನ ಚಿತ್ರ 'ಟಾಕ್ಸಿಕ್' ನ ಪ್ರಸಿದ್ಧ 'ಡ್ಯಾಡಿಸ್ ಹೋಂ' ಡೈಲಾಗ್ ಕೂಡ ಜಾಗತಿಕ ವೇದಿಕೆಯಲ್ಲಿ ಭಾರಿ ಸದ್ದು ಮಾಡಿದೆ.

ಸೂಪರ್ ಮಾಮ್ ರಿಯಾಲಿಟಿ ಶೋ ಆಡಿಷನ್ ವಿವರ ಇಲ್ಲಿದೆ

ಸೂಪರ್ ಮಾಮ್ ರಿಯಾಲಿಟಿ ಶೋ ಆಡಿಷನ್ ವಿವರ ಇಲ್ಲಿದೆ

ಮಹಿಳೆಯರ ಸುಪ್ತ ನೃತ್ಯ ಪ್ರತಿಭೆಯನ್ನು ಅನಾವರಣಗೊಳಿಸಲು ಜೀ ಕನ್ನಡ ವಾಹಿನಿಯು ಮತ್ತೊಮ್ಮೆ ಅದ್ಭುತ ವೇದಿಕೆಯನ್ನು ಸಿದ್ಧಪಡಿಸಿದೆ. ಬಹುನಿರೀಕ್ಷಿತ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - ಸೂಪರ್ ಮಾಮ್’ ಕಾರ್ಯಕ್ರಮದ ಹೊಸ ಸೀಸನ್‌ನ ಆಡಿಷನ್ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಕರ್ನಾಟಕದ ಒಟ್ಟು 18 ಪ್ರಮುಖ ಜಿಲ್ಲೆಗಳಲ್ಲಿ ಈ ಆಡಿಷನ್‌ಗಳು ನಡೆಯಲಿವೆ.

ಹೊಸ ರೀತಿಯಲ್ಲಿ ರಾವಣನ ಪಾತ್ರ ತೋರಿಸಲು ಹೊರಟ ಯಶ್

ಹೊಸ ರೀತಿಯಲ್ಲಿ ರಾವಣನ ಪಾತ್ರ ತೋರಿಸಲು ಹೊರಟ ಯಶ್

ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ಈವೆಂಟ್‌ನಲ್ಲಿ ಪಾಲ್ಗೊಂಡಿದ್ದ ನಟ ಯಶ್, ತಮ್ಮ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಹಾಗೂ ರಾವಣನ ಪಾತ್ರದ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಾಮನಾಗಿ ನಟಿಸುತ್ತಿರುವ ರಣಬೀರ್ ಕಪೂರ್ ಅವರ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ರಾವಣನ ಅಹಂಕಾರ ಮತ್ತು ಮಾನಸಿಕ ಸ್ಥಿತಿಯನ್ನು ತೆರೆಮೇಲೆ ತರಲು ತಾವು ನಡೆಸಿದ ಸಿದ್ಧತೆಗಳ ಕುರಿತು ಮಾತನಾಡಿದ್ದಾರೆ.

‘ಅದು ನನ್ನ ಸಿನಿಮಾ ಆಗಿರಲಿಲ್ಲ’; ‘ಬಂದರ್’ ಚಿತ್ರದ ಬಗ್ಗೆ ಅನುರಾಗ್ ಕಶ್ಯಪ್ ಬೇಸರ

‘ಅದು ನನ್ನ ಸಿನಿಮಾ ಆಗಿರಲಿಲ್ಲ’; ‘ಬಂದರ್’ ಚಿತ್ರದ ಬಗ್ಗೆ ಅನುರಾಗ್ ಕಶ್ಯಪ್ ಬೇಸರ

ತಮ್ಮ ಇತ್ತೀಚಿನ ‘ಬಂದರ್’ ಸಿನಿಮಾ ಮಹಿಳಾ ವಿರೋಧಿ ಹಾಗೂ ‘ಮೀಟೂ’ ಚಳವಳಿ ವಿರುದ್ಧವಾಗಿದೆ ಎಂಬ ಸಾರ್ವಜನಿಕರ ತೀವ್ರ ಟೀಕೆಗಳು ನಿಜವಾಗಿವೆ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಒಪ್ಪಿಕೊಂಡಿದ್ದಾರೆ. ಆದರೆ, ಚಿತ್ರದ ಫೈನಲ್ ಕಟ್ ಅನ್ನು ಪ್ರೊಡಕ್ಷನ್ ಹೌಸ್ ಬದಲಾಯಿಸಿದ್ದು, ತಮ್ಮ ಒಪ್ಪಿಗೆಯಿಲ್ಲದ ಆವೃತ್ತಿ ರಿಲೀಸ್ ಆಗಿರುವುದರಿಂದಲೇ ತಾವೂ ಚಿತ್ರದ ಪ್ರಚಾರದಿಂದ ದೂರ ಉಳಿದಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

‘ಕರಾವಳಿ’ ಸಿನಿಮಾದಲ್ಲಿ ಪಶುವೈದ್ಯೆಯ ಪಾತ್ರ ಮಾಡಿದ ಸಂಪದಾ

‘ಕರಾವಳಿ’ ಸಿನಿಮಾದಲ್ಲಿ ಪಶುವೈದ್ಯೆಯ ಪಾತ್ರ ಮಾಡಿದ ಸಂಪದಾ

‘ಕರಾವಳಿ’ ಸಿನಿಮಾಗೆ ಸಂಪದಾ ನಾಯಕಿ. ಈ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Karavali Movie Review: ಕಂಬಳದ ಓಟದ ಮಧ್ಯೆ ಸೇಡಿನ ಸುಳಿ;  ಹೀಗಿದೆ ‘ಕರಾವಳಿ’

Karavali Movie Review: ಕಂಬಳದ ಓಟದ ಮಧ್ಯೆ ಸೇಡಿನ ಸುಳಿ; ಹೀಗಿದೆ ‘ಕರಾವಳಿ’

ರಿಲೀಸ್​​ಗೂ ಮೊದಲೇ ಸಾಕಷ್ಟು ವಿವಾದಗಳೊಂದಿಗೆ ‘ಕರಾವಳಿ’ ಸುದ್ದಿ ಆಯಿತು. ಇದು ಸಿನಿಮಾಗೆ ಸಹಕಾರಿ ಆಗಲಿದೆ ಎಂಬುದು ಕೆಲವರ ವಾದ. ಇಷ್ಟೆಲ್ಲ ಸುದ್ದಿ ಆದ ‘ಕರಾವಳಿ’ ಸಿನಿಮಾ ಹೇಗಿದೆ? ಈ ಚಿತ್ರದಲ್ಲಿ ಪ್ರಜ್ವಲ್​ ಪಾಲೆಷ್ಟು? ರಾಜ್ ಬಿ ಶೆಟ್ಟಿಯ ಪಾಲೆಷ್ಟು? ಆ ಬಗ್ಗೆ ಇಲ್ಲಿದೆ ವಿವರ.

ನೆಗೆಟಿವ್ ವಿಮರ್ಶೆ ಮಧ್ಯೆ ‘ಜನ ನಾಯಗನ್’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ನೆಗೆಟಿವ್ ವಿಮರ್ಶೆ ಮಧ್ಯೆ ‘ಜನ ನಾಯಗನ್’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ಮೊದಲ ದಿನ 100 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಲ್ಲಿ ಮುಗ್ಗರಿಸಿದೆ. ಗುರುವಾರ ವಿಶ್ವಾದ್ಯಂತ ಒಟ್ಟು 78.27 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವ ಈ ಚಿತ್ರಕ್ಕೆ ಪೈರಸಿ ಮತ್ತು ಸೋಶಿಯಲ್ ಮೀಡಿಯಾದ ನೆಗೆಟಿವ್ ಹೈಪ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಚಿತ್ರ ಸಾಕಷ್ಟು ಚಾಲೆಂಜ್​​ಗಳು ಎದುರಿಸಲಿದೆ.

ಕೊನೆಯ ಕ್ಷಣದಲ್ಲಿ ‘ರಾಮಾಯಣ’ ಟ್ರೇಲರ್ ರಿಲೀಸ್ ರದ್ದು; ಕಾರಣ ಕೊಟ್ಟ ನಮಿತ್ ಮಲ್ಹೋತ್ರಾ

ಕೊನೆಯ ಕ್ಷಣದಲ್ಲಿ ‘ರಾಮಾಯಣ’ ಟ್ರೇಲರ್ ರಿಲೀಸ್ ರದ್ದು; ಕಾರಣ ಕೊಟ್ಟ ನಮಿತ್ ಮಲ್ಹೋತ್ರಾ

ದೆಹಲಿಯಲ್ಲಿ ನಡೆದ ವಿಶೇಷ ಪ್ರಿವ್ಯೂ ಬಳಿಕ ಇಂದು (ಜುಲೈ 24) ಯೂಟ್ಯೂಬ್‌ನಲ್ಲಿ ‘ರಾಮಾಯಣ’ ಚಿತ್ರದ ಬಿಡುಗಡೆಯಾಗಬೇಕಿತ್ತು. ಬಹುನಿರೀಕ್ಷಿತ ಟ್ರೇಲರ್ ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ. ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಜೊತೆಗಿನ ಜಾಗತಿಕ ಪಾಲುದಾರಿಕೆಯಿಂದಾಗಿ ಟ್ರೇಲರ್ ಅನ್ನು ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

‘ಇನ್ಮುಂದೆ ಅತಿಥಿ ಪಾತ್ರ ಮಾಡುತ್ತೇನೋ ಗೊತ್ತಿಲ್ಲ’; ‘ಕರಾವಳಿ’ ವಿವಾದದ ಬೆನ್ನಲ್ಲೇ ರಾಜ್ ಬಿ. ಶೆಟ್ಟಿ ಬೇಸರ

‘ಇನ್ಮುಂದೆ ಅತಿಥಿ ಪಾತ್ರ ಮಾಡುತ್ತೇನೋ ಗೊತ್ತಿಲ್ಲ’; ‘ಕರಾವಳಿ’ ವಿವಾದದ ಬೆನ್ನಲ್ಲೇ ರಾಜ್ ಬಿ. ಶೆಟ್ಟಿ ಬೇಸರ

'ಕರಾವಳಿ' ಚಿತ್ರದ ಟ್ರೇಲರ್ ಲಾಂಚ್ ವೇಳೆ ಸೃಷ್ಟಿಯಾದ ಅನಗತ್ಯ ವಿವಾದಗಳ ಬೆನ್ನಲ್ಲೇ ನಟ ರಾಜ್ ಬಿ. ಶೆಟ್ಟಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಾವೊಬ್ಬ ಅಸುರಕ್ಷಿತ ವ್ಯಕ್ತಿಯಲ್ಲದಿದ್ದರೂ, ಇತ್ತೀಚಿನ ದುರದೃಷ್ಟಕರ ಘಟನೆಗಳು ಭವಿಷ್ಯದಲ್ಲಿ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳನ್ನು ಒಪ್ಪಿಕೊಳ್ಳುವ ಮುನ್ನ ಮರುಚಿಂತನೆ ನಡೆಸುವಂತೆ ಮಾಡಿವೆ ಎಂದು ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ.

‘ಪುನೀತ್ ರಾಜ್​​ಕುಮಾರ್ ಊಟಕ್ಕೆ ಬನ್ನಿ ಅಂದಿದ್ರು’; ಮೈಸೂರಿನ ಭೇಟಿ ನೆನೆದ ರಾವ್ ರಮೇಶ್

‘ಪುನೀತ್ ರಾಜ್​​ಕುಮಾರ್ ಊಟಕ್ಕೆ ಬನ್ನಿ ಅಂದಿದ್ರು’; ಮೈಸೂರಿನ ಭೇಟಿ ನೆನೆದ ರಾವ್ ರಮೇಶ್

ನಟ ಕೋಮಲ್ ಕುಮಾರ್ ಅಭಿನಯದ ‘ತೆನಾಲಿ ಡಿಎ, ಎಲ್‌ಎಲ್‌ಬಿ’ ಚಿತ್ರದಲ್ಲಿ ಬಹುಭಾಷಾ ನಟ ರಾವ್ ರಮೇಶ್ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಅಪರೂಪದ ಭೇಟಿಯನ್ನು ನೆನೆದು ಭಾವುಕರಾಗಿದ್ದಾರೆ. ಮೈಸೂರಿನ ಹೋಟೆಲ್ ಜಿಮ್‌ನಲ್ಲಿ ಅಪ್ಪು ಸರ್ ತಮ್ಮನ್ನು ಗುರುತಿಸಿ, ಮನೆಗೆ ಊಟಕ್ಕೆ ಆಹ್ವಾನಿಸಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಬೆಂಗಳೂರಲ್ಲಿ ದುಬಾರಿ ಟಿಕೆಟ್ ಬೆಲೆಗೆ ‘ಜನ ನಾಯಗನ್’ ಡಲ್; ಶೋಗಳಿಗಿಲ್ಲ ಹೌಸ್​​ಫುಲ್ ಬೋರ್ಡ್

ಬೆಂಗಳೂರಲ್ಲಿ ದುಬಾರಿ ಟಿಕೆಟ್ ಬೆಲೆಗೆ ‘ಜನ ನಾಯಗನ್’ ಡಲ್; ಶೋಗಳಿಗಿಲ್ಲ ಹೌಸ್​​ಫುಲ್ ಬೋರ್ಡ್

ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಇಂದು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಓಪನಿಂಗ್ ನಿರೀಕ್ಷಿಸಲಾಗಿತ್ತು. ಆದರೆ, ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಟಿಕೆಟ್ ದರ ಹಾಗೂ ಮುಂಚಿತವಾಗಿಯೇ ಆದ ಆನ್‌ಲೈನ್ ಲೀಕ್ ಭೀತಿಯಿಂದಾಗಿ ಚಿತ್ರಕ್ಕೆ ಮೊದಲ ದಿನವೇ ಡಲ್ ಓಪನಿಂಗ್ ಸಿಕ್ಕಿದೆ. ಬುಕ್ ಮೈ ಶೋನಲ್ಲಿ ಬಹುತೇಕ ಶೋಗಳು ಖಾಲಿ ಉಳಿದಿದ್ದು, ಹೌಸ್​​ಫುಲ್ ಬೋರ್ಡ್ ಬೀಳದಿರುವುದು ಚಿತ್ರತಂಡಕ್ಕೆ ಆತಂಕ ಮೂಡಿಸಿದೆ.

ಪೇಪರ್​ ಲೀಕ್​​ನಿಂದ ಪಾಸ್ ಆಗ್ತಿದ್ದ ಸಲ್ಮಾನ್ ಖಾನ್; ಹಳೆಯ ಹೇಳಿಕೆ ವೈರಲ್

ಪೇಪರ್​ ಲೀಕ್​​ನಿಂದ ಪಾಸ್ ಆಗ್ತಿದ್ದ ಸಲ್ಮಾನ್ ಖಾನ್; ಹಳೆಯ ಹೇಳಿಕೆ ವೈರಲ್

ನೀಟ್ ಪೇಪರ್ ಲೀಕ್ ಪ್ರಕರಣದ ವಿರುದ್ಧ ಸಿಜೆಪಿ (CJP) ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಸಲ್ಮಾನ್ ಖಾನ್ ಬೆಂಬಲ ಸೂಚಿಸಿದ್ದಾರೆ. ಪೇಪರ್ ಲೀಕ್ ಅತ್ಯಂತ ಗಂಭೀರ ಸಮಸ್ಯೆ ಎಂದು ಅವರು ಹೇಳಿದ್ದಾರೆ. ಜುಲೈ 20 ರ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಗಾಯಗೊಂಡಿದ್ದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಬೆಂಬಲದ ಬೆನ್ನಲ್ಲೇ ಸಲ್ಮಾನ್ ಖಾನ್‌ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮುಖಭಂಗವಾಗಿದೆ. ಅವರ ಹಳೆಯ ವಿಡಿಯೋವೊಂದನ್ನು ನೆಟ್ಟಿಗರು ಈಗ ರೀ-ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.