ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ ಶಾಲಿನಿ ಪಾಂಡೆ
‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದ ಶಾಲಿನಿ ಪಾಂಡೆಗೆ ನಂತರ ಚಿತ್ರರಂಗದಲ್ಲಿ ದೊಡ್ಡ ಗೆಲುವು ಸಿಕ್ಕಿಲ್ಲ.
- Rajesh Duggumane
- Updated on: Jun 13, 2026
- 2:55 pm
ಮುರಿದು ಬಿತ್ತು ‘ಗಂಗೆ ಬಾರೆ ತುಂಗೆ ಬಾರೆ’ ನಟಿಯ ನಿಶ್ಚಿತಾರ್ಥ? ಇಲ್ಲಿದೆ ಸಾಕ್ಷಿ
ನಟಿ ಸುನೈನಾ ಹಾಗೂ ಯೂಟ್ಯೂಬರ್ ಖಲೀದ್ ಅಲ್ ಅಮೇರಿ ನಿಶ್ಚಿತಾರ್ಥ ಮುರಿದುಬಿದ್ದಿದೆ ಎಂಬ ವರದಿಗಳು ಹರಿದಾಡುತ್ತಿವೆ. ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಈಗ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ. ಖಲೀದ್ ಈ ಹಿಂದೆ ಮದುವೆಯಾಗಿದ್ದರು. ಸುನೈನಾ 'ಕುಬೇರ' ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಇವರ ಸಂಬಂಧದ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.
- Rajesh Duggumane
- Updated on: Jun 13, 2026
- 1:06 pm
ವಿರಸ ಮರೆತು ಪತಿ ವಿಜಯ್ ಜೊತೆ ಒಂದಾಗ್ತಾರೆ ಸಂಗೀತಾ? ಹಬ್ಬಿದೆ ವದಂತಿ
ಮುಖ್ಯಮಂತ್ರಿಯಾಗಿ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ ದಳಪತಿ ವಿಜಯ್ ವೈಯಕ್ತಿಕ ಜೀವನ ಚರ್ಚೆಯಲ್ಲಿದೆ. ಪತ್ನಿ ಸಂಗೀತಾ ಜೊತೆ ವಿಚ್ಛೇದನ ಪ್ರಕರಣದ ವಿಚಾರಣೆ ಜೂನ್ 15ಕ್ಕೆ ನಿಗದಿಯಾಗಿದೆ. ಒಂದೆಡೆ ಪುನರ್ಮಿಲನದ ಮಾತುಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ತ್ರಿಶಾ ಜೊತೆಗಿನ ಓಡಾಟದ ಗೊಂದಲವೂ ಇದೆ. ನ್ಯಾಯಾಲಯದ ಅಂತಿಮ ನಿರ್ಧಾರಕ್ಕಾಗಿ ಇಡೀ ತಮಿಳುನಾಡು ಕಾಯುತ್ತಿದೆ.
- Rajesh Duggumane
- Updated on: Jun 13, 2026
- 12:27 pm
ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್
ಟಾಲಿವುಡ್ ಮೆಗಾಸ್ಟಾರ್ ರಾಮ್ ಚರಣ್ ಎಲ್ಲೇ ಹೋದರೂ ಅವರ ನೆರಳಿನಂತೆ ರಕ್ಷಣೆ ನೀಡುವ ಬಾಡಿಗಾರ್ಡ್ ಕೆವಿನ್ ಕುಂಟ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಾರ್ಢ್ಯ ಹಾಗೂ ಫಿಟ್ನೆಸ್ನಿಂದಲೇ ಗಮನ ಸೆಳೆಯುವ ಕೆವಿನ್, ಜಿಮ್ನಲ್ಲಿ ನಡೆಸಿರುವ ವರ್ಕೌಟ್ ವಿಡಿಯೋ ಒಂದು ಈಗ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗುತ್ತಿದೆ.
- Rajesh Duggumane
- Updated on: Jun 13, 2026
- 11:38 am
ಕರ್ನಾಟಕದಲ್ಲಿ ಭಾರೀ ಗಳಿಕೆ ಮಾಡಿದ ಹಾಲಿವುಡ್ ಚಿತ್ರ; ಕನ್ನಡ ಸಿನಿಮಾಗಳಿಗೇ ಇಲ್ಲ ಬೇಡಿಕೆ
ಈ ವರ್ಷ 100ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದರೂ, ಕೆಲವೇ ಚಿತ್ರಗಳು ಉತ್ತಮ ಗಳಿಕೆ ಕಂಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ಹಾಲಿವುಡ್ ಚಿತ್ರಗಳು ಕರ್ನಾಟಕದಲ್ಲಿ ಭಾರಿ ಯಶಸ್ಸು ಗಳಿಸುತ್ತಿವೆ. 'ಒಬ್ಸೆಷನ್' ಚಿತ್ರ 10 ಕೋಟಿಗೂ ಹೆಚ್ಚು ಗಳಿಸಿದ್ದರೆ, ಅನೇಕ ಕನ್ನಡ ಸಿನಿಮಾಗಳು 10 ಕೋಟಿ ತಲುಪಲು ಹೆಣಗುತ್ತಿವೆ. ಇದು ಕನ್ನಡ ಚಿತ್ರರಂಗದ ಗಳಿಕೆ ಮತ್ತು ಪ್ರೇಕ್ಷಕರ ಬೇಡಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
- Rajesh Duggumane
- Updated on: Jun 13, 2026
- 10:44 am
ನಿಜವಾದ ಯುವರಾಣಿ; ಹೇಗೆ ಕಾಣಿಸ್ತಾರೆ ನೋಡಿ ನಿವೇದಿತಾ ಗೌಡ
ಸೋಶಿಯಲ್ ಮೀಡಿಯಾ ಸ್ಟಾರ್ ನಿವೇದಿತಾ ಗೌಡ ಅವರು ಸುಂದರ ಸೀರೆ ಉಟ್ಟು ಯುವರಾಣಿಯಂತೆ ದೇವಲೋಕದ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ.
- Rajesh Duggumane
- Updated on: Jun 13, 2026
- 9:51 am
ರಜನಿಕಾಂತ್ ಅವರ ಈ ಚಿತ್ರದಿಂದ ಸ್ಫೂರ್ತಿ ಪಡೆದಿದೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ
ಸಮಂತಾ ರುತ್ ಪ್ರಭು ಅವರ 'ಮಾ ಇಂಟಿ ಬಂಗಾರಂ' ಸಿನಿಮಾ ಜೂನ್ 19ರಂದು ತೆರೆಗೆ ಬರಲಿದೆ. ನಿರ್ದೇಶಕಿ ನಂದಿನಿ ರೆಡ್ಡಿ ಇದು ಸೂಪರ್ಸ್ಟಾರ್ ರಜನಿಕಾಂತ್ ಅವರ 'ಬಾಷಾ' ಚಿತ್ರದಿಂದ ಸ್ಪೂರ್ತಿ ಪಡೆದಿದೆ ಎಂದು ಹೇಳಿದ್ದಾರೆ. 'ಬಾಷಾ' ಕಥೆಯ ಟೆಂಪ್ಲೇಟ್ಗೆ ಮಹಿಳಾ ಪಾತ್ರವನ್ನು ಸೇರಿಸಿ ಹೊಸ ಟ್ವಿಸ್ಟ್ ನೀಡಲಾಗಿದೆ. ಸಾಯಿ ಪಲ್ಲವಿ ಬದಲಿಗೆ ಸಮಂತಾ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ ದಿಗಂತ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
- Rajesh Duggumane
- Updated on: Jun 13, 2026
- 8:53 am
ಒಟಿಟಿಗೆ ಬಂದಿರೋ ‘ವಲವಾರ’ ಸಿನಿಮಾನ ಮಿಸ್ ಮಾಡಲೇಬೇಡಿ; ನಮ್ಮ ಮಣ್ಣಿನ ಸುಂದರ ಕತೆ
ಕನ್ನಡದ 'ವಲವಾರ' ಚಲನಚಿತ್ರವು ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಯಶಸ್ಸು ಗಳಿಸದೆ, ಈಗ ಒಟಿಟಿ (Zee5) ಮೂಲಕ ಅಪಾರ ಪ್ರೇಕ್ಷಕರನ್ನು ತಲುಪಿ ಗೆದ್ದಿದೆ. ಸಕಲೇಶಪುರದ ಗ್ರಾಮೀಣ ಸೊಗಡಿನಲ್ಲಿ ಅಣ್ಣ-ತಮ್ಮಂದಿರ ಬಾಂಧವ್ಯ, ತಾರತಮ್ಯ ಮತ್ತು ಹಸು ಹುಡುಕುವ ಒಂದು ಹುಡುಗನ ಜೀವನಾನುಭವವನ್ನು ಹೇಳುವ ಈ ಹೃದಯಸ್ಪರ್ಶಿ ಕಲಾಕೃತಿ ವಿಮರ್ಶಕರ ಮೆಚ್ಚುಗೆ ಗಳಿಸಿದೆ.
- Rajesh Duggumane
- Updated on: Jun 13, 2026
- 8:23 am
ಅಜಿತ್ಗೆ ದೊಡ್ಡ ಮೊತ್ತದ ಸಂಭಾವನೆ ಕೊಡಲು ನಿರ್ಮಾಪಕರ ಹಿಂದೇಟು? ಶುರುವಾಗಿದೆ ಭಯ
ತಮಿಳು ನಟ ಅಜಿತ್ ಕುಮಾರ್ ಅವರ ಮುಂದಿನ ಸಿನಿಮಾ AK64 ಸಂಭಾವನೆ ವಿಚಾರವಾಗಿ ಭಾರಿ ಚರ್ಚೆಯಲ್ಲಿದೆ. ಇತ್ತೀಚಿನ ಸೋಲುಗಳ ನಂತರ, ಅಜಿತ್ ತಮ್ಮ ಸಂಭಾವನೆಯನ್ನು 150 ಕೋಟಿ ರೂ.ಗೆ ಇಳಿಸಿದ್ದಾರೆ. ಆದರೂ, ನಿರ್ಮಾಪಕರು ಈ ಮೊತ್ತ ನೀಡಲು ಹಿಂದೇಟು ಹಾಕಿ, ಇನ್ನಷ್ಟು ಕಡಿಮೆ ಮಾಡುವಂತೆ ಕೇಳುತ್ತಿದ್ದಾರೆ. ಇದು ಅವರ ಹೊಸ ಸಿನಿಮಾ ಯೋಜನೆಗಳ ಘೋಷಣೆಗೆ ವಿಳಂಬಕ್ಕೆ ಕಾರಣವಾಗಿದೆ.
- Rajesh Duggumane
- Updated on: Jun 13, 2026
- 7:00 am
ಕೇವಲ 1 ಕೋಟಿ ರೂ. ಕಲೆಕ್ಷನ್; ಬಾಕ್ಸ್ ಆಫೀಸ್ನಲ್ಲಿ ಡಿಸಾಸ್ಟರ್ ಆದ ಕಂಗನಾ ಸಿನಿಮಾ
ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ 'ಭಾರತ ಭಾಗ್ಯವಿಧಾತ' ಸಿನಿಮಾ ಜೂನ್ 12ರಂದು ತೆರೆಕಂಡಿದೆ. ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಗಿದೆ. ಮೊದಲ ದಿನ ಕೇವಲ 1 ಕೋಟಿ ರೂ. ಸಂಗ್ರಹಿಸಿದ್ದು, ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದ್ದು, ಸಿನಿಮಾ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
- Rajesh Duggumane
- Updated on: Jun 13, 2026
- 6:36 am
ಬಾಲಿವುಡ್ನ ಸೀಕ್ವೆಲ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕತ್ರಿನಾ ಕೈಫ್ ರೆಡಿ?
ಕತ್ರಿನಾ ಕೈಫ್ ಮತ್ತೆ ಬಣ್ಣದ ಲೋಕಕ್ಕೆ ಮರಳಲಿದ್ದಾರೆಂಬ ಸುದ್ದಿ ಬಿಟೌನ್ನಲ್ಲಿ ಬಿಸಿಬಿಸಿ ಚರ್ಚೆಯಲ್ಲಿದೆ. ಮಗು ಜನಿಸಿದ ನಂತರ ಸಿನಿಮಾ ಬ್ರೇಕ್ನಲ್ಲಿದ್ದ ಕತ್ರಿನಾ, ಅನುಷ್ಕಾ ಶರ್ಮಾ ರೀತಿ ಚಿತ್ರರಂಗಕ್ಕೆ ಗುಡ್ಬೈ ಹೇಳುತ್ತಾರೆಂಬ ವದಂತಿಗಳು ಸುಳ್ಳಾಗಿವೆ. 'ಚಾಂದಿನಿ ಬಾರ್ 2' ಮೂಲಕ ಅವರು ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಒಟಿಟಿ ಪ್ರಾಜೆಕ್ಟ್ಗಳ ಸ್ಕ್ರಿಪ್ಟ್ ಕೇಳುತ್ತಿದ್ದಾರೆಂಬ ಸುದ್ದಿ ಕೂಡ ಇದೆ. ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
- Rajesh Duggumane
- Updated on: Jun 12, 2026
- 3:14 pm
ಖಾಸಗಿ ಜೆಟ್ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಅದ್ಭುತ ಆಟಗಾರ. ಅವರು ನೂರಾರು ಕೋಟಿ ರೂಪಾಯಿ ಸಂಗ್ರಹ ಮಾಡಿದ್ದಾರೆ. ಈಗ ಸಚಿನ್ ಅವರು ಖಾಸಗಿ ಜೆಟ್ನಲ್ಲಿ ಕ್ರಿಕೆಟ್ ಆಡಿದ್ದಾರೆ ಎಂಬುದು ವಿಶೇಷ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
- Rajesh Duggumane
- Updated on: Jun 12, 2026
- 1:12 pm