ಅನಾರೋಗ್ಯದ ಕಾರಣ ಕೊಟ್ಟು ‘ಜನ ನಾಯಗನ್’ ನೋಡೋದನ್ನು ಮುಂದಕ್ಕೆ ಹಾಕಿದ ರಿವಿಶನ್ ಸಮಿತಿ
'ಜನ ನಾಯಗನ್' ಸಿನಿಮಾ ಬಿಡುಗಡೆ ಜನವರಿ 9ರಿಂದ ಮಾರ್ಚ್ 19ಕ್ಕೆ ಮುಂದೂಡಲ್ಪಟ್ಟರೂ, ಸೆನ್ಸಾರ್ ಮಂಡಳಿ ಮತ್ತು ಪುನರ್ ವಿಮರ್ಶೆ ಸಮಿತಿ ಸಮಸ್ಯೆಗಳಿಂದ ಮತ್ತಷ್ಟು ವಿಳಂಬವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಕೋರ್ಟ್ ಮೊರೆ ಹೋಗಿ, ನಂತರ ಅರ್ಜಿ ಹಿಂಪಡೆದು ಸಮಿತಿಗೆ ಸಲ್ಲಿಸಿತ್ತು. ಸಮಿತಿ ಸದಸ್ಯರ ಅನಾರೋಗ್ಯದಿಂದ ಈಗ ಮತ್ತಷ್ಟು ವಿಳಂಬವಾಗಿದ್ದು, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

‘ಜನ ನಾಯಗನ್’ ಸಿನಿಮಾ (Jana Nayagan Movie) ಜನವರಿ 9ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಸಾಧ್ಯವಾಗಿಲ್ಲ. ಮೂಲ ದಿನಾಂಕ ಮುಗಿದು ಎರಡು ತಿಂಗಳು ಕಳೆದರೂ ಸಿನಿಮಾಗೆ ರಿಲೀಸ್ ಭಾಗ್ಯ ಸಿಗುತ್ತಿಲ್ಲ. ಈ ಮಧ್ಯೆ, ‘ಜನ ನಾಯಗನ್’ ಸಿನಿಮಾ ಮಾರ್ಚ್ 19ರ ರಿಲೀಸ್ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೂ ಅವಕಾಶ ಸಿಗಬಾರದು ಎಂದು ಎಲ್ಲರೂ ನಿರ್ಧರಿಸಿದಂತೆ ಇದೆ. ಏಕೆಂದರೆ, ಸಿನಿಮಾ ವಿಮರ್ಶೆ ಮಾಡೋದಕ್ಕೆ ಪುರನ್ ವಿಮರ್ಶೆ ಸಮಿತಿ ರೆಡಿ ಇದ್ದಂತೆ ಕಾಣಿಸುತ್ತಿಲ್ಲ.
‘ಜನ ನಾಯಗನ್’ ಚಿತ್ರವನ್ನು ವಿಮರ್ಶೆ ಮಾಡಲು ಕೆವಿಎನ್ ಸಂಸ್ಥೆ ಡಿಸೆಂಬರ್ನಲ್ಲಿಯೇ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಸಿನಿಮಾ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಪುನರ್ ವಿಮರ್ಶೆ ಸಮಿತಿಗೆ ಸಿನಿಮಾ ಸಲ್ಲಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾಗಿ ಹೇಳಿತ್ತು. ಇದರಿಂದ ಸಿಟ್ಟಾದ ಕೆವಿಎನ್ ಕೋರ್ಟ್ ಮೆಟ್ಟಿಲೇರಿತ್ತು. ಸ್ಥಳೀಯ ಕೋರ್ಟ್ನಿಂದ ಹಿಡಿದು ಸುಪ್ರೀಂಕೋರ್ಟ್ವರೆಗೆ ತಂಡ ಅರ್ಜಿ ಸಲ್ಲಿಸಿತ್ತು.
ಆದರೆ, ಕೋರ್ಟ್ನಲ್ಲಿ ಇದಕ್ಕೆ ಪರಿಹಾರ ಸಿಗುವುದಿಲ್ಲ ಎಂಬ ಸ್ಪಷ್ಟತೆ ಸಿಕ್ಕ ಬಳಿಕ ‘ಜನ ನಾಯಗನ್’ ತಂಡ ಕೋರ್ಟ್ನಿಂದ ಅರ್ಜಿ ಹಿಂಪಡೆದು, ಪುನರ್ ವಿಮರ್ಶೆ ಸಮಿತಿಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇಂದು (ಮಾರ್ಚ್ 9) ಮಧ್ಯಾಹ್ನ ‘ಜನ ನಾಯಗನ್’ ಸಿನಿಮಾ ನೋಡುವುದಾಗಿ ಪುನರ್ ವಿಮರ್ಶೆ ಸಮಿತಿ ಹೇಳಿದ್ದಾಗಿ ವರದಿ ಆಗಿತ್ತು. ಆದರೆ, ಈಗ ಈ ಪ್ರಕ್ರಿಯೆಯೂ ವಿಳಂಬ ಆಗುತ್ತಿದೆ.
ಸಮಿತಿಯಲ್ಲಿರುವ ಒಬ್ಬರಿಗೆ ತೀವ್ರ ಅನಾರೋಗ್ಯ ಉಂಟಾಗಿದೆಯಂತೆ. ಇದೇ ಕಾರಣ ನೀಡಿ ಸಿನಿಮಾ ವಿಮರ್ಶೆಯನ್ನು ಮುಂದಕ್ಕೆ ಹಾಕಲಾಗಿದೆ. ಇದು ತಂಡದ ಅಸಮಾಧಾನಕ್ಕೆ ಕಾರಣ ಆಗಿದೆ. ಇನ್ನು ಅಭಿಮಾನಿಗಳಿಗೂ ಸಾಕಷ್ಟು ನೋವುಂಟು ಮಾಡಿದೆ. ಈ ಬೆಳವಣಿಗೆಯಿಂದ ಮಾರ್ಚ್ 19ರ ದಿನಾಂಕ ಕೂಡ ಮಿಸ್ ಆಗುವ ಸೂಚನೆ ಸಿಕ್ಕಿದೆ.
ಇದನ್ನೂ ಓದಿ: ಮಾರ್ಚ್ 9ಕ್ಕೆ ನಿರ್ಧಾರವಾಗಲಿದೆ ‘ಜನ ನಾಯಗನ್’ ಭವಿಷ್ಯ: ಆತಂಕದಲ್ಲಿ ಕೆವಿಎನ್
‘ಜನ ನಾಯಗನ್’ ಚಿತ್ರವನ್ನು ವಿನೋದ್ ನಿರ್ದೇಶನ ಮಾಡಿದ್ದಾರೆ. ಕೆಲವು ಆ್ಯಕ್ಷನ್ ಚಿತ್ರಗಳನ್ನು ಅವರು ನೀರ್ದೇಶನ ಮಾಡಿದ್ದರು. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಇದನ್ನು ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




