AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಶ್ರೀಲಕ್ಷ್ಮೀ ಎಚ್

ಶ್ರೀಲಕ್ಷ್ಮೀ ಎಚ್

Author - TV9 Kannada

shreedevhegde@Gmail.com

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಕ್ರಿಸಮಸ್ ರಜೆಗೆ ಮಗಳ ಜೊತೆ ವಿದೇಶಕ್ಕೆ ಹಾರಿದ ಐಶ್ವರ್ಯಾ-ಅಭಿಷೇಕ್ ದಂಪತಿ

ಕ್ರಿಸಮಸ್ ರಜೆಗೆ ಮಗಳ ಜೊತೆ ವಿದೇಶಕ್ಕೆ ಹಾರಿದ ಐಶ್ವರ್ಯಾ-ಅಭಿಷೇಕ್ ದಂಪತಿ

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಜೊತೆ ಕ್ರಿಸ್ಮಸ್ ರಜೆಗಾಗಿ ವಿದೇಶಕ್ಕೆ ಪ್ರಯಾಣಿಸಿದ್ದಾರೆ. ಈ ದಂಪತಿಯ ವಿಚ್ಛೇದನದ ವದಂತಿಗಳು ಹರಡುತ್ತಿರುವ ನಡುವೆಯೇ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರ ವಿಡಿಯೋ ವೈರಲ್ ಆಗಿದೆ. ಕುಟುಂಬದ ಈ ವಿದೇಶ ಪ್ರವಾಸವು ಅವರ ಸಂಬಂಧದ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದೆ.

ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ

ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಸಂಭಾವನೆ ಕಡಿಮೆ ಇತ್ತಂತೆ. ಆದರೆ, ನಂತರ ಅವರು ಅದ್ಭುತವಾಗಿ ಆಟ ಆಡಿದರು. ಆ ಬಳಿಕ ಅವರ ಸಂಭಾವನೆ ಜಾಸ್ತಿ ಆಯಿತು ಎಂದರೆ ನೀವು ನಂಬಲೇಬೇಕು. ಈ ಬಗ್ಗೆ ಅವರು ಟಿವಿ9 ಕನ್ನಡ ಜೊತೆಗೆ ಮಾತನಾಡಿದ್ದಾರೆ ಎಂಬುದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.

‘ದುಡ್ಡು ದೋಚಿಕೊಳ್ಳಬಾರದು’; ಸಿನಿಮಾ ಟಿಕೆಟ್ ದರದ ಬಗ್ಗೆ ಶಿವಣ್ಣ ಮಾತು

‘ದುಡ್ಡು ದೋಚಿಕೊಳ್ಳಬಾರದು’; ಸಿನಿಮಾ ಟಿಕೆಟ್ ದರದ ಬಗ್ಗೆ ಶಿವಣ್ಣ ಮಾತು

ಒಟಿಟಿ ಹೆಚ್ಚಳದಿಂದ ಸಿನಿಮಾ ಟಿಕೆಟ್ ದರ ದುಬಾರಿಯಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ದಿನಗಳು ಕಡಿಮೆಯಾಗುತ್ತಿದೆ ಎಂದು ಶಿವರಾಜ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾ ಟಿಕೆಟ್‌ಗಳು ಎಲ್ಲರಿಗೂ ಕೈಗೆಟುಕುವಂತಿರಬೇಕು, ಹಾಗೆಯೇ ನೂರು ದಿನಗಳ ಕಾಲ ಪ್ರದರ್ಶನ ಕಾಣಬೇಕು. ಹಣ ದೋಚುವ ಬದಲು, ಸಿನಿಮಾ ಜನರಿಗೆ ತಲುಪಬೇಕು ಎಂಬ ಅವರ ಮಾತುಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ

ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ

ಬಿಗ್ ಬಾಸ್​​ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇದೆ. ಈ ಬಾರಿ ಅವರು ಗಿಲ್ಲಿ ನಟ ಅವರು ಗೆಲ್ಲಬಹುದು ಎಂಬ ಅಭಿಪ್ರಾಯ ಅನೇಕರದ್ದು. ಈಗ ಚೈತ್ರಾ ಅವರು ಒಂದು ಶಾಕಿಂಗ್ ವಿಚಾರ ಹೇಳಿದರು. ಅವರ ಪ್ರಕಾರ ಬಿಗ್ ಬಾಸ್​ಬನ ಗೆಲ್ಲೋದು ಯಾರು ಎಂಬುದನ್ನು ರಿವೀಲ್ ಮಾಡಿದರು. ಆ ಬಗ್ಗೆ ಇಲ್ಲಿದೆ ವಿವರ.

ಪೈರಸಿಯಲ್ಲೂ ದಾಖಲೆ ಬರೆದ ‘ಡೆವಿಲ್’; 10 ಸಾವಿರ ಲಿಂಕ್ ಡಿಲೀಟ್

ಪೈರಸಿಯಲ್ಲೂ ದಾಖಲೆ ಬರೆದ ‘ಡೆವಿಲ್’; 10 ಸಾವಿರ ಲಿಂಕ್ ಡಿಲೀಟ್

'ಡೆವಿಲ್' ಕನ್ನಡ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಭಾರಿ ಪೈರಸಿ ಕಾಟಕ್ಕೆ ಸಿಲುಕಿದೆ. ಚಿತ್ರತಂಡ ಇದುವರೆಗೆ 10,000ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿಸಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡುವಂತೆ ಮನವಿ ಮಾಡಿದೆ. ವಿಶ್ವದಲ್ಲೇ ಒಂದು ಚಿತ್ರಕ್ಕೆ ಇಷ್ಟು ದೊಡ್ಡ ಪ್ರಮಾಣದ ಪೈರಸಿ ನಡೆದಿರುವುದು ಇದೇ ಮೊದಲು ಎಂದು ತಂಡ ಹೇಳಿದೆ. ಈ ವೈರಸ್‌ನಿಂದ ಚಿತ್ರೋದ್ಯಮಕ್ಕೆ ಭಾರಿ ನಷ್ಟವಾಗುತ್ತಿದೆ.

ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ

ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ

ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ‘ಮಾರ್ಕ್’ ಸಿನಿಮಾ ಪ್ರಚಾರ ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾಗಾಗಿ ಸಾಕಷ್ಟು ಅಭಿಮಾನಿಗಳು ನೆರೆದಿದ್ದರು ಮತ್ತು ಈ ವಿಡಿಯೋನ ಸೋಶಿಯಲ್ ಮೀಡಿಯಾ ಮೂಲಕ ವೈರಲ್ ಆಗುತ್ತಾ ಇದೆ. ಸುದೀಪ್ ಅವರು ಹುಬ್ಬಳ್ಳಿ ಮಂದಿಗೆ ಧನ್ಯವಾದ ಹೇಳುವ ಕೆಲಸ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ರಾಧಿಕಾನ ಮೊದಲ ಬಾರಿಗೆ ಮನೆಗೆ ಕರೆತಂದಾಗ ಯಶ್​ಗೆ ಷರತ್ತು ಹಾಕಿದ್ದ ತಾಯಿ ಪುಷ್ಪಾ

ರಾಧಿಕಾನ ಮೊದಲ ಬಾರಿಗೆ ಮನೆಗೆ ಕರೆತಂದಾಗ ಯಶ್​ಗೆ ಷರತ್ತು ಹಾಕಿದ್ದ ತಾಯಿ ಪುಷ್ಪಾ

ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಅನೇಕರಿಗೆ ಮಾದರಿ. 9 ವರ್ಷಗಳ ದಾಂಪತ್ಯದ ನಂತರವೂ ಇವರ ಪ್ರೇಮಕಥೆ ಕುತೂಹಲಕಾರಿ. ಕಿರುತೆರೆಯಿಂದ ಬೆಳೆದ ಇವರ ಪ್ರೀತಿ, ವರಮಹಾಲಕ್ಷ್ಮಿ ಹಬ್ಬದಂದು ಯಶ್ ತಮ್ಮ ತಾಯಿಗೆ ರಾಧಿಕಾರನ್ನು ಪರಿಚಯಿಸಿದ ರೀತಿ, ಮತ್ತು ಯಶ್ ತಾಯಿ ಪುಷ್ಪಾ ಅವರ ಷರತ್ತಿನ ಮೂಲಕ ರಾಧಿಕಾರನ್ನು ಸೊಸೆಯಾಗಿ ಒಪ್ಪಿಕೊಂಡ ಕಥೆಯನ್ನು ಯಶ್ ಹಂಚಿಕೊಂಡಿದ್ದಾರೆ.

ಉಪೇಂದ್ರ ವೀಕ್​​ನೆಸ್ ಏನು ಎಂದು ಕಂಡು ಹಿಡಿದುಕೊಂಡ ರಾಜ್: ನಿಮ್ಗೂ ಅಚ್ಚರಿ ಆಗುತ್ತೆ

ಉಪೇಂದ್ರ ವೀಕ್​​ನೆಸ್ ಏನು ಎಂದು ಕಂಡು ಹಿಡಿದುಕೊಂಡ ರಾಜ್: ನಿಮ್ಗೂ ಅಚ್ಚರಿ ಆಗುತ್ತೆ

45 movie scene: ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ. ಟಿವಿ9 ಜೊತೆಗೆ ಮಾತನಾಡಿರುವ ರಾಜ್ ಬಿ ಶೆಟ್ಟಿ, ತಾವು ಉಪೇಂದ್ರ ಅವರ ವೀಕ್​​ನೆಸ್ ಅನ್ನು ಕಂಡು ಹಿಡಿದಿರುವುದಾಗಿ ಹೇಳಿಕೊಂಡಿದ್ದಾರೆ. ಏನದು?

ಚೈತ್ರಾ ಪತಿಯಿಂದಲೂ ಕಿರುಕುಳ ಉಂಟಾಗಿದೆ; ತಂದೆಯ ಆರೋಪ

ಚೈತ್ರಾ ಪತಿಯಿಂದಲೂ ಕಿರುಕುಳ ಉಂಟಾಗಿದೆ; ತಂದೆಯ ಆರೋಪ

ಚೈತ್ರಾ ಕುಂದಾಪುರ ಸದ್ಯ ಸುದ್ದಿಯಲ್ಲಿ ಇದ್ದಾರೆ. ಅವರ ತಂದೆ ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ. ತಮಗೆ ರಕ್ಷಣೆ ಬೇಕು ಎಂದು ಕೋರ್ಟ್ ಹೋಗಿದ್ದರು. ಕೋರ್ಟ್ ಅವರ ಪರವಾಗಿ ತೀರ್ಪು ನೀಡಿದೆ ಈ ಬಗ್ಗೆ ಅವರು ಮಾತನಾಡಿದ್ದು, ನನಗೆ ಚೈತ್ರಾ ಪತಿಯಿಂದಲೂ ಕಿರುಕುಳ ಆಗಿದೆ ಎಂದು ಹೇಳಿದ್ದನ್ನು ವಿಡಿಯೋದಲ್ಲಿ ಕಾಣಬಹುದು.

‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನವೇ ಹಾಡು ಸೋರಿಕೆ?

‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನವೇ ಹಾಡು ಸೋರಿಕೆ?

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ರೊಮ್ಯಾಂಟಿಕ್ ಹಾಡು ಗಮನ ಸೆಳೆದಿದೆ. ಇವರು ಡ್ಯಾನ್ಸ್ ಮಾಡುತ್ತಿದ್ದು ಹಿನ್ನೆಲೆಯಲ್ಲಿ ಒಂದು ಹಾಡು ಪ್ಲೇ ಆಗುತ್ತಿದೆ. ಇಬ್ಬರ ನಡುವಿನ ಚುಂಬನ ದೃಶ್ಯವೂ ವೀಡಿಯೊದಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಸೋರಿಕೆಯಾದ ಈ ವೀಡಿಯೊ ನಿಜವಾಗಿಯೂ 'ಕಿಂಗ್' ಚಿತ್ರದ್ದೇ ಎಂದು ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ.

ಧರ್ಮೇಂದ್ರ ಕುಟುಂಬ ಹೇಮಾ ಮಾಲಿನಿಯನ್ನು ಒಂಟಿ ಮಾಡಿದೆ; ಕೇಳಿ ಬಂತು ಆರೋಪ

ಧರ್ಮೇಂದ್ರ ಕುಟುಂಬ ಹೇಮಾ ಮಾಲಿನಿಯನ್ನು ಒಂಟಿ ಮಾಡಿದೆ; ಕೇಳಿ ಬಂತು ಆರೋಪ

ಧರ್ಮೇಂದ್ರ ಅವರ ನಿಧನದ ನಂತರ, ಹೇಮಾ ಮಾಲಿನಿಯನ್ನು ಕುಟುಂಬದ ಸಂತಾಪ ಸಭೆಯಿಂದ ದೂರವಿಡಲಾಯಿತು. 45 ವರ್ಷಗಳ ಒಡನಾಟವಿದ್ದರೂ, ಅವರ ಅನುಪಸ್ಥಿತಿಯು ಡಿಯೋಲ್ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ಬರಹಗಾರ್ತಿ ಶೋಭಾ ಡೇ ಡಿಯೋಲ್ ಕುಟುಂಬದ ನಿರ್ಧಾರವನ್ನು ಪ್ರಶ್ನಿಸಿ, ಹೇಮಾ ಮಾಲಿನಿಯ ಮೌನ ಮತ್ತು ಘನತೆಯನ್ನು ಶ್ಲಾಘಿಸಿದ್ದಾರೆ. ಈ ಘಟನೆ ಬಾಲಿವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಎರಡನೇ ಚಳಿಗಾಲದ ಅನುಭವ ಕೇಳಿದ ಭಟ್ರು; ನಾಚಿ ನೀರಾದ ಸೋನಲ್

ಎರಡನೇ ಚಳಿಗಾಲದ ಅನುಭವ ಕೇಳಿದ ಭಟ್ರು; ನಾಚಿ ನೀರಾದ ಸೋನಲ್

ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ಅವರು ಮದುವೆ ಆಗಿ ವರ್ಷವೇ ಕಳೆದಿದೆ. ಇತ್ತೀಚೆಗೆ ಅವರು ಸುತ್ತಾಟ ನಡೆಸಿ ಹಾಯಾಗಿದ್ದರು. ಈಗ ಸೋನಲ್ ಅವರಿಗೆ ಯೋಗರಾಜ್ ಭಟ್ ಒಂದು ಅಚ್ಚರಿಯ ಪ್ರಶ್ನೆ ಕೇಳಿದ್ದಾರೆ. ಅವರು ತಮ್ಮ ಎರಡನೇ ಚಳಿಗಾಲದ ಅನುಭವ ಹೇಳಿ ಎಂದಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.