ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.
‘ಬಾಹುಬಲಿ 2’ ಬರೆದ ದಾಖಲೆ ಮುರಿದ ‘ಧುರಂಧರ್ 2’
'ಧುರಂಧರ್: ದಿ ರಿವೆಂಜ್' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅಚ್ಚರಿಯ ದಾಖಲೆಗಳನ್ನು ಸೃಷ್ಟಿಸಿದೆ. ಪ್ರಭಾಸ್ ಅವರ 'ಬಾಹುಬಲಿ 2' ಚಿತ್ರ 9 ವರ್ಷಗಳಿಂದ ಉತ್ತರ ಅಮೆರಿಕಾದಲ್ಲಿ ಹೊಂದಿದ್ದ ದಾಖಲೆಯನ್ನು 'ಧುರಂಧರ್ 2' ಮುರಿದಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರ $22 ಮಿಲಿಯನ್ ಗಳಿಸಿ ಹೊಸ ಇತಿಹಾಸ ಬರೆದಿದೆ. ಬಾಹುಬಲಿ 2 ನಿರ್ಮಾಪಕರು ಕೂಡ ಧುರಂಧರ್ 2 ತಂಡವನ್ನು ಅಭಿನಂದಿಸಿದ್ದಾರೆ.
- Shreelaxmi H
- Updated on: Mar 31, 2026
- 8:10 am
ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜ್ಕುಮಾರ್ ಇಳಿಸಲು ನಡೆದಿತ್ತು ಪ್ಲ್ಯಾನ್
ಡಾ. ರಾಜ್ಕುಮಾರ್ ಅವರು ರಾಜಕೀಯದಿಂದ ದೂರ ಉಳಿದಿದ್ದರು. ಇಂದಿರಾಗಾಂಧಿ ವಿರುದ್ಧ ಸ್ಪರ್ಧಿಸುವ ಪ್ರಸ್ತಾಪ ಬಂದಾಗಲೂ ಅವರು ಅದನ್ನು ನಿರಾಕರಿಸಿದರು. ಚಿತ್ರರಂಗಕ್ಕೆ ಮಾತ್ರ ಮೀಸಲಾಗಿದ್ದ ಅಣ್ಣಾವ್ರು, ರಾಜಕೀಯದಲ್ಲಿ ಯಾವುದೇ ಆಸಕ್ತಿ ತೋರಿಸಲಿಲ್ಲ. ಅವರ ಈ ನಿರ್ಧಾರ ಅವರ ಮೌಲ್ಯಗಳು ಮತ್ತು ಚಿತ್ರರಂಗದ ಮೇಲಿನ ಬದ್ಧತೆಗೆ ಸಾಕ್ಷಿ.
- Shreelaxmi H
- Updated on: Mar 31, 2026
- 7:53 am
‘ಧುರಂಧರ್ 2’ ನೋಡಿದ ಬಳಿಕ ನಿರ್ದೇಶಕ ಆದಿತ್ಯ ಧಾರ್ ಎಚ್ಚರಿಸಿದ ವಿವೇಕ್ ಅಗ್ನಿಹೋತ್ರಿ
'ಧುರಂದರ್ 2' ಸಿನಿಮಾ ಕೇವಲ 11 ದಿನಗಳಲ್ಲಿ 1000 ಕೋಟಿ ರೂಪಾಯಿ ಗಳಿಸಿ ಭರ್ಜರಿ ದಾಖಲೆ ಬರೆದಿದೆ. ಈ ಅಸಾಧಾರಣ ಯಶಸ್ಸಿಗೆ 'ದಿ ಕಾಶ್ಮೀರಿ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೆಚ್ಚುಗೆ ಸೂಚಿಸಿದ್ದಾರೆ. ವಿಶೇಷವಾಗಿ ಚಿತ್ರದ ಛಾಯಾಗ್ರಹಣ ಮತ್ತು ನಿರ್ಮಾಣ ವಿನ್ಯಾಸವನ್ನು ಕೊಂಡಾಡಿರುವ ಅವರು, ನಿರ್ದೇಶಕ ಆದಿತ್ಯ ಧಾರ್ಗೆ ಎಚ್ಚರಿಕೆಯಿಂದ ಇರುವಂತೆ ಅನುಭವದ ಮಾತನ್ನು ಹೇಳಿದ್ದಾರೆ.
- Shreelaxmi H
- Updated on: Mar 30, 2026
- 12:26 pm
‘ಧುರಂಧರ್ 2’ ನಿರ್ದೇಶಕ ಆದಿತ್ಯ ಧಾರ್ ಹಾಗೂ ಪತ್ನಿ ಯಾಮಿ ಪೈಕಿ ಯಾರು ಹೆಚ್ಚು ಶ್ರೀಮಂತರು?
ಆದಿತ್ಯ ಧಾರ್ ಮತ್ತು ಯಾಮಿ ಗೌತಮ್, ಬಾಲಿವುಡ್ನ 'ಪವರ್ ಕಪಲ್', ಅವರ ಸಂಪತ್ತು 100-125 ಕೋಟಿ ರೂ. 'ಧುರಂಧರ್' ಸರಣಿಯ ಭಾರಿ ಯಶಸ್ಸು ನಿರ್ದೇಶಕ ಆದಿತ್ಯ ಧಾರ್ ಜನಪ್ರಿಯತೆಯನ್ನು ಹೆಚ್ಚಿಸಿದೆ. ಯಾಮಿ ಗೌತಮ್ ಹೆಚ್ಚು ಸಂಪಾದನೆ ಮಾಡಿದ್ದು, ಜಾಹೀರಾತು ಮತ್ತು ನಟನೆಯ ಮೂಲಕ ಗಳಿಸುತ್ತಾರೆ. ಆದಿತ್ಯ ಪ್ರತಿ ಚಿತ್ರಕ್ಕೆ 8-10 ಕೋಟಿ ರೂ. ಪಡೆಯುತ್ತಾರೆ.
- Shreelaxmi H
- Updated on: Mar 30, 2026
- 7:59 am
ಅಮೃತಧಾರೆ: ಹೆಣ್ಣಿನ ಕಣ್ಣೀರು ಯುದ್ಧದ ಆರಂಭ; ಜೆಡಿಗೆ ಮಲ್ಲಿಯ ಎಚ್ಚರಿಕೆ
ಜೀ ಕನ್ನಡದ 'ಅಮೃತಧಾರೆ' ಧಾರಾವಾಹಿಯಲ್ಲಿ ಮಲ್ಲಿ ಮದುವೆ ದೊಡ್ಡ ತಿರುವು ಪಡೆದಿದೆ. ಜೆಡಿ ಮದುವೆ ಮುರಿಯಲು ಮಾಡಿದ ಪ್ಲಾನ್ ವಿಫಲವಾಗಿದ್ದು, ಗೌತಮ್ ಮತ್ತು ಭೂಮಿಕಾ ಪ್ರಯತ್ನದಿಂದ ಮಲ್ಲಿ ಮದುವೆಯಾಗಿದ್ದಾಳೆ. ಪ್ರೋಮೋದಲ್ಲಿ ಮಲ್ಲಿ ಕುತ್ತಿಗೆಯಲ್ಲಿ ತಾಳಿ ಕಾಣಿಸಿ ಮದುವೆ ಖಚಿತಪಡಿಸಿದೆ. ಜೆಡಿಗೆ ಮಲ್ಲಿ ಎಚ್ಚರಿಕೆ ನೀಡಿದ್ದು, ಇದು ಧಾರಾವಾಹಿಯಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.
- Shreelaxmi H
- Updated on: Mar 30, 2026
- 7:43 am
ರಿಲೀಸ್ ಆಗಿ ಕೆಲವೇ ವಾರಕ್ಕೆ ಒಟಿಟಿಗೆ ಬರ್ತಿದೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ
ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 65 ಕೋಟಿ ರೂ. ಗಳಿಸಿ, 100 ಕೋಟಿ ತಲುಪಲು ಹೆಣಗಾಡುತ್ತಿದೆ. 'ಧುರಂಧರ್ 2' ಸ್ಪರ್ಧೆ ಮತ್ತು ದುರ್ಬಲ ಕಥೆ ಇದಕ್ಕೆ ಕಾರಣ. ನಿರೀಕ್ಷೆಗೂ ಮೊದಲೇ ಏಪ್ರಿಲ್ 16 ರಂದು ನೆಟ್ಫ್ಲಿಕ್ಸ್ನಲ್ಲಿ ಒಟಿಟಿ ಬಿಡುಗಡೆಗೆ ಸಿದ್ಧವಾಗಿದೆ. ಡಿಜಿಟಲ್ ಹಕ್ಕುಗಳನ್ನು ಭಾರೀ ಬೆಲೆಗೆ ನೆಟ್ಫ್ಲಿಕ್ಸ್ ಖರೀದಿಸಿತ್ತು.
- Shreelaxmi H
- Updated on: Mar 28, 2026
- 11:05 am
ಮೊನಾಲಿಸಾ ಭೋಸ್ಲೆಗೆ ಸಂಕಷ್ಟ; ವೈರಲ್ ಸುಂದರಿ ಮೇಲೆ ಮಾನನಷ್ಟ ಮೊಕದ್ದಮೆ
ನಟಿ ಮೊನಾಲಿಸಾ ಭೋಸ್ಲೆ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಇದನ್ನು ಸನೋಜ್ ಮಿಶ್ರಾ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಮೊನಾಲಿಸಾ ಅವರ ಮದುವೆಯ ಅಮಾನ್ಯತೆಯನ್ನು ತಾನು ಪ್ರಶ್ನಿಸಿದ್ದರಿಂದ ಈ ಆರೋಪಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಸನೋಜ್ ಮಿಶ್ರಾ ಮೊನಾಲಿಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧರಾಗಿದ್ದಾರೆ.
- Shreelaxmi H
- Updated on: Mar 28, 2026
- 8:06 am
ಫೋಟೋ ತೆಗ್ದಿಲ್ಲ ಅಂದ್ರೇನೆ ಸಮಸ್ಯೆ; ಅಕ್ಷಯ್ ಕುಮಾರ್ ನೇರ ಮಾತು
ಬಾಲಿವುಡ್ ನಟ ಅಕ್ಷಯ್ ಕುಮಾರ್ ಪಾಪರಾಜಿ ಸಂಸ್ಕೃತಿಯ ಬಗ್ಗೆ ಅಚ್ಚರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಫೋಟೋ ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರೆ, ಅಕ್ಷಯ್ "ಫೋಟೋ ತೆಗೆದಿಲ್ಲ ಅಂದ್ರೇನೆ ಸಮಸ್ಯೆ" ಎನ್ನುತ್ತಾರೆ. ಇದರಿಂದ ಪಾಪರಾಜಿಗಳಿಗೆ ಆದಾಯ ಸಿಗುತ್ತದೆ ಮತ್ತು ತನ್ನ ಬೇಡಿಕೆ ಕಡಿಮೆಯಾಗಿಲ್ಲ ಎಂದು ಸೂಚಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.
- Shreelaxmi H
- Updated on: Mar 28, 2026
- 7:51 am
ಹಣೆಯಲ್ಲಿ ಬರೆದಿದ್ರೆ ಸಿಗ್ತಾಳೆ; ಕಾವ್ಯಾ, ಕಾವ್ಯಾ ಎಂದಿದ್ದಕ್ಕೆ ಗಿಲ್ಲಿ ಉತ್ತರ
ಕಾವ್ಯಾ ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ಬಾಂಧವ್ಯ ಬೆಳೆದಿದ್ದು ಬಿಗ್ ಬಾಸ್ ಅಲ್ಲಿ. ಈ ಬಗ್ಗೆ ಕಾವ್ಯಾ ಅವರು ಓಪನ್ ಆಗಿ ಮಾತನಾಡಿಲ್ಲ. ಗಿಲ್ಲಿ ನಟ ಕೌಡ ಮೌನ ವಹಿಸಿದ್ದಾರೆ. ಈಗ ಕಾವ್ಯಾ ಕಾವ್ಯಾ ಎಂದು ಗಿಲ್ಲಿ ನಟ ಅವರ ಬಳಿ ಕೂಗಲಾಗಿದೆ. ಇದಕ್ಕೆ ಕಾರಣವೂ ಇದೆ. ಆ ಸಂದರ್ಭದ ವಿಡಿಯೋ ನೀವೆ ನೋಡಿ.
- Shreelaxmi H
- Updated on: Mar 27, 2026
- 11:11 am
ರಾಮ್ ಚರಣ್ ವರ್ಷದ ಆದಾಯದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು
ರಾಮ್ ಚರಣ್ ಅವರ ಜನ್ಮದಿನದ ವಿಶೇಷವಾಗಿ ಅವರ ಆದಾಯ ಮತ್ತು ಐಷಾರಾಮಿ ಜೀವನ ಶೈಲಿಯ ಬಗ್ಗೆ ಮಾಹಿತಿ. ಅವರ ಮಾಸಿಕ ಗಳಿಕೆ 3 ಕೋಟಿ ರೂಪಾಯಿ, ಒಟ್ಟು ಆಸ್ತಿ 1400 ಕೋಟಿ ರೂಪಾಯಿ. ‘ಆರ್ಆರ್ಆರ್’ ಚಿತ್ರಕ್ಕಾಗಿ 45 ಕೋಟಿ ಚಾರ್ಜ್ ಮಾಡಿದ್ದ ರಾಮ್ ಚರಣ್, 34ಕ್ಕೂ ಹೆಚ್ಚು ಬ್ರ್ಯಾಂಡ್ಗಳ ರಾಯಭಾರಿ.
- Shreelaxmi H
- Updated on: Mar 27, 2026
- 8:05 am
ರಾಮ್ ಚರಣ್ ಒಟ್ಟೂ ಆಸ್ತಿ ಎಷ್ಟು? ಗಳಿಕೆ ಹೇಗೆಲ್ಲ ಆಗುತ್ತೆ?
Ram Charan Birthday: ನಟ ರಾಮ್ ಚರಣ್ ಜನ್ಮದಿನದಂದು, ಅವರ ಯಶಸ್ವಿ ವೃತ್ತಿಜೀವನ ಮತ್ತು 1,400 ಕೋಟಿ ರೂ.ಗಳ ಬೃಹತ್ ಆಸ್ತಿಯನ್ನು ಪರಿಶೀಲಿಸಲಾಗುತ್ತಿದೆ. ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ಮಾಣ ಸಂಸ್ಥೆ, ಪೋಲೋ ಕ್ಲಬ್ ಮತ್ತು ಅಪೊಲೋ ಆಸ್ಪತ್ರೆಗಳಲ್ಲಿ ಹೂಡಿಕೆಯ ಮೂಲಕ ರಾಮ್ ಚರಣ್ ಯಶಸ್ವಿ ಉದ್ಯಮಿಯಾಗಿದ್ದಾರೆ. ಅವರ ಸಿನಿಮಾ ಪಯಣ, ಯಶಸ್ವಿ ಚಿತ್ರಗಳು ಮತ್ತು ಉದ್ಯಮಶೀಲತೆಯ ಕುರಿತು ಇಲ್ಲಿ ವಿವರವಿದೆ.
- Shreelaxmi H
- Updated on: Mar 27, 2026
- 7:48 am
ಜೀವನದಲ್ಲಿ ಬ್ಯಾಡ್ಲಕ್ ತುಂಬಿದ ನಟಿಗೆ ಚಾನ್ಸ್ ಕೊಟ್ಟ ಅನಿಲ್ ರವಿಪುಡಿ
ಬ್ಲಾಕ್ಬಸ್ಟರ್ ನಿರ್ದೇಶಕ ಅನಿಲ್ ರವಿಪುಡಿ ಮತ್ತೊಂದು ಮಲ್ಟಿ-ಸ್ಟಾರರ್ ಚಿತ್ರಕ್ಕೆ ಸಿದ್ಧರಾಗಿದ್ದಾರೆ. ವೆಂಕಟೇಶ್ ಮತ್ತು ಕಲ್ಯಾಣ್ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಕೀರ್ತಿ ಸುರೇಶ್ ವೆಂಕಟೇಶ್ ಜೊತೆ ನಾಯಕಿಯಾಗಿ ನಟಿಸುವುದು ಬಹುತೇಕ ಖಚಿತ. ಸರಣಿ ಫ್ಲಾಪ್ಗಳ ನಂತರ ಯುವ ನಟಿ ಕೃತಿ ಶೆಟ್ಟಿ ಕಲ್ಯಾಣ್ ರಾಮ್ಗೆ ಜೋಡಿಯಾಗಲಿದ್ದಾರೆ. ಅನಿಲ್ ರವಿಪುಡಿಯವರ ಯಶಸ್ವಿ ಟ್ರ್ಯಾಕ್ ರೆಕಾರ್ಡ್ನೊಂದಿಗೆ, ಕೃತಿ ಶೆಟ್ಟಿ ಕಮ್ಬ್ಯಾಕ್ ನಿರೀಕ್ಷಿಸಲಾಗಿದೆ.
- Shreelaxmi H
- Updated on: Mar 26, 2026
- 11:10 am