ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.
ಅರಿಜಿತ್ ಚಿತ್ರರಂಗ ತೊರೆಯಲು ಸಲ್ಮಾನ್ ಖಾನ್ ಕಾರಣ?
ಗಾಯಕ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿ, ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದ್ದಾರೆ. ಅವರು ಸಿನಿಮಾಗಳಲ್ಲಿ ಹಾಡುವುದನ್ನು ನಿಲ್ಲಿಸಿದ್ದರೂ, ಸಂಗೀತ ಕೆಲಸ ಮುಂದುವರಿಸಲಿದ್ದಾರೆ. ಈ ನಿರ್ಧಾರಕ್ಕೆ ಸಲ್ಮಾನ್ ಖಾನ್ ಅವರೊಂದಿಗಿನ ಹಳೆಯ ವಿವಾದವೇ ಕಾರಣವೆಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬರುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ 'ಮಾತೃಭೂಮಿ' ಹಾಡು ಅವರ ಕೊನೆಯ ಬಾಲಿವುಡ್ ಹಾಡಾಗಿರಬಹುದು ಎಂದು ಊಹಿಸಲಾಗಿದೆ.
- Shreelaxmi H
- Updated on: Jan 29, 2026
- 12:00 pm
ಪತಿಯ ಆ ಕೆಟ್ಟ ಅಭ್ಯಾಸದ ಬಗ್ಗೆ ಜ್ಯೋತಿಕಾಗೆ ಇದೆ ಸಿಟ್ಟು
ಸೂರ್ಯ ಮತ್ತು ಜ್ಯೋತಿಕಾ ದಂಪತಿಯ 20 ವರ್ಷಗಳ ಯಶಸ್ವಿ ದಾಂಪತ್ಯ, ವಿಚ್ಛೇದನದ ವದಂತಿಗಳನ್ನು ಮೀರಿ ಬೆಳೆದಿದೆ. ಈಗ ಜ್ಯೋತಿಕಾ ತಮ್ಮ ಪತಿ ಸೂರ್ಯನ ಒಂದು ಅಭ್ಯಾಸದ ಬಗ್ಗೆ ನೀಡಿದ ದೂರು ವೈರಲ್ ಆಗಿದೆ. ಅವರ ಕುಟುಂಬ ಜೀವನ, ಪರಸ್ಪರ ಪ್ರೀತಿ-ಗೌರವಗಳ ಜೊತೆ ಈ ತಮಾಷೆಯ ಜಗಳ ಸಂಬಂಧಗಳ ಸಾರವನ್ನು ತಿಳಿಸುತ್ತದೆ.
- Shreelaxmi H
- Updated on: Jan 29, 2026
- 8:17 am
ಶ್ರುತಿ ಹಾಸನ್ ಸಿಗರೇಟ್ ಹೊಡೆಯುತ್ತಿರುವ ಫೋಟೋ ವೈರಲ್
ಸರಣಿ ಬ್ಲಾಕ್ಬಸ್ಟರ್ಗಳ ಮೂಲಕ ಗಮನ ಸೆಳೆದ ಶ್ರುತಿ ಹಾಸನ್, 'ಆಕಾಶಮ್ಲೋ ಓಕಾ ತಾರಾ' ಚಿತ್ರದ ತಮ್ಮ ವೈರಲ್ ಸಿಗರೇಟ್ ಧಮ್ ಹೊಡೆಯುವ ಫೋಟೋದ ಕುರಿತು ಸುದ್ದಿಯಲ್ಲಿದ್ದಾರೆ. ಇದು ಅವರ ಸಿನಿಮಾದ ಪಾತ್ರಕ್ಕಾಗಿ ಹೊರತು ಸಾರ್ವಜನಿಕವಾಗಿ ಸಿಗರೇಟ್ ಸೇದಿದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದುಲ್ಕರ್ ಸಲ್ಮಾನ್ ಜೊತೆ ನಟಿಸುತ್ತಿರುವ ಈ ಪ್ಯಾನ್-ಇಂಡಿಯಾ ಚಿತ್ರ 2026ರಲ್ಲಿ ತೆರೆಗೆ ಬರಲಿದೆ.
- Shreelaxmi H
- Updated on: Jan 29, 2026
- 8:03 am
ಮೆಟ್ರೋದಲ್ಲಿ ಸ್ಟಂಟ್ ಮಾಡಿದ ವರುಣ್ ಧವನ್ಗೆ ದಂಡ
ವರುಣ್ ಧವನ್ ಮುಂಬೈ ಮೆಟ್ರೋದಲ್ಲಿ ಮಾಡಿದ ಸ್ಟಂಟ್ ವಿವಾದಕ್ಕೆ ಕಾರಣವಾಗಿದೆ. ಮೆಟ್ರೋ ಹ್ಯಾಂಡಲ್ಗಳಿಗೆ ನೇತಾಡುವ ಮೂಲಕ ಮಾಡಿದ ವಿಡಿಯೋ ವೈರಲ್ ಆಗಿದ್ದು, ಮುಂಬೈ ಮೆಟ್ರೋ ಆಡಳಿತದಿಂದ ಎಚ್ಚರಿಕೆ ಹಾಗೂ 500 ರೂ. ದಂಡ ವಿಧಿಸಲಾಗಿದೆ. ಇದು ಮೆಟ್ರೋ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದ್ದು, ಇತರ ಪ್ರಯಾಣಿಕರಿಗೂ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- Shreelaxmi H
- Updated on: Jan 28, 2026
- 10:36 am
ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಮಾಡಿಕೊಂಡ ಆಸ್ತಿ ಎಷ್ಟು?
ಖ್ಯಾತ ಗಾಯಕ ಅರಿಜಿತ್ ಸಿಂಗ್ 38ನೇ ವಯಸ್ಸಿಗೆ ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಧಾರ ಅವರ ಲಕ್ಷಾಂತರ ಅಭಿಮಾನಿಗಳಿಗೆ ದುಃಖ ತಂದಿದೆ. ಕೋಟ್ಯಾಂತರ ಆಸ್ತಿ, ಪ್ರತಿ ಹಾಡಿಗೆ ಲಕ್ಷಗಳಲ್ಲಿ ಶುಲ್ಕ ಪಡೆಯುತ್ತಿದ್ದ ಅರಿಜಿತ್, ಇನ್ನುಮುಂದೆ ಲೈವ್ ಕಾನ್ಸರ್ಟ್ಗಳಲ್ಲಿ ಮಾತ್ರ ಹಾಡಲಿದ್ದಾರೆ. ಅವರ ವೃತ್ತಿಜೀವನ, ಸಂಪತ್ತು, ಮತ್ತು ಮುಂದಿನ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ.
- Shreelaxmi H
- Updated on: Jan 28, 2026
- 8:12 am
38ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್ರ ಮುಂದಿನ ಯೋಜನೆ ಏನು?
ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ನಿರ್ಧಾರ ತಿಳಿಸಿದ್ದು, ಇನ್ನು ಮುಂದೆ ಚಲನಚಿತ್ರಗಳಿಗೆ ಹಾಡುವುದಿಲ್ಲ ಎಂದಿದ್ದಾರೆ. ಆದರೆ, ಅವರು ಸಂಗೀತ ಕ್ಷೇತ್ರದಲ್ಲೇ ಮುಂದುವರಿಯಲಿದ್ದು, ಸಂಗೀತ ಅಧ್ಯಯನ ಮತ್ತು ಸಂಗೀತ ಕಚೇರಿಗಳ ಮೇಲೆ ಗಮನಹರಿಸಲಿದ್ದಾರೆ.
- Shreelaxmi H
- Updated on: Jan 28, 2026
- 9:29 am
ಹೃತಿಕ್ ರೋಷನ್ಗೆ ವಿಚಿತ್ರ ರೋಗ; ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸುತ್ತವೆ ಕಾಲುಗಳು
Hrithik Roshan Health: ನಟ ಹೃತಿಕ್ ರೋಷನ್ಗೆ ಹುಟ್ಟಿನಿಂದಲೇ ಒಂದು ವಿಶಿತ್ರ ಆರೋಗ್ಯ ಸಮಸ್ಯೆ ಇದೆ. ಅವರ ದೇಹದ ಕೆಲವು ಭಾಗಗಳು, ವಿಶೇಷವಾಗಿ ಕಾಲುಗಳು ಮತ್ತು ಭುಜಗಳು ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸುತ್ತವೆ, ಅಂದರೆ 'ಆಫ್' ಆಗುತ್ತವೆ. ಈ ಸನ್ನಿವೇಶದಿಂದ ಅವರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ.
- Shreelaxmi H
- Updated on: Jan 27, 2026
- 11:34 am
ಕಮಲ್-ರಜನಿ ಚಿತ್ರದಿಂದ ಲೋಕೇಶ್ ಹೊರ ಹೋಗಿದ್ದೇಕೆ?
ಲೋಕೇಶ್ ಕನಕರಾಜ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಚಿತ್ರದಿಂದ ಹೊರನಡೆದ ಕಾರಣ ಬಹಿರಂಗವಾಗಿದೆ. ಕಮಲ್ ನಿರ್ಮಾಣದ ಈ ಚಿತ್ರವನ್ನು ನಿರ್ದೇಶಿಸಲು ಲೋಕೇಶ್ ಒಪ್ಪಿಕೊಂಡಿದ್ದರು. ಆದರೆ, ಲೋಕೇಶ್ ಆಕ್ಷನ್ ಚಿತ್ರ ಮಾಡಲು ಬಯಸಿದರೆ, ರಜನಿ-ಕಮಲ್ ಜೋಡಿ ಹಾಸ್ಯ ಅಥವಾ ಮನರಂಜನಾತ್ಮಕ ಚಿತ್ರಕ್ಕೆ ಒಲವು ತೋರಿದರು.
- Shreelaxmi H
- Updated on: Jan 27, 2026
- 8:08 am
ಜೀ ಕನ್ನಡದಲ್ಲಿ ಆರಂಭ ಆಗ್ತಿದೆ ಎರಡು ಹೊಸ ಧಾರಾವಾಹಿ; ಮುಗಿಯೋ ಸೀರಿಯಲ್ಗಳು ಯಾವವು?
ಜೀ ಕನ್ನಡದಲ್ಲಿ `ಕೃಷ್ಣ ರುಕ್ಕು` ಮತ್ತು `ಜಗದ್ಧಾತ್ರಿ` ಎಂಬ ಎರಡು ಹೊಸ ಧಾರಾವಾಹಿಗಳು ಬರಲಿವೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಎರಡು ಧಾರಾವಾಹಿಗಳು ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆ ಇದೆ. ಜೀ ಕನ್ನಡದ ಈ ಬದಲಾವಣೆಗಳು ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿವೆ, ವಾಹಿನಿಯಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
- Shreelaxmi H
- Updated on: Jan 27, 2026
- 7:50 am
ಸ್ಪಷ್ಟ ತೆಲುಗಿನಲ್ಲಿ ಮಾತನಾಡಿದ ಜಪಾನ್ ವ್ಯಕ್ತಿ; ಶಾಕ್ ಆದ ಅಲ್ಲು-ರಶ್ಮಿಕಾ
ಪುಷ್ಪ 2 ಪ್ರಚಾರಕ್ಕಾಗಿ ಜಪಾನ್ಗೆ ತೆರಳಿದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಅಲ್ಲಿನ ಅಭಿಮಾನಿಯೊಬ್ಬರು ಅಚ್ಚರಿ ಮೂಡಿಸಿದರು. ಓರ್ವ ಜಪಾನಿ ನಿರರ್ಗಳವಾಗಿ ತೆಲುಗು ಮಾತನಾಡಿದಾಗ ಇಬ್ಬರೂ ದಿಗ್ಭ್ರಮೆಗೊಂಡರು. ವಿದೇಶಿಯೊಬ್ಬರು ತನ್ನ ಮಾತೃಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದನ್ನು ನೋಡಿ ಅಲ್ಲು ಅರ್ಜುನ್ ಸಂತೋಷಪಟ್ಟರು.
- Shreelaxmi H
- Updated on: Jan 26, 2026
- 10:55 am
‘ಜಾತಿ, ಧರ್ಮ ಮುಖ್ಯವಲ್ಲ’; ರೆಹಮಾನ್ಗೆ ತಿರುಗೇಟು ಕೊಟ್ಟ ರಾಮ್ ಗೋಪಾಲ್ ವರ್ಮ
ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಬಾಲಿವುಡ್ನಲ್ಲಿ ಕೆಲಸವಿಲ್ಲ ಎಂದಿದ್ದು, ಕೋಮು ತಾರತಮ್ಯ ಕಾರಣ ಎಂದಿದ್ದರು. ಈ ಹೇಳಿಕೆಗೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿ, ಸಿನಿಮಾ ಉದ್ಯಮವು ಹಣ ಗಳಿಸುವ ಬಗ್ಗೆ ಇರುತ್ತದೆ, ಜಾತಿ-ಧರ್ಮ ಮುಖ್ಯವಲ್ಲ ಎಂದಿದ್ದಾರೆ. ವೈಯಕ್ತಿಕ ಅನುಭವಗಳಿಂದಾಗಿ ರೆಹಮಾನ್ ಹಾಗೆ ಹೇಳಿರಬಹುದು, ಆದರೆ ಉದ್ಯಮವು ಪ್ರತಿಭೆಗೆ ಆದ್ಯತೆ ನೀಡುತ್ತದೆ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.
- Shreelaxmi H
- Updated on: Jan 26, 2026
- 8:11 am
ಕರ್ಣನ ಟಾರ್ಚರ್ಗೆ ಬೇಸತ್ತ ತಂದೆ ರಮೇಶ್; ಮುಂದಿದೆ ಮಾರಿ ಹಬ್ಬ
ಜೀ ಕನ್ನಡದ 'ಕರ್ಣ' ಧಾರಾವಾಹಿಯಲ್ಲಿ ಕರ್ಣನ ಪಾತ್ರದಲ್ಲಿ ಮಹತ್ವದ ಬದಲಾವಣೆಯಾಗಿದೆ. ತಂದೆ ರಮೇಶ್ನ ಕುತಂತ್ರಗಳಿಗೆ ಸೈಲೆಂಟ್ ಆಗಿದ್ದ ಕರ್ಣ ಈಗ ತಿರುಗಿಬಿದ್ದಿದ್ದಾನೆ. 'ದಂಡಂ ದಶಗುಣಂ' ಎಂದು ಹೇಳಿ, ಅಪ್ಪನಿಗೆ ಪಾತ್ರೆ ತೊಳೆಯುವ ಶಿಕ್ಷೆ ನೀಡಿದ್ದಾನೆ. ಈ ಹೊಸ ಬದಲಾವಣೆಯಿಂದಾಗಿ ಧಾರಾವಾಹಿಯ ಕಥೆ ರೋಚಕವಾಗಿದ್ದು, ಟಿಆರ್ಪಿ ಹೆಚ್ಚಾಗುವ ನಿರೀಕ್ಷೆ ಇದೆ.
- Shreelaxmi H
- Updated on: Jan 26, 2026
- 7:55 am