ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.
ಅಂದು ಅಣ್ಣಾವ್ರು-ಚಿರು, ಇಂದು ಶಿವಣ್ಣ-ರಾಮ್ ಚರಣ್
ತೆಲುಗು ನಟ ರಾಮ್ ಚರಣ್ ಮತ್ತು ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಚಾರದ ಸಂದರ್ಭದಲ್ಲಿ ಇವರಿಬ್ಬರ ವೈರಲ್ ಫೋಟೋ ಚಿರಂಜೀವಿ ಮತ್ತು ಡಾ. ರಾಜ್ಕುಮಾರ್ ಕುಟುಂಬಗಳ ಹಳೆಯ ಸ್ನೇಹವನ್ನು ಮರುಕಳಿಸಿದೆ. ಫ್ಯಾನ್ಸ್ ಈ ಫೋಟೋಗೆ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
- Shreelaxmi H
- Updated on: May 30, 2026
- 11:54 am
ಆ ಹೀರೋ ಜೊತೆ ರೊಮ್ಯಾನ್ಸ್ ಮಾಡಲು ಎಲ್ಲರೂ ಕ್ಯೂನಲ್ಲಿ ನಿಲ್ಲುತ್ತಿದ್ದರು; ಖುಷ್ಬೂ
ಖ್ಯಾತ ನಟಿ ಖುಷ್ಬೂ ತಮ್ಮ ಎರಡನೇ ಇನ್ನಿಂಗ್ಸ್ ಮತ್ತು ಸುದೀರ್ಘ ಸಿನಿಮಾ ಪಯಣದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ, ಅವರು ವೆಂಕಟೇಶ್, ಚಿರಂಜೀವಿ, ರಜನಿಕಾಂತ್, ನಾಗಾರ್ಜುನ, ಕಮಲ್ ಹಾಸನ್ ಮತ್ತು ರಾಜೇಂದ್ರ ಪ್ರಸಾದ್ ಅವರಂತಹ ಸ್ಟಾರ್ ನಟರೊಂದಿಗಿನ ತಮ್ಮ ವಿಶೇಷ ಬಾಂಧವ್ಯ, ಅವರ ಶಿಸ್ತು ಹಾಗೂ ವೃತ್ತಿಪರತೆಯ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
- Shreelaxmi H
- Updated on: May 30, 2026
- 8:03 am
ನನ್ನಲ್ಲಿದ್ದ ಕೆಟ್ಟ ಅಭ್ಯಾಸಗಳನ್ನು ರಾಮಾಯಣ ದೂರ ಮಾಡಿದೆ ಎಂದ ರಣಬೀರ್
ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ'ದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿರುವ ರಣಬೀರ್ ಕಪೂರ್, ಈ ಚಿತ್ರ ತಮ್ಮ ಜೀವನವನ್ನು ಬದಲಿಸಿದೆ ಎಂದಿದ್ದಾರೆ. ಪಾತ್ರದ ಆರಂಭಿಕ ಆತಂಕದ ನಂತರ, ರಾಮನ ಗುಣಗಳು ತಮ್ಮ ಯೋಚನೆ, ಮೌಲ್ಯಗಳು ಹಾಗೂ ಧರ್ಮದ ಮೇಲಿನ ದೃಷ್ಟಿಕೋನವನ್ನು ಪರಿವರ್ತಿಸಿದವು. ಮಗಳು ರಾಹಾಳಿಗಾಗಿ ಉತ್ತಮ ತಂದೆಯಾಗಲು ಈ ಪಾತ್ರ ಪ್ರೇರಣೆ ನೀಡಿದೆ ಎಂದು ಅವರು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.
- Shreelaxmi H
- Updated on: May 30, 2026
- 7:49 am
‘ಪೆದ್ದಿ’ ಚಿತ್ರಕ್ಕೆ ಸರ್ಕಾರದಿಂದ ಬಂಪರ್ ಆಫರ್: ಟಿಕೆಟ್ ದರ ಹೆಚ್ಚಳ, ಪ್ರೀಮಿಯರ್ ಶೋಗಳಿಗೆ ಗ್ರೀನ್ ಸಿಗ್ನಲ್
ಚಿತ್ರ ಬಿಡುಗಡೆಯಾಗುವ ಮುನ್ನಾ ದಿನವೇ, ಅಂದರೆ ಜೂನ್ 3 ರಂದು ರಾತ್ರಿ 8 ಗಂಟೆಯಿಂದಲೇ ವಿಶೇಷ ಪ್ರೀಮಿಯರ್ ಶೋಗಳನ್ನು ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ಮೆಗಾ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ಜೂನ್ 4 ರಂದು ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಾವ ರೀತಿಯ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ನೋಡಲು ಚಿತ್ರರಂಗ ಕಾಯುತ್ತಿದೆ.
- Shreelaxmi H
- Updated on: May 29, 2026
- 11:44 am
ಮಹಾಭಾರತದ ‘ಕುಂತಿ’ ಶಫಕ್ ನಾಜ್ ಈಗ ಎಲ್ಲಿದ್ದಾರೆ?
2013ರ ಸ್ಟಾರ್ ಪ್ಲಸ್ ಮಹಾಭಾರತದಲ್ಲಿ 'ಕುಂತಿ' ಪಾತ್ರದಿಂದ ಮನೆಮಾತಾದ ಶಫಕ್ ನಾಜ್ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ. ಕೇವಲ 21ನೇ ವಯಸ್ಸಿಗೆ ತಾಯಿ ಪಾತ್ರ ನಿರ್ವಹಿಸಿದ್ದ ಅವರು, ತೆರೆಯ ಮೇಲಿನ ಮಕ್ಕಳಿಗಿಂತಲೂ ಕಿರಿಯರಾಗಿದ್ದರು. 'ಮಹಾಭಾರತ'ದ ನಂತರ ಶಫಕ್ ನಾಜ್ ಈಗ ಎಲ್ಲಿದ್ದಾರೆ? ಅವರು ಕಿರುತೆರೆಯಿಂದ ದೂರವಿದ್ದರೂ, ಸದ್ಯ ಓಟಿಟಿ ವೇದಿಕೆಗಳಲ್ಲಿ ವೆಬ್ ಸರಣಿಗಳ ಮೂಲಕ ಸಕ್ರಿಯರಾಗಿದ್ದಾರೆ.
- Shreelaxmi H
- Updated on: May 29, 2026
- 8:12 am
ಹೊಸ ಸೀರಿಯಲ್ ಮೂಲಕ ಕಿರುತೆರೆಗೆ ಕವಿತಾ ಗೌಡ ಕಂಬ್ಯಾಕ್?
ಜೀ ಕನ್ನಡ ವಾಹಿನಿಯ 'ಜಗದ್ಧಾತ್ರಿ' ಧಾರಾವಾಹಿಯು ತನ್ನ ವಿನೂತನ ಕಥಾಹಂದರದಿಂದ ಭಾರಿ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಪ್ರಮುಖ ಪಾತ್ರದಲ್ಲಿದ್ದು, ಕಿರುತೆರೆ ಸ್ಟಾರ್ ಕವಿತಾ ಗೌಡರ ಎಂಟ್ರಿ ಕುರಿತು ಮಾತುಗಳು ಕೇಳಿಬರುತ್ತಿವೆ. ಈ ಇಬ್ಬರು ಜನಪ್ರಿಯ ನಟಿಯರು ಒಂದಾದಲ್ಲಿ ಧಾರಾವಾಹಿಯ ಟಿಆರ್ಪಿ ಮತ್ತಷ್ಟು ಹೆಚ್ಚಾಗಿ, ವೀಕ್ಷಕರಿಗೆ ಡಬಲ್ ಧಮಾಕಾ ನೀಡುವುದು ಖಚಿತ.
- Shreelaxmi H
- Updated on: May 29, 2026
- 7:54 am
‘ರಣಬೀರ್, ಕರಣ್ ನನ್ನನ್ನು ತುಳಿಯುತ್ತಿದ್ದಾರೆ’; ರಣವೀರ್ ಸಿಂಗ್
ರಣವೀರ್ ಸಿಂಗ್ 'ಡಾನ್ 3' ಚಿತ್ರದಿಂದ ದಿಢೀರ್ ಹೊರನಡೆದಿದ್ದು, 45 ಕೋಟಿ ನಷ್ಟ ಉಂಟಾಗಿದೆ. FWICE ಅಸಹಕಾರ ಚಳವಳಿಗೆ ಚಿಂತಿಸುತ್ತಿರುವ ಈ ಸಮಯದಲ್ಲಿ, ರಣಬೀರ್ ಕಪೂರ್ ಜೊತೆಗಿನ ಹಳೆಯ 'ಕಾಫಿ ವಿತ್ ಕರಣ್' ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಅಲ್ಲಿ ರಣಬೀರ್, ರಣವೀರ್ ನಟನೆಯನ್ನು ಮುಕ್ತವಾಗಿ ಹೊಗಳಿದ್ದರು. ಈ ವಿಡಿಯೋ ರಣವೀರ್ನ ಪ್ರಸ್ತುತ ಸಂಕಷ್ಟದ ವೃತ್ತಿಜೀವನಕ್ಕೆ ಕನ್ನಡಿ ಹಿಡಿದಿದೆ.
- Shreelaxmi H
- Updated on: May 28, 2026
- 12:39 pm
ಮಹೇಶ್ ಬಾಬು ಕಾಲೇಜು ಐಡಿ ಕಾರ್ಡ್ ಹಿಂದಿನ ಅಸಲಿಯತ್ತೇನು?
ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ಕಾಲೇಜು ಐಡಿ ಕಾರ್ಡ್ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಚೆನ್ನೈನ ಲೊಯೊಲಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಎಂದು ತೋರಿಸುವ ಈ ಗುರುತಿನ ಚೀಟಿಯ ವಿಶ್ವಾಸಾರ್ಹತೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಶುರುವಾಗಿದೆ. ಹಲವರು ಇದನ್ನು ನಕಲಿ ಅಥವಾ ಎಐ ಸೃಷ್ಟಿ ಎನ್ನುತ್ತಿದ್ದು, ಇದೇ ರೀತಿಯ ಬೇರೆ ನಟರ ಐಡಿ ಕಾರ್ಡ್ಗಳು ವೈರಲ್ ಆಗಿರುವುದರಿಂದ ಇದು ನಕಲಿ ಎಂಬುದು ಸ್ಪಷ್ಟವಾಗಿದೆ.
- Shreelaxmi H
- Updated on: May 28, 2026
- 8:19 am
ಇಂಗ್ಲಿಷ್ ಬರಲ್ಲ ಅಂತ ನನ್ನನ್ನು ಬಡವ ಅಂದುಕೊಂಡರು: ಪಂಕಜ್ ತ್ರಿಪಾಠಿ
ಪಂಕಜ್ ತ್ರಿಪಾಠಿ ಅವರ ಯಶಸ್ಸಿನ ಹಿಂದಿದೆ ದಶಕಗಳ ಹೋರಾಟ. NSD ದಿನಗಳಲ್ಲಿ ಸಾಂಸ್ಕೃತಿಕ ಆಘಾತ, ಭಾಷಾ ತಾರತಮ್ಯ ಎದುರಿಸಿದ ಅವರು, ಇಂಗ್ಲಿಷ್ ಬರದಿರುವುದಕ್ಕೆ ಅಪಹಾಸ್ಯಕ್ಕೊಳಗಾದರು. ಆದರೆ, ಕೀಳರಿಮೆಗೆ ಒಳಗಾಗದೆ ತಮ್ಮ ಅಸ್ತಿತ್ವದ ಮೇಲೆ ನಂಬಿಕೆಯಿಟ್ಟು ಬೆಳೆದರು. 'ಗ್ಯಾಂಗ್ಸ್ ಆಫ್ ವಾಸೇಪುರ್' ಬ್ರೇಕ್ ನೀಡಿತು. ಪತ್ನಿ ಮೃದುಲಾ ಅವರ ಸಂಪೂರ್ಣ ಬೆಂಬಲದೊಂದಿಗೆ ಕಠಿಣ ಪಯಣವನ್ನು ಮೀರಿ ನಿಂತ ಅವರ ಅದ್ಭುತ ಪಯಣ ಸ್ಫೂರ್ತಿದಾಯಕ.
- Shreelaxmi H
- Updated on: May 28, 2026
- 8:01 am
ರಣವೀರ್ಗೆ ಹೇರಿದ್ದು ಬ್ಯಾನ್ ಅಲ್ಲ, ಅಸಹಕಾರ ಅಷ್ಟೇ; ಸಿಕ್ತು ಸ್ಪಷ್ಟನೆ
ರಣವೀರ್ ಸಿಂಗ್ 'ಡಾನ್ 3' ಚಿತ್ರದಿಂದ ಹೊರನಡೆದ ಕಾರಣ ಎಫ್ಡಬ್ಲ್ಯೂಐಸಿಇ ಅಸಹಕಾರ ಆದೇಶ ಹೊರಡಿಸಿದೆ. ನೋಟಿಸ್ಗಳಿಗೆ ರಣವೀರ್ ಸ್ಪಂದಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಇದು ನಿಷೇಧವಲ್ಲ, ಬದಲಿಗೆ ತಾತ್ಕಾಲಿಕ ಅಸಹಕಾರ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಈ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು FWICE ಆಶಿಸಿದೆ.
- Shreelaxmi H
- Updated on: May 27, 2026
- 12:20 pm
‘ಅಂದು ಶೂಟ್ನಲ್ಲಿ ನಾನು ವಿಜಯ್ ಸಾಯುತ್ತಿದ್ದೆವು’; ಹಳೆಯ ಘಟನೆ ನೆನೆದ ವಿಲನ್ ಅಭಿಮನ್ಯು
ಖಳನಾಯಕ ಅಭಿಮನ್ಯು ಸಿಂಗ್, ವಿಜಯ್ ನಟನೆಯ 'ವೇಲಾಯುಧಂ' ಚಿತ್ರದ ರೈಲು ಫೈಟ್ ದೃಶ್ಯದ ರೋಮಾಂಚಕ ಅನುಭವ ಹಂಚಿಕೊಂಡಿದ್ದಾರೆ. 70-80 ಕಿ.ಮೀ ವೇಗದಲ್ಲಿ ಚಲಿಸುವ ರೈಲಿನ ಮೇಲೆ, 2500 ಅಡಿ ಆಳದ ಕಣಿವೆ ಸಮೀಪ ಜೀವಕ್ಕೆ ಅಪಾಯವಿದ್ದರೂ ಧೈರ್ಯವಾಗಿ ಸಾಹಸ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ವಿಜಯ್ ನೀಡಿದ ಧೈರ್ಯದಿಂದ ಬಚಾವ್ ಆಗಿದ್ದರಾದರೂ, ಆ ಘಟನೆ ಅವರನ್ನು ಒಂದು ವಾರ ಕಾಡಿತ್ತು.
- Shreelaxmi H
- Updated on: May 27, 2026
- 8:14 am
ವೈರಲ್ ಆಯಿತು ರಜನಿಕಾಂತ್ ಕಂಡಕ್ಟರ್ ಐಡಿ ಕಾರ್ಡ್;275 ರೂ. ಸಂಬಳ
ಸೂಪರ್ಸ್ಟಾರ್ ರಜನಿಕಾಂತ್ ಅವರ ಬೆಂಗಳೂರು ಸಾರಿಗೆ ಸಂಸ್ಥೆಯ ಹಳೆಯ ID ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರರಂಗಕ್ಕೆ ಬರುವ ಮುನ್ನ ಶಿವಾಜಿ ರಾವ್ ಗಾಯಕ್ವಾಡ್ ಆಗಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿದ್ದ ಅವರ ದಿನಗಳನ್ನು ಈ ಕಾರ್ಡ್ ನೆನಪಿಸುತ್ತದೆ. ಕೇವಲ 275 ರೂ. ಸಂಬಳದಿಂದ ಆರಂಭಿಸಿ, ಇಂದು ಭಾರತೀಯ ಚಿತ್ರರಂಗದ ತಲೈವಾ ಆಗಿ ಬೆಳೆದ ಅವರ ಪಯಣ ಲಕ್ಷಾಂತರ ಜನರಿಗೆ ಸ್ಫೂರ್ತಿದಾಯಕವಾಗಿದೆ.
- Shreelaxmi H
- Updated on: May 27, 2026
- 10:11 am