ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.
ವಿಜಯ್-ತ್ರಿಷಾ ಮದುವೆ ಆಗಲಿ ಎಂದು ಹಾರೈಸಿದ ಬಾಲಿವುಡ್ ನಟಿ
ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಮದುವೆಯಾಗಬೇಕೆಂದು ರಾಖಿ ಸಾವಂತ್ ಸದ್ದು ಮಾಡಿದ್ದಾರೆ. ವಿಜಯ್ ಡಿವೋರ್ಸ್ ವದಂತಿಗಳ ನಡುವೆ ಈ ಹೇಳಿಕೆ ಮಹತ್ವ ಪಡೆದಿದೆ. 'ಲಿಯೋ' ತಾರೆಯರ ಕೆಮಿಸ್ಟ್ರಿ, ರಾಜಕೀಯದಲ್ಲಿ ತ್ರಿಷಾ ಪ್ರವೇಶದ ಸಾಧ್ಯತೆಗಳು ಕೂಡ ಚರ್ಚೆಗೆ ಗ್ರಾಸವಾಗಿವೆ. ವಿಜಯ್ ಪಕ್ಷಕ್ಕೆ ರಾಖಿ ಸೇರುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.
- Shreelaxmi H
- Updated on: May 9, 2026
- 10:55 am
ಪತ್ನಿಯರ ಎದುರು ಬಯಲಾಯ್ತು ಸಹೋದರರ ಸವಾಲು; ಗುಟ್ಟು-ರಟ್ಟು
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ನಂದಗೋಕುಲ'ದಲ್ಲಿ ಕೇಶವ ಮತ್ತು ವಲ್ಲಭ ತಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು ಪತ್ನಿಯರಿಗೆ ತಿಳಿಯದಂತೆ ರಹಸ್ಯ ಯೋಜನೆ ರೂಪಿಸುತ್ತಾರೆ. ಆದರೆ, ಆ ಗುಟ್ಟು ಹೆಚ್ಚುಕಾಲ ಉಳಿಯುವುದಿಲ್ಲ. ಪತ್ನಿಯರ ಮುಗ್ಧ ಸಂಭಾಷಣೆಯಿಂದಾಗಿ ಅವರ ಸವಾಲುಗಳು ಬಯಲಾಗುತ್ತವೆ. ಈ ಹಾಸ್ಯಮಯ ತಿರುವು ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ.
- Shreelaxmi H
- Updated on: May 9, 2026
- 7:59 am
ದಳಪತಿ ವಿಜಯ್ ಜೀವನದಲ್ಲಿ ನಿಜವಾಯ್ತು ‘ಸರ್ಕಾರ್’ ಸಿನಿಮಾದ ದೃಶ್ಯ
ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯ ಸಾಧಿಸಿದೆ. ವಿಜಯ್ ಮುಖ್ಯಮಂತ್ರಿ ಪಟ್ಟದತ್ತ ಹೆಜ್ಜೆ ಹಾಕುತ್ತಿರುವಾಗಲೇ, ಡಿಎಂಕೆ-ಎಐಎಡಿಎಂಕೆ ಮೈತ್ರಿಯ ವದಂತಿಗಳು ಹರಡಿವೆ. ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಕಾಂಗ್ರೆಸ್ ಬೆಂಬಲದೊಂದಿಗೆ 113 ಶಾಸಕರ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಈ ಬೆಳವಣಿಗೆಗಳು ವಿಜಯ್ ಅವರ 'ಸರ್ಕಾರ್' ಚಿತ್ರದ ದೃಶ್ಯವೊಂದನ್ನು ನೆನಪಿಸುತ್ತಿವೆ.
- Shreelaxmi H
- Updated on: May 8, 2026
- 10:51 am
ನಯನತಾರಾ-ವಿಘ್ನೇಶ್ ಒಂದು ದಿನದ ಖರ್ಚು ಎಷ್ಟು ಲಕ್ಷ?
ನಯನತಾರಾ ಮತ್ತು ವಿಘ್ನೇಶ್ ಶಿವನ್ ಐಷಾರಾಮಿ ಜೀವನಶೈಲಿ ಸದಾ ಕುತೂಹಲ ಕೆರಳಿಸಿದೆ. ವಿಘ್ನೇಶ್ ಶಿವನ್ ಅವರ ಮಾತಿನಂತೆ, ಸುಮಾರು 350 ಕೋಟಿ ರೂ. ಬಂಡವಾಳಕ್ಕೆ ಬರುವ ಬಡ್ಡಿ ದಿನಕ್ಕೆ 6 ಲಕ್ಷ ರೂ. ಅಂದರೆ, ಈ ದಂಪತಿ ದಿನಕ್ಕೆ ಸರಿಸುಮಾರು 6 ಲಕ್ಷ ರೂ. ಖರ್ಚು ಮಾಡಬಹುದು ಎಂಬ ಲೆಕ್ಕಾಚಾರವಿದೆ. ನಯನತಾರಾ 200 ಕೋಟಿ ರೂ.ಗೂ ಹೆಚ್ಚು ಆಸ್ತಿ, ಖಾಸಗಿ ಜೆಟ್, ದುಬಾರಿ ಅಪಾರ್ಟ್ಮೆಂಟ್ ಹೊಂದಿದ್ದು, ಯಶಸ್ವಿ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ.
- Shreelaxmi H
- Updated on: May 8, 2026
- 8:13 am
ಅರ್ಷದೀಪ್ ಸುತ್ತ ಸುತ್ತುವ ಈ ಸುಂದರಿ ಯಾರು? ಈ ನಟಿಗೆ ಇದೆ ಬೇಡಿಕೆ
ಭಾರತೀಯ ಕ್ರಿಕೆಟ್ ತಂಡದ ವೇಗಿ ಅರ್ಷದೀಪ್ ಸಿಂಗ್ ಖ್ಯಾತ ಪಂಜಾಬಿ ನಟಿ ಸಮ್ರೀನ್ ಕೌರ್ ಜೊತೆ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದು ಕಾಣಿಸಿಕೊಂಡಿದ್ದ ಈ ಜೋಡಿ, ಅರ್ಷದೀಪ್ ಅವರ ಐಪಿಎಲ್ ಪಂದ್ಯಗಳಿಗೂ ಸಮ್ರೀನ್ ಭೇಟಿ ನೀಡುತ್ತಿರುವುದು ಈ ಊಹಾಪೋಹಗಳಿಗೆ ಇನ್ನಷ್ಟು ಬಲ ನೀಡಿದೆ. 26ರ ಹರೆಯದ ಸಮ್ರೀನ್ ಕೌರ್ ಪಂಜಾಬಿ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
- Shreelaxmi H
- Updated on: May 8, 2026
- 7:56 am
ವಿಜಯ್ ಹಾಗೂ ಸಂಗೀತಾ ಭೇಟಿಗೆ ಕಾರಣವಾಗಿತ್ತು ಆ ಒಂದು ಸಿನಿಮಾ
ದಳಪತಿ ವಿಜಯ್ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿ, ಟಿವಿಕೆ ಪಕ್ಷದ ಮೂಲಕ 108 ಸ್ಥಾನ ಗೆದ್ದು ಮುಖ್ಯಮಂತ್ ಆಗುತ್ತಿದ್ದಾರೆ. ಅವರ ರಾಜಕೀಯದ ಜೊತೆ, ವಿಜಯ್ ಅವರ ವೈಯಕ್ತಿಕ ಜೀವನ, ವಿಶೇಷವಾಗಿ ಪತ್ನಿ ಸಂಗೀತಾ ಅವರೊಂದಿಗಿನ ವಿಚ್ಛೇದನ ಪ್ರಕರಣವು ಚರ್ಚೆಯಲ್ಲಿದೆ. ಅವರ ಪ್ರೇಮ ಕಥೆ ಈಗ ವೈರಲ್ ಆಗಿದ್ದು, ಸವಾಲುಗಳ ನಡುವೆಯೂ ಅವರ ಜೀವನ ಪಯಣ ಕುತೂಹಲ ಮೂಡಿಸಿದೆ.
- Shreelaxmi H
- Updated on: May 7, 2026
- 12:10 pm
ಮತ್ತೆ ಮುನ್ನೆಲೆಗೆ ಬಂತು ನಟಿ ತ್ರಿಶಾ ಕೃಷ್ಣನ್ ಸ್ನೇಹ ಮತ್ತು ಆಸ್ತಿಯ ವಿವರ; ನಟಿ ಎಷ್ಟು ಶ್ರೀಮಂತರು?
ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಗೆಲುವು ಸಾಧಿಸಿದ ಬೆನ್ನಲ್ಲೇ, ತ್ರಿಷಾ ಕೃಷ್ಣನ್ ಅವರೊಂದಿಗಿನ ಅವರ ಮದುವೆ ವದಂತಿಗಳು ಮತ್ತೆ ಮುನ್ನಲೆಗೆ ಬಂದಿವೆ. ವಿಜಯ್ ನಿವಾಸಕ್ಕೆ ತ್ರಿಷಾ ಭೇಟಿ ನೀಡಿದ್ದು, 'ಜೋಡಿ' ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ದಶಕಗಳಿಂದ ಸಕ್ರಿಯವಾಗಿರುವ ತ್ರಿಷಾ, 85 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದು, ಐಷಾರಾಮಿ ಬಂಗಲೆಗಳು ಮತ್ತು ಕಾರು ಸಂಗ್ರಹ ಗಮನ ಸೆಳೆದಿದೆ.
- Shreelaxmi H
- Updated on: May 7, 2026
- 8:19 am
ದಳಪತಿ ವಿಜಯ್ 80 ಕೋಟಿ ರೂ. ನಿವಾಸಕ್ಕೆ ಹಾಲಿವುಡ್ ನಟನ ಈ ಮನೆಯೇ ಸ್ಫೂರ್ತಿ
ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ TVK ಪಕ್ಷದ ಐತಿಹಾಸಿಕ ಗೆಲುವು ಭಾರಿ ಸದ್ದು ಮಾಡಿದೆ. ಈ ಸಂಭ್ರಮದ ನಡುವೆ, ವಿಜಯ್ ಅವರ ರಾಜಕೀಯ ಯಶಸ್ಸು ಹಾಗೂ ಅವರ 80 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯ ಬಗ್ಗೆ ಕುತೂಹಲ ಹೆಚ್ಚಿದೆ. ಹಾಲಿವುಡ್ ಸ್ಟಾರ್ ನಟನ ಮನೆಯಿಂದ ಸ್ಫೂರ್ತಿ ಪಡೆದು ಚೆನ್ನೈನಲ್ಲಿ ನಿರ್ಮಿಸಿರುವ ಈ ಸುಂದರ ಬಂಗಲೆಯ ವಿಶೇಷತೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
- Shreelaxmi H
- Updated on: May 7, 2026
- 7:57 am
ಕುಟುಂಬದ ಜೊತೆ ಕಾಡಿನ ಪಿಸುಮಾತು ಕೇಳಿದ ರಾಧಿಕಾ ಪಂಡಿತ್
ಸದ್ಯ ರಾಧಿಕಾ ಪಂಡಿತ್ ಅವರ ಮಕ್ಕಳಿಗೆ ಶಾಲಾ ರಜೆ ಇರುವುದರಿಂದ, ಈ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಅವರು ಈ ಪ್ರವಾಸ ಹಮ್ಮಿಕೊಂಡಿದ್ದಾರೆ. ಸುಡುವ ಬೇಸಿಗೆಯ ನಡುವೆಯೂ ಅರಣ್ಯ ಹಾದಿಯಲ್ಲಿ ಸಾಗುವುದು, ಮರ ಹತ್ತುವುದು ಹಾಗೂ ತೊರೆಯ ಬದಿಯ ಜಾರುಬಂಡೆಗಳ ಮೇಲೆ ನಡೆಯುವುದು ಒಂದು ಅದ್ಭುತ ಅನುಭವ ಎಂದು ರಾಧಿಕಾ ಬರೆದುಕೊಂಡಿದ್ದಾರೆ.
- Shreelaxmi H
- Updated on: May 6, 2026
- 5:11 pm
‘ರಾಜಾ ಶಿವಾಜಿ’ ಸಿನಿಮಾದಲ್ಲಿ ನಟಿಸಲು ಈ ಸೆಲೆಬ್ರಿಟಿಗಳು ಸಂಭಾವನೆಯನ್ನೇ ಪಡೆದಿಲ್ಲ
ಜೆನೆಲಿಯಾ ಮತ್ತು ರಿತೇಶ್ ಒಂದೇ ಕುಟುಂಬದವರಾಗಿದ್ದು, ಈ ಚಿತ್ರದಲ್ಲಿ ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ, ಅವರು ಯಾವುದೇ ಹಣವನ್ನು ತೆಗೆದುಕೊಂಡಿಲ್ಲ. ವಿದ್ಯಾ ಬಾಲನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿದ್ದಾರೆ ಮತ್ತು ಅವರ ಪಾತ್ರ ಮುಖ್ಯವಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಅಫ್ಜಲ್ ಖಾನ್ ಅವರ ಭೇಟಿಯಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಏತನ್ಮಧ್ಯೆ, ಬೊಮನ್ ಇರಾನಿ ಚಿತ್ರದಲ್ಲಿ ಕೇವಲ ಎರಡು ಬಾರಿ ಕಾಣಿಸಿಕೊಳ್ಳುತ್ತಾರೆ.
- Shreelaxmi H
- Updated on: May 6, 2026
- 8:15 am
ಬೀದಿ ಪಾಲಾಯ್ತು ಜೆಡಿ ಜೀವನ; ಗೂಡಂಗಡಿಯಲ್ಲಿ ಊಟ
Amruthadhaare Serial: ‘ಅಮೃತಧಾರೆ’ ಧಾರಾವಾಹಿಯಲ್ಲಿ ಬೆಟ್ಟಿಂಗ್ ಆ್ಯಪ್ ಮಾಡಿಕೊಂಡ ಜಯದೇವ್ ನಂತರ ಅದರಿಂದ ಸಾಕಷ್ಟು ನಷ್ಟ ಅನುಭವಿಸಿದೆ. ಈ ನಷ್ಟದಿಂದ ಹೊರಬರುವ ಮೊದಲೇ ಆತನ ಮನೆ, ಕಚೇರಿ ಎಲ್ಲವೂ ಸೀಝ್ ಆಯಿತು. ಈಗ ಗೌತಮ್ ಮರಳಿ ಮನೆ, ಕಂಪನಿ ಎಲ್ಲವನ್ನೂ ಮರಳಿ ಪಡೆದಿದ್ದಾನೆ.
- Shreelaxmi H
- Updated on: May 6, 2026
- 7:30 am
ತಾಯಿ ಹಿಂದೂ, ತಂದೆ ಕ್ರಿಶ್ಚಿಯನ್… ದಳಪತಿ ವಿಜಯ್ ಯಾವ ಧರ್ಮವನ್ನು ಅನುಸರಿಸುತ್ತಾರೆ?
ದಳಪತಿ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗುವುದು ಖಚಿತವೆಂಬಂತೆ, ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಈ ಗೆಲುವಿನ ಬೆನ್ನಲ್ಲೇ, ವಿಜಯ್ ಅವರ ಧಾರ್ಮಿಕ ಗುರುತಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕ್ಯಾಥೋಲಿಕ್ ಕ್ರಿಶ್ಚಿಯನ್ ತಂದೆ ಮತ್ತು ಹಿಂದೂ ತಾಯಿಯ ಮಗನಾದ ವಿಜಯ್, ಧರ್ಮಕ್ಕಿಂತ ಮಾನವೀಯತೆಗೆ ಆದ್ಯತೆ ನೀಡುತ್ತಾರೆ. ಹಿಂದೂ ದೇವಾಲಯಗಳ ಭೇಟಿ ಹಾಗೂ ತಾಯಿಗಾಗಿ ಸಾಯಿಬಾಬಾ ದೇವಾಲಯ ನಿರ್ಮಿಸಿರುವುದು ಅವರ ಧಾರ್ಮಿಕ ಸಹಿಷ್ಣುತೆಗೆ ಸಾಕ್ಷಿ.
- Shreelaxmi H
- Updated on: May 5, 2026
- 11:18 am