AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಶ್ರೀಲಕ್ಷ್ಮೀ ಎಚ್

ಶ್ರೀಲಕ್ಷ್ಮೀ ಎಚ್

Author - TV9 Kannada

shreedevhegde@Gmail.com

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಜೀ ಕನ್ನಡದಲ್ಲಿ ‘ಜೋಡಿ ನಂ. 1’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ: ಜುಲೈ 11, 12ರಂದು ಪ್ರಸಾರ

ಜೀ ಕನ್ನಡದಲ್ಲಿ ‘ಜೋಡಿ ನಂ. 1’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ: ಜುಲೈ 11, 12ರಂದು ಪ್ರಸಾರ

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಜೋಡಿ ನಂ. 1' ಯಶಸ್ವಿಯಾಗಿ 14 ವಾರಗಳನ್ನು ಪೂರೈಸಿ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ. ಜುಲೈ 11 ಮತ್ತು 12ರಂದು ರಾತ್ರಿ 9 ಗಂಟೆಗೆ ಈ ಮಹಾ ಸಂಚಿಕೆ ಪ್ರಸಾರವಾಗಲಿದ್ದು, ಅಂತಿಮ ಸುತ್ತಿನಲ್ಲಿರುವ 10 ಸೆಲೆಬ್ರಿಟಿ ಜೋಡಿಗಳಲ್ಲಿ ಯಾರು ಚಾಂಪಿಯನ್ ಪಟ್ಟ ಗೆಲ್ಲಲಿದ್ದಾರೆ ಎಂಬ ಕುತೂಹಲ ಮೂಡಿದೆ.

‘ಅಮೃತಧಾರೆ’: ಭೂಮಿಕಾಗೆ ಈಗ ಕ್ಯಾನ್ಸರ್​; ಇದರಲ್ಲಿದೆ ಬೇರೆ ಟ್ವಿಸ್ಟ್?

‘ಅಮೃತಧಾರೆ’: ಭೂಮಿಕಾಗೆ ಈಗ ಕ್ಯಾನ್ಸರ್​; ಇದರಲ್ಲಿದೆ ಬೇರೆ ಟ್ವಿಸ್ಟ್?

'ಅಮೃತಧಾರೆ' ಧಾರಾವಾಹಿಯಲ್ಲಿ ಪ್ರೇಕ್ಷಕರು ನಂಬಲಾಗದ ಟ್ವಿಸ್ಟ್ ಎದುರಾಗಿದೆ. ಕಥಾನಾಯಕಿ ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಆದರೆ, ಈ ಶಾಕಿಂಗ್ ವರದಿಯ ಹಿಂದೆ ಗೌತಮ್ ಮಲತಾಯಿ ಶಾಕುಂತಲಾದೇವಿಯ ಕುತಂತ್ರ ಇರಬಹುದೇ ಎಂಬ ಬಲವಾದ ಅನುಮಾನ ಈಗ ವೀಕ್ಷಕರಲ್ಲಿ ಮೂಡಿದೆ.

ಜಾನ್ವಿ ಕಪೂರ್ ಕೈಯಲ್ಲಿ ‘ಶಿಖು’ ಹೆಸರಿನ ಮೆಹಂದಿ; ಪ್ರಿಯಕರನ ಮೇಲಿನ ಪ್ರೀತಿ ನೋಡಿ

ಜಾನ್ವಿ ಕಪೂರ್ ಕೈಯಲ್ಲಿ ‘ಶಿಖು’ ಹೆಸರಿನ ಮೆಹಂದಿ; ಪ್ರಿಯಕರನ ಮೇಲಿನ ಪ್ರೀತಿ ನೋಡಿ

ನಟಿ ಜಾನ್ವಿ ಕಪೂರ್ ಕೈಯಲ್ಲಿನ 'ಶಿಖು' ಮೆಹಂದಿ ವಿನ್ಯಾಸವು ಪ್ರಿಯಕರ ಶಿಖರ್ ಪಹಾರಿಯಾ ಮೇಲಿನ ಪ್ರೀತಿಯನ್ನು ಖಚಿತಪಡಿಸಿದೆ. ಬಾಲ್ಯದ ಸ್ನೇಹಿತರಾದ ಈ ಜೋಡಿ 2023ರಿಂದ ಮತ್ತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಜಾನ್ವಿ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮಹಾರಾಷ್ಟ್ರದ ಮಾಜಿ ಸಿಎಂ ಮೊಮ್ಮಗನಾಗಿರುವ ಶಿಖರ್ ಮತ್ತು ಜಾನ್ವಿ ಅವರ ಈ ಪ್ರೇಮ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

‘ಸೀಮಾ ಜೊತೆಗಿನ ವಿಚ್ಛೇದನಕ್ಕೆ ನಾನೇ ಕಾರಣ’ ತಪ್ಪು ಒಪ್ಪಿಕೊಂಡ ನಟ ಸೊಹೈಲ್ ಖಾನ್

‘ಸೀಮಾ ಜೊತೆಗಿನ ವಿಚ್ಛೇದನಕ್ಕೆ ನಾನೇ ಕಾರಣ’ ತಪ್ಪು ಒಪ್ಪಿಕೊಂಡ ನಟ ಸೊಹೈಲ್ ಖಾನ್

ಬಾಲಿವುಡ್ ನಟ ಸೊಹೈಲ್ ಖಾನ್, ಮಾಜಿ ಪತ್ನಿ ಸೀಮಾ ಸಜ್ದೇಹ್ ಅವರೊಂದಿಗಿನ ವಿಚ್ಛೇದನದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ರಿಯಾಲಿಟಿ ಶೋ ಒಂದರಲ್ಲಿ ಮಾತನಾಡಿದ ಅವರು, ತಮ್ಮ 25 ವರ್ಷಗಳ ದಾಂಪತ್ಯದ ಅಂತ್ಯಕ್ಕೆ ತಾನೇ ಸಂಪೂರ್ಣ ಜವಾಬ್ದಾರ ಎಂದು ರಾಷ್ಟ್ರೀಯ ದೂರದರ್ಶನದಲ್ಲೇ ಒಪ್ಪಿಕೊಂಡಿದ್ದಾರೆ. ಸೊಹೈಲ್ ಅವರ ಈ ಘನತೆಯುಳ್ಳ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿಚ್ಛೇದನದ ಬಳಿಕವೂ ಇಬ್ಬರೂ ಪರಸ್ಪರ ಗೌರವ ಕಾಯ್ದುಕೊಂಡಿದ್ದಾರೆ.

ದೆಹಲಿಯಲ್ಲಿ 37 ಕೋಟಿ ರೂ. ಆಸ್ತಿ ಖರೀದಿಸಿದ ಶಾರುಖ್; ಈ ಕಟ್ಟಡದಲ್ಲಿದೆ ಹಳೆಯ ನೆನಪು

ದೆಹಲಿಯಲ್ಲಿ 37 ಕೋಟಿ ರೂ. ಆಸ್ತಿ ಖರೀದಿಸಿದ ಶಾರುಖ್; ಈ ಕಟ್ಟಡದಲ್ಲಿದೆ ಹಳೆಯ ನೆನಪು

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ದೆಹಲಿಯ ಪಂಚಶೀಲ್ ಪಾರ್ಕ್‌ನಲ್ಲಿರುವ ತಮ್ಮ ಹಳೆಯ ಕುಟುಂಬದ ಮನೆಯ ಇನ್ನೂ ಎರಡು ಮಹಡಿಗಳನ್ನು ಬರೋಬ್ಬರಿ ₹37 ಕೋಟಿ ನೀಡಿ ಖರೀದಿಸಿದ್ದಾರೆ. ಈ ಮೂಲಕ 10,800 ಚದರ ಅಡಿಯ ಈ ಐತಿಹಾಸಿಕ ಮನೆಯ ಸಂಪೂರ್ಣ ಮಾಲೀಕತ್ವ ಈಗ ಕಿಂಗ್ ಖಾನ್ ವಶವಾಗಿದೆ. ಸಿನಿಮಾ ರಂಗಕ್ಕೆ ಬರುವ ಮುನ್ನ ವಾಸಿಸುತ್ತಿದ್ದ ಈ ಮನೆಯೊಂದಿಗೆ ಶಾರುಖ್‌ಗೆ ಭಾವನಾತ್ಮಕ ಸಂಬಂಧವಿದೆ.

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ರಿಲೀಸ್ ಡೇಟ್?

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ರಿಲೀಸ್ ಡೇಟ್?

ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎಂದೇ ಬಿಂಬಿತವಾಗಿರುವ ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಅಧಿಕೃತವಾಗಿದೆ. ಹತ್ತಾರು ಅಡೆತಡೆಗಳ ನಂತರ ಈ ರಾಜಕೀಯ ಆಕ್ಷನ್ ಡ್ರಾಮಾ ಚಿತ್ರವು ಜುಲೈ 24ರಂದು ಜಾಗತಿಕವಾಗಿ ತೆರೆಗೆ ಬರಲು ಸಜ್ಜಾಗಿದೆ. ವಿನೋದ್ ನಿರ್ದೇಶನದ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಬಿಗ್ ಬಜೆಟ್ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ದೆಹಲಿಯ ಭಾರತ್ ಮಂಟಪದಲ್ಲಿ ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಟ್ರೇಲರ್ ಲಾಂಚ್?

ದೆಹಲಿಯ ಭಾರತ್ ಮಂಟಪದಲ್ಲಿ ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಟ್ರೇಲರ್ ಲಾಂಚ್?

ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾವಾದ 'ರಾಮಾಯಣ'ದ ಟ್ರೇಲರ್ ಜುಲೈ 18ರಂದು ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮವು ನವದೆಹಲಿಯ ಪ್ರತಿಷ್ಠಿತ 'ಭಾರತ್ ಮಂಟಪ'ದಲ್ಲಿ ಅತ್ಯಂತ ಭವ್ಯವಾಗಿ ನಡೆಯಲಿದೆ ಎಂದು 'ವೆರೈಟಿ' ನಿಯತಕಾಲಿಕೆ ತಿಳಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯ ವೈಭವದ ಸಿನಿಮಾ 2026ರ ದೀಪಾವಳಿಗೆ ತೆರೆಗೆ ಬರಲಿದೆ.

‘ತಾಯಿ ಕಿಳವಿ’ ಚಿತ್ರದ ಯಶಸ್ಸು: ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ಶಿವಕಾರ್ತಿಕೇಯನ್

‘ತಾಯಿ ಕಿಳವಿ’ ಚಿತ್ರದ ಯಶಸ್ಸು: ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ಶಿವಕಾರ್ತಿಕೇಯನ್

ನಟ ಮತ್ತು ನಿರ್ಮಾಪಕ ಶಿವಕಾರ್ತಿಕೇಯನ್ ಅವರು ತಮ್ಮ ನಿರ್ಮಾಣದ 'ತಾಯಿ ಕಿಳವಿ' ಸಿನಿಮಾ 100 ದಿನ ಪೂರೈಸಿದ ಸಂಭ್ರಮದಲ್ಲಿದ್ದಾರೆ. ಈ ಭರ್ಜರಿ ಬಾಕ್ಸ್ ಆಫೀಸ್ ಯಶಸ್ಸಿನ ಹಿನ್ನೆಲೆಯಲ್ಲಿ, ಚಿತ್ರದ ನಿರ್ದೇಶಕ ಶಿವಕುಮಾರ್ ಮುರುಗೇಶನ್ ಅವರಿಗೆ ಹೊಚ್ಚ ಹೊಸ ಮಹೀಂದ್ರಾ BE 6 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಕೂಡ ಚಿತ್ರದ ಯಶಸ್ಸು ಮತ್ತು ನಿರ್ದೇಶಕನ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ಪ್ರಧಾನಿ ಮೋದಿ ಭಾಷಣ; ‘ಕುಚ್ ಕುಚ್ ಹೋತಾ ಹೈ’ ಡೈಲಾಗ್ ಬಳಕೆಗೆ ಕರಣ್ ಸಂತಸ

ಇಂಡೋನೇಷ್ಯಾದಲ್ಲಿ ಪ್ರಧಾನಿ ಮೋದಿ ಭಾಷಣ; ‘ಕುಚ್ ಕುಚ್ ಹೋತಾ ಹೈ’ ಡೈಲಾಗ್ ಬಳಕೆಗೆ ಕರಣ್ ಸಂತಸ

ಇಂಡೋನೇಷ್ಯಾದ ಜಕಾರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಇಂಡೋನೇಷ್ಯಾ ಬಾಂಧವ್ಯದ ಬಗ್ಗೆ ಮಾತನಾಡುತ್ತಾ ಬಾಲಿವುಡ್‌ನ ‘ಕುಚ್ ಕುಚ್ ಹೋತಾ ಹೈ’ ಸಿನಿಮಾದ ಡೈಲಾಗ್ ಬಳಸಿದ್ದಾರೆ. ಪ್ರಧಾನಿಯವರ ಈ ಅಪರೂಪದ ಪ್ರಶಂಸೆಗೆ ನಿರ್ದೇಶಕ ಕರಣ್ ಜೋಹರ್ ಭಾವುಕರಾಗಿ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಶತಕೋಟಿ ಕ್ಲಬ್ ಸೇರಿದ ತಮಿಳು ನಟ ಸೂರ್ಯ; 100 ಕೋಟಿ ರೂಪಾಯಿ ಸಂಭಾವನೆ

ಶತಕೋಟಿ ಕ್ಲಬ್ ಸೇರಿದ ತಮಿಳು ನಟ ಸೂರ್ಯ; 100 ಕೋಟಿ ರೂಪಾಯಿ ಸಂಭಾವನೆ

'ಕರುಪ್ಪು' ಚಿತ್ರದ ಭರ್ಜರಿ ಯಶಸ್ಸಿನ ನಂತರ ನಟ ಸೂರ್ಯ ಅವರ ಮಾರುಕಟ್ಟೆ ಮೌಲ್ಯ ಗಗನಕ್ಕೇರಿದೆ. ಈ ಚಿತ್ರದ ಯಶಸ್ಸು ಸೂರ್ಯ ಅವರನ್ನು 100 ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟರ ಪಟ್ಟಿಗೆ ಸೇರಿಸಿದೆ. ರಜನಿಕಾಂತ್ ಮತ್ತು ವಿಜಯ್ ಅವರಂತಹ ಘಟಾನುಘಟಿಗಳ ಸಾಲಿಗೆ ಸೇರಿದ ಸೂರ್ಯ, ಇತ್ತೀಚಿನ ಸತತ ಸೋಲುಗಳ ನಂತರ ಭರ್ಜರಿ ಕಂ‌ಬ್ಯಾಕ್ ಮಾಡಿದ್ದಾರೆ. ಅವರ ಮುಂದಿನ ಚಿತ್ರಗಳ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.

ಆಮಿರ್ ಮದುವೆಗೆ ಶಾರುಖ್​​-ಸಲ್ಮಾನ್ ಖಾನ್ ಗೈರಾಗಿದ್ದೇಕೆ?

ಆಮಿರ್ ಮದುವೆಗೆ ಶಾರುಖ್​​-ಸಲ್ಮಾನ್ ಖಾನ್ ಗೈರಾಗಿದ್ದೇಕೆ?

ಬಾಲಿವುಡ್ ನಟ ಆಮಿರ್ ಖಾನ್ 61ನೇ ವಯಸ್ಸಿನಲ್ಲಿ ಗೌರಿ ಸ್ಪ್ರಾಟ್ ಅವರನ್ನು ವಿವಾಹವಾಗಿದ್ದಾರೆ. ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಈ ಮದುವೆಯಲ್ಲಿ ಆಮಿರ್ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ, ಕಿರಣ್ ರಾವ್ ಹಾಗೂ ಆಪ್ತ ಸ್ನೇಹಿತರಾದ ಸಲ್ಮಾನ್, ಶಾರುಖ್ ಗೈರುಹಾಜರಾಗಿದ್ದರು. ಮಕ್ಕಳು ಭಾಗವಹಿಸಿದ್ದರು. ಈ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಅಂದು ಕಾರು ಶೆಡ್‌ನಲ್ಲಿ ವಾಸ, ಇಂದು ರೆಸಾರ್ಟ್‌ನಂತಹ ಬಂಗಲೆ: ಇದು ಸೂಪರ್‌ಸ್ಟಾರ್ ಕಥೆ

ಅಂದು ಕಾರು ಶೆಡ್‌ನಲ್ಲಿ ವಾಸ, ಇಂದು ರೆಸಾರ್ಟ್‌ನಂತಹ ಬಂಗಲೆ: ಇದು ಸೂಪರ್‌ಸ್ಟಾರ್ ಕಥೆ

ಒಂದು ಕಾಲದಲ್ಲಿ ಕಾರು ಶೆಡ್‌ನಲ್ಲಿ ವಾಸಿಸುತ್ತಾ, ಊಟವಿಲ್ಲದೆ ಬರೀ ನೀರು ಕುಡಿದು ದಿನ ಕಳೆದಿದ್ದ ತೆಲುಗು ಸೂಪರ್‌ಸ್ಟಾರ್ ಮೋಹನ್ ಬಾಬು, ಇಂದು ಹೈದರಾಬಾದ್‌ನಲ್ಲಿ 10 ಎಕರೆಯ ಬೃಹತ್ ಐಷಾರಾಮಿ ಬಂಗಲೆ ಹೊಂದಿದ್ದಾರೆ. ತಿಂಗಳಿಗೆ 40 ರೂಪಾಯಿ ಸಂಬಳ ಪಡೆಯುತ್ತಿದ್ದ ಪಿಟಿ ಟೀಚರ್, ಇಂದು ಚಿತ್ರರಂಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಮ್ರಾಜ್ಯವನ್ನೇ ಕಟ್ಟಿದ ರೋಚಕ ಯಶೋಗಾಥೆ ಇಲ್ಲಿದೆ.