ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.
ಎಸ್ಪಿಬಿ ಅವರ ಮೇಲಾಗಿತ್ತು ಮಾಟ? ಮನೆಯವರಿಗೆ ಅನುಮಾನ ಏಕೆ ಬಂತು?
ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ತಮ್ಮ ವೃತ್ತಿಜೀವನದಲ್ಲಿ ಗಂಭೀರ ಗಂಟಲು ಸಮಸ್ಯೆಗೆ ಒಳಗಾಗಿದ್ದರು. 'ಗೀತಾಂಜಲಿ' ಹಾಡಿನ ರೆಕಾರ್ಡಿಂಗ್ ವೇಳೆ ಧ್ವನಿ ಕೈಕೊಟ್ಟಿದ್ದು, ತೀವ್ರ ಮಾನಸಿಕ ಯಾತನೆ ಅನುಭವಿಸಿದರು. ಕುಟುಂಬದವರು ಪೂಜೆ ಪುನಸ್ಕಾರ ಮಾಡಿದರು. ಆದರೆ ಅವರು ವೈದ್ಯಕೀಯ ಚಿಕಿತ್ಸೆ, ನಿರ್ದಿಷ್ಟವಾಗಿ ಶಸ್ತ್ರಚಿಕಿತ್ಸೆಯನ್ನು ಆರಿಸಿಕೊಂಡರು. ಶಸ್ತ್ರಚಿಕಿತ್ಸೆ ನಂತರ, ವಿಶ್ರಾಂತಿ ಪಡೆಯುವ ಮೊದಲು ಹಾಡಲು ಪ್ರಾರಂಭಿಸಿ, ತಮ್ಮ ಧ್ವನಿಯನ್ನು ಯಶಸ್ವಿಯಾಗಿ ಮರಳಿ ಪಡೆದರು.
- Shreelaxmi H
- Updated on: Mar 10, 2026
- 11:13 am
ಮಲೈಕಾ ಅರೋರಾ ಜೊತೆ ಇರೋ ಈ ಹೊಸ ಹುಡುಗ ಯಾರು?
ಮಲೈಕಾ ಅರೋರಾ ಅವರ ಹೊಸ ರೆಸ್ಟೋರೆಂಟ್ ಲಾಂಚ್ ಪಾರ್ಟಿಯಲ್ಲಿ ನಿಗೂಢ ವ್ಯಕ್ತಿಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಸ್ಪ್ಲಿಟ್ಸ್ವಿಲ್ಲಾ ಸ್ಪರ್ಧಿ ಸೊರಾಬ್ ಬೇಡಿ ಎಂದು ತಿಳಿದುಬಂದಿದೆ. ಆದರೆ, ಸೊರಾಬ್ ಕೇವಲ ಸ್ನೇಹಿತ. ಮಲೈಕಾ ಇನ್ನೂ ವಜ್ರ ವ್ಯಾಪಾರಿ ಹರ್ಷ ಮೆಹ್ತಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದು, ಪಾರ್ಟಿಯಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರ 19 ವರ್ಷಗಳ ವಯಸ್ಸಿನ ಅಂತರವು ಮತ್ತೆ ಚರ್ಚೆಗೆ ಕಾರಣವಾಗಿದೆ.
- Shreelaxmi H
- Updated on: Mar 10, 2026
- 8:18 am
ಮೂರು ನಟಿಯರ ಗುಣ ಸಾಯಿ ಪಲ್ಲವಿಯಲ್ಲಿದೆ ಎಂದು ಮೊದಲೇ ಊಹಿಸಿದ್ದ ರಂಭಾ
ಸಾಯಿ ಪಲ್ಲವಿ ಇಂದು ಬೇಡಿಕೆಯ ನಟಿ. ರಾಮಾಯಣದಲ್ಲಿ ಸೀತೆಯ ಪಾತ್ರಕ್ಕೆ ಆಯ್ಕೆಯಾಗಿರುವ ಅವರು ಮೇಕಪ್ ಇಲ್ಲದೆ, ಹಾಟ್ ಡ್ರೆಸ್ ಇಲ್ಲದೆ ತಮ್ಮದೇ ಛಾಪು ಮೂಡಿಸಿದ್ದಾರೆ. ರಂಭಾ ಅವರು ಹಲವು ವರ್ಷಗಳ ಹಿಂದೆಯೇ ಸಾಯಿ ಪಲ್ಲವಿ ಅವರ ಪ್ರತಿಭೆಯನ್ನು ಗುರುತಿಸಿ ಹೊಗಳಿದ್ದರು. ಆ ವಿಡಿಯೋ ಈಗ ವೈರಲ್ ಆಗಿದ್ದು, ರಂಭಾ ಮಾತು ಇಂದು ನಿಜವಾಗಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
- Shreelaxmi H
- Updated on: Mar 10, 2026
- 8:02 am
ಸಲ್ಮಾನ್ ಖಾನ್ ಹಾಡಿಗೆ ಐಶ್ವರ್ಯಾ-ಅಭಿಷೇಕ್ ಖಾನ್ ಭರ್ಜರಿ ಡ್ಯಾನ್ಸ್
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಸಲ್ಮಾನ್ ಖಾನ್ ಅವರ ಜನಪ್ರಿಯ "ಸಲಾಮ್-ಎ-ಇಷ್ಕ್" ಹಾಡಿಗೆ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮುದೀತ್ ಅದಾನಿ ಮತ್ತು ಅನನ್ಯ ದಿವಾಂಜಿ ಅವರ ಮದುವೆಯಲ್ಲಿ ಈ ಜೋಡಿ ವೇದಿಕೆಯಲ್ಲಿ ಹೆಜ್ಜೆ ಹಾಕಿದೆ. ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ಅವರ ಹಿಂದಿನ ಸಂಬಂಧದ ಹಿನ್ನೆಲೆಯಲ್ಲಿ ಈ ವಿಡಿಯೋ ಹೆಚ್ಚು ಸದ್ದು ಮಾಡುತ್ತಿದೆ.
- Shreelaxmi H
- Updated on: Mar 10, 2026
- 6:34 am
ಗೌತಮ್ ನಿರ್ಧಾರಕ್ಕೆ ನಲುಗಿಹೋದ ಜಯದೇವ್; ಶುರುವಾಗಿದೆ ಚಿಂತೆ
ಗೌತಮ್ ದೀವಾನ್ 'ಅಮೃತಧಾರೆ' ಧಾರಾವಾಹಿಯಲ್ಲಿ ಹೊಸ ಉದ್ಯಮ ಆರಂಭಿಸಿದ್ದು, ಶೇರು ಮಾರುಕಟ್ಟೆ ಬ್ರೋಕರ್ ಆ್ಯಪ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದು ಹಿಂದೆ ಗೌತಮ್ರನ್ನು ಮೋಸದಿಂದ ಹೊರಹಾಕಿದ ಜಯದೇವ್ಗೆ ಆತಂಕ ಸೃಷ್ಟಿಸಿದೆ. ಗೌತಮ್ ಯಶಸ್ಸು ಧಾರಾವಾಹಿಗೆ ಹೊಸ ರೋಚಕತೆ ತಂದಿದೆ. ಮುಂದಿನ ಎಪಿಸೋಡ್ಗಳು ಗಮನ ಸೆಳೆಯಲಿವೆ.
- Shreelaxmi H
- Updated on: Mar 9, 2026
- 9:40 am
ತ್ರಿಷಾಗೆ ನಡೆದಿತ್ತು ನಿಶ್ಚಿತಾರ್ಥ; ಹುಡುಗ ಯಾರು? ಬೇಡ ಎಂದಿದ್ದು ಏಕೆ?
ನಟಿ ತ್ರಿಷಾ ಮತ್ತು ದಳಪತಿ ವಿಜಯ್ ಅವರ ಸಂಬಂಧದ ಕುರಿತು ಗಾಸಿಪ್ಗಳು ಹರಿದಾಡುತ್ತಿದ್ದು, ವಿಜಯ್ ಪತ್ನಿ ಸಂಗೀತಾ ಆರೋಪ ಮಾಡಿದ್ದಾರೆ. 42 ವರ್ಷದ ತ್ರಿಷಾ ಇನ್ನೂ ಅವಿವಾಹಿತರಾಗಿದ್ದರೂ, ಅವರಿಗೆ 11 ವರ್ಷಗಳ ಹಿಂದೆ ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥವಾಗಿತ್ತು. ವರುಣ್ ಕುಟುಂಬದ ಅಸಮ್ಮತಿ ಹಾಗೂ ವೃತ್ತಿ ಬಿಡುವ ಒತ್ತಡದಿಂದ ಈ ಮದುವೆ ಮುರಿದುಬಿತ್ತು.
- Shreelaxmi H
- Updated on: Mar 9, 2026
- 8:39 am
ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಸ್ನೇಹಾಗೆ 4 ಕೋಟಿ ರೂ. ಕಾರು ಕೊಟ್ಟ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರ ವಿವಾಹದ ದಿನದಂದು ಅಲ್ಲು ಸಿರೀಶ್ ಕೂಡ ಮದುವೆ ಮಂಟಪವನ್ನು ಪ್ರವೇಶಿಸಿದ್ದು ಗಮನಾರ್ಹ. ಇದರೊಂದಿಗೆ, ಅಲ್ಲು ಸಿರೀಶ್ ಮತ್ತು ಅಲ್ಲು ಅರ್ಜುನ್ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳು ಮತ್ತು ಅಭಿನಂದನೆಗಳ ಸುರಿಮಳೆಯಾಯಿತು. ಈಗ ಅವರು ಪತ್ನಿಗೆ ಕೊಟ್ಟ ದುಬಾರಿ ಕಾರು ಚರ್ಚೆಗೆ ಗ್ರಾಸವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
- Shreelaxmi H
- Updated on: Mar 8, 2026
- 9:55 am
ಸಚಿನ್ ತೆಂಡೂಲ್ಕರ್ ಸೊಸೆ ಸಾನಿಯಾ ಎಷ್ಟು ಶ್ರೀಮಂತೆ ಗೊತ್ತಾ?
ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಾಂದೋಕ್ ಅವರನ್ನು ವಿವಾಹವಾಗಿದ್ದಾರೆ. ಸಚಿನ್ ಪುತ್ರನ ಪತ್ನಿ ಸಾನಿಯಾ ಯಾರು, ಅವರ ಹಿನ್ನೆಲೆ, ಕುಟುಂಬದ ಸಂಪತ್ತು ಎಷ್ಟು ಎಂಬ ಕುತೂಹಲವಿದೆ. ಸಾನಿಯಾ ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಅವರ ಕುಟುಂಬ ಬಾಸ್ಕಿನ್-ರಾಬಿನ್ಸ್ ಅನ್ನು ಭಾರತಕ್ಕೆ ತಂದಿದೆ. ಸಾನಿಯಾ ಅವರ ಕುಟುಂಬ ವ್ಯವಹಾರ ಕೋಟಿಗಟ್ಟಲೆ ಮೌಲ್ಯದ್ದಾಗಿದ್ದು, ಅರ್ಜುನ್ಗಿಂತ ಹೆಚ್ಚು ಸಂಪತ್ತು ಹೊಂದಿದ್ದಾರೆ.
- Shreelaxmi H
- Updated on: Mar 7, 2026
- 10:41 am
ಒಂದೇ ಚಿತ್ರದಲ್ಲಿ ಶಿವಣ್ಣ, ಶಾರುಖ್, ರಜನಿ, ಮೋಹನ್ಲಾಲ್
ಶಾರುಖ್ ಖಾನ್ 'ಜೈಲರ್ 2' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ರಜನಿಕಾಂತ್ ಅವರ ಋಣ ತೀರಿಸಿದ್ದಾರೆ. ಶಾರುಖ್ ಅವರ 'ರಾ ಒನ್' ಚಿತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದರು. ಮೋಹನ್ ಲಾಲ್ ಸ್ಟೈಲಿಸ್ಟ್ ಜಿಶಾದ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ರಜನಿಕಾಂತ್, ಶಿವಣ್ಣ, ಮೋಹನ್ ಲಾಲ್ ಸೇರಿದಂತೆ ಹಲವು ಸ್ಟಾರ್ ನಟರು 'ಜೈಲರ್ 2'ರಲ್ಲಿ ನಟಿಸಿದ್ದಾರೆ, ಇದು ಭಾರಿ ನಿರೀಕ್ಷೆ ಹುಟ್ಟಿಸಿದೆ.
- Shreelaxmi H
- Updated on: Mar 7, 2026
- 8:25 am
ಹೊಸ ಉದ್ಯಮ ಆರಂಭಿಸಿದ ಗೌತಮ್; ಹೊಸ ಅಧ್ಯಾಯಕ್ಕೆ ನಾಂದಿ
'ಅಮೃತಧಾರೆ' ಧಾರಾವಾಹಿಯಲ್ಲಿ ಕೌಟುಂಬಿಕ ಮೋಸದ ನಂತರ ಗೌತಮ್ ಮಹತ್ವದ ನಿರ್ಧಾರ ಮಾಡಿದ್ದಾನೆ. ಈವರೆಗೂ ಉದ್ಯಮ ಆರಂಭಿಸದ ಗೌತಮ್, ಇದೀಗ ಬ್ರೋಕರ್ ಆ್ಯಪ್ ಸ್ಟಾರ್ಟ್ಅಪ್ ಶುರು ಮಾಡಿದ್ದಾನೆ. ದೀವಾನ್ ಗ್ರೂಪ್ ಎದುರಾಳಿ ಜೊತೆ ಕೈಜೋಡಿಸಿರುವ ಈ ನಡೆ ಜಯದೇವ್ಗೆ ಭಯ ಹುಟ್ಟಿಸಿದೆ. ಗೌತಮ್ ಉದ್ಯಮ ಧಾರಾವಾಹಿಗೆ ಹೊಸ ಆಯಾಮ ನೀಡಿದೆ.
- Shreelaxmi H
- Updated on: Mar 7, 2026
- 7:53 am
ಮಾರ್ಚ್9ರಿಂದ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ರಾಣಿ’
ಕಲರ್ಸ್ ಕನ್ನಡದಲ್ಲಿ ಮಾರ್ಚ್ 9ರಿಂದ ಸಂಜೆ 6 ಗಂಟೆಗೆ ಪ್ರಸಾರವಾಗಲಿರುವ ಹೊಸ ಧಾರಾವಾಹಿ 'ರಾಣಿ'. ಅಮ್ಮ-ಮಗಳ ನಿಷ್ಕಲ್ಮಶ ಪ್ರೀತಿ, ಜೈಲಿನಿಂದ ಹೊರಬಂದ ಮುಗ್ಧ ರಾಣಿಯ ಹೊರಜಗತ್ತಿನ ಸಮಸ್ಯೆಗಳ ಕಥೆ ಇದು. ಬಾಲ ನಟಿ ಧನ್ವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಮಾಜದ ದೃಷ್ಟಿಕೋನ ಮತ್ತು ಪ್ರೀತಿಯ ಶಕ್ತಿಯನ್ನು ಸಾರುವ ಈ ಭಿನ್ನ ಕಥೆಯ ಧಾರಾವಾಹಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
- Shreelaxmi H
- Updated on: Mar 6, 2026
- 10:47 am
ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?
ಕಳೆದ ವಾರದಿಂದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ವಿವಾಹದ ಸುದ್ದಿ ಟ್ರೆಂಡಿಂಗ್ನಲ್ಲಿದೆ. 'ವಿರೋಶ್' ಹೆಸರಿನಲ್ಲಿ ಚರ್ಚೆಯಾಗುತ್ತಿರುವ ಈ ಮದುವೆ, ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದಿದೆ . ವಿಜಯ್ ತವರಿನಲ್ಲಿ ಸತ್ಯನಾರಾಯಣ ಪೂಜೆ ನಡೆದಿದೆ. ಗ್ರಾಮಸ್ಥರಿಗೆ ಮತ್ತು ಅಭಿಮಾನಿಗಳಿಗೆ ಔತಣಕೂಟ ಸೇರಿದಂತೆ, ಸಾಕಷ್ಟು ಖರ್ಚಾಗಿದೆ.
- Shreelaxmi H
- Updated on: Mar 6, 2026
- 8:43 am