AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಶ್ರೀಲಕ್ಷ್ಮೀ ಎಚ್

ಶ್ರೀಲಕ್ಷ್ಮೀ ಎಚ್

Author - TV9 Kannada

shreedevhegde@Gmail.com

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಬಿಗ್ ಬಾಸ್ ವಿನ್ನರ್ ಘೋಷಣೆ ಮಾಡಿದ ನಟ ರಿತೇಶ್ ದೇಶ್​​ಮುಖ್

ಬಿಗ್ ಬಾಸ್ ವಿನ್ನರ್ ಘೋಷಣೆ ಮಾಡಿದ ನಟ ರಿತೇಶ್ ದೇಶ್​​ಮುಖ್

ಬಿಗ್ ಬಾಸ್ ಮರಾಠಿ ಸೀಸನ್ 6 ಗ್ರ್ಯಾಂಡ್ ಫಿನಾಲೆಯಲ್ಲಿ ತನ್ವಿ ಕೋಲ್ಟೆ ವಿಜೇತರಾಗಿ ಹೊರಹೊಮ್ಮಿದ್ದಾರೆ. 15 ಲಕ್ಷ ನಗದು, ವಜ್ರದ ವೋಚರ್ ಮತ್ತು ಇ-ಬೈಕ್ ಗೆದ್ದ ತನ್ವಿ, ತಮ್ಮ ಪ್ರಯಾಣದ ಬಗ್ಗೆ ಮಾತನಾಡಿದರು. ಈ ಗೆಲುವನ್ನು ಕುಟುಂಬಕ್ಕೆ ಹಾಗೂ ತಮ್ಮನ್ನು ನಂಬಿದವರಿಗೆ ಅರ್ಪಿಸಿದ್ದಾರೆ. ಬಿಗ್ ಬಾಸ್ ಮರಾಠಿ ತಮ್ಮನ್ನು ಬ್ರ್ಯಾಂಡ್ ಆಗಿ ಪರಿವರ್ತಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ದುಡ್ಡು ಮಾಡಲು ಅಶ್ಲೀಲ ಫೋಟೋ ಹಂಚಿಕೊಂಡ ನಟಿ? ಅಸಲಿಯತ್ತು ಬೇರೆಯೇ ಇದೆ

ದುಡ್ಡು ಮಾಡಲು ಅಶ್ಲೀಲ ಫೋಟೋ ಹಂಚಿಕೊಂಡ ನಟಿ? ಅಸಲಿಯತ್ತು ಬೇರೆಯೇ ಇದೆ

ನಟಿ ಅನನ್ಯ ನಾಗಲ್ಲಾ ಇತ್ತೀಚೆಗೆ Instagram ನಲ್ಲಿ ಚಂದಾದಾರಿಕೆ ಆಯ್ಕೆಯನ್ನು ಪ್ರಾರಂಭಿಸಿ ವಿವಾದಕ್ಕೀಡಾಗಿದ್ದರು. ಕೆಲವರು ವಯಸ್ಕ ವಿಷಯ ಹಂಚುತ್ತಿದ್ದಾರೆಂದು ತಪ್ಪಾಗಿ ಭಾವಿಸಿದ್ದರು. ಇದಕ್ಕೆ ನಟಿ ತೀವ್ರ ತಿರುಗೇಟು ನೀಡಿದ್ದು, ತಮ್ಮ ಚಂದಾದಾರಿಕೆ ಕೇವಲ ಭಕ್ತಿ ವಿಷಯ, ವೈಯಕ್ತಿಕ ಜೀವನ ಮತ್ತು ದೇವಾಲಯ ಭೇಟಿಗಳ ಬಗ್ಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ವರ್ಷಕ್ಕೊಂದು ಅನಿಮೇಟೆಡ್ ಸಿನಿಮಾ; 10 ವರ್ಷದ ಪ್ಲ್ಯಾನ್ ರೆಡಿ ಮಾಡಿದ ಹೊಂಬಾಳೆ

ಎರಡು ವರ್ಷಕ್ಕೊಂದು ಅನಿಮೇಟೆಡ್ ಸಿನಿಮಾ; 10 ವರ್ಷದ ಪ್ಲ್ಯಾನ್ ರೆಡಿ ಮಾಡಿದ ಹೊಂಬಾಳೆ

ಹೊಂಬಾಳೆ ಫಿಲ್ಮ್ಸ್ 'ಮಹಾವತಾರ ಸಿನಿಮ್ಯಾಟಿಕ್ ಯೂನಿವರ್ಸ್' ಘೋಷಿಸಿದ್ದು, ವಿಷ್ಣುವಿನ ದಶಾವತಾರ ಆಧಾರಿತ ಅನಿಮೇಟೆಡ್ ಚಿತ್ರಗಳನ್ನು ಎರಡು ವರ್ಷಕ್ಕೊಮ್ಮೆ ಬಿಡುಗಡೆ ಮಾಡಲು 10 ವರ್ಷದ ಯೋಜನೆ ರೂಪಿಸಿದೆ. 'ಮಹಾವತಾರ ನರಸಿಂಹ'ದ ಯಶಸ್ಸಿನ ನಂತರ, 'ಮಹಾವತಾರ ಪರಶುರಾಮ' ಡಿಸೆಂಬರ್ 2027ಕ್ಕೆ ಬರಲಿದೆ. ಭಾರತೀಯ ಪುರಾಣಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತರುವುದು ಇದರ ಗುರಿ.

ಸದ್ಯಕ್ಕಂತೂ ಆಗಲ್ಲ ‘ಹೇರಾ ಫೇರಿ 3’; ಅಕ್ಷಯ್ ಕೊಟ್ಟ ಕಾರಣ ಏನು?

ಸದ್ಯಕ್ಕಂತೂ ಆಗಲ್ಲ ‘ಹೇರಾ ಫೇರಿ 3’; ಅಕ್ಷಯ್ ಕೊಟ್ಟ ಕಾರಣ ಏನು?

ಅಕ್ಷಯ್ ಕುಮಾರ್ 'ಹೇರಾ ಫೇರಿ 3' ಸದ್ಯಕ್ಕೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಳಂಬಕ್ಕೆ ಪ್ರಮುಖ ಕಾರಣ ರಿವೀಲ್ ಮಾಡಿದ್ದಾರೆ. ಈ ಬದಲಿಗೆ 'ವೆಲ್‌ಕಮ್ 3' ಕಡೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಹಿಂದಿನ ಎರಡು ಭಾಗಗಳು ಭಾರಿ ಯಶಸ್ಸು ಕಂಡಿದ್ದರಿಂದ, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರೂ, ಚಿತ್ರ ನಿರ್ಮಾಣಕ್ಕೆ ಮತ್ತಷ್ಟು ಸಮಯ ಬೇಕಾಗಬಹುದು.

ಸತತ ಸೋಲಿನ ಸುಳಿಯಲ್ಲಿರುವ ಅಕ್ಷಯ್ ಕುಮಾರ್ ಸಂಭಾವನೆಯಲ್ಲಿ ಭಾರೀ ಕಡಿತ

ಸತತ ಸೋಲಿನ ಸುಳಿಯಲ್ಲಿರುವ ಅಕ್ಷಯ್ ಕುಮಾರ್ ಸಂಭಾವನೆಯಲ್ಲಿ ಭಾರೀ ಕಡಿತ

ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ 16 ವರ್ಷಗಳ ನಂತರ 'ಭೂತ್ ಬಾಂಗ್ಲಾ' ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ಹಾರರ್ ಕಾಮಿಡಿ ಚಿತ್ರದಲ್ಲಿ ಅಕ್ಷಯ್ ತಮ್ಮ ಸಂಭಾವನೆಯನ್ನು ಶೇಕಡಾ 28.5 ರಷ್ಟು ಕಡಿಮೆ ಮಾಡಿಕೊಂಡರೂ, ಅತಿ ಹೆಚ್ಚು ವೇತನ ಪಡೆದ ನಟರಾಗಿದ್ದಾರೆ. ಟಬು, ವಾಮಿಕಾ ಗಬ್ಬಿ, ಪರೇಶ್ ರಾವಲ್ ಮತ್ತು ರಾಜ್‌ಪಾಲ್ ಯಾದವ್ ಸೇರಿದಂತೆ ಇತರ ಪ್ರಮುಖ ಕಲಾವಿದರ ಸಂಭಾವನೆ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಅಂಬರೀಷ್ ಬೈದರೂ ಜನರಿಗೆ ಏಕೆ ಇಷ್ಟ ಆಗುತ್ತಿತ್ತು? ವಿವರಿಸಿದ್ದ ರೆಬೆಲ್ ಸ್ಟಾರ್

ಅಂಬರೀಷ್ ಬೈದರೂ ಜನರಿಗೆ ಏಕೆ ಇಷ್ಟ ಆಗುತ್ತಿತ್ತು? ವಿವರಿಸಿದ್ದ ರೆಬೆಲ್ ಸ್ಟಾರ್

ರೆಬೆಲ್ ಸ್ಟಾರ್ ಅಂಬರೀಷ್ ಅವರ ವ್ಯಕ್ತಿತ್ವ ಭಿನ್ನವಾಗಿತ್ತು. ಅವರು ಬೈದರೂ ಅಭಿಮಾನಿಗಳು ಅವರನ್ನು ಪ್ರೀತಿಸುತ್ತಿದ್ದರು. ಪ್ರೀತಿಯ ಮಾತುಗಳ ಬದಲು, ಅವರ "ಕಠಿಣ" ನುಡಿಗಳೇ ಕಾಳಜಿ ಮತ್ತು ವಾತ್ಸಲ್ಯದ ಸಂಕೇತವಾಗಿದ್ದವು. ಮಂಡ್ಯದ ಜನರನ್ನು ಉದಾಹರಣೆಯಾಗಿ ನೀಡಿ, ತಾವು ಬೈದರೂ ಜನರು ಅದನ್ನು ಆಶೀರ್ವಾದವಾಗಿ ಸ್ವೀಕರಿಸುತ್ತಿದ್ದರು ಎಂದು ಅಂಬರೀಷ್ ಅವರೇ ವಿವರಿಸಿದ್ದರು.

ಸೋಪ್ ಕಂಪನಿ ಜಾಹೀರಾತು ಪ್ರಕರಣದಲ್ಲಿ ಕೋರ್ಟ್​​ಗೆ ಹೋದ ತಮನ್ನಾಗೆ ಹಿನ್ನಡೆ

ಸೋಪ್ ಕಂಪನಿ ಜಾಹೀರಾತು ಪ್ರಕರಣದಲ್ಲಿ ಕೋರ್ಟ್​​ಗೆ ಹೋದ ತಮನ್ನಾಗೆ ಹಿನ್ನಡೆ

ನಟಿ ತಮನ್ನಾ ಭಾಟಿಯಾ ಅವರು ಸೋಪ್ ಕಂಪನಿಯೊಂದರ ವಿರುದ್ಧ ಸಲ್ಲಿಸಿದ್ದ 1 ಕೋಟಿ ಪರಿಹಾರ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. 2008ರ ಒಪ್ಪಂದದ ನಂತರವೂ ತಮ್ಮ ಫೋಟೋಗಳನ್ನು ಬಳಸಲಾಗಿದೆ ಎಂದು ತಮನ್ನಾ ಆರೋಪಿಸಿದ್ದರು. ಆದರೆ, ಒಪ್ಪಂದದ ಅವಧಿ ಮುಗಿದ ನಂತರ ಜಾಹೀರಾತುಗಳನ್ನು ಪ್ರಸಾರ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿ, 16 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ ಎಳೆದಿದೆ.

ದೇವರಾಜ್​​ಗೆ ಈ ಇಬ್ಬರು ಹೀರೋಗಳ ಮೇಲಿದೆ ವಿಶೇಷ ಗೌರವ

ದೇವರಾಜ್​​ಗೆ ಈ ಇಬ್ಬರು ಹೀರೋಗಳ ಮೇಲಿದೆ ವಿಶೇಷ ಗೌರವ

ನಟ ದೇವರಾಜ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ತೆಲುಗು ಚಿತ್ರರಂಗದ ದಿಗ್ಗಜರಾದ ಚಿರಂಜೀವಿ ಮತ್ತು ನಂದಮೂರಿ ಬಾಲಕೃಷ್ಣ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ್ದಾರೆ. ಬಾಲಕೃಷ್ಣ ಅವರ ಶಿಸ್ತು, ವೃತ್ತಿ ಬದ್ಧತೆ ಮತ್ತು ಮಾನವೀಯತೆಯನ್ನು ಶ್ಲಾಘಿಸಿದರು. ಚಿರಂಜೀವಿ ಅವರ ಸ್ನೇಹಪರತೆ ಮತ್ತು ಸಹಾಯಕ ಗುಣವನ್ನು ವಿವರಿಸಿದರು.

ತಾಯಿನೇ ಹೊರ ಹಾಕಿದ ಜಯದೇವ್; ಒಬ್ಬಂಟಿಯಾಗ್ತಾನಾ ವಿಲನ್?

ತಾಯಿನೇ ಹೊರ ಹಾಕಿದ ಜಯದೇವ್; ಒಬ್ಬಂಟಿಯಾಗ್ತಾನಾ ವಿಲನ್?

Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ವಿಲನ್ ಜಯದೇವ್‌ನ ಪತನದ ಕಥೆ ರೋಚಕವಾಗಿದೆ. ತಾಯಿ ಶಕುಂತಲ, ಗೌತಮ್ ಹೊಗಳಿದಾಗ ಕೋಪಗೊಂಡ ಜಯದೇವ್ ಅಮ್ಮನನ್ನೇ ಮನೆಯಿಂದ ಹೊರಹಾಕಿದ್ದಾನೆ. ದೀವಾನ್ ಕಂಪನಿ ಲೋಗೋ ವಿವಾದ, ಪಾರ್ಥನ ದೂರವಾಗುವಿಕೆ ಹೀಗೆ ಹಲವು ಸಂಕಷ್ಟಗಳು ಜಯದೇವ್ ಸುತ್ತುವರೆದಿವೆ .

ವಿವಾಹದ ಬಳಿಕವೂ ಖ್ಯಾತ ನಟಿ ಜೊತೆ ಸಂಬಂಧ ಹೊಂದಿದ್ದ ಅಕ್ಷಯ್ ಕುಮಾರ್?

ವಿವಾಹದ ಬಳಿಕವೂ ಖ್ಯಾತ ನಟಿ ಜೊತೆ ಸಂಬಂಧ ಹೊಂದಿದ್ದ ಅಕ್ಷಯ್ ಕುಮಾರ್?

ನಟ ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ವಿವಾಹದ ನಂತರವೂ ಸಂಬಂಧ ಹೊಂದಿದ್ದರು ಎಂಬ ವದಂತಿಗಳು ಬಾಲಿವುಡ್‌ನಲ್ಲಿ ದೊಡ್ಡ ಸಂಚಲನ ಮೂಡಿಸಿವೆ. ಟ್ವಿಂಕಲ್ ಖನ್ನಾ ಅವರಿಗೆ ಈ ಸಂಬಂಧದ ಬಗ್ಗೆ ತಿಳಿದಾಗ ಅಕ್ಷಯ್ ಅವರ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ನಿರ್ದೇಶಕ ಸುನಿಲ್ ದರ್ಶನ್ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ದೃಢಪಡಿಸಿದ್ದು, ಅಕ್ಷಯ್ ಅವರ ವೃತ್ತಿಜೀವನಕ್ಕೂ ಇದು ಅಡ್ಡಿಯಾಗಿತ್ತು ಎಂದು ಹೇಳಿದ್ದಾರೆ.

ಜಯದೇವ್​​ಗೆ ಶಾಕ್ ಕೊಟ್ಟ ಗೌತಮ್; ಲೋಗೋ ವಿವಾದಕ್ಕೆ ತೆರೆ

ಜಯದೇವ್​​ಗೆ ಶಾಕ್ ಕೊಟ್ಟ ಗೌತಮ್; ಲೋಗೋ ವಿವಾದಕ್ಕೆ ತೆರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಜಯದೇವ್​ಗೆ ದೊಡ್ಡ ಶಾಕ್ ನೀಡಿದ್ದಾನೆ. ಕಂಪನಿಯ ಲೋಗೋ ತನ್ನದು ಎಂದು ಬೀಗುತ್ತಿದ್ದ ಜಯದೇವ್, ಕೊನೆಗೆ ಮುಖಭಂಗಕ್ಕೆ ಒಳಗಾಗಿದ್ದಾನೆ. ಲೋಗೋ ನೋಂದಣಿ ಪತ್ರದ ಮೂಲಕ ಅದು ಗೌತಮ್ ಹೆಸರಿನಲ್ಲಿದೆ ಎಂದು ಸಾಬೀತಾಗಿದ್ದು, ಹೀರೋ ಗೌತಮ್ ಮತ್ತೊಮ್ಮೆ ವಿಜಯ ಸಾಧಿಸಿದ್ದಾನೆ.

‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ

‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಹತ್ವದ ತಿರುವು ಎದುರಾಗಿದೆ. ದುರ್ಗಾ ಹಾಗೂ ಅಂಬಿಕಾ ಅಕ್ಕ-ತಂಗಿಯರೆಂಬ ಸತ್ಯ ಬಹಿರಂಗವಾಗಿದೆ. ಮಾಳವಿಕಾಳ ಮಾಟಕ್ಕೆ ಬಲಿಯಾಗಿದ್ದ ಅಂಬಿಕಾ ಆತ್ಮಕ್ಕೆ ಶ್ರಾದ್ಧ ಮಾಡಿಸಿದ್ದು ದುರ್ಗಾ. ಗೆಜ್ಜೆಯ ಮೂಲಕ ಸೋದರಿ ಸಂಬಂಧ ಅರಿತು ದುರ್ಗಾ ಶಾಕ್‌ಗೆ ಒಳಗಾಗಿದ್ದಾಳೆ .