ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.
ಮಾಡೆಲ್ ಮನೆಯಿಂದ 34 ಲಕ್ಷ ರೂ. ಮೌಲ್ಯದ ಆಭರಣ ಕದ್ದ ಮನೆಕೆಲಸದಾಕೆ
ನಟಿ ನೇಹಾ ಮಲಿಕ್ ಅವರ ಮುಂಬೈನ ಮನೆಯಿಂದ 34 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಕಳುವಾಗಿವೆ. ಪೊಲೀಸರು ನೇಹಾ ಅವರ ಮನೆ ಕೆಲಸದಾಕೆ ಶಹನತ್ ಶೇಖ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಶಹನತ್ ಪ್ರಸ್ತುತ ತಲೆಮರೆಸಿಕೊಂಡಿದ್ದಾಳೆ. ಘಟನೆ ಸಂಭವಿಸಿದ ಸಮಯದಲ್ಲಿ ನೇಹಾ ಅವರ ತಾಯಿ ಮನೆಯಲ್ಲಿ ಇರಲಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
- Shreelaxmi H
- Updated on: Apr 30, 2025
- 2:56 pm
ಸಿಗದ ಸ್ಟಾರ್ ನಟರ ಕಾಲ್ಶೀಟ್; ಸೂಪರ್ ಹಿಟ್ ನಿರ್ದೇಶಕನಿಗೆ ಈಗ ಇದೆಂಥಾ ಸ್ಥಿತಿ?
ಖ್ಯಾತ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಅವರ ಚಿತ್ರಗಳಿಗೆ ಸ್ಟಾರ್ ನಟರ ಕಾಲ್ ಶೀಟ್ ಸಿಗದಿರುವುದು ಚರ್ಚೆಗೆ ಕಾರಣವಾಗಿದೆ. ‘ಗುಂಟೂರು ಕಾರಂ’ ಚಿತ್ರದ ವೈಫಲ್ಯ ತ್ರಿವಿಕ್ರಂ ಅವರ ಮುಂದಿನ ಯೋಜನೆಗಳ ಮೇಲೆ ಪರಿಣಾಮ ಬೀರಿವೆ. ಈಗ ಅವರು ಹಳೆಯ ಯೋಜನೆಗಳನ್ನು ಮುಂದುವರಿಸುವ ಸಾಧ್ಯತೆಯಿದೆ ಎಂದು ವರದಿ ಆಗಿದೆ.
- Shreelaxmi H
- Updated on: Apr 30, 2025
- 10:14 am
ಶಶಿಕುಮಾರ್ ಬಂದು ಆಫರ್ ಕಿತ್ತುಕೊಂಡಾಗ ಅತ್ತಿದ್ದ ಜಗ್ಗೇಶ್; ಇಲ್ಲಿದೆ ಅಪರೂಪದ ಘಟನೆ
ಜಗ್ಗೇಶ್ ಅವರು ತಮ್ಮ ಯೌವನದಲ್ಲಿ ಇದ್ದಾಗ ಸಾಕಷ್ಟು ಸಿನಿಮಾ ಮಾಡುತ್ತಿದ್ದರು. ಅದೇ ರೀತಿ ಅನೇಕ ಆಫರ್ಗಳನ್ನು ಕಳೆದುಕೊಂಡಿದ್ದರು. ಅವರು ನಟಿಸಬೇಕಿದ್ದ ಸಿನಿಮಾದಲ್ಲಿ ಶಶಿಕುಮಾರ್ ಅವರನ್ನು ಕರೆದುಕೊಂಡಿದ್ದರು. ಈ ಬಗ್ಗೆ ಅವರು ಮಾತನಾಡಿದ್ದರು. ಆ ಫನ್ನಿ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
- Shreelaxmi H
- Updated on: Apr 30, 2025
- 8:16 am
‘ಒಡಹುಟ್ಟಿದವರು’ ಸಿನಿಮಾ ಮಾಡಲು ರಾಜ್ಕುಮಾರ್ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್
ರಾಜ್ಕುಮಾರ್ ಮತ್ತು ಅಂಬರೀಷ್ ಅವರ ನಡುವೆ ಅಪ್ರತಿಮ ಬಾಂಧವ್ಯ ಇತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. 'ಒಡಹುಟ್ಟಿದವರು' ಚಿತ್ರದ ಚಿತ್ರೀಕರಣದ ಒಂದು ಅಪರೂಪದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಅಂಬರೀಷ್ ಅವರು ಚಿತ್ರದ ಕಥೆ ಕೇಳದೆ, ರಾಜ್ಕುಮಾರ್ ಅವರಿಗೆ ಎರಡು ಷರತ್ತುಗಳನ್ನು ವಿಧಿಸಿ ಚಿತ್ರದಲ್ಲಿ ನಟಿಸಿದರು.
- Shreelaxmi H
- Updated on: Apr 30, 2025
- 8:01 am
ಶಿವರಾಜ್ಕುಮಾರ್ ಜೊತೆ ನಟಿಸಿದ ಈ ನಟಿ ಈಗ ಐಟಿ ಉದ್ಯೋಗಿ
ಲಯಾ, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ನಟಿ, ತಮ್ಮ ಚಿಕ್ಕ ವಯಸ್ಸಿನಲ್ಲೇ ನಟನಾ ವೃತ್ತಿ ಆರಂಭಿಸಿ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ವಿವಾಹದ ನಂತರ ಅವರು ಚಿತ್ರರಂಗಕ್ಕೆ ವಿದಾಯ ಹೇಳಿ ಅಮೆರಿಕದಲ್ಲಿ ನೆಲೆಸಿ ಐಟಿ ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಯಶಸ್ವಿ ನಟನಾ ವೃತ್ತಿ ಮತ್ತು ಅದರ ನಂತರದ ವೃತ್ತಿಪರ ಬದಲಾವಣೆಯ ಬಗ್ಗೆ ಈ ಲೇಖನ ವಿವರಿಸುತ್ತದೆ. ಅವರು ಚಿತ್ರರಂಗಕ್ಕೆ ಮರಳುವ ಬಗ್ಗೆ ಯೋಚಿಸುತ್ತಿದ್ದಾರೆ ಎಂಬುದು ಸಹ ಲೇಖನದಲ್ಲಿ ತಿಳಿಸಲಾಗಿದೆ.
- Shreelaxmi H
- Updated on: Apr 29, 2025
- 7:31 pm
‘ಬಾಹುಬಲಿ 2’ ಚಿತ್ರಕ್ಕೆ 8 ವರ್ಷ; ರೀ-ರಿಲೀಸ್ ದಿನಾಂಕ ಘೋಷಣೆ
'ಬಾಹುಬಲಿ 2' ಚಿತ್ರವು ತನ್ನ 8ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಚಿತ್ರದ ಮರುಬಿಡುಗಡೆಯನ್ನು ಘೋಷಿಸಲಾಗಿದೆ. ನಿರ್ಮಾಪಕರು ಈ ಸುದ್ದಿಯನ್ನು ಅನೌನ್ಸ್ ಮಾಡಿದ್ದು, ಹಲವು ಆಶ್ಚರ್ಯಕರ ಅಂಶಗಳನ್ನು ಚಿತ್ರದಲ್ಲಿ ಸೇರಿಸಲಾಗುವುದು ಎಂಬ ಮಾಹಿತಿ. ಈ ಸುದ್ದಿಯು ಪ್ರಭಾಸ್, ಅನುಷ್ಕಾ ಶೆಟ್ಟಿ ಮತ್ತು ರಾಜಮೌಳಿ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.
- Shreelaxmi H
- Updated on: Apr 29, 2025
- 10:58 am
ನಿರಂಜನ್ ನಗು ಮುಖದ ಹಿಂದಿದೆ ನೋವಿನ ಕಥೆ; ಹಗ್ ಮಾಡಿ ಸಮಾಧಾನ ಮಾಡಿದ ರಚಿತಾ
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ರಲ್ಲಿ, ನಿರಂಜನ್ ತಮ್ಮ ಕುಟುಂಬದ ಸಮಸ್ಯೆಗಳನ್ನು ಬಹಿರಂಗಪಡಿಸಿದರು. ಅವರ ತಂದೆ-ತಾಯಿ ಮತ್ತು ಅಕ್ಕ ಬೇರೆ ಬೇರೆ ವಾಸಿಸುತ್ತಿದ್ದಾರೆ ಎಂದು ಹೇಳಿದರು. ಈ ನೋವನ್ನು ಮರೆಮಾಚಿ ನಗುವಿನ ಮುಖವಾಡ ಧರಿಸುವ ನಿರಂಜನ್ ಅವರನ್ನು ಕಂಡು ರಚಿತಾ ರಾಮ್ ಸಾಂತ್ವನ ಹೇಳಿ ಹಗ್ ಮಾಡಿದರು. ಅವರ ತಂದೆಯೊಂದಿಗೆ ಫೋನ್ ಕರೆ ಮೂಲಕ ಮಾತನಾಡುವ ಅವಕಾಶವನ್ನೂ ಕಾರ್ಯಕ್ರಮ ಒದಗಿಸಿತು.
- Shreelaxmi H
- Updated on: Apr 29, 2025
- 8:17 am
ಆ ಹಾಡು ಕೇಳಿ ಅತ್ತಿದ್ದ ಪುಟ್ಟಣ್ಣ ಕಣಗಾಲ್; ಹಾಡಿದ್ದಕ್ಕೆ ಸಂಭಾವನೆಯೇ ಬೇಡವೆಂದ ಎಸ್ಪಿಬಿ
ಶ್ರೀನಾಥ್ ಅವರು "ಸರಿಗಮಪ" ಕಾರ್ಯಕ್ರಮದಲ್ಲಿ ಪುಟ್ಟಣ್ಣ ಕಣಗಾಲ್ ಅವರ "ಮಾನಸ ಸರೋವರ" ಚಿತ್ರದ ಚಿತ್ರೀಕರಣದ ಸ್ಮರಣೀಯ ಅನುಭವವನ್ನು ಹಂಚಿಕೊಂಡಿದ್ದಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ "ನೀನೆ ಸಾಕಿದ ಗಿಣಿ" ಹಾಡು ಪುಟ್ಟಣ್ಣ ಅವರನ್ನು ಭಾವುಕರನ್ನಾಗಿಸಿತ್ತು ಎಂದು ಅವರು ಹೇಳಿದ್ದಾರೆ. ಈ ಹಾಡಿನ ಸ್ಮರಣೆ ಎಸ್.ಪಿ.ಬಿ ಅವರ ನೆನಪುಗಳನ್ನು ಮರುಕಳಿಸುತ್ತದೆ ಎಂದು ಶ್ರೀನಾಥ್ ಹೇಳಿದ್ದಾರೆ.
- Shreelaxmi H
- Updated on: Apr 29, 2025
- 7:59 am
ಸಮಂತಾ ಜನ್ಮದಿನ: ನಟಿಯ ವರ್ಷದ ಗಳಿಕೆ, ಒಟ್ಟೂ ಆಸ್ತಿ ಎಷ್ಟು?
Samantha Birthday: ಸಮಂತಾ ಅವರ 38ನೇ ಜನ್ಮದಿನದಂದು, ಅವರ ಒಟ್ಟು ಆಸ್ತಿ, ವಾರ್ಷಿಕ ಗಳಿಕೆ ಮತ್ತು ಯಶಸ್ವಿ ವೃತ್ತಿ ಜೀವನದ ಬಗ್ಗೆ ತಿಳಿದುಕೊಳ್ಳೋಣ. ಅವರು 101 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ ಮತ್ತು ಪ್ರತಿ ವರ್ಷ ಬ್ರ್ಯಾಂಡ್ ಪ್ರಚಾರದಿಂದ 8 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. 'ಯೇ ಮಾಯ ಚೇಸಾವೆ', 'ಓ ಬೇಬಿ' ಸಿನಿಮಾ, 'ದಿ ಫ್ಯಾಮಿಲಿ ಮ್ಯಾನ್ 2' ರೀತಿಯ ವೆಬ್ ಸರಣಿಗಳನ್ನು ನೀಡಿದ್ದಾರೆ.
- Shreelaxmi H
- Updated on: Apr 28, 2025
- 10:46 am
ಇಡಿ ವಿಚಾರಣೆಗೆ ಹಾಜರಿ ಹಾಕಲ್ಲ ಮಹೇಶ್ ಬಾಬು; ಕಾರಣ ಇಲ್ಲಿದೆ
ಮಹೇಶ್ ಬಾಬು ಅವರನ್ನು ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನ ಗ್ರೂಪ್ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಕರೆಯಲಾಗಿದೆ. ಆದರೆ, ಚಿತ್ರೀಕರಣದ ಕಾರಣದಿಂದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅವರು ಇಡಿಗೆ ಪತ್ರ ಬರೆದಿದ್ದಾರೆ. ಮಹೇಶ್ ಬಾಬು ಅವರು ತನಿಖೆಗೆ ಬೇರೆ ದಿನಾಂಕವನ್ನು ಕೋರಿದ್ದಾರೆ.
- Shreelaxmi H
- Updated on: Apr 28, 2025
- 8:13 am
ಉಗ್ರರ ಉದ್ದೇಶ ಹಾಳು ಮಾಡಲು ಕಾಶ್ಮೀರಕ್ಕೆ ಹೋದ ನಟ ಅತುಲ್ ಕುಲಕರ್ಣಿ
ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರದ ಪ್ರವಾಸೋದ್ಯಮ ಕುಸಿದಿದೆ. ನಟ ಅತುಲ್ ಕುಲಕರ್ಣಿ ಅವರು ಧೈರ್ಯ ತೋರಿ ಕಾಶ್ಮೀರಕ್ಕೆ ಭೇಟಿ ನೀಡಿ, ಪ್ರವಾಸಿಗರನ್ನು ಆಹ್ವಾನಿಸಿದ್ದಾರೆ. ಅವರ ಈ ಕ್ರಿಯೆ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಕಾಶ್ಮೀರದ ಸೌಂದರ್ಯವನ್ನು ಜಗತ್ತಿಗೆ ತೋರಿಸುವ ಮೂಲಕ ಅವರು ಭಯೋತ್ಪಾದನೆಯನ್ನು ಎದುರಿಸಲು ಪ್ರಯತ್ನಿಸುತ್ತಿದ್ದಾರೆ.
- Shreelaxmi H
- Updated on: Apr 28, 2025
- 7:53 am
500 ಕೋಟಿ ರೂಪಾಯಿ ವಜ್ರ ದೋಚುವ ಕಥೆ; ಒಟಿಟಿಯಲ್ಲಿರೋ ಸಿನಿಮಾನ ಮಿಸ್ ಮಾಡಬೇಡಿ
ಸೈಫ್ ಅಲಿ ಖಾನ್ ಅಭಿನಯದ "ಜ್ಯುವೆಲ್ ಥೀಫ್" ಚಿತ್ರವು 500 ಕೋಟಿ ರೂಪಾಯಿ ಮೌಲ್ಯದ ವಜ್ರದ ದರೋಡೆಯನ್ನು ಆಧರಿಸಿದೆ. ಮುಂಬೈ ವಸ್ತುಸಂಗ್ರಹಾಲಯದಿಂದ ವಜ್ರವನ್ನು ಕದಿಯುವ ನಾಯಕನ ಥ್ರಿಲ್ಲಿಂಗ್ ಪ್ರಯತ್ನವನ್ನು ಚಿತ್ರ ತೋರಿಸುತ್ತದೆ. ಪೊಲೀಸರ ಜೊತೆಗಿನ ಚೇಸ್ ಮತ್ತು ಆಕ್ಷನ್ ದೃಶ್ಯಗಳು ಚಿತ್ರಕ್ಕೆ ಹೈಲೈಟ್.
- Shreelaxmi H
- Updated on: Apr 27, 2025
- 6:30 am