ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.
ಸಲ್ಲು ತಂದೆ ಆರೋಗ್ಯ ಸ್ಥಿತಿ ಗಂಭೀರ? ಮೆದುಳು ಭಾಗದಲ್ಲಿ ಸರ್ಜರಿ
ಸಲ್ಮಾನ್ ಖಾನ್ ತಂದೆ, ಹಿರಿಯ ಕಥೆ ಬರಹಗಾರ ಸಲೀಂ ಖಾನ್ ರಕ್ತದೊತ್ತಡ ಏರಿಕೆಯಿಂದಾಗಿ ಮೆದುಳಿನ ಆಂತರಿಕ ರಕ್ತಸ್ರಾವದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಲ್ಮಾನ್ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
- Shreelaxmi H
- Updated on: Feb 18, 2026
- 11:01 am
‘ಆ ವ್ಯಕ್ತಿಗೆ ನಾನು ಯಾವಾಗಲೂ ಋಣಿ’; ಮದುವೆ ವದಂತಿ ಬೆನ್ನಲ್ಲೇ ಮೃಣಾಲ್ ಧನ್ಯವಾದ
ನಟಿ ಮೃಣಾಲ್ ಠಾಕೂರ್ ಧನುಷ್ ಜೊತೆಗಿನ ಮದುವೆ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮದುವೆಯ ಸುದ್ದಿಯನ್ನು ಅಲ್ಲಗಳೆದರೂ, ಈ ವದಂತಿಗಳು ತಮಗೆ ಕೋಟಿಗಟ್ಟಲೆ ಮೌಲ್ಯದ ಉಚಿತ ಪ್ರಚಾರ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪಿಆರ್ ಇಲ್ಲದೆ ಇಷ್ಟೊಂದು ಪ್ರಚಾರ ಸಿಕ್ಕಿದ್ದಕ್ಕೆ ವದಂತಿ ಸೃಷ್ಟಿಕರ್ತರಿಗೆ ಋಣಿಯಾಗಿದ್ದಾರೆ. ತಮ್ಮ ಮನೆಯ ವಿಳಾಸ ಸಾರ್ವಜನಿಕವಾದ ಕಾರಣ ಪಿಆರ್ ತಂಡವನ್ನು ನೇಮಿಸಿಕೊಳ್ಳುವ ಯೋಜನೆಯನ್ನೂ ಹಂಚಿಕೊಂಡಿದ್ದಾರೆ.
- Shreelaxmi H
- Updated on: Feb 18, 2026
- 8:09 am
‘ಧುರಂಧರ್ 2’ ಚಿತ್ರಕ್ಕೆ ಶಾಕ್; ಬ್ಯಾನ್ ಆಗುತ್ತಾ ಆದಿತ್ಯ ಧಾರ್ ನಿರ್ಮಾಣ ಸಂಸ್ಥೆ?
ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಚಿತ್ರದ ಚಿತ್ರೀಕರಣದ ವೇಳೆ ನಿಯಮ ಉಲ್ಲಂಘನೆಯ ಆರೋಪ ಎದುರಾಗಿದೆ. ನಿರ್ಮಾಪಕ ಬಿ62 ಸ್ಟುಡಿಯೋಸ್ ವಿರುದ್ಧ ಮುಂಬೈ ಮಹಾನಗರ ಪಾಲಿಕೆ (BMC) ಹಲವು ಆರೋಪಗಳನ್ನು ಮಾಡಿದೆ. ಅನುಮತಿಯಿಲ್ಲದೆ ಶೂಟಿಂಗ್ ಸ್ಥಳ ಬದಲಾವಣೆ, ಭದ್ರತಾ ಲೋಪ ಸೇರಿ ಹಲವು ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಪಾಲಿಕೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.
- Shreelaxmi H
- Updated on: Feb 18, 2026
- 7:50 am
ಬರ್ತಿದೆ ‘ತುಂಬಾಡ್ 2’ ಸಿನಿಮಾ; ಖಳನಾಗಿ ಅಕ್ಷಯ್ ಖನ್ನಾ ಎಂಟ್ರಿ?
2018ರ ಹಿಟ್ ಚಿತ್ರ 'ತುಂಬಾಡ್' ಮುಂದುವರಿದ ಭಾಗ 'ತುಂಬಾಡ್ 2' ಶೀಘ್ರದಲ್ಲೇ ತೆರೆಗೆ ಬರಲಿದೆ. ನಟ-ನಿರ್ಮಾಪಕ ಸೋಹಮ್ ಶಾ, ಪೆನ್ ಸ್ಟುಡಿಯೋಸ್ನ ಜಯಂತಿಲಾಲ್ ಗಡಾ ಜೊತೆ ಕೈಜೋಡಿಸಿದ್ದಾರೆ. ಈ ಬಾರಿ ವಿನಾಯಕ ರಾವ್ಗೆ ಪ್ರಬಲ ಎದುರಾಳಿಯ ಹುಡುಕಾಟದಲ್ಲಿದ್ದು, ಅಕ್ಷಯ್ ಖನ್ನಾ ಅಥವಾ ನವಾಜುದ್ದೀನ್ ಸಿದ್ದಿಕಿ ಅಭಿನಯಿಸುವ ಸಾಧ್ಯತೆ ಇದೆ.
- Shreelaxmi H
- Updated on: Feb 17, 2026
- 11:08 am
ಆಲಿಯಾ ಭಟ್ ಧರಿಸಿದ ಬಟ್ಟೆ ಮಾಡಲು ಬೇಕಾಯ್ತು 2 ತಿಂಗಳು
ಆಲಿಯಾ ಭಟ್ ರಾಹುಲ್ ಮಿಶ್ರಾ ವಿನ್ಯಾಸಗೊಳಿಸಿದ 'ಸಿಟಿಸ್ಕೇಪ್' ಸಂಗ್ರಹದ ಅದ್ದೂರಿ ಗೌನ್ನಲ್ಲಿ ಮಿಂಚಿದ್ದಾರೆ. 1370 ಗಂಟೆಗಳ ಶ್ರಮದಿಂದ ತಯಾರಾದ ಈ ಉಡುಗೆ ಗಾಜಿನ ಮತ್ತು ಸ್ಫಟಿಕ ಮಣಿಗಳು, ದಾರದ ಕಸೂತಿಯಿಂದ ಮಾಡಲಾಗಿದೆ. ಮಾಲಿನ್ಯ ಮತ್ತು ಹವಾಮಾನ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ.
- Shreelaxmi H
- Updated on: Feb 17, 2026
- 8:14 am
ಜೀ ಕನ್ನಡದ ಈ ಧಾರಾವಾಹಿ ಶೀಘ್ರವೇ ಪೂರ್ಣ?
ಜೀ ಕನ್ನಡದ ಯಶಸ್ವಿ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' 1100ಕ್ಕೂ ಹೆಚ್ಚು ಸಂಚಿಕೆಗಳ ನಂತರ ಮುಕ್ತಾಯಗೊಳ್ಳಲು ಸಿದ್ಧವಾಗಿದೆ. ಅತ್ಯಧಿಕ ಟಿಆರ್ಪಿ ಗಳಿಸಿದ್ದ ಈ ಧಾರಾವಾಹಿಯ ಅಂತ್ಯ ವೀಕ್ಷಕರಿಗೆ ನಿರಾಶೆ ಮೂಡಿಸಿದೆ. ಇದರ ಬದಲು 'ಕೃಷ್ಣ ರುಕ್ಕು' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದ್ದು, ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.
- Shreelaxmi H
- Updated on: Feb 17, 2026
- 7:52 am
ಟಾಲಿವುಡ್ನ ಮತ್ತೋರ್ವ ಸ್ಟಾರ್ ಹೀರೋಗೆ ನಾಯಕಿ ಆದ ರುಕ್ಮಿಣಿ ವಸಂತ್
ಕನ್ನಡದ ಜನಪ್ರಿಯ ನಟಿ ರುಕ್ಮಿಣಿ ವಸಂತ್ ಈಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಕ್ಕಿನೇನಿ ನಾಗ ಚೈತನ್ಯ ನಟನೆಯ ಮುಂದಿನ ಚಿತ್ರದಲ್ಲಿ ರುಕ್ಮಿಣಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಯಶಸ್ಸಿನ ನಂತರ ರುಕ್ಮಿಣಿ ಪರಭಾಷೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದ್ದಾರೆ. ಈ ಪ್ರೇಮಕಥೆಯ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.
- Shreelaxmi H
- Updated on: Feb 16, 2026
- 11:09 am
ಬಿಗ್ ಬಾಸ್ ಸ್ಪರ್ಧಿಗೆ ಬಂತು ಬೆದರಿಕೆ; 10 ಕೋಟಿ ರೂಪಾಯಿಗೆ ಬೇಡಿಕೆ
ಬಾಲಿವುಡ್ ಸೆಲೆಬ್ರಿಟಿಗಳಿಗೆ ಬೆದರಿಕೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ರೋಹಿತ್ ಶೆಟ್ಟಿ, ರಣವೀರ್ ಸಿಂಗ್ ನಂತರ ಈಗ ನಟಿ ಹಿಮಾಂಶಿ ಖುರಾನಾಗೆ ವಿದೇಶಿ ಗ್ಯಾಂಗ್ಸ್ಟರ್ನಿಂದ ₹10 ಕೋಟಿ ಸುಲಿಗೆ ಬೆದರಿಕೆ ಬಂದಿದೆ. ಹಿಮಾಂಶಿ ಮೊಹಾಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಅವರ ಕುಟುಂಬ ಆತಂಕಕ್ಕೊಳಗಾಗಿದೆ.
- Shreelaxmi H
- Updated on: Feb 16, 2026
- 8:08 am
ದರ್ಶನ್ ಪ್ರಾಣಿ ಪ್ರಿಯನಾಗಲು ಕಾರಣವಾದ ಅಂಶವೇನು ಗೊತ್ತೇ?
ನಟ ದರ್ಶನ್ ಅವರ ಬರ್ತ್ಡೇ ಸಂಭ್ರಮದಲ್ಲಿ, ಅವರ ಪ್ರಾಣಿಪ್ರಿಯತೆ ಎದ್ದು ಕಾಣುತ್ತದೆ. ಅರ್ಜುನ ಆನೆ ನಿಧನದ ನೋವಿನಲ್ಲಿ, ದರ್ಶನ್ ಸ್ಮಾರಕಕ್ಕೆ ಕಲ್ಲುಗಳನ್ನು ನೀಡಿದ್ದರು. ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ, ಅಭಿಮಾನಿಗಳಿಗೂ ಪ್ರೇರಣೆ ನೀಡಿದ್ದಾರೆ. ಮೈಸೂರಿನ ಫಾರ್ಮ್ಹೌಸ್ನಲ್ಲಿ ದನ-ಕುದುರೆ ಸಾಕಾಣಿಕೆ ಮೂಲಕ ತಮ್ಮ ಪ್ರಾಣಿ ಪ್ರೀತಿಯನ್ನು ನಿರಂತರವಾಗಿ ಪೋಷಿಸುತ್ತಿದ್ದಾರೆ.
- Shreelaxmi H
- Updated on: Feb 16, 2026
- 7:52 am
ಅಲ್ಲು ಅರ್ಜುನ್ ಕುಟುಂಬದಲ್ಲಿ ಹಳದಿ ಶಾಸ್ತ್ರ; ಫೋಟೋ ವೈರಲ್
ಅಲ್ಲು ಸಿರೀಶ್ ಅವರ ವಿವಾಹಪೂರ್ವ ಸಂಭ್ರಮಗಳು ಅದ್ಧೂರಿಯಾಗಿ ಆರಂಭವಾಗಿವೆ. ಇತ್ತೀಚೆಗೆ ನಡೆದ ಅರಿಶಿನ ಶಾಸ್ತ್ರದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅಲ್ಲು ಮತ್ತು ಮೆಗಾ ಕುಟುಂಬ ಸದಸ್ಯರು, ಸ್ನೇಹಿತರು ಭಾಗವಹಿಸಿದ್ದರು. ಉಪಾಸನಾ ಕೊನಿಡೇಲಾ ಸಮಾರಂಭದ ವಿಶೇಷ ಆಕರ್ಷಣೆಯಾಗಿದ್ದರು. ಮಾರ್ಚ್ 6 ರಂದು ಮದುವೆ ನಡೆಯಲಿದ್ದು, ಚಲನಚಿತ್ರ ಮತ್ತು ರಾಜಕೀಯ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
- Shreelaxmi H
- Updated on: Feb 14, 2026
- 8:10 am
ಕನ್ನಡ ಸೆಲೆಬ್ರಿಟಿ ಜೋಡಿಗಳ ಕ್ಯೂಟ್ ಲವ್ ಸ್ಟೋರಿ
ತೆರೆಯ ಮೇಲೆ ನಟನೆಯಿಂದ ಪ್ರೀತಿಗೆ ತಿರುಗಿದ ಅದೆಷ್ಟೋ ಸ್ಯಾಂಡಲ್ವುಡ್ ಜೋಡಿಗಳ ಕಥೆಗಳು ಈ ಲೇಖನದಲ್ಲಿವೆ. ಯಶ್-ರಾಧಿಕಾ, ದಿಗಂತ್-ಐಂದ್ರಿತಾ, ಅಂಬರೀಶ್-ಸುಮಲತಾ, ಕೃಷ್ಣ-ಮಿಲನಾ ಸೇರಿದಂತೆ ಹಲವು ಕನ್ನಡ ನಟ-ನಟಿಯರು ತಮ್ಮ ವೃತ್ತಿಜೀವನದಲ್ಲಿ, ಚಿತ್ರೀಕರಣದ ಸೆಟ್ಗಳಲ್ಲಿ ಹೇಗೆ ಪ್ರೀತಿಯನ್ನು ಕಂಡುಕೊಂಡು ಮದುವೆಯಾದರು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
- Shreelaxmi H
- Updated on: Feb 14, 2026
- 7:53 am
ಆ ಬದಲಾವಣೆ ಮಾಡಿದ್ದರೆ ಮಹೇಶ್ ಬಾಬು ನಟನೆಯ ಸಿನಿಮಾ ಹಿಟ್ ಆಗುತ್ತಿತ್ತು
ನಿರ್ದೇಶಕ ಸುಕುಮಾರ್ 'ಆರ್ಯ' ಮತ್ತು 'ಪುಷ್ಪ' ಚಿತ್ರಗಳ ಮೂಲಕ ಯಶಸ್ಸು ಕಂಡವರು. ಇತ್ತೀಚೆಗೆ ಅವರು ತಮ್ಮ ನಿರ್ದೇಶನದ ಮಹೇಶ್ ಬಾಬು ನಟನೆಯ '1 ನೆನೊಕ್ಕಡಿನೆ' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ವಾಣಿಜ್ಯಿಕವಾಗಿ ವಿಫಲವಾದರೂ, ಚಿತ್ರಕ್ಕೆ ಪರ್ಯಾಯ ಕಥಾಹಂದರವಿತ್ತು. ನಾಯಕನ ಮಾನಸಿಕ ಸಮಸ್ಯೆ ನಾಟಕವಾಗಿತ್ತು ಎಂಬ ಆ ಆವೃತ್ತಿಯನ್ನು ಬದಲಾಯಿಸಿದ್ದರಿಂದ ಚಿತ್ರ ಯಶಸ್ವಿಯಾಗುವ ಅವಕಾಶ ಕಳೆದುಕೊಂಡಿತು ಎಂದು ಸುಕುಮಾರ್ ಹೇಳಿದ್ದಾರೆ.
- Shreelaxmi H
- Updated on: Feb 13, 2026
- 11:08 am