ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.
‘ಧುರಂಧರ’ ನಿರ್ಮಾಪಕರ ಹೆಸರಲ್ಲಿ ರಾಹುಲ್ ಗಾಂಧಿ ಹೆಸರು
ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರ ಭಾರತದಲ್ಲಿ 350 ಕೋಟಿಗೂ ಹೆಚ್ಚು ಬಾಚಿಕೊಂಡು ಬ್ಲಾಕ್ಬಸ್ಟರ್ ಆಗಿದೆ. ಆದರೆ ಚಿತ್ರದ ಕಾರ್ಯಕಾರಿ ನಿರ್ಮಾಪಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ ಹೆಸರು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಹಾಗಾದರೆ ಈ ಹೆಸರು ಏಕೆ ಬಂತು? ಆ ಬಗ್ಗೆ ಇಲ್ಲಿದೆ ವಿವರ.
- Shreelaxmi H
- Updated on: Dec 15, 2025
- 1:47 pm
ಪ್ರಧಾನಿ ಮೋದಿ ‘ಅಖಂಡ 2’ ಸಿನಿಮಾ ವೀಕ್ಷಿಸುತ್ತಾರೆ ಎಂದು ಮಾಹಿತಿ ನೀಡಿದ ನಿರ್ದೇಶಕ ಬೋಯಪಾಟಿ ಶ್ರೀನು
ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2 ತಾಂಡವಂ' ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಸನಾತನ ಧರ್ಮ ಮತ್ತು ಭಕ್ತಿಯನ್ನು ಪ್ರದರ್ಶಿಸುವ ಈ ಚಿತ್ರದಲ್ಲಿ ಬಾಲಯ್ಯ ಅವರ ಅಘೋರ ಪಾತ್ರ ಪ್ರೇಕ್ಷಕರನ್ನು ಆಕರ್ಷಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಈ ಚಿತ್ರವನ್ನು ವೀಕ್ಷಿಸಲಿದ್ದಾರೆ ಎಂದು ನಿರ್ದೇಶಕ ಬೋಯಪಾಟಿ ಶ್ರೀನು ಘೋಷಿಸಿದ್ದಾರೆ.
- Shreelaxmi H
- Updated on: Dec 15, 2025
- 10:19 am
ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಕೆಲವರಿಗೆ ಮಾತ್ರ ಬಯ್ಯೋದೇಕೆ? ಕಿಚ್ಚನೇ ಕೊಟ್ಟರು ಉತ್ತರ
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಸ್ಪರ್ಧಿಗಳನ್ನು ಏಕೆ ಬಯ್ಯುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಉತ್ತಮವಾಗಿ ಆಡುವವರು ಸಣ್ಣ ತಪ್ಪುಗಳಿಂದ ಹಾಳಾಗಬಾರದೆಂಬ ಕಾರಣಕ್ಕೆ ಅವರನ್ನು ತಿದ್ದುತ್ತಾರೆ. ದುರ್ಬಲ ಸ್ಪರ್ಧಿಗಳ ಮೇಲೆ ಶಕ್ತಿ ವ್ಯಯಿಸುವುದಿಲ್ಲ. ಪ್ರತೀ ಶನಿವಾರದ ಸಂಚಿಕೆಗೂ ಮುನ್ನ, ಸೂಕ್ತ ಮಾಹಿತಿ ಪಡೆಯಲು ಇಡೀ ವಾರದ ಎಪಿಸೋಡ್ಗಳನ್ನು ವೀಕ್ಷಿಸಿ ಸಿದ್ಧರಾಗುತ್ತಾರೆ ಎಂದು ಸುದೀಪ್ ತಿಳಿಸಿದ್ದಾರೆ.
- Shreelaxmi H
- Updated on: Dec 15, 2025
- 7:57 am
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಬಗ್ಗೆ ಸುದೀಪ್ ಕೊಟ್ಟರು ಮಾಹಿತಿ
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗಿದ್ದು, ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಪ್ರಮುಖ ಮಾಹಿತಿ ನೀಡಿದ್ದಾರೆ. ಜನವರಿಯಲ್ಲಿ ಫಿನಾಲೆ ನಡೆಯಲಿದೆ. ಈ ವೇಳೆ ಓವರ್ಕಾನ್ಫಿಡೆನ್ಸ್ ಬೇಡ ಎಂದು ಸುದೀಪ್ ಎಚ್ಚರಿಸಿದ್ದಾರೆ. ಕಪ್ ಗೆಲ್ಲಲು ಕಡಿಮೆ ಸ್ಪರ್ಧಿಗಳು ಮಾತ್ರ ಉಳಿದಿದ್ದು, ಮಧ್ಯ ವಾರದ ಎಲಿಮಿನೇಷನ್ ಮತ್ತು ಡಬಲ್ ಎಲಿಮಿನೇಷನ್ ಕೂಡ ಇರಲಿದೆ.
- Shreelaxmi H
- Updated on: Dec 15, 2025
- 7:35 am
ಸದ್ದಿಲ್ಲದೆ ಮದುವೆ ಆದ ಕಿರುತೆರೆ ನಟಿ ಗೀತಾ ಭಾರತಿ ಭಟ್; ಫೋಟೋ ನೋಡಿ
‘ಬ್ರಹ್ಮಗಂಟು’ ಧಾರಾವಾಹಿ 2017ರಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಕಂಡಿತು. ಧಾರಾವಾಹಿಯಲ್ಲಿ ಗೀತಾ ಅವರು ಗುಂಡಮ್ಮ ಹೆಸರಿನ ಪಾತ್ರ ಮಾಡಿದರು. ಅವರು 2021ರವರೆಗೆ ಧಾರಾವಾಹಿ ಪ್ರಸಾರ ಕಂಡಿದೆ. ಆ ಬಳಿಕ ಅವರು ಬಿಗ್ ಬಾಸ್ ಕನ್ನಡದಲ್ಲಿ ಭಾಗಿ ಆದರು. 2021ರಲ್ಲಿ ಸೀಸನ್ 8 ಪ್ರಸಾರ ಕಂಡಿತು. ಅವರು ಮೂರನೇ ವಾರವೇ ಹೊರ ಹೋದರು. ಈಗ ಅವರು ಮದುವೆ ಆಗಿ ಅಚ್ಚರಿ ಮೂಡಿಸಿದ್ದಾರೆ.
- Shreelaxmi H
- Updated on: Dec 14, 2025
- 8:36 pm
ಅಕ್ಕ-ತಂಗಿ ಬಳಿ ಹೀಗೆ ಮಾತಾಡ್ತಿದ್ರಾ? ಸೂರಜ್ ಮಾತು ರಾಶಿಕಾ ಎದೆಗೆ ಚುಚ್ತು
ಈ ವಾರ ರಾಶಿಕಾ ಅವರು ಕ್ಯಾಪ್ಟನ್ ಆದರು. ಈ ಆಟದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದು ಚೈತ್ರಾ ಅವರಾಗಿತ್ತು. ಚೈತ್ರಾ ಅವರು ಸರಿಯಾಗಿ ಉಸ್ತುವಾರಿ ಮಾಡಿದ್ದಾರೆ ಎಂಬ ವಾದ ಸೂರಜ್ ಅವರದ್ದಾಗಿತ್ತು. ಇದನ್ನು ಸೂರಜ್ ಅವರು ಮನಸ್ಸಿನಲ್ಲೇ ಇಟ್ಟುಕೊಂಡಿದ್ದರು. ಮನಸ್ಸಿನಲ್ಲಿ ಇದ್ದಿದ್ದನ್ನು ನೇರವಾಗಿ ಹೇಳಿಲ್ಲ ಸೂರಜ್. ಇದು ಕಿತ್ತಾಟಕ್ಕೆ ಅನುವು ಮಾಡಿಕೊಟ್ಟಿತ್ತು.
- Shreelaxmi H
- Updated on: Dec 14, 2025
- 6:21 am
‘ಧುರಂಧರ್’ ಬಗ್ಗೆ ಹೃತಿಕ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಆದಿತ್ಯ ಧಾರ್
Hritik Roshan: ‘ಧುರಂಧರ್’ ಚಿತ್ರವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಇತ್ತೀಚೆಗೆ, ಈ ಚಿತ್ರವನ್ನು ನೋಡಿದ ನಂತರ ಹೃತಿಕ್ ರೋಷನ್ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಅವರು ನಿರ್ದೇಶಕ ಆದಿತ್ಯ ಧರ್ ಅವರನ್ನು ಹೊಗಳಿದರು. ಇದೇ ವೇಳೆ ಜನರಿಗೆ ಅರ್ಥವಾಗದ ಒಂದು ವಿಷಯ ಹೇಳಿದರು. ಅದಕ್ಕಾಗಿ ಹೃತಿಕ್ನ ಟ್ರೋಲ್ ಮಾಡಿದರು. ಇದಕ್ಕೆ ಹೃತಿಕ್ ರೋಷನ್ ಸ್ಪಷ್ಟನೆ ನೀಡಬೇಕಾಯಿತು.
- Shreelaxmi H
- Updated on: Dec 13, 2025
- 9:25 pm
‘ಧುರಂಧರ್’ ಚಿತ್ರವನ್ನು ಹಾಡಿ ಹೊಗಳಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರು ಇತ್ತೀಚೆಗೆ 'ಧುರಂಧರ್' ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 5ರಂದು ತೆರೆಕಂಡು ದೇಶಾದ್ಯಂತ 239 ಕೋಟಿ ರೂಪಾಯಿ ಗಳಿಸಿದೆ. ಅಲ್ಲು ಅರ್ಜುನ್, ರಣವೀರ್ ಸಿಂಗ್, ಅಕ್ಷಯ್ ಖನ್ನಾ ಸೇರಿದಂತೆ ಇಡೀ ತಾರಾಗಣ ಹಾಗೂ ನಿರ್ದೇಶಕ ಆದಿತ್ಯ ಧರ್ ಅವರ ಅದ್ಭುತ ಕೆಲಸವನ್ನು ಶ್ಲಾಘಿಸಿದ್ದಾರೆ.
- Shreelaxmi H
- Updated on: Dec 13, 2025
- 12:40 pm
ನಿಮ್ರತ್ ಕೌರ್ ಜೊತೆಗಿನ ವಿವಾಹೇತರ ಸಂಬಂಧದ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್
ನಟ ಅಭಿಷೇಕ್ ಬಚ್ಚನ್ ನಿಮ್ರತ್ ಕೌರ್ ಜೊತೆಗಿನ ವಿವಾಹೇತರ ಸಂಬಂಧದ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ. ಈ ಸುಳ್ಳು ಸುದ್ದಿಗಳು ತಮ್ಮ ಕುಟುಂಬಕ್ಕೆ ತಂದ ಕಷ್ಟದ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನಕಾರಾತ್ಮಕ ಪ್ರಚಾರವು ತಮ್ಮ ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಅಭಿಷೇಕ್ ಹೇಳಿದ್ದು, ಕುಟುಂಬದ ಸಮಗ್ರತೆಗಾಗಿ ನಿಲ್ಲುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
- Shreelaxmi H
- Updated on: Dec 13, 2025
- 8:49 am
ಗಿಲ್ಲಿ ಜೊತೆ ಒಂದು ಸಿನಿಮಾ ಮಾಡ್ತೀನಿ; ಶಿವರಾಜ್ಕುಮಾರ್ ಹೀಗೆ ಹೇಳಿದ್ರು
ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟರ ಜನಪ್ರಿಯತೆ ಹೆಚ್ಚಿದೆ. ಶಿವಣ್ಣನ ಮೆಚ್ಚುಗೆ ಹಾಗೂ ಸಿನಿಮಾ ಆಫರ್ ಪಡೆದ ಗಿಲ್ಲಿ, 'ಡೆವಿಲ್' ಚಿತ್ರದಲ್ಲಿ ಗಮನ ಸೆಳೆದಿದ್ದಾರೆ. ರಿಯಾಲಿಟಿ ಶೋಗಳಿಂದ ಸ್ಯಾಂಡಲ್ವುಡ್ಗೆ ಕಾಲಿಟ್ಟ ಇವರಿಗೆ ಈಗ ಹೆಚ್ಚಿನ ಸಿನಿಮಾ ಆಫರ್ಗಳು ಬರುತ್ತಿವೆ. ಗಿಲ್ಲಿಯ ವಿಶಿಷ್ಟ ಕಾಮಿಡಿ ಟೈಮಿಂಗ್ ಜನರನ್ನು ಸೆಳೆದಿದೆ, ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡುತ್ತಿದೆ.
- Shreelaxmi H
- Updated on: Dec 13, 2025
- 8:29 am
ಆರಾಧ್ಯಾಳನ್ನು ಎಷ್ಟು ಸ್ಟ್ರಿಕ್ಟ್ ಆಗಿ ಬೆಳೆಸಲಾಗುತ್ತಿದೆ? ಅರ್ಥವಾಗಲು ಈ ಒಂದು ಉದಾಹರಣೆ ಸಾಕು
Aaradhya Bachchan: ಅಭಿಷೇಕ್ ಬಚ್ಚನ್ ಮಗಳು ಆರಾಧ್ಯರ ಪಾಲನೆ ಕುರಿತು ಮಾತನಾಡಿದ್ದಾರೆ. ವಿಚ್ಛೇದನ ವದಂತಿಗಳ ಬಗ್ಗೆ ಆರಾಧ್ಯಗೆ ಮಾಹಿತಿ ಇಲ್ಲ. ಆರಾಧ್ಯಗೆ ಫೋನ್ ಇಲ್ಲ, ತಾಯಿಯ ಫೋನ್ ಸ್ನೇಹಿತರಿಗೆ ಕರೆ ಮಾಡಲು ಮಾತ್ರ ಬಳಸುತ್ತಾರೆ. ಐಶ್ವರ್ಯಾ ಉತ್ತಮ ಮೌಲ್ಯಗಳನ್ನು ನೀಡಿದ್ದಾರೆ. ಗೂಗಲ್ನಲ್ಲಿ ತಮ್ಮ ಹೆಸರು ಹುಡುಕದಂತೆ ಅಭಿಷೇಕ್ ಎಚ್ಚರ ವಹಿಸಿದ್ದಾರೆ, ಇದು ಕಟ್ಟುನಿಟ್ಟಾದ ಪೋಷಣೆಯನ್ನು ಸೂಚಿಸುತ್ತದೆ.
- Shreelaxmi H
- Updated on: Dec 12, 2025
- 8:11 pm
ರಜನಿಕಾಂತ್ ಜನ್ಮದಿನ: ಸೂಪರ್ಸ್ಟಾರ್ ಎಷ್ಟು ಶ್ರೀಮಂತ ಗೊತ್ತಾ?
ಸೂಪರ್ಸ್ಟಾರ್ ರಜನಿಕಾಂತ್ಗೆ 74ನೇ ಜನ್ಮದಿನ. ಬಸ್ ಕಂಡಕ್ಟರ್ನಿಂದ 430 ಕೋಟಿ ಒಡೆಯನಾಗಿ ಬೆಳೆದ ತಲೈವಾ ಜೀವನ ಕಥೆ ಸ್ಫೂರ್ತಿದಾಯಕ. 75ನೇ ವಯಸ್ಸಿನಲ್ಲೂ ಕೋಟಿಗಟ್ಟಲೆ ಸಂಭಾವನೆ ಪಡೆಯುವ ರಜನಿಕಾಂತ್ ಅವರ ವೃತ್ತಿಜೀವನ, ಆಸ್ತಿ, ಬ್ಲಾಕ್ಬಸ್ಟರ್ ಚಿತ್ರಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಅವರ ಜನಪ್ರಿಯತೆ ಇಂದಿಗೂ ಕಡಿಮೆಯಾಗಿಲ್ಲ.
- Shreelaxmi H
- Updated on: Dec 12, 2025
- 9:15 am