Darshan: ನಟ ದರ್ಶನ್ಗೆ ಮೊದಲೇ ಇತ್ತಾ ಗಂಡಾಂತರದ ಮುನ್ಸೂಚನೆ?
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಈ ಕಾರಣದಿಂದಲೇ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ಪ್ರಕರಣದಿಂದ ಹೊರಗೆ ಬರೋದು ಅವರಿಗೆ ಅಷ್ಟು ಸುಲಭವಿಲ್ಲ. ಅವರಿಗೆ ಈ ಬಗ್ಗೆ ಮೊದಲೆ ಸೂಚನೆ ಸಿಕ್ಕಿತ್ತು ಎನ್ನಲಾಗಿದೆ.
- Mangala RR
- Updated on: Jun 29, 2024
- 11:11 am
ದರ್ಶನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಕೊಲೆ ಆರೋಪದಲ್ಲಿ ದರ್ಶನ್ ಜೈಲು ವಾಸು ಅನುಭವಿಸುತ್ತಿದ್ದಾರೆ. ದರ್ಶನ್ ಅವರ ಅಭಿಮಾನಿಗಳ ಬಗ್ಗೆ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಅವರು ಮಾತನಾಡಿದ್ದಾರೆ. ‘ನಾವು ನಿಮ್ಮ ಒಳ್ಳೆಯದಕ್ಕೆ ಹೇಳುತ್ತಿದ್ದೇವೆ. ಅದನ್ನು ಅರ್ಥ ಮಾಡಿಕೊಳ್ಳಿ. ದರ್ಶನ್ಗೆ ಇನ್ನೂ ಭವಿಷ್ಯ ಇದೆ. ಅದಕ್ಕೆ ಕಲ್ಲು ಹಾಕಬೇಡಿ. ನೀವು ಹಾದಿ ತಪ್ಪಿದರೆ ಇನ್ನೂ ಅಧೋಗತಿಗೆ ಹೋಗುತ್ತದೆ. ಅಭಿಮಾನ ಇರಬೇಕು. ಆದರೆ ಹುಚ್ಚು ಅಭಿಮಾನ ಇರಬಾರದು’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.
- Mangala RR
- Updated on: Jun 28, 2024
- 9:11 pm
ಸಹೋದರ, ತಾಯಿಯಿಂದ ದರ್ಶನ್ ತೂಗುದೀಪ ದೂರ ಇರೋದು ಯಾಕೆ? ಸತ್ಯ ತೆರೆದಿಟ್ಟ ನಿರ್ದೇಶಕ
ನಟ ದರ್ಶನ್ ಅವರ ಕುಟುಂಬದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಸಹೋದರ ಮತ್ತು ತಾಯಿಯ ಜೊತೆ ದರ್ಶನ್ ಮನಸ್ತಾಪ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಆದರೆ ಈ ವಿಚಾರಗಳನ್ನು ನಿರ್ದೇಶಕ ಎಚ್. ವಾಸು ತಳ್ಳಿ ಹಾಕಿದ್ದಾರೆ. ‘ಲಾಲಿ ಹಾಡು’, ‘ಇಂದ್ರ’, ‘ವಿರಾಟ್’ ಸಿನಿಮಾಗಳಲ್ಲಿ ದರ್ಶನ್ ಮತ್ತು ಎಚ್. ವಾಸು ಅವರು ಜೊತೆಯಾಗಿ ಕೆಲಸ ಮಾಡಿದ್ದಾರೆ.
- Mangala RR
- Updated on: Jun 27, 2024
- 10:56 am
ಸಿನಿಮಾ ಆಗುತ್ತಾ ದರ್ಶನ್ ತೂಗುದೀಪ ‘ಖೈದಿ ನಂಬರ್ 6106’? ಶೀರ್ಷಿಕೆಗೆ ನಿರ್ಮಾಪಕರಿಂದ ಬೇಡಿಕೆ
ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್, ಪವಿತ್ರಾ ಹಾಗೂ ಅವರ ಸಹಚರರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಚಾರಣಾಧೀನ ಖೈದಿ ಆಗಿರುವ ದರ್ಶನ್ ಅವರಿಗೆ 6106 ನಂಬರ್ ಕೊಡಲಾಗಿದೆ. ಇದನ್ನೇ ಹೊಸ ಸಿನಿಮಾಗೆ ಶೀರ್ಷಿಕೆಯಾಗಿಸಲು ‘ಭದ್ರಾವತಿ ಮೂವೀ ಮೇಕರ್ಸ್’ ನಿರ್ಮಾಪಕರು ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಕೇಸ್ ಈಗ ತನಿಖೆ ಹಂತದಲ್ಲಿ ಇರುವುದರಿಂದ ಅದಕ್ಕೆ ಸಂಬಂಧಿಸಿದ ಟೈಟಲ್ಗಳನ್ನು ನೀಡದಿರಲು ವಾಣಿಜ್ಯ ಮಂಡಳಿ ತೀರ್ಮಾನಿಸಿದೆ.
- Mangala RR
- Updated on: Jun 27, 2024
- 10:57 am
ಆತ್ಮಹತ್ಯೆ ಮಾಡಿಕೊಂಡ ಜಗದೀಶ್ ಖಾತೆಯಿಂದ ಪವಿತ್ರಾ ಗೌಡಗೆ ಹೋಗಿದೆ 2 ಕೋಟಿ ರೂಪಾಯಿ
ಪವಿತ್ರಾ ಗೌಡ ಅವರು ಮನೆ ಖರೀದಿಸುವಾಗ ಸೌಂದರ್ಯಾ ಜಗದೀಶ್ ಬಳಿ 2 ಕೋಟಿ ರೂಪಾಯಿ ಹಣ ಪಡೆದಿದ್ದರು. ಈ ವರ್ಷ ಜಗದೀಶ್ ಆತ್ಮಹತ್ಯೆ ಮಾಡಿಕೊಂಡರು. ‘ಪವಿತ್ರಾ ಗೌಡಗೆ ನಮ್ಮ ಮನೆಯವರು ಯಾಕೆ ಹಣ ನೀಡಿದ್ದರು ಎಂಬುದು ನನಗೆ ಗೊತ್ತಿಲ್ಲ. ಅದಕ್ಕೂ ನಮ್ಮ ಯಜಮಾನರ ಸಾವಿಗೂ ಸಂಬಂಧ ಇಲ್ಲ. ಈಗ ಬ್ಯಾಂಕ್ ವಿವರ ತೆಗೆಸುತ್ತಿದ್ದೇನೆ’ ಎಂದು ಸೌಂದರ್ಯಾ ಜಗದೀಶ್ ಪತ್ನಿ ರೇಖಾ ಹೇಳಿದ್ದಾರೆ.
- Mangala RR
- Updated on: Jun 24, 2024
- 4:55 pm
‘ಅಂಬರೀಶ್ ಇದ್ದಿದ್ರೆ ದರ್ಶನ್ ಕಪಾಳಕ್ಕೆ ಹೊಡೆಯುತ್ತಿದ್ದರು’: ಓಂ ಪ್ರಕಾಶ್ ರಾವ್
ಚಿತ್ರರಂಗಕ್ಕೆ ಅಂಬರೀಶ್ ಹಿರಿಯಣ್ಣನ ರೀತಿ ಇದ್ದರು. ಅವರಿಗೆ ದರ್ಶನ್ ಕೂಡ ತುಂಬ ಗೌರವ ನೀಡುತ್ತಿದ್ದರು. ಈಗ ದರ್ಶನ್ ಅವರು ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಈ ಬಗ್ಗೆ ಓಂ ಪ್ರಕಾಶ್ ರಾವ್ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಅಂಬರೀಶಣ್ಣ ಈಗ ಇದ್ದಿದ್ದರೆ ದರ್ಶನ್ಗೆ ಕಪಾಳಕ್ಕೆ ಹೊಡೆಯುತ್ತಿದ್ದರು. ಬಾರೋ ಇಲ್ಲಿ ಅಂತ ಕರೆದು ಬುದ್ಧಿ ಹೇಳುತ್ತಿದ್ದರು’ ಎಂದಿದ್ದಾರೆ ಓಂ ಪ್ರಕಾಶ್ ರಾವ್.
- Mangala RR
- Updated on: Jun 23, 2024
- 5:06 pm
ದರ್ಶನ್ಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ನಾನು ಜನವರಿಯಲ್ಲೇ ಹೇಳಿದ್ದೆ; ಮನೋ ವೈದ್ಯೆ
ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾ ಸ್ವಾಮಿಯ ಪ್ರಾಣವೇ ಹೋಗಿದೆ. ಇದಕ್ಕೆ ದರ್ಶನ್ ಕಾರಣ ಎನ್ನಲಾಗಿದೆ. ದರ್ಶನ್ ಮನಸ್ಥಿತಿ ಬಗ್ಗೆ ಮನೋವೈದ್ಯೆ ಚಂದ್ರಿಕಾ ಮಾತನಾಡಿದ್ದಾರೆ. ದರ್ಶನ್ಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ನಾನು ಆಗಲೇ ಹೇಳಿದ್ದೆ ಎಂದಿದ್ದಾರೆ ವೈದ್ಯೆ.
- Mangala RR
- Updated on: Jun 22, 2024
- 8:48 am
Pavithra Gowda: ಪವಿತ್ರಾ ಗೌಡ ಅತಿ ಆಸೆ ಎಷ್ಟಿತ್ತು ಗೊತ್ತಾ? ಇದುವೇ ಸಾಕ್ಷಿ
ವಿಜಯಲಕ್ಷ್ಮಿ ಅವರು ರೇಂಜ್ ರೋವರ್ ಕಾರು ಖರೀದಿ ಮಾಡಿದರು. ಆ ಬಳಿಕ ತಮಗೂ ಅದೇ ಕಾರು ಬೇಕು ಎಂದು ದರ್ಶನ್ ಬಳಿ ಹಠ ಹಿಡಿದು ಕುಳಿತರು ಪವಿತ್ರಾ ಗೌಡ. ಹೀಗಾಗಿ, ದರ್ಶನ್ ಅವರು ಪವಿತ್ರಾಗೆ ರೇಂಜ್ ರೋವರ್ ಕಾರನ್ನೇ ಕೊಡಿಸಿದರು. ಪವಿತ್ರಾ ಗೌಡ ಅವರ ಅತಿಆಸೆ ಯಾವ ಮಟ್ಟಕ್ಕೆ ಬೆಳೆದಿತ್ತು ಅನ್ನೋದಕ್ಕೆ ಈ ಘಟನೆಗಳೇ ಸಾಕ್ಷಿ.
- Mangala RR
- Updated on: Jun 20, 2024
- 12:08 pm
‘ಡೆವಿಲ್ ಎದುರು ನನ್ನ ಸಿನಿಮಾ ರಿಲೀಸ್’: ಪ್ರಥಮ್ ಬಹಿರಂಗ ಸವಾಲು
‘ಡೆವಿಲ್’ ಸಿನಿಮಾ ಬಿಡುಗಡೆ ಆಗುವ ತನಕ ಬೇರೆ ನಟರ ಸಿನಿಮಾಗಳನ್ನು ನೋಡಬೇಡಿ ಎಂದು ದರ್ಶನ್ ಫ್ಯಾನ್ಸ್ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಕುರಿತು ನಟ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ಕನ್ನಡಕ್ಕೆ ಮಾಡುವ ದ್ರೋಹ ಆಗುತ್ತದೆ’ ಎಂದು ಅವರು ಹೇಳಿದ್ದಾರೆ. ಅಲ್ಲದೇ, ತಾವು ನಟಿಸಿದ ‘ಕರ್ನಾಟಕದ ಅಳಿಯ’ ಚಿತ್ರವನ್ನು ‘ಡೆವಿಲ್’ ಎದುರು ಬಿಡುಗಡೆ ಮಾಡುವುದಾಗಿ ಪ್ರಥಮ್ ತಿಳಿಸಿದ್ದಾರೆ.
- Mangala RR
- Updated on: Jun 19, 2024
- 6:06 pm
Pavithra Gowda Detained: ನಟ ದರ್ಶನ್ ಗೆಳತಿ ಪವಿತ್ರಾಗೌಡ ಪೊಲೀಸರ ವಶಕ್ಕೆ
ಪವಿತ್ರ ಗೌಡ ಪೊಲೀಸ್ ವಶಕ್ಕೆ: ಬೆಂಗಳೂರಿನಲ್ಲಿ ನಟ ದರ್ಶನ್ ಗೆಳತಿ ಪವಿತ್ರಾಗೌಡರನ್ನು ಆರ್.ಆರ್.ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರೆ.
- Mangala RR
- Updated on: Jun 11, 2024
- 11:39 am
ಕೊಲೆ ಕೇಸ್ನಲ್ಲಿ ನಟ ದರ್ಶನ್ ಅರೆಸ್ಟ್; ಬೆಂಗಳೂರಿನ ಮನೆ ಬಳಿ ಪೊಲೀಸ್ ಭದ್ರತೆ
ಕೊಲೆ ಕೇಸ್ನಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಅರೆಸ್ಟ್ ಆಗಿದ್ದು ಬೆಂಗಳೂರಿನ ದರ್ಶನ್ ಮನೆ ಬಳಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ದರ್ಶನ್ ಮನೆ ಬಳಿ ಬ್ಯಾರಿಕೇಡ್ ಹಾಕಿ 20ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಫ್ಯಾನ್ಸ್ಗಳಿಂದ ಏನಾದ್ರು ತೊಂದರೆ ಆಗಬಹುದು ಎಂಬ ಕಾರಣಕ್ಕೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
- Mangala RR
- Updated on: Jun 11, 2024
- 11:15 am
ಚಂದನ್-ನಿವೇದಿತಾ ಸಂಬಂಧ ಸರಿ ಮಾಡಲು ಮುಂದಾಗ್ತಾರಾ ಧ್ರುವ? ಸೂಚನೆ ಕೊಟ್ಟ ಪ್ರಥಮ್
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಮಧ್ಯೆ ವಿಚ್ಛೇದನ ಆಗಿದೆ. ಇದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಇಬ್ಬರ ಮಧ್ಯೆ ವೈಮನಸ್ಸು ಮೂಡಲು ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಇವರ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ.
- Mangala RR
- Updated on: Jun 8, 2024
- 10:04 am