National News
ರಾಷ್ಟ್ರೀಯ ಸುದ್ದಿಗಳನ್ನು ಸಮಗ್ರ ಚಿತ್ರಣ ಇಲ್ಲಿ ಸಿಗುತ್ತೇ. ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ. ರಾಜಕೀಯವಾಗಿ, ಸಾಮಾಜಿಕ, ಹಾಗೂ ದೇಶದ ಬೇರೆ ಬೇರೆ ಊರಿನಲ್ಲಿ ನಡೆದ ಘಟನೆಗಳನ್ನು, ಸುದ್ದಿಗಳನ್ನು ಇಲ್ಲಿ ತಿಳಿಸಲಾಗುವುದು. ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಸಂಗತಿಗಳನ್ನು ಹಾಗೂ ಸುದ್ದಿಗಳನ್ನು ತಕ್ಷಣದಲ್ಲಿ ನೀಡಲಾಗುವುದು.
ಚಂಡಮಾರುತದಿಂದ ನಲುಗಿದ ಶ್ರೀಲಂಕಾಕ್ಕೆ 4,000 ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ ಭಾರತ
ದಿತ್ವ ಚಂಡಮಾರುತದಿಂದ ಶ್ರೀಲಂಕಾದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ, ಶ್ರೀಲಂಕಾದ ಪುನರ್ನಿರ್ಮಾಣಕ್ಕೆ ಭಾರತವು 4,000 ಕೋಟಿ ರೂ.ಗಳ ಪುನರ್ನಿರ್ಮಾಣ ಪ್ಯಾಕೇಜ್ ಅನ್ನು ಪ್ರಕಟಿಸಿದೆ. ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರನ್ನು ಇಂದು ಮುಂಜಾನೆ ಭೇಟಿ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶ್ರೀಲಂಕಾಕ್ಕೆ 450 ಮಿಲಿಯನ್ ಡಾಲರ್ ಪುನರ್ನಿರ್ಮಾಣ ಪ್ಯಾಕೇಜ್ ಅನ್ನು ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಪತ್ರವನ್ನು ಹಸ್ತಾಂತರಿಸಿದರು.
- Sushma Chakre
- Updated on: Dec 23, 2025
- 10:45 pm
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭಾರೀ ಭದ್ರತೆ, ಇಂಟರ್ನೆಟ್ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಅಕ್ರಮ ಅತಿಕ್ರಮಣ ವಿರುದ್ಧ ಪ್ರತಿಭಟನೆಯ ನಂತರ ಕರ್ಬಿ ಅಂಗ್ಲಾಂಗ್ನಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ. ನಿನ್ನೆ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯ ನಂತರ ಇಂದು ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಾದ್ಯಂತ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು. ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ರಾಜ್ಯ ಸರ್ಕಾರವು ಕರ್ಬಿ ಅಂಗ್ಲಾಂಗ್ ಮತ್ತು ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
- Sushma Chakre
- Updated on: Dec 23, 2025
- 10:37 pm
4 ಶಿಶುಗಳಿಗೆ ಜನ್ಮ ನೀಡಿ 7 ಹೆಣ್ಣುಮಕ್ಕಳ ತಾಯಿಯಾದ ಮಹಿಳೆ!
ಉತ್ತರ ಪ್ರದೇಶದ ಕನ್ನೌಜ್ನಲ್ಲಿ 30 ವರ್ಷದ ಮಹಿಳೆಯೊಬ್ಬರು 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸ್ಥಳೀಯ ನರ್ಸಿಂಗ್ ಹೋಂನಲ್ಲಿ ಆಕೆ 4 ಮಕ್ಕಳನ್ನು ಹೆತ್ತಿದ್ದಾರೆ. ಇದು ಬಹಳ ಅಪರೂಪದ ಘಟನೆಯಾಗಿದೆ. ಅದಕ್ಕಿಂತಲೂ ವಿಶೇಷ ಸಂಗತಿಯೆಂದರೆ ಈಗಾಗಲೇ 3 ಹೆಣ್ಣು ಮಕ್ಕಳ ತಾಯಿಯಾಗಿರುವ ಆ ಮಹಿಳೆ ಇದೀಗ 4 ಹೆಣ್ಣುಮಕ್ಕಳನ್ನು ಹೆರುವ ಮೂಲಕ 7 ಹೆಣ್ಣುಮಕ್ಕಳ ತಾಯಿಯಾಗಿದ್ದಾರೆ! ಈ ಎಲ್ಲ ಮಕ್ಕಳೂ ನಾರ್ಮಲ್ ಡೆಲಿವರಿ ಮೂಲಕ ಜನಿಸಿವೆ.
- Sushma Chakre
- Updated on: Dec 23, 2025
- 9:56 pm
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಜಬಲ್ಪುರ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿಯೊಬ್ಬರು ದೃಷ್ಟಿಹೀನ ಮಹಿಳೆಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ವೇಳೆ ಮಹಿಳಾ ನಾಯಕಿ ದೃಷ್ಟಿಹೀನ ಮಹಿಳೆಯ ಬಗ್ಗೆ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಿಜೆಪಿ ನಾಯಕಿ ಆ ದೃಷ್ಟಿಹೀನ ಮಹಿಳೆಗೆ ನೀನು ಮುಂದಿನ ಜನ್ಮದಲ್ಲೂ ಕುರುಡಿಯಾಗೇ ಹುಟ್ಟುತ್ತೀಯ ಎಂದು ಹೇಳುವುದನ್ನು ಕೇಳಬಹುದು.
- Sushma Chakre
- Updated on: Dec 23, 2025
- 9:32 pm
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಮಧ್ಯಪ್ರದೇಶ ಸಚಿವೆಯೊಬ್ಬರು ಹೊಸದಾಗಿ ನಿರ್ಮಾಣವಾಗಿದ್ದ ರಸ್ತೆಯ ಪರಿಶೀಲನೆ ಮಾಡಲು ಹೋದಾಗ ಆ ರಸ್ತೆ ತಮ್ಮ ಚಪ್ಪಲಿಯ ಕೆಳಗೆ ಕಿತ್ತುಬಂದಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಹೊಸದಾಗಿ ನವೀಕರಿಸಿದ ಡಾಂಬರು ರಸ್ತೆ ಮೇಲೆ ಕಾಲಿಡುತ್ತಿದ್ದಂತೆ ಆ ಡಾಂಬರು ಅವರ ಚಪ್ಪಲಿಯ ಜೊತೆಗೇ ಕಿತ್ತು ಬಂದಿತು. ಇದರಿಂದ ಕೋಪಗೊಂಡ ಸಚಿವೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಕಾಲಿನ ಕೆಳಗೆ ಡಾಂಬರು ಕಿತ್ತು ಬರುತ್ತಿರುವ ಈ ಘಟನೆಯ ವಿಡಿಯೋ ವೈರಲ್ ಆಗಿದೆ.
- Sushma Chakre
- Updated on: Dec 23, 2025
- 8:00 pm
ಉನ್ನಾವ್ ಅತ್ಯಾಚಾರ ಪ್ರಕರಣ; ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ಗೆ ಬಿಗ್ ರಿಲೀಫ್
2017ರ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಕುಲದೀಪ್ ಸಿಂಗ್ ಸೆಂಗಾರ್ ಜೀವಾವಧಿ ಶಿಕ್ಷೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ಜೀವಾವಧಿ ಶಿಕ್ಷೆಗೆ ತಡೆ ನೀಡಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಕುಲದೀಪ್ ಸಿಂಗ್ ಸೆಂಗಾರ್ಗೆ ದೆಹಲಿ ಹೈಕೋರ್ಟ್ನಿಂದ ಜಾಮೀನು ಸಿಕ್ಕಿದೆ. ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸೆಂಗಾರ್ ಅವರ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ.
- Sushma Chakre
- Updated on: Dec 23, 2025
- 6:47 pm
ಮೈ ಮೇಲೆ ಕಕ್ಕ ಮಾಡಿದ್ದಕ್ಕೆ ತಾಯಿಯ ಪ್ರಿಯಕರನಿಂದ 3 ವರ್ಷದ ಮಗುವಿನ ಕೊಲೆ!
ಮಹಿಳೆಯೊಬ್ಬಳು ಮದುವೆಯಾಗಿ 3 ವರ್ಷದ ಮಗುವಿದ್ದರೂ ಬೇರೆ ಗಂಡಸಿನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಆಕೆಯ ಗಂಡನಿಗೆ ಗೊತ್ತಿರಲಿಲ್ಲ. ಗಂಡನಿಂದ ದೂರವಾಗಿದ್ದ ಆಕೆ ಆತನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದಳು. ಆಕೆ ತನ್ನ ಮಗುವಿನ ಜೊತೆ ಒಂದೇ ಮನೆಯಲ್ಲಿ ಆತನ ಜೊತೆ ವಾಸಿಸುತ್ತಿದ್ದಳು. ಈ ವೇಳೆ ಆಕಸ್ಮಿಕವಾಗಿ ಆ 3 ವರ್ಷದ ಮಗು ಆತನ ಶರ್ಟ್ ಮೇಲೆ ಮಲವಿಸರ್ಜನೆ ಮಾಡಿದ್ದರಿಂದ ಆತ ಆ ಮಗುವನ್ನು ಕೊಲೆ ಮಾಡಿದ್ದಾನೆ. ಈ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
- Sushma Chakre
- Updated on: Dec 23, 2025
- 4:12 pm
ಭಾರತದೊಂದಿಗೆ ಇದು ಕೆಟ್ಟ ಒಪ್ಪಂದ: ನ್ಯೂಜಿಲೆಂಡ್ ಸರ್ಕಾರದೊಳಗೆಯೇ ಅಪಸ್ವರ; ಇವರ ತಕರಾರುಗಳೇನು?
New Zealand foreign minister describes FTA with India as bad deal: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಅಂತಿಮಗೊಂಡಿರುವ ವ್ಯಾಪಾರ ಒಪ್ಪಂದದ ಬಗ್ಗೆ ನ್ಯೂಜಿಲೆಂಡ್ ಸರ್ಕಾರದೊಳಗೆ ಅಪಸ್ವರ ಎದ್ದಿದೆ. ಇದು ನ್ಯೂಜಿಲೆಂಡ್ ಪಾಲಿಗೆ ಕೆಟ್ಟ ಡೀಲ್ ಎಂದು ಅಲ್ಲಿಯ ಫಾರೀನ್ ಮಿನಿಸ್ಟರ್ ವಿನ್ಸ್ಟನ್ ಪೀಟರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಎಲ್ಲವನ್ನೂ ಮುಕ್ತವಾಗಿ ಕೊಟ್ಟಿದ್ದೇವೆ. ಆದರೆ, ಅವರಿಂದ ಮುಕ್ತವಾಗಿ ಪಡೆದಿಲ್ಲ ಎಂಬುದು ಪೀಟರ್ಸ್ ಆಕ್ಷೇಪ.
- Vijaya Sarathy SN
- Updated on: Dec 23, 2025
- 4:08 pm
ಅಜ್ಜಿಯ ಕೊಲೆ ರಹಸ್ಯ; ನಾಯಿಗಳಿಂದ ಬಯಲಾಯ್ತು ಮೊಮ್ಮಗನ ಕ್ರೌರ್ಯ
ಆಂಧ್ರಪ್ರದೇಶದ ವಿಜಯನಗರದ ವೃದ್ಧ ಮಹಿಳೆಯ ಸಾವಿನ ಬಗ್ಗೆ ಪೊಲೀಸರಿಗೆ ಸಾಕಷ್ಟು ಅನುಮಾನ ಮೂಡಿತ್ತು. ಆ ವೃದ್ಧೆ ಕೊಲೆಯಾಗಿ ಹಲವು ದಿನಗಳಾಗಿದ್ದರೂ ಕೊಲೆಗಾರನ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಶವದ ವಾಸನೆ ಹಿಡಿದು ಓಡಾಡಿದ ಪೊಲೀಸ್ ನಾಯಿಗಳು ಅಸಲಿ ಕೊಲೆಗಾರ ಯಾರು? ಎಂಬುದನ್ನು ಪತ್ತೆಹಚ್ಚಿವೆ. ಕೈತುತ್ತು ನೀಡಿ, ಸಾಕಿ, ಸಲಹಿದ ಅಜ್ಜಿಯನ್ನೇ ಕೊಲೆ ಮಾಡಿದ್ದ ಮೊಮ್ಮಗ ಸಿಕ್ಕಿಬಿದ್ದಿದ್ದಾನೆ. ಕೊಲೆ ನಡೆದಿದ್ದು ಹೇಗೆ? ಇದಕ್ಕೆ ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.
- Sushma Chakre
- Updated on: Dec 22, 2025
- 10:15 pm
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
20 ವರ್ಷದ ಸಿದ್ಧರಾಜ್ ಸಿಂಗ್ ಮಹೀದ ಅವರು ನಾಂದೇಸರಿ ಸೇತುವೆಯ ಮೇಲೆ ಹೋಗುತ್ತಿದ್ದಾಗ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಆದರೆ, ಅದೃಷ್ಟವಶಾತ್ ಈ ಭೀಕರ ಅಪಘಾತದಿಂದ ಅವರು ಬದುಕುಳಿದಿದ್ದಾರೆ. ಅವರು ಸೇತುವೆಯಿಂದ ಕೆಳಗೆ ಬೀಳುವಾಗ ಅವರ ಶರ್ಟ್ ಲೈಟ್ ಕಂಬಕ್ಕೆ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ ಅವರು 20 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ತಕ್ಷಣ ಅವರನ್ನು ಮೇಲಕ್ಕೆ ಎಳೆದುಕೊಂಡು ಕಾಪಾಡಿದ್ದಾರೆ. ಬೈಕ್ ಸೇತುವೆಯಿಂದ ನೀರಿಗೆ ಬಿದ್ದರೂ ಆ ಯುವಕನ ಆಯುಷ್ಯ ಗಟ್ಟಿ ಇದ್ದುದರಿಂದ ಯಾವುದೇ ಗಾಯಗಳೂ ಆಗದೆ ಅವರು ಬದುಕುಳಿದಿದ್ದಾರೆ.
- Sushma Chakre
- Updated on: Dec 22, 2025
- 9:01 pm
ಶೂಟ್ ಮಾಡಿಕೊಂಡು ಪಂಜಾಬ್ನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಮರ್ ಸಿಂಗ್ ಚಾಹಲ್ ಆತ್ಮಹತ್ಯೆಗೆ ಯತ್ನ
ಪಂಜಾಬ್ ಪೊಲೀಸ್ ಇಲಾಖೆಯ ಮಾಜಿ ಇನ್ಸ್ಪೆಕ್ಟರ್ ಜನರಲ್ (ಐಜಿ) ಅಮರ್ ಸಿಂಗ್ ಚಾಹಲ್ ಅವರು ಪಂಜಾಬ್ನ ಪಟಿಯಾಲದಲ್ಲಿರುವ ತಮ್ಮ ಮನೆಯಲ್ಲಿ ಶೂಟ್ ಮಾಡಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಪಟಿಯಾಲದ ಪಾರ್ಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರ ತಂಡವು ಪ್ರಸ್ತುತ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಅವರ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳದಿಂದ ಪೊಲೀಸರು 12 ಪುಟಗಳ ಸೂಸೈಡ್ ನೋಟ್ ವಶಪಡಿಸಿಕೊಂಡಿದ್ದಾರೆ.
- Sushma Chakre
- Updated on: Dec 22, 2025
- 6:29 pm
ನ್ಯೂಜಿಲೆಂಡ್ ಜೊತೆಗೂ ಟ್ರೇಡ್ ಡೀಲ್ ಮುಗಿಸಿದ ಭಾರತ; ಈ ವರ್ಷದಲ್ಲೇ ಭಾರತಕ್ಕಿದು 3ನೇ ಎಫ್ಟಿಎ
India and New Zealand finalize the FTA: ವಿವಿಧ ದೇಶಗಳೊಂದಿಗೆ ಭಾರತ ತ್ವರಿತಗತಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಕುದುರಿಸುತ್ತಿದೆ. ಬ್ರಿಟನ್ ಮತ್ತು ಓಮನ್ ಜೊತೆ ಇತ್ತೀಚೆಗಷ್ಟೇ ಎಫ್ಟಿಎ ಮಾಡಿಕೊಂಡಿದ್ದ ಭಾರತ ಈಗ ನ್ಯೂಜಿಲೆಂಡ್ ಜೊತೆ ಡೀಲ್ ಅಂತಿಮಗೊಳಿಸಿದೆ. 9 ತಿಂಗಳ ಹಿಂದಷ್ಟೇ ಶುರುವಾದ ಮಾತುಕತೆಗಳು ಕ್ಷಿಪ್ರಗತಿಯಲ್ಲಿ ಅಂತಿಮಗೊಂಡಿವೆ.
- Vijaya Sarathy SN
- Updated on: Dec 22, 2025
- 12:40 pm