AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National News

National News

ರಾಷ್ಟ್ರೀಯ ಸುದ್ದಿಗಳನ್ನು ಸಮಗ್ರ ಚಿತ್ರಣ  ಇಲ್ಲಿ ಸಿಗುತ್ತೇ. ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ.  ರಾಜಕೀಯವಾಗಿ, ಸಾಮಾಜಿಕ, ಹಾಗೂ ದೇಶದ ಬೇರೆ ಬೇರೆ ಊರಿನಲ್ಲಿ ನಡೆದ ಘಟನೆಗಳನ್ನು, ಸುದ್ದಿಗಳನ್ನು ಇಲ್ಲಿ ತಿಳಿಸಲಾಗುವುದು. ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಸಂಗತಿಗಳನ್ನು ಹಾಗೂ ಸುದ್ದಿಗಳನ್ನು ತಕ್ಷಣದಲ್ಲಿ ನೀಡಲಾಗುವುದು. 

ಪೆರೇಡ್‌ ವೇಳೆ ಅಧಿಕಾರಿಗಳ ಜೊತೆ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಪುಷ್ಅಪ್‌; ವಿಡಿಯೋ ವೈರಲ್

ಈ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಅಧಿಕಾರಿಗಳೊಂದಿಗೆ ಉಪೇಂದ್ರ ದ್ವಿವೇದಿ ಪುಷ್-ಅಪ್‌ಗಳನ್ನು ಮಾಡುತ್ತಿರುವುದನ್ನು ನೋಡಬಹುದು. ಐತಿಹಾಸಿಕ ಡ್ರಿಲ್ ಸ್ಕ್ವೇರ್‌ನಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ 491 ಕೆಡೆಟ್‌ಗಳು ಭಾಗವಹಿಸಿದ್ದರು. ಇನ್ನು ಅವರನ್ನು ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ನಿಯೋಜಿಸಲಾಗುವುದು. 525 ಕೆಡೆಟ್‌ಗಳು ಭಾಗವಹಿಸಿದ್ದ ಈ ಪೆರೇಡ್‌ನಲ್ಲಿ ಉಪೇಂದ್ರ ದ್ವಿವೇದಿ ಪರಿಶೀಲನಾ ಅಧಿಕಾರಿಯಾಗಿದ್ದರು.

ಶಾಲೆಯೊಳಗೇ ಆಲ್ಕೋಹಾಲ್ ಪಾರ್ಟಿ ಮಾಡಿದ ಹುಡುಗಿಯರು! 6 ವಿದ್ಯಾರ್ಥಿನಿಯರ ಅಮಾನತು

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಳಯಂಕೊಟ್ಟೈನಲ್ಲಿರುವ ಜನಪ್ರಿಯ ಶಾಲೆಯಲ್ಲಿ ಓದುತ್ತಿರುವ ಹೆಣ್ಣುಮಕ್ಕಳು ತರಗತಿಯಲ್ಲಿ ಆಘಾತಕಾರಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆದ ನಂತರ, ಶಾಲಾ ಆಡಳಿತ ಮಂಡಳಿಯು 6 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದೆ. ಇದು ಶಾಲೆ ಮತ್ತು ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳ ಬಗ್ಗೆ ಆತಂಕವನ್ನು ಹೆಚ್ಚಿಸಿದೆ. ಅದರಲ್ಲೂ ಹೆಣ್ಣುಮಕ್ಕಳು ಈ ರೀತಿ ಮಾಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಯುವಕರಿಗೂ ಭದ್ರತೆಯಿಲ್ಲ!; ಡ್ರಾಪ್ ಕೇಳಿದ್ದಕ್ಕೆ ಭಾರತದ ವ್ಲಾಗರ್​​ಗೆ ಇಟಲಿಯಲ್ಲಿ ಲೈಂಗಿಕ ಕಿರುಕುಳ

ಇಟಲಿಗೆ ಹೋಗಿದ್ದ ಭಾರತೀಯ ಯುವಕ ಅಲ್ಲಿ ವ್ಲಾಗ್​​ವೊಂದನ್ನು ಮಾಡುವಾಗ ವಿಚಿತ್ರವಾದ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವಾಹನದ ಚಾಲಕನ ಬಳಿ ರಾತ್ರಿ ವೇಳೆ ಆ ಯುವಕ ಡ್ರಾಪ್ ಕೇಳಿದ್ದರು. ಆದರೆ, ಅದಕ್ಕೆ ಪ್ರತಿಯಾಗಿ ಆ ಚಾಲಕ ತನ್ನ ಜೊತೆ ಲೈಂಗಿಕತೆಗೆ ಸಹಕರಿಸುವಂತೆ ಡಿಮ್ಯಾಂಡ್ ಇಟ್ಟಿದ್ದ. ಈ ಘಟನೆ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಒಟ್ಟಾರೆ, ಪುರುಷರಿಗೂ ಲೈಂಗಿಕ ಕಿರುಕುಳದಿಂದ ಮುಕ್ತಿ ಇಲ್ಲದಂತಾಗಿದೆ.

ವಿಕಸಿತ ಕೇರಳವೇ ನಮ್ಮ ಗುರಿ; ಕಾರ್ಪೋರೇಷನ್ ಗೆಲುವಿನ ಬಳಿಕ ತಿರುವನಂತಪುರಂ ಜನರಿಗೆ ಪ್ರಧಾನಿ ಮೋದಿ ಧನ್ಯವಾದ

ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯ 101 ವಾರ್ಡ್‌ಗಳಲ್ಲಿ 50 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಹೊಸ ಇತಿಹಾಸ ಬರೆದಿದೆ. ಇದು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಗೆ ಭಾರಿ ಹೊಡೆತ ನೀಡಿದೆ. ತಿರುವನಂತಪುರಂನಲ್ಲಿ ಬಿಜೆಪಿಯ ಬಲಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಿರುವನಂತಪುರಂ ಪುರಸಭೆಯ 101 ವಾರ್ಡ್‌ಗಳಲ್ಲಿ ಎನ್‌ಡಿಎ 50 ಸ್ಥಾನಗಳನ್ನು ಗೆದ್ದಿದೆ. ಆಡಳಿತಾರೂಢ ಎಲ್‌ಡಿಎಫ್ 29 ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ 19 ಸ್ಥಾನಗಳನ್ನು ಗೆದ್ದಿದೆ. ಇನ್ನು, 2 ಸ್ಥಾನಗಳು ಸ್ವತಂತ್ರ ಅಭ್ಯರ್ಥಿಗಳ ಪಾಲಾಗಿದೆ. ಕಳೆದ ವಾರ ಅಭ್ಯರ್ಥಿಯ ಮರಣದ ನಂತರ ಒಂದು ಸ್ಥಾನಕ್ಕೆ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು.

ತಿರುವನಂತಪುರಂ ಕಾರ್ಪೊರೇಷನ್​​​ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; 45 ವರ್ಷಗಳ ಎಡಪಕ್ಷಗಳ ಆಡಳಿತ ಅಂತ್ಯ

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶಗಳು ಹೊರಬಿದ್ದಿದೆ. ತಿರುವನಂತಪುರಂನಲ್ಲಿ ಕಾರ್ಪೋರೇಷನ್​​​ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ ಬಿಜೆಪಿ ಇಲ್ಲಿ ಎಡಪಕ್ಷಗಳ 45 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ. ಎಡರಂಗಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಬಿಜೆಪಿ ನೇತೃತ್ವದ NDA ತಿರುವನಂತಪುರಂ ನಗರಪಾಲಿಕೆಯನ್ನು ಗೆದ್ದುಕೊಂಡಿತು.

ಹೈದರಾಬಾದ್​​ನಲ್ಲಿ ಮಲತಂದೆಯಿಂದ 11 ವರ್ಷದ ಬಾಲಕನ ಕೊಲೆ

ಹೈದರಾಬಾದ್‌ನ ಬಂಡ್ಲಗುಡದಲ್ಲಿ ಮಲತಂದೆ ಹಲ್ಲೆ ನಡೆಸಿ ಥಳಿಸಿದ ಪರಿಣಾಮದಿಂದ ಅಪ್ರಾಪ್ತ ಬಾಲಕ ಸಾವನ್ನಪ್ಪಿದ್ದಾನೆ. ಹೈದರಾಬಾದ್‌ನ 11 ವರ್ಷದ ಬಾಲಕನೊಬ್ಬ ತನ್ನ ಮಲತಂದೆಯಿಂದ ಕ್ರೂರವಾಗಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾನೆ. ಮೊಹಮ್ಮದ್ ಅಸ್ಗರ್ ಎಂದು ಗುರುತಿಸಲಾದ ಅಪ್ರಾಪ್ತ ಬಾಲಕ ಚಂದ್ರಾಯನಗುಟ್ಟ ಪ್ರದೇಶದ ನಿವಾಸಿ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತನಿಗೆ ಹೊಡೆದು ನೆಲಕ್ಕೆ ಎಸೆಯಲಾಗಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಬಾಲಕ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ.

ಬೀಗ ಹಾಕಿದ ಮನೆಯೊಳಗೆ ನೇಣು ಹಾಕಿಕೊಂಡು ತಾಯಿ-ಮಕ್ಕಳು ಸಾವು

ನವದೆಹಲಿಯಲ್ಲಿ ವಿಚಿತ್ರವಾದ ಅಪರಾಧ ಪ್ರಕರಣವೊಂದು ನಡೆದಿದೆ. ತಾಯಿ ಮತ್ತು ಆಕೆಯ ಇಬ್ಬರು ಗಂಡು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಆಸ್ತಿಯನ್ನು ವಶಪಡಿಸಿಕೊಳ್ಳಲು ಪೊಲೀಸರು ಮತ್ತು ಅಧಿಕಾರಿಗಳು ದೆಹಲಿಯ ಮನೆಯೊಂದಕ್ಕೆ ಹೋಗಿದ್ದಾರೆ. ಆಗ ಆ ಮನೆಯಲ್ಲಿ ತಾಯಿ ಮತ್ತು ಆಕೆಯ ಇಬ್ಬರು ಗಂಡು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡು ಶಾಕ್ ಆಗಿದ್ದಾರೆ.

ಮೆಸ್ಸಿಯ ಕಾರ್ಯಕ್ರಮದಲ್ಲಿ ನಡೆದ ಗಲಾಟೆಗೆ ಸಿಎಂ ಮಮತಾ ಬ್ಯಾನರ್ಜಿ ಕ್ಷಮೆ ಯಾಚನೆ

ಫುಟ್ಬಾಲ್ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಅವರ ಕಾರ್ಯಕ್ರಮದ ಸಂದರ್ಭದಲ್ಲಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಗಲಾಟೆಯ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಫುಟ್​​ಬಾಲ್ ಆರಾಧ್ಯ ದೈವ ಮೆಸ್ಸಿಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಹೆಚ್ಚುವರಿಯಾಗಿ ಹಣ ಕೊಟ್ಟು ಟಿಕೆಟ್ ಖರೀದಿಸಿದ್ದರು. ಆದರೆ, ಮೆಸ್ಸಿ ಬೇಗನೆ ಕ್ರೀಡಾಂಗಣದಿಂದ ಹೊರಗೆ ಹೋಗಿದ್ದರಿಂದ ಕೋಪಗೊಂಡ ಅಭಿಮಾನಿಗಳು ದಾಂಧಲೆ ಎಬ್ಬಿಸಿದ್ದಾರೆ.

ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್​!

ಪಾಕಿಸ್ತಾನ ಭಾರತದಿಂದ ವಿಭಜನೆಯಾದ ಬಳಿಕ ಮೊತ್ತ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಮಹಾಭಾರತದ ಭಾಗವನ್ನು ಒಳಗೊಂಡ ಸಂಸ್ಕೃತ ಶ್ಲೋಕಗಳನ್ನು ಪಠ್ಯದಲ್ಲಿ ಪರಿಚಯಿಸಲಾಗಿದೆ. ಮಹಾಭಾರತ ಮತ್ತು ಭಗವದ್ಗೀತೆಯ ಭಾಗಗಳನ್ನು ಒಳಗೊಂಡಂತೆ ಸಂಸ್ಕೃತ ಪದ್ಯಗಳನ್ನು ಲಾಹೋರ್ ಮ್ಯಾನೇಜ್‌ಮೆಂಟ್ ಸೈನ್ಸಸ್ ವಿಶ್ವವಿದ್ಯಾಲಯದ (LUMS) ತರಗತಿಯೊಳಗೆ ಕಲಿಸಲಾಗುತ್ತಿದೆ. ಏಕೆಂದರೆ ಈ ಸಂಸ್ಥೆಯು ಐತಿಹಾಸಿಕ ಭಾಷೆಯನ್ನು ಔಪಚಾರಿಕವಾಗಿ ಕಲಿಸಲು ಪ್ರಾರಂಭಿಸಿದೆ.

ಆಂಧ್ರದಲ್ಲಿ ಬಸ್ ಕಣಿವೆಗೆ ಉರುಳಿ 9 ಸಾವು; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಬಸ್ ಕಂದಕಕ್ಕೆ ಉರುಳಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು 22 ಮಂದಿ ಗಾಯಗೊಂಡಿದ್ದಾರೆ. 35 ಪ್ರಯಾಣಿಕರು ಮತ್ತು ಇಬ್ಬರು ಚಾಲಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಚಿತ್ತೂರು ಜಿಲ್ಲೆಯಿಂದ ತೆಲಂಗಾಣಕ್ಕೆ ತೆರಳುತ್ತಿತ್ತು. ಚಿತ್ತೂರು-ಮರೇಡುಮಿಲಿ ಘಾಟ್ ರಸ್ತೆಯಲ್ಲಿ ದುರ್ಗಾ ದೇವಸ್ಥಾನದ ಬಳಿ ಬೆಳಿಗ್ಗೆ 4.30ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಗರ್ಭಿಣಿಯ ಅನಿರೀಕ್ಷಿತ ಸಾವಿಗೆ ಹೊಸ ತಿರುವು; 10 ದಿನಗಳ ಬಳಿಕ ಬಯಲಾಯ್ತು ಅಸಲಿ ಸತ್ಯ

ಧರ್ಮಪುರಿ ಬಳಿ ಗರ್ಭಿಣಿಯೊಬ್ಬರು ಮನೆಯ ಮೆಟ್ಟಿಲುಗಳಿಂದ ಬಿದ್ದು ದುರಂತ ಸಾವನ್ನಪ್ಪಿದ್ದರು. ಅವರ ಕುಟುಂಬ ಮತ್ತು ಸಂಬಂಧಿಕರು ಆಕೆಯ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಿ ಸಮಾಧಿ ಮಾಡಿದ್ದರು. ಈ ಮಧ್ಯೆ, ಮೃತ ಮಹಿಳೆಯ ಪತಿಯ ಕೃತ್ಯದ ಬಗ್ಗೆ ಆ ಮಹಿಳೆಯ ಕುಟುಂಬಕ್ಕೆ ಇದ್ದಕ್ಕಿದ್ದಂತೆ ಅನುಮಾನ ಬಂದಿತ್ತು. ಆ ಮಹಿಳೆಯ ಕುಟುಂಬವು ತಕ್ಷಣವೇ ಈ ವಿಷಯದ ಬಗ್ಗೆ ಅವರನ್ನು ಪ್ರಶ್ನಿಸಿತು. ಆದರೆ ಅವರು ಸರಿಯಾಗಿ ಉತ್ತರ ನೀಡಲಿಲ್ಲ. ಬಳಿಕ ಪೊಲೀಸರು ನಡೆಸಿದ ತನಿಖೆಯ ಸಮಯದಲ್ಲಿ ವಿವಿಧ ಆಘಾತಕಾರಿ ವಿವರಗಳು ಬೆಳಕಿಗೆ ಬಂದಿವೆ. ಆಕೆ ಸಾವನ್ನಪ್ಪಿ 10 ದಿನಗಳ ಬಳಿಕ ಈ ವಿಷಯ ಬಯಲಾಗಿದೆ.