
National News
ರಾಷ್ಟ್ರೀಯ ಸುದ್ದಿಗಳನ್ನು ಸಮಗ್ರ ಚಿತ್ರಣ ಇಲ್ಲಿ ಸಿಗುತ್ತೇ. ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ. ರಾಜಕೀಯವಾಗಿ, ಸಾಮಾಜಿಕ, ಹಾಗೂ ದೇಶದ ಬೇರೆ ಬೇರೆ ಊರಿನಲ್ಲಿ ನಡೆದ ಘಟನೆಗಳನ್ನು, ಸುದ್ದಿಗಳನ್ನು ಇಲ್ಲಿ ತಿಳಿಸಲಾಗುವುದು. ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಸಂಗತಿಗಳನ್ನು ಹಾಗೂ ಸುದ್ದಿಗಳನ್ನು ತಕ್ಷಣದಲ್ಲಿ ನೀಡಲಾಗುವುದು.
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಭರ್ಜರಿ ಡ್ಯಾನ್ಸ್
ಕೇಜ್ರಿವಾಲ್ ತಮ್ಮ ಮಗಳ ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪಚಿತ್ರದ ಜನಪ್ರಿಯ ಟ್ರ್ಯಾಕ್ ಸಾಮಿಯ ಹಿಂದಿ ಆವೃತ್ತಿಗೆ ಕೇಜ್ರಿವಾಲ್ ಕುಣಿಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಭಗವಂತ್ ಮಾನ್ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ತಮ್ಮ ಪತ್ನಿ ಗುರುಪ್ರೀತ್ ಕೌರ್ ಅವರೊಂದಿಗೆ 'ನಾಚಿ ಜೋ ಸಾದೇ ನಾಲ್' ಹಾಡಿಗೆ ಭಾಂಗ್ರಾ ನೃತ್ಯ ಮಾಡಿದ್ದಾರೆ.
- Sushma Chakre
- Updated on: Apr 18, 2025
- 10:17 pm
ರಾಣಾ ಪ್ರತಾಪ್, ಶಿವಾಜಿ ಮಹಾರಾಜ್ ನಮ್ಮ ಹೀರೋಗಳೇ ವಿನಃ ಔರಂಬಜೇಬನಲ್ಲ; ರಾಜನಾಥ್ ಸಿಂಗ್
ಔರಂಗಜೇಬ ಒಬ್ಬ ವೀರ ಎಂದು ಭಾವಿಸುವವರು ಮೊಘಲ್ ಚಕ್ರವರ್ತಿ ಒಬ್ಬ ಧರ್ಮಾಂಧ, ಕ್ರೂರ ಆಡಳಿತಗಾರ ಎಂದು ಬರೆದ ಪಂಡಿತ್ ಜವಾಹರಲಾಲ್ ನೆಹರು ಅವರ ಬರಹವನ್ನೂ ಓದಬೇಕಿತ್ತು. ಅಂತಹ ವ್ಯಕ್ತಿ ವೀರನಾಗಲು ಸಾಧ್ಯವಿಲ್ಲ. ಸ್ವಾತಂತ್ರ್ಯಾನಂತರದ ಎಡಪಂಥೀಯ ಒಲವನ್ನು ಹೊಂದಿರುವ ಇತಿಹಾಸಕಾರರು ರಾಣಾ ಪ್ರತಾಪ್ ಮತ್ತು ಶಿವಾಜಿ ಮಹಾರಾಜರಿಗೆ ಸರಿಯಾದ ಮನ್ನಣೆ ನೀಡಲಿಲ್ಲ ಆದರೆ ಔರಂಗಜೇಬನನ್ನು ಶ್ಲಾಘಿಸಿದರು" ಎಂದು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಟೀಕಿಸಿದ್ದಾರೆ.
- Sushma Chakre
- Updated on: Apr 18, 2025
- 9:55 pm
ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಫಾರ್ಚೂನರ್ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಲಲಿತಪುರದಲ್ಲಿ ರಾಜಧಾನಿ ಧಾಬಾದ ಮುಂಭಾಗದಲ್ಲಿರುವ ಕಚ್ರೌಂಡ ಅಣೆಕಟ್ಟು ಬಳಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಗುರುತನ್ನು ಇನ್ನೂ ಪತ್ತೆಹಚ್ಚಿಲ್ಲ. ಆತನ ಸ್ಥಿತಿ ಗಂಭೀರವಾಗಿದೆ. ಬಸ್ ಅಡ್ಡಬಂದಿದ್ದರಿಂದ ವೇಗವಾಗಿ ಬರುತ್ತಿದ್ದ ಕಾರು ಸಮೀಪಿಸುತ್ತಿರುವುದನ್ನು ಗಮನಿಸದೆ ಮುಂದೆ ಹೋದ ಆತ ಕಾರು ಡಿಕ್ಕಿಯ ರಭಸಕ್ಕೆ ಸುಮಾರು 50 ಮೀಟರ್ ದೂರಕ್ಕೆ ಬಿದ್ದಿದ್ದಾನೆ.
- Sushma Chakre
- Updated on: Apr 18, 2025
- 9:27 pm
ಗೋವಾದಲ್ಲಿ ಬೀದಿ ನಾಯಿ ದಾಳಿಯಿಂದ 18 ತಿಂಗಳ ಹೆಣ್ಣು ಮಗು ಸಾವು
ಗೋವಾದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಬಾಲಕಿ ತನ್ನ ಚಿಕ್ಕಪ್ಪನ ಮನೆಯ ಹೊರಗೆ ಆಟವಾಡುತ್ತಿದ್ದಾಗ 5 ಬೀದಿ ನಾಯಿಗಳ ಹಿಂಡು ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿತು. ಆ ಮಗುವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಿದರು.
- Sushma Chakre
- Updated on: Apr 18, 2025
- 9:10 pm
ನಿಮ್ಮ ದೇಹಕ್ಕೆ ಎಷ್ಟು ಪ್ಯಾರಾಸಿಟಮಾಲ್ ಸೇಫ್? ಡೋಸ್ ಜಾಸ್ತಿಯಾದರೆ ಏನು ಮಾಡಬೇಕು?
ಭಾರತೀಯರಲ್ಲಿ ಪ್ಯಾರಾಸಿಟಮಾಲ್ ಸೇವಿಸದೇ ಇರುವವರೇ ಕಡಿಮೆ ಎನ್ನಬಹುದು. ಜ್ವರಕ್ಕೆ ಮಾತ್ರವಲ್ಲದೆ ಪೇನ್ ಕಿಲ್ಲರ್ ಆಗಿಯೂ ಉಪಯೋಗಿಸುವ ಈ ಮಾತ್ರೆ ಬಹುತೇಕ ಮನೆಯ ಮೆಡಿಕಲ್ ಕಿಟ್ನಲ್ಲಿ ಸ್ಥಾನ ಪಡೆದಿರುತ್ತದೆ. ಇತ್ತೀಚೆಗೆ ಅಮೆರಿಕ ಮೂಲದ ವೈದ್ಯರೊಬ್ಬರು ಭಾರತೀಯರು ನೋವು ನಿವಾರಕವನ್ನು "ಕ್ಯಾಂಡಿಯಂತೆ" ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಕೊವಿಡ್-19 ಸಾಂಕ್ರಾಮಿಕ ರೋಗದಿಂದ ಡೋಲೋ-650 ಎಂದೂ ಕರೆಯಲ್ಪಡುವ ಪ್ಯಾರಾಸಿಟಮಾಲ್ ಎಲ್ಲರ ಮನೆಗಳಲ್ಲೂ ಸ್ಥಾನ ಪಡೆದಿದೆ. ಜ್ವರ ಮತ್ತು ದೇಹದ ನೋವುಗಳ ವಿರುದ್ಧ ರಕ್ಷಣೆಗೆ ಇದೇ ಬೆಸ್ಟ್ ಎಂದು ಜನರು ನಂಬಿದ್ದಾರೆ. ಹಾಗಾದರೆ, ಈ ಮಾತ್ರೆ ಎಷ್ಟು ಸೇಫ್?
- Sushma Chakre
- Updated on: Apr 18, 2025
- 7:45 pm
ನಾಯಿ ಮರಿ ತರಲು 200 ರೂ. ಕೊಡಲಿಲ್ಲವೆಂದು ಅಮ್ಮನಿಗೆ ಸುತ್ತಿಗೆಯಿಂದ ಹೊಡೆದು ಕೊಂದ ಮಗ!
ಛತ್ತೀಸ್ಗಢದ ವ್ಯಕ್ತಿಯೊಬ್ಬ ನಾಯಿಯನ್ನು ಖರೀದಿಸಲು 200 ರೂ. ಹಣ ಕೊಡಲಿಲ್ಲವೆಂದು ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಈ ವೇಳೆ ಅಡ್ಡಬಂದ ಆತನ ಪತ್ನಿಗೆ ಗಾಯಗಳಾಗಿವೆ. ಹಾಗಂತ ಆತನೇನೂ ಸಣ್ಣ ಪ್ರಾಯದವನಲ್ಲ. 45 ವರ್ಷದ ಪ್ರದೀಪ್ ದೇವಾಂಗ 800 ರೂ.ಗೆ ನಾಯಿಮರಿಯನ್ನು ಖರೀದಿಸಲು ಉತ್ಸುಕನಾಗಿದ್ದ. ಅದಕ್ಕಾಗಿ ತಾಯಿಯ ಬಳಿ 200 ರೂ. ಹಣ ಕೇಳಿದ್ದ. ಆದರೆ, ತಾಯಿ ಹಣ ಕೊಟ್ಟಿರಲಿಲ್ಲ. ಇದರಿಂದ ಅಮ್ಮನನ್ನೇ ಕೊಲೆ ಮಾಡಿದ್ದಾನೆ.
- Sushma Chakre
- Updated on: Apr 18, 2025
- 6:59 pm
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹಲವಾರು ವ್ಯಕ್ತಿಗಳನ್ನು ಹೊತ್ತೊಯ್ಯುತ್ತಿದ್ದ ಬೋಟ್ ಇದ್ದಕ್ಕಿದ್ದಂತೆ ಅಲುಗಾಡಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಬೋಟ್ನಲ್ಲಿದ್ದ ಪ್ರವಾಸಿಗರಲ್ಲಿ ಒಬ್ಬರು ಸಮತೋಲನ ಕಳೆದುಕೊಂಡು ಗರುಡ್ ಚಟ್ಟಿ ಸೇತುವೆಯ ಬಳಿ ಗಂಗಾ ನದಿಯಲ್ಲಿ ಬಿದ್ದಿದ್ದಾರೆ. ಈ ವಿಡಿಯೊದಲ್ಲಿ ಸಾಗರ್ ಪ್ಯಾಡಲ್ಗಳನ್ನು ಬಳಸಿ ಬೋಟ್ ಅನ್ನು ಮತ್ತೆ ಏರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಬೋಟ್ನಲ್ಲಿ ಕುಳಿತಿದ್ದ ಜನರು ಅವನನ್ನು ಮತ್ತೆ ಮೇಲೆ ತರಲು ಅವನ ಹತ್ತಿರ ಹೋಗುವುದನ್ನು ಸಹ ಕಾಣಬಹುದು. ಆದರೆ ನದಿಯ ಪ್ರವಾಹ ಎಷ್ಟು ಪ್ರಬಲವಾಗಿತ್ತೆಂದರೆ ಆ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಸಾಗರ್ ಅವರ ಶವವನ್ನು ರಕ್ಷಣಾ ತಂಡವು ಗಂಗಾ ನದಿಯಿಂದ ಹೊರತೆಗೆದಿದೆ. ನಂತರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
- Sushma Chakre
- Updated on: Apr 18, 2025
- 5:59 pm
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಗುಜರಾತ್ನ ಮೋರ್ಬಿಯಲ್ಲಿ ಮಾಲೀಕನ ಮೇಲೆ ದಾಳಿ ಮಾಡಲು ಬಂದ ಮೂವರು ವ್ಯಕ್ತಿಗಳನ್ನು ನಾಯಿ ಸೋಲಿಸಿದೆ. ಸಿಸಿಟಿವಿ ದೃಶ್ಯಗಳಲ್ಲಿ ಮೂವರು ವ್ಯಕ್ತಿಗಳು ರಾತ್ರಿಯ ವೇಳೆ ತೋಟದ ಮನೆಯೊಳಗೆ ಅತಿಕ್ರಮಣ ಮಾಡಿ ವ್ಯಕ್ತಿಯ ಮೇಲೆ ದಾಳಿ ಮಾಡಲು ಬಂದಿರುವುದನ್ನು ತೋರಿಸಲಾಗಿದೆ. ಆದರೆ ಆ ಸಾಕು ನಾಯಿ ತನ್ನ ಬೋನ್ ಮುರಿದು ಆ ವ್ಯಕ್ತಿಗಳನ್ನು ಓಡಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಅಪರಾಧಿಗಳನ್ನು ಗುರುತಿಸಲು ಮತ್ತು ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿಯವರೆಗೆ, ಯಾರನ್ನೂ ಬಂಧಿಸಲಾಗಿಲ್ಲ.
- Sushma Chakre
- Updated on: Apr 18, 2025
- 5:36 pm
ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೆದುರು 33 ನಕ್ಸಲರ ಶರಣಾಗತಿ
ಛತ್ತೀಸ್ಗಢದ ಫುಲ್ಬಾಗ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಡೇಸಟ್ಟಿ ಗ್ರಾಮ ಪಂಚಾಯತ್ನಲ್ಲಿ ಶರಣಾದ ಇತರ 11 ನಕ್ಸಲರು ಸಕ್ರಿಯರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದರೊಂದಿಗೆ ಬಡೇಸಟ್ಟಿ ನಕ್ಸಲ್ ಮುಕ್ತ ಗ್ರಾಮ ಪಂಚಾಯತ್ ಆಗಿ ಮಾರ್ಪಟ್ಟಿದೆ. ಕಳೆದ 15 ದಿನಗಳಿಂದ ಪೊಲೀಸರು ಬಡೇಸಟ್ಟಿ ಗ್ರಾಮವನ್ನು ಗುರಿಯಾಗಿಸಿಕೊಂಡಿದ್ದಾರೆ. ನಿಷೇಧಿತ ಸಂಘಟನೆಯ ಮಿಲಿಟಿಯಾ ಮತ್ತು ಕ್ರಾಂತಿಕಾರಿ ಪಕ್ಷದ ಸಮಿತಿಯಂತಹ ಗ್ರಾಮ ಮಟ್ಟದ ಸದಸ್ಯರು ಶರಣಾಗುವಂತೆ ಪ್ರೋತ್ಸಾಹಿಸಲು ಸ್ಥಳೀಯ ಪಂಚಾಯತ್ ಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
- Sushma Chakre
- Updated on: Apr 18, 2025
- 4:59 pm
ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಆರೋಪಿಯ ಬೆತ್ತಲೆ ಮೆರವಣಿಗೆ, ಎತ್ತಿನ ಗಾಡಿಗೆ ಕಟ್ಟಿ ಹಲ್ಲೆ
ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ಅತ್ಯಾಚಾರ ಆರೋಪಿಗೆ ಊರಿನವರೇ ಸೇರಿ ಬುದ್ಧಿ ಕಲಿಸಿದ್ದಾರೆ. 22 ವರ್ಷದ ಯುವಕನ ದೇಹವನ್ನು ಬೆತ್ತಲೆಯಾಗಿಸಿ ಎತ್ತಿನ ಗಾಡಿಗೆ ಕಟ್ಟಿ ಹಾಕಲಾಗಿದೆ. ಹಲವಾರು ಪುರುಷರು ಮತ್ತು ಮಹಿಳೆಯರು ಛೂ ಬಿಟ್ಟಿರುವುದನ್ನು ಮತ್ತು ಇತರರು ಥಳಿಸಲು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
- Sushma Chakre
- Updated on: Apr 18, 2025
- 3:56 pm