ಈದ್ ಹಬ್ಬದ ದಿನವೇ ಜೆರುಸಲೆಮ್ ಮೇಲೆ ಇರಾನ್ ಕ್ಷಿಪಣಿ ದಾಳಿ
ಜೆರುಸಲೇಂ ಮೇಲೆ ಇರಾನಿನ ಕ್ಷಿಪಣಿ ದಾಳಿ ನಡೆದಿದೆ. ಅಲ್-ಅಕ್ಸಾ ಮಸೀದಿಯಿಂದ ಕೆಲವೇ ನೂರು ಮೀಟರ್ ದೂರದಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ನೂರಾರು ಮುಸ್ಲಿಂ ಆರಾಧಕರು ಮಸೀದಿಯ ಗೇಟ್ ಹೊರಗೆ ತಮ್ಮ ಈದ್ ಪ್ರಾರ್ಥನೆಗಳನ್ನು ನಡೆಸಬೇಕಾಯಿತು. ಸುಮಾರು 60 ವರ್ಷಗಳಲ್ಲಿ ಮೊದಲ ಬಾರಿಗೆ ಮಸೀದಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಯಿತು. ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳಿಗೆ ವಿಶ್ವದ ಕೆಲವು ಪವಿತ್ರ ಸ್ಥಳಗಳಿಂದ ಕೆಲವೇ ಮೀಟರ್ ದೂರದಲ್ಲಿರುವ ಈದ್ ಅಲ್-ಫಿತರ್ ಆಚರಣೆಯ ಸಮಯದಲ್ಲಿ ಇರಾನಿನ ಕ್ಷಿಪಣಿ ಜೆರುಸಲೆಮ್ ಮೇಲೆ ದಾಳಿ ಮಾಡಿದೆ ಎಂದು ಇಸ್ರೇಲ್ ಹೇಳಿದೆ.
- Sushma Chakre
- Updated on: Mar 21, 2026
- 10:47 pm
ರಾಹುಲ್ ಗಾಂಧಿ ಬಿಜೆಪಿಯ ಬಿ-ಟೀಮ್; ಕಾಂಗ್ರೆಸ್ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡುತ್ತಿದೆ ಮತ್ತು ವಿಧಾನಸಭಾ ಚುನಾವಣೆಗೆ ಮುನ್ನ ಓಲೈಕೆ ರಾಜಕೀಯದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಹುಲ್ ಗಾಂಧಿಯವರ ರಾಜಕೀಯ ವಿಧಾನವು ಬಿಜೆಪಿಗೆ ಪದೇ ಪದೇ ಪ್ರಯೋಜನವನ್ನು ನೀಡಿದೆ. ಹೀಗಾಗಿ, ಕಾಂಗ್ರೆಸ್ ಬಿಜೆಪಿಯ ಬಿ-ಟೀಂ ಎಂದು ಟೀಕಿಸಿದ್ದಾರೆ.
- Sushma Chakre
- Updated on: Mar 21, 2026
- 10:24 pm
WITT Summit 2026: ರಾಜಕೀಯದಿಂದ ಕ್ರೀಡೆಯವರೆಗೆ; ವಿಟ್ ಶೃಂಗಸಭೆಯ 2ನೇ ದಿನದ ಆಕರ್ಷಣೆಗಳಿವು
'ಭಾರತ ಮತ್ತು ವಿಶ್ವ' ಎಂಬ ಥೀಮ್ನಲ್ಲಿ WITT ಶೃಂಗಸಭೆಯ 2ನೇ ದಿನದಂದು ರಾಜಕೀಯ ನಾಯಕರಿಂದ ಹಿಡಿದು ಕ್ರೀಡಾಪಟುಗಳವರೆಗೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಟಿವಿ9ನ "ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026" ಭಾರತದ ಇಂಧನ, ಮೂಲಸೌಕರ್ಯ ಮತ್ತು ಕೈಗಾರಿಕಾ ಭವಿಷ್ಯದ ಮೇಲೆ ಕೇಂದ್ರೀಕರಿಸುತ್ತದೆ. ಮಾರ್ಚ್ 23-24ರಂದು ನಡೆಯಲಿರುವ ಈ ಶೃಂಗಸಭೆಯ 4ನೇ ಆವೃತ್ತಿಯು ದೇಶದ ಅಭಿವೃದ್ಧಿ ಪಥವನ್ನು ರೂಪಿಸುವ "ಭಾರತ ಮತ್ತು ವಿಶ್ವ" ಎಂಬ ವಿಷಯದ ಕುರಿತು ಚರ್ಚಿಸಲಿದೆ.
- Sushma Chakre
- Updated on: Mar 21, 2026
- 9:33 pm
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ 6 ಬಿಜೆಡಿ ಶಾಸಕರ ಅಮಾನತು
ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವುದು ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಿಜು ಜನತಾದಳ (ಬಿಜೆಡಿ) ತನ್ನ ಪಕ್ಷದ 6 ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಇಂದು ಹೊರಡಿಸಿದ ಅಧಿಕೃತ ಆದೇಶದಲ್ಲಿ ಈ ಅಮಾನತು ಕುರಿತು ಘೋಷಿಸಲಾಗಿದೆ.
- Sushma Chakre
- Updated on: Mar 21, 2026
- 8:50 pm
ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ 11 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ
ಕೇರಳದ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಪ್ರಕಟವಾಗಿದೆ. ಚುನಾವಣೆಗೆ ಬಿಜೆಪಿಯಿಂದ ಇಂದು 11 ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತಿರುವನಂತಪುರಂನಿಂದ ಕೆ. ಜಯನ್ ಕಣಕ್ಕಿಳಿದಿದ್ದಾರೆ. ಇಂದು ಬಿಜೆಪಿ ಪುದುಚೇರಿ ಮತ್ತು ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇರಳ ವಿಧಾನಸಭಾ ಚುನಾವಣೆಗಳು ಏಪ್ರಿಲ್ 9ರಂದು ನಡೆಯಲಿದೆ.
- Sushma Chakre
- Updated on: Mar 21, 2026
- 8:24 pm
ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತ USCIRF ವರದಿಗೆ 275 ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳಿಂದ ವಿರೋಧ
USCIRF ಎಂಬುದು ಅಮೆರಿಕದ ಸ್ವತಂತ್ರ ಸಂಸ್ಥೆ. ಇದು ವಿವಿಧ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ನೀಡುತ್ತದೆ. ಇತ್ತೀಚಿನ USCIRF ವರದಿಯಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುಸಿತವಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಭಾರತೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ವರದಿಯನ್ನು ವಿರೋಧಿಸಿ 275 ಭಾರತೀಯ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು ಸಹಿ ಹಾಕಿ ಬಹಿರಂಗವಾಗಿ ಟೀಕಿಸಿದ್ದಾರೆ.
- Sushma Chakre
- Updated on: Mar 21, 2026
- 7:34 pm
ಇರಾನ್ ಅಧ್ಯಕ್ಷರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ; ನೌರುಜ್ನಲ್ಲಿ ಮೂಲಸೌಕರ್ಯದ ಮೇಲಿನ ದಾಳಿಗೆ ಖಂಡನೆ
ಪ್ರಧಾನಿ ನರೇಂದ್ರ ಮೋದಿ ಇಂದು ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಈ ವೇಳೆ ಈದ್ ಶುಭಾಶಯಗಳನ್ನು ತಿಳಿಸಿದ್ದಾರೆ. ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಜೊತೆ ನಡೆಯುತ್ತಿರುವ ಸಂಘರ್ಷದ ನಡುವೆಯೂ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಮೋದಿ ಕರೆ ನೀಡಿದರು. ಸುಮಾರು 8 ದಿನಗಳಲ್ಲಿ ಪ್ರಧಾನಿ ಮೋದಿ ಪೆಜೆಶ್ಕಿಯನ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದು ಇದು ಎರಡನೇ ಬಾರಿ.
- Sushma Chakre
- Updated on: Mar 21, 2026
- 5:55 pm
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ; ಕಾಮಗಾರಿಯ ಗುಣಮಟ್ಟದ ಬಗ್ಗೆ ಆಕ್ರೋಶ
ಬಿಹಾರದಲ್ಲಿ ಗಂಗಾ ನದಿಯ ಪ್ರವಾಹದಿಂದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿಯಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಸೀಮಾಂಚಲ್ ಪ್ರದೇಶಕ್ಕೆ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಮತ್ತು ಬಿಹಾರ ರಾಜ್ಯದಿಂದ ಅಸ್ಸಾಂ ಮತ್ತು ದೇಶದ ಇತರ ಈಶಾನ್ಯ ಪ್ರದೇಶಗಳಿಗೆ ಜಾರ್ಖಂಡ್ ಮೂಲಕ ಸಂಚಾರಕ್ಕೆ ಅನುಕೂಲವಾಗುವ ಈ ಸೇತುವೆ ಬಿಹಾರ ರಾಜ್ಯಕ್ಕೆ ಬಹಳ ಮುಖ್ಯವಾಗಿದೆ.
- Sushma Chakre
- Updated on: Mar 21, 2026
- 4:26 pm
ಅಪ್ಪ-ಅಮ್ಮ ಮನೆಯಲ್ಲಿ ಬೆಕ್ಕು ಸಾಕುವಂತಿಲ್ಲ ಎಂದಿದ್ದಕ್ಕೆ ವೈದ್ಯೆ ಆತ್ಮಹತ್ಯೆ
ಕೆಲವೊಮ್ಮೆ ತೀರಾ ಕ್ಷುಲ್ಲಕ ಕಾರಣಕ್ಕೆ ಕೆಲವರು ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಬದುಕಬೇಕೆಂದು ಎಷ್ಟೇ ಆಸೆಯಿದ್ದರೂ ಅವರ ಆಯಸ್ಸು ಗಟ್ಟಿಯಾಗಿರುವುದಿಲ್ಲ, ವಿಧಿಯಾಟಕ್ಕೆ ಬಲಿಯಾಗಬೇಕಾಗುತ್ತದೆ. ಇತ್ತೀಚೆಗೆ ಈ ಆತ್ಮಹತ್ಯೆಯ ಮನೋಭಾವ ಜನರಲ್ಲಿ ಹೆಚ್ಚಾಗುತ್ತಿದೆ. ಇದು ಒಂದು ರೀತಿಯ ಮಾನಸಿಕ ಸಮಸ್ಯೆಯೂ ಹೌದು. ಖಿನ್ನತೆ, ಆತ್ಮಹತ್ಯೆಯ ಯೋಚನೆ ಪದೇಪದೆ ಮರುಕಳಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕೆಂಬುದು ನಿಜ. ಆದರೆ, ಇಲ್ಲೊಬ್ಬರು ವೈದ್ಯೆಯೇ ತೀರಾ ಸಣ್ಣ ಕಾರಣಕ್ಕೆ ತಮ್ಮ ಜೀವ ತೆಗೆದುಕೊಂಡಿದ್ದಾರೆ.
- Sushma Chakre
- Updated on: Mar 21, 2026
- 3:45 pm
ರೀಲ್ಸ್ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಅರಣ್ಯ ಇಲಾಖೆಯು ಆ ಯುವಕನ ವೈರಲ್ ವೀಡಿಯೊವನ್ನು ಆಧರಿಸಿ ತನಿಖೆಯನ್ನು ಪ್ರಾರಂಭಿಸಿದೆ. ಶಿವಪುರಿಯ ಚಿಂತಹಾರ್ ದೇವಾಲಯದ ಬಳಿ ಇರುವ ಭುಜಾರಿಯಾ ಕೊಳದಿಂದ ಬೃಹತ್ ಮೊಸಳೆ ಹೊರಬಂದಿತ್ತು. ಮೊಸಳೆ ಕೊಳದಿಂದ ಹೊರಬಂದು ರಸ್ತೆಗೆ ಬಿದ್ದಿದ್ದರಿಂದ ಸುತ್ತಮುತ್ತಲಿನ ವಸತಿ ಪ್ರದೇಶದಲ್ಲಿ ಭಯಭೀತ ವಾತಾವರಣ ನಿರ್ಮಾಣವಾಯಿತು. ರಸ್ತೆಯಲ್ಲಿ ಬೃಹತ್ ಮೊಸಳೆಯನ್ನು ನೋಡಿ ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತು. ಆಗ ಒಬ್ಬ ಯುವಕ ಮೊಸಳೆಯ ಬಾಲವನ್ನು ಹಿಡಿದನು. ಆ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆಗಳು ನಡೆಯುತ್ತಿವೆ.
- Sushma Chakre
- Updated on: Mar 20, 2026
- 11:18 pm
ಬಸ್ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಕೆಲವರು ಹಸಿವು ನೀಗಿಸಿಕೊಳ್ಳಲು ತಿಂಡಿಗಳನ್ನು ತಿಂದರೆ ಇನ್ನು ಕೆಲವರು ಟೈಂಪಾಸ್ಗಾಗಿ ತಿನ್ನುತ್ತಾರೆ. ಅದೇರೀತಿ ಬಸ್ನೊಳಗೆ ಕುಳಿತಿದ್ದ ಯುವಕನೊಬ್ಬನಿಗೆ ಹಸಿವಾಗಿತ್ತು. ಚಲಿಸುವ ಬಸ್ಸಿನಲ್ಲಿ ಕುಳಿತಿದ್ದ ಆ ಯುವಕ ತಿಂಡಿಗಾಗಿ ಪಕ್ಕದಲ್ಲೇ ನಿಂತಿದ್ದ ಮಾರಾಟಗಾರನಿಗೆ ಕಿಟಕಿಯಿಂದ ಹಣ ಕೊಟ್ಟನು. ಆದರೆ ಮಾರಾಟಗಾರ ಅವನಿಗೆ ಏನನ್ನೂ ಕೊಡಲಿಲ್ಲ. ದುಡ್ಡನ್ನೂ ತಾನೇ ಇಟ್ಟುಕೊಂಡು, ತಿಂಡಿಯನ್ನೂ ಕೊಡದೆ ಆತ ಯಾಮಾರಿಸಿದ. ಬಸ್ ಚಲಿಸುವಾಗ ಆ ಹುಡುಗ ಕೂಗುತ್ತಾ ಇದ್ದ. ಆದರೆ, ವ್ಯಾಪಾರಿ ಮಾತ್ರ ಮೋಸ ಮಾಡಿದ್ದೇ ಸಾಧನೆಯೆಂದು ನಗುತ್ತಿದ್ದ. ಇದೆಲ್ಲವನ್ನೂ ಪಕ್ಕದಲ್ಲಿ ನಿಂತಿದ್ದವನು ವಿಡಿಯೋ ಮಾಡುತ್ತಿದ್ದನೇ ವಿನಃ ಆ ಹುಡುಗನಿಗಾದ ಅನ್ಯಾಯವನ್ನು ತಡೆಯಲಿಲ್ಲ ಎಂಬುದು ಇನ್ನೊಂದು ವಿಪರ್ಯಾಸ!
- Sushma Chakre
- Updated on: Mar 20, 2026
- 10:47 pm
ನೀವು ಹೇಡಿಗಳು; ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಟ್ರಂಪ್ ಆಕ್ರೋಶ
ತನಗೆ ಸಂಬಂಧವಿಲ್ಲದಿದ್ದರೂ ಇಸ್ರೇಲ್ ಜೊತೆ ಸೇರಿ ಇರಾನ್ ಮೇಲೆ ದಂಡೆತ್ತಿ ಹೋಗಿತ್ತು ಅಮೆರಿಕ. ಅಮೆರಿಕದ ಈ ನಡೆಗೆ ಜಗತ್ತಿನಾದ್ಯಂತ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಸಮಯದಲ್ಲಿ ಬೆಂಬಲ ನೀಡದ ಕಾರಣಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ನ್ಯಾಟೋ ಮಿತ್ರರಾಷ್ಟ್ರಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ದೀರ್ಘಕಾಲದ ಯುಎಸ್ ಮಿತ್ರರಾಷ್ಟ್ರಗಳಾಗಿರುವ ನ್ಯಾಟೋ ರಾಷ್ಟ್ರಗಳನ್ನು "ಹೇಡಿಗಳು, ಕಾಗದದ ಹುಲಿಗಳು" ಎಂದು ಟ್ರಂಪ್ ಲೇವಡಿ ಮಾಡಿದ್ದಾರೆ.
- Sushma Chakre
- Updated on: Mar 20, 2026
- 10:12 pm