ಅಯೋಧ್ಯೆಯ ರಾಮನ ದರ್ಶನಕ್ಕೆ 450 ಕಿ.ಮೀ ಸ್ಕೇಟಿಂಗ್ ಮಾಡಿದ 9 ವರ್ಷದ ಬಾಲಕಿ
9 ವರ್ಷದ ವಂಶಿಕಾ ಯಾದವ್ ಎಂಬ ಬಾಲಕಿ ಅಯೋಧ್ಯೆಯ ರಾಮಲಲ್ಲಾ ದರ್ಶನಕ್ಕಾಗಿ ಫಿರೋಜಾಬಾದ್ನಿಂದ ಅಯೋಧ್ಯೆಗೆ 450 ಕಿ.ಮೀ ದೂರ ಸ್ಕೇಟಿಂಗ್ ಮಾಡಿದ್ದಾಳೆ. ಆಕೆಯ ಈ ಸಾಧನೆ ಹಾಗೂ ಭಕ್ತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಯೋಧ್ಯೆಯಲ್ಲಿರುವ ಬಾಲ ರಾಮನನ್ನು ಭೇಟಿ ಮಾಡಲು ಫಿರೋಜಾಬಾದ್ನಿಂದ ಅಯೋಧ್ಯೆಗೆ 450 ಕಿಲೋಮೀಟರ್ ಸ್ಕೇಟಿಂಗ್ ಮಾಡಿದ್ದಾಳೆ. ರಾಮನ ಮೇಲಿನ ಬಾಲಕಿಯ ಭಕ್ತಿಯ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ.
- Sushma Chakre
- Updated on: Jan 10, 2026
- 10:46 pm
Somnath Swabhiman Parv: ಸೋಮನಾಥ ದೇವಾಲಯದಲ್ಲಿ ನಡೆಯುವ 72 ಗಂಟೆಗಳ ಓಂ ಪಠಣದಲ್ಲಿ ಪ್ರಧಾನಿ ಮೋದಿ ಭಾಗಿ
ಸೋಮನಾಥಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ನಡೆಯಲಿರುವ ಶೌರ್ಯ ಪರ್ವ ಯಾತ್ರೆಗೂ ಮುನ್ನ ಸೋಮನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಗುಜರಾತ್ನ ಸೋಮನಾಥ ದೇವಾಲಯದಲ್ಲಿ ನಾಳೆ (ಭಾನುವಾರ) ಸೋಮನಾಥ ಸ್ವಾಭಿಮಾನ ಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಸೋಮನಾಥಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಈ ವೇಳೆ ಅವರು 72 ಗಂಟೆಗಳ ಕಾಲ ನಡೆಯುವ 'ಓಂ' ಪಠಣದಲ್ಲಿ ಭಾಗಿಯಾಗಿದ್ದಾರೆ.
- Sushma Chakre
- Updated on: Jan 10, 2026
- 10:25 pm
Somnath Temple: ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಗುಜರಾತಿನ ಸೋಮನಾಥಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ನಡೆಯಲಿರುವ ಶೌರ್ಯ ಪರ್ವ ಯಾತ್ರೆಗೂ ಮುನ್ನ ಸೋಮನಾಥ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗುಜರಾತ್ನ ಸೋಮನಾಥ ದೇವಾಲಯದಲ್ಲಿ 1000 ವರ್ಷಗಳ ನಂಬಿಕೆಯನ್ನು ಮತ್ತು ಭಾರತದ ಇತಿಹಾಸವನ್ನು ಪವಿತ್ರ ದೇವಾಲಯದಲ್ಲಿ ಆಚರಿಸಲಾಗುತ್ತಿದೆ. ನಾಳೆ (ಭಾನುವಾರ) ಸೋಮನಾಥ ಸ್ವಾಭಿಮಾನ ಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಸೋಮನಾಥಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ.
- Sushma Chakre
- Updated on: Jan 10, 2026
- 9:42 pm
ಅಯೋಧ್ಯೆಯ ರಾಮ ಮಂದಿರದಲ್ಲಿ ನಮಾಜ್ ಮಾಡಲು ಯತ್ನಿಸಿದ ವ್ಯಕ್ತಿ ಯಾರು?
ಅಯೋಧ್ಯೆಯ ರಾಮ ಮಂದಿರ ಸಂಕೀರ್ಣದೊಳಗೆ ನಮಾಜ್ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರನ್ನು ಕಾಶ್ಮೀರದ ಶೋಪಿಯಾನ್ ನಿವಾಸಿ ಅಬ್ದುಲ್ ಅಹಮದ್ ಶೇಖ್ ಎಂದು ಗುರುತಿಸಲಾಗಿದೆ. ಭದ್ರತಾ ಸಿಬ್ಬಂದಿ ಅವರನ್ನು ರಾಮ ಮಂದಿರ ಸಂಕೀರ್ಣದಲ್ಲಿ ವಶಕ್ಕೆ ಪಡೆದರು. ಕಾಶ್ಮೀರದಲ್ಲಿ ಕೂಡ ತನಿಖೆ ನಡೆಯುತ್ತಿದ್ದು, ಭದ್ರತಾ ಸಿಬ್ಬಂದಿ ಅಬ್ದುಲ್ ಅವರ ಮನೆಗೆ ಭೇಟಿ ನೀಡಿದ್ದಾರೆ.
- Sushma Chakre
- Updated on: Jan 10, 2026
- 9:22 pm
Somnath Swabhiman Parv: ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ಸ್ವಾಭಿಮಾನ್ ಪರ್ವದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್ನ ಸೋಮನಾಥಕ್ಕೆ ಆಗಮಿಸಿದರು. ಈ ವೇಳೆ ದಾರಿಯುದ್ದಕ್ಕೂ ಸಾರ್ವಜನಿಕರು ಕೇಸರಿ ಬಾವುಟಗಳನ್ನು ಹಿಡಿದು, "ಮೋದಿ, ಮೋದಿ" ಎಂದು ಘೋಷಣೆ ಕೂಗುತ್ತಾ ಅದ್ದೂರಿಯಾಗಿ ಸ್ವಾಗತ ಕೋರಿದರು. ಜನವರಿ 8ರಿಂದ 11ರವರೆಗೆ ಆಯೋಜಿಸಲಾಗುತ್ತಿರುವ ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮನಾಥ ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಈ ಸೋಮನಾಥ ಸ್ವಾಭಿಮಾನ ಪರ್ವ ಭಾರತದ 1000 ವರ್ಷಗಳ ನಂಬಿಕೆ ಮತ್ತು ಇತಿಹಾಸವನ್ನು ಗುರುತಿಸುತ್ತದೆ.
- Sushma Chakre
- Updated on: Jan 10, 2026
- 9:23 pm
ತನ್ನ 11 ತಿಂಗಳ ಮಗುವಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!
ಪತಿಯೊಂದಿಗೆ ಜಗಳವಾಡಿದ ಹೈದರಾಬಾದ್ ಮಹಿಳೆಯೊಬ್ಬರು 11 ತಿಂಗಳ ಮಗನಿಗೆ ವಿಷ ನೀಡಿ, ನಂತರ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್ನಲ್ಲಿ ಈ ಘಟನೆ ನಡೆದಿದೆ. 27 ವರ್ಷದ ಮಹಿಳೆಯೊಬ್ಬರು ತನ್ನ 11 ತಿಂಗಳ ಮಗುವಿಗೆ ವಿಷ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯೊಂದಿಗೆ ನಡೆಯುತ್ತಿದ್ದ ಕೌಟುಂಬಿಕ ಕಲಹಗಳಿಂದ ಬೇಸತ್ತ ಆ ಮಹಿಳೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
- Sushma Chakre
- Updated on: Jan 10, 2026
- 9:02 pm
ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಮತ್ತೋರ್ವ ಹಿಂದೂಗೆ ಥಳಿಸಿ, ವಿಷ ಹಾಕಿ ಹತ್ಯೆ
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದೆ. ಮತ್ತೊಬ್ಬ ಹಿಂದೂ ಯುವಕನಿಗೆ ಥಳಿಸಿ, ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ. ಸುನಮ್ಗಂಜ್ ಜಿಲ್ಲೆಯ ಭಂಗದೋಹೋರ್ ಗ್ರಾಮದಲ್ಲಿ 20 ದಿನಗಳ ಅವಧಿಯಲ್ಲಿಯೇ ಮತ್ತೊಬ್ಬ ಹಿಂದೂ ಯುವಕನನ್ನು ಹತ್ಯೆ ಮಾಡಲಾಗಿದೆ. ಜಾಯ್ ಮಹಾಪಾತ್ರೋ ಎಂಬ ವ್ಯಕ್ತಿಯನ್ನು ಅಮಿರುಲ್ ಇಸ್ಲಾಂ ಎಂಬ ಸ್ಥಳೀಯ ಮುಸ್ಲಿಂ ಥಳಿಸಿ ನಂತರ ವಿಷಪ್ರಾಶನ ಮಾಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
- Sushma Chakre
- Updated on: Jan 10, 2026
- 7:55 pm
ಅಯೋಧ್ಯೆಯ ರಾಮ ಮಂದಿರದ ಸುತ್ತ ಆಲ್ಕೋಹಾಲ್, ಮಾಂಸಾಹಾರ ಸೇವನೆ ನಿಷೇಧ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ 15 ಕಿ.ಮೀ ವ್ಯಾಪ್ತಿಯಲ್ಲಿ ಆಲ್ಕೋಹಾಲ್, ಮಾಂಸಾಹಾರ ಮಾರಾಟವನ್ನು ನಿಷೇಧಿಸಲಾಗಿದೆ. ಅಯೋಧ್ಯೆ ಧಾಮ ಮತ್ತು ಪಂಚಕೋಸಿ ಪರಿಕ್ರಮ ಮಾರ್ಗಗಳಲ್ಲಿ ಮಾಂಸಾಹಾರ ನಿಷೇಧಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಕ್ರಮವು ರಾಮ ಮಂದಿರದ ಸುತ್ತ ಧಾರ್ಮಿಕ ಮತ್ತು ಸಾಂಸ್ಕೃತಿಕ ಪಾವಿತ್ರ್ಯತೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ.
- Sushma Chakre
- Updated on: Jan 10, 2026
- 6:50 pm
ತನಿಖೆಗೆ ಅಡ್ಡಿಪಡಿಸಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋದ ಇಡಿ
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಟಿಎಂಸಿ ಸರ್ಕಾರದ ರಾಜಕೀಯ ಸಲಹಾ ಸಂಸ್ಥೆಯಾಗಿರುವ ಐ-ಪ್ಯಾಕ್ (I-PAC) ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಕಚೇರಿಯಲ್ಲಿದ್ದ ಮೊಬೈಲ್, ಲ್ಯಾಪ್ಟಾಪ್, ಕೆಲವು ಫೈಲ್ಗಳನ್ನು ಸಿಎಂ ಮಮತಾ ಬ್ಯಾನರ್ಜಿ ಹೊತ್ತೊಯ್ದಿದ್ದರು. ಇದು ಇಡಿ ಮತ್ತು ಬಂಗಾಳ ಸರ್ಕಾರದ ನಡುವಿನ ವಾದ-ಪ್ರತಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಕೊಲ್ಕತ್ತಾ ಹೈಕೋರ್ಟ್ ಮುಂದೂಡಿದ ಹಿನ್ನೆಲೆಯಲ್ಲಿ ಇಡಿ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
- Sushma Chakre
- Updated on: Jan 10, 2026
- 5:29 pm
ಒಡಿಶಾದ ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ಭುವನೇಶ್ವರದಿಂದ ರೂರ್ಕೆಲಾಗೆ ಹಾರುತ್ತಿದ್ದ 9 ಆಸನಗಳ ವಿಮಾನವು ಟೇಕ್ ಆಫ್ ಆದ ಸುಮಾರು 10 ಕಿಲೋಮೀಟರ್ ದೂರದಲ್ಲಿ ತೊಂದರೆ ಅನುಭವಿಸಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ವರದಿಯಾಗಿದೆ. ಈ ವಿಮಾನದಲ್ಲಿ 6 ಜನರಿದ್ದರು. 4 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಕ್ಯಾಪ್ಟನ್ ನವೀನ್ ಕಡಂಗ ಮತ್ತು ಕ್ಯಾಪ್ಟನ್ ತರುಣ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ.
- Sushma Chakre
- Updated on: Jan 10, 2026
- 4:42 pm
ಆಪರೇಷನ್ ಸಿಂಧೂರದಿಂದಾಗಿ ಪಾಕಿಸ್ತಾನ ಸಂವಿಧಾನವನ್ನೇ ಬದಲಾಯಿಸಿತು; ರಕ್ಷಣಾ ಮುಖ್ಯಸ್ಥ ಟೀಕೆ
ಪಾಕಿಸ್ತಾನದ ವೈಫಲ್ಯಗಳನ್ನು ಆಪರೇಷನ್ ಸಿಂಧೂರ್ ಬಹಿರಂಗಪಡಿಸಿತು. ಹಾಗೇ, ಇದರಿಂದಾಗಿ ಪಾಕ್ ಸಂವಿಧಾನವನ್ನೇ ಬದಲಾಯಿಸುವಂತಾಯಿಸಿತು ಎಂದು ಭಾರತದ ರಕ್ಷಣಾ ಮುಖ್ಯಸ್ಥ ಹೇಳಿದ್ದಾರೆ. ಪಾಕಿಸ್ತಾನದ ಇತ್ತೀಚಿನ ಸಾಂವಿಧಾನಿಕ ತಿದ್ದುಪಡಿಗಳು ಆಪರೇಷನ್ ಸಿಂಧೂರ್ ಸಮಯದಲ್ಲಿ ಅದು ಎದುರಿಸಿದ ವೈಫಲ್ಯಗಳನ್ನು ಪ್ರತಿಬಿಂಬಿಸುತ್ತವೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ. ಪಾಕಿಸ್ತಾನದ ಸಂವಿಧಾನದ 243ನೇ ವಿಧಿಗೆ ತಿದ್ದುಪಡಿ ಮಾಡುವುದರಿಂದ ದೇಶದ ಉನ್ನತ ರಕ್ಷಣಾ ಸಂಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ.
- Sushma Chakre
- Updated on: Jan 10, 2026
- 3:51 pm
ಮಗನಿಗೆ ಚಳಿಯಾಗುತ್ತೆ! ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ
ಜಮ್ಮುವಿನ ರಣಬೀರ್ ಸಿಂಗ್ ಪುರದ ಜಸ್ವಂತ್ ಕೌರ್ ತನ್ನ ಹುತಾತ್ಮ ಮಗ ಬಿಎಸ್ಎಫ್ ಕಾನ್ಸ್ಟೆಬಲ್ ಗುರ್ನಮ್ ಸಿಂಗ್ ಪ್ರತಿಮೆಯನ್ನು ತನ್ನ ಜೀವಂತ ಮಗುವಿನಂತೆ ನೋಡಿಕೊಳ್ಳುತ್ತಾರೆ. ತೀವ್ರ ಚಳಿಗಾಲದ ನಡುವೆ ಆ ತಾಯಿ ತನ್ನ ಮಗನ ಪ್ರತಿಮೆಯನ್ನು ಕಂಬಳಿಯಿಂದ ಸುತ್ತಿದರು. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
- Sushma Chakre
- Updated on: Jan 9, 2026
- 11:09 pm