ಗುಜರಾತ್ನಲ್ಲಿ ಮಳೆಯಿಂದ ಪ್ರವಾಹ, ಉಕ್ಕಿ ಹರಿಯುತ್ತಿದೆ ಡಾಂಗ್ ನದಿ
ದಕ್ಷಿಣ ಗುಜರಾತ್, ಸೌರಾಷ್ಟ್ರ, ಉತ್ತರ ಗುಜರಾತ್ ಮತ್ತು ಮಧ್ಯ ಗುಜರಾತ್ನ ಬಹುತೇಕ ಭಾಗಗಳಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 172 ತಾಲೂಕುಗಳಲ್ಲಿ ಮಳೆ ದಾಖಲಾಗಿದ್ದು, ಜುನಾಗಢ್ ಜಿಲ್ಲೆಯ ಮಾಂಗ್ರೋಲ್ನಲ್ಲಿ ಅತ್ಯಧಿಕ 13 ಇಂಚು ಮಳೆಯಾಗಿದೆ. ಮುಂಜಾನೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ನಡುವೆ ಮತ್ತೊಂದು 68 ತಾಲೂಕುಗಳಲ್ಲಿ ಮಳೆಯಾಗಿದ್ದು, ಡಾಂಗ್ ಜಿಲ್ಲೆಯ ವಘಾಯ್ನಲ್ಲಿ 5.5 ಇಂಚು ಮಳೆ ದಾಖಲಾಗಿದೆ.
- Sushma Chakre
- Updated on: Jul 3, 2026
- 11:11 pm
ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲು 6 ಕಿಮೀ ಬೆನ್ನ ಮೇಲೆ ಹೊತ್ತು ಸಾಗಿದ ಶಾಲಾ ವಾರ್ಡನ್!
ಈ ಘಟನೆ ಗುಮ್ಮಲಕ್ಷ್ಮಿಪುರಂ ಮಂಡಲದ ವಡಪುಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಭುವನೇಶ್ವರಿ ಭದ್ರಗಿರಿ ಆದಿವಾಸಿ ಕಲ್ಯಾಣ ಬಾಲಿಕಾ ಆಶ್ರಮ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ. ಆಕೆಯ ತಂದೆ ಸ್ವಲ್ಪ ಸಮಯದ ಹಿಂದೆ ನಿಧನರಾದರು. ಆಕೆ ತನ್ನ ಚಿಕ್ಕಪ್ಪನ ಆರೈಕೆಯಲ್ಲಿ ಓದುತ್ತಿದ್ದಾಳೆ. ಇತ್ತೀಚೆಗೆ, ರಜೆಗಾಗಿ ಮನೆಗೆ ಮರಳಿದ್ದ ಭುವನೇಶ್ವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಆರಂಭದಲ್ಲಿ ಕುರುಪಮ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಮನೆಗೆ ಕಳುಹಿಸಲಾಯಿತು. ಆದರೆ, ಕೆಲವು ದಿನಗಳ ನಂತರ ಆಕೆಯ ಸ್ಥಿತಿ ಮತ್ತೆ ಹದಗೆಟ್ಟಿತು. ಆಕೆಯ ಕುಟುಂಬವು ತಕ್ಷಣ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿತು.
- Sushma Chakre
- Updated on: Jul 3, 2026
- 10:59 pm
ಜುಲೈ 6ರಿಂದ 3 ದೇಶಗಳಿಗೆ ಮೋದಿ ಪ್ರವಾಸ; 4 ದಶಕದ ಬಳಿಕ ನ್ಯೂಜಿಲೆಂಡ್ಗೆ ಭಾರತದ ಪ್ರಧಾನಿ ಭೇಟಿ
ಪ್ರಧಾನಿ ಮೋದಿ ಅವರು 6 ದಿನಗಳ ಭೇಟಿಗಾಗಿ ಭಾರತದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ, ವ್ಯಾಪಾರ ಸಂಬಂಧಗಳು ಮತ್ತು ಭಾರತೀಯ ವಲಸಿಗರೊಂದಿಗೆ ಮುಖಾಮುಖಿ ಸಭೆಗಳನ್ನು ನಡೆಸುವ ಗುರಿಯನ್ನು ಹೊಂದಿದ್ದಾರೆ. ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರಧಾನ ಮಂತ್ರಿಗಳ ಆಹ್ವಾನದ ಮೇರೆಗೆ ನಡೆಯುತ್ತಿರುವ ಈ ಭೇಟಿಯ ಸಮಯದಲ್ಲಿ, ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮೋದಿ ಆಯಾ ದೇಶಗಳೊಂದಿಗೆ ಪ್ರಮುಖ ಚರ್ಚೆಗಳನ್ನು ನಡೆಸಲಿದ್ದಾರೆ.
- Sushma Chakre
- Updated on: Jul 3, 2026
- 10:11 pm
‘ಆಪರೇಷನ್ ರಾಮ ಮಂದಿರ್’; ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಗಂಭೀರ ಆರೋಪ
ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣದ ಕಳ್ಳತನದ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ವಿರೋಧ ಪಕ್ಷಗಳ ಸಂಸದರು ಮತ್ತು ಶಾಸಕರನ್ನು ಖರೀದಿಸಲು ರಾಮ ಮಂದಿರದ ಕದ್ದ ಹಣವನ್ನು ಬಳಸಲಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ರಾಮ ಮಂದಿರದ ದೇಣಿಗೆ ಹಣ ದೋಚಿದ್ದ ಪ್ರಕರಣದಲ್ಲಿ ಹಲವರನ್ನು ಎಸ್ಐಟಿ ಈಗಾಗಲೇ ಬಂಧಿಸಿದೆ. ಈ ಪ್ರಕರಣ ಇಡೀ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
- Sushma Chakre
- Updated on: Jul 3, 2026
- 9:32 pm
ಸಿಂಧೂ ಜಲ ಒಪ್ಪಂದದ ಬಗ್ಗೆ ನಮ್ಮ ನಿಲುವು ಬದಲಾಗಿಲ್ಲ; ಪಾಕಿಸ್ತಾನದ ಬೆದರಿಕೆಗೆ ಭಾರತ ತಿರುಗೇಟು
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೂ 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (IWT) ಅಮಾನತು ಆದೇಶ ಮುಂದುವರಿಯಲಿದೆ ಎಂದು ಭಾರತ ಪುನರುಚ್ಚರಿಸಿದೆ. ಏಪ್ರಿಲ್ 2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರವು ಈ ಐತಿಹಾಸಿಕ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಭಾರತವು ನೀರನ್ನು ಒಂದು ರಾಜತಾಂತ್ರಿಕ ಆಯುಧವನ್ನಾಗಿ ಬಳಸುತ್ತಿದ್ದು, ಇದು "ಜಲ ಯುದ್ಧಕ್ಕೆ" ಕಾರಣವಾಗಬಹುದು ಎಂದು ಪಾಕಿಸ್ತಾನದ ಸಚಿವರು ಎಚ್ಚರಿಸಿದ್ದರು. ಇದಕ್ಕೆ ಭಾರತ ಪ್ರತಿಕ್ರಿಯೆ ನೀಡಿದೆ.
- Sushma Chakre
- Updated on: Jul 3, 2026
- 8:30 pm
E20 ಎಥೆನಾಲ್ ಮಿಶ್ರಣದ ಕುರಿತ ಸತ್ಯ ಸಂಗತಿ ಮತ್ತು ತಪ್ಪು ಕಲ್ಪನೆಗಳು
ಎಥೆನಾಲ್ ಅನ್ನು ವಾಹನ ಇಂಧನವಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಬಳಸಲಾಗುತ್ತಿದೆ. ಹೆನ್ರಿ ಫೋರ್ಡ್ ಇದನ್ನು "ಭವಿಷ್ಯದ ಇಂಧನ" ಎಂದು ಕರೆದಿದ್ದರು. 1908ರ ಮಾಡೆಲ್ ಟಿ ಕಾರು ಸಂಪೂರ್ಣ ಎಥೆನಾಲ್ಅಥವಾ ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲದಾಗಿತ್ತು. ಬ್ರೆಜಿಲ್ ಪ್ರಸ್ತುತ ಶೇ. 27ರಷ್ಟು (E27) ಮಿಶ್ರಣವನ್ನು ಕಡ್ಡಾಯಗೊಳಿಸಿದೆ. ಇದನ್ನು ಶೇ. 35ಕ್ಕೆ ಏರಿಸಲು ನಿರ್ಧರಿಸಿದೆ. ಅಲ್ಲಿನ ಶೇ. 80ಕ್ಕೂ ಹೆಚ್ಚು ಹೊಸ ಕಾರುಗಳು ಫ್ಲೆಕ್ಸ್ ಫ್ಯುಯೆಲ್ ವಾಹನಗಳಾಗಿವೆ. ಕೆನಡಾ, ಥೈಲ್ಯಾಂಡ್, ಜಪಾನ್ (E10) ಮತ್ತು ಹಲವು ಯುರೋಪಿಯನ್ ದೇಶಗಳು ಎಥೆನಾಲ್ ಮಿಶ್ರಣವನ್ನು ಅಳವಡಿಸಿಕೊಂಡಿವೆ. ಭಾರತದ E20 ಕಾರ್ಯಕ್ರಮವು ಅಂತಾರಾಷ್ಟ್ರೀಯ ಅತ್ಯುತ್ತಮ ಪದ್ಧತಿಗಳಿಗೆ ಅನುಗುಣವಾಗಿದೆ.
- Sushma Chakre
- Updated on: Jul 3, 2026
- 7:44 pm
‘ಮೇಡಂ ನಿದ್ರೆ ಮಾಡ್ತಿದ್ದಾರೆ’! ವಿಮಾನದ ಹೈಜಾಕ್ ವೇಳೆ ಉಡಾಫೆಯಿಂದ ಪೋನ್ ಕಟ್ ಮಾಡಿದ್ದರಂತೆ ಪಾಕ್ ನಾಯಕರು
ಪಾಕಿಸ್ತಾನದ ರಾಜಕಾರಣ ಮತ್ತು ರಾಜಕಾರಣಿಗಳ ಅಸಲಿ ಮುಖವನ್ನು ಇಡೀ ಜಗತ್ತಿನೆದೆರು ಸಿಂಗಾಪುರದ ಮಾಜಿ ರಾಯಭಾರಿ ಕೌಶಿಕನ್ ತೆರೆದಿಟ್ಟಿದ್ದಾರೆ. ಈ ಮೂಲಕ ಸಿಂಗಾಪುರದ ಹಿರಿಯ ಮತ್ತು ಅನುಭವಿ ಮಾಜಿ ರಾಜತಾಂತ್ರಿಕ ಬಿಲಹರಿ ಕೌಸಿಕನ್ ಅವರು ಇತ್ತೀಚೆಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ತೀವ್ರ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನದ ಆಂತರಿಕ ಬಿಕ್ಕಟ್ಟು ಮತ್ತು ಮಿಲಿಟರಿ ಆಡಳಿತದ ಕುರಿತು ಅವರು ನೀಡಿದ ಕಟು ವಿಮರ್ಶೆಗಳ ಬೆನ್ನಲ್ಲೇ, 1991ರಲ್ಲಿ ನಡೆದ ಸಿಂಗಾಪುರ ಏರ್ಲೈನ್ಸ್ ವಿಮಾನ ಹೈಜಾಕ್ ಪ್ರಕರಣದ ವೇಳೆ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಜೊತೆ ಮಾತನಾಡಲು ಕರೆ ಮಾಡಿದಾಗ ತಮಗಾದ ಒಂದು ಆಘಾತಕಾರಿ ಅನುಭವವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.
- Sushma Chakre
- Updated on: Jul 3, 2026
- 6:28 pm
ಪಾಕಿಸ್ತಾನದ ಬಿಕ್ಕಟ್ಟಿಗೆ ಅಲ್ಲಿನ ಮಿಲಿಟರಿ ಕಾರಣವೇ ವಿನಃ ಭಾರತವಲ್ಲ; ಸಿಂಗಾಪುರದ ಮಾಜಿ ರಾಯಭಾರಿ ವ್ಯಂಗ್ಯ
ಪಾಕಿಸ್ತಾನದ ಬಿಕ್ಕಟ್ಟಿಗೆ ಅದರ ಮಿಲಿಟರಿಯೇ ಕಾರಣವೇ ವಿನಃ ಭಾರತವಲ್ಲ. ಪಾಕಿಸ್ತಾನ ಪತನದ ಅಂಚಿನಲ್ಲಿದೆ. ಅದರ ಮಿಲಿಟರಿಯೇ ಪಾಕಿಸ್ತಾನದ ಸಮಸ್ಯೆಗಳಿಗೆ ದೊಡ್ಡ ಕಾರಣ ಎಂದು ಸಿಂಗಾಪುರದ ಮಾಜಿ ರಾಯಭಾರಿ ಬಿಲಹರಿ ಕೌಶಿಕನ್ ನೇರ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಪತ್ರಕರ್ತರೊಂದಿಗಿನ ಅವರ ಸಂವಾದದ ವಿಡಿಯೋಗಳು ಇದೀಗ ಇಂಟರ್ನೆಟ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಸಿಂಗಾಪುರದ ರಾಯಭಾರಿಯ ಈ ಹೇಳಿಕೆಗಳಿಂದಾಗಿ ಪಾಕಿಸ್ತಾನಕ್ಕೆ ತೀವ್ರ ಮುಜುಗರವಾಗಿದೆ.
- Sushma Chakre
- Updated on: Jul 3, 2026
- 5:28 pm
ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನಿಷ್ಪಕ್ಷಪಾತ ತನಿಖೆಗೆ ಆರ್ಎಸ್ಎಸ್ ಕರೆ
ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (RSS) ಮೊದಲ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಈ ಬಗ್ಗೆ ಹೇಳಿಕೆ ನೀಡಿದ್ದು, ರಾಮ ಜನ್ಮಭೂಮಿ ಕೋಟ್ಯಂತರ ರಾಮಭಕ್ತರ ಶ್ರದ್ಧೆ, ಆಸ್ಥೆ ಮತ್ತು ಭಕ್ತಿಯ ಕೇಂದ್ರವಾಗಿದೆ. ರಾಮ ಮಂದಿರದ ದಾನ ಪಾತ್ರೆಗಳಿಂದ ಹಣ ಕಳುವಾಗಿರುವ ಘಟನೆಯು ಅತ್ಯಂತ ದುರದೃಷ್ಟಕರ. ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಹಿಂದೂಗಳು ಸಂಯಮದಿಂದ ವರ್ತಿಸಬೇಕೆಂದು ಕರೆ ನೀಡಿದ್ದಾರೆ.
- Sushma Chakre
- Updated on: Jul 3, 2026
- 4:19 pm
ರಾಜನಂತೆ ನಡೆಸಿಕೊಳ್ಳುತ್ತೇವೆ; ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ಗೆ ಬಿಜೆಪಿ ರೆಡ್ ಕಾರ್ಪೆಟ್ ಹಾಸುತ್ತಿರುವುದೇಕೆ?
ಸುಮಾರು 500 ಕೋಟಿ ರೂ. ಮೌಲ್ಯದ ಜಮೀನನ್ನು ಟ್ರಸ್ಟ್ವೊಂದಕ್ಕೆ ಅಕ್ರಮವಾಗಿ ಹಸ್ತಾಂತರಿಸಲಾಗಿದೆ ಎಂಬ ಆರೋಪದ ಮೇಲೆ ಮುಖ್ಯಮಂತ್ರಿ ಮೋಹನ್ ಯಾದವ್ ವಿರುದ್ಧ ಜಂಟಿಯಾಗಿ ವಾಗ್ದಾಳಿ ನಡೆಸುತ್ತಿದ್ದ ವಿರೋಧ ಪಕ್ಷದ ಪ್ರಚಾರಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ‘ಸತ್ಯಾಸತ್ಯತೆಯ ಪರಿಶೀಲನೆ’ ಹೇಳಿಕೆ ತಣ್ಣೀರೆರಚಿತ್ತು. ಇದರ ಬೆನ್ನಲ್ಲೇ, ಕಳೆದ 3 ದಿನಗಳಿಂದ ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ಹೆಚ್ಚಾಗಿದೆ. ಒಂದೆಡೆ ಬಿಜೆಪಿ ನಾಯಕರು ದಿಗ್ವಿಜಯ ಸಿಂಗ್ ಅವರ ಮೇಲೆ ಪ್ರಶಂಸೆಗಳ ಮಳೆ ಸುರಿಸುತ್ತಿದ್ದರೆ, ಮತ್ತೊಂದೆಡೆ ಅವರದೇ ಪಕ್ಷದ ಸಹೋದ್ಯೋಗಿಗಳೇ ದಿಗ್ವಿಜಯ ಸಿಂಗ್ ವಿರುದ್ಧ ತಿರುಗಿಬಿದ್ದಿದ್ದಾರೆ.
- Sushma Chakre
- Updated on: Jul 3, 2026
- 3:32 pm
ಮುಂಬೈ ಮ್ಯಾನ್ಹೋಲ್ ದುರಂತ; ಬಿಎಂಸಿ ಅಸಿಸ್ಟೆಂಟ್ ಕಮಿಷನರ್ ಸೇರಿ ನಾಲ್ವರು ಅಧಿಕಾರಿಗಳು ಅಮಾನತು
ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ, ತೆರೆದ ಮ್ಯಾನ್ಹೋಲ್ಗೆ ಬಿದ್ದು 60 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಸಹಾಯಕ ಕಮಿಷನರ್ ಸೇರಿದಂತೆ 4 ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಇಂದು ಬೆಳಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೊಬೈಲ್ನಲ್ಲಿ ಮಾತನಾಡುತ್ತಿದ್ದ 60 ವರ್ಷದ ವ್ಯಕ್ತಿ ತೆರೆದ ಮ್ಯಾನ್ಹೋಲ್ ಒಳಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದರು. 4 ಗಂಟೆಗಳ ಬಳಿಕ ಅವರ ಶವವನ್ನು ಹೊರಗೆ ತೆಗೆಯಲಾಗಿತ್ತು.
- Sushma Chakre
- Updated on: Jul 2, 2026
- 10:55 pm
ಪ್ರೀತಿ ಕುರುಡು ಅನ್ನೋದು ಇದಕ್ಕೇನಾ? 72 ವರ್ಷದ ವೃದ್ಧೆ- 22ರ ಯುವಕನ ಲವ್ ಸ್ಟೋರಿ ಇದು!
ಪ್ರೀತಿ ಕುರುಡು ಎಂಬ ಮಾತು ಈಗಲೂ ಕೆಲವೊಮ್ಮೆ ಸತ್ಯವಾಗುತ್ತಿದೆ. ಒಂದು ವಿಶಿಷ್ಟ ಪ್ರಕರಣವು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯನ್ನು ಸೃಷ್ಟಿಸುತ್ತಿದೆ. 22 ವರ್ಷದ ಯುವಕನೊಬ್ಬ ತನಗಿಂತ 50 ವರ್ಷ ದೊಡ್ಡವರಾದ 72 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾನೆ. ತನ್ನ ಅಜ್ಜಿಯ ವಯಸ್ಸಿನವರನ್ನು ಮದುವೆಯಾಗಿರುವ ಈ ವಿಶಿಷ್ಟ ಜೋಡಿಯ ಫೋಟೋಗಳು ಮತ್ತು ಪ್ರೇಮಕತೆ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಲವ್ ಸ್ಟೋರಿ ಬಗ್ಗೆ ನಿಮಗೂ ಕುತೂಹಲವಿದೆಯಾ?
- Sushma Chakre
- Updated on: Jul 2, 2026
- 9:44 pm