ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು, 20 ಮಂದಿಗೆ ಗಾಯ
ಇಂದು ಪ್ರಾರ್ಥನೆಯ ವೇಳೆ ಸಿರಿಯಾದ ಹೋಮ್ಸ್ ಪಟ್ಟಣದ ಮಸೀದಿಯಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 8 ಜನರು ಸಾವನ್ನಪ್ಪಿದ್ದಾರೆ, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಧ್ಯ ಸಿರಿಯಾದ ಹೋಮ್ಸ್ ನಗರದಲ್ಲಿರುವ ಇಮಾಮ್ ಅಲಿ ಬಿನ್ ಅಬಿ ತಾಲಿಬ್ ಮಸೀದಿಯಲ್ಲಿ ಸ್ಫೋಟ ಸಂಭವಿಸಿ 8 ಜನರು ಸಾವನ್ನಪ್ಪಿದ್ದಾರೆ. ಸರ್ಕಾರಿ ನಿಯಂತ್ರಿತ ಜಿಲ್ಲೆಯಾದ ವಾಡಿ ಅಲ್-ದಹಾಬ್ ನೆರೆಹೊರೆಯಲ್ಲಿರುವ ಮಸೀದಿಯೊಳಗೆ ಸ್ಫೋಟ ಸಂಭವಿಸಿದೆ.
- Sushma Chakre
- Updated on: Dec 26, 2025
- 7:25 pm
ಆಪರೇಷನ್ ಸಿಂಧೂರ್ ವೇಳೆ ಸೈನಿಕರಿಗೆ ನೀರು, ಟೀ, ಲಸ್ಸಿ ನೀಡಿದ್ದ 10 ವರ್ಷದ ಬಾಲಕನಿಗೆ ವಿಶೇಷ ಪುರಸ್ಕಾರ
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಸೈನಿಕರಿಗೆ ಸಹಾಯ ಮಾಡಿದ್ದ 10 ವರ್ಷದ ಶ್ರವಣ್ ಸಿಂಗ್ ಗೆ ಧೈರ್ಯ ಮತ್ತು ದೇಶಭಕ್ತಿಗಾಗಿ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ನೀಡಲಾಗಿದೆ. ಭಾರತೀಯ ಸೇನೆಯ ಅತ್ಯಂತ ಕಿರಿಯ ನಾಗರಿಕ ಯೋಧ ಎಂದು ಗುರುತಿಸಲ್ಪಟ್ಟ 10 ವರ್ಷದ ಶ್ರವಣ್ ಸಿಂಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಸಾಧಾರಣ ಧೈರ್ಯ, ಕರುಣೆ ಮತ್ತು ದೇಶಭಕ್ತಿಗಾಗಿ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ನೀಡಿ ಗೌರವಿಸಿದ್ದಾರೆ.
- Sushma Chakre
- Updated on: Dec 26, 2025
- 7:08 pm
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ, ಕಾರ್ಯಕರ್ತರಿಂದ ನ್ಯಾಯಾಲಯದೆದುರು ಪ್ರತಿಭಟನೆ
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕುಲದೀಪ್ ಸಿಂಗ್ ಸೆಂಗಾರ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ನ್ಯಾಯಾಲಯದ ಆದೇಶವನ್ನು ಪ್ರತಿಭಟಿಸಲು ಇಂದು ದೆಹಲಿ ಹೈಕೋರ್ಟ್ ಹೊರಗೆ ಹಲವಾರು ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಜಮಾಯಿಸಿತ್ತು. ತಕ್ಷಣ ಅವರನ್ನು ಆ ಸ್ಥಳದಿಂದ ಆಚೆ ಹೋಗುವಂತೆ ಪೊಲೀಸರು ಎಚ್ಚರಿಕೆ ನೀಡಿದರು.
- Sushma Chakre
- Updated on: Dec 26, 2025
- 6:13 pm
ಕಠಿಣ ಶಿಕ್ಷೆಯಾಗಲಿ; ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಅಲ್ಪಸಂಖ್ಯಾತರ ಹಿಂಸಾಚಾರಕ್ಕೆ ಭಾರತ ಖಂಡನೆ
ಬಾಂಗ್ಲಾದೇಶದ ಢಾಕಾದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವನ್ನು ಭಾರತ ಖಂಡಿಸಿದೆ. ಬಾಂಗ್ಲಾದೇಶದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ನಡೆಯಬೇಕೆಂದು ಭಾರತ ಒತ್ತಾಯಿಸಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಉಗ್ರಗಾಮಿ ಅಂಶಗಳು ನಡೆಸುತ್ತಿರುವ ಇಂತಹ ನಿರಂತರ ಹಗೆತನ ಖಂಡನೀಯ. ಅವುಗಳನ್ನು ರಾಜಕೀಯ ಹಿಂಸಾಚಾರ ಎಂದು ಕರೆದು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೇಳಿದೆ.
- Sushma Chakre
- Updated on: Dec 26, 2025
- 5:51 pm
ಈ ರಾಜ್ಯದ ಶಾಲೆಗಳಲ್ಲಿ ಮಕ್ಕಳು ಪ್ರತಿದಿನ ನ್ಯೂಸ್ ಪೇಪರ್ ಓದುವುದು ಕಡ್ಡಾಯ
ಮಕ್ಕಳಲ್ಲಿ ಕಲಿಕೆಯನ್ನು ಹೆಚ್ಚಿಸಲು, ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಶಾಲೆಗಳಲ್ಲಿ ಪತ್ರಿಕೆ ಓದುವುದನ್ನು ಉತ್ತರ ಪ್ರದೇಶದ ಸರ್ಕಾರ ಕಡ್ಡಾಯಗೊಳಿಸಿದೆ. ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಸುಧಾರಿಸಲು ಉತ್ತರ ಪ್ರದೇಶ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದನ್ನು ಕಡ್ಡಾಯಗೊಳಿಸಿದೆ. ಇಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆಗಳನ್ನು ಓದುತ್ತಾರೆ, ಸಂಪಾದಕೀಯಗಳನ್ನು ಚರ್ಚಿಸುತ್ತಾರೆ, ಸ್ಕ್ರ್ಯಾಪ್ಬುಕ್ಗಳನ್ನು ನಿರ್ವಹಿಸುತ್ತಾರೆ, ರಸಪ್ರಶ್ನೆಗಳು ಮತ್ತು ಸುದ್ದಿ ಆಧಾರಿತ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
- Sushma Chakre
- Updated on: Dec 26, 2025
- 5:12 pm
ಕೇರಳದಲ್ಲಿ ಇತಿಹಾಸ ನಿರ್ಮಿಸಿದ ಬಿಜೆಪಿ; ತಿರುವನಂತಪುರದ ಕೇಸರಿ ಪಕ್ಷದ ಮೊದಲ ಮೇಯರ್ ಆಗಿ ವಿ.ವಿ. ರಾಜೇಶ್ ಆಯ್ಕೆ
ಕೇರಳದ ರಾಜಧಾನಿ ತಿರುವನಂತಪುರದ ಮೇಯರ್ ಆಗಿ ಬಿಜೆಪಿಯ ವಿ.ವಿ. ರಾಜೇಶ್ ಇಂದು ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದು ದಕ್ಷಿಣ ಭಾರತದ ರಾಜ್ಯವಾದ ಕೇರಳದ ರಾಜಕೀಯದಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ಈ ಮೂಲಕ ಒಂದೊಂದೇ ಹೆಜ್ಜೆಯನ್ನು ವ್ಯಾಪಿಸಿಕೊಂಡು ಬಿಜೆಪಿ ಕೇರಳದಲ್ಲಿ ತನ್ನ ಪ್ರಾಬಲ್ಯ ಸಾಧಿಸತೊಡಗಿದೆ. ಎಡಪಕ್ಷಗಳ ಹಿಡಿತದಲ್ಲಿದ್ದ ಕೇರಳದಲ್ಲಿ ಬಲಪಂಥೀಯ ಪಕ್ಷವಾದ ಬಿಜೆಪಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳತೊಡಗಿದೆ.
- Sushma Chakre
- Updated on: Dec 26, 2025
- 4:36 pm
ಚಂಡಮಾರುತದಿಂದ ನಲುಗಿದ ಶ್ರೀಲಂಕಾಕ್ಕೆ 4,000 ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ ಭಾರತ
ದಿತ್ವ ಚಂಡಮಾರುತದಿಂದ ಶ್ರೀಲಂಕಾದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ, ಶ್ರೀಲಂಕಾದ ಪುನರ್ನಿರ್ಮಾಣಕ್ಕೆ ಭಾರತವು 4,000 ಕೋಟಿ ರೂ.ಗಳ ಪುನರ್ನಿರ್ಮಾಣ ಪ್ಯಾಕೇಜ್ ಅನ್ನು ಪ್ರಕಟಿಸಿದೆ. ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರನ್ನು ಇಂದು ಮುಂಜಾನೆ ಭೇಟಿ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶ್ರೀಲಂಕಾಕ್ಕೆ 450 ಮಿಲಿಯನ್ ಡಾಲರ್ ಪುನರ್ನಿರ್ಮಾಣ ಪ್ಯಾಕೇಜ್ ಅನ್ನು ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಪತ್ರವನ್ನು ಹಸ್ತಾಂತರಿಸಿದರು.
- Sushma Chakre
- Updated on: Dec 23, 2025
- 10:45 pm
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭಾರೀ ಭದ್ರತೆ, ಇಂಟರ್ನೆಟ್ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಅಕ್ರಮ ಅತಿಕ್ರಮಣ ವಿರುದ್ಧ ಪ್ರತಿಭಟನೆಯ ನಂತರ ಕರ್ಬಿ ಅಂಗ್ಲಾಂಗ್ನಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ. ನಿನ್ನೆ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯ ನಂತರ ಇಂದು ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಾದ್ಯಂತ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು. ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ರಾಜ್ಯ ಸರ್ಕಾರವು ಕರ್ಬಿ ಅಂಗ್ಲಾಂಗ್ ಮತ್ತು ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
- Sushma Chakre
- Updated on: Dec 23, 2025
- 10:37 pm
4 ಶಿಶುಗಳಿಗೆ ಜನ್ಮ ನೀಡಿ 7 ಹೆಣ್ಣುಮಕ್ಕಳ ತಾಯಿಯಾದ ಮಹಿಳೆ!
ಉತ್ತರ ಪ್ರದೇಶದ ಕನ್ನೌಜ್ನಲ್ಲಿ 30 ವರ್ಷದ ಮಹಿಳೆಯೊಬ್ಬರು 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸ್ಥಳೀಯ ನರ್ಸಿಂಗ್ ಹೋಂನಲ್ಲಿ ಆಕೆ 4 ಮಕ್ಕಳನ್ನು ಹೆತ್ತಿದ್ದಾರೆ. ಇದು ಬಹಳ ಅಪರೂಪದ ಘಟನೆಯಾಗಿದೆ. ಅದಕ್ಕಿಂತಲೂ ವಿಶೇಷ ಸಂಗತಿಯೆಂದರೆ ಈಗಾಗಲೇ 3 ಹೆಣ್ಣು ಮಕ್ಕಳ ತಾಯಿಯಾಗಿರುವ ಆ ಮಹಿಳೆ ಇದೀಗ 4 ಹೆಣ್ಣುಮಕ್ಕಳನ್ನು ಹೆರುವ ಮೂಲಕ 7 ಹೆಣ್ಣುಮಕ್ಕಳ ತಾಯಿಯಾಗಿದ್ದಾರೆ! ಈ ಎಲ್ಲ ಮಕ್ಕಳೂ ನಾರ್ಮಲ್ ಡೆಲಿವರಿ ಮೂಲಕ ಜನಿಸಿವೆ.
- Sushma Chakre
- Updated on: Dec 23, 2025
- 9:56 pm
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಜಬಲ್ಪುರ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿಯೊಬ್ಬರು ದೃಷ್ಟಿಹೀನ ಮಹಿಳೆಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ವೇಳೆ ಮಹಿಳಾ ನಾಯಕಿ ದೃಷ್ಟಿಹೀನ ಮಹಿಳೆಯ ಬಗ್ಗೆ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಿಜೆಪಿ ನಾಯಕಿ ಆ ದೃಷ್ಟಿಹೀನ ಮಹಿಳೆಗೆ ನೀನು ಮುಂದಿನ ಜನ್ಮದಲ್ಲೂ ಕುರುಡಿಯಾಗೇ ಹುಟ್ಟುತ್ತೀಯ ಎಂದು ಹೇಳುವುದನ್ನು ಕೇಳಬಹುದು.
- Sushma Chakre
- Updated on: Dec 23, 2025
- 9:32 pm
ಮುಸ್ಲಿಂ ದೇಶದಲ್ಲಿ 4500 ವರ್ಷ ಪ್ರಾಚೀನ ಸೂರ್ಯ ದೇವಾಲಯ ಪತ್ತೆ; ಎಲ್ಲಿದೆ ಈ ದೇವಸ್ಥಾನ?
ಮುಸ್ಲಿಂ ದೇಶದಲ್ಲಿ 4,500 ವರ್ಷಗಳಷ್ಟು ಹಳೆಯದಾದ ಸೂರ್ಯ ದೇವಾಲಯವೊಂದು ಪತ್ತೆಯಾಗಿದೆ. ಇದು ವಿಜ್ಞಾನಿಗಳನ್ನು ಸಹ ಅಚ್ಚರಿಗೊಳಿಸಿದೆ. ಇಲ್ಲಿಯವರೆಗೆ ಪಿರಮಿಡ್ಗಳು ಮತ್ತು ಸಮಾಧಿಗಳ ನಾಗರಿಕತೆಯನ್ನು ಹೊಂದಿರುವ ಈಜಿಪ್ಟ್ನಲ್ಲಿ ಉತ್ಖನನಗಳು ಇತಿಹಾಸದ ಬಗ್ಗೆ ನಮ್ಮ ಚಿಂತನೆಯ ವಿಧಾನವನ್ನು ಬದಲಾಯಿಸುತ್ತಿವೆ. ಕೈರೋ ಬಳಿ ಸೂರ್ಯ ದೇವರ 4,500 ವರ್ಷಗಳಷ್ಟು ಹಳೆಯದಾದ ಕಲ್ಲಿನ ದೇವಾಲಯ ಪತ್ತೆಯಾಗಿದೆ. ಇದು ಈಜಿಪ್ಟ್ ಸಾವನ್ನು ಮಾತ್ರವಲ್ಲದೆ ಸೂರ್ಯ, ಶಕ್ತಿ ಮತ್ತು ವಿಶ್ವವನ್ನೂ ಪೂಜಿಸುವ ಸಂಸ್ಕೃತಿಯನ್ನು ಹೊಂದಿತ್ತು ಎಂಬುದನ್ನು ಬಹಿರಂಗಪಡಿಸುತ್ತದೆ.
- Sushma Chakre
- Updated on: Dec 23, 2025
- 8:56 pm
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಮಧ್ಯಪ್ರದೇಶ ಸಚಿವೆಯೊಬ್ಬರು ಹೊಸದಾಗಿ ನಿರ್ಮಾಣವಾಗಿದ್ದ ರಸ್ತೆಯ ಪರಿಶೀಲನೆ ಮಾಡಲು ಹೋದಾಗ ಆ ರಸ್ತೆ ತಮ್ಮ ಚಪ್ಪಲಿಯ ಕೆಳಗೆ ಕಿತ್ತುಬಂದಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಹೊಸದಾಗಿ ನವೀಕರಿಸಿದ ಡಾಂಬರು ರಸ್ತೆ ಮೇಲೆ ಕಾಲಿಡುತ್ತಿದ್ದಂತೆ ಆ ಡಾಂಬರು ಅವರ ಚಪ್ಪಲಿಯ ಜೊತೆಗೇ ಕಿತ್ತು ಬಂದಿತು. ಇದರಿಂದ ಕೋಪಗೊಂಡ ಸಚಿವೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಕಾಲಿನ ಕೆಳಗೆ ಡಾಂಬರು ಕಿತ್ತು ಬರುತ್ತಿರುವ ಈ ಘಟನೆಯ ವಿಡಿಯೋ ವೈರಲ್ ಆಗಿದೆ.
- Sushma Chakre
- Updated on: Dec 23, 2025
- 8:00 pm