
BJP
ಭಾರತೀಯ ಜನತಾ ಪಾರ್ಟಿಯನ್ನು ಬಿಜೆಪಿ ಎಂದು ಕರೆಯುತ್ತಾರೆ. ಬಿಜೆಪಿಯ ಪ್ರಭಾವವು ಭಾರತದ ವಿವಿಧ ರಾಜ್ಯಗಳಿಗೆ ವಿಸ್ತರಿಸಿದೆ. ಪಕ್ಷವು ತನ್ನ ಬಲವಾದ ಸಂಘಟನಾ ರಚನೆ ಮತ್ತು ಚುನಾವಣಾ ತಂತ್ರಗಳಿಗೆ ಹೆಸರುವಾಸಿಯಾಗಿದೆ. ಅದರ ನೀತಿ ನಿಲುವುಗಳು ಯುವಜನತೆಯನ್ನು ಆಕರ್ಷಿಸಿದ್ದು, ಪರ-ವಿರೋಧ ಎರಡನ್ನೂ ಹುಟ್ಟುಹಾಕಿದೆ. ಭಾರತದ ರಾಜಕೀಯದಲ್ಲಿ ಪಕ್ಷವು ಪ್ರಮುಖ ಸ್ಥಾನ ಗಳಿಸಿದೆ. ಆರ್ಎಸ್ಎಸ್ ಸಂಘಟನೆಯ ಸಿದ್ದಾಂತಗಳ ಜೊತೆ ಗುರುತಿಸಿಕೊಂಡಿದೆ.
ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಕೇಸ್: ಪೊಲೀಸರ ಬೆನ್ನಿಗೆ ನಿಂತ ಸಿಎಂ ಸಿದ್ದರಾಮಯ್ಯ
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮುಂದೆ ಗಲಾಟೆ, ರಾಜಕೀಯವಾಗಿ ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಪ ಜೋರಾಗಿದೆ. ಪ್ರಕರಣದ ಪ್ರಮುಖ ರೂವಾರಿಯೇ ಮಾಜಿ ಸಂಸದ ಪ್ರತಾಪ್ ಸಂಹ ಎಂದು ಕಾಂಗ್ರೆಸ್ ಮುಖಂಡರು ದೂರು ಕೊಟ್ಟಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರು ಸಹ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಓಲೈಕೆ ರಾಜಕಾರಣದಿಂದಲೇ ಈ ರೀತಿಯ ಪ್ರಕಟಣಗಳು ನಡೆಯುತ್ತಿವೆ ಎಂದು ಟೀಕಿಸುತ್ತಿದ್ದಾರೆ. ಇದರ ಮಧ್ಯ ಇದೀಗ ಸಿಎಂ ಸಿದ್ದರಾಮಯ್ಯನವರೇ ಪೊಲೀಸರ ಬೆನ್ನಿಗೆ ನಿಂತಿದ್ದಾರೆ.
- Web contact
- Updated on: Feb 14, 2025
- 10:06 pm
ರಾಜ್ಯ ಬಿಜೆಪಿಯಲ್ಲಿರುವ ಬಂಡಾಯವನ್ನು ಆದಷ್ಟು ಬೇಗ ಶಮನಗೊಳಿಸುವ ಸೂಚನೆ ವರಿಷ್ಠರು ನೀಡಿದ್ದಾರೆ: ಬಿವೈ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ವಿಜಯೇಂದ್ರ ಸುತಾರಾಂ ಇಷ್ಟಪಡಲಿಲ್ಲ. ನಿನ್ನೆ ದೆಹಲಿಗೆ ಹೋಗಿದ್ರಲ್ಲ, ಅಲ್ಲೇನಾಯಿತು ಅಂತ ಕೇಳಿದರೆ ದೆಹಲಿಗೂ ಹೋಗಿದ್ದೆ, ಅಲ್ಲಿಂದ ಮಹಾಕುಂಭಮೇಳಕ್ಕೂ ಹೋಗಿದ್ದೆ ಎಂದ ವಿಜಯೇಂದ್ರ ಹೇಳಿದರು. ರಾಜ್ಯ ಬಿಜೆಪಿ ಘಟಕದಲ್ಲಿರುವ ಬಿಕ್ಕಟ್ಟ್ಟು ಆದಷ್ಟು ಬೇಗ ಕೊನೆಗೊಳ್ಳಲಿವೆ ಅಂತ ಹೇಳಿದ್ದೆ ಅದರ ಸೂಚನೆಗಳನ್ನು ಪಕ್ಷದ ವರಿಷ್ಠರು ನೀಡಿದ್ದಾರೆ ಎಂದು ಅವರು ಹೇಳಿದರು.
- Arun Belly
- Updated on: Feb 14, 2025
- 7:05 pm
ಮೆಟ್ರೋ ದರ ಇಳಿಕೆಗೆ ಇದೊಂದೇ ಮಾರ್ಗ: ಸಿದ್ದರಾಮಯ್ಯಗೆ ಮಹತ್ವದ ಸಲಹೆ ನೀಡಿದ ತೇಜಸ್ವಿ ಸೂರ್ಯ
ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿ ಬಿಎಂಆರ್ಸಿಎಲ್ ಪ್ರಯಾಣಿಕರ ಮೇಲೆ ಗದಾ ಪ್ರಹಾರ ಮಾಡಿದೆ. ದರ ಏರಿಕೆಯಿಂದ ಕಂಗೆಟ್ಟಿರೋ ಪ್ರಯಾಣಿಕರು ಬಿಎಂಆರ್ಸಿಎಲ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮತ್ತೊಂದೆಡೆ, ಮೆಟ್ರೋ ಪ್ರಯಾಣ ದರ ಏರಿಕೆ ಕಾಂಗ್ರೆಸ್-ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ದರ ಏರಿಕೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿ ಬಿಜೆಪಿ ಆರೋಪಿಸಿದ್ದು, ಇಲ್ಲ ಅದು ನಮ್ಮ ಕೈನಲ್ಲಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ. ಇನ್ನು ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿ ಏರಿಕೆಯಾಗಿರುವ ಮೆಟ್ರೋ ದರವನ್ನು ಹೇಗೆ ಇಳಿಕೆ ಮಾಡಬಹುದು ಎಂದು ಐಡಿಯಾ ಕೊಟ್ಟಿದ್ದಾರೆ.
- Harish GR
- Updated on: Feb 12, 2025
- 5:21 pm
ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿರುವುದರಿಂದ ರಾಜ್ಯ ಬಿಜೆಪಿಯ ಎಲ್ಲ ಗೊಂದಲಗಳು ಕೊನೆಯಾಗಲಿವೆ: ಬೊಮ್ಮಾಯಿ
ಮೈಸೂರು ನಗರದಲ್ಲಿ ನಿನ್ನೆ ರಾತ್ರಿ ಪೊಲೀಸ್ ಸ್ಟೇಷನೊಂದರ ಮೇಲೆ ಕಲ್ಲು ತೂರಾಟ ನಡೆಸಿದ್ದು ಮುಸ್ಲಿಮರಲ್ಲ, ಮುಸ್ಲಿಂ ವೇಷದಲ್ಲಿ ಬಂದ ಬಿಜೆಪಿ ಮತ್ತು ಅರೆಸ್ಸೆಸ್ ಕಾರ್ಯಕರ್ತರು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಇದು ಭಂಡತನದ ಪರಮಾವಧಿ, ಕಲ್ಲು ತೂರಾಟ ಮಾಡಿದ್ದು ಯಾರು ಅಂತ ಪೊಲೀಸರು ಹೇಳಿದ್ದಾರೆ ಮತ್ತು ಇಡಿ ಜಗತ್ತೇ ವಿಡಿಯೋಗಳನ್ನು ನೋಡಿದೆ, ಕರ್ನಾಟಕದಲ್ಲಿರೋದು ಭಂಡ ಸರ್ಕಾರ ಎಂದರು.
- Arun Belly
- Updated on: Feb 11, 2025
- 5:34 pm
ದೆಹಲಿಗೆ ಮತ್ತೊಮ್ಮೆ ಮಹಿಳಾ ಮುಖ್ಯಮಂತ್ರಿ?; ಬಿಜೆಪಿಯಿಂದ ಅಚ್ಚರಿಯ ಆಯ್ಕೆ ಸಾಧ್ಯತೆ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಸರ್ಕಾರ ರಚಿಸಲಿದೆ. ಇನ್ನೂ ಬಿಜೆಪಿ ಸಿಎಂ ಯಾರಾಗಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ, ಬಿಜೆಪಿ ದೆಹಲಿಯಲ್ಲಿ ಅಚ್ಚರಿಯ ಆಯ್ಕೆಗೆ ಮುಂದಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಗೆ 4ನೇ ಬಾರಿಗೆ ಮಹಿಳಾ ಮುಖ್ಯಮಂತ್ರಿ ಅಧಿಕಾರಕ್ಕೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರ ಜೊತೆಗೆ ಪರ್ವೇಶ್ ವರ್ಮಾ ಸೇರಿದಂತೆ ಅನೇಕ ಪುರುಷ ಅಭ್ಯರ್ಥಿಗಳು ಕೂಡ ಸಿಎಂ ರೇಸ್ನಲ್ಲಿದ್ದಾರೆ.
- Sushma Chakre
- Updated on: Feb 11, 2025
- 5:26 pm
ನಮ್ಮ ಮೆಟ್ರೋ ದರ ಏರಿಕೆ ಮಾಡಿದ್ಯಾರು? ಎಳೆ ಎಳೆಯಾಗಿ ಬಿಚ್ಚಿಟ್ಟ ಸಿದ್ದರಾಮಯ್ಯ
ಬೆಂಗಳೂರಿನ ನಮ್ಮ ಮೆಟ್ರೊ ದರ ಏರಿಕೆ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ಮೆಟ್ರೋ ಮೂಲಕ ಕೆಲಸ ಹೋಗುವ ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ. ಶೇ45ರಷ್ಟು ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಆದ್ರೆ, ಅಸಲಗೆ ಶೇ 100ರಷ್ಟು ಏರಿಕೆ ಮಾಡಲಾಗಿದೆ ಎಂದು ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಇನ್ನು ಈ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಇದೆಲ್ಲರದ ಮಧ್ಯ ಇದೀಗ ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮ್ಯಯನವರೇ ಸ್ಪಷ್ಟನೆ ನೀಡಿದ್ದು, ದರ ಏರಿಕೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
- Ramesh B Jawalagera
- Updated on: Feb 11, 2025
- 4:40 pm
ನಮ್ಮ ಮೆಟ್ರೋ ದರ ಏರಿಕೆ ಖಂಡಿಸಿ ಸಂಸತ್ನಲ್ಲಿ ಗುಡುಗಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶೇ45ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ. ಆದ್ರೆ, ವಸೂಲಿ ಮಾಡುತ್ತಿರುವುದು ಅದಕ್ಕಿಂತ ಹೆಚ್ಚು. ಹೀಗಾಗಿ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಇನ್ನು ಇದೇ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿದೆ. ಇದರ ನಡುವೆ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್ ಅಧಿವೇಶನದಲ್ಲಿ ಮೆಟ್ರೋ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
- Ramesh B Jawalagera
- Updated on: Feb 11, 2025
- 3:52 pm
ರಾಹುಲ್, ಅಖಿಲೇಶ್ ಮತ್ತು ಕೇಜ್ರಿವಾಲ್ ಅವರನ್ನು ಥ್ರೀ ಈಡಿಯಟ್ಸ್ ಅಂದರೆ ಮುಸಲ್ಮಾನರಿಗ್ಯಾಕೆ ಸಿಟ್ಟು? ಪ್ರತಾಪ್ ಸಿಂಹ
ಅಸೆಂಬ್ಲಿ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಗೆ ವೋಟು ಮಾಡಿದರೆ ತಾಲಿಬಾನಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ಎಚ್ಚರಿಸಿದ್ದು ನಿಜವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕಾನೂನು ಪರಿಪಾಲಿಸುವ ಮತ್ತು ಜನರಿಗೆ ರಕ್ಷಣೆ ಒದಗಿಸುವ ಪೊಲೀಸರಿಗೆ ಭದ್ರತೆ ಇಲ್ಲದಂತಾಗಿದೆ, ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲೂ ಸರ್ಕಾರೀ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದವು ಎಂದು ಪ್ರತಾಪ್ ಸಿಂಹ ಹೇಳಿದರು.
- Arun Belly
- Updated on: Feb 11, 2025
- 12:18 pm
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಬಿಗ್ ಶಾಕ್
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಆಘಾತವಾಗುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಲೋಕೋಪಯೋಗಿ ಇಲಾಖೆ ತಿನಿಸು ಕಟ್ಟೆಯಲ್ಲಿ ಪತ್ನಿಯ ಹೆಸರಿನಲ್ಲಿ ಮಳಿಗೆ ತೆರೆದು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಇಬ್ಬರು ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಬಿಜೆಪಿ ಶಾಸಕ ಅಭಯ ಪಾಟೀಲ್ ಆಪ್ತರ ಸದಸ್ಯತ್ವವೇ ರದ್ದಾಗಿರುವುದು ಗಮನಾರ್ಹ.
- Sahadev Mane
- Updated on: Feb 11, 2025
- 11:40 am
ಅಧಿಕಾರದಿಂದ ಬಿಜೆಪಿಯನ್ನೇ ದೂರವಿಟ್ಟು ಮೈತ್ರಿ ಮಾಡಿಕೊಂಡ ಕಾಂಗ್ರೆಸ್-ಜೆಡಿಎಸ್
ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಎರಡು ಪಕ್ಷದ ನಾಯಕರು ಸೇರಿಕೊಂಡು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿಳುತ್ತಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಹಾವು ಮುಂಗುಸಿಯಂತೆ ಇದ್ದಾರೆ. ಅದರಲ್ಲೂ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ಶಳಿ ನಡೆಸುತ್ತಲ್ಲೇ ಇದ್ದಾರೆ. ಇದರ ಮಧ್ಯೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್, JDS ಮೈತ್ರಿ ಮಾಡಿಕೊಂಡಿವೆ.
- Ramesh B Jawalagera
- Updated on: Feb 10, 2025
- 11:00 pm