ಅಪ್ರಾಪ್ತರ ಜೀವಕ್ಕೆ ಕುತ್ತು ತರುತ್ತಿರುವ ಬೈಕ್ ಸ್ಟಂಟ್: ಮೂರು ವರ್ಷಗಳಲ್ಲಿ 27 ಮಂದಿ ಸಾವು
ಕರ್ನಾಟಕದಲ್ಲಿ ಅಪ್ರಾಪ್ತರು ಮತ್ತು ಯುವಕರಿಂದ ಬೈಕ್ ಸ್ಟಂಟ್ ಹಾಗೂ ಅಪಾಯಕಾರಿ ಚಾಲನೆ ಹೆಚ್ಚಾಗಿದ್ದು, ಭೀಕರ ಅಪಘಾತಗಳಿಗೆ ಕಾರಣವಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಇಂತಹ ಘಟನೆಗಳಿಂದ 27 ಸಾವುಗಳು ಸಂಭವಿಸಿವೆ. ಈ ಸಂಬಂಧ 1,805 ಪ್ರಕರಣಗಳು ದಾಖಲಾಗಿದ್ದು, 1.77 ಕೋಟಿ ದಂಡ ಸಂಗ್ರಹಿಸಲಾಗಿದೆ. ಬೆಂಗಳೂರು ಇಂತಹ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದೆ.
- Prasanna Hegde
- Updated on: Apr 5, 2026
- 11:19 am
ಬೆಂಗಳೂರಲ್ಲಿ 2BHK ಮನೆಗೆ 70 ಸಾವಿರ ರೂ. ಬಾಡಿಗೆ!, ಭಯಾನಕ ಅನುಭವ ಬಿಚ್ಚಿಟ್ಟ ವ್ಯಕ್ತಿ
ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ಗಗನಕ್ಕೇರಿವೆ. 2BHK ಅಪಾರ್ಟ್ಮೆಂಟ್ಗೆ 70 ಸಾವಿರ ರೂ. ಬಾಡಿಗೆ ಕೇಳಲಾಗ್ತಿದ್ದು, ಇದು ಸಾಮಾನ್ಯರನ್ನು ಕಂಗಡಿಸಿದೆ. ಐಟಿ ಉದ್ಯಮದ ಬೆಳವಣಿಗೆಯಿಂದ ಆಸ್ತಿ ಬೆಲೆಗಳು ಹಾಗೂ ಬಾಡಿಗೆ ದರಗಳು ಮೂರು ಪಟ್ಟು ಹೆಚ್ಚಾಗಿವೆ. ಬೆಂಗಳೂರಿನಲ್ಲಿ ಮನೆ ಹುಡುಕುವ ಅನುಭವ 'ಭಯಾನಕ' ಎಂದು ನಿವಾಸಿಗಳೊಬ್ಬರು ಹಂಚಿಕೊಂಡಿದ್ದು, ಕೈಗೆಟಕುವ ದರದಲ್ಲಿ ವಸತಿ ದೊರೆಯುವುದು ಕಷ್ಟಕರ ಎಂದು ಅಲವತ್ತುಕೊಂಡಿದ್ದಾರೆ.
- Prasanna Hegde
- Updated on: Apr 4, 2026
- 5:12 pm
SSLC ತೃತೀಯ ಭಾಷೆಗೆ ಗ್ರೇಡ್ ವಿವಾದ: ರಾಜ್ಯಪಾಲರ ನಿಲುವಿಗೆ ಕರವೇ ಕೆಂಡ; ಸೋಮವಾರ ರಾಜಭವನ ಮುತ್ತಿಗೆಗೆ ಕರೆ
SSLC ಹಿಂದಿ ಪರೀಕ್ಷೆಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರ ಮರುಪರಿಶೀಲಿಸುವಂತೆ ರಾಜ್ಯಪಾಲರು ಪತ್ರ ಬರೆದಿರುವುದು ಕರವೇ ಆಕ್ರೋಶಕ್ಕೆ ಕಾರಣವಾಗಿದೆ. ಇದು ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಿದೆ ಎಂದು ನಾರಾಯಣಗೌಡ ಕಿಡಿ ಕಾರಿದ್ದಾರೆ. ರಾಜ್ಯಪಾಲರ ನಡೆ ಹಿಂದಿ ಸಾಮ್ರಾಜ್ಯಶಾಹಿಯ ಕುತಂತ್ರ ಎಂದಿರುವ ಕರವೇ, ಈ ಹಸ್ತಕ್ಷೇಪವನ್ನು ಖಂಡಿಸಿ ಸೋಮವಾರ ರಾಜಭವನ ಮುತ್ತಿಗೆಗೆ ಕರೆ ನೀಡಿದೆ. ಕನ್ನಡಿಗರ ತೆರಿಗೆ ಹಣದಿಂದ ನಡೆಯುವ ರಾಜಭವನ ತಿಂದು ಮನೆಗೆ ಕನ್ನ ಹಾಕುವುದು ಸರಿಯಲ್ಲ ಎಂದು ಎಚ್ಚರಿಸಿದೆ.
- Prasanna Hegde
- Updated on: Apr 4, 2026
- 4:18 pm
ಬೆಂಗಳೂರಲ್ಲಿ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಜಿಬಿಎ: ಎಲ್ಲಿಂದ ಎಲ್ಲಿಗೆ ಸಂಪರ್ಕ?
ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಣೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 420 ಕೋಟಿ ರೂ. ವೆಚ್ಚದಲ್ಲಿ 1.6 ಕಿ.ಮೀ ಉದ್ದದ 4 ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ. ಬಳ್ಳಾರಿ ರಸ್ತೆಯ ವೆಟರ್ನರಿ ಕಾಲೇಜು ಬಳಿಯಿಂದ ಮೇಖ್ರಿ ಸರ್ಕಲ್ವರೆಗಿನ ಈ ಫ್ಲೈಓವರ್ ಯೋಜನೆ 18 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಸಂಚಾರ ಸುಧಾರಣೆಗೆ ಮಹತ್ವದ ಕೊಡುಗೆ ನೀಡಲಿದೆ.
- Prasanna Hegde
- Updated on: Apr 3, 2026
- 7:51 pm
ಬೆಂಗಳೂರಿಗರಿಗೆ ಬ್ಯಾಡ್ ನ್ಯೂಸ್: ಸದ್ಯ ಸಾರ್ವಜನಿಕ ಸೇವೆಗೆ ಲಭ್ಯವಾಗಲ್ಲ ಬಹುನಿರೀಕ್ಷಿತ ಈ ಫ್ಲೈಓವರ್
ಈಗಾಗಲೇ ವಿಳಂಬವಾಗಿರುವ ಬೆಂಗಳೂರಿನ ಬಹುನಿರೀಕ್ಷಿತ ಈಜಿಪುರ ಫ್ಲೈಓವರ್ ಕಾಮಗಾರಿ ಮುಗಿಯುವುದು ಮತ್ತಷ್ಟು ತಡವಾಗಲಿದೆ. ಭೂಸ್ವಾಧೀನ ಮತ್ತು ಇಂಜಿನಿಯರ್ಗಳ ವರ್ಗಾವಣೆ ಸಮಸ್ಯೆಗಳಿಂದ ಕುಂಟುತ್ತ ಸಾಗಿದ್ದ ಕೆಲಸ ಜೂನ್ಗೆ ಮುಗಿಯುವ ನಿರೀಕ್ಷೆ ಇತ್ತು. ಆದರೆ ಕಾಮಗಾರಿ ಈಗ ಆಗಸ್ಟ್ಗೆ ವೇಳೆಗೆ ಕಂಪ್ಲೀಟ್ ಆಗಬಹುದು ಎನ್ನಲಾಗ್ತಿದೆ. ಈ ವಿಳಂಬದಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದು,ಸಣ್ಣ ಕಾರಣಗಳಿಗೂ ಕೆಲಸ ವಿಳಂಬವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
- Prasanna Hegde
- Updated on: Apr 3, 2026
- 4:25 pm
ಹಲವು ಜವಾಬ್ದಾರಿಗಳ ನಡುವೆ ಜನಗಣತಿಗೂ ಶಿಕ್ಷಕರ ನಿಯೋಜನೆ: ನಿರ್ಧಾರಕ್ಕೆ ವ್ಯಾಪಕ ವಿರೋಧ
ಕರ್ನಾಟಕದಲ್ಲಿ ಪಾಠ, ಪರೀಕ್ಷಾ ಮೌಲ್ಯಮಾಪನ ಸೇರಿ ಹಲವು ಜವಾಬ್ದಾರಿಗಳಿರುವ ಶಿಕ್ಷಕರನ್ನು ಏಪ್ರಿಲ್ 16ರಿಂದ ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದ ರಜೆಗಳಿಲ್ಲದೆ ಕೆಲಸದ ಒತ್ತಡ ಹೆಚ್ಚಾಗಿರುವುದಕ್ಕೆ ಶಿಕ್ಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. 50 ವರ್ಷ ಮೇಲ್ಪಟ್ಟ ಶಿಕ್ಷಕರು ಮತ್ತು ಪರೀಕ್ಷಾ ಕರ್ತವ್ಯದಲ್ಲಿರುವವರಿಗೆ ವಿನಾಯಿತಿ ನೀಡುವ ಮನವಿಗಳು ತಿರಸ್ಕೃತಗೊಂಡಿದ್ದು, ಡೇಟಾ ಸಂಗ್ರಹಣೆಗೆ ಶಿಕ್ಷಕರೇ ಅನಿವಾರ್ಯವೆಂದು ಸರ್ಕಾರ ಹೇಳಿದೆ.
- Prasanna Hegde
- Updated on: Apr 3, 2026
- 12:51 pm
ಆಯುರ್ವೇದ ಔಷಧಿ ಹೆಸರಲ್ಲಿ ಗೋಧಿ ಹಿಟ್ಟಿನ ಮಾರಾಟ: ದೆಹಲಿ ಮೂಲದ ಆರೋಪಿ ಅರೆಸ್ಟ್
ತುಮಕೂರು ಪೊಲೀಸರು ನಕಲಿ ಆಯುರ್ವೇದ ಔಷಧ ಹಗರಣವನ್ನು ಬಯಲಿಗೆಳೆದಿದ್ದಾರೆ. ಗೋಧಿ ಹಿಟ್ಟನ್ನು ತೂಕ ಇಳಿಕೆ ಪುಡಿ ಎಂದು ಮಾರಾಟ ಮಾಡುತ್ತಿದ್ದ ದೆಹಲಿ ಮೂಲದ ಆರೋಪಿ ಬಂಧನವಾಗಿದ್ದು, ಆನ್ಲೈನ್ ಮೂಲಕ ನಕಲಿ ಉತ್ಪನ್ನಗಳನ್ನು ಮಾರಿ ಗ್ರಾಹಕರ ಆರೋಗ್ಯಕ್ಕೆ ಅಪಾಯ ತರುವ ಕೆಲಸವನ್ನು ಮಾಡಲಾಗುತ್ತಿತ್ತು. ಹಲವು ಕಂಪನಿಗಳ ಹೆಸರಲ್ಲಿ ಈ ದಂಧೆ ನಡೆಯುತ್ತಿತ್ತು ಎನ್ನಲಾಗಿದ್ದು, ದೊಡ್ಡ ಪ್ರಮಾಣದ ನಕಲಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
- Prasanna Hegde
- Updated on: Apr 2, 2026
- 7:08 pm
ಮದುವೆ, ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ 18 ಲಕ್ಷ ಪಂಗನಾಮ ಹಾಕಿದ ಮಹಿಳೆ: ಹಣ ಕೊಟ್ಟು ಕೆಟ್ಟ ಎಂಜಿನಿಯರ್ನಿಂದ ದೂರು ದಾಖಲು
ಡೇಟಿಂಗ್ ಆಪ್ ಮೂಲಕ ಪರಿಚಯವಾದ ಮಹಿಳೆ, ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್ವೇರ್ ಎಂಜಿನಿಯರ್ಗೆ ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ 18.7 ಲಕ್ಷ ರೂ. ವಂಚಿಸಿದ್ದಾಳೆ. ಈ ಬಗ್ಗೆ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆ ಭರವಸೆ ಮತ್ತು ಭಾವನಾತ್ಮಕ ಒತ್ತಡದ ಮೂಲಕ ಹೆಚ್ಚಿನ ಹಣ ಹೂಡಿಕೆಗೆ ಮಹಿಳೆ ಒತ್ತಾಯಿಸಿದ ಕಾರಣ ಸಂತ್ರಸ್ತ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದ ಎನ್ನಲಾಗಿದೆ.
- Prasanna Hegde
- Updated on: Apr 2, 2026
- 12:20 pm
ಹಾವು ರಕ್ಷಣೆ ಕುರಿತ ಕರೆಗಳ ಏರಿಕೆಗೆ GBA ಹೈರಾಣ: ಇತ್ತ ಅಗತ್ಯ ಸೌಲಭ್ಯ, ವೇತನ ಇಲ್ಲದೆ ಸಂಕಷ್ಟದಲ್ಲಿ ಉರಗ ರಕ್ಷಕರು
ಬೆಂಗಳೂರಿನಲ್ಲಿ ಹಾವು ರಕ್ಷಣೆ ಸಂಬಂಧ ಕರೆಗಳು ಏರಿಕೆ ಕಂಡಿದ್ದು, GBA ಸೀಮಿತ ತಂಡದಿಂದ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಲಭ್ಯವಿರುವ ಹಾವು ರಕ್ಷಕರು ಕೂಡ ವಾಹನ, ಅಗತ್ಯ ಸಾಧನ, ಸಕಾಲಿಕ ವೇತನದ ಕೊರತೆಯಿಂದ ಸಂಕಷ್ಟದಲ್ಲಿದ್ದಾರೆ. ಕೆಲವೊಮ್ಮೆ ಸ್ವಂತ ಖರ್ಚಿನಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ. ಮಳೆಗಾಲದಲ್ಲಿ ಕರೆಗಳು ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದ್ದು, ಹೀಗಾಗಿ ರಕ್ಷಕರ ಸಂಖ್ಯೆ ದ್ವಿಗುಣಗೊಳಿಸುವ ಅಗತ್ಯವಿದೆ ಎಂಬ ಆಗ್ರಹ ವ್ಯಕ್ತವಾಗಿದೆ.
- Prasanna Hegde
- Updated on: Apr 1, 2026
- 12:04 pm
ಭಾರತದ ಕಾಂಡೋಮ್ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ: ಕಚ್ಚಾ ವಸ್ತುಗಳ ಕೊರತೆಯಿಂದ ಬೆಲೆ ಏರಿಕೆ ಸಾಧ್ಯತೆ
ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಭಾರತದ ಕಾಂಡೋಮ್ ಉದ್ಯಮ ಕಚ್ಚಾ ವಸ್ತುಗಳ ಕೊರತೆಯನ್ನು ಎದುರಿಸುತ್ತಿದೆ. ಅಮೋನಿಯಾ, ಲ್ಯಾಟೆಕ್ಸ್, ಸಿಲಿಕಾನ್ ಎಣ್ಣೆ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ಆಮದು ಅಡಚಣೆಯಿಂದ ಉತ್ಪಾದನಾ ವೆಚ್ಚ ಏರಿಕೆಯಾಗಿದ್ದು, ಕಾಂಡೋಮ್ ಬೆಲೆ ಶೇ. 40-50ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದು 14,000 ಕೋಟಿ ಮೌಲ್ಯದ ಮಾರುಕಟ್ಟೆಗೆ ದೊಡ್ಡ ಹೊಡೆತ ನೀಡಿದೆ.
- Prasanna Hegde
- Updated on: Apr 1, 2026
- 8:56 am
Commercial LPG Cylinder Price: ಗಾಯದ ಮೇಲೆ ಬರೆ; ಕಮರ್ಷಿಯಲ್ ಸಿಲಿಂಡರ್ ದರ 195ರೂ. ಹೆಚ್ಚಳ
LPG Cylinder Price in Karnataka: ಇಂದಿನಿಂದ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ದರ 195.50 ರೂ. ಏರಿಕೆಯಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಈ ದರ ಏರಿಕೆಯಿಂದ ಸಿಲಿಂಡರ್ ಅಭಾವದ ನಡುವೆ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಂತಹ ವಾಣಿಜ್ಯ ಬಳಕೆದಾರರಿಗೆ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಲಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಿಲ್ಲ.
- Prasanna Hegde
- Updated on: Apr 1, 2026
- 9:39 am
ನಾಳೆಯ ಹವಾಮಾನ: ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ; ಉತ್ತರ ಒಳನಾಡಿನ ಹಲವೆಡೆ ಸುಡು ಬಿಸಲು
Karnataka Weather Update: ನಾಳೆ (ಏಪ್ರಿಲ್ 1) ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಬಿಸಿಲು ಮತ್ತು ಮಳೆಯ ಮಿಶ್ರ ಹವಾಮಾನ ನಿರೀಕ್ಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿದರೆ, ದಕ್ಷಿಣ ಒಳನಾಡು, ಕರಾವಳಿ ಮತ್ತು ಬೆಂಗಳೂರಿನಲ್ಲಿ ಗುಡುಗು ಸಹಿತ ಹಗುರ ಮಳೆಯನ್ನು ಅಂದಾಜಿಸಲಾಗಿದೆ. ಮುಂದಿನ ಕೆಲ ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
- Prasanna Hegde
- Updated on: Mar 31, 2026
- 7:27 pm