ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್ ಸುದ್ದಿಗಳನ್ನು ಬರೆಯುತ್ತಾರೆ.
Independence Day Wishes: ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ; ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಅತ್ಯುತ್ತಮ ಕನ್ನಡ ಶುಭಾಶಯಗಳು ಹಾಗೂ ಸ್ಟೇಟಸ್ಗಳು
ಭಾರತವು ತನ್ನ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15 ರಂದು ಸಂಭ್ರಮದಿಂದ ಆಚರಿಸುತ್ತಿದೆ. ಈ ಶುಭ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು, ಕುಟುಂಬದವರಿಗೆ ಶುಭಾಶಯ ಕೋರಲು, ವಾಟ್ಸಪ್, ಫೇಸ್ಬುಕ್ ಸ್ಟೇಟಸ್ಗಾಗಿ ಆಕರ್ಷಕ ಮೆಸೇಜ್ಗಳು, ಸ್ಪೂರ್ತಿದಾಯಕ ನುಡಿಗಳು ಇಲ್ಲಿವೆ. ದೇಶಪ್ರೇಮ ಮತ್ತು ತ್ಯಾಗ-ಬಲಿದಾನಗಳನ್ನು ಸ್ಮರಿಸೋಣ.
- Akshay Pallamajalu
- Updated on: Aug 13, 2026
- 2:11 pm
Karnataka Assembly Session 2026 Live: ಹಂಗಾಮಿ ಸ್ಪೀಕರ್ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಕಲಾಪ ಪ್ರಾರಂಭ
ಕರ್ನಾಟಕ ವಿಧಾನಸಭೆ ಅಧಿವೇಶನ 2026 ನೇರಪ್ರಸಾರ: ಕರ್ನಾಟಕ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆಗಸ್ಟ್ 13 ರಂದು ಆರಂಭಗೊಂಡಿತು. ವಿಧಾನಸಭೆ ಮತ್ತು ವಿಧಾನಪರಿಷತ್ ಎರಡರಲ್ಲೂ ಪ್ರಮುಖ ಕಲಾಪಗಳು ನಡೆದವು. ಹಂಗಾಮಿ ಸ್ಪೀಕರ್ ಟಿ.ಬಿ. ಜಯಚಂದ್ರ ಕಲಾಪ ಪ್ರಾರಂಭಿಸಿದರು. ಹೊಸ ಸಚಿವರ ಪರಿಚಯದ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಅವರ ಮನವಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೌರವಿಸಿದರು. ಡಾ. ಯತೀಂದ್ರ ಸಿದ್ದರಾಮಯ್ಯ ವಿಧಾನಪರಿಷತ್ ಸಭಾನಾಯಕರಾಗಿ ಕಾರ್ಯಾರಂಭ ಮಾಡಿದರು.
- Akshay Pallamajalu
- Updated on: Aug 13, 2026
- 11:28 am
ಜಾಗತಿಕ ಯುವ ಜನಸಂಖ್ಯೆ ವರದಿ: ಭಾರತ ಪ್ರಥಮ; ಚೀನಾ, ಪಾಕಿಸ್ತಾನ, ಅಮೆರಿಕವನ್ನು ಹಿಂದಿಕ್ಕಿದ ಭಾರತೀಯ ಯುವಕರ ಸಂಖ್ಯೆ
ವಿಶ್ವಸಂಸ್ಥೆ ಪ್ರಕಾರ, 15-24 ವಯಸ್ಸಿನ ಯುವಕರ ಸಂಖ್ಯೆ ಪ್ರಸ್ತುತ 1.3 ಶತಕೋಟಿ. 2050ರ ವೇಳೆಗೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಯುವಕರ ಪಾಲು ಹೆಚ್ಚಾಗಲಿದೆ. ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗಾವಕಾಶಗಳಲ್ಲಿ ಹೂಡಿಕೆ ಮಾಡುವ ಮೂಲಕ ಈ ಯುವಶಕ್ತಿಯು ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಭದ್ರ ಬುನಾದಿಯಾಗಬಲ್ಲದು ಎಂದು ಜಾಗತಿಕ ವರದಿಗಳು ತಿಳಿಸುತ್ತವೆ.
- Akshay Pallamajalu
- Updated on: Aug 13, 2026
- 10:46 am
ಬಸ್, ಕ್ಯಾಬ್ ಸಿಗಲ್ಲ ಎಂಬ ಆತಂಕ: ಅರ್ಧ ರಾತ್ರಿಯಲ್ಲೇ ಏರ್ಪೋರ್ಟ್ ತಲುಪಿ ಕಷ್ಟಪಟ್ಟು ಕಾಲಕಳೆದ ಪ್ರಯಾಣಿಕರು
ಕರ್ನಾಟಕ ಬಂದ್ನ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರದ ಭೀತಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಅವಧಿಗೂ ಮುನ್ನವೇ ಆಗಮಿಸಿದ್ದಾರೆ. ಬಸ್, ಕ್ಯಾಬ್ಗಳು ಸಿಗುವುದಿಲ್ಲ ಎಂಬ ಆತಂಕದಲ್ಲಿ ಬಂದಿರುವ ಜನರು, ಮಹಿಳೆಯರು ಹಾಗೂ ಮಕ್ಕಳ ಸಮೇತ ಕುಳಿತಲ್ಲೇ ನಿದ್ದೆಗೆ ಜಾರಿದ್ದಾರೆ. ಆದಾಗ್ಯೂ, ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿಲ್ಲ.
- Akshay Pallamajalu
- Updated on: Aug 13, 2026
- 10:12 am
Karnataka Bandh Live Updates: ಕಾವೇರಿ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಬಂದ್, ಸಿಎಂ ಭೇಟಿಯಾದ ಕನ್ನಡಪರ ನಾಯಕರು
ಕರ್ನಾಟಕ ಬಂದ್ ಲೈವ್: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಬೆಂಗಳೂರಿನಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸಾರ್ವಜನಿಕ ಸಾರಿಗೆ ಸಂಚಾರದಲ್ಲಿ ವ್ಯತ್ಯಾಸವಿಲ್ಲ. ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಮನವಿ ಮಾಡಿದ್ದು, ಬಲವಂತದ ಅಂಗಡಿ ಮುಚ್ಚಿಸುವಿಕೆಗೆ ನಿಷೇಧವಿದೆ. ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವೂ ಇಂದು ಆರಂಭ.
- Akshay Pallamajalu
- Updated on: Aug 13, 2026
- 8:10 pm
ಇಂದಿನ ಹವಾಮಾನ ವರದಿ : ಕರಾವಳಿ-ಮಲೆನಾಡಿನಲ್ಲಿ ಚುರುಕುಗೊಂಡ ಮುಂಗಾರು; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಇಂದು (ಆಗಸ್ಟ್ 13) ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ ಸೇರಿ 5 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಸಿಡಿಲು ಹಾಗೂ ಗಂಟೆಗೆ 30-50 ಕಿ.ಮೀ ವೇಗದ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.
- Akshay Pallamajalu
- Updated on: Aug 13, 2026
- 7:14 am
ಶ್ರಾವಣ ಮಾಸದ ಪವಿತ್ರ ಗುರುವಾರ: ಚಂದ್ರನ ಆಶ್ಲೇಷಾ ನಕ್ಷತ್ರ ಸಂಚಾರ, 12 ರಾಶಿಗಳ ಜಾತಕ ಫಲ
ಡಾ. ಬಸವರಾಜ ಗುರೂಜಿ ಅವರಿಂದ ಆಗಸ್ಟ್ 13, 2026 ರ ದಿನಭವಿಷ್ಯ ಇಲ್ಲಿದೆ. ಶ್ರಾವಣ ಮಾಸದ ಈ ಶುಭ ಗುರುವಾರ, ಪ್ರತಿಯೊಂದು ರಾಶಿಫಲದ ಬಗ್ಗೆ ವಿಸ್ತೃತ ಮಾಹಿತಿ ನೀಡಲಾಗಿದೆ. ಪ್ರತಿಯೊಂದು ರಾಶಿ ಚಿಹ್ನೆಯು ಹಣಕಾಸು, ವೃತ್ತಿ, ಆರೋಗ್ಯ ಮತ್ತು ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಅದೃಷ್ಟ ಸಂಖ್ಯೆಗಳು, ಬಣ್ಣಗಳು ಮತ್ತು ಪಠಿಸಬೇಕಾದ ಮಂತ್ರಗಳೊಂದಿಗೆ ಶುಭಫಲ ಪಡೆಯಿರಿ.
- Akshay Pallamajalu
- Updated on: Aug 13, 2026
- 6:29 am
ರಾಜ್ಯದಲ್ಲಿ ಹೆಚ್ಚಿದ ಅಂಗಾಂಗ ದಾನ: ಆದರೆ ಕಿಡ್ನಿ ಕಸಿಗಾಗಿ ಇಂದಿಗೂ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ
ಕರ್ನಾಟಕದಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದರೂ, ಕಿಡ್ನಿ ಕಸಿಗೆ ಸಾವಿರಾರು ರೋಗಿಗಳು ಇನ್ನೂ 2-3 ವರ್ಷ ಕಾಯಬೇಕಿದೆ. ರಾಜ್ಯವು ಕಳೆದ ವರ್ಷ ಅಂಗಾಂಗ ದಾನದಲ್ಲಿ ದೇಶದಲ್ಲೇ 3ನೇ ಸ್ಥಾನದಲ್ಲಿದ್ದರೂ, ಬ್ರೈನ್ ಡೆಡ್ ಅರಿವಿನ ಕೊರತೆ, ಕುಟುಂಬದ ಒಪ್ಪಿಗೆ ಮತ್ತು ಮೂಢನಂಬಿಕೆಗಳು ದಾನಕ್ಕೆ ಅಡ್ಡಿಪಡಿಸುತ್ತಿವೆ. ಜಿಲ್ಲಾ ಮಟ್ಟದಲ್ಲಿ ಜಾಗೃತಿ ಮತ್ತು ಕೌನ್ಸಿಲರ್ಗಳ ನಿಯೋಜನೆಯು ಈ ಸಮಸ್ಯೆಯನ್ನು ಬಗೆಹರಿಸಲು ಸಹಕಾರಿ.
- Akshay Pallamajalu
- Updated on: Aug 13, 2026
- 6:09 am
Independence Day 2026: 1947 ಆಗಸ್ಟ್ 14-15ರ ಆ 24 ಗಂಟೆಗಳು: ಭಾರತದಲ್ಲಿ ನಡೆದ ರೋಮಾಂಚಕಾರಿ ಕ್ಷಣಗಳು
1947ರ ಆಗಸ್ಟ್ 14-15ರ 24 ಗಂಟೆಗಳು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿರುವಂತದ್ದು. ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಿ, ಸ್ವಾತಂತ್ರ್ಯದ ಪರಮೋಚ್ಚ ಆನಂದ ಒಂದು ಕಡೆ, ದೇಶ ವಿಭಜನೆಯ ಭೀಕರ ರಕ್ತಪಾತ ಮತ್ತು ನೋವು ಇನ್ನೊಂದು ಕಡೆ. ನೆಹರೂ ಅವರ 'ಟ್ರಿಸ್ಟ್ ವಿತ್ ಡೆಸ್ಟಿನಿ' ಭಾಷಣ, ಗಾಂಧೀಜಿಯವರ ಕಲ್ಕತ್ತಾದ ಉಪವಾಸ - ಈ ಅವಿಸ್ಮರಣೀಯ ಕ್ಷಣಗಳು ಸ್ವತಂತ್ರ ಭಾರತದ ಹುಟ್ಟಿಗೆ ಸಾಕ್ಷಿಯಾದವು.
- Akshay Pallamajalu
- Updated on: Aug 12, 2026
- 5:18 pm
ಇರಾನ್ನಿಂದ ಹತ್ಯೆ ಬೆದರಿಕೆ ಭೀತಿ: ವಿಮಾನ ಬದಲಿಸಿದ್ದನ್ನು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ನ್ಯಾಟೋ ಶೃಂಗಸಭೆ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಹಸ್ಯವಾಗಿ ವಿಮಾನ ಬದಲಾಯಿಸಿದ್ದನ್ನು ದೃಢಪಡಿಸಿದ್ದಾರೆ. ಇರಾನ್ನಿಂದ ಸಂಭಾವ್ಯ ಹತ್ಯೆ ಯತ್ನದ ಬೆದರಿಕೆಯಿಂದ ಸೀಕ್ರೆಟ್ ಸರ್ವಿಸ್ ಮತ್ತು ಸೇನಾ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇಸ್ರೇಲಿ ಗೂಢಚಾರಿ ಸಂಸ್ಥೆಗಳ ಮುನ್ಸೂಚನೆ ಆಧಾರದ ಮೇಲೆ, ಟ್ರಂಪ್ ಅವರನ್ನು ಮತ್ತೊಂದು ಚಿಕ್ಕ ಸೇನಾ ವಿಮಾನಕ್ಕೆ ಸ್ಥಳಾಂತರಿಸಲಾಯಿತು, ಇದು ಮಾಧ್ಯಮಗಳಿಂದ ರಹಸ್ಯವಾಗಿತ್ತು.
- Akshay Pallamajalu
- Updated on: Aug 12, 2026
- 4:28 pm
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು
ದೆಹಲಿಯಿಂದ ಪುಣೆಗೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ (AC ವೈಫಲ್ಯ) ಕಾಣಿಸಿಕೊಂಡಿತು. ಕ್ಯಾಬಿನ್ನಲ್ಲಿ ತಾಪಮಾನ ಏರಿಕೆಯಾಗಿ ಪ್ರಯಾಣಿಕರಿಗೆ ಉಸಿರಾಟದ ತೊಂದರೆಯಾಯಿತು. ಪ್ರಯಾಣಿಕರ ಜಾಗರೂಕತೆಯಿಂದಾಗಿ ವಿಮಾನ ಹಾರಾಟಕ್ಕೂ ಮುನ್ನವೇ ಭಾರಿ ಅನಾಹುತ ತಪ್ಪಿತು. ಪೈಲಟ್ನ ನಿರ್ಲಕ್ಷ್ಯದ ಆರೋಪಗಳಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸ್ಪೈಸ್ಜೆಟ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.
- Akshay Pallamajalu
- Updated on: Aug 12, 2026
- 1:53 pm
ಕೋಲ್ಕತ್ತಾ-ಚೆನ್ನೈ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ರನ್ವೇ 25ರಲ್ಲಿ ತುರ್ತು ಭೂಸ್ಪರ್ಶ
ಕೋಲ್ಕತ್ತಾದಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನದ ಎಡ ಎಂಜಿನ್ ವಿಫಲಗೊಂಡು ಚೆನ್ನೈ ವಿಮಾನ ನಿಲ್ದಾಣದಲ್ಲಿ 'ಫುಲ್ ಎಮರ್ಜೆನ್ಸಿ' ಘೋಷಿಸಲಾಯಿತು. ಪೈಲಟ್ ಸಮಯಪ್ರಜ್ಞೆಯಿಂದ 224 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ದೊಡ್ಡ ಅನಾಹುತವೊಂದು ತಪ್ಪಿ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ. ಯಾವುದೇ ಅಪಾಯವಿಲ್ಲದೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
- Akshay Pallamajalu
- Updated on: Aug 12, 2026
- 12:09 pm