ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್ ಸುದ್ದಿಗಳನ್ನು ಬರೆಯುತ್ತಾರೆ.
ನಾಗೇಂದ್ರ ರಾಜೀನಾಮೆ ತೆರವಾದ ಸ್ಥಾನ ಎಸ್.ಟಿ. ನಾಯಕರಿಗೇ ಸಿಗಬೇಕು: ಕೆ.ಎನ್. ರಾಜಣ್ಣ
ಕೆ.ಎನ್. ರಾಜಣ್ಣ ಅವರು ನಾಗೇಂದ್ರ ಅವರ ರಾಜೀನಾಮೆ ಸಂದರ್ಭದಲ್ಲಿ, "ನಮ್ಮ ಪಾರ್ಟಿಯಲ್ಲಿ ಒಬ್ಬೊಬ್ಬರೇ ಎಸ್.ಟಿ. ನಾಯಕರು ಟಾರ್ಗೆಟ್ ಆಗುತ್ತಿದ್ದಾರೆ," ಎಂದು ಹೇಳಿದ್ದಾರೆ. ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ನಾಗೇಂದ್ರ ಬಲಿಪಶುವಾಗಿದ್ದಾರೆ. ಬಿಜೆಪಿ ಎಸ್.ಟಿ. ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ರಾಜಕೀಯ ಪ್ರೇರಿತ ಪಾದಯಾತ್ರೆ ನಡೆಸುತ್ತಿದೆ. ಖಾಲಿ ಇರುವ ಸ್ಥಾನಗಳನ್ನು ಸಮುದಾಯಕ್ಕೆ ನೀಡಬೇಕೆಂದು ರಾಜಣ್ಣ ಆಗ್ರಹಿಸಿದ್ದಾರೆ.
- Akshay Pallamajalu
- Updated on: Aug 29, 2026
- 4:44 pm
ಕಣ್ಣೂರಿನಲ್ಲಿ ಖಾಸಗಿ ಬಸ್ನಿಂದ ಕಾಲು ಜಾರಿ ಬಿದ್ದ ವೃದ್ಧ: ದೇವರಂತೆ ಬಂದು ಕಾಪಾಡಿದ ಕ್ಲೀನರ್
ಕೇರಳದ ಕಣ್ಣೂರಿನಲ್ಲಿ ನಡೆದ ರೋಮಾಂಚಕ ಘಟನೆಯಲ್ಲಿ, 'ಪಾರ್ವತಿ' ಬಸ್ನ ಕ್ಲೀನರ್ ಅತುಲ್ ಕುಕು ಚಲಿಸುವ ಬಸ್ಗೆ ಹತ್ತಲು ಯತ್ನಿಸಿ ಸಮತೋಲನ ಕಳೆದುಕೊಂಡ ವೃದ್ಧರೊಬ್ಬರ ಜೀವ ಉಳಿಸಿದರು. ಆಗಸ್ಟ್ 28, 2026 ರಂದು ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಅತುಲ್ ಅವರ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಮಿಂಚಿನ ಪ್ರತಿಕ್ರಿಯೆಯಿಂದ ಭೀಕರ ಅನಾಹುತ ತಪ್ಪಿದೆ.
- Akshay Pallamajalu
- Updated on: Aug 29, 2026
- 3:36 pm
ನೇಪಾಳ ಪ್ರವಾಹ: ಕೆಸರಿನಲ್ಲಿ ತೆವಳುತ್ತಾ ಸುರಂಗ ಪ್ರವೇಶಿಸಿ ಜೀವ ಉಳಿಸಿದ ನೇಪಾಳ ಯೋಧರು
ಹಿಮಾಲಯ ಪ್ರದೇಶದಲ್ಲಿ ಗ್ಲೇಸಿಯರ್ ಕುಸಿತದಿಂದ ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿದೆ. 586ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 2,400ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನೇಪಾಳ ಸೇನೆಯು ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ರಕ್ಷಿಸಲು ಬೃಹತ್ ಕಾರ್ಯಾಚರಣೆ ನಡೆಸುತ್ತಿದೆ. ಹೆಲಿಕಾಪ್ಟರ್ಗಳ ಮೂಲಕ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ನೂರಾರು ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
- Akshay Pallamajalu
- Updated on: Aug 29, 2026
- 1:31 pm
ದೆಹಲಿ ಮಾಡೆಲ್ ಮುಸ್ಕಾನ್ ಕೊಲೆಗಾರ ಇಮ್ರಾನ್ ಖಾನ್ ಕರಾಳ ಮುಖ ಬಯಲು: ಪೋಕ್ಸೋ ಕೇಸ್, ಡ್ರಗ್ಸ್ ಅಷ್ಟೇ ಅಲ್ಲ, ರೌಡಿ ಶೀಟರ್ ಈತ
ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಮುಸ್ಕಾನ್ ಶರ್ಮಾ ಕೊಲೆ ಪ್ರಕರಣದ ಆರೋಪಿ ಇಮ್ರಾನ್ ಖಾನ್ನನ್ನು ದೆಹಲಿ ಪೊಲೀಸರು ಎನ್ಕೌಂಟರ್ ಬಳಿಕ ಬಂಧಿಸಿದ್ದಾರೆ. ಮಾದಕ ವ್ಯಸನಿ ಹಾಗೂ ಕಿರುಕುಳ ನೀಡುತ್ತಿದ್ದ ಇಮ್ರಾನ್ ಖಾನ್, ಮುಸ್ಕಾನ್ನನ್ನು ಚಾಕುವಿನಿಂದ ಇರಿದು, ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಪ್ರೇಮ ವೈಫಲ್ಯ, ಹಿಂಸೆ ಆರೋಪಿಯ ಹಿನ್ನೆಲೆಯಾಗಿತ್ತು. ಪೊಲೀಸರ ಕಾರ್ಯಾಚರಣೆಯಿಂದ ಆರೋಪಿಯ ಬಂಧನವಾಗಿದೆ.
- Akshay Pallamajalu
- Updated on: Aug 29, 2026
- 2:09 pm
ವೆನೆಜುವೆಲಾದೊಂದಿಗೆ ‘ವಿಶ್ವದ ದೊಡ್ಡ ತೈಲ ಒಪ್ಪಂದ’: ಅಮೆರಿಕಕ್ಕೆ 65 ಶತಕೋಟಿ ಬ್ಯಾರೆಲ್ ತೈಲದ ಮೇಲುಗೈ – ಡೊನಾಲ್ಡ್ ಟ್ರಂಪ್ ಘೋಷಣೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾದೊಂದಿಗೆ ಬೃಹತ್ ತೈಲ ಒಪ್ಪಂದ ಘೋಷಿಸಿದ್ದಾರೆ. ಈ ಮೂಲಕ ಅಮೆರಿಕ 65 ಶತಕೋಟಿ ಬ್ಯಾರೆಲ್ ತೈಲ ಸಂಗ್ರಹದ ಮೇಲೆ ನಿಯಂತ್ರಣ ಸಾಧಿಸಿದೆ. ವೆನೆಜುವೆಲಾಗೆ $100 ಶತಕೋಟಿ ಖಾಸಗಿ ಹೂಡಿಕೆ ಹರಿದುಬರಲಿದ್ದು, ಸಾವಿರಾರು ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪುನರುಜ್ಜೀವನಕ್ಕೆ ಕಾರಣವಾಗಲಿದೆ. ಅಮೆರಿಕದ ತೈಲ ಸಂಗ್ರಹ ದುಪ್ಪಟ್ಟಾಗಿ, ಪೆಟ್ರೋಲ್ ಬೆಲೆ ಇಳಿಕೆಗೆ ಸಹಕಾರಿಯಾಗಲಿದೆ.
- Akshay Pallamajalu
- Updated on: Aug 29, 2026
- 11:29 am
ಖಾರ ತಿಂದ ಮಗು ಅಸ್ವಸ್ಥ: ಎಫ್ಡಿಎ ಅಧಿಕಾರಿಗೆ ಬಲವಂತವಾಗಿ ಎಕ್ಸ್ಪೈರಿ ಬಿಸ್ಕತ್ತು ತಿನ್ನಿಸಲು ಯತ್ನಿಸಿದ ಜನ
ಛತ್ರಪತಿ ಸಂಭಾಜಿನಗರದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟದ ಲಂಚ ಪ್ರಕರಣದಲ್ಲಿ ಎಫ್ಡಿಎ ಅಧಿಕಾರಿಯೊಬ್ಬರನ್ನು ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅವಧಿ ಮೀರಿದ ಬಿಸ್ಕತ್ತುಗಳನ್ನು ತಿನ್ನಿಸಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ. ಮಗುವಿಗೆ ಕಳಪೆ ಸ್ನ್ಯಾಕ್ಸ್ ತಿನ್ನಿಸಿದ ನಂತರ ಪೋಷಕರು ದೂರು ನೀಡಿದ್ದರು. ಅಧಿಕಾರಿ ಲಂಚ ಪಡೆದು ಕ್ರಮ ಕೈಗೊಳ್ಳಲು ವಿಫಲರಾದ ಆರೋಪದ ಮೇಲೆ ಜನ ಆಕ್ರೋಶಗೊಂಡರು. ಆಹಾರ ಸುರಕ್ಷತೆ ಕುರಿತು ಮಹಾರಾಷ್ಟ್ರದಾದ್ಯಂತ ಕಾರ್ಯಾಚರಣೆ ತೀವ್ರಗೊಂಡಿರುವ ನಡುವೆಯೇ ಈ ಘಟನೆ ನಡೆದಿದೆ.
- Akshay Pallamajalu
- Updated on: Aug 29, 2026
- 10:51 am
ಪ್ರಧಾನಿ ಮೋದಿ 4 ದಿನಗಳ ಉಜ್ಬೇಕಿಸ್ತಾನ್ – ಕಿರ್ಗಿಸ್ತಾನ್ ಪ್ರವಾಸ : 26ನೇ ಎಸ್ಸಿಒ ಶೃಂಗಸಭೆಯಲ್ಲಿ ಭಾಗಿ
ಪ್ರಧಾನಿ ಮೋದಿ ಅವರು ಆಗಸ್ಟ್ 29-ಸೆಪ್ಟೆಂಬರ್ 1 ರವರೆಗೆ ಉಜ್ಬೇಕಿಸ್ತಾನ್ ಮತ್ತು ಕಿರ್ಗಿಸ್ತಾನ್ಗೆ ಭೇಟಿ ನೀಡಿದ್ದಾರೆ. 26ನೇ SCO ಶೃಂಗಸಭೆಯಲ್ಲಿ ಭಾಗವಹಿಸಿ, ಭಯೋತ್ಪಾದನೆ ಮುಕ್ತ, ಭದ್ರತೆ ಮತ್ತು ಪ್ರಾದೇಶಿಕ ಸಂಪರ್ಕ ವೃದ್ಧಿಗೆ ಭಾರತದ ಬದ್ಧತೆ ಪುನರುಚ್ಛರಿಸಿದರು. ಉಜ್ಬೇಕಿಸ್ತಾನ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ವ್ಯಾಪಾರ, ಹೂಡಿಕೆ, ರಕ್ಷಣೆ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಒತ್ತು ನೀಡಿದರು.
- Akshay Pallamajalu
- Updated on: Aug 29, 2026
- 10:21 am
ಅಮೆರಿಕದಲ್ಲಿರುವ ಶೇ. 71 ರಷ್ಟು ಭಾರತೀಯರಿಗೇ ಬಿಗ್ ಟೆನ್ಷನ್: 60 ದಿನಗಳ ಗ್ರೇಸ್ ಅವಧಿ ರದ್ದುಗೊಳಿಸಲು ಟ್ರಂಪ್ ಆಡಳಿತ ಸಿದ್ಧತೆ
ಅಮೆರಿಕದಲ್ಲಿ ಕೆಲಸ ಕಳೆದುಕೊಳ್ಳುವ H-1B ಸೇರಿದಂತೆ ವಿದೇಶಿ ಉದ್ಯೋಗಿಗಳಿಗೆ ಲಭ್ಯವಿದ್ದ 60 ದಿನಗಳ ಗ್ರೇಸ್ ಪೀರಿಯಡ್ ರದ್ದುಗೊಳಿಸಲು ಟ್ರಂಪ್ ಆಡಳಿತದ ಪ್ರಸ್ತಾವನೆಗೆ ಶ್ವೇತಭವನ ಅನುಮೋದಿಸಿದೆ. ಇದು ಜಾರಿಯಾದರೆ, ಕೆಲಸ ಕಳೆದುಕೊಂಡ ತಕ್ಷಣ ಹೊಸ ಉದ್ಯೋಗ ಹುಡುಕಬೇಕು ಅಥವಾ ದೇಶ ತೊರೆಯಬೇಕು. ಸಾವಿರಾರು ಭಾರತೀಯ H-1B ನೌಕರರಿಗೆ ಇದು ಭಾರೀ ಹಿನ್ನಡೆಯಾಗಲಿದ್ದು, ಐಟಿ ಮತ್ತು ಟೆಕ್ ವಲಯದ ಉದ್ಯೋಗಿಗಳ ಭವಿಷ್ಯ ಅಭದ್ರವಾಗಲಿದೆ.
- Akshay Pallamajalu
- Updated on: Aug 29, 2026
- 9:00 am
‘ನಾಗೇಂದ್ರ ನಿರಪರಾಧಿ, ಬಿಜೆಪಿ ನಡೆಗೆ ಜನತೆ ನೊಂದಿದ್ದಾರೆ’: ಡಿ.ಕೆ. ಶಿವಕುಮಾರ್ ಸಮರ್ಥನೆ
ವಾಲ್ಮೀಕಿ ನಿಗಮ ಹಣ ದುರ್ಬಳಕೆ ಪ್ರಕರಣದಲ್ಲಿ ರಾಜೀನಾಮೆ ನೀಡಿದ ಬಿ. ನಾಗೇಂದ್ರ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಗಟ್ಟಿ ಬೆಂಬಲ ನೀಡಿದ್ದಾರೆ. ನಾಗೇಂದ್ರ ಸಂಪೂರ್ಣ ನಿರಪರಾಧಿ ಎಂದು ಸಿಎಂ ಘೋಷಿಸಿದ್ದು, ಅವರ ರಾಜೀನಾಮೆ ಪಕ್ಷಕ್ಕೆ ಮುಜುಗರ ತರಬಾರದೆಂಬ ಸ್ವಯಂಪ್ರೇರಿತ ನಿರ್ಧಾರ ಎಂದರು. ದಲಿತ ನಾಯಕನನ್ನು ಅಪರಾಧಿ ಎಂದು ಬಿಂಬಿಸಲು ಬಿಜೆಪಿ ಯತ್ನಿಸಿದೆ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
- Akshay Pallamajalu
- Updated on: Aug 28, 2026
- 9:01 pm
ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ: ಬೆಳಿಗ್ಗೆಯಿಂದ ಬಲಿ ಸಂಖ್ಯೆ ಭಾರಿ ಏರಿಕೆ, ಕನ್ನಡಿಗರ ರಕ್ಷಣೆಗೆ ಬಿರುಸಿನ ಕ್ರಮ
ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದಿಂದ 547 ಮಂದಿ ಮೃತಪಟ್ಟು, 1000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ದುರಂತದಲ್ಲಿ ಕನಿಷ್ಠ 17 ಕನ್ನಡಿಗರು ಕಣ್ಮರೆಯಾಗಿದ್ದು, ಅವರನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ನಾಪತ್ತೆಯಾದವರ ಕುಟುಂಬಗಳಿಗೆ ಸಹಾಯವಾಣಿ ಸೌಲಭ್ಯವನ್ನೂ ಒದಗಿಸಲಾಗಿದೆ.
- Akshay Pallamajalu
- Updated on: Aug 28, 2026
- 8:25 pm
ರೌಡಿಗಳ ಮಟ್ಟಹಾಕಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್: IPS ಅಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ಸ್ಕ್ವಾಡ್, ಎನ್ಎಸ್ಜಿ ಟ್ರೈನಿಂಗ್ ರಚನೆ
ಸಿಎಂ ಡಿ.ಕೆ. ಶಿವಕುಮಾರ್ ರಾಜ್ಯದ ಭದ್ರತಾ ವ್ಯವಸ್ಥೆ ಬಲಪಡಿಸಲು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಎತ್ತರದ ಕಟ್ಟಡಗಳಲ್ಲಿ ರಕ್ಷಣೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಎನ್ಎಸ್ಜಿ ತರಬೇತಿ ಹಾಗೂ ಶೇ. 50ರಷ್ಟು ಹೆಚ್ಚುವರಿ ಮೂಲ ವೇತನ ನೀಡಲಾಗುವುದು. ಜೊತೆಗೆ, ರೌಡಿಗಳೊಂದಿಗೆ ಸ್ಥಳೀಯ ಪೊಲೀಸರ ಸಂಪರ್ಕ ಕಡಿತಗೊಳಿಸಲು ಪ್ರತ್ಯೇಕ ರೌಡಿ ಸ್ಕ್ವಾಡ್ ರಚನೆ, ಮಿಲಿಟರಿ ಸಹಭಾಗಿತ್ವ ಮತ್ತು ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕಡ್ಡಾಯ ಪಾಲನೆಗೆ ಒತ್ತು ನೀಡಲಾಗಿದೆ.
- Akshay Pallamajalu
- Updated on: Aug 28, 2026
- 2:57 pm
“ಬೇಕಾದರೆ ಆರ್ಎಸ್ಎಸ್ನ ನೊಂದಣಿ ಶುಲ್ಕವನ್ನು ನಾನೇ ಕಟ್ಟುತ್ತೇನೆ”: ಸಚಿವ ಪ್ರಿಯಾಂಕ್ ಖರ್ಗೆ
ಆರ್ಎಸ್ಎಸ್ ಸಂಘಟನೆ ನೋಂದಣಿಯಾಗಿಲ್ಲ, ಹಾಗಾಗಿ ಅದರ ವಿರುದ್ಧ ಪ್ರಕರಣಗಳಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಆರ್ಎಸ್ಎಸ್ ಕಾನೂನಾತ್ಮಕವಾಗಿ ನೋಂದಣಿಯಾಗಬೇಕು ಎಂದು ಸವಾಲು ಹಾಕಿ, ನೋಂದಣಿ ಶುಲ್ಕವನ್ನು ನಾನೇ ಕಟ್ಟುತ್ತೇನೆ ಎಂದು ಹೇಳಿದ್ದಾರೆ. ಪ್ರಭಾವಿ ನಾಯಕರು ಸದಸ್ಯರಾಗಿದ್ದರೂ, ಆರ್ಎಸ್ಎಸ್ ನೋಂದಣಿಗೆ ಹಿಂಜರಿಯುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
- Akshay Pallamajalu
- Updated on: Aug 27, 2026
- 1:27 pm