ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ಪ್ರಸ್ತುತ ನಾನು ಟಿವಿ9 ಕನ್ನಡ ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.
ಮನೆಯೆಲ್ಲಾ ಘಮಘಮಿಸಲು ನೆಲ ಒರೆಸುವ ನೀರಿಗೆ ಈ ವಸ್ತುಗಳನ್ನು ಬೆರೆಸಿ
ಮನೆ ತಾಜಾ ಸುವಾಸನೆಯಿಂದ ಕೂಡಿರಲು ನೆಲ ಒರೆಸುವ ನೀರಿಗೆ ಈ ವಸ್ತುಗಳನ್ನು ಬೆರೆಸಿ
- Akshay Pallamajalu
- Updated on: Dec 4, 2025
- 2:49 pm
ಬೆಂಗಳೂರಿನಲ್ಲಿ ಡ್ರಗ್ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು: ನೂರಾರು ಪೆಡ್ಲರ್ಗಳ ಬಂಧನ
ಬೆಂಗಳೂರು ಪೊಲೀಸರು ಡ್ರಗ್ಸ್ ದಂಧೆ ವಿರುದ್ಧ ಸಮರ ಮುಂದುವರಿಸಿದ್ದಾರೆ. ಕಾರ್ಯಾಚರಣೆ ವೇಳೆ ಹೈಡ್ರೋ ಗಾಂಜಾ, ಎಂಡಿಎಂಎ ಸೇರಿದಂತೆ 160 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡು, ನೂರಾರು ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಈ ವರ್ಷ 11 ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದು, ನಗರದಲ್ಲಿ ಮಾದಕವಸ್ತು ಜಾಲಕ್ಕೆ ತೀವ್ರ ಹೊಡೆತ ನೀಡಲಾಗಿದೆ.
- Akshay Pallamajalu
- Updated on: Dec 4, 2025
- 2:41 pm
ಕಳ್ಳತನ, ದರೋಡೆಯಲ್ಲಿ ಖಾಕಿ ಶಾಮೀಲು: ವಿಚಾರಣೆಗೆ ಬಂದಿದ್ದ ಆರೋಪಿಯಿಂದಲೇ ಹಣ ಎಗರಿಸಿದ ಹೆಡ್ ಕಾನ್ಸ್ಟೇಬಲ್
ರಾಜ್ಯದಲ್ಲಿ ಕಾನೂನು ಪಾಲಿಸಬೇಕಾದ ಪೊಲೀಸರೇ ಕಳ್ಳತನ, ದರೋಡೆಗಳಲ್ಲಿ ಶಾಮೀಲಾಗಿರುವುದು ಆಘಾತಕಾರಿ. 11 ಲಕ್ಷ ರೂ. ಕದ್ದ ಹೆಡ್ ಕಾನ್ಸ್ಟೇಬಲ್, ATM ದರೋಡೆ ಮಾಸ್ಟರ್ಮೈಂಡ್ ಕಾನ್ಸ್ಟೇಬಲ್, ಚಿನ್ನದ ವ್ಯಾಪಾರಿ ದರೋಡೆ ಮಾಡಿದ ಪಿಎಸ್ಐಗಳ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಕೃತ್ಯಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಇಲಾಖೆಯ ಘನತೆಗೆ ಧಕ್ಕೆ ತಂದಿವೆ. ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳು ಹುಟ್ಟಿಕೊಂಡಿವೆ.
- Akshay Pallamajalu
- Updated on: Dec 4, 2025
- 1:13 pm
ಹಾವೇರಿಯಲ್ಲಿ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು: ನಿಟ್ಟುಸಿರು ಬಿಟ್ಟ ಕಡೂರು ರೈತರು
ಹಾವೇರಿ ಜಿಲ್ಲೆಯ ಕಡೂರು ಗ್ರಾಮದಲ್ಲಿ ರೈತರಿಗೆ ಕೊನೆಗೂ ಚಿರತೆ ಕಾಟದಿಂದ ಮುಕ್ತಿ ಸಿಕ್ಕಿದೆ. ಕೃಷಿ ಕೆಲಸಕ್ಕೆ ಹೋಗಲು ಭಯಭೀತರಾಗಿದ್ದ ರೈತರನ್ನು ಅರಣ್ಯ ಇಲಾಖೆ ಇದೀಗ ಚಿರತೆ ಸೆರೆ ಹಿಡಿಯುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಸಿಸಿಟಿವಿಯಲ್ಲಿ ಚಿರತೆ ಓಡಾಡುತ್ತಿದ್ದ ದೃಶ್ಯ ಸೆರೆಯಾದ ನಂತರ, ಬೋನು ಇಟ್ಟು ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
- Akshay Pallamajalu
- Updated on: Dec 4, 2025
- 11:37 am
ಕೊಡಗಿನಲ್ಲಿ ಆನೆ-ಮಾನವನ ನಡುವಿನ ಸಂಘರ್ಷ: ರೈಲ್ವೆ ಬ್ಯಾರಿಕೇಡ್ ಮುರಿದ ಕಾಡಾನೆ
ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ರಾತ್ರಿ ಮಾತ್ರ ಓಡಾಡುತ್ತಿದ್ದ ಆನೆಗಳು ಈಗ ಹಗಲಿನಲ್ಲೂ ಕಾಣಿಸಿಕೊಳ್ಳುತ್ತಿವೆ. ಮಾನವ-ಆನೆ ಸಂಘರ್ಷ ಮತ್ತೆ ತೀವ್ರಗೊಂಡಿದೆ. ಕುಶಾಲನಗರದ ಅತ್ತೂರು ಗ್ರಾಮದಲ್ಲಿ ಕಾಡಾನೆಯೊಂದು ರೈಲ್ವೆ ಬ್ಯಾರಿಕೇಡ್ ಮುರಿದು ಊರಿಗೆ ನುಗ್ಗಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಈ ಬೆಳವಣಿಗೆ ವಿಡಿಯೋ ಮೂಲಕ ಹೊರಬಿದ್ದಿದೆ.
- Akshay Pallamajalu
- Updated on: Dec 4, 2025
- 10:06 am
ಸಚಿವೆ ನಿರ್ಮಲಾ ಸೀತಾರಾಮನ್ಗೂ ಡೀಪ್ಫೇಕ್ ಕಾಟ: ಬೆಂಗಳೂರಿನಲ್ಲಿ ಪ್ರಕರಣ ದಾಖಲು
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಡೀಪ್ಫೇಕ್ ವೀಡಿಯೊ ವೈರಲ್ ಆಗಿದೆ. ಹಣಕಾಸು ಹೂಡಿಕೆ ಕುರಿತಂತೆ ನಕಲಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗಿದೆ. ಇದೀಗ ಈ ಬಗ್ಗೆ ಬೆಂಗಳೂರಿನ ಮಲ್ಲೇಶ್ವರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಂತಹ ಡೀಪ್ಫೇಕ್ ವೀಡಿಯೊಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು, ಆರ್ಥಿಕ ನಷ್ಟ ತಪ್ಪಿಸಲು ಮಾಹಿತಿ ಪರಿಶೀಲಿಸುವುದು ಅತ್ಯಗತ್ಯ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
- Akshay Pallamajalu
- Updated on: Dec 4, 2025
- 9:36 am
ದೆಹಲಿ ಸ್ಫೋಟಕ್ಕೂ ಬೆಂಗಳೂರು ಜೈಲಿನಲ್ಲಿ ಉಗ್ರ ಮೊಬೈಲ್ ಬಳಸಿದ್ದಕ್ಕೂ ಇದೆಯಾ ನಂಟು? ಎನ್ಐಎ ತೀವ್ರ ತನಿಖೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಮೊಬೈಲ್ ಬಳಕೆ ವಿಡಿಯೋ ವೈರಲ್ ಆದ ನಂತರ ಎನ್ಐಎ ತನಿಖೆ ಚುರುಕುಗೊಂಡಿದೆ. ಉಗ್ರ ಜುಹಾದ್ ಶಕೀಲ್ ಮನ್ನಾ ಜೈಲಿನಲ್ಲಿದ್ದುಕೊಂಡು ಮೊಬೈಲ್ ಬಳಸಿದ್ದ ವಿಡಿಯೋ ಬೆಳಕಿಗೆ ಬಂದಿದ್ದು, ದೆಹಲಿ ಬ್ಲಾಸ್ಟ್ಗೂ ಈತನ ಸಂಪರ್ಕ ಇರುವ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಅಧಿಕಾರಿಗಳು ಈಗಾಗಲೇ ಜೈಲಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
- Akshay Pallamajalu
- Updated on: Dec 4, 2025
- 9:24 am
ಕರ್ನಾಟಕ ಹವಾಮಾನ: ವಾಯುಭಾರ ಕುಸಿತ, ಬೆಂಗಳೂರು, ಕರಾವಳಿಗೆ ಮುಂದಿನ 3 ದಿನ ಮಳೆ ಸಾಧ್ಯತೆ
Karnataka Weather:ದಿಟ್ವಾ ಚಂಡಮಾರುತದ ಪ್ರಭಾವದಿಂದ ಉಂಟಾದ ವಾಯುಭಾರ ಕುಸಿತದಿಂದ ಕರ್ನಾಟಕದಾದ್ಯಂತ ಮಳೆ ಆಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೆಲವು ಪ್ರದೇಶಗಳಲ್ಲಿ ಮಂಜು ಹಾಗೂ ಚಳಿ ಹೆಚ್ಚಾಗುವ ಮುನ್ಸೂಚನೆಯಿದೆ.
- Akshay Pallamajalu
- Updated on: Dec 4, 2025
- 8:07 am
Horoscope Today 04 December: ಇಂದು ಈ ರಾಶಿಯವರು ತಾಳ್ಮೆ, ವಿವೇಕದಿಂದ ವರ್ತಿಸಿ
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ ರಾಶಿಫಲದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೃತಿಕಾ ನಕ್ಷತ್ರ, ಹುಣ್ಣಿಮೆ, ಹಾಗೂ ಗ್ರಹಗಳ ಸಂಚಾರದ ಆಧಾರದ ಮೇಲೆ ಮೇಷದಿಂದ ಮೀನದವರೆಗೆ ಪ್ರತಿ ರಾಶಿಯವರಿಗೆ ಉದ್ಯೋಗ, ಆರ್ಥಿಕ, ಕೌಟುಂಬಿಕ ವಿಷಯಗಳಲ್ಲಿ ಆಗುವ ಶುಭ-ಅಶುಭ ಫಲಗಳು, ಅದೃಷ್ಟ ಸಂಖ್ಯೆ, ಬಣ್ಣ ಹಾಗೂ ಜಪಿಸಬೇಕಾದ ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
- Akshay Pallamajalu
- Updated on: Dec 4, 2025
- 6:32 am
Daily Devotional: ಕನಸಿನಲ್ಲಿ ಹಾವು ಕಚ್ಚಿದ್ರೆ ಅದರ ಅರ್ಥ ಏನು ಗೊತ್ತಾ?
ಕನಸಿನಲ್ಲಿ ಹಾವು ಕಚ್ಚಿದ ಅನುಭವವಾದರೆ, ಸ್ವಪ್ನ ಶಾಸ್ತ್ರದ ಪ್ರಕಾರ ಇದು ಕೆಲವು ಸೂಚನೆಗಳನ್ನು ನೀಡುತ್ತದೆ. ಇದು ಅನಾರೋಗ್ಯ, ಆರ್ಥಿಕ ನಷ್ಟ ಅಥವಾ ಗುಪ್ತ ಶತ್ರುಗಳ ಸಂಕೇತವಾಗಿರಬಹುದು. ಇಂತಹ ಸಂದರ್ಭದಲ್ಲಿ ಧನಾತ್ಮಕ ಚಿಂತನೆ, ಸುಬ್ರಹ್ಮಣ್ಯ ಆರಾಧನೆ ಮತ್ತು ನವನಾಗ ಸ್ತೋತ್ರ ಪಠಣದ ಮೂಲಕ ದೋಷ ನಿವಾರಣೆಗೆ ಪರಿಹಾರ ಕಂಡುಕೊಳ್ಳಬಹುದು.
- Akshay Pallamajalu
- Updated on: Dec 4, 2025
- 6:38 am
ಆಟೋದಲ್ಲಿ ಇಬ್ಬರು ಯುವಕರ ಶವ ಪತ್ತೆ: ದುಶ್ಚಟದಿಂದ ಪ್ರಾಣಕ್ಕೆ ಕುತ್ತು ತಂದುಕೊಂಡ್ರಾ?
ಹೈದರಾಬಾದ್ನ ಚಂದ್ರಾಯನಗುಟ್ಟದಲ್ಲಿ ಆಟೋವೊಂದರಲ್ಲಿ ಜಹಾಂಗೀರ್ ಮತ್ತು ಇರ್ಫಾನ್ ಎಂಬ ಇಬ್ಬರು ಯುವಕರ ಶವಗಳು ಪತ್ತೆಯಾಗಿವೆ. ಸ್ಥಳದಲ್ಲಿ ಮೂರು ಸಿರಿಂಜ್ಗಳು ದೊರೆತಿವೆ. ಮಾದಕ ದ್ರವ್ಯದ ಮಿತಿಮೀರಿದ ಸೇವನೆಯಿಂದ ಸಾವು ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೂರನೇ ವ್ಯಕ್ತಿ ಪರಾರಿಯಾಗಿದ್ದಾನೆ. ಈ ಬಗ್ಗೆ ಚಂದ್ರಾಯನಗುಟ್ಟ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
- Akshay Pallamajalu
- Updated on: Dec 3, 2025
- 5:49 pm
ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದರ ಪ್ರಯೋಜನಗಳು
ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದರ ಪ್ರಯೋಜನಗಳು
- Akshay Pallamajalu
- Updated on: Dec 3, 2025
- 5:21 pm