ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ಪ್ರಸ್ತುತ ನಾನು ಟಿವಿ9 ಕನ್ನಡ ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.
ಪಿಂಕ್ ಲೈನ್ ಮೆಟ್ರೋ: ಕೋತ್ತನೂರು ಡಿಪೋಗೆ ಮೂರನೇ ರೈಲು ಸೆಟ್ ಆಗಮನ
ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಬಿಇಎಂಎಲ್ ತಯಾರಿಸಿದ ಮೂರನೇ ಡ್ರೈವರ್ಲೆಸ್ ರೈಲು ಸೆಟ್ ಕೋತ್ತನೂರು ಡಿಪೋಗೆ ತಲುಪಿದೆ. ಈಗಾಗಲೇ ಮೊದಲ ರೈಲಿನ ಪರೀಕ್ಷಾರ್ಥ ಸಂಚಾರ ಆರಂಭವಾಗಿದ್ದು, ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.25 ಕಿಮೀ ಉದ್ದದ ಮಾರ್ಗದಲ್ಲಿ 18 ಮೆಟ್ರೋ ನಿಲ್ದಾಣಗಳು ಬರಲಿವೆ. ಈ ಆಗಮನವು ಯೋಜನೆಯ ಪ್ರಗತಿಗೆ ವೇಗ ನೀಡಿದೆ.
- Akshay Pallamajalu
- Updated on: Feb 26, 2026
- 12:13 pm
Karnataka Air Quality: ಹುಬ್ಬಳ್ಳಿ ಬಿಟ್ಟು ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ‘ಸಾಧಾರಣ’
ರಾಜ್ಯದ ಬೆಂಗಳೂರು, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ನಗರಗಳಲ್ಲಿ ವಾಯು ಮಾಲಿನ್ಯ ಸಾಧಾರಣ ಮಟ್ಟದಲ್ಲಿದೆ. ಕಟ್ಟಡ ನಿರ್ಮಾಣ ಕಾರ್ಯಗಳು ಮತ್ತು ವಾಹನಗಳ ದಟ್ಟಣೆಯೇ ಇದಕ್ಕೆ ಪ್ರಮುಖ ಕಾರಣ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಮಾಲಿನ್ಯದ ತೀವ್ರತೆ ಹೆಚ್ಚಿರುತ್ತದೆ. ಶ್ವಾಸಕೋಶದ ಸಮಸ್ಯೆ ಇರುವವರು ಮಾಸ್ಕ್ ಧರಿಸುವುದು ಹಾಗೂ ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ವ್ಯಾಯಾಮ ತಪ್ಪಿಸುವುದು ಉತ್ತಮ. ಮಂಗಳೂರು ಮತ್ತು ಕಾರವಾರ ಜಿಲ್ಲೆಗಳಲ್ಲಿ ಉತ್ತಮ ವಾಯು ಗುಣಮಟ್ಟ ದಾಖಲಾಗಿದೆ.
- Akshay Pallamajalu
- Updated on: Feb 26, 2026
- 7:38 am
Daily Horoscope: ಈ ರಾಶಿಯಯವರಿಗೆ ಇಂದು ಡಬಲ್ ಸಂಭ್ರಮ, ಜೀವನದಲ್ಲಿ ದೊಡ್ಡ ಬದಲಾವಣೆ
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಟಿವಿ9 ಡಿಜಿಟಲ್ ವಾಹಿನಿಯಲ್ಲಿ 26 ಫೆಬ್ರವರಿ 2026 ರ ದಿನ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಮೃಗಶಿರಾ ನಕ್ಷತ್ರದಲ್ಲಿ ಚಂದ್ರನ ಸಂಚಾರದೊಂದಿಗೆ, ದ್ವಾದಶ ರಾಶಿಗಳ ಮೇಲೆ ಗ್ರಹಗಳ ಶುಭಫಲಗಳು, ವೃತ್ತಿ, ಹಣಕಾಸು, ಆರೋಗ್ಯ ಮತ್ತು ವೈವಾಹಿಕ ಜೀವನದ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗಿದೆ.
- Akshay Pallamajalu
- Updated on: Feb 26, 2026
- 6:53 am
Horoscope Today 26 February: ಅಡುಗೆಯ ನಂತರ ಆಹಾರವನ್ನು ಯಾವ ದಿಕ್ಕಿಗೆ ಇರಿಸಬೇಕು
ಅಡುಗೆಯು ಜೀವಧಾರವಾಗಿದ್ದು, ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಿದ ನಂತರ, ಆಹಾರ ತುಂಬಿದ ಪಾತ್ರೆಗಳನ್ನು ಉತ್ತರ ದಿಕ್ಕಿಗೆ ಇರಿಸುವುದು ಶ್ರೇಷ್ಠ. ಇದು ಸಂತೃಪ್ತಿ, ಶಕ್ತಿ ಮತ್ತು ಸಮೃದ್ಧಿಯನ್ನು ತರುತ್ತದೆ. ದಕ್ಷಿಣ ಅಥವಾ ಪಶ್ಚಿಮ ದಿಕ್ಕುಗಳಿಗೆ ಇಡುವುದನ್ನು ತಪ್ಪಿಸಿ.
- Akshay Pallamajalu
- Updated on: Feb 26, 2026
- 6:38 am
ಕರ್ನಾಟಕ ಹವಾಮಾನ ವರದಿ: ರಾಜ್ಯದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ
Karnataka Weather: ಕರ್ನಾಟಕದಲ್ಲಿ ಫೆಬ್ರವರಿ 26, 2026 ರಂದು ಮುಖ್ಯವಾಗಿ ಶುಷ್ಕ ಹವಾಮಾನವಿದ್ದು, ಉತ್ತರ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಹಗುರ ಮಳೆಯ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ರಾಜ್ಯಾದ್ಯಂತ ತಾಪಮಾನ ಏರಿಕೆಯಾಗಲಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಬಿಸಿಲಿನ ತೀವ್ರತೆ ಹೆಚ್ಚಿರಲಿದೆ. ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ.
- Akshay Pallamajalu
- Updated on: Feb 26, 2026
- 6:28 am
ಹಣ್ಣುಗಳಿಗೆ ಇಲಿ ಪಾಷಾಣ ಸವರುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಾಪಾರಿ
ಮುಂಬೈನ ಮಾಲಾಡ್ನಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರು ಹಣ್ಣುಗಳಿಗೆ 'ರಾಟೋಲ್' ಇಲಿ ಪಾಷಾಣ ಹಚ್ಚುತ್ತಿದ್ದುದು ವೈರಲ್ ಆಗಿದೆ. ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಲಿಗಳಿಂದ ಹಣ್ಣುಗಳನ್ನು ರಕ್ಷಿಸಲು ಹೀಗೆ ಮಾಡುತ್ತಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಮನುಷ್ಯರು ಸೇವಿಸುವ ಹಣ್ಣುಗಳಿಗೆ ವಿಷಕಾರಿ ವಸ್ತುಗಳನ್ನು ಬಳಸುವುದು ಕ್ರಿಮಿನಲ್ ಅಪರಾಧವಾಗಿದ್ದು, ಇದು ಆಹಾರ ಸುರಕ್ಷತೆಗೆ ಗಂಭೀರ ಬೆದರಿಕೆಯಾಗಿದೆ.
- Akshay Pallamajalu
- Updated on: Feb 25, 2026
- 5:09 pm
ಚೀತಾಗಳು ಮನುಷ್ಯರ ಮೇಲೆ ದಾಳಿ ಮಾಡಿದ ಇತಿಹಾಸವೇ ಇಲ್ಲ: ಯಾಕೆ ಗೊತ್ತಾ?
ಚೀತಾಗಳು ಮನುಷ್ಯರ ಮೇಲೆ ದಾಳಿ ಮಾಡುವುದು ಅತ್ಯಂತ ಅಪರೂಪ. ಅವುಗಳ ದವಡೆಗಳು ಚಿಕ್ಕದಾಗಿ, ಹಲ್ಲುಗಳು ಮತ್ತು ನಖಗಳು ಬಲವಾಗಿರುವುದಿಲ್ಲ. ಚೀತಾಗಳು ಸಾಮಾನ್ಯವಾಗಿ ತಮ್ಮ ಗಾತ್ರಕ್ಕಿಂತ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಮನುಷ್ಯರನ್ನು ದೊಡ್ಡ ಹಾಗೂ ಅಪಾಯಕಾರಿ ಎಂದು ಭಾವಿಸುತ್ತವೆ. ನಾಚಿಕೆ ಸ್ವಭಾವ, ಗಾಯದ ಭೀತಿ ಮತ್ತು ಮನುಷ್ಯರೊಂದಿಗಿನ ಸುದೀರ್ಘ ಸಂಬಂಧವೂ ದಾಳಿ ಮಾಡದಿರಲು ಕಾರಣ.
- Akshay Pallamajalu
- Updated on: Feb 25, 2026
- 4:22 pm
ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ಡಬಲ್ ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ
ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ, ನೈಋತ್ಯ ರೈಲ್ವೆ ಯಶವಂತಪುರದಿಂದ ತಾಳಗುಪ್ಪಕ್ಕೆ ವಿಶೇಷ ರೈಲು ಸೇವೆಗಳನ್ನು ಪ್ರಕಟಿಸಿದೆ. ಫೆಬ್ರವರಿ 27ರಿಂದ ಪ್ರಾರಂಭವಾಗುವ ಈ ರೈಲುಗಳು ಭಕ್ತರಿಗೆ ಅನುಕೂಲಕರ ಪ್ರಯಾಣ ಒದಗಿಸುತ್ತವೆ. ರೈಲು ಸಂಖ್ಯೆಗಳು, ಹೊರಡುವ ಮತ್ತು ತಲುಪುವ ಸಮಯಗಳು, ಬೋಗಿಗಳ ವಿವರಗಳನ್ನು ನೀಡಲಾಗಿದೆ. ಮಾರ್ಚ್ 1ರಿಂದ ವಿಸ್ತರಿತ ಸೇವೆಗಳೂ ಇವೆ. ಜನಸಂದಣಿಯಿಂದಾಗಿ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಸಲಹೆ ನೀಡಲಾಗಿದೆ.
- Akshay Pallamajalu
- Updated on: Feb 25, 2026
- 3:05 pm
ಅಪ್ರಾಪ್ತನೆಂದು ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ ಕಳ್ಳ: 18 ವರ್ಷ ತುಂಬುತ್ತಿದ್ದಂತೆ ಕೇಕ್ ಕಟ್ ಮಾಡಿ ಜೈಲಿಗೆ ಕಳುಹಿಸಿದ ಪೊಲೀಸರು
ಬ್ರೆಜಿಲ್ನ ರಿಯೊ ಗ್ರಾಂಡೆ ದೊ ನಾರ್ಟೆಯಲ್ಲಿ, ಪೊಲೀಸರು ಕಾರು ಬಿಡಿಭಾಗ ಕಳ್ಳ ಪೌಲೊ ರೋಡ್ರಿಗೋ ದಾಸ್ ನೆವೆಸ್ನ 18ನೇ ಹುಟ್ಟುಹಬ್ಬಕ್ಕಾಗಿ ಕಾದರು. ಆತ ವಯಸ್ಕನಾಗುತ್ತಿದ್ದಂತೆ ಬಂಧಿಸಿ, ಪೊಲೀಸ್ ಠಾಣೆಯಲ್ಲಿ ಕೇಕ್ ಕತ್ತರಿಸಿ, "ಹ್ಯಾಪಿ ಬರ್ತ್ಡೇ" ಹಾಡಿ ವಿಚಿತ್ರವಾಗಿ ಆಚರಿಸಿದರು. ಬಳಿಕ ಆತನನ್ನು ಜೈಲಿಗೆ ಕಳುಹಿಸಿದರು. ಬ್ರೆಜಿಲ್ ಕಾನೂನಿನ ಅಡಿ ಅಪ್ರಾಪ್ತರ ಬಂಧನಕ್ಕಿದ್ದ ಮಿತಿಯನ್ನು ಇದು ಎತ್ತಿ ತೋರಿಸುತ್ತದೆ.
- Akshay Pallamajalu
- Updated on: Feb 25, 2026
- 1:21 pm
ಶಾಲೆಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದಕ್ಕೆ ದಂಡ? ಹಿಂದೂ ಸಂಘಟನೆ ಮಾಡಿದ್ದೇನು ನೋಡಿ?
ಕಚ್ನ ಮುದ್ರಾ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹನುಮಾನ್ ಚಾಲೀಸಾ ಪಠಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಶಾಲಾ ನಿಯಮ ಉಲ್ಲಂಘನೆ ಎಂದು ದಂಡ ವಿಧಿಸಿದ (ಶಾಲೆಯ ಪ್ರಕಾರ ಎಚ್ಚರಿಕೆ) ಕಾರಣ ಪೋಷಕರು ಮತ್ತು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆದಿದೆ. ಶಾಲಾ ಆಡಳಿತವು ಧಾರ್ಮಿಕ ಪುಸ್ತಕಗಳನ್ನು ತರುವುದು ನಿಯಮಬಾಹಿರ ಎಂದಿದ್ದು, ಈ ಘಟನೆ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
- Akshay Pallamajalu
- Updated on: Feb 25, 2026
- 12:16 pm
ಜಪಾನ್ನಲ್ಲಿರುವ ಬೆಂಗಳೂರಿನ ಟೆಕ್ಕಿಗಳಿಗೆ ತಿಂಗಳಿಗೆ 17 ಲಕ್ಷ ರೂ. ಸಂಬಳ: ಸರ್ಕಾರಕ್ಕೆ 3 ಲಕ್ಷ ರೂ. ತೆರಿಗೆ ನೀಡಬೇಕು
ಯೂಟ್ಯೂಬರ್ ಡೋಲೇಶ್ ಜಪಾನ್ನಲ್ಲಿನ ಭಾರತೀಯ ಸಾಫ್ಟ್ವೇರ್ ಎಂಜಿನಿಯರ್ಗಳ ಸಂಬಳ ಮತ್ತು ಬೆಂಗಳೂರಿನ ಟೆಕ್ಕಿಗಳ ಆದಾಯವನ್ನು ಹೋಲಿಸುವ ವಿಡಿಯೋ ವೈರಲ್ ಆಗಿದೆ. ಜಪಾನ್ನಲ್ಲಿ ಹೆಚ್ಚಿನ ತೆರಿಗೆ ಮತ್ತು ಜೀವನ ವೆಚ್ಚದ ನಂತರ ಕೈಗೆ ಸಿಗುವ ಹಣ ಬೆಂಗಳೂರಿಗಿಂತ ಹೆಚ್ಚಲ್ಲ ಎಂಬ ಚರ್ಚೆ ಹುಟ್ಟಿಕೊಂಡಿದೆ. ಜಪಾನ್ನ ಕಠಿಣ ಕೆಲಸದ ಸಂಸ್ಕೃತಿ ಮತ್ತು ಜೀವನಶೈಲಿ ಎಲ್ಲರಿಗೂ ಒಗ್ಗುವುದಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
- Akshay Pallamajalu
- Updated on: Feb 25, 2026
- 11:18 am
‘ನೀವು ಮತ್ತು ಆ ಹುಡುಗಿ ಬೇರೆ ಬೇರೆ ಮಲಗಿ’: ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ ಬಸ್ ಕಂಡಕ್ಟರ್
ಬೆಂಗಳೂರಿನಲ್ಲಿ ಖಾಸಗಿ ಸ್ಲೀಪರ್ ಬಸ್ನಲ್ಲಿ ಯುವ ದಂಪತಿಗೆ ನೈತಿಕ ಪೊಲೀಸ್ಗಿರಿ ಕಿರಿಕಿರಿ ಅನುಭವವಾಗಿದೆ. ಮೂರು ಬರ್ತ್ ಬುಕ್ ಮಾಡಿದ್ದರೂ, ಕಂಡಕ್ಟರ್ ಅವರನ್ನು ಪ್ರತ್ಯೇಕವಾಗಿ ಕೂರಿಸಲು ಒತ್ತಾಯಿಸಿದ್ದಾರೆ. ಇದು ಪ್ರಯಾಣಿಕರ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇಂತಹ ಘಟನೆಗಳ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಕೆಎಸ್ಆರ್ಟಿಸಿ ಬಸ್ಗಳು ಸುರಕ್ಷಿತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
- Akshay Pallamajalu
- Updated on: Feb 25, 2026
- 10:06 am