ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ಪ್ರಸ್ತುತ ನಾನು ಟಿವಿ9 ಕನ್ನಡ ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.
ದಾವಣಗೆರೆ ದಂಗಲ್: ಸಿಎಂ ಆಪ್ತ ನಸೀರ್ ತಲೆದಂಡ, ಸಚಿವ ಜಮೀರ್ಗೂ ತೂಗುತ್ತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ದಾವಣಗೆರೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸಚಿವ ಜಮೀರ್ ಅಹಮದ್, ಮುಖ್ಯಮಂತ್ರಿಗಳ ಸೂಚನೆಯಂತೆ ನಸೀರ್ ಬಾಗಲಕೋಟೆಯಲ್ಲಿ ಕಾರ್ಯ ನಿರ್ವಹಿಸಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.
- Akshay Pallamajalu
- Updated on: Apr 14, 2026
- 12:18 pm
ಅರ್ಧ ಗಂಟೆಯಲ್ಲಿ ಮನೆಗೆ ಬಾ..: ಸಚಿವ ಜಮೀರ್ಗೆ ಸಿಎಂ ಸಿದ್ದರಾಮಯ್ಯ ಬುಲಾವ್
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ನಂತರ ಕಾಂಗ್ರೆಸ್ನಲ್ಲಿ ಭುಗಿಲೆದ್ದ ಭಿನ್ನಮತದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಜಮೀರ್ ಅಹಮದ್ ಖಾನ್ಗೆ ತುರ್ತು ಬುಲಾವ್ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಅಬ್ದುಲ್ ಜಬ್ಬಾರ್ ರಾಜೀನಾಮೆ, ನಜೀರ್ ಅಹಮದ್ ಹುದ್ದೆಯಿಂದ ಬಿಡುಗಡೆಯಾದ ನಂತರ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಸಿಎಂ ನಿವಾಸ ಕಾವೇರಿಯಲ್ಲಿ ಚರ್ಚೆ ನಡೆಯಲಿದೆ.
- Akshay Pallamajalu
- Updated on: Apr 14, 2026
- 11:10 am
ಬೆಂಗಳೂರಲ್ಲಿ ಮಾಲಿನ್ಯದ ಭೀತಿ, ಕರಾವಳಿಯಲ್ಲಿ ಶುದ್ಧ ಗಾಳಿ! ಅಸ್ತಮಾ ರೋಗಿಗಳಿಗೆ ಎಚ್ಚರ
ಕರ್ನಾಟಕದ ಗಾಳಿಯ ಗುಣಮಟ್ಟ 'ತೃಪ್ತಿಕರ'ದಿಂದ 'ಸಾಧಾರಣ' ಮಟ್ಟದಲ್ಲಿದೆ. ಬೆಂಗಳೂರಿನಲ್ಲಿ ವಾಹನ ದಟ್ಟಣೆ ಮತ್ತು ಬಿಸಿಲಿನಿಂದ ಧೂಳಿನ ಪ್ರಮಾಣ ಏರಿದ್ದು, ಉಸಿರಾಟದ ಸಮಸ್ಯೆ ಇರುವವರು ಜಾಗ್ರತೆ ವಹಿಸಬೇಕು. ಕರಾವಳಿ ಭಾಗದಲ್ಲಿ ಶುದ್ಧ ಗಾಳಿ ಇದ್ದರೆ, ಕಲಬುರಗಿಯಲ್ಲಿ ಧೂಳು ಹೆಚ್ಚಿದೆ. ಮನೆಯಲ್ಲಿ ಕಿಟಕಿಗಳನ್ನು ಮುಚ್ಚಿ, ಸಂಜೆ ಮಾಸ್ಕ್ ಧರಿಸುವುದು ಉತ್ತಮ.
- Akshay Pallamajalu
- Updated on: Apr 14, 2026
- 8:50 am
33 ಕೋಟಿ ದೇವತೆಗಳಿದ್ದರೂ ಒಬ್ಬನೇ ದೇವರನ್ನು ಹೃದಯದಲ್ಲಿ ಪ್ರತಿಷ್ಠಾಪಿಸುವುದು ಯಾಕೆ ಮುಖ್ಯ?: ಇಲ್ಲಿದೆ ಅಸಲಿ ಕಾರಣ
ಸನಾತನ ಸಂಸ್ಕೃತಿಯಲ್ಲಿ ಅನೇಕ ದೇವರುಗಳಿದ್ದರೂ, ಏಕದೇವೋಪಾಸನೆಯು ಜೀವನಕ್ಕೆ ಸಾರ್ಥಕತೆಯನ್ನು ತರುತ್ತದೆ. ಒಬ್ಬ ದೇವರಲ್ಲಿ ಸ್ಥಿರ ಭಕ್ತಿ ಮತ್ತು ನಿರಂತರ ಸ್ಮರಣೆಯಿಂದ ಏಕಾಗ್ರತೆ, ನಂಬಿಕೆ ಹೆಚ್ಚಾಗಿ ಕಂಟಕಗಳು ನಿವಾರಣೆಯಾಗುತ್ತವೆ. ಒಂದೇ ದೋಣಿಯಲ್ಲಿ ಪಯಣಿಸಿದಂತೆ, ನಿರ್ದಿಷ್ಟ ದೇವರಿಗೆ ನಿಷ್ಠೆ ತೋರುವುದರಿಂದ ಆಧ್ಯಾತ್ಮಿಕ ಮುಕ್ತಿ ಸಾಧಿಸಲು ಸಾಧ್ಯ. ಇದು ಕರ್ಮಫಲಗಳನ್ನು ಕಡಿಮೆ ಮಾಡಿ ಶುಭ ಫಲಗಳನ್ನು ನೀಡುತ್ತದೆ.
- Akshay Pallamajalu
- Updated on: Apr 14, 2026
- 6:49 am
Daily Horoscope: ಸೂರ್ಯನ ಸಂಚಾರ ಬದಲಾವಣೆ; ಈ ರಾಶಿಯವರಿಗೆ ಸಿಗಲಿದೆ ಬಲವಾದ ಯಶಸ್ಸು!
ಖ್ಯಾತ ಜ್ಯೋತಿಷಿ ಡಾ ಬಸವರಾಜ ಗುರೂಜಿ ಅವರು 14 ಏಪ್ರಿಲ್ 2026 ರ ದೈನಂದಿನ ರಾಶಿಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನದ ಗ್ರಹಗಳ ಸ್ಥಾನ, ರಾಹುಕಾಲ ಮತ್ತು ಶುಭಕಾಲದ ವಿವರಗಳನ್ನು ನೀಡಿ, ಎಲ್ಲಾ ಹನ್ನೆರಡು ರಾಶಿಗಳಿಗೂ ಆರ್ಥಿಕ, ಆರೋಗ್ಯ, ವೃತ್ತಿ ಮತ್ತು ಸಂಬಂಧಗಳ ಕುರಿತು ನಿರ್ದಿಷ್ಟ ಭವಿಷ್ಯವಾಣಿಗಳನ್ನು ಹೇಳಿದ್ದಾರೆ. ಪ್ರತಿಯೊಂದು ರಾಶಿಚಕ್ರದವರಿಗೆ ಅದೃಷ್ಟದ ಬಣ್ಣ, ಸಂಖ್ಯೆ ಹಾಗೂ ಜಪಿಸಬೇಕಾದ ಮಂತ್ರಗಳನ್ನು ತಿಳಿಸಿದ್ದಾರೆ.
- Akshay Pallamajalu
- Updated on: Apr 14, 2026
- 6:30 am
ಬಿಸಿಲಿನ ತಾಪಕ್ಕೆ ಬೆಂದ ಕರುನಾಡು: ಈ ಜಿಲ್ಲೆಗಳಲ್ಲಿ ಸಂಜೆ ಮಳೆ ಸಂಭವ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು?
ಏಪ್ರಿಲ್ 14ರಂದು ಕರ್ನಾಟಕದಲ್ಲಿ ಬಿಸಿಲ ತಾಪ ತೀವ್ರವಾಗಲಿದೆ. ಬೆಂಗಳೂರಿನಲ್ಲಿ 35-37°C, ಕಲಬುರಗಿಯಲ್ಲಿ 40°C ಮೀರಿದ ಶಾಖ ಇರಲಿದೆ. ಕರಾವಳಿ ಭಾಗದಲ್ಲಿ ತೇವಾಂಶದಿಂದ ಸೆಖೆ ಹೆಚ್ಚಲಿದೆ. ಕೊಡಗು, ಚಾಮರಾಜನಗರ, ಮೈಸೂರು, ಬೆಳಗಾವಿ ಜಿಲ್ಲೆಗಳಲ್ಲಿ ಮಳೆ ನಿರೀಕ್ಷಿಸಲಾಗಿದೆ. ಮಧ್ಯಾಹ್ನ 12-4 ಗಂಟೆ ನಡುವೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ, ನೀರು, ಎಳನೀರು, ಮಜ್ಜಿಗೆ ಸೇವಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
- Akshay Pallamajalu
- Updated on: Apr 14, 2026
- 6:19 am
ಒಂದೇ ರಾಶಿಗೆ 4 ಕ್ರೂರ ಗ್ರಹಗಳ ಎಂಟ್ರಿ!: ಉದ್ಯೋಗ, ಹಣ ಕಳೆದುಕೊಳ್ಳವ ಸಾಧ್ಯತೆ, ಆದರೆ ಒಂದು ಸಮಾಧಾನ
ಮೀನ ರಾಶಿಯಲ್ಲಿ ಶನಿ, ಕುಜ, ರವಿ, ಬುಧ ಗ್ರಹಗಳ ಚತುರ್ಗ್ರಹಿ ಯುತಿ ಏಪ್ರಿಲ್ 11 ರಿಂದ 15 ರವರೆಗೆ ನಡೆಯಲಿದೆ. ಈ ಪ್ರಬಲ ಗ್ರಹಗಳ ಸಂಯೋಗವು ದ್ವಾದಶ ರಾಶಿಗಳ ಮೇಲೆ ಶುಭ, ಮಿಶ್ರ ಮತ್ತು ಅಶುಭ ಪರಿಣಾಮಗಳನ್ನು ಬೀರಲಿದೆ. ನಿಮ್ಮ ರಾಶಿಗಳಿಗೆ ಈ ಅಲ್ಪಾವಧಿಯ ಗ್ರಹ ಸಂಚಾರದಿಂದ ಉಂಟಾಗುವ ಆರ್ಥಿಕ, ವೃತ್ತಿ, ಕೌಟುಂಬಿಕ ಮತ್ತು ಆರೋಗ್ಯದ ಮೇಲಿನ ಪರಿಣಾಮಗಳನ್ನು ತಿಳಿಯಲು ಸಂಪೂರ್ಣ ರಾಶಿ ಭವಿಷ್ಯವನ್ನು ಓದಿ.
- Akshay Pallamajalu
- Updated on: Apr 13, 2026
- 5:07 pm
ಬೆಂಗಳೂರಿಗಾಗಿ ದಿನಕ್ಕೆ 100 ಕೋಟಿ ಖರ್ಚು!: ಇಷ್ಟೊಂದು ಖರ್ಚಾದರೂ ಸಮಸ್ಯೆಗಳೇಕೆ ತಪ್ಪುತ್ತಿಲ್ಲ? ಈ ಹಣ ಎಲ್ಲಿಗೆ ಹೋಗುತ್ತಿದೆ?
ಬೆಂಗಳೂರು ನಗರದ ಅಭಿವೃದ್ಧಿ ಮತ್ತು ನಿರ್ವಹಣೆಗೆ ಪ್ರತಿದಿನ ಸರಾಸರಿ 100 ಕೋಟಿ ರೂ.ಗೂ ಹೆಚ್ಚು ಹಣ ಖರ್ಚಾಗುತ್ತಿದೆ. ಆದರೂ ರಸ್ತೆ ಗುಂಡಿ, ಟ್ರಾಫಿಕ್, ನೀರಿನ ಸಮಸ್ಯೆಗಳು ಬಗೆಹರಿಯುತ್ತಿಲ್ಲ. 'ಜನಾಗ್ರಹ' ವರದಿ ಪ್ರಕಾರ, 2021-22ರಲ್ಲಿ ಒಟ್ಟು 38,455 ಕೋಟಿ ರೂ. ವೆಚ್ಚವಾಗಿದೆ. ಪಾರದರ್ಶಕತೆ, ಜವಾಬ್ದಾರಿ ಕೊರತೆ ಹಾಗೂ ಏಕೀಕೃತ ವ್ಯವಸ್ಥೆಯಿಲ್ಲದಿರುವುದೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
- Akshay Pallamajalu
- Updated on: Apr 13, 2026
- 4:53 pm
ಅಮ್ಮನಿಗೆ ಆಸರೆ ಆಗಿದ್ದ ಮಗಳು ವಿಧಿಯಾಟಕ್ಕೆ ಬಲಿ: ಪ್ರವಾಸಕ್ಕೆ ಹೋಗಿದ್ದಾಗ ಸುಳ್ಯದ ಯುವ ಇಂಜಿನಿಯರ್ ದುರಂತ ಅಂತ್ಯ
ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಕ್ಷಿಪ್ರಾ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸುಳ್ಯ ಮೂಲದ 27 ವರ್ಷದ ಕ್ಷಿಪ್ರಾ, ವಾರಾಂತ್ಯದ ಪ್ರವಾಸಕ್ಕೆ ಸಹೋದ್ಯೋಗಿಗಳೊಂದಿಗೆ ತೆರಳಿದ್ದಾಗ ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ. ತಂದೆಯನ್ನು ಕಳೆದುಕೊಂಡಿದ್ದ ಕ್ಷಿಪ್ರಾ, ತಾಯಿಗೆ ಏಕೈಕ ಆಧಾರವಾಗಿದ್ದರು. ಈ ಘಟನೆಯಿಂದ ಸುಳ್ಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
- Akshay Pallamajalu
- Updated on: Apr 13, 2026
- 3:14 pm
ಯಮ ಪಾಶದಂತೆ ಹಾರಿ ಬಂದ ಓಮ್ನಿ: ಪಾದಚಾರಿಗಳ ಮೇಲೆ ಎರಗಿದ ಭಯಾನಕ ದೃಶ್ಯ
ಬೆಳ್ತಂಗಡಿಯ ಕೊಡಬೈಲಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅತಿ ವೇಗದ ಓಮ್ನಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ, ರಸ್ತೆ ಬದಿಯ ಪಾದಚಾರಿಗಳ ಮೇಲೆ ಉರುಳಿದೆ. ಓರ್ವ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಇಬ್ಬರು ಮಕ್ಕಳು ಸೇರಿ ಇತರರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
- Akshay Pallamajalu
- Updated on: Apr 13, 2026
- 2:43 pm
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ: 55% ಬಂದರೂ ಮಗನನ್ನು ಅಪ್ಪಿ ಮುದ್ದಾಡಿದ ತಾಯಿ!
ಪರೀಕ್ಷೆಯಲ್ಲಿ 55% ಅಂಕ ಗಳಿಸಿದ ಮಗನನ್ನು ಆನಂದದಿಂದ ಅಪ್ಪಿದ ತಾಯಿಯ ವಿಡಿಯೋ ವೈರಲ್ ಆಗಿದೆ. ಅಂಕಗಳಿಗಾಗಿ ಮಕ್ಕಳನ್ನು ಹಂಗಿಸುವ ಪೋಷಕರ ನಡುವೆ, ಈ ತಾಯಿ ತನ್ನ ಮಗ ಪಾಸಾಗಿದ್ದಕ್ಕೆ ತೋರಿದ ಅಪಾರ ಪ್ರೀತಿ ಕೋಟ್ಯಂತರ ಜನರ ಮನ ಗೆದ್ದಿದೆ. ಇದು ಅಂಕಗಳ ಒತ್ತಡಕ್ಕಿಂತ ಮಕ್ಕಳ ಭಾವನಾತ್ಮಕ ಬೆಂಬಲ ಮತ್ತು ಪ್ರೀತಿ ಮುಖ್ಯ ಎಂಬುದನ್ನು ಸಾರುತ್ತದೆ, ಇಂದಿನ ಶೈಕ್ಷಣಿಕ ವ್ಯವಸ್ಥೆಗೆ ಕನ್ನಡಿ ಹಿಡಿದಿದೆ.
- Akshay Pallamajalu
- Updated on: Apr 13, 2026
- 12:53 pm
ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ.ಗೆ ಮೆಟ್ರೋ ನಿಲ್ದಾಣಕ್ಕೆ ಹೋಗಬಹುದು!: ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಮಾಹಿತಿ
ಬಿಎಂಟಿಸಿ ಬೆಂಗಳೂರಿನ ಹಳದಿ ಮಾರ್ಗ ಮೆಟ್ರೋ ನಿಲ್ದಾಣಗಳಿಗೆ ಹೊಸ ಫೀಡರ್ ಬಸ್ ಸೇವೆಗಳನ್ನು (MF-22E, MF-22EA) ಆರಂಭಿಸಿದೆ. ಕೇವಲ 6 ರೂ. ಶುಲ್ಕದಿಂದ ಪ್ರಾರಂಭವಾಗುವ ಈ ಬಸ್ಸುಗಳು ಹರಲೂರು, ಕಸವನಹಳ್ಳಿ ಪ್ರದೇಶಗಳ ನಿವಾಸಿಗಳಿಗೆ ಮೆಟ್ರೋ ತಲುಪಲು ನೆರವಾಗಲಿವೆ. ಸಾರ್ವಜನಿಕ ಸಾರಿಗೆಯ ಕೊರತೆಯಿದ್ದ ದಟ್ಟಣೆಯ ಪ್ರದೇಶಗಳಲ್ಲಿ ಸ್ವಂತ ವಾಹನಗಳ ಅವಲಂಬನೆ ತಪ್ಪಿಸಿ, ಸುಗಮ ಪ್ರಯಾಣಕ್ಕೆ ಅನುಕೂಲ ಕಲ್ಪಿಸುತ್ತವೆ. ಪ್ರಯಾಣಿಕರ ಬೇಡಿಕೆ ಹೆಚ್ಚಾದಂತೆ ಬಸ್ಗಳ ಸಂಖ್ಯೆ ಹೆಚ್ಚಿಸುವ ಭರವಸೆ ನೀಡಲಾಗಿದೆ.
- Akshay Pallamajalu
- Updated on: Apr 13, 2026
- 12:11 pm