ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ಪ್ರಸ್ತುತ ನಾನು ಟಿವಿ9 ಕನ್ನಡ ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.
ಬೇಸಿಗೆಯಲ್ಲಿ ಕೋಕಮ್ ಜ್ಯೂಸ್ ಕುಡಿಯುವುದರ ಪ್ರಯೋಜನ
ಬೇಸಿಗೆಯಲ್ಲಿ ಕೋಕಮ್ ಜ್ಯೂಸ್ ಕುಡಿಯುವುದರ ಪ್ರಯೋಜನ ಇಲ್ಲಿದೆ. ಕೋಕಮ್ ಜ್ಯೂಸ್ ನೈಸರ್ಗಿಕ ಪಾನೀಯವಾಗಿದ್ದು, ರಕ್ತದಲ್ಲಿ ಖನಿಜಾಂಶಗಳನ್ನು ಹೆಚ್ಚಿಸುತ್ತದೆ ಮತ್ತು ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.
- Akshay Pallamajalu
- Updated on: Apr 9, 2025
- 1:46 pm
Waqf Bill: ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಮುಂದಾದ ಕಾಂಗ್ರೆಸ್
ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀರಿಸಿದ ನಂತರ ಈ ಬಗ್ಗೆ ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಕೂಡ ವಿರೋಧಿಸಿತ್ತು. ಇದೀಗ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ಸಮರ ಸರಿದೆ. ಇದೀಗ ಕಾಂಗ್ರೆಸ್ ಈ ಮಸೂದೆಯನ್ನು ವಿರೋಧಿಸಿದ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದೆ. ಈ ಬಗ್ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
- Akshay Pallamajalu
- Updated on: Apr 5, 2025
- 10:24 am
WITT Summit 2025: ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ, ಆದರೆ ಅದನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ: ಅನಿಲ್ ಅಗರ್ವಾಲ್
ದೇಶದಲ್ಲಿ ಸಾಕಷ್ಟು ತೈಲ, ಅನಿಲ ಮತ್ತು ಚಿನ್ನದ ನಿಕ್ಷೇಪಗಳಿವೆ, ಅವುಗಳನ್ನು ಪತ್ತೆಹಚ್ಚಿ ಕೊರೆಯಬೇಕಾಗಿದೆ ಎಂದು ಹೇಳಿದರು. ಗಣಿಗಾರಿಕೆ ಭಾರತದಲ್ಲಿ ಪ್ರಾರಂಭವಾದರೆ, ತೈಲ, ಅನಿಲ ಮತ್ತು ಚಿನ್ನಕ್ಕಾಗಿ ನಾವು ಇತರರನ್ನು ಅವಲಂಬಿಸಬೇಕಾಗಿಲ್ಲ. ಅದಕ್ಕಾಗಿ ನಾವು ಮೊದಲು ಅದನ್ನು ಸರಿಯಾಗಿ ಉಪಯೋಗಿಸಬೇಕು ಎಂದು ವೇದಾಂತ ರಿಸೋರ್ಸಸ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಹೇಳಿದ್ದಾರೆ.
- Akshay Pallamajalu
- Updated on: Mar 29, 2025
- 5:37 pm
WITT Summit 2025: ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು: ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್
ಟಿವಿ9 ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾರ್ಯಕ್ರಮದಲ್ಲಿ ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್, ಭಾರತದ ಪರವಾಗಿ ಮಾತನಾಡಿದ್ದಾರೆ. ಭಾರತ ಶಾಂತಿ ದಾರಿಯಲ್ಲಿದೆ ವಿಶ್ವಸಂಸ್ಥೆ ರಚನೆಯಾದಾಗಲೂ ಭಾರತ ಯಾವುದೇ ಗುಂಪಿನಲ್ಲಿ ಇರಲಿಲ್ಲ. ಭಾರತವು ಒಂದು ದೊಡ್ಡ ಭೂಪ್ರದೇಶವಾಗಿದೆ, ಆದರೆ ಇದರ ಹೊರತಾಗಿಯೂ ಅದನ್ನು ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ ಎಂದು ಗುರುತಿಸಲಾಗುತ್ತಿಲ್ಲ ಎಂದು ಹೇಳಿದರು. ಭಾರತಕ್ಕೆ ಶಾಶ್ವತ ಸದಸ್ಯತ್ವ ಬೇಕು ಎಂದು ಹೇಳಿದರು.
- Akshay Pallamajalu
- Updated on: Mar 29, 2025
- 5:32 pm
ಛತ್ತೀಸ್ಗಢ: ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ, 16 ನಕ್ಸಲರ ಹತ್ಯೆ
ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಈ ಗುಂಡಿ ಘರ್ಷಣೆಯಲ್ಲಿ 16 ಜನ ನಕ್ಸಲರು ಸಾವನ್ನಪ್ಪಿದ್ದಾರೆ. ಇದು ದೊಡ್ಡ ಕಾರ್ಯಚರಣೆಯಾಗಿದೆ. ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಈ ಕಾರ್ಯಚರಣೆಯಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಭಾಗಿಯಾಗಿದ್ದಾರೆ.
- Akshay Pallamajalu
- Updated on: Mar 29, 2025
- 10:46 am
ಭಾರತ ಉತ್ತಮ ಪ್ರಧಾನಿಯನ್ನು ಪಡೆದಿದೆ, ಮೋದಿ ತುಂಬಾ ಬುದ್ಧಿವಂತ ವ್ಯಕ್ತಿ, ಮತ್ತೊಮ್ಮೆ ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್
ಭಾರತದ ಒಳ್ಳೆಯ ಪ್ರಧಾನಿಯನ್ನು ಹೊಂದಿದೆ, ಪ್ರಧಾನಿ ಮೋದಿ ಒಬ್ಬ ಬುದ್ಧಿವಂತ ವ್ಯಕ್ತಿ ಎಂದು ಅಮೆರಿಕದ ಅಧ್ಯಕ್ಷ ಹಾಡಿ ಹೊಗಳಿದ್ದಾರೆ. ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿದ್ದೇವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ತುಂಬಾ ಬುದ್ಧಿವಂತರು ಎಂದೆಲ್ಲ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡಿದಾಗ ನಾವು ತುಂಬಾ ಒಳ್ಳೆಯ ಮಾತುಕತೆ ನಡೆಸಿದ್ದೇವೆ. ಭಾರತ ಮತ್ತು ನಮ್ಮ ದೇಶದ ನಡುವೆ ಇದು ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
- Akshay Pallamajalu
- Updated on: Mar 29, 2025
- 10:17 am
ಮ್ಯಾನ್ಮಾರ್ನಲ್ಲಿ ಮತ್ತೆ ಭೂಕಂಪನ, ಒಟ್ಟು 700ಕ್ಕೂ ಹೆಚ್ಚು ಜನ ಸಾವು, 1,670 ಜನರಿಗೆ ಗಾಯ
ಮತ್ತೆ ಮ್ಯಾನ್ಮಾರ್ನಲ್ಲಿ ಭೂಕಂಪ ಸಂಭವಿಸಿದೆ. ಮಧ್ಯ ರಾತ್ರಿ ಮತ್ತೆ ಭೂಕಂಪ ಸಂಭವಿಸಿದೆ. ಇದೀಗ ಒಟ್ಟು ಸಾವಿನ ಸಂಖ್ಯೆ 700ಕ್ಕೆ ದಾಟಿದೆ. 1,670 ಜನರು ಗಾಯಗೊಂಡಿದ್ದಾರೆ. ರಾಜಧಾನಿ ನೇಪಿಡಾವ್ನಲ್ಲಿರುವ ಆಸ್ಪತ್ರೆಯಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಹೆಚ್ಚಿನ ಜನ ಪ್ರಾಣ ಕಳೆದುಕೊಳ್ಳವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಂಗಾಳದ ಕೋಲ್ಕತ್ತಾ ಮತ್ತು ಮಣಿಪುರದ ಕೆಲವು ಭಾಗಗಳಲ್ಲಿ ಹಾಗೂ ಬಾಂಗ್ಲಾದೇಶದ ಢಾಕಾ ಮತ್ತು ಚಟ್ಟೋಗ್ರಾಮ್ನಲ್ಲಿಯೂ ಸಹ ಸೌಮ್ಯ ಕಂಪನಗಳು ವರದಿಯಾಗಿವೆ
- Akshay Pallamajalu
- Updated on: Mar 29, 2025
- 9:41 am
ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮರಳಿ ಕರೆತರಲು ಸ್ಪೇಸ್ಎಕ್ಸ್, ನಾಸಾ ಕಾರ್ಯಾಚರಣೆ
ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆದುಕೊಂಡು ಬರಲು ನಾಸಾ ಮತ್ತು ಸ್ಪೇಸ್ಎಕ್ಸ್ ಶುಕ್ರವಾರ ಬಹುನಿರೀಕ್ಷಿತ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಈಗಾಗಲೇ ಈ ಕಾರ್ಯಚರಣೆಯನ್ನು ಆರಂಭಿಸಿದ್ದು ಅವರನ್ನು ತಲುಪು ಪ್ರಯತ್ನವನ್ನು ಮಾಡಿದೆ. ಒಂದು ವೇಳೆ ಅವರನ್ನು ಯಶಸ್ವಿಯಾಗಿ ತಲುಪಿದರೆ, ಮಾರ್ಚ್ 20ರಂದು ಭೂಮಿಗೆ ಬರಲಿದ್ದಾರೆ ಎಂದು ಹೇಳಲಾಗಿದೆ.
- Akshay Pallamajalu
- Updated on: Mar 15, 2025
- 11:33 am
ನನ್ನ ಎದುರಾಳಿಗಳನ್ನು ಜೈಲಿಗೆ ಹಾಕುವೇ, ನ್ಯಾಯಂಗ ಇಲಾಖೆ ಭಾಷಣದಲ್ಲಿ ಅಬ್ಬರಿಸಿ ಬೊಬ್ಬರಿದ ಟ್ರಂಪ್
ನಮ್ಮ ಸರ್ಕಾರದಿಂದ ರಾಕ್ಷಸ ಗುಣ ಇರುವ ಹಾಗೂ ಭ್ರಷ್ಟ ಶಕ್ತಿಗಳನ್ನು ನಾವು ಹೊರಹಾಕುತ್ತೇವೆ. ಅವರ ಘೋರ ಅಪರಾಧಗಳು ಮತ್ತು ದುಷ್ಕೃತ್ಯವನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದರು. 2021ರಲ್ಲಿ ಅಫ್ಘಾನಿಸ್ತಾನದಿಂದ ಯುನೈಟೆಡ್ ಸ್ಟೇಟ್ಸ್ ಮಿಲಿಟರಿಯನ್ನು ತೆಗೆಯುವ ಮೂಲಕ ತಾಲಿಬಾನ್ಗಳಿಗೆ ಅವಕಾಶ ಮಾಡಿಕೊಟ್ಟು, ಜಗತ್ತಿನ ಮುಂದೆ ನಮ್ಮ ದೇಶಕ್ಕೆ ಅವಮಾನ ಮಾಡಿದ್ದಾರೆ. ತಮ್ಮ ಎದುರಾಳಿಗಳನ್ನು ಜೈಲಿಗೆ ಹಾಕಲು ಮುಂದಾಗಿದ್ದಾರೆ ಟ್ರಂಪ್.
- Akshay Pallamajalu
- Updated on: Mar 15, 2025
- 9:38 am
ಇದು ವಿಶ್ವದ ಅತೀ ಎತ್ತರದ ಎಮ್ಮೆ, ಗಿನ್ನಿಸ್ ದಾಖಲೆ
ವಿಶ್ವದ ಅತೀ ಎತ್ತರದ ನೀರು ಎಮ್ಮೆ ಎನ್ನುವ ಖ್ಯಾತಿಗೆ ಥೈಲ್ಯಾಂಡಿನ ನಿನ್ಲಾನಿ ಫಾರ್ಮ್ ನಲ್ಲಿರುವ ಕಿಂಗ್ ಕಾಂಗ್ ಎಮ್ಮೆ ಪಾತ್ರವಾಗಿದೆ.
- Akshay Pallamajalu
- Updated on: Mar 5, 2025
- 5:43 pm
ತಿರುಪತಿ ಲಡ್ಡುವಿನ ಕಲಬೆರಕೆ ಆಗಿದೆ ಎಂಬುದಕ್ಕೆ ಸಾಕ್ಷಿ ನೀಡಿದ ಎಸ್ಐಟಿ! ನಾಲ್ವರ ಬಂಧನ
ಭಾರಿ ವಿವಾದವನ್ನು ಸೃಷ್ಟಿಸಿದ ತಿರಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ಆರೋಪಕ್ಕೆ ಬಲವಾದ ಸಾಕ್ಷಿಯನ್ನು ಎಸ್ಐಟಿ ನೀಡಿದೆ. ಇದರ ಇದರ ಜತೆಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬದರ ಬಗ್ಗೆ ಸಿಬಿಐ ತನಿಖೆಯನ್ನು ನಡೆಸಿ ವರದಿಯನ್ನು ನೀಡಿದೆ. ಇದೀಗ ಮೂರು ಡೈರಿಗಳ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದರಲ್ಲಿ ಅಕ್ರಮ ದಾಖಲೆಗಳನ್ನು ನೀಡಿ ಟಿಟಿಡಿಗೆ ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಎಸ್ಐಟಿ ಹಾಗೂ ಸಿಬಿಐ ಅಧಿಕಾರಿಗಳು ನೀಡಿದ ಸಾಕ್ಷಿಗಳೇನು. ತನಿಖಾ ವರದಿಯಲ್ಲಿ ಏನಿದೆ? ಈ ಬಗ್ಗೆ ಇಲ್ಲಿದೆ ನೋಡಿ.
- Akshay Pallamajalu
- Updated on: Feb 10, 2025
- 12:25 pm
Davos WEF 2025: ಭಾರತವು ದಾವೋಸ್ WEF ಸಭೆಯಲ್ಲಿ ಜಾಗತಿಕ ಮಟ್ಟದಲ್ಲಿ 20 ಟ್ರಿಲಿಯನ್ ಹೂಡಿಕೆ ಬದ್ಧತೆ
ವರ್ಲ್ಡ್ ಎಕನಾಮಿಕ್ ಫೋರಮ್ ವಾರ್ಷಿಕ ಸಭೆಯಲ್ಲಿ ಭಾರತವು 20 ಟ್ರಿಲಿಯನ್ ಹೂಡಿಕೆ ಬದ್ಧತೆಯನ್ನು ಹೊಂದಿದೆ. ಮಹಾರಾಷ್ಟ್ರವು ಸುಮಾರು 20 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಸಭೆಯಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರು ಐದು ಕೇಂದ್ರ ಸಚಿವರು ಮತ್ತು ಮೂವರು ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯಗಳ ಹಲವಾರು ನಾಯಕರ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು.
- Akshay Pallamajalu
- Updated on: Jan 25, 2025
- 2:52 pm