ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ಪ್ರಸ್ತುತ ನಾನು ಟಿವಿ9 ಕನ್ನಡ ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.
ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ ಪಾಕ್ನಲ್ಲಿ ಇಲ್ಲ, ಅಫ್ಘಾನಿಸ್ತಾನದಲ್ಲಿರಬಹುದು: ಬಿಲಾವಲ್ ಭುಟ್ಟೋ
ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲಿ ಇದ್ದಾನೆ ಎಂದು ಭಾರತ ಹೇಳಿತ್ತು. ಆದರೆ ಪಾಕಿಸ್ತಾನ ಇದನ್ನು ಒಪ್ಪುತ್ತಿಲ್ಲ. ಮಸೂದ್ ಅಜರ್ ಪಾಕಿಸ್ತಾನದಲ್ಲಿ ಇಲ್ಲ, ಇದಿದ್ದರೆ ಅವನನ್ನು ನಾವೇ ಬಂಧಿಸುತ್ತಿದ್ದೇವು. ಆತ ಅಫ್ಘಾನಿಸ್ತಾನದಲ್ಲಿರಬಹುದು ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.
- Akshay Pallamajalu
- Updated on: Jul 5, 2025
- 10:19 am
ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಮೇಲೆ ಗುಂಡಿನ ದಾಳಿ, ಖ್ಯಾತ ಉದ್ಯಮಿ ಸ್ಥಳದಲ್ಲೇ ಸಾವು
ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ನೆನ್ನೆ ರಾತ್ರಿ 11.00 ಗಂಟೆ ಸರಿಸುಮಾರಿಗೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ಗುಂಡಿನ ದಾಳಿಯನ್ನು ನಡೆಸಿದೆ. ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ 'ಪನಾಚೆ' ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಖೇಮ್ಕಾ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ನಗರ ಕೇಂದ್ರ ಎಸ್ಪಿ ದೀಕ್ಷಾ ಹೇಳಿದ್ದಾರೆ.
- Akshay Pallamajalu
- Updated on: Jul 5, 2025
- 9:33 am
ಗುರು ಪೂರ್ಣಿಮಾ 2025: ಗುರು ದೋಷ ಪರಿಹಾರಕ್ಕಾಗಿ ಹಾಗೂ ಗುರು ಬಲ ಪಡೆಯಲು ಗುರು ಕೃಪೆಗೆ ಪಾತ್ರರಾಗಲು ಸುಲಭ ಮಾರ್ಗಗಳು
ಗುರು ಪೂರ್ಣಿಮೆ ಕೇವಲ ಒಂದು ಆಚರಣೆಯಲ್ಲ, ಅದು ಗುರುಗಳ ಮೇಲಿನ ಭಕ್ತಿ, ಶ್ರದ್ಧೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಅವಕಾಶ. ಈ ದಿನದಂದು ನೀವು ಮಾಡುವ ಸಣ್ಣ ಪ್ರಯತ್ನವೂ ನಿಮ್ಮ ಜೀವನದಲ್ಲಿ ದೊಡ್ಡ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಗುರುಗಳ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಜ್ಞಾನ ವೃದ್ಧಿಸಲಿ ಎಂದು ಹಾರೈಸೋಣ.
- Akshay Pallamajalu
- Updated on: Jul 2, 2025
- 5:58 pm
Video: ವಿಮಾನ ಅಪಘಾತದ ನಂತರ ಕಚೇರಿಯಲ್ಲಿ ಪಾರ್ಟಿ ಮಾಡಿದ ಏರ್ ಇಂಡಿಯಾ ಸಿಬ್ಬಂದಿ, 4 ಹಿರಿಯ ಅಧಿಕಾರಿಗಳ ವಜಾ
ಅಹಮದಾಬಾದ್ನಲ್ಲಿ ನಡೆದ ವಿಮಾನ ದುರಂತದಿಂದ ಇನ್ನು ಯಾರು ಹೊರ ಬಂದಿಲ್ಲ, ಈ ಅಪಘಾತದಲ್ಲಿ ಜೀವನದ ಕಳೆದಕೊಂಡವರ ಕುಟುಂಬ ಇನ್ನು ದುಃಖದಿಂದ ಹೊರಬಂದಿಲ್ಲ. ಇಂತಹ ಸಮಯದಲ್ಲಿ ಏರ್ ಇಂಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿಗಳು ಪಾರ್ಟಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ಇದೀಗ AISATSನ ನಾಲ್ವರು ಹಿರಿಯ ಉದ್ಯೋಗಿಗಳನ್ನು ವಜಾ ಮಾಡುವಂತೆ ಆದೇಶ ನೀಡಲಾಗಿದೆ.
- Akshay Pallamajalu
- Updated on: Jun 28, 2025
- 11:16 am
ನಮ್ಮ ದಾಳಿಯಿಂದ ತಪ್ಪಿಸಿಕೊಳ್ಳಲು ಇಸ್ರೇಲ್ ‘ಅಪ್ಪ’ನ ಬಳಿಗೆ ಓಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ: ಇರಾನ್ ವಿದೇಶಾಂಗ ಸಚಿವ
ಅಮೆರಿಕ, ಇರಾನ್, ಇಸ್ರೇಲ್ ಮೂರು ರಾಷ್ಟ್ರಗಳ ನಡುವೆ ಯುದ್ಧ ವಾತಾವರಣ ಸೃಷ್ಟಿಯಾಗಿದ್ದು, ಮೂರು ರಾಷ್ಟ್ರಗಳು ದಾಳಿಯನ್ನು ನಡೆಸಿದೆ. ಇದರ ಜತೆಗೆ ಅಲ್ಲಿನ ನಾಯಕಗಳು ಹೇಳಿಕೆ ಮೂಲಕ ಕೂಡ ಹೇಳಿಕೆಯ ದಾಳಿಯನ್ನು ಕೂಡ ನಡೆಸಿದ್ದಾರೆ. ಇದೀಗ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ಹೇಳಿಕೆಗೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಡೊನಾಲ್ಡ್ ಟ್ರಂಪ್ ವಿರುದ್ಧ ಕೆಂಡಕಾರುತ್ತಿದ್ದಾರೆ.
- Akshay Pallamajalu
- Updated on: Jun 28, 2025
- 10:26 am
Operation Sindhu: ನೇಪಾಳ, ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೆ ಭಾರತ ಸಿದ್ಧತೆ, 517 ಭಾರತೀಯರ ಸ್ಥಳಾಂತರ
ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಈ ಸಂಘರ್ಷಣೆಯಲ್ಲಿ ಹಲವು ಸಾವು- ನೋವುಗಳು ಸಂಭವಿಸಿದೆ. ಇದೀಗ ಭಾರತ ಇರಾನ್ನಲ್ಲಿರುವ ತಮ್ಮ ಪ್ರಜೆಗಳನ್ನು ಆಪರೇಷನ್ ಸಿಂಧು ಮೂಲಕ ಭಾರತಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಇದೀಗ ಭಾರತೀಯ ಪ್ರಜೆಗಳ ಜತೆಗೆ ಭಾರತದ ಪಕ್ಕ ರಾಷ್ಟ್ರಗಳಾದ ನೇಪಾಳ ಹಾಗೂ ಶ್ರೀಲಂಕಾದ ಜನರನ್ನು ಕೂಡ ಸ್ಥಳಾಂತರ ಮಾಡಲಾಗುತ್ತಿದೆ. ಇಲ್ಲಿಯವರೆಗೆ 517 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ.
- Akshay Pallamajalu
- Updated on: Jun 21, 2025
- 11:52 am
ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಪ್ರಶಸ್ತಿ ನೀಡುವುದಿಲ್ಲ, ಮತ್ತೆ ಕ್ರೆಡಿಟ್ ಪಡೆಯಲು ಮುಂದಾದ ಟ್ರಂಪ್
ಭಾರತ - ಪಾಕ್ ಬಿಕ್ಕಟ್ಟಿನ ವಿಚಾರದಲ್ಲಿ ಅಮೆರಿಕ ಪದೇ ಪದೇ ಮಧ್ಯೆ ಬರುತ್ತಿದೆ. ಇದೀಗ ಮತ್ತೆ ಭಾರತ - ಪಾಕ್ ನಡುವೆ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ಮಾಡುತ್ತೇವೆ ಎಂದು ಹೇಳಿದೆ. ಈ ಎರಡು ದಿನದ ಹಿಂದೆ ಪ್ರಧಾನಿ ಮೋದಿ ಭಾರತದ ವಿಚಾರದಲ್ಲಿ ಮೂರನೇ ವ್ಯಕ್ತಿ ಬರುವಂತಿಲ್ಲ ಎಂದು ಖಡಕ್ ಆಗಿ ಅಮೆರಿಕಕ್ಕೆ ಹೇಳಿದ್ದಾರೆ. ಇದೀಗ ಮತ್ತೆ ಟ್ರಂಪ್ ಅದೇ ಹಳೆ ರಾಗ ಶುರು ಮಾಡಿದ್ದಾರೆ.
- Akshay Pallamajalu
- Updated on: Jun 21, 2025
- 10:53 am
ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ, ಥೈಲ್ಯಾಂಡ್ನಲ್ಲಿ ತುರ್ತು ಭೂಸ್ಪರ್ಶ
ಥಾಯ್ಲೆಂಡ್ನ ಫುಕೆಟ್ ದ್ವೀಪದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ. ಥೈಲ್ಯಾಂಡ್ನಲ್ಲಿ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಲಾಗಿತ್ತು ಎಂದು ಫುಕೆಟ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಹೇಳಿದ್ದಾರೆ. ಗುಜರಾತಿನಲ್ಲಿ ನಡೆದ ವಿಮಾನ ಪತನದ ನಂತರ ಈ ಬೆದರಿಕೆ ಬಂದಿದೆ. ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
- Akshay Pallamajalu
- Updated on: Jun 13, 2025
- 12:04 pm
ಅಹಮದಾಬಾದ್ ವಿಮಾನ ಪತನ: ಕೊನೆಯ ಕ್ಷಣದಲ್ಲಿ ಕೈಕೊಟ್ಟ ನೊಗ ಪಂಪರ್, ಲಿಫ್ಟ್ ಗೇರ್
ಭಾರತಕ್ಕೆ ಇದೊಂದು ಕರಾಳ ದಿನವಾಗಿದೆ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. 242 ಜನರನ್ನು ಹೊತ್ತು ಲಂಡನ್ನತ್ತ ಹಾರಿತು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಂದರೆ 1.38 ಕ್ಕೆ ಅಪಘಾತಕ್ಕೀಡಾಯಿತು. ಆದರೆ ಇದಕ್ಕೆ ಕೆಲವೊಂದು ಕಾರಣಗಳನ್ನು ತಜ್ಞರು ತಿಳಿಸಿದ್ದಾರೆ. ಅವುಗಳು ಯಾವುವು ಇಲ್ಲಿದೆ ನೋಡಿ.
- Akshay Pallamajalu
- Updated on: Jun 13, 2025
- 10:24 am
ಮಳೆಗಾಲದಲ್ಲೂ ಉಪ್ಪಿಕಾಯಿ ತಾಜಾವಾಗಿಡಲು ಪಂಚ ಕ್ರಮಗಳು
ಉಪ್ಪಿನಕಾಯಿಯನ್ನು ಮಳೆಗಾಲದಲ್ಲೂ ತಾಜಾವಾಗಿಡುವುದು ಹೇಗೆ? ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ಆದರೆ ಅದಕ್ಕೆ ಹಳ್ಳಿ ಕ್ರಮ ಉತ್ತಮ, ಅದಕ್ಕಾಗಿ ಈ ನಿಯಮವನ್ನು ಹಾಗೂ ಈ ಕಾಳಜಿಯನ್ನು ಮಾಡುವುದು ಉತ್ತಮ. ಉಪ್ಪಿಕಾಯಿ ಹಾಳಾಗದಂತೆ ನೋಡಿಕೊಳ್ಳುವುದು ಹೇಗೆ? ಅದಕ್ಕಾಗಿ ಈ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ.
- Akshay Pallamajalu
- Updated on: Jun 12, 2025
- 3:32 pm
ಮಹಾರಾಷ್ಟ್ರ ಚುನಾವಣೆಯಲ್ಲಿ 5 ಹಂತದಲ್ಲಿ ಬಿಜೆಪಿ “ಮ್ಯಾಚ್ ಫಿಕ್ಸಿಂಗ್” ಮಾಡಿದೆ, ರಾಹುಲ್ ಆರೋಪ
ಕಾಂಗ್ರೆಸ್ ಪಕ್ಷದ ನಾಯಕ ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ. ನವೆಂಬರ್ 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐದು ಹಂತದ ಮ್ಯಾಚ್ ಫಿಕ್ಸಿಂಗ್ ಮಾದರಿಯನ್ನು ಬಳಸಿದೆ ಎಂದು ಆರೋಪಿಸಿದೆ. ಆ 5 ಹಂತದ ಮ್ಯಾಚ್ ಫಿಕ್ಸಿಂಗ್ ಯಾವುದು ಎಂಬುದು ಇಲ್ಲಿದೆ ನೋಡಿ.
- Akshay Pallamajalu
- Updated on: Jun 7, 2025
- 1:32 pm
ನನ್ನ ಶಿಫ್ಟ್ ಮುಗಿಯಿತು, ಅರ್ಧದಲ್ಲಿ ಬಿಟ್ಟು ಹೋದ ಪೈಲಟ್, ಡಿಸಿಎಂ ಏಕನಾಥ್ ಶಿಂಧೆ ವಿಮಾನ ನಿಲ್ದಾಣದಲ್ಲಿ ಬಾಕಿ
ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವೈಯಕ್ತಿಕ ವಿಮಾನದ ಪೈಲಟ್ ತಮ್ಮ ಕರ್ತವ್ಯದ ಸಮಯ ಮುಗಿದಿದೆ ಎಂದು ಮುಖ್ಯಮಂತ್ರಿಗಳನ್ನು ಅರ್ಧದಲ್ಲೇ ಬಿಟ್ಟು ಹೋಗಿರುವ ಘಟನೆ ಶುಕ್ರವಾರ ನಡೆದಿದೆ. ಮಧ್ಯಾಹ್ನ 3.45 ಕ್ಕೆ ಜಲಗಾಂವ್ಗೆ ಆಗಮಿಸಬೇಕಿತ್ತು ಆದರೆ ತಾಂತ್ರಿಕ ಕಾರಣಗಳಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ವಿಳಂಬವಾಯಿತು.
- Akshay Pallamajalu
- Updated on: Jun 7, 2025
- 12:40 pm