ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ಪ್ರಸ್ತುತ ನಾನು ಟಿವಿ9 ಕನ್ನಡ ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.
“ನನ್ನ ಗಂಡ ಗಂಡಸೇ ಅಲ್ಲ”: ಸಂಸಾರ ಹಾಳಾಗಲು ಪ್ರಜ್ವಲ್ ಕಾರಣ ಎಂದ ಮೋನಿಕಾ
ಕಾನ್ಸ್ಟೇಬಲ್ ಜೊತೆ ಪರಾರಿ ಪ್ರಕರಣದಲ್ಲಿ, ಗೃಹಿಣಿ ಮೋನಿಕಾ ತಮ್ಮ ಸಂಸಾರ ಹಾಳಾಗಲು ಪತಿಯ ಸ್ನೇಹಿತ ಪ್ರಜ್ವಲ್ ಮುಖ್ಯ ಕಾರಣ ಎಂದಿದ್ದಾರೆ. ಪ್ರಜ್ವಲ್ ವಿಚ್ಛೇದನ ಪಡೆಯಲು ಸಲಹೆ ನೀಡಿದ್ದರು. ನಾಗೇಂದ್ರ ಎಂಬಾತ ತನ್ನ ಮೇಲೆ ಹಲ್ಲೆ ಮಾಡಿದ್ದ ಎಂದಿರುವ ಮೋನಿಕಾ, ಪತಿಯು ತಮ್ಮ ಆಭರಣ ಮತ್ತು ಹಣದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾಳೆ. ಈ ಪ್ರಕರಣದಲ್ಲಿ ಕಾನ್ಸ್ಟೇಬಲ್ ರಾಘವೇಂದ್ರ ಅವರ ಯಾವುದೇ ತಪ್ಪಿಲ್ಲ ಎಂದಿದ್ದಾಳೆ.
- Akshay Pallamajalu
- Updated on: Dec 13, 2025
- 10:50 pm
ಪೊಲೀಸಪ್ಪನ ಜತೆ ಪರಾರಿಯಾಗಿದ್ದ ಗೃಹಿಣಿ ಪ್ರತ್ಯಕ್ಷ: ಗಂಡನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಮೋನಿಕಾ
ಪತಿ ಮಂಜುನಾಥ್ನಿಂದ ದೌರ್ಜನ್ಯ, ಕೊಲೆ ಬೆದರಿಕೆ ಹಾಗೂ ಆನ್ಲೈನ್ ಗ್ಯಾಂಬ್ಲಿಂಗ್ ಚಟದಿಂದ ತೊಂದರೆಗೊಳಗಾಗಿ, ಕಾನ್ಸ್ಟೆಬಲ್ ರಾಘವೇಂದ್ರ ನೆರವು ಪಡೆದಿರುವುದಾಗಿ ಮೋನಿಕಾ ಹೇಳಿದ್ದಾಳೆ. ಮಾಧ್ಯಮಗಳ ಮುಂದೆ ತನ್ನ ಕಷ್ಟಗಳನ್ನು ಹೇಳಿಕೊಂಡಿರುವ ಅವರು, ಪತಿಯು ತಂದೆ, ಅಣ್ಣನಿಗೂ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾಳೆ. ಇದೀಗ ಮಾಧ್ಯಮಗಳ ಮುಂದೆ ಬಂದು ಗಂಡ ವಿರುದ್ಧ ಹೇಳಿಕೆ ನೀಡಿದ್ದಾಳೆ.
- Akshay Pallamajalu
- Updated on: Dec 13, 2025
- 10:28 pm
‘ನನಗೆ ನ್ಯಾಯ ಬೇಕು’: ಮತ್ತೊಂದು ಮದುವೆಗೆ ಸಿದ್ಧನಾಗಿದ್ದ ಶಿಕ್ಷಕನಿಗೆ ಶಾಕ್ ಕೊಟ್ಟ ಯುವತಿ
ಚಿಕ್ಕಮಗಳೂರಿನಲ್ಲಿ ಶಿಕ್ಷಕ ಶರತ್ ತನ್ನ ಲಿವಿಂಗ್ ರಿಲೇಷನ್ಶಿಪ್ ಪಾರ್ಟ್ನರ್ ಅಶ್ವಿನಿಗೆ ಮೋಸ ಮಾಡಿ, ಬೇರೊಬ್ಬರನ್ನು ಮದುವೆಯಾಗಲು ಮುಂದಾಗಿದ್ದಾನೆ. ಮೊದಲ ಪತ್ನಿಗೆ ವಿಚ್ಛೇದನದ ಬಳಿಕ ಅಶ್ವಿನಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಶರತ್, 4 ವರ್ಷಗಳ ಸಹಬಾಳ್ವೆಯ ನಂತರ ಕೈಕೊಟ್ಟಿದ್ದಾನೆ. ನ್ಯಾಯಕ್ಕಾಗಿ ಅಶ್ವಿನಿ ಪ್ರತಿಭಟನೆ ನಡೆಸಿ, ಪೊಲೀಸ್ ದೂರು ದಾಖಲಿಸಲಾಗಿದೆ.
- Akshay Pallamajalu
- Updated on: Dec 13, 2025
- 9:49 pm
ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ, ನಿರೂಪಕಿಯ ಮಾಜಿ ಪತಿ ಪಬ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್
ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ 'ಬ್ಯಾಸ್ಟಿಯನ್' ಪಬ್ನಲ್ಲಿ ಉದ್ಯಮಿ ಸತ್ಯ ನಾಯ್ಡು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಅತಿಯಾದ ಮದ್ಯಪಾನ ಮಾಡಿ, ಸರ್ವಿಸ್ ವಿಚಾರದಲ್ಲಿ ಗಲಾಟೆ ಸೃಷ್ಟಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸತ್ಯ ನಾಯ್ಡು ಮಾಜಿ ಬಿಗ್ ಬಾಸ್ ಸ್ಪರ್ಧಿ ಪತಿಯಾಗಿದ್ದಾರೆ. ಇದೀಗ ಗಲಾಟೆ ವಿಡಿಯೋ ವೈರಲ್ ಆಗಿದೆ.
- Akshay Pallamajalu
- Updated on: Dec 13, 2025
- 8:07 pm
ರೀಲ್ಸ್ ಹುಚ್ಚಿನಲ್ಲಿ ಮದುವೆಯಾಗಿರುವುದನ್ನು ಮರೆತು ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಬೆಂಗಳೂರಿನ ಹೆಚ್ಎಸ್ಆರ್ ಠಾಣೆಯ ಪೊಲೀಸ್ ಚಾಲಕ ರಾಘವೇಂದ್ರ ಜತೆ ಮೈಸೂರು ಮೂಲದ ಮೋನಿಕಾ ಪರಾರಿಯಾಗಿದ್ದಾರೆ. 12 ವರ್ಷದ ಮಗ ಹಾಗೂ ಎರಡನೇ ಪತಿಯನ್ನು ಹೊಂದಿದ್ದ ಮೋನಿಕಾ, ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ರಾಘವೇಂದ್ರನೊಂದಿಗೆ ಜೂನ್ನಲ್ಲಿ ಸ್ನೇಹ ಬೆಳೆಸಿದ್ದರು. ಇಬ್ಬರೂ ರೀಲ್ಸ್ ಮಾಡಿದ್ದು, ಈಗ ಎಸ್ಕೇಪ್ ಆಗಿದ್ದಾರೆ.
- Akshay Pallamajalu
- Updated on: Dec 13, 2025
- 7:44 pm
ನಟಿ ಶಿಲ್ಪಾಶೆಟ್ಟಿ ಒಡೆತನದ ಬೆಂಗಳೂರು ಪಬ್ನಲ್ಲಿ ಗಲಾಟೆ: ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಉದ್ಯಮಿ
ಬೆಂಗಳೂರಿನ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಒಡೆತನದ 'ಬ್ಯಾಸ್ಟಿಯನ್' ಪಬ್ನಲ್ಲಿ ಉದ್ಯಮಿ ಸತ್ಯ ನಾಯ್ಡು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಸೇವೆ ವಿಚಾರಕ್ಕೆ ಗುರುವಾರ ರಾತ್ರಿ ನಡೆದ ಗಲಾಟೆ 2 ದಿನಗಳ ನಂತರ ಬೆಳಕಿಗೆ ಬಂದಿದೆ. ಸತ್ಯ ನಾಯ್ಡು ಕುಡಿದ ಅಮಲಿನಲ್ಲಿದ್ದು, ಹಲ್ಲೆ ನಡೆಸಿದ ವಿಡಿಯೋ ಲಭ್ಯವಾಗಿದೆ. ದೂರು ದಾಖಲಾಗದಿದ್ದರೂ, ಕಬ್ಬನ್ ಪಾರ್ಕ್ ಪೊಲೀಸರು ಈಗ ಸ್ವತಃ ತನಿಖೆ ಆರಂಭಿಸಿದ್ದಾರೆ.
- Akshay Pallamajalu
- Updated on: Dec 13, 2025
- 7:03 pm
ವಿದ್ಯಾರ್ಥಿನಿ ಜತೆ ಅಸಭ್ಯ ವರ್ತನೆ: ಇನ್ನೂ ದೂರು ದಾಖಲಿಸಿಕೊಳ್ಳದ ಪೊಲೀಸರು, ಪ್ರಾಂಶುಪಾಲ ಸಚಿವರ ಆಪ್ತ ಎಂದ ಮಾಜಿ ಶಾಸಕ
ಬೆಳಗಾವಿಯ ಬೆಳಗುಂದಿ ಗ್ರಾಮದ ಶಾಲಾ ಪ್ರಾಂಶುಪಾಲ ಕಲ್ಲಪ್ಪ ಬೆಳಗಾಂವಕರ್ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಪೋಷಕರು ಧರ್ಮದೇಟು ನೀಡಿದ್ದಾರೆ. ಅಶ್ಲೀಲ ಚಾಟ್ ಸಾಕ್ಷ್ಯಗಳ ನಡುವೆಯೂ ಪೊಲೀಸರು ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ತಿರುವು ಪಡೆದಿರುವ ಈ ಪ್ರಕರಣದಲ್ಲಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿ, ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
- Akshay Pallamajalu
- Updated on: Dec 13, 2025
- 6:16 pm
ಬೆಂಗಳೂರು: ಇಬ್ಬರು ಗಂಡಂದಿರ ಮುದ್ದಿನ ಮಡದಿ ಪೊಲೀಸಪ್ಪನ ಜತೆ ಪರಾರಿ
ಬೆಂಗಳೂರಿನಲ್ಲಿ ಗೃಹಿಣಿಯೊಬ್ಬಳು 12 ವರ್ಷದ ಮಗನಿದ್ದರೂ, ಪೊಲೀಸ್ ಕಾನ್ಸ್ಟೇಬಲ್ ಜೊತೆ ಪರಾರಿಯಾಗಿದ್ದಾಳೆ. 1.8 ಲಕ್ಷ ನಗದು ಮತ್ತು 160 ಗ್ರಾಂ ಚಿನ್ನಾಭರಣವನ್ನೂ ತೆಗೆದುಕೊಂಡು ಹೋಗಿದ್ದಾಳೆ. ಇತ್ತೀಚಿನ ಗ್ಲೀಡನ್ ವರದಿ ಬೆಂಗಳೂರನ್ನು ಅಕ್ರಮ ಸಂಬಂಧದಲ್ಲಿ ದೇಶದಲ್ಲೇ ನಂಬರ್ ಒನ್ ಎಂದು ಹೇಳಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸಪ್ಪನನ್ನು ಅಮಾನತುಗೊಳಿಸಲಾಗಿದೆ.
- Akshay Pallamajalu
- Updated on: Dec 13, 2025
- 5:07 pm
ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಮನೆಯಲ್ಲಿ ಕಳ್ಳತನ ಮಾಡಿದ ಝಮಾಟೊ ಡೆಲಿವರಿ ಬಾಯ್!
ಗ್ರ್ಯಾಮಿ ವಿಜೇತ ರಿಕಿ ಕೇಜ್ ಅವರ ಬೆಂಗಳೂರು ನಿವಾಸದಲ್ಲಿ ಕಳ್ಳತನ ನಡೆದಿದೆ. ಝಮಾಟೊ ಡೆಲಿವರಿ ಬಾಯ್ ಸಂಪ್ ಕವರ್ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ರಿಕಿ ಕೇಜ್ ಹಂಚಿಕೊಂಡಿದ್ದು, ಕಳ್ಳರನ್ನು ಪತ್ತೆಹಚ್ಚಲು ಸಹಾಯ ಕೋರಿದ್ದಾರೆ. ಝಮಾಟೊ ಸಂಸ್ಥೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಬೆಂಗಳೂರಿನಲ್ಲಿ ಕಳ್ಳತನ ಹೆಚ್ಚಿದ್ದು, ಜಾಗರೂಕರಾಗಿರುವಂತೆ ರಿಕಿ ಕೇಜ್ ಎಚ್ಚರಿಕೆ ನೀಡಿದ್ದಾರೆ.
- Akshay Pallamajalu
- Updated on: Dec 13, 2025
- 3:03 pm
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ, 11,718 ಕೋಟಿ ರೂ.ಮೀಸಲು
ಕೇಂದ್ರ ಸಚಿವ ಸಂಪುಟವು 2027ರ ಮೊದಲ ಡಿಜಿಟಲ್ ಜನಗಣತಿಗಾಗಿ 11,718 ಕೋಟಿ ರೂ. ಅನುಮೋದಿಸಿದೆ. ಈ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ. ಮನೆ ಪಟ್ಟಿ ಮತ್ತು ವಸತಿ ಗಣತಿ 2026ರಲ್ಲಿ, ಜನಸಂಖ್ಯಾ ಗಣತಿ 2027ರಲ್ಲಿ ಜರುಗಲಿದೆ. ದತ್ತಾಂಶ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, 3 ಲಕ್ಷ ಉದ್ಯೋಗಿಗಳನ್ನು ನೇಮಿಸಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
- Akshay Pallamajalu
- Updated on: Dec 12, 2025
- 5:21 pm
ಯುವಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಹೊಸ Gen-Z ಅಂಚೆ ಕಚೇರಿ ಸ್ಥಾಪಿಸಿದ ಇಂಡಿಯಾ ಪೋಸ್ಟ್
ಕೇಂದ್ರ ಸರ್ಕಾರವು ಯುವಕರನ್ನು ಆಕರ್ಷಿಸಲು ಮತ್ತು ಅಂಚೆ ಸೇವೆಗಳನ್ನು ಆಧುನೀಕರಿಸಲು Gen-Z ಅಂಚೆ ಕಚೇರಿಗಳನ್ನು ಪರಿಚಯಿಸಿದೆ. ಕೇರಳ ಮತ್ತು ಆಂಧ್ರದಲ್ಲಿ ಸ್ಥಾಪಿಸಲಾದ ಈ ಕಚೇರಿಗಳು ಸೃಜನಾತ್ಮಕ ವಿನ್ಯಾಸ, ತಂತ್ರಜ್ಞಾನ ಮತ್ತು QR-ಆಧಾರಿತ ಸೇವೆಗಳನ್ನು ಒಳಗೊಂಡಿವೆ. ಇದು ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಅಂಚೆ ಸೇವೆಗಳನ್ನು ಸುಲಭವಾಗಿ ಬಳಸಲು ಸಹಕಾರಿ. ಯುವಜನರೊಂದಿಗೆ ಇಂಡಿಯಾ ಪೋಸ್ಟ್ ಸಂಪರ್ಕ ಸಾಧಿಸಲು ಇದು ಮಹತ್ವದ ಹೆಜ್ಜೆಯಾಗಿದೆ.
- Akshay Pallamajalu
- Updated on: Dec 12, 2025
- 4:13 pm
ಇಂಥಾ ಸುಗಂಧ ದ್ರವ್ಯ ನೋಡಿರಲು ಸಾಧ್ಯವೆ ಇಲ್ಲ, ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ
"ಶುಮುಖ್" ವಿಶ್ವದ ಅತಿ ದುಬಾರಿ ಸುಗಂಧ ದ್ರವ್ಯವಾಗಿದ್ದು, ಇದರ ಬೆಲೆ 1.3 ಮಿಲಿಯನ್ ಯುಎಸ್ ಡಾಲರ್ಗಳು. ದುಬೈನಲ್ಲಿ ಪ್ರದರ್ಶಿಸಲಾದ ಈ ಐಷಾರಾಮಿ ಪರ್ಫ್ಯೂಮ್ ಅನ್ನು ಅಸ್ಗರ್ ಆಡಮ್ ಅಲಿ ಮೂರು ವರ್ಷಗಳ ಪರಿಶ್ರಮದಿಂದ ತಯಾರಿಸಿದ್ದಾರೆ. 3,571 ವಜ್ರಗಳು, ಚಿನ್ನ, ಬೆಳ್ಳಿ ಹಾಗೂ ಮುತ್ತುಗಳಿಂದ ಅಲಂಕೃತಗೊಂಡಿರುವ ಇದರ ಬಾಟಲಿಯು ಎರಡು ಗಿನ್ನಿಸ್ ವಿಶ್ವ ದಾಖಲೆಗಳನ್ನು ಗೆದ್ದಿದೆ, ಇದು ದುಬೈನ ವೈಭವಕ್ಕೆ ಸಾಕ್ಷಿಯಾಗಿದೆ.
- Akshay Pallamajalu
- Updated on: Dec 12, 2025
- 3:37 pm