ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.
ವಿವಿಧ ಬೇಡಿಕೆ ಈಡೇರಿಸುವಂತೆ ಹುಬ್ಬಳ್ಳಿಯಲ್ಲಿ ಆಡು, ಕುರಿಗಳೊಂದಿಗೆ ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಸುವಂತೆ ಕುರುಬ ಸಮುದಾಯ ಆಡು, ಕುರಿಗಳೊಂದಿಗೆ ಪ್ರತಿಭಟನೆ ನಡೆಸಿದೆ. ಆಡು, ಕುರಿಗಳೊಂದಿಗೆ ಹುಬ್ಬಳ್ಳಿಯ ಅಂಬೇಡ್ಕರ್ ಭವನದಿಂದ ಚನ್ನಮ್ಮ ವೃತ್ತ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಎಸ್ಟಿ ಮೀಸಲಾತಿ, ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಅವಕಾಶ ನೀಡಬೇಕೆಂದು ಪ್ರದೇಶ ಕುರುಬ ಸಮಾಜ ಒಕ್ಕೂಟ ಒತ್ತಾಯಿಸಿದ್ದು, ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
- Sanjayya Chikkamath
- Updated on: Aug 14, 2025
- 6:43 pm
ಹುಬ್ಬಳ್ಳಿ ನೇಹ ಹಿರೇಮಠ ಕೊಲೆ ಪ್ರಕರಣ: ಹಂತಕನ ಜಾಮೀನು ಅರ್ಜಿ ವಜಾ
Neha Hiremath Murder Case: ಕರ್ನಾಟಕದಾದ್ಯಂತ ಭಾರೀ ಸುದ್ದಿಯಾಗಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಫಯಾಜ್ ಗೆ ಕೋರ್ಟ್ ಶಾಕ್ ಕೊಟ್ಟಿದೆ. ಕಾಲೇಜಿನೊಳಗೆ ನುಗ್ಗಿ ನೇಹಾಳನ್ನು ಹತ್ಯೆಗೈದಿದ್ದ ಫಯಾಜ್ ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಅಲ್ಲದೇ ಖುದ್ದು ಹಾಜರಾಹುವಂತೆ ಖಡಕ್ ಸೂಚನೆ ನೀಡಿದೆ.
- Sanjayya Chikkamath
- Updated on: Aug 4, 2025
- 6:30 pm
ಸ್ವಾತಂತ್ರ್ಯ ದಿನಾಚರಣೆಗೆ ಬೆಂಗಳೂರು ಟು ಬೀದರ್ ನಡುವೆ ವಿಶೇಷ ರೈಲು: ಇಲ್ಲಿದೆ ವೇಳಾಪಟ್ಟಿ
Bengaluru to Bidar Special train: ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಇತ್ತೀಚೆಗೆ ನೈಋತ್ಯ ರೈಲ್ವೆ ಯಶವಂತಪುರ ಟು ತಾಳಗುಪ್ಪ ಮಧ್ಯೆ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸಿತ್ತು. ಇದೀಗ ಬೆಂಗಳೂರು ಮತ್ತು ಬೀದರ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲಿನ ಸಂಪೂರ್ಣ ಮಾಹಿತಿ ಇಲ್ಲಿದೆ.
- Sanjayya Chikkamath
- Updated on: Aug 1, 2025
- 7:42 am
ತಾಳಿ ಕಟ್ಟುವ ಮುನ್ನವೇ ತಾಯಿಯಾಗಿದ್ದ ಯುವತಿ ದುರಂತ ಅಂತ್ಯ
ಅವರಿಬ್ಬರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗದೇ ಲಿವಿಂಗ್ ಲಿವಿಂಗ್ ಟುಗೆದರ್ ನಲ್ಲಿದ್ದರು. ಪರಿಣಾಮ ಯುವತಿ ಗರ್ಭಿಣಿಯಾಗಿದ್ದು, ಬಳಿಕ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಆದ್ರೆ, ದುರದೃಷ್ಟವಶಾತ್ ಗರ್ಭಿಣಿಯಾಗಿದ್ದ ಯುವತಿ ಹಾಗೂ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದ್ದಾರೆ. ಪ್ರೀತಿಸಿ ವಿವಾಹವಾಗಿದ್ದ ಏಳು ತಿಂಗಳಲ್ಲೇ ಈ ದುರಂತ ಸಂಭವಿಸಿದೆ. ಅಷ್ಟಕ್ಕೂ ಆಗಿದ್ದೇನು?
- Sanjayya Chikkamath
- Updated on: Jul 31, 2025
- 3:15 pm
ರಾಜ್ಯದ ಯಾತ್ರಾರ್ಥಿಗಳಿಗೆ ಸಿಹಿ ಸುದ್ದಿ: ಕಾಶಿ ಮತ್ತು ದಕ್ಷಿಣ ಭಾರತದ ದೇವಾಲಯಗಳ ದರ್ಶನಕ್ಕೆ 2 ವಿಶೇಷ ರೈಲು, ಇಲ್ಲಿದೆ ವಿವರ
ರೈಲ್ವೆ ಇಲಾಖೆ ಕರ್ನಾಟಕದ ಜನರಿಗೆ ಸಿಹಿ ಸುದ್ದಿ ನೀಡಿದೆ. ಕಾಶಿ ಮತ್ತು ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಎರಡು ವಿಶೇಷ ರೈಲುಗಳನ್ನು ಓಡಿಸಲಿದೆ. ಕಾಶಿ ದರ್ಶನ ಯಾತ್ರೆ 9 ದಿನಗಳ ಪ್ರವಾಸವಾಗಿದೆ. ದಕ್ಷಿಣ ಭಾರತ ಯಾತ್ರೆ 6 ದಿನಗಳ ಪ್ರವಾಸವಾಗಿದೆ. ಹುಬ್ಬಳ್ಳಿ ಸೇರಿದಂತೆ ಹಲವಾರು ಕರ್ನಾಟಕದ ನಗರಗಳಿಂದ ರೈಲು ಹೊರಡಲಿದೆ. ರೈಲು ಟಿಕೆಟ್ ಬುಕ್ಕಿಂಗ್ ಸೇರಿದಂತೆ ಹಲವು ಮಾಹಿತಿ ಇಲ್ಲಿದೆ.
- Sanjayya Chikkamath
- Updated on: Jul 29, 2025
- 10:05 pm
ಜಯಮೃತ್ಯುಂಜಯ ಸ್ವಾಮೀಜಿಗೆ ವಿಷ ಹಾಕಿ ಕೊಲೆ ಮಾಡುವ ಯತ್ನ ನಡೆದಿತ್ತಾ?
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿ ನೇಮಕಕ್ಕೆ ಟ್ರಸ್ಟ್ ಮುಂದಾಗಿದ್ದರೆ, ಇತ್ತ ಜಯಮೃುತ್ಯುಂಜಯ ಸ್ವಾಮೀಜಿಗೆ ವಿಷಪ್ರಾಶನ ಮಾಡಿಸಿ ಕೊಲ್ಲುವ ಯತ್ನ ನಡಿಯಿತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದ್ದು, ಸ್ವತಃ ಸ್ವಾಮೀಜಿಯೇ ಇಂತಹದೊಂದು ಅನುಮಾನ ವ್ಯಕ್ತಪಡಿಸಿದ್ದಾರಂತೆ. ಇನ್ನೊಂದಡೆ ಪರ್ಯಾಯ ಪೀಠ ಆರಂಭದ ಚಿಂತನೆ ಜೊತೆಗೆ ಟ್ರಸ್ಟ್ ಅಧ್ಯಕ್ಷರಾಗಿರುವ ಕಾಂಗ್ರೆಸ್ ಶಾಸಕ ವಿಜಯಾನಂದ್ ಕಾಶಪ್ಪನವರ ನಡೆಗೆ ಬಿಜೆಪಿ ಪಂಚಮಸಾಲಿ ಮುಖಂಡರು ಆಕ್ರೋಶಗೊಂಡಿದ್ದಾರೆ.
- Sanjayya Chikkamath
- Updated on: Jul 21, 2025
- 7:14 pm
ತೀವ್ರ ಸ್ವರೂಪ ಪಡೆದ ಕೂಡಲಸಂಗಮ ಪೀಠ ವಿವಾದ: ಜಯಮೃತ್ಯುಂಜಯ ಸ್ವಾಮೀಜಿಯ ಕೆಳಗಿಳಿಸಲು ಸಿದ್ಧತೆ
ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ನಡುವಿನ ವಿವಾದ ತಾರಕಕ್ಕೇರಿದೆ. ಟ್ರಸ್ಟ್, ಪೀಠಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಯೋಜಿಸಿದ್ದು, ಸ್ವಾಮೀಜಿಯನ್ನು ಕೆಳಗಿಳಿಸುವ ಸುಳಿವು ನೀಡಿದೆ. ಇದೇ ವೇಳೆ, ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆ ಸೇರಿದ್ದಾರೆ.
- Sanjayya Chikkamath
- Updated on: Jul 19, 2025
- 4:29 pm
ಹುಬ್ಬಳ್ಳಿ: ಸರ್ಕಾರಿ ನೌಕರಿಗಾಗಿ ಆರು ವರ್ಷದಿಂದ ಕಾದಿದ್ದವರಿಗೆ ಇನ್ನೂ ಸಿಕ್ಕಿಲ್ಲ ನೇಮಕಾತಿ ಪತ್ರ!
ಅಧಿಕಾರಿಗಳು ಮತ್ತು ಸರ್ಕಾರದ ದ್ವಂದ್ವ ನೀತಿಯಿಂದ ಇದೀಗ ಸಾವಿರಕ್ಕೂ ಅಧಿಕ ಜನ, ಸರ್ಕಾರಿ ನೌಕರಿಯಿಂದ ವಂಚಿತರಾಗಿದ್ದಾರೆ. ಅರ್ಜಿ ಹಾಕಿ, ಸರ್ಕಾರಿ ನೌಕರಿಗಾಗಿ ಆರು ವರ್ಷದಿಂದ ಕಾದಿದ್ದವರಿಗೆ ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುದ್ದೆ ಕಡಿತ ನಿರ್ಧಾರದಿಂದ ತೀವ್ರ ನಿರಾಶೆಯಾಗಿದೆ. ಆರ್ಥಿಕ ಸಮಸ್ಯೆಯ ನೆಪವೊಡ್ಡಿ ನಿಗಮವು ಹುದ್ದೆಗಳನ್ನು ಕಡಿತ ಮಾಡಿದ್ದು, ಸಾವಿರಾರು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
- Sanjayya Chikkamath
- Updated on: Jul 19, 2025
- 2:23 pm
Hubballi News: ಬಾಲಕಿ ಮೇಲೆ ಶ್ವಾನಗಳ ಡೆಡ್ಲಿ ಅಟ್ಯಾಕ್: ಎದೆ ಝಲ್ ಎನ್ನುವ ದೃಶ್ಯ ಸೆರೆ
ಹುಬ್ಬಳ್ಳಿಯಲ್ಲಿ ಜನರು ಇದೀಗ ಮನೆಯಿಂದ ಹೊರಹೋಗಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನರ ಭಯಕ್ಕೆ ಕಾರಣ, ರೌಡಿಗಳು, ಕಳ್ಳರ ಕಾಟದ ಭಯವಲ್ಲಾ, ಬದಲಾಗಿ ಬೀದಿ ನಾಯಿಗಳ ಕಾಟ. ಹೌದು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಿಕ್ಕಸಿಕ್ಕವರ ಮೇಲೆ ಅಟ್ಯಾಕ್ ಮಾಡ್ತಿವೆ. ಬಾಲಕಿಯೋರ್ವಳ ಮೇಲೆ ಅಟ್ಯಾಕ್ ಮಾಡಿರುವ ಬೀದಿ ನಾಯಿಗಳ ದೃಶ್ಯ ಇದೀಗ ಪುಲ್ ವೈರಲ್ ಆಗಿದೆ.
- Sanjayya Chikkamath
- Updated on: Jul 17, 2025
- 11:20 am
ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ
ದಕ್ಷಿಣ ರೈಲ್ವೆಯ ಕಾರ್ಯಾಚರಣಾ ನಿರ್ಬಂಧಗಳಿಂದಾಗಿ, 07355/07356 ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ವಿಸ್ತರಿಸಲಾಗಿದೆ. ರೈಲು ಈಗ ರಾಮನಾಥಪುರಂನಲ್ಲಿ ನಿಲ್ಲಲಿದೆ. ಪ್ರಸ್ತುತ ಸಮಯ ಮತ್ತು ನಿಲುಗಡೆಗಳು ಬದಲಾಗಿಲ್ಲ. ಹೆಚ್ಚುವರಿಯಾಗಿ ನಾಲ್ಕು ಟ್ರಿಪ್ ರೈಲು ಸಂಚರಿಸಲಿದೆ ನೈಋತ್ಯ ರೈಲ್ವೆ ವಲಯ ತಿಳಿಸಿದೆ.
- Sanjayya Chikkamath
- Updated on: Jul 15, 2025
- 11:03 pm
ಶಕ್ತಿ ಯೋಜನೆಯಿಂದ ಮಹಿಳೆಯರು ಬಸ್ಸಿನಲ್ಲಿ ಜಾಲಿ ರೈಡ್, ಇತ್ತ ನಿಗಮಗಳಿಗೆ ಆರ್ಥಿಕ ಸಂಕಷ್ಟ
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿಗೆ ಬಂದು ಎರಡು ವರ್ಷಗಳು ಪೂರ್ಣಗೊಂಡಿದೆ. 2023ರ ಜೂನ್ 11 ರಂದು ಆರಂಭವಾಗಿದ್ದ ಈ ಯೋಜನೆಗೆ ಮಹಿಳೆಯರು ಬಹುಪರಾಕ್ ಎಂದಿದ್ದು, ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ, ಎನ್ಡಬ್ಲೂಕೆಆರ್ಟಿಸಿ ನಾಲ್ಕೂ ಸಾರಿಗೆ ನಿಗಮಗಳ ಬಸ್ಗಳಲ್ಲಿ ಬರೋಬ್ಬರಿಗೆ 495 ಕೋಟಿ ಮಹಿಳಾ ಪ್ರಯಾಣಿಕರು ಒಂದು ರೂಪಾಯಿ ಹಣ ನೀಡದೆ ಉಚಿತವಾಗಿ ಪ್ರಯಾಣಿಸಿದ್ದಾರೆ. ಆದ್ರೆ, ಇತ್ತ ನಿಗಮಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
- Sanjayya Chikkamath
- Updated on: Jul 13, 2025
- 4:52 pm
ಹುಬ್ಬಳ್ಳಿ ಧಾರವಾಡ: 5ನೇ ದಿನಕ್ಕೆ ಕಾಲಿಟ್ಟ ಪಾಲಿಕೆ ಸಿಬ್ಬಂದಿ ಮುಷ್ಕರ, ಜನ ಪರದಾಟ
ಕರ್ನಾಟಕದ ಹತ್ತು ಮಹಾನಗರ ಪಾಲಿಕೆಗಳ ಸಿಬ್ಬಂದಿ ಐದು ದಿನಗಳಿಂದ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. 7ನೇ ವೇತನ ಆಯೋಗದ ಸೌಲಭ್ಯ, ಜ್ಯೋತಿ ಸಂಜೀವಿನಿ ಯೋಜನೆ, ಹುದ್ದೆ ಭರ್ತಿ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅವರು ಪ್ರತಿಭಟಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಾಲಿಕೆ ಸೇರಿದಂತೆ ಪಾಲಿಕೆಗಳಲ್ಲಿ ಸೇವೆಗಳು ಸ್ಥಗಿತಗೊಂಡಿವೆ.
- Sanjayya Chikkamath
- Updated on: Jul 12, 2025
- 2:03 pm