ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.
ಕರ್ನಾಟಕದ ಪೆಟ್ರೋಲ್ ಬಂಕ್ಗಳಲ್ಲಿ ನಡೆಯುತ್ತಿದೆಯೇ ಅಳತೆ ವಂಚನೆ? ‘ಟಿವಿ9’ ರಿಯಾಲಿಟಿ ಚೆಕ್ನಲ್ಲಿ ಕಾಣಿಸಿದ್ದೇನು ನೋಡಿ
ಕರ್ನಾಟಕದ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಅಳತೆ ಮೋಸದ ಜಾಲ ಪತ್ತೆಯಾಗಿದೆ ಎಂಬ ಸಚಿವ ರಿಜ್ವಾನ್ ಅರ್ಷದ್ ಹೇಳಿಕೆ ಬೆನ್ನಲ್ಲೇ ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಟಿವಿ9 ನಡೆಸಿದ ರಿಯಾಲಿಟಿ ಚೆಕ್ನಲ್ಲಿ, ಬೆಂಗಳೂರಿನಲ್ಲಿ ವ್ಯಾಪಕ ವ್ಯತ್ಯಾಸಗಳು ಕಂಡುಬಂದರೆ, ಹುಬ್ಬಳ್ಳಿಯ ಒಂದು ಬಂಕ್ನಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ಆಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಗಳು ತನಿಖೆ ನಡೆಸಿ, 101 ಬಂಕ್ಗಳಿಗೆ ನೋಟಿಸ್ ನೀಡಿವೆ.
- Sanjayya Chikkamath
- Updated on: Sep 17, 2026
- 12:33 pm
ಲವ್ ಜಿವಾದ್: ವಿವಾದಾತ್ಮಕ ಹೇಳಿಕೆ ನೀಡಿದ ವಿಹೆಚ್ಪಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ
ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಲವ್ ಜಿಹಾದ್ ಕುರಿತು ವಿಎಚ್ಪಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ದೇಶದಲ್ಲಿ ಕೋಟ್ಯಾಂತರ ಮಸೀದಿ, ಚರ್ಚ್ಗಳಿವೆ. ಅವುಗಳ ಆದಾಯದ ಮೇಲೆ ಬೀಳದ ಸರ್ಕಾರದ ಕಣ್ಣು ಹಿಂದೂ ದೇವಾಲಯಗಳ ಮೇಲೆ ಬಿದ್ದಿದೆ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ.
- Sanjayya Chikkamath
- Updated on: Sep 16, 2026
- 6:22 pm
ಗಣೇಶ ಹಬ್ಬಕ್ಕೆ ಡಿಪೋ, ವರ್ಕ್ ಶಾಪ್, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಗಣೇಶ ಹಬ್ಬದ ಸಂದರ್ಭದಲ್ಲಿ ಡಿಪೋ, ವರ್ಕ್ ಶಾಪ್ ಮತ್ತು ಬಸ್ ನಿಲ್ದಾಣಗಳಲ್ಲಿ ಕಟ್ಟಿಗೆ ಅಥವಾ ಗ್ಯಾಸ್ ಬಳಸಿ ಪ್ರಸಾದ ತಯಾರಿಸುವುದನ್ನು ನಿಷೇಧಿಸಿದೆ. ಅಗ್ನಿ ಸುರಕ್ಷತಾ ಕಾರಣಗಳನ್ನು ನೀಡಿರುವ ಈ ಆದೇಶವು ಹಲವು ವರ್ಷಗಳ ಸಂಪ್ರದಾಯಕ್ಕೆ ಅಡ್ಡಿಯಾಗಿದೆ. ಇದರಿಂದ ಸಿಬ್ಬಂದಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸದ್ಯ ಈ ಕುರಿತು ವಿವಾದ ಭುಗಿಲೆದ್ದಿದೆ.
- Sanjayya Chikkamath
- Updated on: Sep 16, 2026
- 3:35 pm
ಗಣೇಶ ಮೂರ್ತಿ ಮೆರವಣಿಗೆ ವೇಳೆ ನಿಯಮ ಮೀರಿ ಡಿಜೆ ಬಳಕೆ ಆರೋಪ: 6 ಮಂದಿ ಡಿಜೆ ಮಾಲೀಕರು, ಆಪರೇಟರ್ಗಳ ವಿರುದ್ಧ ಪ್ರಕರಣ
ಗಣೇಶ ಮೆರವಣಿಗೆಯಲ್ಲಿ ನಿಯಮ ಮೀರಿ ಡಿಜೆ ಬಳಸಿದ ಆರೋಪದ ಮೇಲೆ ಹುಬ್ಬಳ್ಳಿ-ಧಾರವಾಡದಲ್ಲಿ 6 ಡಿಜೆ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದನ್ನು ವಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಮಸೀದಿಗಳಲ್ಲಿ ಆಜಾನ್ ಕೂಗುವವರ ಮೇಲೆ ಕೇಸ್ ಹಾಕದ ಇವರು ಡಿಜೆ ಮಾಲೀಕರ ಮೇಲೆ ಕೇಸ್ ಹಾಕ್ತಾರೆ. ಯಾವತ್ತಾದರು ಮಸೀದಿಗಳಿಗೆ ನೋಟಿಸ್ ಕೊಟ್ಟಿದ್ದಾರಾ? ಈ ರೀತಿ ಮಾಡಿಕೊಂಡೇ ಎಲ್ಲ ಕಡೆ ಕಾಂಗ್ರೆಸ್ ಖಾಲಿಯಾಗಿದೆ ಎಂದು ಕೇಸರಿ ಪಡೆ ವಾಗ್ದಾಳಿ ನಡೆಸಿದೆ.
- Sanjayya Chikkamath
- Updated on: Sep 16, 2026
- 3:20 pm
ಎನ್ಡಬ್ಲ್ಯೂಕೆಆರ್ಟಿಸಿಯಲ್ಲಿ ಗಣೇಶ ಉತ್ಸವಕ್ಕೂ ವಿಘ್ನ: ಡಿಪೋ, ವರ್ಕ್ಶಾಪ್ಗಳಲ್ಲಿ ಪ್ರಸಾದ ತಯಾರಿಗೆ ತಡೆ; ಅಧಿಕಾರಿಗಳ ಆದೇಶಕ್ಕೆ ಸಿಬ್ಬಂದಿ ಅಕ್ರೋಶ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗವು ಬಸ್ ಡಿಪೋಗಳಲ್ಲಿ ಗಣೇಶ ಚತುರ್ಥಿ ಪ್ರಸಾದದ ಅಡುಗೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಗ್ನಿ ಸುರಕ್ಷತೆ ಮತ್ತು ಅಗ್ನಿ ಅವಘಡ ನಿಯಂತ್ರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದ್ದಕ್ಕೆ ಸಿಬ್ಬಂದಿ ವರ್ಗದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇದು ಸುರಕ್ಷತೆ ಮತ್ತು ಸಾಂಪ್ರದಾಯಿಕ ಆಚರಣೆಗಳ ನಡುವಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
- Sanjayya Chikkamath
- Updated on: Sep 16, 2026
- 7:40 am
ರಾಜ್ಯ ಸರ್ಕಾರದ ನಾಯಕರ ಟ್ಯೂಬ್ಲೈಟ್ ಲೇಟಾಗಿ ಹೊತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ
ಪಿಎಂ ಕುಸುಮ್ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ‘ಟ್ಯೂಬ್ಲೈಟ್’ ತಡವಾಗಿ ಬೆಳಗಿದೆ ಎಂದು ಹುಬ್ಬಳ್ಳಿಯಲ್ಲಿ ಟೀಕಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಗತ್ತಿನ ಕಠಿಣ ಸ್ಥಿತಿಯ ನಡುವೆಯೂ ದೇಶದ ಆರ್ಥಿಕತೆ ಸದೃಢವಾಗಿದೆ. ಇದನ್ನು ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಅನೇಕರು ಕೊಂಡಿಡಿದ್ದಾರೆ. ಆದ್ರೆ ವಿರೋಧ ಪಕ್ಷದ ನಾಯಕರು ಅಲ್ಲಿನ ಮೆನು ಬಗ್ಗೆ ಮಾತಾಡ್ತಿದ್ದಾರೆ ಎಂದವರು ಟೀಕಿಸಿದ್ದಾರೆ.
- Sanjayya Chikkamath
- Updated on: Sep 15, 2026
- 2:38 pm
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಹುಬ್ಬಳ್ಳಿ ಮೂರು ಸಾವಿರ ಮಠದಿಂದ ಗಣೇಶ ಮೂರ್ತಿಯನ್ನು ಮೆರವಣಿಗಯಲ್ಲಿ ತಗೆದುಕೊಂಡು ಬಂದು ಈದ್ಗಾ ಮೈದಾನದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ಈ ಬಾರಿ ತಲೆ ಮೇಲೆ ಆರ್ ಎಎಸ್ ಎಸ್ ಗಣವೇಷದಾರಿ ದರಿಸೋ ಕಪ್ಪು ಟೋಪಿಯನ್ನು ಗಣೇಶ ಮೂರ್ತಿ ತಲೆ ಮೇಲೆ ಹಾಕಿದ್ದು ಕೈಯಲ್ಲಿ ಭಗವಾ ಧ್ವಜ ನೀಡಲಾಗಿತ್ತು. ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೂಬಸ್ಥ ನಿಯೋಜನೆ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
- Sanjayya Chikkamath
- Updated on: Sep 14, 2026
- 4:28 pm
ಧಾರವಾಡ: ಪರೀಕ್ಷೆ ಬಂದರೂ ಸಿಗದ ಪಠ್ಯಪುಸ್ತಕ; ಕೇಳೋರಿಲ್ಲ ವಿದ್ಯಾರ್ಥಿಗಳ ಗೋಳು
ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಕೊರತೆ ಎದುರಾಗಿದೆ. ಶಾಲೆಗಳು ಆರಂಭವಾಗಿ 4 ತಿಂಗಳಾದರೂ, ಅರ್ಧವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದರೂ, ಧಾರವಾಡ ಸೇರಿದಂತೆ ಹಲವೆಡೆ ಸಾವಿರಾರು ಮಕ್ಕಳಿಗೆ ಇನ್ನೂ ಪಠ್ಯಪುಸ್ತಕಗಳು ಸಿಕ್ಕಿಲ್ಲ. ಸದ್ಯ ಈ ವಿಚಾರ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
- Sanjayya Chikkamath
- Updated on: Sep 11, 2026
- 8:41 pm
‘ಆನ್ಲೈನ್ನಲ್ಲಿಯೇ ಕಥೆ-ಕಾದಂಬರಿ ಓದಿ ಹಣ ಸಂಪಾದಿಸಿ’: ಬಣ್ಣದ ಮಾತು ನಂಬಿ ಹಣ ಕಳೆದುಕೊಂಡ ಸಾವಿರಾರು ಮಂದಿ
ಆನ್ಲೈನ್ನಲ್ಲಿ ಕಥೆ-ಕಾದಂಬರಿ ಓದಿ ಹಣ ಗಳಿಸಿ ಎಂಬ ಆಮಿಷಕ್ಕೆ ಒಳಗಾಗಿ 'ಫ್ಯೂಚರ್ ಬುಕ್ಸ್ ಟೆಕ್ನಾಲಜಿ' ಆ್ಯಪ್ನಲ್ಲಿ ಹೂಡಿಕೆ ಮಾಡಿದ್ದ ಧಾರವಾಡ ಜಿಲ್ಲೆಯ ಸಾವಿರಾರು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಯಾವಾಗ ಹಣ ಮರುಪಾವತಿಯಾಗಲಿಲ್ಲವೋ ಆಗ ನೋಂದಣಿ ಮಾಡಿಕೊಂಡವರು ಕಂಗಾಲಾಗಿದ್ದಾರೆ. ಆ್ಯಪ್ ಕೂಡಾ ಸ್ಥಗಿತವಾಗಿದ್ದರಿಂದ ತಾವು ಮೋಸ ಹೋಗಿದ್ದೇವೆ ಅನ್ನೋದನ್ನು ಅರಿತ ಜನ ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
- Sanjayya Chikkamath
- Updated on: Sep 9, 2026
- 11:41 am
ಹುಬ್ಬಳ್ಳಿ: ಬೂದಿ ಮಿಶ್ರಿತ ಮಣ್ಣಿನಲ್ಲಿ ಚಿನ್ನವಿದೆ ಎಂದು ನಂಬಿಸಿ ವ್ಯಾಪಾರಿಗೆ ₹1.5 ಕೋಟಿ ವಂಚಿಸಿದ ಹರಿಯಾಣದ ವ್ಯಕ್ತಿ
ಹುಬ್ಬಳ್ಳಿಯ ಚಿನ್ನಾಭರಣ ವ್ಯಾಪಾರಿಯೊಬ್ಬರಿಗೆ ವ್ಯಕ್ತಿಯೊಬ್ಬ ಬೂದಿ ಮಿಶ್ರಿತ ಮಣ್ಣಿನಲ್ಲಿ ಚಿನ್ನವಿದೆ ಎಂದು ನಂಬಿಸಿ 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ಮಣ್ಣಿನಲ್ಲಿ ಚಿನ್ನ ಸಿಗದ ಬಳಿಕ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯು ಹರಿಯಾಣ ಮೂಲದವನಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
- Sanjayya Chikkamath
- Updated on: Sep 7, 2026
- 8:02 am
ಗೌರಿ ಲಂಕೇಶ್ ಕೊಲೆ ಕೇಸ್ನ ಆರೋಪಿಯಿಂದ ನೂತನ ಕಮಿಷನರ್ಗೆ ಸನ್ಮಾನ: ರೌಡಿಶೀಟರ್ಗೆ ಪಿಎಸ್ಐರಿಂದ ವಿಐಪಿ ಆತಿಥ್ಯ
ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರಿ ಸ್ವೀಕರಿಸಿದ ಪೊಲೀಸ್ ಆಯುಕ್ತ ಭೂಷಣ್ ಬೋರಸೆಗೆ ಗಾಂಜಾ ಕೇಸ್ ಮತ್ತು ಕೊಲೆ ಆರೋಪಿಯಿಂದ ಸನ್ಮಾನ ಮಾಡಲಾಗಿದೆ. ಇನ್ನೊಂದೆಡೆ ಕಲಬುರಗಿಯ ಗಾಣಗಾಪುರ ಠಾಣೆ PSI ರೌಡಿಶೀಟರ್ರನ್ನು ಠಾಣೆಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಸದ್ಯ ಈ ಪ್ರಕರಣಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
- Sanjayya Chikkamath
- Updated on: Sep 6, 2026
- 3:54 pm
ಮಾರ್ಗಮಧ್ಯೆ ಕೈಕೊಟ್ಟ ಹೆಡ್ಲೈಟ್: ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಲ್ಲೇ 15 ಕಿ.ಮೀ ಬಸ್ ಓಡಿಸಿದ ಚಾಲಕ
ಹುಬ್ಬಳ್ಳಿಯಿಂದ ಅತ್ತಿಗೇರಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ನ ಹೆಡ್ಲೈಟ್ ಸಂಶಿ ಬಳಿ ಕೆಟ್ಟಿತು. ಚಾಲಕ ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಸುಮಾರು 15-20 ಕಿ.ಮೀ. ದೂರ ಚಲಾಯಿಸಿ, ಎಲ್ಲರನ್ನೂ ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸಿದರು. ಗ್ರಾಮೀಣ ಭಾಗದಲ್ಲಿ ಹಳೆಯ ಬಸ್ಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಇದು ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ.
- Sanjayya Chikkamath
- Updated on: Sep 5, 2026
- 7:43 pm