ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.
ಹುಬ್ಬಳ್ಳಿಯಲ್ಲೊಬ್ಬ ಕಾಮುಕ ಡೆಲೇವರಿ ಬಾಯ್: ಆರ್ಡರ್ ಮಾಡಿದ ಮಹಿಳೆಯರ ನಂಬರ್ಗೆ ಅಶ್ಲೀಲ ಸಂದೇಶ ರವಾನೆ
ನೀವೇನಾದರು ಆನಲೈನ್ ಪ್ಲಾಟ್ ಫಾರ್ಮ್ನಲ್ಲಿ ವಸ್ತುಗಳನ್ನು ತರಿಸುತ್ತಿದ್ದರೇ, ಈ ಸ್ಟೋರಿ ಓದಲೇಬೇಕು. ಅದರಲ್ಲೂ ಮಹಿಳೆಯರು ತಮ್ಮ ಮೊಬೈಲ್ ನಂಬರ್ ಹಾಕಿ, ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದರೇ ತುಸು ಜಾಗೃತಿ ವಹಿಸುವುದು ಉತ್ತಮ. ಏಕಂದರೆ ಡೆಲೇವರಿ ಬಾಯ್ ವಸ್ತುಗಳನ್ನು ಡೆಲೇವರಿ ಮಾಡಿದ ನಂತರ, ಆರ್ಡರ್ ಮಾಡಿದ ಮಹಿಳೆಯರ ಮೊಬೈಲ್ ನಂಬರ್ಗಳನ್ನು ಸೇವ್ ಮಾಡಿಕೊಂಡು, ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾನೆ.
- Sanjayya Chikkamath
- Updated on: Jul 2, 2025
- 7:08 pm
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿದ ಬಿಜೆಪಿ
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ನೂತನ ಮೇಯರ್ ಮತ್ತು ಉಪಮೇಯರ್ ಯಾರಾಗುವರು ಎಂಬ ಬಗ್ಗೆ ಭಾರೀ ಚರ್ಚೆಯಾಗಿತ್ತು. ಈ ಸಂಬಂಧ ಕಳೆದ ಹಲವು ದಿನಗಳಿಂದ ಅವಳಿ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಇದೀಗ ಅಂತಿಮವಾಗಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಮತ್ತೊಮ್ಮೆ ಯಶಸ್ವಿಯಾಗಿದೆ.
- Sanjayya Chikkamath
- Updated on: Jun 30, 2025
- 3:45 pm
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಭದ್ರತೆ ಹೆಚ್ಚಳ
ಕರ್ನಾಟಕದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಇತ್ತೀಚೆಗೆ ಗಣನೀಯವಾಗಿ ಹೆಚ್ಚಾಗಿದ್ದು, ಇತ್ತೀಚಿನ ಬೆಳವಣಿಗೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಇ ಮೇಲ್ ಮೂಲಕ ಬೆದರಿಕೆ ಬಂದಿದ್ದು, ಸದ್ಯ ಕಟ್ಟೆಚ್ಚರ ವಹಿಸಲಾಗಿದೆ.
- Sanjayya Chikkamath
- Updated on: Jun 30, 2025
- 9:01 am
ಬಡವರಿಗಾಗಿ ನಿರ್ಮಾಣವಾಗಿರುವ 42 ಸಾವಿರ ಮನೆಗಳಿಗೆ ಸಿಗದ ಉದ್ಘಾಟನಾ ಭಾಗ್ಯ: ಸಿಎಂ, AICC ಅಧ್ಯಕ್ಷರು ಕಾರಣ!
ಕರ್ನಾಟಕದಲ್ಲಿ 42,000ಕ್ಕೂ ಹೆಚ್ಚು ಸ್ಲಂ ಬೋರ್ಡ್ ಮನೆಗಳು ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ. ಹುಬ್ಬಳ್ಳಿಯಲ್ಲಿ 1500ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿದ್ದರೂ ಖಾಲಿ ಉಳಿದಿವೆ. ಮುಖ್ಯಮಂತ್ರಿ ಮತ್ತು ಎಐಸಿಸಿ ಅಧ್ಯಕ್ಷರ ಉದ್ಘಾಟನೆಗಾಗಿ ಕಾಯುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಬಡವರಿಗೆ ಮನೆಗಳನ್ನು ಒದಗಿಸುವಲ್ಲಿನ ವಿಳಂಬಕ್ಕೆ ಸರ್ಕಾರವನ್ನು ತೀವ್ರ ಟೀಕಿಸಲಾಗುತ್ತಿದೆ.
- Sanjayya Chikkamath
- Updated on: Jun 28, 2025
- 7:05 pm
3 ತಿಂಗಳಿನಿಂದ ಹಣ ಬಾರದೇ ಗೃಹಲಕ್ಷ್ಮೀಯರು ಕಂಗಾಲು: ಪ್ರತಿದಿನ ಬ್ಯಾಂಕ್ಗೆ ಅಲೆದು ಸುಸ್ತಾದ ಮಹಿಳೆಯರು
ಕರ್ನಾಟಕದಲ್ಲಿ ಗೃಹಣಿಯರು ಆರ್ಥಿಕವಾಗಿ ಸಭಲರಾಗಬೇಕು ಅನ್ನೋ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಯಲ್ಲಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡ್ತಿದೆ. ಆದ್ರೆ ಪ್ರತಿ ತಿಂಗಳು ಹಣ ಬಾರದೆ ಇರೋದು ಇದೀಗ ಗೃಹಲಕ್ಷ್ಮಿಯರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಕಳೆದ ಮೂರು ತಿಂಗಳಿಂದ ಹಣ ಬಂದಿಲ್ಲವಂತೆ. ಹೀಗಾಗಿ ಆದಷ್ಟು ಬೇಗನೆ ಹಣ ಹಾಕಬೇಕು ಎಂದು ಗೃಹಲಕ್ಷ್ಮಿಯರು ಆಗ್ರಹಿಸುತ್ತಿದ್ದಾರೆ.
- Sanjayya Chikkamath
- Updated on: Jun 26, 2025
- 5:51 pm
ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಿಮ್ಸ್ ಸಂಶೋಧನಾ ವರದಿಯಲ್ಲಿ ಆಘಾತಕಾರಿ ಅಂಶ ಪತ್ತೆ
ಮಕ್ಕಳಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಬಗ್ಗೆ ಹುಬ್ಬಳ್ಳಿಯ ಕಿಮ್ಸ್ ತಜ್ಞರ ತಂಡ ಸಂಶೋಧನೆ ನಡೆಸಿದ್ದು, ಆಘಾತಕಾರಿ ವಿಚಾರಗಳು ತಿಳಿದುಬಂದಿವೆ. ಅತಿಯಾದ ಮೊಬೈಲ್ ಬಳಕೆ, ಅಸಮತೋಲಿತ ಆಹಾರ ಮತ್ತು ದೈಹಿಕ ಚಟುವಟಿಕೆಯ ಕೊರತೆಯೇ ಮುಖ್ಯ ಕಾರಣಗಳೆಂದು ಪತ್ತೆಯಾಗಿದೆ. ಸದ್ಯ ವರದಿಯನ್ನು ಐಸಿಎಂಆರ್ಗೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ವರದಿಯಲ್ಲಿ ಕಂಡುಬಂದ ಆಘಾತಕಾರಿ ವಿಚಾರಗಳ ಮಾಹಿತಿ ಇಲ್ಲಿದೆ.
- Sanjayya Chikkamath
- Updated on: Jun 24, 2025
- 2:42 pm
ಮೀಸಲಾತಿ ಬಗ್ಗೆ ಕೇಂದ್ರ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಜಮೀರ್ ಹೇಳಿಕೆಗೆ ಜೋಶಿ ತಿರುಗೇಟು
ಅಲ್ಪಸಂಖ್ಯಾತರಿಗೆ 15% ಮೀಸಲಾತಿ ವಿಚಾರವಾಗಿ 2019ರಲ್ಲಿ ಕೇಂದ್ರ ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಒಂದು ಸುತ್ತೋಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಸಚಿವ ಪ್ರಲ್ಹಾದ್ ಜೋಶಿ ಸವಾಲು ಹಾಕಿದ್ದಾರೆ. ಆ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
- Sanjayya Chikkamath
- Updated on: Jun 22, 2025
- 1:26 pm
ಹತ್ತಾರು ದೇವರಿಗೆ ಹರಕೆ ಹೊತ್ತ ಬಳಿಕ ಹುಟ್ಟಿದ ಮಗಳ ಸಾವು: ಮದ್ವೆ ಮನೆಯಲ್ಲಿ ಆಗಿದ್ದೇನು?
ದಂಪತಿಗೆ ಅನೇಕ ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ ಹೆತ್ತವರು ಮಕ್ಕಳಿಗಾಗಿ ಹತ್ತಾರು ದೇವರಿಗೆ ಹರಕೆ ಹೊತ್ತಿದ್ದರಂತೆ. ಅನೇಕ ವರ್ಷಗಳ ನಂತರ ಹೆಣ್ಣು ಮಗು ಹುಟ್ಟಿತ್ತು. ಆದರೆ, ಮದುವೆ ಮನೆಯಲ್ಲಿ ಬಿದ್ದ ಸಾಂಬಾರು ಬಾಲಕಿ ಜೀವಕ್ಕೆ ಕುತ್ತು ತಂದಿದೆ. ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
- Sanjayya Chikkamath
- Updated on: Jun 20, 2025
- 7:14 pm
ಮದ್ವೆಯಾಗ್ತೀನಿ ಎಂದು ಕರೆದೊಯ್ದ…ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಇದೊದು ವಿಚ್ರಿತ್ರ ಪ್ರಕರಣ. ಬೆಂಗಳೂರು ಮೂಲದ ಯುವತಿ ಗೋವಾದಲ್ಲಿ ಕೊಲೆಯಾಗಿದ್ದಳು. ಕೊಲೆ ಮಾಡಿದವನು ಕೂಡಾ ಬೆಂಗಳೂರು ನಿವಾಸಿ. ಆದ್ರೆ ಆರೋಪಿ ಸಿಕ್ಕಿಬಿದ್ದಿದ್ದು ಹುಬ್ಬಳ್ಳಿಯಲ್ಲಿ. ಹೌದು ಪ್ರೀತಿಸಿದ ಹುಡಗಿಯನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಗೋವಾಕ್ಕೆ ಕರೆದೊಯ್ದು ಕತ್ತುಸೀಳಿ ಕೊಲೆ ಮಾಡಿದ್ದಾನೆ. ಬಳಿಕ ತಲೆಮರಿಸಿಕೊಂಡಿದ್ದ ಪ್ರಿಯಕರ ಹುಬ್ಬಳ್ಳಿಯಲ್ಲಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಇನ್ನು ಈ ಪ್ರಕರಣದ ಬಗ್ಗೆ ಹುಬ್ಬಳ್ಳಿ ಧಾರಡವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
- Sanjayya Chikkamath
- Updated on: Jun 18, 2025
- 10:28 pm
ಬೆಂಗಳೂರು ಟು ಗೋವಾ: ಮಧುಚಂದ್ರಕ್ಕೆ ಕರೆದೊಯ್ದು ಪ್ರೇಯಿಸಿ ಹತ್ಯೆಗೈದ ಪ್ರಿಯಕರ
ಬೆಂಗಳೂರು ಮೂಲದ ಯುವತಿ ಗೋವಾದಲ್ಲಿ ಕೊಲೆಯಾಗಿದ್ದಾಳೆ. ಕೊಲೆ ಮಾಡಿದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಯುವತಿ ಮತ್ತು ಕೊಲೆ ಮಾಡಿದ ಆರೋಪಿ ಪ್ರೇಮಿಗಳಾಗಿದ್ದರು ಎಂದು ತಿಳಿದುಬಂದಿದೆ. ಪ್ರೇಮ ಸಂಬಂಧದಲ್ಲಿ ಮನಸ್ತಾಪದಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಕೊಲೆ ಹಿಂದಿನ ಅಸಲಿ ಕಾರಣ ಹೊರಬರಬೇಕಿದೆ.
- Sanjayya Chikkamath
- Updated on: Jun 18, 2025
- 9:21 pm
ಇಂಗ್ಲೆಂಡ್ನಲ್ಲಿ ಕರ್ನಾಟಕ ಪೊಲೀಸ್ ಕೀರ್ತಿ ಪತಾಕೆ ಹಾರಿಸಿದ ಮುರುಗೇಶ್ ಚನ್ನಣ್ಣವರ: 13 ಗಂಟೆ ಇಂಗ್ಲಿಷ್ ಕಾಲುವೆ ಈಜಿ ಸಾಧನೆ
ಹುಬ್ಬಳ್ಳಿಯ ಮುರುಗೇಶ್ ಚನ್ನಣ್ಣವರ ಅವರನ್ನೊಳಗೊಂಡ ‘ಪ್ರೈಡ್ ಆಫ್ ಇಂಡಿಯಾ’ ತಂಡವು 13 ಗಂಟೆ 37 ನಿಮಿಷಗಳಲ್ಲಿ 43 ಕಿ.ಮೀ ಉದ್ದದ ಇಂಗ್ಲಿಷ್ ಕಾಲುವೆ ಈಜಿ ದಾಖಲೆ ನಿರ್ಮಿಸಿದೆ. ಬಳಿಕ ಅವರು ಕರ್ನಾಟಕ ಪೊಲೀಸ್ ಧ್ವಜವನ್ನು ಇಂಗ್ಲೆಂಡ್ನಲ್ಲಿ ಹಾರಿಸಿ ಸಂಭ್ರಮಿಸಿದ್ದಾರೆ. ಚನ್ನಣ್ಣವರ ಅವರ ಈ ಐತಿಹಾಸಿಕ ಸಾಧನೆ ಭಾರತಕ್ಕೆ ಕೂಡ ಹೆಮ್ಮೆ ತಂದಿದೆ ಮತ್ತು ಕರ್ನಾಟಕ ಪೊಲೀಸ್ ಇಲಾಖೆಗೆ ಹೊಸ ಕೀರ್ತಿಯನ್ನು ತಂದುಕೊಟ್ಟಿದೆ.
- Sanjayya Chikkamath
- Updated on: Jun 18, 2025
- 9:37 am
ಹಠ ಮಾಡುತ್ತೆಂದು ಮಗುವಿನ ಮುಖ,ಅಂಗಾಲಿಗೆ ಬರೆ: ಛೇ..ಹೆತ್ತವಳಿಂದ ಇದೆಂಥಾ ಕೃತ್ಯ..
ಹುಬ್ಬಳ್ಳಿಯ ಮೂರು ವರ್ಷದ ಮಗುವಿನ ಅಂಗಾಲು, ಮೊಣಕಾಲು, ಮುಖ, ಕೈ ಸೇರಿದಂತೆ ಅನೇಕ ಕಡೆ ಗಾಯಗಳಾಗಿವೆ. ಪುಟ್ಟ ಮಗುವಿಗೆ ಆಗಿರುವ ಗಾಯಗಳನ್ನು ನೋಡಿದರೇ ಕಲ್ಲು ಹೃದಯ ಸಹ ಕರಗುತ್ತದೆ. ಇದು ಆಟವಾಡಲು ಹೋಗಿ ಬಿದ್ದು ಗಾಯ ಮಾಡಿಕೊಂಡಿರುವುದಲ್ಲ, ಹೆತ್ತ ತಾಯಿಯೇ ಬರೆ ಹಾಕಿರುವುದು. ಇದು ಅಚ್ಚರಿಯಾದರೂ ಸತ್ಯ. ಇಲ್ಲಿದೆ ವಿವರ
- Sanjayya Chikkamath
- Updated on: Jun 17, 2025
- 7:53 pm