Daily Devotional: ಅತೀರಥ ಮಹಾರಥರು ಅಂದರೆ ಯಾರು ಗೊತ್ತಾ?
ಕುರುಕ್ಷೇತ್ರ ಯುದ್ಧ, ರಾಮಾಯಣದಂತಹ ಮಹಾಕಾವ್ಯಗಳಲ್ಲಿ ಈ ಪದಗಳು ಪ್ರಮುಖ ಪಾತ್ರ ವಹಿಸುತ್ತವೆ. ಯೋಧನೊಬ್ಬ ಏಕಕಾಲದಲ್ಲಿ ಎಷ್ಟು ಜನರೊಂದಿಗೆ ಯುದ್ಧ ಮಾಡುವ ಸಾಮರ್ಥ್ಯ ಹೊಂದಿದ್ದಾನೆ ಎಂಬುದರ ಆಧಾರದ ಮೇಲೆ ಈ ಶ್ರೇಣಿಗಳನ್ನು ನಿರ್ಧರಿಸಲಾಗುತ್ತದೆ. ಈ ಶ್ರೇಣಿಗಳು ರಥ, ಅತಿರಥ, ಮಹಾರಥ, ಅತಿಮಹಾರಥ ಮತ್ತು ಮಹಾಮಹಾರಥ ಎಂದು ಐದು ವಿಭಾಗಗಳನ್ನು ಒಳಗೊಂಡಿವೆ. ಇವು ಕೇವಲ ಪದಗಳಲ್ಲ, ಬದಲಿಗೆ ಮಹಾ ವ್ಯಕ್ತಿಗಳ ಅಗಾಧ ಶಕ್ತಿ ಮತ್ತು ಸಾಮರ್ಥ್ಯದ ಪ್ರತೀಕಗಳಾಗಿವೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 28: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಅತೀರಥ ಮಹಾರಥರು ಅಂದರೆ ಯಾರು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ನಿತ್ಯ ಜೀವನದಲ್ಲಿ ನಾವು ಬಳಸುವ ಮಾತುಗಳು ಕೆಲವೊಮ್ಮೆ ವ್ಯಂಗ್ಯದಿಂದ ಅಥವಾ ಹೊಗಳಿಕೆಯಿಂದ ಕೂಡಿರುತ್ತವೆ. ಅತಿರಥ ಮಹಾರಥ ಎಂಬ ಪದಗಳೂ ಇವುಗಳಲ್ಲಿ ಸೇರಿವೆ. ಆದರೆ, ಈ ಪದಗಳ ಆಳವಾದ ಮತ್ತು ನಿಜವಾದ ಅರ್ಥವನ್ನು ಅನೇಕರು ತಿಳಿದಿಲ್ಲ. ಇವು ಕೇವಲ ಆಡುಭಾಷೆಯ ಭಾಗವಾಗಿರದೆ, ಪ್ರಾಚೀನ ಇತಿಹಾಸ ಮತ್ತು ಪುರಾಣಗಳಲ್ಲಿ ಯುದ್ಧದಲ್ಲಿ ಯೋಧರ ಸಾಮರ್ಥ್ಯವನ್ನು ವಿವರಿಸಲು ಬಳಸಲಾಗುವ ಪ್ರಮುಖ ಶ್ರೇಣಿಗಳಾಗಿವೆ.
ಕುರುಕ್ಷೇತ್ರ ಯುದ್ಧ, ರಾಮಾಯಣದಂತಹ ಮಹಾಕಾವ್ಯಗಳಲ್ಲಿ ಈ ಪದಗಳು ಪ್ರಮುಖ ಪಾತ್ರ ವಹಿಸುತ್ತವೆ. ಯೋಧನೊಬ್ಬ ಏಕಕಾಲದಲ್ಲಿ ಎಷ್ಟು ಜನರೊಂದಿಗೆ ಯುದ್ಧ ಮಾಡುವ ಸಾಮರ್ಥ್ಯ ಹೊಂದಿದ್ದಾನೆ ಎಂಬುದರ ಆಧಾರದ ಮೇಲೆ ಈ ಶ್ರೇಣಿಗಳನ್ನು ನಿರ್ಧರಿಸಲಾಗುತ್ತದೆ. ಈ ಶ್ರೇಣಿಗಳು ರಥ, ಅತಿರಥ, ಮಹಾರಥ, ಅತಿಮಹಾರಥ ಮತ್ತು ಮಹಾಮಹಾರಥ ಎಂದು ಐದು ವಿಭಾಗಗಳನ್ನು ಒಳಗೊಂಡಿವೆ. ಇವು ಕೇವಲ ಪದಗಳಲ್ಲ, ಬದಲಿಗೆ ಮಹಾ ವ್ಯಕ್ತಿಗಳ ಅಗಾಧ ಶಕ್ತಿ ಮತ್ತು ಸಾಮರ್ಥ್ಯದ ಪ್ರತೀಕಗಳಾಗಿವೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
ರೀಲ್ಸ್ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಬಸ್ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ

