ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ 9 ಡಿಜಿಟಲ್ನಲ್ಲಿ ವೃತ್ತಿ ಜೀವನದ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.
ಶಾಲೆಯೋ, ಹಳ್ಳಿಯೋ! ಹೇಗಿತ್ತು ನೋಡಿ ಮಯೂರ ಗ್ಲೋಬಲ್ ಸ್ಕೂಲ್ ಸಂಕ್ರಾಂತಿ ಸಂಭ್ರಮ
ದಾವಣಗೆರೆಯ ಮಯೂರ ಗ್ಲೋಬಲ್ ಸ್ಕೂಲ್ನಲ್ಲಿ ವಿಶೇಷ ಸಂಕ್ರಾಂತಿ ಸಂಭ್ರಮ ಆಯೋಜಿಸಲಾಗಿತ್ತು. ಶಾಲಾ ಆವರಣವನ್ನು ಹಳ್ಳಿಯ ವಾತಾವರಣದಂತೆ ರೂಪಿಸಿ, ಮಕ್ಕಳಿಗೆ ಗ್ರಾಮೀಣ ಬದುಕಿನ ಸೊಗಡನ್ನು ಪರಿಚಯಿಸಲಾಯಿತು. ಗೋ ಪೂಜೆ, ಬೀಸೋಕಲ್ಲು, ಎಳ್ಳು-ಬೆಲ್ಲ ಹಂಚಿಕೆ, ಸಾಂಪ್ರದಾಯಿಕ ಅಡುಗೆ ತಯಾರಿ ಮೂಲಕ ಸಂಕ್ರಾಂತಿ ಹಬ್ಬದ ಮಹತ್ವ ಮತ್ತು ಕೃಷಿ ಸಂಬಂಧವನ್ನು ಮಕ್ಕಳಿಗೆ ತಿಳಿಸಲಾಯಿತು. ಮಕ್ಕಳು ಸಂಭ್ರಮದಿಂದ ಪಾಲ್ಗೊಂಡ ಸಂಕ್ರಾಂತಿಯ ಫೋಟೋಗಳು ಇಲ್ಲಿವೆ, ನೋಡಿ.
- Bhavana Hegde
- Updated on: Jan 14, 2026
- 2:59 pm
ಸಂಕ್ರಾಂತಿ ಸಂಭ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಸೌಮ್ಯ ರೆಡ್ಡಿ!
ನಗರದಲ್ಲಿ ಮಕರ ಸಂಕ್ರಾಂತಿ (Makar Sankranti) ಹಬ್ಬದ ಅಂಗವಾಗಿ ಲೋಹ್ರಿ ಆಚರಣೆಯನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ನಗರದ ಪಂಜಾಬಿ ಸಮುದಾಯದ ಮುಖಂಡರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸೌಮ್ಯಾರೆಡ್ಡಿ ಭಾಗವಹಿಸಿ ಸಂಭ್ರಮಪಟ್ಟರು. ಈ ಹಬ್ಬದ ಆಚರಣೆಯು ಕೆಆರ್ ಮಾರುಕಟ್ಟೆ ಪ್ರದೇಶ ಸೇರಿದಂತೆ ಹಲವೆಡೆ ಹಬ್ಬದ ಕಳೆ ಹೆಚ್ಚಿಸಿತ್ತು. ಕಾರ್ಯಕ್ರಮದ ವೇಳೆ ಡೋಲು ಸದ್ದು ಕೇಳುತ್ತಿದ್ದಂತೆ, ಸೌಮ್ಯಾರೆಡ್ಡಿ ಅವರು ಸಖತ್ ಡ್ಯಾನ್ಸ್ ಮಾಡಿ ನೆರೆದಿದ್ದವರ ಗಮನ ಸೆಳೆದರು.
- Bhavana Hegde
- Updated on: Jan 14, 2026
- 2:19 pm
ಟ್ರಾಫಿಕ್ ಪೊಲೀಸರ ಎಐ ಕ್ಯಾಮರಾಗಳ ಕಣ್ಣುತಪ್ಪಿಸ್ತಿವೆ ಈ ನಂಬರ್ ಪ್ಲೇಟ್ಗಳು!
ಬೆಂಗಳೂರಿನಲ್ಲಿ ಡಿಫೆಕ್ಟಿವ್ ಮತ್ತು ಫ್ಯಾನ್ಸಿ ನಂಬರ್ ಪ್ಲೇಟ್ಗಳು AI ಕ್ಯಾಮೆರಾಗಳ ಪತ್ತೆಯಿಂದ ತಪ್ಪಿಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪರಾಧ ತನಿಖೆಗೆ ಅಡ್ಡಿಯಾಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಲ್ಲಿ 4.2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, HSRP ನಂಬರ್ ಪ್ಲೇಟ್ಗಳ ಕಡ್ಡಾಯಗೊಳಿಸುವುದರಿಂದ ಈ ಸವಾಲುಗಳಿಗೆ ಪರಿಹಾರ ಒದಗುತ್ತದೆಯೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
- Bhavana Hegde
- Updated on: Jan 14, 2026
- 1:44 pm
ಬೆಂಗಳೂರಿಗರೆ ಎಚ್ಚರ! ಅತಿಯಾದ ಚಳಿಯಿಂದ ಬರುತ್ತಿವೆ ಸಾಂಕ್ರಾಮಿಕ ರೋಗಗಳು
ಬೆಂಗಳೂರಿನಲ್ಲಿ ಹೆಚ್ಚಿದ ಚಳಿಯಿಂದ SARI, ILI, ಮತ್ತು ತೀವ್ರ ಅತಿಸಾರ ಪ್ರಕರಣಗಳು ಏರಿಕೆ ಕಂಡಿದ್ದು, ಜ್ವರ, ಕೆಮ್ಮು, ನೆಗಡಿ, ಮೈಕೈ ನೋವಿನಂತಹ ಸೀಸನಲ್ ಫ್ಲೂ ಲಕ್ಷಣಗಳು ಕಂಡುಬರುತ್ತಿವೆ.ಹೀಗಾಗಿ ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಲಸಿಕೆ ಪಡೆಯಲು ಆರೋಗ್ಯ ಇಲಾಖೆ ಸೂಚಿಸಿದೆ. ವೈದ್ಯರು ಮನೆಯ ಊಟ ಸೇವನೆ, ಬಿಸಿ ನೀರು ಕುಡಿಯುವುದರ ಜೊತೆಗೆ ಉತ್ತಮ ನೈರ್ಮಲ್ಯ ಕಾಪಾಡುವ ಮೂಲಕ ಚಳಿಗಾಲದ ಕಾಯಿಲೆಗಳಿಂದ ದೂರವಿರಲು ಸಲಹೆ ನೀಡಿದ್ದಾರೆ.
- Bhavana Hegde
- Updated on: Jan 14, 2026
- 11:56 am
ಪ್ರಲ್ಹಾದ ಜೋಶಿ ‘ಕರ್ನಾಟಕದ ಮೋದಿ’: ಜೋಶಿ ಕಾರ್ಯವೈಖರಿಗೆ ಅನಿವಾಸಿ ಭಾರತೀಯರ ಭರ್ಜರಿ ಮೆಚ್ಚುಗೆ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಯುಎಇ ಕನ್ನಡ ಪಾಠಶಾಲೆಯ ಶಶಿಧರ್ ನಾಗರಾಜಪ್ಪ 'ಕರ್ನಾಟಕದ ಮೋದಿ' ಎಂದು ಬಣ್ಣಿಸಿದ್ದಾರೆ. ರಾಜ್ಯದ ಅಭಿವೃದ್ಧಿ, ಜನಪರ ಕಾಳಜಿ, ಹಾಗೂ ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸುವ ಜೋಶಿಯವರನ್ನು ಶಶಿಧರ್ ಪ್ರಶಂಸಿಸಿದ್ದಾರೆ. ವಿದೇಶದಲ್ಲಿ ಕನ್ನಡ ಭಾಷೆ-ಸಂಸ್ಕೃತಿ ಸಂರಕ್ಷಣೆಗೂ ಜೋಶಿ ಬೆಂಬಲ ನೀಡುತ್ತಿದ್ದಾರೆ ಎಂದು ಹೊಗಳಿದ್ದಾರೆ.
- Bhavana Hegde
- Updated on: Jan 14, 2026
- 11:09 am
Namma Metro: ಕಾರ್ಡ್ ಬೇಡ, ಡೆಪಾಸಿಟ್ ಬೇಡ! ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಮೊಬೈಲ್ QR ಪಾಸ್ ಆರಂಭ
ಬೆಂಗಳೂರು ಮೆಟ್ರೋ ಹೊಸ ಮೊಬೈಲ್ ಕ್ಯೂಆರ್ ಆಧಾರಿತ ಪಿರಿಯಾಡಿಕಲ್ ಪಾಸ್ಗಳನ್ನು ಪರಿಚಯಿಸಿದ್ದು, ಒಂದರಿಂದ 5 ದಿನಗಳ ಅನಿಯಮಿತ ಪ್ರಯಾಣಕ್ಕೆ ಅವಕಾಶ ನೀಡುತ್ತಿದೆ. ಈ ಡಿಜಿಟಲ್ ಪಾಸ್ಗಳು 'ನಮ್ಮ ಮೆಟ್ರೋ' ಅಪ್ಲಿಕೇಶನ್ನಲ್ಲಿ ಲಭ್ಯವಿದ್ದು, ಯಾವುದೇ ಭದ್ರತಾ ಠೇವಣಿ ಇಲ್ಲದೆ ಪಡೆಯಬಹುದಾಗಿದೆ. ಹೊಸ ದರಗಳು ಸ್ಮಾರ್ಟ್ ಕಾರ್ಡ್ಗಿಂತ ಕಡಿಮೆ ಇದ್ದು, ಪ್ರಯಾಣಿಕರ ಸಮಯ ಉಳಿತಾಯ ಮತ್ತು ಸುಗಮ ಪ್ರಯಾಣಕ್ಕೆ ಸಹಾಯಕವಾಗಿದೆ.
- Bhavana Hegde
- Updated on: Jan 14, 2026
- 10:13 am
Bengaluru Air Quality: ಇನ್ನೂ ಅನಾರೋಗ್ಯಕರವಾಗಿಯೇ ಉಳಿದಿದೆ ಬೆಂಗಳೂರಿನ ಗಾಳಿ!
ಇಷ್ಟು ದಿನ ಅತ್ಯಂತ ಕಳಪೆಯಿದ್ದ ಬೆಂಗಳೂರಿನ ಗಾಳಿಯ ಗುಣಮಟ್ಟ ಇಂದು ಸ್ವಲ್ಪ ಸುಧಾರಣೆ ಕಂಡಿದೆ. ಕಳೆದ ತಿಂಗಳು ಬೆಂಗಳೂರಿನ ಹಲವು ಪ್ರದೇಶಗಳ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿತ್ತು. ಇದೀಗ ಬೆಂಗಳೂರಿನೊಂದಿಗೆ ರಾಜ್ಯದ ವಿವಿಧೆಡೆಯಲ್ಲಿ ಏರ್ ಕ್ವಾಲಿಟಿ ತಕ್ಕಮಟ್ಟಿಗೆ ಸುಧಾರಿಸಿದೆ. ಆದರೆ ಈ ಗುಣಮಟ್ಟವೂ ಅನಾರೋಗ್ಯಕರ ಮಟ್ಟದಲ್ಲಿಯೇ ಇದ್ದು, ಹೀಗೆ ಮುಂದುವರೆದರೆ ಈ ವರ್ಷವೂ ಗಾಳಿಯ ಗುಣಮಟ್ಟ ಇನ್ನಷ್ಟು ಕುಸಿಯಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ತಜ್ಞರು ಸೂಚನೆ ನೀಡಿದ್ದಾರೆ.
- Bhavana Hegde
- Updated on: Jan 14, 2026
- 8:53 am
ಇವಿ ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪಿಸುವುದು ಇನ್ನು ಸುಲಭ; ಹೊಸ ಪೋರ್ಟಲ್ ಲಾಂಚ್ ಮಾಡಿದ ಬೆಸ್ಕಾಂ
ರಾಜ್ಯದಲ್ಲಿ ವಿದ್ಯುತ್ ವಾಹನ ಮೂಲಸೌಕರ್ಯ ಬಲಪಡಿಸಲು ಬೆಸ್ಕಾಂ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಪ್ರಾರಂಭಿಸಿದೆ. ಇದು ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಭೂಮಾಲೀಕರು, ಸಂಸ್ಥೆಗಳು ಹಾಗೂ ಆಪರೇಟರ್ಗಳಿಗೆ ಸಿಂಗಲ್-ವಿಂಡೋ ವ್ಯವಸ್ಥೆ ಒದಗಿಸುತ್ತದೆ. ಕರ್ನಾಟಕದಾದ್ಯಂತ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಇದು ವೇಗ ನೀಡಲಿದ್ದು, ಸ್ಥಳೀಯ ಸಮುದಾಯಗಳಿಗೆ ಆರ್ಥಿಕವಾಗಿ ನೆರವಾಗಲಿದೆ ಎಂದು ಬೆಸ್ಕಾಂ ಅಭಿಪ್ರಾಯಪಟ್ಟಿದೆ.
- Bhavana Hegde
- Updated on: Jan 14, 2026
- 8:34 am
ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಒಣ ಹವೆ, ಬೆಂಗಳೂರಿಲ್ಲಿ ಮುಂದುವರೆದ ಚಳಿಯಬ್ಬರ
Karnataka Weather: ಕರ್ನಾಟಕದಲ್ಲಿ ತೀವ್ರ ಚಳಿ ಮತ್ತು ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣವಿದ್ದು, ಕನಿಷ್ಠ 15°C ತಾಪಮಾನ ದಾಖಲಾಗಿದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಬೆಚ್ಚನೆಯ ಉಡುಪು ಧರಿಸಲು ಮತ್ತು ಸಮತೋಲಿತ ಆಹಾರ ಸೇವಿಸಲು ವೈದ್ಯರು ಸಲಹೆ ನೀಡಿದ್ದಾರೆ. ಈ ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ.
- Bhavana Hegde
- Updated on: Jan 14, 2026
- 7:44 am
Daily Devotional: ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಭಗವಾನರನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶನಿ ಒಂದು ರಾಶಿಯಲ್ಲಿ ಎರಡುವರೆ ವರ್ಷ ಸ್ಥಿತನಾಗಿದ್ದು, ಅದರ ಸಂಚಾರ ಮತ್ತು ದೃಷ್ಟಿಯು ವ್ಯಕ್ತಿಯ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಶನಿಯು ಏಕಾಂಗಿಯಾಗಿರುವಾಗ ವಾತ ಕಾಯಿಲೆಗಳು, ನರ ದೌರ್ಬಲ್ಯ, ಪ್ಯಾರಾಲಿಸಿಸ್, ಕಿಡ್ನಿ ವೈಫಲ್ಯ, ಅಜೀರ್ಣ ಮತ್ತು ಕೂದಲು ಉದುರುವಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ನೀಡಬಹುದು.
- Bhavana Hegde
- Updated on: Jan 14, 2026
- 7:01 am
Horoscope Today 14 January: ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಇಂದು ಭೋಗಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇದು ಮಕರ ಸಂಕ್ರಾಂತಿಯ ಮುನ್ನಾ ದಿನದ ಹಬ್ಬವಾಗಿದೆ. ಈ ದಿನ ಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ದಹಿಸಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಸಂಪ್ರದಾಯವಿದೆ. ಅಲ್ಲದೆ, ಇಂದು ಮಧ್ಯಾಹ್ನ 3 ಗಂಟೆ 13 ನಿಮಿಷಕ್ಕೆ ರವಿ ಗ್ರಹವು ಧನುಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದರೊಂದಿಗೆ ಧನುರ್ಮಾಸ ಪೂಜೆ ಸಂಪನ್ನಗೊಳ್ಳುತ್ತದೆ. ನಾಳೆಯಿಂದ ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗಲಿದೆ. ಚಂದ್ರನು ವೃಶ್ಚಿಕ ರಾಶಿಯ ಅನುರಾಧ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
- Bhavana Hegde
- Updated on: Jan 14, 2026
- 7:01 am
ಬಿ-ಖಾತಾದಿಂದ ಎ-ಖಾತಾಗೆ ಕನ್ವರ್ಟ್ ಆಗಲು ನಿಯಮವನ್ನು ಕಠಿಣಗೊಳಿಸಿದ ಜಿಬಿಎ; ಯಾವೆಲ್ಲಾ ದಾಖಲೆಗಳು ಬೇಕು?
ಬೆಂಗಳೂರಿನಲ್ಲಿ ಬಿ-ಖಾತಾ ಆಸ್ತಿಗಳನ್ನು ಎ-ಖಾತಾಗೆ ಪರಿವರ್ತಿಸಲು ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ. ಪಾರದರ್ಶಕತೆ ಹೆಚ್ಚಿಸಲು, ಇ-ಖಾತಾ ಹೊಂದಿರುವುದು ಕಡ್ಡಾಯ. ನಂತರವೇ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು. ಅನುಮೋದಿತ ಅಪಾರ್ಟ್ಮೆಂಟ್ಗಳಿಗೆ ಇದು ಅನ್ವಯವಾಗಿತ್ತದೆ. ಹಾಗಿದ್ದರೆ ಬಿ-ಖಾತಾ ಹೊಂದಿರುವ ಅಪಾರ್ಟ್ಮೆಂಟ್ ಮಾಲೀಕರು ಹೇಗೆ ಎ-ಖಾತಾಗೆ ಕನ್ವರ್ಟ್ ಆಗಬಹುದೆಂಬ ಮಾಹಿತಿ ಇಲ್ಲಿದೆ.
- Bhavana Hegde
- Updated on: Jan 12, 2026
- 3:01 pm