ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ 9 ಡಿಜಿಟಲ್ನಲ್ಲಿ ವೃತ್ತಿ ಜೀವನದ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.
ಕರ್ನಾಟಕದ ನಾಲ್ಕು ರೈಲ್ವೇ ಸ್ಟೇಷನ್ಗಳ ಮರುನಾಮಕರಣ ಕೋರಿ ಎಂಬಿ ಪಾಟೀಲ್ ಪತ್ರ
ರಾಜ್ಯದ ನಾಲ್ಕು ರೈಲ್ವೆ ನಿಲ್ದಾಣಗಳಿಗೆ ಕರ್ನಾಟಕದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಂಪರೆಗೆ ಕೊಡುಗೆ ನೀಡಿದ ಸಂತರ ಹೆಸರನ್ನಿಡಲು ಸರ್ಕಾರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದೆ. ವಿಜಯಪುರ, ಬೀದರ್, ಬೆಳಗಾವಿ ಮತ್ತು ಸುರಗೊಂಡನಕೊಪ್ಪ ನಿಲ್ದಾಣಗಳಿಗೆ ಮರುನಾಮಕರಣ ಮಾಡಲು ಪ್ರಸ್ತಾಪಿಸಲಾಗಿದೆ. ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
- Bhavana Hegde
- Updated on: Nov 14, 2025
- 3:36 pm
ಬಿಹಾರದ ಚುನಾವಣಾ ಫಲಿತಾಂಶ ಕುರಿತು ಬಿಕೆ ಹರಿಪ್ರಸಾದ್ ವ್ಯಂಗ್ಯ; ಚುನಾವಣಾ ಆಯೋಗ ಆರ್ಎಸ್ಎಸ್ ಘಟಕವೇ?
ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 65 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಪ್ರಜಾಪ್ರಭುತ್ವದ ವಿರೋಧಿ ಕ್ರಮವೆಂದು ಅವರು ಆರೋಪಿಸಿದ್ದಾರೆ. ಚುನಾವಣಾ ಆಯೋಗವು ಆರ್.ಎಸ್.ಎಸ್. ಘಟಕದಂತೆ ಕಾರ್ಯನಿರ್ವಹಿಸುತ್ತಿದೆ ಮತ್ತು ಬಿಜೆಪಿ ವಿರೋಧಿ ಮತಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
- Bhavana Hegde
- Updated on: Nov 14, 2025
- 2:52 pm
Saalumarada Thimmakka Death: ತಿಮ್ಮಕ್ಕ ಸಾಲುಮರದ ತಿಮ್ಮಕ್ಕನಾಗಿದ್ದು ಹೇಗೆ ಗೊತ್ತಾ?
ಸಾಲುಮರದ ತಿಮ್ಮಕ್ಕ ನಿಧನ: ಸಾಲು ಸಾಲು ನೂರಾರು ಮರಗಳನ್ನು ನೆಟ್ಟು, ಪೋಷಿಸಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಮ್ಮನ್ನಗಲಿದ್ದಾರೆ. ತುಮಕೂರಿನಲ್ಲಿ ಜನಿಸಿದ ಸಾಲುಮರದ ತಿಮ್ಮಕ್ಕ ಮರಗಳನ್ನೇ ಮಕ್ಕಳೆಂದು ಪೋಷಿಸಿದ್ದಾರೆ. ತಮ್ಮ ಜೀವನದುದ್ದಕ್ಕೂ ಪರಿಸರ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ತಿಮ್ಮಕ್ಕ ವೃಕ್ಷಮಾತೆ ಆಗಿದ್ದು ಹೇಗೆ ಎಂಬುದು ಇಲ್ಲಿದೆ ನೋಡಿ.
- Bhavana Hegde
- Updated on: Nov 14, 2025
- 1:36 pm
ರಿಲ್ಯಾಕ್ಸ್ ಮೂಡಲ್ಲಿ ರಾಮಲಿಂಗಾ ರೆಡ್ಡಿ; ಶಟಲ್, ಕೇರಂ ಆಡಿ KSRTC ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸಚಿವ
ಸಚಿವ ರಾಮಲಿಂಗಾ ರೆಡ್ಡಿ ಅವರು ಶಾಂತಿನಗರದಲ್ಲಿ KSRTC ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಶಟಲ್, ಕೇರಂ, ಚೆಸ್ ಆಡುವ ಮೂಲಕ ನೌಕರರನ್ನು ಪ್ರೋತ್ಸಾಹಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ಸಿಬ್ಬಂದಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕ್ರೀಡೆಗಳು ನೌಕರರ ಆರೋಗ್ಯ, ಒತ್ತಡ ನಿವಾರಣೆ ಮತ್ತು ಮನರಂಜನೆಗೆ ಸಹಕಾರಿ ಎಂದು ಸಚಿವರು ಹೇಳಿದರು.
- Bhavana Hegde
- Updated on: Nov 14, 2025
- 12:24 pm
ಬಾಕಿ ಇರುವ ಎಲ್ಲಾ ವಾಹನ ನೋಂದಣಿ ಅರ್ಜಿ ನವೆಂಬರ್ ಒಳಗೆ ವಿಲೇವಾರಿ ಮಾಡಿ: ಆರ್ಟಿಒಗಳಿಗೆ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನವೆಂಬರ್ 30ರೊಳಗೆ ಎಲ್ಲಾ ಬಾಕಿ ವಾಹನ ನೋಂದಣಿ ಅರ್ಜಿಗಳನ್ನು ಇತ್ಯರ್ಥಪಡಿಸಲು ಆರ್ಟಿಓಗಳಿಗೆ ಸೂಚಿಸಿದ್ದಾರೆ. ಅವರು ಬಸ್ಸುಗಳಲ್ಲಿ ತುರ್ತು ನಿರ್ಗಮನ ಬಾಗಿಲು ಕಡ್ಡಾಯಗೊಳಿಸಿ, ಸುರಕ್ಷತೆಗೆ ಆದ್ಯತೆ ನೀಡುವಂತೆ ತಿಳಿಸಿದ್ದಾರೆ. ಅದಲ್ಲದೆ ಅಖಿಲ ಭಾರತ ಪರವಾನಗಿ ಬಸ್ಸುಗಳಿಗೆ ತೆರಿಗೆ ವಿಧಿಸುವ ಮೂಲಕ ಇಲಾಖೆಯ ಆದಾಯ ಗುರಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
- Bhavana Hegde
- Updated on: Nov 14, 2025
- 8:44 am
Karnataka Weather Today: ರಾಜ್ಯದಲ್ಲಿಂದು ಒಣ ಹವೆಯ ಸಾಧ್ಯತೆ; ಹವಾಮಾನ ಇಲಾಖೆ ವರದಿ
Karnataka Weather: ಇಂದು ಕರಾವಳಿಯ ಜಿಲ್ಲೆಗಳಲ್ಲಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಲ್ಲಿ ಮೋಡಕವಿದ ವಾತಾವರಣದ ಸಾಧ್ಯತೆ ಇದ್ದರೆ, ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
- Bhavana Hegde
- Updated on: Nov 14, 2025
- 7:16 am
Daily Devotional: ಮನೆಯಲ್ಲಿ ಬಾತ್ರೂಮ್ ವಾಸ್ತು ಸಹ ಮುಖ್ಯ ಯಾಕೆ ಗೊತ್ತಾ?
ಮನೆಯಲ್ಲಿ ಬಾತ್ರೂಮ್ ವಾಸ್ತು ಕೂಡ ಅಷ್ಟೇ ಮುಖ್ಯ. ಮುರಿದ ಬಕೆಟ್, ಮಗ್, ಹಳೆಯ ಸ್ಕ್ರಾಪ್, ಒದ್ದೆ ಬಟ್ಟೆಗಳು, ಸೋರುವ ಟ್ಯಾಪ್ಗಳನ್ನು ಬಾತ್ರೂಮ್ನಲ್ಲಿ ಇಡಬೇಡಿ. ಬಕೆಟ್ನಲ್ಲಿ ಯಾವಾಗಲೂ ಸ್ವಲ್ಪ ನೀರು ಇಡಿ. ಸ್ವಚ್ಛತೆ ಮತ್ತು ಗಾಳಿ ಆಡುವ ವಾತಾವರಣ ನಿರ್ವಹಿಸಿ. ಇದು ಮನೆಯಲ್ಲಿ ಆರ್ಥಿಕ ಲಾಭ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ. ಈ ವಾಸ್ತು ಸಲಹೆಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸುಖ ಸಮೃದ್ಧಿ ಹೆಚ್ಚುತ್ತದೆ.
- Bhavana Hegde
- Updated on: Nov 14, 2025
- 6:52 am
Horoscope Today 14 November: ಇಂದು ಈ ರಾಶಿಯವರಿಗೆ ಎಲ್ಲವನ್ನೂ ಬಿಟ್ಟುಕೊಡುವ ಮನೋಭಾವ ಬರಲಿದೆ
ಡಾ. ಬಸವರಾಜ ಗುರೂಜಿ ಅವರು ನವೆಂಬರ್ 14, 2025ರ ದೈನಂದಿನ ರಾಶಿ ಭವಿಷ್ಯವನ್ನು ನೀಡಿದ್ದಾರೆ. ಮೇಷ ರಾಶಿಯವರಿಗೆ ವ್ಯಾಪಾರದಲ್ಲಿ ಶುಭ, ಆಕಸ್ಮಿಕ ಪ್ರಯಾಣ ಯೋಗವಿದೆ. ಮಕ್ಕಳ ಬಗ್ಗೆ ಚಿಂತೆ, ಉದ್ಯೋಗದಲ್ಲಿ ಮಾತುಕತೆಯಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯ ಉತ್ತಮವಾಗಿರುತ್ತದೆ. ಆಸ್ತಿ ಮತ್ತು ಪ್ರೇಮ ವಿಚಾರಗಳಲ್ಲಿ ನಿರ್ಧಾರಗಳು ಉತ್ತಮ ಫಲ ನೀಡಲಿವೆ. ಕೇಸರಿ ಬಣ್ಣ ಮತ್ತು ಏಳು ಅದೃಷ್ಟ ಸಂಖ್ಯೆ. ಓಂ ಚಂದ್ರ ರೂಪಾಯೈ ನಮಃ ಮಂತ್ರ ಜಪಿಸಿ.
- Bhavana Hegde
- Updated on: Nov 14, 2025
- 6:49 am
ದೆಹಲಿ ಬ್ಲಾಸ್ಟ್ನಲ್ಲಿ ರಾಜಕಾರಣದ ವಾಸನೆ ಬರ್ತಿದೆ: ಶಾಸಕ ಚನ್ನಬಸಪ್ಪ
ದೆಹಲಿಯಲ್ಲಿ ನಡೆದ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಚನ್ನಬಸಪ್ಪ ಈ ಘಟನೆಯಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಭಯೋತ್ಪಾದಕ ಕೃತ್ಯ ನಡೆದಾಗಲೆಲ್ಲಾ ಕಾಂಗ್ರೆಸ್ ಪಕ್ಷವು "ಸಾಫ್ಟ್ ಕಾರ್ನರ್" ತೋರಿಸುತ್ತದೆ. ಭಯೋತ್ಪಾದನೆ ಬೆಳವಣಿಗೆಗೆ ಕಾಂಗ್ರೆಸ್ನ ಮಾನಸಿಕತೆ ದೊಡ್ಡ ಶಕ್ತಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಘಟನೆಯನ್ನು ಚುನಾವಣೆಗಳೊಂದಿಗೆ ಲಿಂಕ್ ಮಾಡಿ ಮಾತನಾಡಿರುವುದು ಅಕ್ಷಮ್ಯವಾಗಿದೆ. ಭಯೋತ್ಪಾದಕರಿಗೆ ಶಕ್ತಿ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದಿದ್ದಾರೆ.
- Bhavana Hegde
- Updated on: Nov 12, 2025
- 3:20 pm
ನೆಲಮಂಗಲ ಫ್ಲೈಓವರ್ನಲ್ಲಿ ಮತ್ತೆ ಪಂಕ್ಚರ್ ಮಾಫಿಯಾ ಕಾಟ; ಕಠಿಣ ಕ್ರಮಕ್ಕೆ ಸ್ಥಳೀಯರ ಒತ್ತಾಯ
ಬೆಂಗಳೂರಿನ ನೆಲಮಂಗಲ ಫ್ಲೈಓವರ್ನಲ್ಲಿ ಮತ್ತೆ ಪಂಕ್ಚರ್ ಮಾಫಿಯಾ ಹಾವಳಿ ಹೆಚ್ಚಾಗಿದೆ. ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಹರಡಿ ವಾಹನಗಳ ಟೈರ್ಗಳಿಗೆ ಹಾನಿ ಮಾಡಲಾಗುತ್ತಿದೆ. ಇದು ವಾಹನ ಸವಾರರಿಗೆ ಆರ್ಥಿಕ ನಷ್ಟದ ಜೊತೆಗೆ ಜೀವಾಪಾಯವನ್ನೂ ತರುತ್ತಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.ರಸ್ತೆ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದ್ದು, ಈ ಕುರಿತು ಕರ್ನಾಟಕ ಪೋರ್ಟ್ಫೋಲಿಯೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
- Bhavana Hegde
- Updated on: Nov 12, 2025
- 2:16 pm
ರಾಯಚೂರು: ವಿಚಾರಣೆಗೆ ಬಂದ ಪೊಲೀಸರನ್ನೇ ಕಂಬಕ್ಕೆ ಕಟ್ಟಿ ಥಳಿಸಿದ ದಂಪತಿ; ಆರೋಪಿಗಳು ಅರೆಸ್ಟ್
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾದಲ್ಲಿ ಕೌಟುಂಬಿಕ ಕಲಹದ ವಿಚಾರಣೆಗೆ ತೆರಳಿದ್ದ ಎಎಸ್ಐ ಮತ್ತು ಪಿಎಸ್ಐ ಮೇಲೆ ದಂಪತಿ ಹಲ್ಲೆ ನಡೆಸಿದ್ದಾರೆ. ವಿಚಾರಣೆಗೆ ಬಂದ ಪೊಲೀಸರನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರೂ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Bhavana Hegde
- Updated on: Nov 12, 2025
- 12:59 pm
ಆನ್ಲೈನ್ ಹೂಡಿಕೆ ಹೆಸರಲ್ಲಿ ವಂಚನೆ: 2 ಕೋಟಿ ರೂ. ಕಳೆದುಕೊಂಡ ಮಂಗಳೂರಿನ ವ್ಯಕ್ತಿ
ಮಂಗಳೂರಿನಲ್ಲಿ ಸೈಬರ್ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 43 ವರ್ಷದ ವ್ಯಕ್ತಿಯೊಬ್ಬರು ಆನ್ಲೈನ್ ಹೂಡಿಕೆ ವಂಚನೆಯಲ್ಲಿ 2 ಕೋಟಿ ರೂ.ಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ವಾಟ್ಸಾಪ್ ಮೂಲಕ ಸಂಪರ್ಕಕ್ಕೆ ಬಂದ ವಂಚಕರು, ದುಪ್ಪಟ್ಟು ಹಣದ ಆಮಿಷವೊಡ್ಡಿ ವ್ಯಕ್ತಿಯನ್ನು ನಂಬಿಸಿದ್ದರು. ನೊಂದ ವ್ಯಕ್ತಿ ತಮ್ಮ ಮತ್ತು ಕುಟುಂಬದವರ ಖಾತೆಗಳಿಂದ ಹಣ ವರ್ಗಾಯಿಸಿದ್ದು, ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Bhavana Hegde
- Updated on: Nov 12, 2025
- 9:40 am