ಪ್ರಧಾನಿ ಮೋದಿ ಇಂಧನ ಮಿತವ್ಯಯದ ಕರೆ: ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ
ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಮಿತವ್ಯಯದ ಕರೆಯನ್ನು ಅನುಸರಿಸಿ ಭದ್ರತಾ ಬೆಂಗಾವಲು ವಾಹನಗಳನ್ನು ತ್ಯಜಿಸಿದ್ದಾರೆ. ತುಮಕೂರಿನಲ್ಲಿ ದಿಶಾ ಸಭೆಗೆ ಕೇವಲ ಸ್ಥಳೀಯ ಬೆಂಗಾವಲಿನೊಂದಿಗೆ ಆಗಮಿಸಿದ ಸಚಿವರು, ಆರ್.ಪಿ.ಎಫ್. ಸೇರಿದಂತೆ ಇತರೆ ಭದ್ರತಾ ವಾಹನಗಳನ್ನು ಬಳಸಲಿಲ್ಲ. ಇದು ದೇಶಕ್ಕೆ ಉತ್ತಮ ಸಂದೇಶ ಮತ್ತು ಅಭಿವೃದ್ಧಿಯ ಸಂಕೇತ ಎಂದರು.
- Jagadisha B
- Updated on: May 15, 2026
- 2:21 pm
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ: ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ವಿಧಾನಸಭೆ ಚುನಾವಣೆಯ ಸೋಲು ಹಾಗೂ ಲೋಕಸಭೆ ಚುನಾವಣೆಯ ವೇಳೆ ನಡೆದ ವಿದ್ಯಮಾನಗಳ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ (JC Madhuswamy) ದಿಢೀರ್ ಮುನ್ನೆಲೆಗೆ ಬಂದಿದ್ದಾರೆ. ಹೌದು....2023ರಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸೋತ ಬಳಿಕ ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರು ಉಳಿದಿದ್ದು, ಮಾಧುಸ್ವಾಮಿ ಇದೀಗ ಏಕಾಏಕಿ ಪ್ರತ್ಯಕ್ಷರಾಗಿ ಸ್ವಪಕ್ಷದ ನಾಯಕರ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.
- Jagadisha B
- Updated on: May 14, 2026
- 4:44 pm
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್ ಲೀಡರ್ ಎಂದ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ
ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಪ್ರಧಾನಿ ನರೇಂದ್ರ ಮೋದಿಯನ್ನು ಮಾಸ್ ಲೀಡರ್ ಎಂದು ಕರೆದಿದ್ದಾರೆ. ಇಂದಿರಾ ಗಾಂಧಿ ಅವರ ಬಳಿಕ ಮೋದಿಯವರೇ ಜನಪ್ರಿಯ ನಾಯಕ. ನಾನೇನು ಅವರನ್ನು ಹೊಗಳುತ್ತಿಲ್ಲ ಇರುವ ವಾಸ್ತವಾಂಶವನ್ನು ಹೇಳುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ ಬಗ್ಗೆ ಮೋದಿ ಹೇಳಿಕೆ ಸಂಬಂಧವೂ ಅವರು ಕಿಡಿ ಕಾರಿದ್ದಾರೆ.
- Jagadisha B
- Updated on: May 14, 2026
- 11:33 am
ತಾಯಿ ಸಾವಿನ ನೋವಲ್ಲಿ ಎಂಜಿನಿಯರ್ ಆತ್ಮಹತ್ಯೆ: ಬೆಟ್ಟದ ಮೇಲಿಂದ ಜಿಗಿದು ದಾರುಣ ಅಂತ್ಯ
ತುಮಕೂರಿನ ಪಿಡಬ್ಲ್ಯೂಡಿ ಎಂಜಿನಿಯರ್ ಓರ್ವರು, ತಾಯಿಯ ಅಗಲಿಕೆಯ ತೀವ್ರ ನೋವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ದುಡಿಕಿನ ನಿರ್ಧಾರದಿಂದ 20 ದಿನಗಳ ಪುಟ್ಟ ಮಗು ಇರುವ ಪತ್ನಿ ದಿಕ್ಕುತೋಚದ ಸ್ಥಿತಿ ತಲುಪಿದ್ದು, ಈ ದುರಂತ ಘಟನೆಯಿಂದ ಕುಟುಂಬ ಮತ್ತು ಸ್ನೇಹಿತರಿಗೆ ಬರಸಿಡಿಲು ಬಡಿದಂತಾಗಿದೆ.
- Jagadisha B
- Updated on: May 12, 2026
- 6:18 pm
ನಾಪತ್ತೆಯಾಗಿದ್ದ ದಲಿತ ಮಹಿಳೆ ಮೂರು ದಿನದ ಬಳಿಕ ಶವವಾಗಿ ಪತ್ತೆ: ಸಾವಿನ ಸುತ್ತ ಹತ್ತಾರು ಅನುಮಾನ
ತುಮಕೂರಿನ ತಿಪಟೂರು ತಾಲೂಕಿನ ಮರಗೊಂಡನಹಳ್ಳಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮೂರು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ತೆಂಗಿನ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಕಂಡುಬಂದಿದೆ. ಕುಟುಂಬಸ್ಥರು ಇದೊಂದು ಉದ್ದೇಶಪೂರ್ವಕ ಕೊಲೆ ಎಂದು ಆರೋಪಿಸಿದ್ದು, ಗ್ರಾಮದಲ್ಲಿನ ಜಾತಿ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ದಲಿತ ಮಹಿಳೆಯಾಗಿದ್ದ ಈಕೆಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
- Jagadisha B
- Updated on: May 10, 2026
- 4:56 pm
ಲಾರಿಗೆ ಕಾರು ಡಿಕ್ಕಿ: ಜವರಾಯನ ಅಟ್ಟಹಾಸಕ್ಕೆ ಕುಣಿಗಲ್ ಬಳಿ ದಾರಿಯಲ್ಲೇ ಪ್ರಾಣಬಿಟ್ಟ ನಾಲ್ವರು
ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಭೀಕರ ಅಪಘಾತ ನಡೆದಿದೆ. ಗೊಬ್ಬರ ತುಂಬಿದ ಲಾರಿಗೆ ಆಲ್ಟೋ ಕಾರು ಡಿಕ್ಕಿಯಾದ ಪರಿಣಾಮ ಕಾರಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂ ಆಗಿದ್ದು, ಮೃತ ದುರ್ದೈವಿಗಳನ್ನು ಮಂಡ್ಯ ಮೂಲದವರೆಂದು ಗುರುತಿಸಲಾಗಿದೆ.
- Jagadisha B
- Updated on: May 9, 2026
- 8:56 pm
ತುಮಕೂರಿನಲ್ಲಿ ಹೆಚ್ಚಾಯ್ತು ಹಕ್ಕಿ ಜ್ವರದ ಭೀತಿ: 50ಕ್ಕೂ ಹೆಚ್ಚು ನವಿಲುಗಳ ಸಾವು!
ತುಮಕೂರಿನಲ್ಲಿ ನವಿಲುಗಳ ಸಾವು 54ಕ್ಕೆ ಏರಿಕೆಯಾಗಿದ್ದು, ಹಕ್ಕಿ ಜ್ವರದ ಭೀತಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಹಿಂದೆ ಕೋಳಿಗಳು ಮತ್ತು ನವಿಲುಗಳ ಸರಣಿ ಸಾವು ಸಂಭವಿಸಿತ್ತು. ನವಿಲುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವೆಂಬುದು ದೃಢಪಟ್ಟಿತ್ತು. ಆದರೆ ಬೊಮ್ಮನಹಳ್ಳಿಯ ಕೋಳಿಗಳ ವೈದ್ಯಕೀಯ ವರದಿ ನೆಗೆಟಿವ್ ಬಂದಿರುವುದು ಸಮಾಧಾನದ ಸಂಗತಿಯಾಗಿದ್ದರೂ, ಕುಣಿಗಲ್ನಲ್ಲಿ ಮತ್ತೊಮ್ಮೆ ನವಿಲಿನ ಕಳೆಬರ ಪತ್ತೆಯಾದ ಕಾರಣ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ.
- Jagadisha B
- Updated on: May 8, 2026
- 12:12 pm
ಪ್ಯಾನ್ ಕಾರ್ಡ್ನಿಂದ ಶುರುವಾದ ಪ್ರೀತಿ ಈಗ ಬೀದಿಗೆ: ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಗೆ ಮತ್ತೊಂದು ಮದುವೆಗೆ ಸಿದ್ಧತೆ
ತುಮಕೂರಿನಲ್ಲಿ ಗರ್ಭಿಣಿ ಪತ್ನಿಯನ್ನು ಕೈಬಿಟ್ಟು ಮತ್ತೊಂದು ಮದುವೆಗೆ ಸಿದ್ಧನಾಗಿರುವ ಪತಿಯ ವಿರುದ್ಧ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಏಳು ವರ್ಷಗಳ ಪ್ರೀತಿಸಿ ಮದುವೆಯಾದ ಬಳಿಕ, ಆರು ತಿಂಗಳ ಗರ್ಭಿಣಿಯಾಗಿದ್ದಾಗ ಪತಿ ದೂರ ಮಾಡಿದ್ದಾನೆ. ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ಮತ್ತು ಆತನ ಕುಟುಂಬದ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತೆ ತನಗೆ ಮತ್ತು ತನ್ನ ಮಗುವಿಗೆ ನ್ಯಾಯ ಕೋರಿದ್ದಾರೆ.
- Jagadisha B
- Updated on: May 6, 2026
- 10:36 am
ಅತ್ತೆ ಜೊತೆ ಅಳಿಯನ ಅಕ್ರಮ ಸಂಬಂಧಕ್ಕೆ ಹೋಗಿದ್ದು ಮೂರು ಜೀವ!: ತುಮಕೂರಲ್ಲಿ ದಾರುಣ ಘಟನೆ
ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಮೂವರು ಬಲಿಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಹೋದರಿಯ ಪುತ್ರನ ಜೊತೆಗೆ ಪತ್ನಿ ಓಡಿಹೋಗಿದ್ದಕ್ಕೆ ಪತಿ ತೀವ್ರವಾಗಿ ಮನನೊಂದಿದ್ದ. ಹೀಗಾಗಿ ಮಕ್ಕಳನ್ನು ಸಾಯಿಸಿ, ತಾನೂ ಆತ್ಮಹತ್ಯೆ ಶರಣಾಗಿದ್ದಾನೆ ಎಂಬುದೀಗ ಬಯಲಾಗಿದೆ. ಮೃತದೇಹಗಳನ್ನುಆದಿಚುಂಚನಗಿರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಂದ ಈ ಬಗ್ಗೆ ತನಿಖೆ ಮುಂದುವರಿದಿದೆ.
- Jagadisha B
- Updated on: May 2, 2026
- 2:31 pm
ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಎಸ್ಕೇಪ್: ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ!
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆಯಲ್ಲಿ ಪತ್ನಿಯ ಅಕ್ರಮ ಸಂಬಂಧ ಹಾಗೂ ಪಲಾಯನದಿಂದ ಮನನೊಂದ ಅರ್ಚಕ , ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿದ್ದ ಚಿನ್ನಾಭರಣದೊಂದಿಗೆ ಪತ್ನಿ ಪರಾರಿಯಾದ ಬೆನ್ನಲ್ಲೇ ವ್ಯಕ್ತಿ ಈ ನಿರ್ಧಾರ ತೆಗೆದುಕೊಂಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
- Jagadisha B
- Updated on: May 2, 2026
- 11:04 am
ತುಮಕೂರಿನಲ್ಲಿ ಹಕ್ಕಿ ಜ್ವರದ ಭೀತಿ: ನವಿಲುಗಳ ಸಾವಿನ ಬೆನ್ನಲ್ಲೇ ಈಗ 30 ಕೋಳಿಗಳ ಸಾವು! ಜಿಲ್ಲೆಯಲ್ಲಿ ಹೈ ಅಲರ್ಟ್
ತುಮಕೂರು ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಹೆಚ್ಚಾಗಿದ್ದು, 44 ನವಿಲುಗಳ ಬೆನ್ನಲ್ಲೇ ಈಗ 30 ಕೋಳಿಗಳ ಸರಣಿ ಸಾವು ವರದಿಯಾಗಿದೆ. ಮೃತ ಕೋಳಿಗಳ ಸ್ಯಾಂಪಲ್ ಅನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳು ಕಲ್ಲಳ್ಳಿ ಸೇರಿದಂತೆ 5 ಗ್ರಾಮಗಳನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಿಸಿ, ಚಿಕನ್ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಸಾರ್ವಜನಿಕರು ಜಾಗೃತರಾಗಿರಲು ಸೂಚಿಸಲಾಗಿದೆ.
- Jagadisha B
- Updated on: May 2, 2026
- 8:30 am
ತುಮಕೂರಿನಲ್ಲಿ ಹಕ್ಕಿ ಜ್ವರದ ಆತಂಕ: ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ!
ಕಳೆದ ತಿಂಗಳು ಸಂಭವಿಸಿದ ತುಮಕೂರಿನಲ್ಲಿ ನವಿಲುಗಳ ಸರಣಿ ಸಾವಿಗೆ ಹಕ್ಕಿ ಜ್ವರ ಕಾರಣವೆಂದು ಎಫ್ಎಸ್ಎಲ್ ವರದಿ ದೃಢಪಡಿಸಿದೆ. ಜಿಲ್ಲಾಡಳಿತವು 10 ಕಿ.ಮೀ ವ್ಯಾಪ್ತಿಯ 33 ಹಳ್ಳಿಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ನಿಗಾ ವಹಿಸಲು ಐದು ರ್ಯಾಪಿಡ್ ರೆಸ್ಪಾನ್ಸ್ ತಂಡಗಳನ್ನು (RRT) ರಚಿಸಿದೆ. ಕೋಳಿ ಫಾರ್ಮ್ಗಳಲ್ಲಿ ಬಯೋ-ಸೆಕ್ಯೂರಿಟಿ ಹೆಚ್ಚಿಸಲು ಮತ್ತು ಯಾವುದೇ ಅಸಹಜ ಸಾವು ಕಂಡುಬಂದಲ್ಲಿ ತಕ್ಷಣ ವರದಿ ಮಾಡಲು ಪಶುಸಂಗೋಪನಾ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
- Jagadisha B
- Updated on: May 1, 2026
- 8:34 am