ದೇವರು ಬಂದಂತೆ ನಟಿಸಿ ದಲಿತ ನವದಂಪತಿಯನ್ನು ದೇಗುಲದಿಂದ ಹೊರಗಟ್ಟಿದ ಅರ್ಚಕ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರಲ್ಲೇ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದೇವರು ಬಂದಂತೆ ನಾಟಕವಾಡಿದ ಗ್ರಾಮಸ್ಥನೊಬ್ಬ ದಲಿತ ನವದಂಪತಿಗಳನ್ನು ದೇವಾಲಯದಿಂದ ಹೊರಗೆ ಕಳಿಸಿರುವ ಘಟನೆ ನಡೆದಿದೆ. ತುಮಕೂರು (Tumakuru) ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅರಸಮ್ಮ ದೇವಾಲಯದಲ್ಲಿ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
- Jagadisha B
- Updated on: Feb 24, 2026
- 3:28 pm
ತುಮಕೂರು: ಚಿನ್ನದಂಗಡಿ ದರೋಡೆಕೋರರ ಬಂಧನಕ್ಕೆ ಹೆದ್ದಾರಿಯೇ ಬಂದ್! ಪೊಲೀಸರ ಜತೆಗೂಡಿ ಸ್ಥಳೀಯರ ಸಿನಿಮೀಯ ಚೇಸಿಂಗ್
ತುಮಕೂರಿನ ಜಗದಂಬಾ ಜ್ಯುವೆಲ್ಲರಿ ಶಾಪ್ನಲ್ಲಿ ಸೋಮವಾರ ನಡೆದ ದರೋಡೆ ಭೇದಿಸಿ ತಕ್ಷಣವೇ ದರೋಡೆಕೋರರನ್ನು ಹಿಡಿಯುವಲ್ಲಿ ಸ್ಥಳೀಯರು ಸಿನಿಮೀಯ ಸಾಹಸ ಮೆರೆದಿದ್ದಾರೆ. ದರೋಡೆಕೋರರನ್ನು ಸಿನಿಮಾ ರೀತಿಯಲ್ಲಿ ಕಾರಿನಲ್ಲಿ ಬೆನ್ನಟ್ಟಿದ ಸ್ಥಳೀಯರು ಪೊಲೀಸರ ಜತೆ ಕೈಜೋಡಿಸಿದ್ದರಿಂದ ಕಳ್ಳರ ಸೆರೆ ಸುಲಭವಾಗಿದೆ. ಸ್ಥಳೀಯರ ಸಾಹಸ ಹಾಗೂ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯ ರೋಚಕ ಮಾಹಿತಿ ಹಾಗೂ ವಿಡಿಯೋ ಇಲ್ಲಿದೆ.
- Jagadisha B
- Updated on: Feb 24, 2026
- 10:44 am
ತುಮಕೂರು ಜ್ಯುವೆಲರಿ ಶಾಪ್ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ತುಮಕೂರು ಜಿಲ್ಲೆಯ ಬೆಂಚೆ ಗೇಟ್ನ ಜಗದಂಬಾ ಜ್ಯುವೆಲರಿ ಶಾಪ್ನಲ್ಲಿ ನಡೆದ ಸಿನಿಮೀಯ ದರೋಡೆಯ ಸುಳಿವನ್ನು ಪೊಲೀಸರು ಭೇದಿಸಿದ್ದಾರೆ. ಮೆಣಸಿನಕಾಯಿ ಪುಡಿ ಎರಚಿ ಚಿನ್ನಾಭರಣ ದೋಚಿದ್ದ ನಾಲ್ವರು ಆರೋಪಿಗಳನ್ನು, ಸಾರ್ವಜನಿಕರ ಹಾಗೂ ಪೊಲೀಸ್ ತಂಡಗಳ ಸಹಕಾರದಿಂದ ದರೋಡೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿ, ಸಂಪೂರ್ಣ ಕದ್ದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
- Jagadisha B
- Updated on: Feb 23, 2026
- 11:03 pm
ಖಾರದಪುಡಿ ಎರಚಿ ಚಿನ್ನದಂಗಡಿಗೆ ಕನ್ನ: ಸಿನಿಮಾ ಕಥೆ ಮೀರಿಸುವ ದರೋಡೆ ಸ್ಟೋರಿ
ತುಮಕೂರಿನಲ್ಲಿ ಹೊರರಾಜ್ಯದ ಗ್ಯಾಂಗ್ವೊಂದು ಹಾಡಹಗಲೇ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಜ್ಯುವೆಲರಿ ಶಾಪ್ ದರೋಡೆ ಮಾಡಿರುವಂತಹ ಘಟನೆ ನಡೆದಿದೆ. ಜ್ಯುವೆಲರಿ ಶಾಪ್ಗೆ ನುಗ್ಗಿ ಖಾರದ ಪುಡಿ ಎರಚಿ ಬರೋಬ್ಬರಿ 26 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ್ದ ಗ್ಯಾಂಗ್ ಅನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
- Jagadisha B
- Updated on: Feb 23, 2026
- 5:08 pm
ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ
ತುಮಕೂರು ಜಿಲ್ಲೆಯ ತುರುವೇಕೆರೆ ಬಿಇಒ ಕಚೇರಿಯಲ್ಲಿ ಎಫ್ಡಿಎ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಓರ್ವ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಕೊನೆಗೆ ಅವರೇ ಶಾಕ್ ಆಗಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
- Jagadisha B
- Updated on: Feb 23, 2026
- 3:18 pm
ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್ಗೆ ಟ್ವಿಸ್ಟ್: ಮೃತರ ಸಂಬಂಧಿ ಹೇಳಿದ್ದೇನು?
ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಳಿಯನ ಕೊಲೆ ಬಳಿಕ ರಾಜಗಿರಿಯಲ್ಲಿ ಮೃತರಾದ ನಾಗಪ್ರಸಾದ್ ಮತ್ತು ಕುಟುಂಬ, ಆತ್ಮಹತ್ಯೆಗೂ ಮುನ್ನ ತಮ್ಮ ಅಂತ್ಯಕ್ರಿಯೆಗೆಂದೇ ಒಂದು ಲಕ್ಷಕ್ಕೂ ಹೆಚ್ಚು ಹಣ ಇಟ್ಟಿತ್ತು. ಮೂವರನ್ನು ಆತ್ಮಹತ್ಯೆಗೆ ದೂಡಿದ ಬಳಿಕ ನಾಗಪ್ರಸಾದ್ ಪ್ರಾಣಬಿಟ್ಟಿರುವ ಶಂಕೆ ಕೂಡ ವ್ಯಕ್ತವಾಗಿದ್ದು, ಈ ನಡುವೆ ಮೃತರ ಅಂತಿವ ವಿಧಿ ವಿಧಾನಗಳು ನೂರಾರು ಕುಟುಂಬಸ್ಥರ ಸಮ್ಮುಖದಲ್ಲಿ ಜರುಗಿದೆ.
- Jagadisha B
- Updated on: Feb 22, 2026
- 9:49 am
Tumakuru: ಸಾಕು ಮಗ, ಸಹೋದರಿಯಿಂದಲೇ ಮಹಿಳೆಯ ಕೊಲೆ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರ!
ಆಕೆ ಗಂಡನ ಕಳೆದುಕೊಂಡು ಒಂಟಿಯಾಗಿದ್ದ ಮಹಿಳೆ. ಅನುಕಂಪದ ಆಧಾರದಲ್ಲಿ ಸಿಕ್ಕ ಗಂಡನ ಸರ್ಕಾರಿ ಕೆಲಸದಲ್ಲಿ ಜೀವನ ಸಾಗಿಸುತಿದ್ದಳು. ಈ ನಡುವೆ ಪರಿಚಯವಾದವನ ಜೊತೆ ಆತ್ಮೀಯತೆ ಬೆಳೆದಿತ್ತು. ಆತನೊಂದಿಗೆ ಪ್ರತ್ಯೇಕವಾಗಿ ಬಾಳುವ ಆಸೆ ಕಂಡಿದ್ದಳು. ಆದರೆ ಅದೇನಾಯ್ತೋ ಇದ್ದಕಿದ್ದಂತೆ ಮೃತಪಟ್ಟಿದ್ದಾಳೆ. ಅನುಮಾನಗೊಂಡ ಗೆಳೆಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ಧೇ ತಡ, ಆಕೆಯ ಸಾವಿನ ಕೇಸ್ಗೆ ಸ್ಪೋಟಕ ತಿರುವು ಸಿಕ್ಕಿದೆ. ಅಷ್ಟಕ್ಕೂ ಆಗಿದ್ದೇನೆಂಬ ಮಾಹಿತಿ ಇಲ್ಲಿದೆ.
- Jagadisha B
- Updated on: Feb 20, 2026
- 9:17 am
ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ನೀಡಿ: ಸಿಎಂಗೆ ಕಾಂಗ್ರೆಸ್ ಶಾಸಕ ರಂಗನಾಥ್ ಪತ್ರ
ರೈತ ಮತ್ತು ಗ್ರಾಮೀಣ ಯುವಕರಿಗೆ ಮದುವೆಯಾಗಲು ವಧುಗಳ ಕೊರತೆ ತೀವ್ರವಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕೃಷಿಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ಮತ್ತು ಸ್ಥಾನಮಾನ ಘೋಷಿಸುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.
- Jagadisha B
- Updated on: Feb 19, 2026
- 2:06 pm
ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್: ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?
ನಾಪತ್ತೆ ನಾಟಕವಾಡಿ ಪತಿ ಸ್ನೇಹಿತ ಡೇವಿಡ್ ಜೊತೆ ಪರಾರಿಯಾಗಿದ್ದ ಮಹಿಳೆ ಪ್ರಿಯಾಂಕಾ ಪ್ರಕರಣ ಸಂಬಂಧ ಒಂದೊಂದೇ ಸ್ಫೋಟಕ ವಿಚಾರಗಳು ಬಯಲಾಗ್ತಿವೆ. ಡೇವಿಡ್ ಜೊತೆ ಪ್ರಿಯಾಂಕಾ ಕುಣಿಗಲ್ಗೆ ಆಗಮಿಸಿರುವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಈಗ ಲಭ್ಯವಾಗಿದ್ದು, ಇವರಿಬ್ಬರ ಸಂಬಂಧ ಬಗ್ಗೆ ಪೊಲೀಸ್ ತನಿಖೆ ಮುಂದುವರಿದಿದೆ.
- Jagadisha B
- Updated on: Feb 16, 2026
- 2:33 pm
ಶಿಕ್ಷಕರ ನಿರ್ಲಕ್ಷ್ಯಕ್ಕೆ ಒಂದನೇ ತರಗತಿ ವಿದ್ಯಾರ್ಥಿನಿಯ ಬೆರಳುಗಳೇ ಕಟ್! ಬಿಇಓ ಸೇರಿ ನಾಲ್ವರ ವಿರುದ್ಧ ಎಫ್ಐಆರ್
ತುಮಕೂರು ಗ್ರಾಮಾಂತರ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ವೇಳೆ ವಿದ್ಯಾರ್ಥಿನಿ ಬೆರಳು ಕಳೆದುಕೊಂಡ ದುರಂತ ಸಂಭವಿಸಿದೆ. ಶಿಕ್ಷಕರು ನಿರ್ಲಕ್ಷ್ಯದಿಂದ ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡದೆ ಮನೆಗೆ ಕಳುಹಿಸಿದ್ದು, ಕತ್ತರಿಸಿದ ಬೆರಳುಗಳು ಲಭ್ಯವಾಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಬಿಇಒ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಲಾಗಿದೆ.
- Jagadisha B
- Updated on: Feb 13, 2026
- 10:32 am
ಹೆತ್ತ ತಾಯಿಯನ್ನೇ ಕೊಂದು ಹೃದಯಾಘಾತದ ಕಥೆ ಕಟ್ಟಿದ್ದ ಮಗಳು! ಸಿನಿಮೀಯ ರೀತಿಯಲ್ಲಿ ಬಯಲಾಯ್ತು ರಹಸ್ಯ
ಆ ಸಾವು ಹೇಗಾಯ್ತು ಎಂಬುದು ಯಾರಿಗೂ ತಿಳಿದಿರಲಿಲ್ಲ. ಮಧ್ಯರಾತ್ರಿ ಸಂಬಂಧಿಕರಿಗೆ ಕರೆ ಮಾಡಿದ ಮಹಿಳೆ, ತಾಯಿ ಹೃದಯಾಘಾತದಿಂದ ಸಾವನಪ್ಪಿದ್ದಾಗಿ ತಿಳಿಸಿದ್ದಳು. ತಾಯಿಯ ಕೊನೆಯ ಆಸೆ ಗಂಡನ ಗೋರಿ ಪಕ್ಕವೇ ಹೂಳಬೇಕೆಂಬುದಾಗಿತ್ತು. ಹಾಗಂತ ರಾತ್ರೋ ರಾತ್ರಿ ಶವ ತಂದ ಮಗಳು ಬೆಳಿಗ್ಗೆ ಅಂತ್ಯಕ್ರಿಯೆ ಮಾಡುವ ತರಾತುರಿಯಲ್ಲಿದ್ದಳು. ಈ ನಡುವೆ ಎಂಟ್ರಿ ಕೊಟ್ಟ ಪೊಲೀಸರು ಭಯಾನಕ ಮಾಹಿತಿಯನ್ನು ಬಯಲಿಗೆಳೆದಿದ್ದಾರೆ.
- Jagadisha B
- Updated on: Feb 13, 2026
- 7:48 am
ಹಿಟಾಚಿ ಕೆಟ್ಟೋಗಿದ್ದಕ್ಕೆ ಶೋರೂಮ್ಗೆ ಬೀಗ ಹಾಕಿದ ಗ್ರಾಹಕ ಅಷ್ಟಕ್ಕೇ ಸುಮ್ಮನಾಗದೆ ಏನು ಮಾಡಿದ್ರು ನೋಡಿ!
ಖರೀದಿ ಮಾಡಿದ ಕೆಲವೆ ತಿಂಗಳುಗಳಲ್ಲಿ ಹಿಟಾಚಿ ಯಂತ್ರ ಕೆಟ್ಟುಹೋಗಿದ್ದು, ವಾರಂಟಿ ಇದ್ದರೂ ಕಂಪನಿ ಸ್ಪಂದಿಸದ ಕಾರಣ ರೊಚ್ಚಿಗೆದ್ದ ಗ್ರಾಹಕರೊಬ್ಬರು ಟಾಟಾ ಹಿಟಾಚಿ ಶೋರೂಮ್ಗೇ ಬೀಗ ಜಡಿದ ಘಟನೆ ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಬಳಿ ನಡೆದಿತ್ತು. ಅಷ್ಟಾದರೂ ಕಂಪನಿಯವರು ಸ್ಪಂದಿಸದ ಕಾರಣ ಗ್ರಾಹಕ ತನ್ನ ಹೋರಾಟವನ್ನು ವಿಭಿನ್ನ ರೀತಿಯಲ್ಲಿ ಮುಂದುವರಿಸಿದ್ದಾರೆ. ಅವರು ಏನು ಮಾಡಿದ್ದಾರೆ ಗೊತ್ತೇ?
- Jagadisha B
- Updated on: Feb 11, 2026
- 12:19 pm