AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹದ ತುಂಬ 18 ಗಾಯ; 4 ವರ್ಷದ ಮಗುವನ್ನು ಹೊಡೆದು, ಕ್ರೂರವಾಗಿ ಸುಟ್ಟು ಕೊಂದ ತಂದೆ, ಮಲತಾಯಿ

ಹೆತ್ತ ಅಪ್ಪನಿಂದಲೇ ಆ ಮಗು ಕೊಲೆಯಾಗಿರುವ ಆಘಾತಕಾರಿ ಘಟನೆಯಿದು. ತನ್ನ ಎರಡನೇ ಹೆಂಡತಿಯೊಂದಿಗೆ ಸೇರಿ 4 ವರ್ಷದ ಕಂದಮ್ಮನಿಗೆ ಪೊರಕೆ ಮತ್ತು ಬೆಲ್ಟ್‌ನಿಂದ ಹೊಡೆದು, ಆ ಮಗುವಿನ ದೇಹವನ್ನು ಸುಟ್ಟು ಕೊಂದಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಮೃತಪಟ್ಟ ಮಗುವಿನ ದೇಹದ ಮೇಲೆ ಇದ್ದ 18 ಗಾಯಗಳು ಆ ಮಗುವಿಗೆ ಎಷ್ಟು ಕ್ರೂರವಾದ ರೀತಿಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.

ದೇಹದ ತುಂಬ 18 ಗಾಯ; 4 ವರ್ಷದ ಮಗುವನ್ನು ಹೊಡೆದು, ಕ್ರೂರವಾಗಿ ಸುಟ್ಟು ಕೊಂದ ತಂದೆ, ಮಲತಾಯಿ
ಸಾಂದರ್ಭಿಕ ಚಿತ್ರ Image Credit source: iStock
ಸುಷ್ಮಾ ಚಕ್ರೆ
|

Updated on: Mar 16, 2026 | 8:42 PM

Share

ಲಕ್ನೋ, ಮಾರ್ಚ್ 16: ಪ್ರತಿಯೊಬ್ಬ ಗಂಡಸಿಗೂ ತಾನು ತಂದೆಯಾಗುವ ಕ್ಷಣ ಬಹಳ ವಿಶೇಷವಾಗಿರುತ್ತದೆ. ಅಪ್ಪ ತನಗೆಷ್ಟೇ ಕಷ್ಟ ಬಂದರೂ ಮಗುವಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಾನೆ. ಮಗುವಿನ ಭವಿಷ್ಯಕ್ಕಾಗಿ ಯಾವ ತ್ಯಾಗ ಮಾಡಲು ಬೇಕಾದರೂ ಸಿದ್ಧವಾಗಿರುತ್ತಾನೆ. ಆದರೆ, ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಬಹಳ ಆತಂಕಕಾರಿಯಾದುದು. 4 ವರ್ಷದ ತನ್ನ ಸ್ವಂತ ಮಗುವಿಗೆ ಬೆಲ್ಟ್​ನಿಂದ ಹೊಡೆದು, ಬೆಂಕಿ ಹಚ್ಚಿ ಸುಟ್ಟು ಕೊಲೆ (Child Killed in Lucknow) ಮಾಡಿರುವ ಘಟನೆ ಆಘಾತ ಮೂಡಿಸಿದೆ. ಆ ಪುಟ್ಟ ಮಗುವಿನ ಪಾಲಿಗೆ ಹೆತ್ತ ಅಪ್ಪ ಮತ್ತು ಮಲತಾಯಿಯೇ ರಾಕ್ಷಸರಾಗಿದ್ದಾರೆ.

ಲಕ್ನೋದ ಚೌಕ್ ಪ್ರದೇಶದಲ್ಲಿ ತನ್ನ 4 ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಆ ಮಗುವಿನ ತಂದೆ ಮತ್ತು ಆತನ ಎರಡನೇ ಪತ್ನಿಯನ್ನು ಬಂಧಿಸಲಾಗಿದೆ. ಮಗುವಿನ ತಾಯಿಯ ಅಜ್ಜಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳಾದ ಭೀಷ್ಮ ಖರ್ಬಂದ (35) ಮತ್ತು ಅವನ ಪತ್ನಿ ರಾಗಿಣಿ ಖರ್ಬಂದ (30) ಅವರನ್ನು ಬಂಧಿಸಲಾಗಿದೆ. ಉನ್ನಾವೋದ ಸುಧಾ ಕಶ್ಯಪ್ ಅವರು ಮಾರ್ಚ್ 12ರಂದು ತಮ್ಮ ಮೊಮ್ಮಗ ಅರ್ನವ್​ನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಎಸೆದು ಹೋದ ಪಾಪಿಗಳು

“ನಾವು ಲಜ್‌ಪತ್ ನಗರದಲ್ಲಿರುವ ಮನೆಗೆ ತಲುಪಿದಾಗ ಮಗುವಿನ ಶವವನ್ನು ವರಾಂಡಾದಲ್ಲಿ ಇಡಲಾಗಿತ್ತು. ತಪಾಸಣೆ ನಡೆಸಿದಾಗ ಮಗುವಿನ ದೇಹದಾದ್ಯಂತ ಹಲವಾರು ಗಾಯದ ಗುರುತುಗಳು ಮತ್ತು ನೀಲಿ ಗುರುತು ಕಂಡುಬಂದವು, ಇದು ಮಗುವನ್ನು ಕ್ರೂರವಾಗಿ ಥಳಿಸಿರುವುದನ್ನು ಸೂಚಿಸುತ್ತದೆ. ಮಗುವಿನ ಪಾದಗಳ ಮೇಲೆ ಸುಟ್ಟ ಗುರುತುಗಳು ಸಹ ಇದ್ದವು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊರಕೆ, ಅಡುಗೆಮನೆಯ ಚಾಕು, ಬೆಲ್ಟ್ ಮತ್ತು ಹಗ್ಗ ಸೇರಿದಂತೆ ಅಪರಾಧದಲ್ಲಿ ಬಳಸಲಾಗಿದೆ ಎನ್ನಲಾದ ಹಲವಾರು ವಸ್ತುಗಳನ್ನು ಪೊಲೀಸ್ ತಂಡ ವಶಪಡಿಸಿಕೊಂಡಿದೆ.

ಮಗುವಿನ ತಾಯಿ ಅನಾರೋಗ್ಯದಿಂದ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅದಾದ ನಂತರ ಭೀಷ್ಮ ಮತ್ತೊಂದು ಮದುವೆಯಾಗಿದ್ದರು. ಭೀಷ್ಮ ಮತ್ತು ರಾಗಿಣಿ ಆಸ್ತಿಯ ದುರಾಸೆಯಿಂದ 4 ವರ್ಷದ ಮಗುವನ್ನು ಕೊಂದಿದ್ದಾರೆ ಎಂದು ಆ ಮಗುವಿನ ಅಜ್ಜಿ ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ, ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಂದೆಯನ್ನು ಕೊಂದು, ತನ್ನ ಮಣಿಕಟ್ಟನ್ನೇ ಕೊಯ್ದುಕೊಂಡ ವ್ಯಕ್ತಿ

ತಂದೆ ಮತ್ತು ಮಲತಾಯಿ ಹುಡುಗನನ್ನು ಪದೇ ಪದೇ ಹೊಡೆಯುತ್ತಿದ್ದರು ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಮಗುವಿಗೆ ವಿದ್ಯುತ್ ಶಾಕ್ ನೀಡಲಾಗಿದ್ದು, ಆಗಾಗ ಕಠಿಣವಾದ ಶಿಕ್ಷೆ ವಿಧಿಸಲಾಗುತ್ತಿತ್ತು ಎನ್ನಲಾಗಿದೆ. ಆ ಮಗುವಿನ ದೇಹದ ಮೇಲೆ ಸುಮಾರು 18 ಗಾಯದ ಗುರುತುಗಳು ಗೋಚರಿಸಿವೆ ಎಂದು ಮಗುವಿನ ತಾಯಿಯ ಕಡೆಯ ಕುಟುಂಬ ಆರೋಪಿಸಿದೆ.

ಅರ್ನವ್​ನ ತಾಯಿಯ ಮರಣದ ನಂತರ ಆ ಹುಡುಗ ತನ್ನ ತಾಯಿಯ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದ. ಆದರೆ, ಸುಮಾರು 6 ತಿಂಗಳ ಹಿಂದೆ ಅವನ ತಂದೆ ನ್ಯಾಯಾಲಯದ ಆದೇಶದ ನಂತರ ಅವನನ್ನು ವಶಕ್ಕೆ ಪಡೆದರು. ಮನೆಯಲ್ಲಿ ಆತನ ತಂದೆ ಸದಾ ಮಗುವನ್ನು ಹೊಡೆಯುತ್ತಿದ್ದರು. ಮಗುವನ್ನು ಹೊರಗೆ ಆಟವಾಡಲು ಕೂಡ ಬಿಡುತ್ತಿರಲಿಲ್ಲ, ಯಾರ ಮನೆಗೂ ಕಳುಹಿಸುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.

ಬಂಧಿತ ದಂಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!