ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಈ ಬಾರಿಯ ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು (ಸೆಪ್ಟೆಂಬರ್ 04) ಯುವ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸೋಮಶೇಖರ್ ನೇತೃತ್ವದ ಸಮಿತಿ ಸದಸ್ಯರು ಚೆನ್ನೈಗೆ ತೆರಳಿ ಪ್ರಭುದೇವ್ ಅವರಿಗೆ ಆಹ್ವಾನ ನೀಡಿದರು. ಯುವ ದಸರಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಯುವ ದಸರಾ ಸಮಿತಿ ಅಧಿಕೃತವಾಗಿ ಆಹ್ವಾನ ನೀಡಿದ್ದು, ಇದಕ್ಕೆ ಪ್ರಭುದೇವ್ ಸಹ ಸಮಿತಿಯ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದರು.
- Ram
- Updated on: Sep 4, 2026
- 5:57 pm
ಅಭಿಮಾನಿಗಳ ಒತ್ತಾಸೆಗೆ ಮಣಿದ ಸರ್ಕಾರ: ಮೈಸೂರು ದಸರಾಗೆ ನಿಶಾನೆ ಆನೆಯಾಗಿ ಅಭಿಮನ್ಯು ಆಯ್ಕೆ
ಸತತ 6 ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿವೃತ್ತಿ ನೀಡಲಾಗಿದ್ದರೂ, ಅಭಿಮಾನಿಗಳ ಒತ್ತಾಸೆಯಂತೆ 2026ರ ದಸರಾ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ಸರ್ಕಾರ ಅವಕಾಶ ನೀಡಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
- Ram
- Updated on: Sep 4, 2026
- 12:35 pm
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಮೈಸೂರು ದಸರಾ 2026ಕ್ಕೆ ಸಿದ್ಧತೆಗಳು ಆರಂಭವಾಗಿವೆ. ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರು ಪಟ್ಟದ ಆನೆ ಮತ್ತು ನಿಶಾನೆ ಆನೆಯನ್ನು ಆಯ್ಕೆ ಮಾಡಿದ್ದಾರೆ. ಶ್ರೀಕಂಠ ಎರಡನೇ ಬಾರಿಗೆ ಪಟ್ಟದ ಆನೆಯಾಗಿ ಆಯ್ಕೆಯಾಗಿದ್ದು, ಏಕಲವ್ಯ ನಿಶಾನೆ ಆನೆಯಾಗಿ ಸೇವೆ ಸಲ್ಲಿಸಲಿದೆ. ಈ ಸಾಂಪ್ರದಾಯಿಕ ಆನೆಗಳ ಆಯ್ಕೆಯು ದಸರಾ ಮಹೋತ್ಸವದ ಪ್ರಮುಖ ಹಂತವಾಗಿದೆ.
- Ram
- Updated on: Sep 4, 2026
- 11:36 am
ಮೈಸೂರಿನಲ್ಲಿ ಮತ್ತೊಂದು ‘ಗೋಲ್ಡ್ ಸ್ಕ್ಯಾಮ್’: ಮೋಹನ್ ಜ್ಯುವೆಲರಿಯಿಂದ ನೂರಾರು ಗ್ರಾಹಕರಿಗೆ ಮೋಸ
ಮೈಸೂರಿನಲ್ಲಿ ಮತ್ತೊಂದು ಬೃಹತ್ ಚಿನ್ನದ ಹಗರಣ ಬಯಲಾಗಿದೆ. ಮೋಹನ್ ಜ್ಯುವೆಲರಿ ಮಾಲೀಕ ಮೋಹನ್ ಲಾಲ್, ಗ್ರಾಹಕರಿಗೆ ಚಿನ್ನ ನೀಡುವುದಾಗಿ ನಂಬಿಸಿ ಮಾಸಿಕ ಕಂತುಗಳ ಮೂಲಕ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾನೆ. ೮೦ಕ್ಕೂ ಹೆಚ್ಚು ಗ್ರಾಹಕರು ಹಣ ಕಳೆದುಕೊಂಡಿದ್ದು, ಕುಮಾರಪಾರ್ಕ್ ಪೊಲೀಸರು ಮೋಹನ್ ಲಾಲ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದು ನಗರದಲ್ಲಿ ಚಿನ್ನತಂಬಿ ನಂತರದ ಮತ್ತೊಂದು ಪ್ರಮುಖ ವಂಚನೆಯಾಗಿದೆ.
- Ram
- Updated on: Sep 3, 2026
- 6:45 am
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
1948ರಂದು ಜನವರಿ 30ರಂದು ಮಹಾತ್ಮ ಗಾಂಧೀಜಿ ಅವರು ನಾಥುರಾಮ ಗೋಡ್ಸೆಯ ಗುಂಡಿಗೆ ಬಲಿಯಾದ ದಿನ. ಅಂದು ದೆಹಲಿಯ ಬಿರ್ಲಾ ಭವನದಲ್ಲಿ ಸಂಜೆ ಪ್ರಾರ್ಥನಾ ಸಭೆಗೆ ತೆರಳುತ್ತಿದ್ದಾಗ ಗೋಡ್ಸೆ ಹತ್ಯೆ ಮಾಡಿದ್ದ. ಆ ವೇಳೆ ಗಾಂಧಿ ಹೇ ರಾಮ್ ಎನ್ನುತ್ತಲೇ ಕೊನೆಯುಸಿರೆಳೆದಿದ್ದರು. ಜನವರಿ 30ರ ದಿನವನ್ನು ಗಾಂಧೀಜಿ ಪುಣ್ಯತಿಥಿಯನ್ನ ಪ್ರತಿ ವರ್ಷ ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದೆ. ಇನ್ನು ಗಾಂಧಿಯನ್ನು ಹತ್ಯೆ ಮಾಡಿದ ಸ್ಥಳ ಈಗ ಹೇಗಿದೆ? ಆ ಸ್ಥಳದಲ್ಲಿ ಏನೆಲ್ಲಾ ಇದೆ? ಎನ್ನುವ ಸಂಪೂರ್ಣ ವಿವರ ವಿಡಿಯೋನಲ್ಲಿದೆ ನೋಡಿ.
- Ram
- Updated on: Sep 1, 2026
- 6:35 pm
ಕಬಿನಿ ಜಲಾಶಯಕ್ಕೆ ರೈತರ ಮುತ್ತಿಗೆ: ತಮಿಳುನಾಡಿಗೆ ನೀರು ಹರಿಸುವುದಕ್ಕೆ ತೀವ್ರ ಆಕ್ರೋಶ!
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ. ಕಬಿನಿ ಡ್ಯಾಂ ನೀರಿನ ಮಟ್ಟ 72 ಅಡಿಗೆ ಕುಸಿದಿದ್ದರೂ ಪ್ರತಿನಿತ್ಯ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಲು ಆಗ್ರಹಿಸಿದ್ದಾರೆ.
- Ram
- Updated on: Sep 1, 2026
- 11:27 am
ಪಾರ್ಕ್ಗಳ ಶೇ. 5ರಷ್ಟು ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಸಂರಕ್ಷಣೆ ತಿದ್ದುಪಡಿ ವಿಧೇಯಕ ಅಂಗೀಕಾದ ಜೊತೆಗೆ ಉದ್ಯಾನವನಗಳ 5% ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆಗಳು ಆರಂಭವಾಗಿವೆ. ಮೈಸೂರಿನಲ್ಲೂ ಪಾರ್ಕ್ಗಳನ್ನು ಉಳಿಸುವಂತೆ ಆಗ್ರಹಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಹೋರಾಟ ನಡೆದಿದೆ.
- Ram
- Updated on: Aug 30, 2026
- 11:36 am
ಮೈಸೂರು ದಸರಾ: ಗಜಪಡೆಯ ತೂಕ ಮಾಪನ ಕಾರ್ಯ; ಮೊದಲ ಸ್ಥಾನ ಪಡೆದ ಶ್ರೀಕಂಠ
Mysuru Dasara: ಮೈಸೂರು ದಸರಾ ಮಹೋತ್ಸವಕ್ಕಾಗಿ ಆಗಮಿಸಿರುವ ಮೊದಲ ತಂಡದ ಗಜಪಡೆಯ ತೂಕ ಮಾಪನ ನಡೆದಿದೆ. ಒಟ್ಟು 9 ಆನೆಗಳಲ್ಲಿ 5,790 ಕೆಜಿ ತೂಗುವ ಮೂಲಕ ಶ್ರೀಕಂಠ ಆನೆ ಪ್ರಥಮ ಸ್ಥಾನ ಪಡೆದರೆ, ಏಕಲವ್ಯ ಹಾಗೂ ಧನಂಜಯ ನಂತರದ ಸ್ಥಾನ ಪಡೆದಿವೆ. ಆಗಸ್ಟ್ 26ರಂದು ವೀರನಹೊಸಳ್ಳಿಯಿಂದ ಈ ಗಜಪಡೆಗೆ ಫಲತಾಂಬೂಲ ನೀಡುವ ಮೂಲಕ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಬಳಿಕ ಆಗಸ್ಟ್ 28ರಂದು ದಸರಾ ಜಗಪಡೆಯು ಜಯಮಾರ್ತಾಂಡ ದ್ವಾರ ಮೂಲಕ ಮೈಸೂರು ಅರಮನೆ ಪ್ರವೇಶಿಸಿತ್ತು.
- Ram
- Updated on: Aug 30, 2026
- 2:09 pm
ಮೈಸೂರು: ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ
ಮೈಸೂರು ದಸರಾ 2026ಕ್ಕಾಗಿ ಅರಮನೆಗೆ ಆಗಮಿಸಿದ ಗಜಪಡೆಯ ಶ್ರೀರಾಮ ಆನೆಯು ಜನದಟ್ಟಣೆ ಮತ್ತು ನಾದಸ್ವರದ ಸದ್ದಿಗೆ ಗಾಬರಿಗೊಂಡಿತು. ಅರಮನೆ ಪ್ರವೇಶಿಸುವಾಗ ಬ್ಯಾರಿಕೇಡ್ ಬೀಳಿಸಿ ಆನೆ ಗಾಬರಿಯಾದ ಸಂದರ್ಭದಲ್ಲಿ ಮಾವುತರು ಅದನ್ನು ಯಶಸ್ವಿಯಾಗಿ ನಿಯಂತ್ರಿಸಿದರು. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
- Ram
- Updated on: Aug 28, 2026
- 6:51 pm
ಆರ್ಎಸ್ಎಸ್ನಿಂದಲ್ಲ, ಕಾಂಗ್ರೆಸ್ನಿಂದಲೇ ದೇಶಕ್ಕೆ ಅಪಾಯ: ಮೈಸೂರಿನಲ್ಲಿ ಕುಮಾರಸ್ವಾಮಿ ವಾಗ್ದಾಳಿ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್, ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಹೆಚ್.ಸಿ. ಬಾಲಕೃಷ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿ, ಆರ್ಎಸ್ಎಸ್ನಿಂದ ದೇಶಕ್ಕೆ ಗಂಡಾಂತರವಿಲ್ಲ, ಕಾಂಗ್ರೆಸ್ನಿಂದಲೇ ದೇಶಕ್ಕೆ ಅಪಾಯ ಎಂದರು. ಪ್ರಿಯಾಂಕ್ ಖರ್ಗೆಗೆ ಆರ್ಎಸ್ಎಸ್ನ ತಪ್ಪೇನು ಎಂದು ಸ್ಪಷ್ಟಪಡಿಸಲು ಸವಾಲೆಸೆದರು. ಬಾಲಕೃಷ್ಣಗೆ ಹಳೆಯ ಹಗರಣಗಳನ್ನು ಬಯಲಿಗೆಳೆಯುವ ಎಚ್ಚರಿಕೆ ನೀಡಿದರು, ಕಾಂಗ್ರೆಸ್ನ ನಕಲಿ ಸಿದ್ಧಾಂತವನ್ನು ಟೀಕಿಸಿದರು.
- Ram
- Updated on: Aug 28, 2026
- 6:23 pm
ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ವಿವಿಧ ಕಲಾ ತಂಡಗಳ ಸಮೇತ ಭವ್ಯ ಸ್ವಾಗತ
Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಗಜಪಡೆಗೆ ಅರಮನೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಅರಣ್ಯ ಭವನದಿಂದ ಆಗಮಿಸಿದ ಆನೆಗಳಿಗೆ ಸಾಂಪ್ರದಾಯಿಕ ಗಜಪೂಜೆ ನೆರವೇರಿಸಲಾಯಿತು. ಸಚಿವರಾದ ಡಾ. ಯತೀಂದ್ರ ಸಿದ್ಧರಾಮಯ್ಯ ಮತ್ತು ರಾಮಲಿಂಗಾರೆಡ್ಡಿ ಪೂಜೆಯಲ್ಲಿ ಭಾಗವಹಿಸಿ, ದಸರಾ ಮಹೋತ್ಸವದ ಶುಭಾರಂಭಕ್ಕೆ ಚಾಲನೆ ನೀಡಿದರು.
- Ram
- Updated on: Aug 28, 2026
- 11:32 am
Mysore Dasara 2026: ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ಗಜಪಡೆ ಇಂದು ಅರಮನೆ ಪ್ರವೇಶಿಸಲಿದೆ. ಇಂದು ಬೆಳಗ್ಗೆ 9.55 ರಿಂದ 10.19ರ ಶುಭ ತುಲಾ ಲಗ್ನದಲ್ಲಿ ಅರಮನೆಗೆ ಆಗಮಿಸುವ ಆನೆಗಳಿಗೆ ಅರಣ್ಯ ಭವನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ ಸೇರಿದಂತೆ 9 ಆನೆಗಳು ಅರಮನೆಗೆ ಆಗಮಿಸುತ್ತಿವೆ.
- Ram
- Updated on: Aug 28, 2026
- 9:20 am