ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.
EaseMyTrip WCL 2025: ಭಾರತೀಯ ಲೆಜೆಂಡ್ಸ್ ತಂಡಕ್ಕೆ ಯುವರಾಜ್ ಸಿಂಗ್ ನಾಯಕ; ಸತತ ಎರಡನೇ ಪ್ರಶಸ್ತಿಯತ್ತ ಭಾರತೀಯರ ಕಣ್ಣು
EaseMyTrip WCL Season 2 cricket tournament: ಜುಲೈ ದ್ವಿತೀಯಾರ್ಧದಲ್ಲಿ ನಡೆಯಲಿರುವ ಎರಡನೇ ಸೀಸನ್ನ ಈಸ್ಮೈಟ್ರಿಪ್ ವರ್ಲ್ಸ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತೀಯ ತಂಡಕ್ಕೆ ಯುವರಾಜ್ ಸಿಂಗ್ ನಾಯಕರಾಗಿದ್ದಾರೆ. ಕಳೆದ ಸೀಸನ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಭಾರತ ಸತತ ಎರಡನೇ ಬಾರಿ ಪಟ್ಟ ಪಡೆಯಲು ಹೊರಟಿದೆ. ಈಸ್ ಮೈ ಟ್ರಿಪ್ ಸಂಸ್ಥೆ ಈ ಟೂರ್ನಿಯನ್ನು ಆಯೋಜಿಸುತ್ತಿದೆ.
- Vijaya Sarathy SN
- Updated on: Mar 21, 2025
- 6:38 pm
ಭಾರತದಲ್ಲಿ ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ಜಿಬಿ ಡಾಟಾ ಬಳಸುತ್ತಾನೆ? ಇಲ್ಲಿದೆ ಮಾಹಿತಿ
India's Soaring Data Consumption: ಭಾರತದಲ್ಲಿ 2024ರಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಡಾಟಾ ಬಳಕೆ ತಿಂಗಳಿಗೆ 27.5 ಜಿಬಿಯಷ್ಟಿದೆ ಎಂದು ನೊಕಿಯಾದ ವಾರ್ಷಕ ಮೊಬೈಲ್ ಬ್ರಾಡ್ಬ್ಯಾಂಡ್ ಇಂಡೆಕ್ಸ್ ವರದಿಯಲ್ಲಿ ಹೇಳಲಾಗಿದೆ. 5ಜಿ ಏರ್ ಫೈಬರ್ ಇತ್ಯಾದಿ ಎಫ್ಡಬ್ಲ್ಯುಎ ಸರ್ವಿಸ್ಗಳ ಬಳಕೆ ಹೆಚ್ಚುತ್ತಿರುವುದು ಮೊಬೈಲ್ ಡಾಟಾ ಕನ್ಸಮ್ಷನ್ ಅನ್ನು ಹೆಚ್ಚಿಸಿದೆ.
- Vijaya Sarathy SN
- Updated on: Mar 21, 2025
- 5:20 pm
ಬೆಂಜ್ ಹಾದಿ ತುಳಿದ ಟೊಯೋಟಾ; ಬೆಂಗಳೂರಿನಲ್ಲಿ ಅದರ ಮೊದಲ ಆರ್ ಅಂಡ್ ಡಿ ಸೆಂಟರ್
Toyota Motor's R&D centre in Bangalore: ಬಿಡದಿಯಲ್ಲಿರುವ ತನ್ನ ಫ್ಯಾಕ್ಟರಿ ಬಳಿ ಟೊಯೋಟಾ ಮೋಟಾರ್ ಸಂಸ್ಥೆ ಆರ್ ಅಂಡ್ ಡಿ ಘಟಕ ಸ್ಥಾಪಿಸುತ್ತಿದೆ. ಸುಜುಕಿ ಮೊಟಾರ್ ಸಂಸ್ಥೆಯ ಸಹಯೋಗದಲ್ಲಿ ಟೊಯೋಟಾದ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ನಿರ್ಮಾಣವಾಗಲಿದೆ. ಮೊದಲಿಗೆ 300 ಉದ್ಯೋಗಿಗಳು ಇದರಲ್ಲಿ ಇರಲಿದ್ದು, 2027ರಲ್ಲಿ ಸಿಬ್ಬಂದಿ ಸಂಖ್ಯೆಯನ್ನು 1,000ಕ್ಕೆ ಏರಿಸುವ ಸಾಧ್ಯತೆ ಇದೆ.
- Vijaya Sarathy SN
- Updated on: Mar 21, 2025
- 4:17 pm
ಏಪ್ರಿಲ್ 1ರಿಂದ ಟಿಡಿಎಸ್ ಬದಲಾವಣೆಗಳಿವು…
ಎಫ್ಡಿ, ಬಾಡಿಗೆ, ಡಿವಿಡೆಂಡ್ ಇತ್ಯಾದಿಯಿಂದ ಆದಾಯ ಪಡೆಯುತ್ತಿರುವವರಿಗೆ ಖುಷಿ ಸುದ್ದಿ, ಏಪ್ರಿಲ್ 1ರಿಂದ ಹೊಸ ನಿಯಮಗಳು...
- Vijaya Sarathy SN
- Updated on: Mar 21, 2025
- 3:25 pm
ನೂರು ಕೋಟಿ ಟನ್ ಮೈಲಿಗಲ್ಲು ಮುಟ್ಟಿದ ಕಲ್ಲಿದ್ದಲು ಉತ್ಪಾದನೆ; ಚೀನಾ ನಂತರ ಭಾರತದಲ್ಲೇ ಹೆಚ್ಚು
Coal production in India: ಅಗಾಧ ವಿದ್ಯುತ್ ಬೇಡಿಕೆ ಪೂರೈಸಲು ಸುಲಭ ಹಾಗೂ ಅಗ್ಗದ ಕಚ್ಚಾ ಸಾಮಗ್ರಿಯಾಗಿರುವ ಕಲ್ಲಿದ್ದಲು ಉತ್ಪಾದನೆ ಭಾರತದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಒಂದು ವರ್ಷದಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಮೊದಲ ಬಾರಿಗೆ ಬಿಲಿಯನ್ ಟನ್ ಮೈಲಿಗಲ್ಲು ಮುಟ್ಟಿದೆ. ಚೀನಾ ಬಿಟ್ಟರೆ ಭಾರತ ಮಾತ್ರವೇ ಇಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದನೆ ಮಾಡುತ್ತಿರುವುದು.
- Vijaya Sarathy SN
- Updated on: Mar 21, 2025
- 2:31 pm
ಕಾಶ್ಮೀರ, ಹಿಮಾಚಲ ಅಲ್ಲ, ಮರಳುಗಾಡಿನಲ್ಲಿ ಸೇಬು ಬೆಳೆದು ಸೈ ಎನಿಸಿದ ರಾಜಸ್ಥಾನದ ರೈತರು
Apples grown in Rajasthan's desert regions: ಕಾಶ್ಮೀರ, ಹಿಮಾಚಲ, ಊಟಿ ಇತ್ಯಾದಿ ಶೀತ ಪ್ರದೇಶಗಳಲ್ಲಿ ಬೆಳೆಯುವಂತಹ ಸೇಬು ಹಣ್ಣನ್ನು ರಾಜಸ್ಥಾನದ ರೈತರು ಅಪ್ಪಿದ್ದಾರೆ. ಸಿಕರ್, ಝುನಝುನು ಜಿಲ್ಲೆಯಲ್ಲಿ ಈಗ ಹಲವು ರೈತರು ಸೇಬು ಬೆಳೆಯುತ್ತಿದ್ದಾರೆ. ಉಷ್ಣ ಪ್ರದೇಶಗಳಿಗೆ ಹೊಂದಿಕೆಯಾಗಬಲ್ಲಂತಹ ಎಚ್ಆರ್ಎಂಎನ್-99 ತಳಿಯ ಸೇಬನ್ನು ಇಲ್ಲಿ ಬೆಳೆಯಲಾಗುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ರೈತರಿಗೆ ಐದಾರು ಲಕ್ಷ ರೂನಷ್ಟಾದರೂ ಲಾಭ ಸಿಗುತ್ತದೆ.
- Vijaya Sarathy SN
- Updated on: Mar 21, 2025
- 12:50 pm
ಯುಪಿಐ, ರುಪೇ ಕಾರ್ಡ್ ಪಾವತಿಗೆ ಸರ್ಕಾರದ ಸಬ್ಸಿಡಿಯಲ್ಲಿ ಖೋತಾ; ಪೇಮೆಂಟ್ ಉದ್ಯಮ ಕಂಗಾಲು
Govt stops subsidy for Rupay debit card: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಯುಪಿಐ ಹಣ ಪಾವತಿ ಸೇವೆ ನಿಭಾಯಿಸಲು ಪೇಮೆಂಟ್ ಕಂಪನಿಗಳಿಗೆ ಸಾಕಷ್ಟು ವೆಚ್ಚವಾಗುತ್ತದೆ. ಇದನ್ನು ಮರ್ಚಂಟ್ ಡಿಸ್ಕೌಂಟ್ ರೇಟ್ ಅಥವಾ ಎಂಡಿಆರ್ ಶುಲ್ಕದ ಮೂಲಕ ಈ ಪೇಮೆಂಟ್ ಕಂಪನಿಗಳು ವೆಚ್ಚ ಭರಿಸುತ್ತವೆ. ಸರ್ಕಾರವು ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ಗಳಿಗೆ ಪ್ರೋತ್ಸಾಹ ನೀಡಲು ಎಂಡಿಆರ್ ಶುಲ್ಕ ತೆರದಂತೆ ನಿರ್ಬಂಧಿಸಿದೆ. ಅದಕ್ಕೆ ಬದಲಾಗಿ ಪೇಮೆಂಟ್ ಕಂಪನಿಗಳಿಗೆ ಸಬ್ಸಿಡಿ ನೀಡುತ್ತದೆ. ಈಗ ಈ ಸಬ್ಸಿಡಿಯನ್ನು ಸರ್ಕಾರ ಸಾಕಷ್ಟು ಮೊಟಕುಗೊಳಿಸಿರುವುದು ಪೇಮೆಂಟ್ ಉದ್ಯಮಕ್ಕೆ ಚಿಂತೆಯ ವಿಷಯವಾಗಿದೆ.
- Vijaya Sarathy SN
- Updated on: Mar 21, 2025
- 11:51 am
Gold Rate Today Bangalore: ಚಿನ್ನ, ಬೆಳ್ಳಿ ಎರಡೂ ಭರ್ಜರಿ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
Bullion Market 2025 March 21st: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಎರಡೂ ಇಳಿಕೆ ಆಗಿವೆ. ಚಿನ್ನದ ಬೆಲೆ ಗ್ರಾಮ್ಗೆ 40 ರೂ ಕಡಿಮೆ ಆದರೆ, ಬೆಳ್ಳಿ ಬೆಲೆ 2 ರೂ ಇಳಿದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 8,270 ರೂಗೆ ಇಳಿದಿದೆ. ಶುದ್ಧ ಚಿನ್ನದ ಬೆಲೆ 9,022 ರೂ ಆಗಿದೆ. ಬೆಳ್ಳಿ ಬೆಲೆ 105 ರೂನಿಂದ 103 ರೂಗೆ ಇಳಿದಿದೆ. ಚೆನ್ನೈನಲ್ಲಿ ಬೆಲೆ 112 ರೂ ಆಗಿದೆ.
- Vijaya Sarathy SN
- Updated on: Mar 21, 2025
- 10:33 am
ಭಾರತ ಸರ್ಕಾರ ವಿರುದ್ಧ ತಿರುಗಿನಿಂತ ಇಲಾನ್ ಮಸ್ಕ್ ಕಂಪನಿ; ಕರ್ನಾಟಕ ಹೈಕೋರ್ಟ್ನಲ್ಲಿ ಎಕ್ಸ್ನಿಂದ ಮೊಕದ್ದಮೆ
Elon Musk's X files law suit against Govt of India: ಇಲಾನ್ ಮಸ್ಕ್ ಅವರ ಸೋಷಿಯಲ್ ಮೀಡಿಯಾ ಸಂಸ್ಥೆಯಾದ ಎಕ್ಸ್ ಕರ್ನಾಟಕ ಹೈಕೋರ್ಟ್ನಲ್ಲಿ ಭಾರತ ಸರ್ಕಾರ ವಿರುದ್ಧ ಮೊಕದ್ದಮೆ ಸಲ್ಲಿಕೆ ಮಾಡಿದೆ. ಸರ್ಕಾರ ಸರಿಯಾದ ಕಾನೂನು ಪಾಲನೆ ಮಾಡದೆ ಕಂಟೆಂಟ್ ರೆಗ್ಯುಲೇಟ್ ಮಾಡುತ್ತಿದೆ ಎಂದು ಎಕ್ಸ್ ತನ್ನ ಕಾನೂನು ಮೊಕದ್ದಮೆಯಲ್ಲಿ ಆರೋಪಿಸಿದೆ. ಹಿಂದಿನ ಸುಪ್ರೀಮ್ ಕೋರ್ಟ್ ತೀರ್ಪೊಂದನ್ನು ಅದು ತನ್ನ ವಾದಕ್ಕೆ ಉಲ್ಲೇಖಿಸಿದೆ.
- Vijaya Sarathy SN
- Updated on: Mar 20, 2025
- 7:10 pm
ಸಣ್ಣ ವ್ಯಾಪಾರಿಗಳಿಗೆ ಯುಪಿಐ ಕಮಿಷನ್
ಸಣ್ಣ ಮೊತ್ತದ ಯುಪಿಐ ಪಾವತಿಗಳಿಗೆ ಉತ್ತೇಜಿಸಲು ಸರ್ಕಾರದಿಂದ 1,500 ಕೋಟಿ ರೂ ಇನ್ಸೆಂಟಿವ್ ಸ್ಕೀಮ್
- Vijaya Sarathy SN
- Updated on: Mar 20, 2025
- 5:58 pm
ಕರ್ನಾಟಕದಲ್ಲಿ ಒಂದು ಲೀಟರ್ ಪೆಟ್ರೋಲ್ಗೆ ಕೇಂದ್ರ ಮತ್ತು ರಾಜ್ಯದ ತೆರಿಗೆ ಎಷ್ಟು? ತೆರಿಗೆ ಬಿಟ್ಟರೆ ಮೂಲ ಪೆಟ್ರೋಲ್ ಬೆಲೆ ಎಷ್ಟು? ಇಲ್ಲಿದೆ ಡೀಟೇಲ್ಸ್
Taxes on petrol in Karnataka: ಭಾರತದಲ್ಲಿ ಕೇಂದ್ರ ಸರ್ಕಾರದಿಂದ ಅಬಕಾರಿ ಶುಲ್ಕ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ರತೀ ರಾಜ್ಯಗಳಲ್ಲೂ ವ್ಯಾಟ್ ಅಥವಾ ಬೇರೆ ತೆರಿಗೆಗಳು ಜಾರಿಯಲ್ಲಿರುತ್ತವೆ. ದಕ್ಷಿಣ ರಾಜ್ಯಗಳು ಅತಿಹೆಚ್ಚು ತೆರಿಗೆ ವಿಧಿಸುತ್ತವೆ. ಕರ್ನಾಟಕವೂ ಕೂಡ ಹೆಚ್ಚು ತೆರಿಗೆ ವಿಧಿಸುವ ರಾಜ್ಯಗಳಲ್ಲಿ ಒಂದು. ತೆಲಂಗಾಣ ರಾಜ್ಯ ಅತಿಹೆಚ್ಚು ತೆರಿಗೆ ಹೇರುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಕಡಿಮೆ ತೆರಿಗೆ ಇದೆ.
- Vijaya Sarathy SN
- Updated on: Mar 20, 2025
- 4:47 pm
ಆರ್ಬಿಐನಿಂದ ಕ್ರೆಡಿಟ್ ಸ್ಕೋರ್ ನಿಯಮದಲ್ಲಿ ಬದಲಾವಣೆ; ಹೊಸ ಸಾಲಗಳ ಮೇಲೆ ಪರಿಣಾಮ; ಇದರ ಸಾಧಕ ಬಾಧಕಗಳಿವು…
Credit score new rules: ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ತಿಂಗಳಿಗೊಮ್ಮೆ ಕ್ರೆಡಿಟ್ ಬ್ಯೂರೋಗಳಿಗೆ ಅಪ್ಡೇಟ್ ಮಾಡುತ್ತಿದ್ದುವು. ಈಗ ಆರ್ಬಿಐ ಹೊಸ ನಿಯಮ ಮಾಡಿದ್ದು, ಅದರ ಪ್ರಕಾರ ಪ್ರತೀ 15 ದಿನಗಳಿಗೊಮ್ಮೆ ಕ್ರೆಡಿಟ್ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. ಜನವರಿ 1ರಿಂದ ಜಾರಿಗೆ ಬಂದಿರುವ ಈ ಹೊಸ ನಿಯಮದಿಂದಾಗಿ, ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಬಹಳ ಬೇಗ ಅಪ್ಡೇಟ್ ಆಗಬಹುದು.
- Vijaya Sarathy SN
- Updated on: Mar 20, 2025
- 3:21 pm