ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.
ಇನ್ಫೋಸಿಸ್ನಲ್ಲಿ ಭರ್ಜರಿ ಸಂಬಳ; ಎಂಟ್ರಿ ಲೆವೆಲ್ನಲ್ಲೇ 21 ಲಕ್ಷ ರೂ ಸ್ಯಾಲರಿ ಆಫರ್
Infosys offering Rs 21 lakh salary package at entry level: ಇನ್ಫೋಸಿಸ್ ದೊಡ್ಡ ಸಂಬಳ ಕೊಟ್ಟು ಹೊಸಬರನ್ನು ನೇಮಕ ಮಾಡಿಕೊಳ್ಳುತ್ತಿದೆ. ವರದಿ ಪ್ರಕಾರ ಎಂಟ್ರಿ ಲೆವೆಲ್ ಸಂಬಳ ವರ್ಷಕ್ಕೆ 7ರಿಂದ 21 ಲಕ್ಷ ರೂವರೆಗೆ ಆಫರ್ ಮಾಡಲಾಗುತ್ತಿದೆ. ಸ್ಪೆಷಲೈಸ್ಡ್ ಹುದ್ದೆಗಳಿಗೆ 11 ಲಕ್ಷ ರೂನಿಂದ 21 ಲಕ್ಷ ರೂವರೆಗೆ ಪ್ಯಾಕೇಜ್ ಇದೆ. ಡಿಜಿಟಲ್ ಎಂಜಿನಿಯರ್ಗೆ 7 ಲಕ್ಷ ರೂ ಸಂಬಳ ಕೊಡಲಾಗುತ್ತಿದೆ ಎಂದು ಹೇಳಲಾಗಿದೆ.
- Vijaya Sarathy SN
- Updated on: Dec 26, 2025
- 12:18 pm
Gold Rate Today Bangalore: 14,000 ರೂ ಗಡಿ ದಾಟಿದ ಚಿನ್ನದ ಬೆಲೆ
Bullion Market 2025 December 26th: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸತತ ಏರಿಕೆ ಮುಂದುವರಿದಿದೆ. ಚಿನ್ನದ ಬೆಲೆ ಗ್ರಾಮ್ಗೆ 70 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 6 ರೂ ಜಿಗಿದಿದೆ. ಆಭರಣ ಚಿನ್ನದ ಬೆಲೆ 12,765 ರೂನಿಂದ 12,835 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 14,002 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 234 ರೂನಿಂದ 240 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 254 ರೂ ಆಗಿದೆ.
- Vijaya Sarathy SN
- Updated on: Dec 26, 2025
- 11:25 am
Infra Achievements: 2025ರಲ್ಲಿ ಭಾರತದಲ್ಲಿ ಅದೆಷ್ಟು ಮೂಲಸೌಕರ್ಯ ಯೋಜನೆಗಳು, ಮೈಲಿಗಲ್ಲುಗಳು, ಮೊದಲುಗಳು
Building the New India: 2025 - A Year of Infrastructure Breakthroughs: 2025 ಮುಗಿದು 2026 ಬರುತ್ತಿದೆ. 2025ರ ವರ್ಷದಲ್ಲಿ ಭಾರತದ ಪಾಲಿಗೆ ಅನೇಕ ಅವಿಸ್ಮರಣೀಯ ಅಂಶಗಳಿವೆ. ಅನೇಕ ಮೊದಲುಗಳಿವೆ, ಮೈಲಿಗಲ್ಲುಗಳಿವೆ. ಸ್ವಾತಂತ್ರ್ಯ ಬಂದ ಬಳಿಕ ಒಂದು ರಾಜ್ಯಕ್ಕೆ ಮೊದಲ ಬಾರಿಗೆ ರೈಲು ಸಂಪರ್ಕ ಸಿಕ್ಕಿದೆ. ಕೆಲ ಹಳ್ಳಿಗಳಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ. ಕೆಲ ಹಳ್ಳಿಗಳಿಗೆ ಮೊದಲ ಬಾರಿಗೆ ಮೊಬೈಲ್ ಟವರ್ ಸಿಕ್ಕಿದೆ.
- Vijaya Sarathy SN
- Updated on: Dec 25, 2025
- 8:17 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; ದುರುಳರ ಹಿಂಸಾಚಾರಕ್ಕೆ 29 ವರ್ಷದ ಸಾಮ್ರಾಟ್ ಬಲಿ
Bangladesh violence, Hindu man killed: ಬಾಂಗ್ಲಾದೇಶದಲ್ಲಿ ಒಂದೇ ವಾರದ ಅಂತರದಲ್ಲಿ ಎರಡನೇ ಹಿಂದೂ ವ್ಯಕ್ತಿಯ ಕಗ್ಗೊಲೆಯಾಗಿದೆ. ದೀಪು ಚಂದ್ರದಾಸ್ ಹತ್ಯೆಯಾದ ಕೆಲ ದಿನಗಳಲ್ಲಿ ಅಮೃತ್ ಮಂಡಲ್ ಎನ್ನುವ ಹಿಂದೂ ಧರ್ಮೀಯನನ್ನು ದುರುಳರ ಗುಂಪು ಬಲಿಪಡೆದಿದೆ. ರಾಜಬರಿ ಜಿಲ್ಲೆಯಲ್ಲಿ ಡಿ. 24 ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ.
- Vijaya Sarathy SN
- Updated on: Dec 25, 2025
- 7:03 pm
ಇದು ಬಾಂಗ್ಲಾದೇಶದ 2ನೇ ವಿಮೋಚನೆ: 2024ರ ದಂಗೆಯನ್ನು ಹೊಗಳಿದ ಬಿಎನ್ಪಿ ನಾಯಕ ತಾರಿಖ್ ರಹಮಾನ್
Ex Bangla PM Khaleda Zia's son Tarique Rahman comes back to Bangladesh after 17 years in exile: ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಿಎನ್ಪಿ ಛೇರ್ಮನ್ ಖಾಲಿದಾ ಜಿಯಾ ಅವರ ಮಗ ತಾರೀಖ್ ರಹಮಾನ್ 17 ವರ್ಷದ ಬಳಿಕ ವಾಪಸ್ಸಾಗಿದ್ದಾರೆ. ಲಂಡನ್ನಲ್ಲಿ ಇದ್ದ ರಹಮಾನ್, ಇದೀಗ ತಮ್ಮ ತಾಯಿಯಿಂದ ಪಕ್ಷದ ಚುಕ್ಕಾಣಿ ಪಡೆಯುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಬಿಎನ್ಪಿ ಗೆಲ್ಲುವ ಸಾಧ್ಯತೆ ಇದೆ ಎಂದೆನ್ನಲಾಗುತ್ತಿದೆ.
- Vijaya Sarathy SN
- Updated on: Dec 25, 2025
- 5:18 pm
ಫಾಕ್ಸ್ಕಾನ್ ಘಟಕ; ಕರ್ನಾಟಕ ಮಾದರಿ ಎಂದ ರಾಹುಲ್ ಗಾಂಧಿ; ಇದು ಮೇಕ್ ಇನ್ ಇಂಡಿಯಾ ಎಫೆಕ್ಟ್ ಎಂದ ಕೇಂದ್ರ ಸಚಿವ
Union minister Vaishnaw gives cheeky reply to Rahul Gandhi on Foxconn factory: ದೇವನಹಳ್ಳಿಯಲ್ಲಿ ಫಾಕ್ಸ್ಕಾನ್ ಘಟಕ ಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸಿ ರಾಹುಲ್ ಗಾಂಧಿ ಅವರು ಕರ್ನಾಟಕ ಮಾದರಿಯಾಗಿದೆ ಎಂದಿದ್ದಾರೆ. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎ ವೈಷ್ಣವ್, ಮೇಕ್ ಇನ್ ಇಂಡಿಯಾವನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ. ಫಾಕ್ಸ್ಕಾನ್ ತನ್ನ ದೇವನಹಳ್ಳಿ ಘಟಕದಲ್ಲಿ 30,000 ಮಂದಿ ಉದ್ಯೋಗಿಗಳನ್ನು ಕೇವಲ 8-9 ತಿಂಗಳಲ್ಲಿ ನೇಮಕ ಮಾಡಿಕೊಂಡಿದೆ.
- Vijaya Sarathy SN
- Updated on: Dec 25, 2025
- 4:24 pm
Maoists Encounter: ಒಡಿಶಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಐವರು ನಕ್ಸಲರ ಹತ್ಯೆ
Anti-naxal operations in Odisha: ಒಡಿಶಾದ ಕಂಧಮಾಲ್ ಮತ್ತು ಗಂಜಾಮ್ನ ಅರಣ್ಯಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಐವರನ್ನು ಹತ್ಯೆ ಮಾಡಲಾಗಿದೆ. ಬುಧವಾರ ಮತ್ತು ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ವಿಶೇಷ ತಂಡಗಳು, ಸಿಆರ್ಪಿಎಫ್, ಬಿಎಸ್ಎಫ್ ತಂಡಗಳು ಪಾಲ್ಗೊಂಡಿದ್ದವು. ಮೃತ ಮಾವೋವಾದಿಗಳಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಒಬ್ಬಾತನು ಒಡಿಶಾದ ನಕ್ಸಲ್ ಕಾರ್ಯಾಚರಣೆಯ ಮುಖ್ಯಸ್ಥನಾಗಿದ್ದಾನೆ.
- Vijaya Sarathy SN
- Updated on: Dec 25, 2025
- 3:31 pm
ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ?
RBI campaign to return unclaimed bank deposits: ಹತ್ತಕ್ಕೂ ಹೆಚ್ಚು ವರ್ಷಗಳಿಂದ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳು ಮತ್ತು ಠೇವಣಿಗಳನ್ನು ವಿಶೇಷ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ರೀತಿ ದೇಶಾದ್ಯಂತ 75,000 ಕೋಟಿ ರೂನಷ್ಟು ಮೊತ್ತದ ಹಣ ಈ ನಿಧಿಯಲ್ಲಿದೆ. ಕರ್ನಾಟಕದ ವಿವಿಧ ಬ್ಯಾಂಕುಗಳ ಇಂಥ ಹಣವೇ 3,400 ಕೋಟಿ ರೂ ಇದೆ ಎನ್ನಲಾಗಿದೆ.
- Vijaya Sarathy SN
- Updated on: Dec 25, 2025
- 12:58 pm
ಆಲಿಗಡ್ ಮುಸ್ಲಿಂ ಯೂನಿವರ್ಸಿಟಿ ಕ್ಯಾಂಪಸ್ನಲ್ಲೇ ಬೋಧಕ ರಾವ್ ದಾನಿಶ್ ಅಲಿ ಹತ್ಯೆ
Aligarh Muslim University teacher Rao Danish Ali shot dead: ಉತ್ತರಪ್ರದೇಶದ ಆಲಿಗಡ್ ಮುಸ್ಲಿಂ ಯೂನಿವರ್ಸಿಟಿಯ ಎಬಿಕೆ ಸ್ಕೂಲ್ನ ಟೀಚರ್ ರಾವ್ ದಾನಿಶ್ ಅಲಿ ಅವರನ್ನು ಹತ್ಯೆಗೈಯಲಾಗಿದೆ. ಯೂನಿವರ್ಸಿಟಿ ಕ್ಯಾಂಪಸ್ ಪ್ರದೇಶದಲ್ಲೇ ಡಿಸೆಂಬರ್ 24ರಂದು ರಾತ್ರಿ 9ಗಂಟೆಗೆ ಈ ಘಟನೆ ನಡೆದಿದೆ. ರಾವ್ ಅವರು ವಾಕಿಂಗ್ಗೆ ಹೋದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಕೊಂದಿದ್ದಾರೆ.
- Vijaya Sarathy SN
- Updated on: Dec 25, 2025
- 11:34 am
Gold Rate Today Bangalore: ಗುರುವಾರವೂ ಹೆಚ್ಚಿದ ಚಿನ್ನ, ಬೆಳ್ಳಿ ಬೆಲೆ
Bullion Market 2025 December 25th: ಕ್ರಿಸ್ಮಸ್ ಹಬ್ಬದ ದಿನವಾದ ಇಂದು ಚಿನ್ನ, ಬೆಳ್ಳಿ ಬೆಲೆಗಳು ಅಲ್ಪ ಏರಿಕೆ ಆಗಿವೆ. ಚಿನ್ನದ ಬೆಲೆ 30 ರೂ, ಬೆಳ್ಳಿ ಬೆಲೆ 1 ರೂ ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 12,735 ರೂನಿಂದ 12,765 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 13,925 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 233 ರೂನಿಂದ 234 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 245 ರೂ ಆಗಿದೆ.
- Vijaya Sarathy SN
- Updated on: Dec 25, 2025
- 10:55 am
ದವಡೆ ಹಲ್ಲು ಉದುರಿಸಿಕೊಂಡು ಹೋಗಬೇಕು… ಗಗನಯಾತ್ರಿಯಾಗಲು ಬೇಕು ದಂತ ತ್ಯಾಗ; ಯಾಕೆ ಗೊತ್ತಾ?
Indian astronaut Shubhanshu Shukla reveals surprising fact: ಹಿಂದೆಲ್ಲಾ ಮಕ್ಕಳು ಪೈಲಟ್ ಆಗಲು ಬಯಸುತ್ತಿದ್ದರು. ಈಗ ಬಹಳಷ್ಟು ಮಕ್ಕಳಿಗೆ ತಾವು ಗಗನಯಾತ್ರಿಗಳಾಗಬೇಕು ಎನ್ನುವ ಅಭಿಲಾಷೆ ಹುಟ್ಟಿಕೊಂಡಿದೆ. ಆದರೆ, ಗಗನಯಾತ್ರಿಯಾಗುವುದು ಅಷ್ಟು ಸುಲಭವಲ್ಲ. ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣಿಸಿ ಬಂದ ಶುಭಾಂಶು ಶುಕ್ಲ ಒಂದು ಅಚ್ಚರಿ ಸಂಗತಿ ಬಿಚ್ಚಿಟ್ಟಿದ್ದಾರೆ. ಗಗನಯಾತ್ರಿಗಳಾಗಬೇಕೆನ್ನುವವರು ಕೆಲ ಹಲ್ಲುಗಳನ್ನು ತ್ಯಾಗ ಮಾಡಬೇಕಾಗಬಹುದಂತೆ.
- Vijaya Sarathy SN
- Updated on: Dec 24, 2025
- 10:52 pm
Bomb Attack: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಬಾಂಬ್ ದಾಳಿಗೆ ಒಬ್ಬ ಬಲಿ
Crude bomb attack in Dhaka, Bangladesh: ಬಾಂಗ್ಲಾದೇಶ ರಾಜಧಾನಿ ಢಾಕಾ ನಗರದ ಮೋಘಬಜಾರ್ ಬಳಿ ದುಷ್ಕರ್ಮಿಗಳು ಎಸೆದ ಕಚ್ಛಾ ಬಾಂಬ್ ದಾಳಿಯಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ. ಫ್ಲೈ ಓವರ್ ಮೇಲಿಂದ ಎಸೆಯಲಾದ ಬಾಂಬು, ಕೆಳಗಿದ್ದ ವ್ಯಕ್ತಿಯ ತಲೆಗೆ ಬಡಿದು ಸ್ಫೋಟಗೊಂಡಿದೆ. ಆತ ಸ್ಥಳದಲ್ಲೇ ಸತ್ತಿದ್ದಾನೆ. ಡಿಸೆಂಬರ್ 12ರಂದು ಉಸ್ಮಾನ್ ಹದಿ ಹತ್ಯೆ ನಂತರ ಬಾಂಗ್ಲಾದ ಹಲವೆಡೆ ಹಿಂಸಾಚಾರ ಹೆಚ್ಚಾಗಿದೆ.
- Vijaya Sarathy SN
- Updated on: Dec 24, 2025
- 9:51 pm