AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಗ್ಗನಹಳ್ಳಿ ವಿಜಯಸಾರಥಿ

ಸುಗ್ಗನಹಳ್ಳಿ ವಿಜಯಸಾರಥಿ

Chief Sub Editor - TV9 Kannada

vijayasarathy.nanjappa@tv9.com

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow On:
Children’s Mutual Fund: ಜನಪ್ರಿಯತೆ ಹೆಚ್ಚುತ್ತಿರುವ ಮಕ್ಕಳ ಮ್ಯೂಚುವಲ್ ಫಂಡ್​ಗಳು; ಹೂಡಿಕೆಯಲ್ಲಿ ಶೇ. 160 ಹೆಚ್ಚಳ

Children’s Mutual Fund: ಜನಪ್ರಿಯತೆ ಹೆಚ್ಚುತ್ತಿರುವ ಮಕ್ಕಳ ಮ್ಯೂಚುವಲ್ ಫಂಡ್​ಗಳು; ಹೂಡಿಕೆಯಲ್ಲಿ ಶೇ. 160 ಹೆಚ್ಚಳ

Children's Mutual Funds: ಮಕ್ಕಳ ಮ್ಯೂಚುವಲ್ ಫಂಡ್​ಗಳ ಜನಪ್ರಿಯತೆ ಹೆಚ್ಚುತ್ತಿದೆ. ಇದರಲ್ಲಿ ಮಾಡಲಾಗಿರುವ ಹೂಡಿಕೆ 25,675 ಕೋಟಿ ರೂ ಆಗಿದೆ. ಐದು ವರ್ಷದ ಹಿಂದೆ ಈ ಮಕ್ಕಳ ಫಂಡ್​ಗಳ ಎಯುಎಂ 9,866 ಕೋಟಿ ರೂ ಇತ್ತು. ಗಮನಾರ್ಹ ಸಂಗತಿ ಎಂದರೆ, ಹೆಚ್ಚಿನ ಮಕ್ಕಳ ಮ್ಯೂಚುವಲ್ ಫಂಡ್​ಗಳು ಐದು ವರ್ಷದಲ್ಲಿ ಉತ್ತಮ ಸಿಎಜಿಆರ್​ನಲ್ಲಿ ಬೆಳೆದಿವೆ.

Indian startups: 2025ರಲ್ಲಿ 44,000 ಹೊಸ ಸ್ಟಾರ್ಟಪ್​ಗಳು; ಮಾನ್ಯ ಪಡೆದ ನವೋದ್ದಿಮೆಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ

Indian startups: 2025ರಲ್ಲಿ 44,000 ಹೊಸ ಸ್ಟಾರ್ಟಪ್​ಗಳು; ಮಾನ್ಯ ಪಡೆದ ನವೋದ್ದಿಮೆಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ

Union minister Piyush Goyal's X post on Indian startups scene: ಭಾರತದಲ್ಲಿ ಈ ವರ್ಷ (2025) ಶುರುವಾಗಿರುವ ಸ್ಟಾರ್ಟಪ್​ಗಳ ಸಂಖ್ಯೆ 44,000ಕ್ಕೂ ಅಧಿಕ ಎನ್ನುವ ಮಾಹಿತಿ ಇದೆ. ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ನೀಡಿರುವ ಮಾಹಿತಿ ಪ್ರಕಾರ ಈವರೆಗೆ ನೊಂದಾಯಿತವಾದ ಸ್ಟಾರ್ಟಪ್​ಗಳು ಎರಡು ಲಕ್ಷಕ್ಕೂ ಅಧಿಕ ಇದೆ. ಸರ್ಕಾರದ ವಿವಿಧ ಕ್ರಮಗಳಿಂದ ಬಹಳ ಆರೋಗ್ಯಯುತವಾದ ಸ್ಟಾರ್ಟಪ್ ಇಕೋಸಿಸ್ಟಂ ಹೇಗೆ ಬೆಳೆದಿದೆ ಎನ್ನುವುದನ್ನು ಸಚಿವರು ವಿವರಿಸಿದ್ದಾರೆ.

ಈ ಸಿನಿಮಾ ಹಿಟ್ ಆಗುತ್ತಿದ್ದಂತೇ ಪಿವಿಆರ್ ಐನಾಕ್ಸ್ ಷೇರಿಗೆ ಭರ್ಜರಿ ಬೇಡಿಕೆ

ಈ ಸಿನಿಮಾ ಹಿಟ್ ಆಗುತ್ತಿದ್ದಂತೇ ಪಿವಿಆರ್ ಐನಾಕ್ಸ್ ಷೇರಿಗೆ ಭರ್ಜರಿ ಬೇಡಿಕೆ

PVR Inox share price increase on Monday: ಸಿನಿಮಾಗಳು ಹಿಟ್ ಆದರೆ ಥಿಯೇಟರ್​ಗಳು ನಳನಳಿಸುತ್ತವೆ. ಬ್ಯುಸಿನೆಸ್ ಹೆಚ್ಚಾಗುತ್ತದೆ. ಪಿವಿಆರ್ ಐನಾಕ್ಸ್ ಸಿನಿಮಾ ಮಂದಿರಗಳು ಕಳೆದ ಒಂದು ವಾರದಿಂದ ಮಿಂಚುತ್ತಿವೆ. ಧುರಂಧರ್ ಸಿನಿಮಾ ನೋಡಲು ಜನರು ಮಾಲ್​ಗಳತ್ತ ನುಗ್ಗುತ್ತಿದ್ದಾರೆ. ಇದೇ ಮ್ಯಾಡ್ ರಶ್ ಷೇರು ಬಜಾರಿನಲ್ಲಿ ಪಿವಿಆರ್ ಷೇರು ಖರೀದಿಗೂ ಆಗುತ್ತಿದೆ.

ಎಫ್​ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ

ಎಫ್​ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ

Important money myths: ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಹಣ ಹಾಗೂ ಹೂಡಿಕೆಯ ಮಹತ್ವದ ಕುರಿತು ಅರಿವು ಮೂಡಿಸುವುದು ಉತ್ತಮ. ಆದರೆ, ಮಕ್ಕಳಿಗೆ ಮಾದರಿ ಹಾಕಿಕೊಡಬೇಕಾದ ದೊಡ್ಡವರೇ ಹಣದ ವಿಚಾರದಲ್ಲಿ ದಡ್ಡತನ ತೋರುವುದುಂಟು. ಇವತ್ತು ಬಹಳಷ್ಟು ಜನರು ಹಣ ಹಾಗೂ ಹೂಡಿಕೆ ವಿಚಾರದಲ್ಲಿ ತಪ್ಪು ಕಲ್ಪನೆ ಮತ್ತು ಅಭಿಪ್​ರಾಯಗಳನ್ನು ಹೊಂದಿದ್ದಾರೆ.

ವಿಐಗೆ ಸರ್ಕಾರದಿಂದ ನೆರವಿನ ಹಸ್ತ?; ಎಜಿಆರ್ ಬಾಕಿ ಪಾವತಿಯಲ್ಲಿ ಹಲವು ರಿಯಾಯಿತಿ?

ವಿಐಗೆ ಸರ್ಕಾರದಿಂದ ನೆರವಿನ ಹಸ್ತ?; ಎಜಿಆರ್ ಬಾಕಿ ಪಾವತಿಯಲ್ಲಿ ಹಲವು ರಿಯಾಯಿತಿ?

Proposal with government to help Vodafone Idea on AGR dues: 83,000 ಕೋಟಿ ರೂ ಎಜಿಆರ್ ಬಾಕಿ ಪಾವತಿಯ ಹೊರೆಯಿಂದ ಕಂಗೆಟ್ಟಿರುವ ವೊಡಾಫೋನ್ ಐಡಿಯಾಗೆ ಸರ್ಕಾರ ರಿಲೀಫ್ ನೀಡಬಹುದು ಎನ್ನಲಾಗಿದೆ. ಈ ಎಜಿಆರ್ ಬಾಕಿಯಲ್ಲಿ ಅರ್ಧದಷ್ಟು ಹಣವನ್ನು ಸರ್ಕಾರ ಮಾಫಿ ಮಾಡಬಹುದು. ನಾಲ್ಕೈದು ವರ್ಷ ಮೊರಾಟೋರಿಯಂ ಅವಧಿ ನೀಡಬಹುದು. ಈ ಅವಧಿಯಲ್ಲಿ ಬಡ್ಡಿಯೂ ಇರುವುದಿಲ್ಲ. ಇಂಥದ್ದೊಂದು ಪ್ರಸ್ತಾಪ ಸರ್ಕಾರದ ಮುಂದಿದೆ.

Gold Rate Today Bangalore: ಮತ್ತೆ ಏರಿದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ

Gold Rate Today Bangalore: ಮತ್ತೆ ಏರಿದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ

Bullion Market 2025 December 15th: ಇಂದು ಸೋಮವಾರ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಏರಿವೆ. ಚಿನ್ನದ ಬೆಲೆ 75 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 3 ರೂ ಹಿಗ್ಗಿದೆ. ಆಭರಣ ಚಿನ್ನದ ಬೆಲೆ 12,275 ರೂನಿಂದ 12,350 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 13,473 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 201 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 213 ರೂ ಆಗಿದೆ.

ಮೊಬೈಲ್, ಬೈಕ್, ಕಾರ್, ಟಿವಿ, ಫ್ರಿಡ್ಜ್ ಮಾಲಕತ್ವದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ತಗ್ಗುತ್ತಿದೆಯಾ?

ಮೊಬೈಲ್, ಬೈಕ್, ಕಾರ್, ಟಿವಿ, ಫ್ರಿಡ್ಜ್ ಮಾಲಕತ್ವದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ತಗ್ಗುತ್ತಿದೆಯಾ?

Mobile, fridge, motor vehicles, television ownership: ಕುಟುಂಬಗಳಿಗೆ ಈಗ ಅಗತ್ಯ ಸೌಕರ್ಯಗಳಾದ ಮೊಬೈಲು, ಟಿವಿ, ಮೋಟಾರು ವಾಹನ, ಫ್ರಿಡ್ಜ್ ಇತ್ಯಾದಿಗಳು ಬಡವರಿಗೆ ಕೈಗೆಟುಕುತ್ತಿವೆಯಾ? 2011-12 ಮತ್ತು 2023-24ರಲ್ಲಿ ಪಡೆಯಲಾದ ಸಮೀಕ್ಷಾ ಮಾಹಿತಿ ಕೆಲ ಅಚ್ಚರಿಯ ಅಂಶಗಳನ್ನು ಹೊರಗೆಡವಿದೆ. ಅತೀ ಶ್ರೀಮಂತ ಶೇ. 20 ಕುಟುಂಬಗಳು ಹಾಗೂ ಅತೀ ಬಡ ಶೇ. 40ರಷ್ಟು ಕುಟುಂಬಗಳ ನಡುವೆ ಅಂತರ ಕಡಿಮೆ ಆಗಿದೆ.

ತಿರುಪ್ಪರಂಕುಂಡ್ರಂ: ಕಾರ್ತಿಕ ದೀಪ ಹಚ್ಚುವ ಅವಕಾಶಕ್ಕೆ ಒತ್ತಾಯಿಸಿ ಸ್ಥಳೀಯರಿಂದ ಉಪವಾಸ ಸತ್ಯಾಗ್ರಹ

ತಿರುಪ್ಪರಂಕುಂಡ್ರಂ: ಕಾರ್ತಿಕ ದೀಪ ಹಚ್ಚುವ ಅವಕಾಶಕ್ಕೆ ಒತ್ತಾಯಿಸಿ ಸ್ಥಳೀಯರಿಂದ ಉಪವಾಸ ಸತ್ಯಾಗ್ರಹ

Madurai Thiruparankundram Kartika deepam controversy: ತಮಿಳುನಾಡಿನ ತಿರುಪ್ಪರಂಕುಂಡ್ರಂನಲ್ಲಿ ಕಾರ್ತೀಕ ದೀಪ ಹಚ್ಚಿಸಲು ಹಿಂದೂಗಳಿಗೆ ಕೋರ್ಟ್ ಅವಕಾಶ ಕೊಟ್ಟಿದೆ. ಆದರೆ, ಸರ್ಕಾರ ಮತ್ತು ಪೊಲೀಸರು ಅನುಮತಿ ಕೊಟ್ಟಿಲ್ಲ. ಸ್ಥಳೀಯ ಜನರು ದೀಪ ಹಚ್ಚುವ ಅವಕಾಶ ಕೋರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಡಿಎಂಕೆ ಪಕ್ಷ ಹಿಂದೂಗಳ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪ ಇದೆ.

ಬಾಂಡಿ ಬೀಚ್ ದಾಳಿ; ಉಗ್ರನತ್ತ ಜಿಗಿದು ರೈಫಲ್ ಕಿತ್ತುಕೊಂಡ ವ್ಯಕ್ತಿಯ ಸಾಹಸದ ವಿಡಿಯೋ ದೃಶ್ಯ

ಬಾಂಡಿ ಬೀಚ್ ದಾಳಿ; ಉಗ್ರನತ್ತ ಜಿಗಿದು ರೈಫಲ್ ಕಿತ್ತುಕೊಂಡ ವ್ಯಕ್ತಿಯ ಸಾಹಸದ ವಿಡಿಯೋ ದೃಶ್ಯ

Bondi beach shooting: ಆಸ್ಟ್ರೇಲಿಯಾದ ಸಿಡ್ನಿ ನಗರದ ಜನಪ್ರಿಯ ಬಾಂಡಿ ಬೀಚ್​ನಲ್ಲಿ ಮೂವರು ಉಗ್ರರು ಅಟ್ಟಹಾಸ ಮೆರೆದು ಹಲವರನ್ನು ಬಲಿಪಡೆದಿದ್ದಾರೆ. ಈ ವೇಳೆ, ನಿರಾಯುಧರಾದ ವ್ಯಕ್ತಿಯೊಬ್ಬರು ಉಗ್ರನೊಬ್ಬನ ಮೇಲೆ ಎರಗಿ ರೈಫಲ್ ಕಿತ್ತುಕೊಂಡು ಓಡಿಸಿ ಸಾಹಸ ಮೆರೆದಿದ್ದಾರೆ. ಈ ಘಟನೆಯ ದೃಶ್ಯ ಇರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಂಡಿಗೋ ಕುಸಿಯಲು ಏನು ಕಾರಣ? ಇಬ್ಬರು ಸಂಸ್ಥಾಪಕರ ನಡುವಿನ ಭಿನ್ನಾಭಿಪ್ರಾಯವೇ ಏರ್​ಲೈನ್ಸ್​ಗೆ ಮುಳುವಾಯಿತಾ?

ಇಂಡಿಗೋ ಕುಸಿಯಲು ಏನು ಕಾರಣ? ಇಬ್ಬರು ಸಂಸ್ಥಾಪಕರ ನಡುವಿನ ಭಿನ್ನಾಭಿಪ್ರಾಯವೇ ಏರ್​ಲೈನ್ಸ್​ಗೆ ಮುಳುವಾಯಿತಾ?

Indigo Airlines fall from great success: ಭಾರತದ ಅತಿದೊಡ್ಡ ಏರ್ಲೈನ್ಸ್ ಸಂಸ್ಥೆಯಾದ ಇಂಡಿಗೋ ಬಿಕ್ಕಟ್ಟಿಗೆ ಸಿಲುಕಿದೆ. ಈ ತಿಂಗಳು 4,000ಕ್ಕೂ ಅಧಿಕ ಫ್ಲೈಟ್​ಗಳು ರದ್ದಾಗಿವೆ. 2005ರಲ್ಲಿ ರಾಕೇಶ್ ಗಂಗವಾಲ್ ಮತ್ತು ರಾಹುಲ್ ಭಾಟಿಯಾ ಕಟ್ಟಿ ಬೆಳೆಸಿದ ಇಂಡಿಗೋ ಏರ್​ಲೈನ್ಸ್ ಇದೀಗ ರೇಸ್​ನಲ್ಲಿ ಸಾಗಲು ಪರದಾಡುತ್ತಿದೆ. 2019ರಲ್ಲಿ ಇಬ್ಬರು ಸಹ-ಸಂಸ್ಥಾಪಕರ ನಡುವೆ ಶುರುವಾದ ಭಿನ್ನಾಭಿಪ್ರಾಯ ಇದೀಗ ಕಂಪನಿಯನ್ನು ಈ ಪರಿಸ್ಥಿತಿಗೆ ತಳ್ಳಿದಂತಿದೆ.

Shahrukhz Tower: ಶಾರುಕ್ ಖಾನ್ ಎಂದ್ರೆ ದುಬೈನಲ್ಲಿ ಬಲು ಕ್ರೇಜ್; ಅವರ ಹೆಸರಿನ ಟವರ್​ಗೆ 5,000 ಕೋಟಿ ರೂಗೂ ಅಧಿಕ ಬೆಲೆ

Shahrukhz Tower: ಶಾರುಕ್ ಖಾನ್ ಎಂದ್ರೆ ದುಬೈನಲ್ಲಿ ಬಲು ಕ್ರೇಜ್; ಅವರ ಹೆಸರಿನ ಟವರ್​ಗೆ 5,000 ಕೋಟಿ ರೂಗೂ ಅಧಿಕ ಬೆಲೆ

Danube Group sells Sharukhz Tower for Rs 5,000 crore in Dubai: ದುಬೈನ ಶೇಖ್ ಜಾಯೇದ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಶಾರುಖ್ಸ್ ಟವರ್ 5,000 ಕೋಟಿ ರೂಗೆ ಮಾರಾಟವಾಗಿದೆ. 3,500 ಕೋಟಿ ರೂ ವೆಚ್ಚದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಹೆಸರಿನ ಈ 55 ಮಹಡಿಯ ಕಮರ್ಷಿಯಲ್ ಟವರ್​ಗೆ ನಿರೀಕ್ಷೆಮೀರದ ಬೆಲೆ ಸಿಕ್ಕಿದೆ. ಮುಂಬೈ ಸಂಜಾತ ರಿಜ್ವಾಲ್ ಸಾಜನ್ ಮಾಲೀಕರಾಗಿರುವ ಡ್ಯಾನೂಬ್ ಗ್ರೂಪ್ ಈ ಕಮರ್ಷಿಯಲ್ ಟವರ್ ಕಟ್ಟುತ್ತಿದೆ.

Holidays: ಮುಂದಿನ ವರ್ಷ ಷೇರುಪೇಟೆಗೆ 15 ದಿನ ರಜೆ; ಇಲ್ಲಿದೆ ರಜಾದಿನಗಳ ಪಟ್ಟಿ

Holidays: ಮುಂದಿನ ವರ್ಷ ಷೇರುಪೇಟೆಗೆ 15 ದಿನ ರಜೆ; ಇಲ್ಲಿದೆ ರಜಾದಿನಗಳ ಪಟ್ಟಿ

Stock Market holiday calendar 2026: ಎನ್​ಎಸ್​ಇ ಮತ್ತು ಬಿಎಸ್​ಇ ಕ್ಯಾಲಂಡರ್ ಪ್ರಕಾರ 2026ರಲ್ಲಿ ಷೇರು ಮಾರುಕಟ್ಟೆಗೆ 15 ದಿನ ರಜೆ ಇದೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿದ ರಜೆಗಳು ಇವಾಗಿವೆ. ಜನವರಿ 26ರಂದಿನ ಗಣರಾಜ್ಯೋತ್ಸವದಿಂದ ಹಿಡಿದು ಡಿಸೆಂಬರ್ 25ರ ಕ್ರಿಸ್ಮಸ್​ವರೆಗೆ ಈ ರಜೆಗಳಿವೆ. ಶ್ರೀರಾಮನವಮಿ, ಬಕ್ರೀದ್, ಮಹಾರಾಷ್ಟ್ರ ದಿನ, ದೀಪಾವಳಿ, ದಸರಾ ಮೊದಲಾದ ಹಲವು ರಜೆಗಳೂ ಇದರಲ್ಲಿ ಸೇರಿವೆ.