ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.
ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ: ಜುಲೈನಲ್ಲಿ 80ನೇ ಸ್ಥಾನಕ್ಕೆ ಕುಸಿದ ಭಾರತ; 56 ದೇಶಗಳಿಗೆ ವೀಸಾ ರಹಿತ ಪ್ರವೇಶ
Henley Passport Index July 2026,: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ಗಳ ಪೈಕಿ ಭಾರತ 80ನೇ ಸ್ಥಾನ ಪಡೆದಿದೆ. ಹೆನ್ಲೀ ಪಾಸ್ಪೋರ್ಟ್ ಇಂಡೆಕ್ಸ್ನ ಜುಲೈ ತಿಂಗಳ ರಿಪೋರ್ಟ್ ಪ್ರಕಾರ ಭಾರತ ಎರಡು ಸ್ಥಾನ ಕುಸಿದಿದೆ. ಭಾರತದ ಪಾಸ್ಪೋರ್ಟ್ ಹೊಂದಿರುವವರಿಗೆ ವಿಶ್ವದಲ್ಲಿ 56 ದೇಶಗಳಲ್ಲಿ ವೀಸಾ ಮುಕ್ತ ಪ್ರಯಾಣ ಅವಕಾಶ ಇದೆ.
- Vijaya Sarathy SN
- Updated on: Jul 3, 2026
- 7:44 pm
ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಕಲ್ಪನೆಗಳು; ಸರ್ಕಾರ ಒಂದೊಂದಕ್ಕೂ ನೀಡಿದ ಉತ್ತರ ಇಲ್ಲಿದೆ
India's Ethanol blended fuel program: ಭಾರತದಲ್ಲಿ ಶೇ. 20 ಎಥನಾಲ್ ಮಿಶ್ರಣ ಇರುವ ಇ20 ಪೆಟ್ರೋಲ್ ಅನ್ನು ಪೂರೈಸುವ ಗುರಿ ಇಡಲಾಗಿದೆ. ಇದೇ ವೇಳೆ, ಎಥನಾಲ್ ಮಿಶ್ರಿತ ಇಂಧನದ ಬಗ್ಗೆ ದೇಶದಲ್ಲಿ ಸಾಕಷ್ಟು ನೆಗಟಿವ್ ವಿಚಾರಗಳು ಹಬ್ಬಿವೆ. ಎಂಜಿನ್ಗೆ ಧಕ್ಕೆಯಾಗುತ್ತದೆ ಎನ್ನುವುದು ಪ್ರಮುಖ ಆರೋಪ. ಸರ್ಕಾರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದೆ.
- Vijaya Sarathy SN
- Updated on: Jul 3, 2026
- 7:09 pm
ಈ ಕೌಶಲ್ಯ ಕಲಿತರೆ ಮನೆಯಲ್ಲೇ ಕೂತ ಲಕ್ಷ ಸಂಪಾದನೆ ಸಾಧ್ಯ; ಕೆನರಾ ಬ್ಯಾಂಕ್ RSETI ಯಿಂದ ಮಹಿಳೆಯರಿಗೆ ಉಚಿತ ತರಬೇತಿ
RSETI conducting free Aari Work, Fabric Painting workshop for women: ಕೆನರಾ ಬ್ಯಾಂಕ್ನ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಾದ RSETI ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ಹಮ್ಮಿಕೊಂಡಿದೆ. ಜುಲೈ ಮೂರನೇ ವಾರದಿಂದ 31 ದಿನಗಳ ಕಾಲ ಆರಿ ವರ್ಕ್ (Aari work) ಮತ್ತು ಫ್ಯಾಬ್ರಿಕ್ ಪೇಂಟಿಂಗ್ ತರಬೇತಿ ನೀಡಲಾಗುತ್ತಿದೆ. ಹೊಲಕೋಟೆಯ ಸೊಣ್ಣಹಳ್ಳಿಪುರದಲ್ಲಿ ಈ ಕಾರ್ಯಾಗಾರ ಇದ್ದು, ಮಹಿಳೆಯರಿಗೆ ಅವಕಾಶ ಇದೆ.
- Vijaya Sarathy SN
- Updated on: Jul 3, 2026
- 6:46 pm
ಭಾರತದ ಬಗ್ಗೆ ನೆಗಟಿವ್ ಆಗಿ ಹೇಳಿದರಾ ಇಂದ್ರಾ ನೂಯಿ; ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಪೆಪ್ಸಿಕೋ ಮಾಜಿ ಸಿಇಒ
Couldn't become CEO in India, PepsiCo former CEO Indra Nooyi trolled: ಪೆಪ್ಸಿಕೋ ಮಾಜಿ ಸಿಇಒ ಇಂದ್ರಾ ನೂಯಿ ಭಾರತದ ಬಗ್ಗೆ ತಪ್ಪು ಭಾವನೆ ಮೂಡುವಂತಹ ಕೆಲ ಹೇಳಿಕೆಗಳನ್ನು ನೀಡಿದ್ದಾರೆ. ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀನಾ ರೈಸ್ ಜೊತೆಗೆ ಮಾತನಾಡುತ್ತಾ ವಿವಾದಾಸ್ಪದ ಹೇಳಿಕೆ ನೀಡಿರುವುದುಂಟು. ಭಾರತ ಅಸ್ತವ್ಯಸ್ತ ದೇಶ, ಇಲ್ಲಿ ನಾನು ಸಿಇಒ ಆಗಲು ಸಾಧ್ಯವಿರಲಿಲ್ಲ ಎಂಬರ್ಥದಲ್ಲಿ ಅವರು ಹೇಳಿದ್ದಾರೆ.
- Vijaya Sarathy SN
- Updated on: Jul 3, 2026
- 5:17 pm
ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆ ವಿಬಿ-ಜಿ-ರಾಮ್-ಜಿಗೆ ನೊಂದಣಿ ಹೇಗೆ? ಕೆಲಸ ಸಿಗದಿದ್ದರೆ ಎಷ್ಟು ಭತ್ಯೆ?
VB G-RAM-G rural employment guarantee scheme full details: ಜುಲೈ 1ರಿಂದ ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ-ಜಿ-ರಾಮ್-ಜಿ ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ ಕನಿಷ್ಠ 125 ದಿನಗಳ ಕೌಶಲ್ಯರಹಿತ ಕೂಲಿ ಕೆಲಸಗಳನ್ನು ಇದು ಖಾತ್ರಿಪಡಿಸುತ್ತದೆ. ಒಂದು ಕುಟುಂಬವು ಕೃಷಿಗಾರಿಕೆಯ ಜೊತೆ ಜೊತೆಗೆ ಒಂದು ವರ್ಷದಲ್ಲಿ 45,000 ರೂನಿಂದ 60,000 ರೂವರೆಗೆ ಹೆಚ್ಚುವರಿ ಸಂಪಾದಿಸಬಹುದು.
- Vijaya Sarathy SN
- Updated on: Jul 3, 2026
- 3:44 pm
ಮೆಷೀನ್ಗಿಂತ ಮನುಷ್ಯರೇ ವಾಸಿ; ಎಐ ಕಾರಣ ನೀಡಿ ಮನೆಗೆ ಕಳುಹಿಸಿದ್ದ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡ ದೊಡ್ಡ ಕಂಪನಿಗಳು
Companies rehiring employees they sacked for automation reason: ಬಹಳ ಆತುರದಲ್ಲಿ ಆಟೊಮೇಶನ್ ಮಾಡಿದ್ದ ಅನೇಕ ಕಂಪನಿಗಳಿಗೆ ತಮ್ಮ ತಪ್ಪಿನ ಅರಿವಾಗುತ್ತಿದೆ. ಎಐ ಅಳವಡಿಕೆ ಬಳಿಕ ಬಹಳ ಜನರನ್ನು ಲೇ ಆಫ್ ಮಾಡಿದ್ದ ಕಂಪನಿಗಳು ಈಗ ಆ ಉದ್ಯೋಗಿಗಳನ್ನೇ ಮರಳಿ ಕರೆಸಿಕೊಳ್ಳುತ್ತಿವೆ. ಐಬಿಎಂ, ಫೋರ್ಡ್, ಸಿಬಿಎ ಮೊದಲಾದ ಸಂಸ್ಥೆಗಳ ಹೈರಿಂಗ್ ನೀತಿ ಮತ್ತೆ ಬದಲಾಗಿದೆ.
- Vijaya Sarathy SN
- Updated on: Jul 3, 2026
- 12:28 pm
Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 2,250 ರೂ ಏರಿಕೆ; ಬೆಳ್ಳಿಯೂ ದುಬಾರಿ
Gold Price 03 July 2026: ಚಿನ್ನ, ಬೆಳ್ಳಿ ಬೆಲೆಗಳ ಸತತ ಏರಿಕೆ ಮುಂದುವರಿದಿದೆ. ಚಿನ್ನದ ಬೆಲೆ 225 ರೂ, ಬೆಳ್ಳಿ ಬೆಲೆ 5 ರೂ ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 13,250 ರೂನಿಂದ 13,475 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 14,700 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್ಗೆ 250 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 260 ರೂ ಇದೆ.
- Vijaya Sarathy SN
- Updated on: Jul 3, 2026
- 11:20 am
ಬಲಿಷ್ಠ ಆರ್ಥಿಕ ಸೂಚಕಗಳು: ಭಾರತದ ಬೆಳವಣಿಗೆಯ ಹಾದಿ ಇನ್ನಷ್ಟು ಸುದೃಢ
Strong Economic Indicators Reinforce India's Growth Story: ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತದ ಆರ್ಥಿಕತೆ ವಿಚಲಿತಗೊಳ್ಳದೆ ಸ್ಥಿರ ಬೆಳವಣಿಗೆ ಕಾಣುತ್ತಿದೆ. ಇದು ಬಲಿಷ್ಠ ಆರ್ಥಿಕ ಬುನಾದಿ ಹಾಗೂ ವ್ಯವಸ್ಥೆಯ ದ್ಯೋತಕವಾಗಿದೆ. ಜಿಎಸ್ಟಿ ಸಂಗ್ರಹದಲ್ಲಿ ಸತತ ಹೆಚ್ಚಳ, ಉತ್ಪಾದನೆ ಸೂಚ್ಯಂಕ ಏರಿಕೆ, ಸರ್ಕಾರದ ಬಂಡವಾಳ ಹೆಚ್ಚಳ ಇತ್ಯಾದಿ ಸೂಚಕಗಳು ಉತ್ತಮವಾಗಿವೆ.
- Vijaya Sarathy SN
- Updated on: Jul 2, 2026
- 8:30 pm
ತೈಲ ಬೆಲೆ ಇಳಿದರೂ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಯಾಕೆ? ಕಾರಣ ಬಿಚ್ಚಿಟ್ಟ ಸಚಿವ ಹರ್ದೀಪ್
Why petrol price not reduced despite crude oil rates coming down: ಇರಾನ್ ಯುದ್ಧದಿಂದ ನಾಲ್ಕು ತಿಂಗಳು ಬಿಕ್ಕಟ್ಟು ಉದ್ಭವಿಸಿ, ತೈಲ ಬೆಲೆ ಗಗನಕ್ಕೇರಿತ್ತು. ಇದೀಗ ತೈಲ ಬೆಲೆ ಯುದ್ಧಕ್ಕೆ ಪೂರ್ವದ ಸ್ಥಿತಿಗೆ ಮರಳಿದೆ. ಆದರೆ, ತೈಲ ಬೆಲೆ ಇಳಿದರೂ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್, ಡೀಸಲ್ ಬೆಲೆಗಳನ್ನು ಇಳಿಸಿಲ್ಲ. ನಯಾರಾದ ಪೆಟ್ರೋಲ್ ಬೆಲೆ ಇಳಿದರೂ ಇವು ದರ ಕಡಿಮೆ ಮಾಡದಿರಲು ಏನು ಕಾರಣ? ಸಚಿವ ಹರ್ದೀಪ್ ಸಿಂಗ್ ಪುರಿ ವಿವರಿಸಿದ್ದಾರೆ.
- Vijaya Sarathy SN
- Updated on: Jul 2, 2026
- 6:53 pm
ಮೋದಿ ಉದ್ಘಾಟನೆಗೂ ಮುನ್ನವೇ ಸೆಮಿಕಂಡಕ್ಟರ್ ಚಿಪ್ಗಳ ರಫ್ತು ಆರಂಭಿಸಿದ ಮುರುಗಪ್ಪ ಗ್ರೂಪ್ ಕಂಪನಿ
Semiconductor OSAT unit of CG Semi at Sanand, Gujarat: ಗುಜರಾತ್ನ ಸಾನಂದ್ನಲ್ಲಿರುವ ಸಿಜಿ ಸೆಮಿ ಘಟಕದಲ್ಲಿ ಕಮರ್ಷಿಯಲ್ ಉತ್ಪಾದನೆ ಆರಂಭವಾಗಿದೆ. ಪ್ರಧಾನಿ ಮೋದಿ ಅವರು ಜುಲೈ 4ರಂದು ಕಮರ್ಷಿಯಲ್ ಪ್ರೊಡಕ್ಷನ್ನ ಉದ್ಘಾಟನೆ ಮಾಡಲಿದ್ದಾರೆ. ಆದರೆ, ಅದಕ್ಕೆ ಮುನ್ನವೇ ಜೂನ್ 19ರಂದು ಈ ಘಟಕದಿಂದ ಚಿಪ್ಗಳು ತಯಾರಾಗಿ ಮಲೇಷ್ಯಾಗೆ ರಫ್ತು ಕೂಡ ಆಗಿದೆ.
- Vijaya Sarathy SN
- Updated on: Jul 2, 2026
- 5:58 pm
ನಿಮ್ಮ ಕುಟುಂಬದವರ ಕಾಲ್ ಡೀಟೇಲ್ಸ್ ತೆಗೆಸಲು ಅವಕಾಶ ಇದೆಯಾ? ಸಿಡಿಆರ್ ರಿಪೋರ್ಟ್ ಯಾರಿಗೆಲ್ಲಾ ಸಿಗುತ್ತೆ?
Who can access CDR, Call Details Record: ಪೋಸ್ಟ್ ಪೇಯ್ಡ್ ಸಿಮ್ ಆದರೆ ನಿಮ್ಮ ತಿಂಗಳ ಬಿಲ್ನಲ್ಲಿ ಕಾಲ್ ಡೀಟೇಲ್ಸ್ ವಿವರ ಇರುತ್ತದೆ. ಅದೇ ಸಿಡಿಆರ್ ಅನ್ನು ಬೇರೆ ಯಾರಾದರೂ ಪಡೆಯಬಹುದೆ? ಪೊಲೀಸ್, ಭದ್ರತಾ ಸಂಸ್ಥೆಗಳು, ತನಿಖಾ ಏಜೆನ್ಸಿಗಳು ಯಾವುದೇ ವ್ಯಕ್ತಿಗಳ ಕಾಲ್ ಡೀಟೇಲ್ಸ್ ಪಡೆಯುವ ಕಾನೂನುಬದ್ಧ ಅಧಿಕಾರ ಹೊಂದಿರುತ್ತಾರೆ.
- Vijaya Sarathy SN
- Updated on: Jul 2, 2026
- 4:26 pm
ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ; 2 ಐಟಿಆರ್ಗಳನ್ನು ಸಲ್ಲಿಸಬೇಕಾ ಎನ್ನುವ ಗೊಂದಲ ಕೆಲವರಲ್ಲಿ; ಇಲಾಖೆ ಸ್ಪಷ್ಟನೆ ಇದು
Income Tax Rules 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬಂದಿರುವುದರಿಂದ, ತೆರಿಗೆದಾರರಲ್ಲಿ ಮೂಡಿರುವ ಗೊಂದಲವೊಂದಕ್ಕೆ ಇಲಾಖೆ ಸ್ಪಷ್ಟನೆ ನೀಡಿದೆ. ‘ತೆರಿಗೆದಾರರು ಒಂದೇ ಆದಾಯಕ್ಕೆ ಎರಡು ಬಾರಿ ಐಟಿಆರ್ (ITR) ಸಲ್ಲಿಸಬೇಕಾಗಿಲ್ಲ’ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ವರ್ಷದ (2026-27) ಆದಾಯಕ್ಕೆ 2027ರ ಏಪ್ರಿಲ್ ನಂತರ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುತ್ತೇವೆ. ಆಗ 2026-27 ಟ್ಯಾಕ್ಸ್ ಇಯರ್ ಅಡಿಯಲ್ಲಿ ಐಟಿಆರ್ ಫೈಲ್ ಮಾಡಬೇಕು.
- Vijaya Sarathy SN
- Updated on: Jul 2, 2026
- 1:46 pm