ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.
Patanjali: ನಿಮ್ಮ ಜೀವನದಿಂದ ಈ ವಸ್ತುಗಳು ದೂರವೇ ಇರಲಿ: ಬಾಬಾ ರಾಮದೇವ್ ಸಲಹೆ
Baba Ramdev recommends quitting few things for healthier life: ಪತಂಜಲಿ ಸಹ-ಸಂಸ್ಥಾಪಕ ಬಾಬಾ ರಾಮದೇವ್ ಅವರ ಪ್ರಕಾರ, ಆರೋಗ್ಯಕರ ಮತ್ತು ಸಂತೋಷಕರ ಜೀವನ ನಡೆಸಲು ಕೆಲ ಹಾನಿಕಾರಕ ವಸ್ತುಗಳಿಂದ ದೂರ ಇರಬೇಕು. ಇಂಥ ವಸ್ತುಗಳು ಯಾವುವು ಎನ್ನುವ ವಿವರ ಇಲ್ಲಿದೆ. ಈ ವಸ್ತುಗಳ ಬಳಕೆ ಕೈಬಿಟ್ಟರೆ ಅನಾರೋಗ್ಯ ಬರದಂತೆ ಎಚ್ಚರ ವಹಿಸಲು ಸಾಧ್ಯ ಎಂಬುದು ಅವರ ಅನಿಸಿಕೆ.
- Vijaya Sarathy SN
- Updated on: Feb 10, 2026
- 6:51 pm
2027ರಿಂದ ಉದ್ಯೋಗಪತನ ಶುರು; ಶೇ. 99 ಮಂದಿಗೆ ಕೆಲಸವೇ ಇರಲ್ಲ: ಡಾ. ಯಾಂಪೋಲ್ಸ್ಕಿ ಭಯಾನಕ ಭವಿಷ್ಯ
Dr. Yampolskiy Warns 99% Job Loss! Future of Work in AI Era: ಆರ್ಟಿಫಿಶಿಯಲ್ ಜನರೇಟಿವ್ ಇಂಟೆಲಿಜೆನ್ಸ್ 2027ಕ್ಕೆ ಆಗಮಿಸಬಹುದು. ಅದು ಬಂದು ಬಿಟ್ಟರೆ ಮನುಷ್ಯರ ಬಹುತೇಕ ಕೆಲಸಗಳನ್ನು ಯಂತ್ರಗಳೇ ಮಾಡಬಲ್ಲುವು ಎಂದು ಲೂಯಿಸ್ವಿಲೆ ಯೂನಿವರ್ಸಿಟಿಯ ವಿಜ್ಞಾನಿ ಡಾ. ರೋಮನ್ ಯಾಂಪೋಲ್ಸ್ಕಿ ಭವಿಷ್ಯ ನುಡಿದಿದ್ದಾರೆ. ಈಗಿರುವ ಎಐ ಸಾಧನಗಳಿಂದಲೇ ಶೇ. 60ರಷ್ಟು ಮನುಷ್ಯರ ಕೆಲಸಗಳನ್ನು ಮಾಡಬಹುದು. ಎಜಿಐನಿಂದ ಶೇ. 99 ಕೆಲಸ ಮಾಡಲು ಸಾಧ್ಯ ಎಂದಿದ್ದಾರೆ.
- Vijaya Sarathy SN
- Updated on: Feb 10, 2026
- 5:44 pm
ಹೂಡಿಕೆಗಳು ಎತ್ತ..? ಕುಗ್ಗಿದ ಈಕ್ವಿಟಿ ಮ್ಯೂಚುವಲ್ ಫಂಡ್ಗಳು; ಹಿಗ್ಗಿದ ಗೋಲ್ಡ್ ಇಟಿಎಫ್ಗಳು
Gold ETFs attract more investment, while Equity mutual funds see decline in inflows: ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ ಹರಿದುಬರುವ ಹೂಡಿಕೆಗಳು ಜನವರಿಯಲ್ಲಿ ಕಡಿಮೆ ಆಗಿವೆ. 2025ರ ಡಿಸೆಂಬರ್ನಲ್ಲಿ ಈಕ್ವಿಟಿ ಫಂಡ್ಗಳಿಗೆ 28,054 ಕೋಟಿ ರೂ ಹೂಡಿಕೆ ಹೋಗಿತ್ತು. 2026ರ ಜನವರಿಯಲ್ಲಿ 24,029 ಕೋಟಿ ರೂ ಹೂಡಿಕೆ ಬಂದಿದೆ. ಇದೇ ವೇಳೆ, ಗೋಲ್ಡ್ ಇಟಿಎಫ್ಗಳಲ್ಲಿ ನಿವ್ವಳ ಒಳ ಹರಿವಿನಲ್ಲಿ ಎರಡು ಪಟ್ಟು ಹೆಚ್ಚಳ ಕಂಡುಬಂದಿದೆ.
- Vijaya Sarathy SN
- Updated on: Feb 10, 2026
- 4:38 pm
ಜಗತ್ತು ವಿನಾಶದ ಅಂಚಿನಲ್ಲಿದ್ಯಾ? ಆಂಥ್ರೋಪಿಕ್ನ ಮೃಣಾಂಕ್ ಶರ್ಮಾ ರಾಜೀನಾಮೆ ಪತ್ರದಲ್ಲಿ ಹೇಳಿದ್ದರ ಅರ್ಥವೇನು?
World in Peril, says Anthropic AI safety team chief Mrinank Sharma in his resignation letter: ಆಂಥ್ರೋಪಿಕ್ ಕಂಪನಿಯ ಎಐ ಸೇಫ್ಟಿ ಟೀಮ್ನ ಮುಖ್ಯಸ್ಥ ಮೃಣಾಂಕ್ ಶರ್ಮಾ ರಾಜೀನಾಮೆ ನೀಡಿದ್ದಾರೆ. ಎಕ್ಸ್ನಲ್ಲಿ ಎರಡು ಪುಟಗಳ ಪತ್ರವನ್ನು ಹಾಕಿರುವ ಅವರು ರಾಜೀನಾಮೆಗೆ ಏನು ಕಾರಣ ಎಂಬುದನ್ನು ತಿಳಿಸಿದ್ದಾರೆ. ಪರಸ್ಪರ ಸಂಬಂಧಿತವಾತಿರುವ ವಿವಿಧ ಬಿಕ್ಕಟ್ಟುಗಳು ಈ ಜಗತ್ತನ್ನು ವಿನಾಶದ ಅಂಚಿನಲ್ಲಿರಿಸಿವೆ ಎಂದು ಅವರು ಹೇಳಿದ್ದಾರೆ.
- Vijaya Sarathy SN
- Updated on: Feb 10, 2026
- 4:10 pm
ಬೆಂಗಳೂರು ಮೂಲದ ಸರ್ವಮ್ನಿಂದ ಎಐ ಸಂಚಲನ; ಈ ಕಂಪನಿ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?
Sarvam AI, the Bengaluru based startup and its new products: ಭಾರತದ ಅತಿದೊಡ್ಡ ಎಐ ಸ್ಟಾರ್ಟಪ್ ಎನಿಸಿದ ಸರ್ವಮ್ ಎಐ ಇತ್ತೀಚೆಗೆ ಎರಡು ಹೊಸ ಮಾಡಲ್ಗಳನ್ನು ಪರಿಚಯಿಸಿದೆ. ಭಾರತೀಯ ಭಾಷೆಗಳಲ್ಲಿ ಅದು ರೂಪಿಸಿರುವ ಡಾಕ್ಯುಮೆಂಟೇಶನ್ ಮತ್ತು ಟೆಕ್ಸ್ಟ್ ಟು ಸ್ಪೀಚ್ ಸೇವೆಯ ಟೂಲ್ಗಳು ಗಮನ ಸೆಳೆಯುತ್ತಿವೆ. ಅಪ್ಪಟ ಭಾರತೀಯರ ಶೈಲಿಯಲ್ಲಿ ಮಾತುಗಾರಿಕೆಯನ್ನು ಇದರಲ್ಲಿ ಕಾಣಬಹುದು.
- Vijaya Sarathy SN
- Updated on: Feb 10, 2026
- 1:18 pm
ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ
US reduces tariffs on Bangladesh to 19pc: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಬಾಂಗ್ಲಾದೇಶ ಸಹಿ ಹಾಕಿದೆ. ಅಮೆರಿಕವು ಪ್ರತಿಸುಂಕವನ್ನು ಶೇ. 19ಕ್ಕೆ ಇಳಿಸಿದೆ. ಅಮೆರಿಕದ ಕಚ್ಛಾ ಸಾಮಗ್ರಿಗಳನ್ನು ಉಪಯೋಗಿಸಿ ತಯಾರಾದ ಬಟ್ಟೆಗಳಿಗೆ ಅಮೆರಿಕವು ಟ್ಯಾರಿಫ್ ವಿನಾಯಿತಿ ನೀಡಲಿದೆ. ಬಾಂಗ್ಲಾದೇಶವು ತನ್ನ ಜವಳಿ ಉತ್ಪನ್ನಗಳಿಗೆ ಕಚ್ಚಾ ಸಾಮಗ್ರಿಗಳನ್ನು ಚೀನಾದಿಂದ ಹೆಚ್ಚಾಗಿ ತರಿಸಿಕೊಳ್ಳುತ್ತದೆ. ಅದನ್ನು ತಪ್ಪಿಸಲು ಅಮೆರಿಕ ಈ ತಂತ್ರ ಮಾಡಿರಬಹುದು.
- Vijaya Sarathy SN
- Updated on: Feb 10, 2026
- 12:02 pm
Gold Rate Today: ಚಿನ್ನ, ಬೆಳ್ಳಿ ಬೆಲೆ ಇಳಿಕೆ; ಇಲ್ಲಿದೆ ದರಪಟ್ಟಿ
Bullion Market 2026 February 10th: 2-3 ದಿನದಲ್ಲಿ 600 ರೂನಷ್ಟು ಏರಿದ್ದ ಚಿನ್ನದ ಬೆಲೆ ಮಂಗಳವಾರ 85 ರೂ ಕಡಿಮೆಗೊಂಡಿದೆ. ಬೆಳ್ಳಿ ಬೆಲೆ 10 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 14,560 ರೂ ಇದ್ದದ್ದು 14,475 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 15,791 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 300 ರೂನಿಂದ 290 ರೂಗೆ ಇಳಿದಿದೆ. ಚೆನ್ನೈ ಮೊದಲಾದೆಡೆ 300 ರೂ ಬೆಲೆ ಇದೆ.
- Vijaya Sarathy SN
- Updated on: Feb 10, 2026
- 11:08 am
ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ?
India's strategic petroleum reserves: ಜಾಗತಿಕವಾಗಿ ತುರ್ತು ಸಂದರ್ಭ ಬಂದು ತೈಲ ಪೂರೈಕೆ ಸ್ಥಗಿತಗೊಂಡರೆ ಭಾರತದಲ್ಲಿರುವ ಪೆಟ್ರೋಲಿಯಂ ಸಂಗ್ರಹ ಎಷ್ಟು ದಿನಗಳ ಬಳಕೆಗೆ ಆಗುವಷ್ಟು ಇದೆ? ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಾರ ಭಾರತದಲ್ಲಿ ಸದ್ಯ 74 ದಿನಗಳಿಗೆ ಆಗುವಷ್ಟು ತೈಲ ಸಂಗ್ರಹ ಇದೆ. ಇದನ್ನು 90 ದಿನಗಳಿಗೆ ಏರಿಸಲಾಗುವುದು ಎಂದಿದ್ದಾರೆ.
- Vijaya Sarathy SN
- Updated on: Feb 9, 2026
- 10:04 pm
ಐಟಿ ಸೆಕ್ಟರ್ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು
Anthropic's CTO Rahul Patil, the brain behind new Claude AI version: ಕಳೆದ ವಾರ ಭಾರತದ ಐಟಿ ಸರ್ವಿಸ್ ಕಂಪನಿಗಳ ಷೇರುಬೆಲೆ ದಿಕ್ಕೆಟ್ಟಂತೆ ಕುಸಿತ ಕಂಡಿತ್ತು. ಹೂಡಿಕೆದಾರರು ಭಯಗೊಂಡು ಷೇರು ಮಾರತೊಡಗಿದ್ದರು. ಎರಡು ಬೆಳವಣಿಗೆಗಳು ಈ ಕುಸಿತಕ್ಕೆ ಕಾರಣವಾಗಿದ್ದವು. ಆಂಥ್ರೋಪಿಕ್ ಮತ್ತು ಪಲಂಟಿರ್ ಕಂಪನಿಗಳ ಹೊಸ ಎಐ ಸಾಧನಗಳು ಐಟಿ ಸರ್ವಿಸ್ ಉದ್ಯಮದ ಬ್ಯುಸಿನೆಸ್ ತಿಂದು ಹಾಕುವ ಕುರುಹು ತೋರಿರುವುದು ಇದಕ್ಕೆ ಕಾರಣ.
- Vijaya Sarathy SN
- Updated on: Feb 9, 2026
- 8:48 pm
ಕಿಡ್ನಿ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಮನೆಮದ್ದುಗಳು; ಬಾಬಾ ರಾಮದೇವ್ ಸಲಹೆ ಇದು
Baba Ramdev suggests Ayurvedic and Home remedies for kidney health issues: ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸಮಸ್ಯೆಗಳು ಸಾಮಾನ್ಯವಾಗಿವೆ. ಬಾಬಾ ರಾಮದೇವ್ ಅವರು ಮೂತ್ರಪಿಂಡದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಇತರ ಅನೇಕ ಕಾಯಿಲೆಗಳನ್ನು ಎದುರಿಸಲು ಸಹಾಯ ಮಾಡುವ ಕೆಲವು ಮನೆಮದ್ದುಗಳನ್ನು ಸೂಚಿಸಿದ್ದಾರೆ. ಅವುಗಳ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.
- Vijaya Sarathy SN
- Updated on: Feb 9, 2026
- 6:57 pm
EPFO: ಹೊಸ ಇಪಿಎಫ್ಒ ಆ್ಯಪ್ನಲ್ಲಿ ಯುಪಿಐ ಮೂಲಕ ಹಣ ವಿತ್ಡ್ರಾಗೆ ಅವಕಾಶ?
New EPFO mobile app to be launched in April: ಇಪಿಎಫ್ಒದ ಹೊಸ ಆ್ಯಪ್ವೊಂದು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಅದರಲ್ಲಿ ಸುಲಭವಾಗಿ ಹಣ ವಿತ್ಡ್ರಾ ಮಾಡುವ ಅವಕಾಶ ಮಾಡಿಕೊಡಲಾಗುತ್ತದೆ. ನಿರ್ದಿಷ್ಟ ಭಾಗ ಹೊರತುಪಡಿಸಿ ಉಳಿದ ಇಪಿಎಫ್ ಹಣವನ್ನು ವಿತ್ಡ್ರಾ ಮಾಡಲು ಆ್ಯಪ್ನಲ್ಲಿ ಸಾಧ್ಯವಾಗುತ್ತದೆ. ಬಹಳಷ್ಟು ಇಪಿಎಫ್ ಖಾತೆದಾರರಿಗೆ ತುರ್ತು ಸಂದರ್ಭದಲ್ಲಿ ಈ ಸೌಲಭ್ಯ ಉಪಯುಕ್ತ ಎನಿಸಬಹುದು.
- Vijaya Sarathy SN
- Updated on: Feb 9, 2026
- 5:21 pm
ಚಿನ್ನದ ಮೇಲೆ ಯಾವತ್ತೂ ಹೂಡಿಕೆ ಮಾಡಲ್ಲ…! ವಿಶ್ವದ ಅತಿ ಚಾಣಾಕ್ಷ್ಯ ಹೂಡಿಕೆದಾರನ ನಿರ್ಧಾರ
Don't invest in the gold, this is the policy of Warren Buffett: ಚಿನ್ನದ ಬೆಲೆ ಕಳೆದ 1-2 ವರ್ಷದಲ್ಲಿ ಅದ್ವಿತೀಯವಾಗಿ ಏರಿದೆ. 2 ಪಟ್ಟು ಹೆಚ್ಚಿರುವುದು ಹೌದು. ಬಹಳ ಜನರು ಇದರ ಮೇಲೆ ಹೂಡಿಕೆ ಮಾಡುವುದು ಹೆಚ್ಚುತ್ತಿದೆ. ವಿಶ್ವಖ್ಯಾತ ಹೂಡಿಕೆದಾರ ವಾರನ್ ಬಫೆಟ್ ಅವರು ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ ಎಂದು ಮೊದಲಿಂದಲೂ ಹೇಳುತ್ತಲೇ ಬಂದಿದ್ದಾರೆ.
- Vijaya Sarathy SN
- Updated on: Feb 9, 2026
- 3:46 pm