AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಗ್ಗನಹಳ್ಳಿ ವಿಜಯಸಾರಥಿ

ಸುಗ್ಗನಹಳ್ಳಿ ವಿಜಯಸಾರಥಿ

Chief Sub Editor - TV9 Kannada

vijayasarathy.nanjappa@tv9.com

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow On:
ಮೊಬೈಲ್, ಬೈಕ್, ಕಾರ್, ಟಿವಿ, ಫ್ರಿಡ್ಜ್ ಮಾಲಕತ್ವದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ತಗ್ಗುತ್ತಿದೆಯಾ?

ಮೊಬೈಲ್, ಬೈಕ್, ಕಾರ್, ಟಿವಿ, ಫ್ರಿಡ್ಜ್ ಮಾಲಕತ್ವದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ತಗ್ಗುತ್ತಿದೆಯಾ?

Mobile, fridge, motor vehicles, television ownership: ಕುಟುಂಬಗಳಿಗೆ ಈಗ ಅಗತ್ಯ ಸೌಕರ್ಯಗಳಾದ ಮೊಬೈಲು, ಟಿವಿ, ಮೋಟಾರು ವಾಹನ, ಫ್ರಿಡ್ಜ್ ಇತ್ಯಾದಿಗಳು ಬಡವರಿಗೆ ಕೈಗೆಟುಕುತ್ತಿವೆಯಾ? 2011-12 ಮತ್ತು 2023-24ರಲ್ಲಿ ಪಡೆಯಲಾದ ಸಮೀಕ್ಷಾ ಮಾಹಿತಿ ಕೆಲ ಅಚ್ಚರಿಯ ಅಂಶಗಳನ್ನು ಹೊರಗೆಡವಿದೆ. ಅತೀ ಶ್ರೀಮಂತ ಶೇ. 20 ಕುಟುಂಬಗಳು ಹಾಗೂ ಅತೀ ಬಡ ಶೇ. 40ರಷ್ಟು ಕುಟುಂಬಗಳ ನಡುವೆ ಅಂತರ ಕಡಿಮೆ ಆಗಿದೆ.

ತಿರುಪ್ಪರಂಕುಂಡ್ರಂ: ಕಾರ್ತಿಕ ದೀಪ ಹಚ್ಚುವ ಅವಕಾಶಕ್ಕೆ ಒತ್ತಾಯಿಸಿ ಸ್ಥಳೀಯರಿಂದ ಉಪವಾಸ ಸತ್ಯಾಗ್ರಹ

ತಿರುಪ್ಪರಂಕುಂಡ್ರಂ: ಕಾರ್ತಿಕ ದೀಪ ಹಚ್ಚುವ ಅವಕಾಶಕ್ಕೆ ಒತ್ತಾಯಿಸಿ ಸ್ಥಳೀಯರಿಂದ ಉಪವಾಸ ಸತ್ಯಾಗ್ರಹ

Madurai Thiruparankundram Kartika deepam controversy: ತಮಿಳುನಾಡಿನ ತಿರುಪ್ಪರಂಕುಂಡ್ರಂನಲ್ಲಿ ಕಾರ್ತೀಕ ದೀಪ ಹಚ್ಚಿಸಲು ಹಿಂದೂಗಳಿಗೆ ಕೋರ್ಟ್ ಅವಕಾಶ ಕೊಟ್ಟಿದೆ. ಆದರೆ, ಸರ್ಕಾರ ಮತ್ತು ಪೊಲೀಸರು ಅನುಮತಿ ಕೊಟ್ಟಿಲ್ಲ. ಸ್ಥಳೀಯ ಜನರು ದೀಪ ಹಚ್ಚುವ ಅವಕಾಶ ಕೋರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಡಿಎಂಕೆ ಪಕ್ಷ ಹಿಂದೂಗಳ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪ ಇದೆ.

ಬಾಂಡಿ ಬೀಚ್ ದಾಳಿ; ಉಗ್ರನತ್ತ ಜಿಗಿದು ರೈಫಲ್ ಕಿತ್ತುಕೊಂಡ ವ್ಯಕ್ತಿಯ ಸಾಹಸದ ವಿಡಿಯೋ ದೃಶ್ಯ

ಬಾಂಡಿ ಬೀಚ್ ದಾಳಿ; ಉಗ್ರನತ್ತ ಜಿಗಿದು ರೈಫಲ್ ಕಿತ್ತುಕೊಂಡ ವ್ಯಕ್ತಿಯ ಸಾಹಸದ ವಿಡಿಯೋ ದೃಶ್ಯ

Bondi beach shooting: ಆಸ್ಟ್ರೇಲಿಯಾದ ಸಿಡ್ನಿ ನಗರದ ಜನಪ್ರಿಯ ಬಾಂಡಿ ಬೀಚ್​ನಲ್ಲಿ ಮೂವರು ಉಗ್ರರು ಅಟ್ಟಹಾಸ ಮೆರೆದು ಹಲವರನ್ನು ಬಲಿಪಡೆದಿದ್ದಾರೆ. ಈ ವೇಳೆ, ನಿರಾಯುಧರಾದ ವ್ಯಕ್ತಿಯೊಬ್ಬರು ಉಗ್ರನೊಬ್ಬನ ಮೇಲೆ ಎರಗಿ ರೈಫಲ್ ಕಿತ್ತುಕೊಂಡು ಓಡಿಸಿ ಸಾಹಸ ಮೆರೆದಿದ್ದಾರೆ. ಈ ಘಟನೆಯ ದೃಶ್ಯ ಇರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಂಡಿಗೋ ಕುಸಿಯಲು ಏನು ಕಾರಣ? ಇಬ್ಬರು ಸಂಸ್ಥಾಪಕರ ನಡುವಿನ ಭಿನ್ನಾಭಿಪ್ರಾಯವೇ ಏರ್​ಲೈನ್ಸ್​ಗೆ ಮುಳುವಾಯಿತಾ?

ಇಂಡಿಗೋ ಕುಸಿಯಲು ಏನು ಕಾರಣ? ಇಬ್ಬರು ಸಂಸ್ಥಾಪಕರ ನಡುವಿನ ಭಿನ್ನಾಭಿಪ್ರಾಯವೇ ಏರ್​ಲೈನ್ಸ್​ಗೆ ಮುಳುವಾಯಿತಾ?

Indigo Airlines fall from great success: ಭಾರತದ ಅತಿದೊಡ್ಡ ಏರ್ಲೈನ್ಸ್ ಸಂಸ್ಥೆಯಾದ ಇಂಡಿಗೋ ಬಿಕ್ಕಟ್ಟಿಗೆ ಸಿಲುಕಿದೆ. ಈ ತಿಂಗಳು 4,000ಕ್ಕೂ ಅಧಿಕ ಫ್ಲೈಟ್​ಗಳು ರದ್ದಾಗಿವೆ. 2005ರಲ್ಲಿ ರಾಕೇಶ್ ಗಂಗವಾಲ್ ಮತ್ತು ರಾಹುಲ್ ಭಾಟಿಯಾ ಕಟ್ಟಿ ಬೆಳೆಸಿದ ಇಂಡಿಗೋ ಏರ್​ಲೈನ್ಸ್ ಇದೀಗ ರೇಸ್​ನಲ್ಲಿ ಸಾಗಲು ಪರದಾಡುತ್ತಿದೆ. 2019ರಲ್ಲಿ ಇಬ್ಬರು ಸಹ-ಸಂಸ್ಥಾಪಕರ ನಡುವೆ ಶುರುವಾದ ಭಿನ್ನಾಭಿಪ್ರಾಯ ಇದೀಗ ಕಂಪನಿಯನ್ನು ಈ ಪರಿಸ್ಥಿತಿಗೆ ತಳ್ಳಿದಂತಿದೆ.

Shahrukhz Tower: ಶಾರುಕ್ ಖಾನ್ ಎಂದ್ರೆ ದುಬೈನಲ್ಲಿ ಬಲು ಕ್ರೇಜ್; ಅವರ ಹೆಸರಿನ ಟವರ್​ಗೆ 5,000 ಕೋಟಿ ರೂಗೂ ಅಧಿಕ ಬೆಲೆ

Shahrukhz Tower: ಶಾರುಕ್ ಖಾನ್ ಎಂದ್ರೆ ದುಬೈನಲ್ಲಿ ಬಲು ಕ್ರೇಜ್; ಅವರ ಹೆಸರಿನ ಟವರ್​ಗೆ 5,000 ಕೋಟಿ ರೂಗೂ ಅಧಿಕ ಬೆಲೆ

Danube Group sells Sharukhz Tower for Rs 5,000 crore in Dubai: ದುಬೈನ ಶೇಖ್ ಜಾಯೇದ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಶಾರುಖ್ಸ್ ಟವರ್ 5,000 ಕೋಟಿ ರೂಗೆ ಮಾರಾಟವಾಗಿದೆ. 3,500 ಕೋಟಿ ರೂ ವೆಚ್ಚದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಹೆಸರಿನ ಈ 55 ಮಹಡಿಯ ಕಮರ್ಷಿಯಲ್ ಟವರ್​ಗೆ ನಿರೀಕ್ಷೆಮೀರದ ಬೆಲೆ ಸಿಕ್ಕಿದೆ. ಮುಂಬೈ ಸಂಜಾತ ರಿಜ್ವಾಲ್ ಸಾಜನ್ ಮಾಲೀಕರಾಗಿರುವ ಡ್ಯಾನೂಬ್ ಗ್ರೂಪ್ ಈ ಕಮರ್ಷಿಯಲ್ ಟವರ್ ಕಟ್ಟುತ್ತಿದೆ.

Holidays: ಮುಂದಿನ ವರ್ಷ ಷೇರುಪೇಟೆಗೆ 15 ದಿನ ರಜೆ; ಇಲ್ಲಿದೆ ರಜಾದಿನಗಳ ಪಟ್ಟಿ

Holidays: ಮುಂದಿನ ವರ್ಷ ಷೇರುಪೇಟೆಗೆ 15 ದಿನ ರಜೆ; ಇಲ್ಲಿದೆ ರಜಾದಿನಗಳ ಪಟ್ಟಿ

Stock Market holiday calendar 2026: ಎನ್​ಎಸ್​ಇ ಮತ್ತು ಬಿಎಸ್​ಇ ಕ್ಯಾಲಂಡರ್ ಪ್ರಕಾರ 2026ರಲ್ಲಿ ಷೇರು ಮಾರುಕಟ್ಟೆಗೆ 15 ದಿನ ರಜೆ ಇದೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿದ ರಜೆಗಳು ಇವಾಗಿವೆ. ಜನವರಿ 26ರಂದಿನ ಗಣರಾಜ್ಯೋತ್ಸವದಿಂದ ಹಿಡಿದು ಡಿಸೆಂಬರ್ 25ರ ಕ್ರಿಸ್ಮಸ್​ವರೆಗೆ ಈ ರಜೆಗಳಿವೆ. ಶ್ರೀರಾಮನವಮಿ, ಬಕ್ರೀದ್, ಮಹಾರಾಷ್ಟ್ರ ದಿನ, ದೀಪಾವಳಿ, ದಸರಾ ಮೊದಲಾದ ಹಲವು ರಜೆಗಳೂ ಇದರಲ್ಲಿ ಸೇರಿವೆ.

Gold Rate Today Bangalore: ಚಿನ್ನದ ಬೆಲೆ ಹೊಸ ದಾಖಲೆ; ಬೆಳ್ಳಿ ಬೆಲೆ ಇಳಿಕೆ

Gold Rate Today Bangalore: ಚಿನ್ನದ ಬೆಲೆ ಹೊಸ ದಾಖಲೆ; ಬೆಳ್ಳಿ ಬೆಲೆ ಇಳಿಕೆ

Bullion Market 2025 December 14th: ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ಏರಿಕೆ ಕಂಡರೆ, ಬೆಳ್ಳಿ ಬೆಲೆ ಇಳಿದಿದೆ. ಚಿನ್ನದ ಬೆಲೆ ಹೊಸ ದಾಖಲೆ ಬರೆದಿದೆ. 22 ಕ್ಯಾರಟ್ ಚಿನ್ನದ ಬೆಲೆ 12,160 ರೂನಿಂದ 12,275 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 13,391 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 198 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 210 ರೂ ಆಗಿದೆ.

ಆಹಾರ ಸೇವನೆಯಲ್ಲಿ ಈ ತಪ್ಪು ಯಾವತ್ತೂ ಆಗಬಾರದು: ಬಾಬಾ ರಾಮದೇವ್ ಸಲಹೆಗಳು

ಆಹಾರ ಸೇವನೆಯಲ್ಲಿ ಈ ತಪ್ಪು ಯಾವತ್ತೂ ಆಗಬಾರದು: ಬಾಬಾ ರಾಮದೇವ್ ಸಲಹೆಗಳು

Baba Ramdev explains right way of eating food: ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಮತ್ತು ಯೂಟ್ಯೂಬ್ ಮೂಲಕ ಜನರಿಗೆ ಆರೋಗ್ಯಕರ ಜೀವನದ ಬಗ್ಗೆ ನಿಯಮಿತವಾಗಿ ಮಾಹಿತಿಯನ್ನು ಒದಗಿಸುತ್ತಾರೆ. ಆರೋಗ್ಯಯುತ ಶರೀರಕ್ಕೆ ಆಹಾರ ಎಷ್ಟು ಮುಖ್ಯವೋ, ಅದನ್ನು ತಿನ್ನುವ ಕ್ರಮವೂ ಅಷ್ಟೇ ಮುಖ್ಯ ಎಂಬುದನ್ನು ಬಾಬಾ ವಿವರಿಸಿದ್ದಾರೆ.

ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸಲು ಪಳಗಿರುವ ರಾಮದೇವ್ ಅಗರ್ವಾಲ್ ಅವರ ಟ್ರಿಕ್ಸ್​ಗಳಿವು…

ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸಲು ಪಳಗಿರುವ ರಾಮದೇವ್ ಅಗರ್ವಾಲ್ ಅವರ ಟ್ರಿಕ್ಸ್​ಗಳಿವು…

Investor Raamdeo Agrawal tips on selecting stocks for investment: ಭಾರತದ ಅತಿದೊಡ್ಡ ಹಾಗೂ ಅತ್ಯಂತ ಯಶಸ್ವಿ ಹೂಡಿಕೆದಾರರಲ್ಲಿ ರಾಮದೇವ್ ಅಗರ್ವಾಲ್ ಒಬ್ಬರು. ಇವರು ಹೂಡಿಕೆ ಮಾಡಿರುವ ಅನೇಕ ಷೇರುಗಳು ಮಲ್ಟಿಬ್ಯಾಗರ್ ಆಗಿ ಓಡಿವೆ. ಮಲ್ಟಿಬ್ಯಾಗರ್ ಆಗಬಲ್ಲ ಷೇರನ್ನು ಮೊದಲೇ ಗುರುತಿಸುವುದು ಹೇಗೆ, ಯಾವ ರೀತಿಯ ಷೇರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಟಿಪ್ಸ್ ನೀಡಿದ್ದಾರೆ.

ನವೆಂಬರ್​ನಲ್ಲಿ ಹಣದುಬ್ಬರ ಶೇ. 0.71; ಅಕ್ಟೋಬರ್​ಗಿಂತ 46 ಮೂಲಾಂಕಗಳಷ್ಟು ಬೆಲೆ ಹೆಚ್ಚಳ

ನವೆಂಬರ್​ನಲ್ಲಿ ಹಣದುಬ್ಬರ ಶೇ. 0.71; ಅಕ್ಟೋಬರ್​ಗಿಂತ 46 ಮೂಲಾಂಕಗಳಷ್ಟು ಬೆಲೆ ಹೆಚ್ಚಳ

2025 November inflation rate 0.71%: ಅಕ್ಟೋಬರ್​ನಲ್ಲಿ ಶೇ. 0.25ಕ್ಕೆ ಕುಸಿದಿದ್ದ ಹಣದುಬ್ಬರ 2025ರ ನವೆಂಬರ್​ನಲ್ಲಿ ಶೇ. 0.71ಕ್ಕೆ ಏರಿದೆ. ಆರ್​ಬಿಐ ನಿಗದಿ ಮಾಡಿದ ಹಣದುಬ್ಬರ ತಾಳಿಕೆಯ ಮಿತಿಯಾದ ಶೇ. 2ರ ದರಕ್ಕಿಂತ ಕಡಿಮೆಯೇ ಇದೆ. ಅಕ್ಟೋಬರ್​ಗೆ ಹೋಲಿಸಿದರೆ ನವೆಂಬರ್​ನಲ್ಲಿ ಆಹಾರವಸ್ತುಗಳ ಬೆಲೆ ಹೆಚ್ಚಿರುವುದರಿಂದ ಹಣದುಬ್ಬರವೂ ಹೆಚ್ಚಿದೆ.

ಕರ್ನಾಟಕದ ಚರ್ಮಕಾರರಿಗೆ ಭರ್ಜರಿ ಆದಾಯ? ಕೊಲ್ಹಾಪುರಿ ಚಪ್ಪಲಿಗಾಗಿ ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ ಪ್ರದಾ ಡೀಲ್

ಕರ್ನಾಟಕದ ಚರ್ಮಕಾರರಿಗೆ ಭರ್ಜರಿ ಆದಾಯ? ಕೊಲ್ಹಾಪುರಿ ಚಪ್ಪಲಿಗಾಗಿ ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ ಪ್ರದಾ ಡೀಲ್

Italy fashion brand Prada signs MoU for Kolhapuri chappals: ಚರ್ಮಕಾರರ ಸಂಘಟನೆಗಳಾದ ಲಿಡ್ಕಾಮ್ ಮತ್ತು ಲಿಡ್ಕರ್ ನಿಗಮಗಳ ಜೊತೆ ಇಟಲಿಯ ಪ್ರದಾ ಸಂಸ್ಥೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ. ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ ಆಗಿರುವ ಪ್ರದಾ ಇದೀಗ ಕೊಲ್ಹಾಪುರಿ ಚಪ್ಪಲಿಗಳನ್ನು ಹೊರಜಗತ್ತಿಗೆ ಪರಿಚಯಿಸಲಿದೆ. ಪ್ರದಾ ತಿಳಿಸಿದ ವಿನ್ಯಾಸದಲ್ಲಿ ಚಪ್ಪಲಿಗಳನ್ನು ಚರ್ಮಕಾರರು ಕೊಲ್ಹಾಪುರಿ ಚಪ್ಪಲಿಗಳನ್ನು ತಯಾರಿಸಿಕೊಡಲಿದ್ದಾರೆ.

ಮೈಕ್ರೋಸಾಫ್ಟ್ ಸಿಇಒಗೆ ಕ್ರಿಕೆಟ್, ಕೋಡ್ ಕ್ರೇಜ್; ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಅನಾಲಿಸಿಸ್ ಆ್ಯಪ್ ಕಟ್ಟುತ್ತಿರುವ ಸತ್ಯ ನಾದೆಲ್ಲ

ಮೈಕ್ರೋಸಾಫ್ಟ್ ಸಿಇಒಗೆ ಕ್ರಿಕೆಟ್, ಕೋಡ್ ಕ್ರೇಜ್; ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಅನಾಲಿಸಿಸ್ ಆ್ಯಪ್ ಕಟ್ಟುತ್ತಿರುವ ಸತ್ಯ ನಾದೆಲ್ಲ

Microsoft CEO Satya Nadella building cricket analysis app using Deep Research AI: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರಿಗೆ ವೈಯಕ್ತಿಕವಾಗಿ ಕ್ರಿಕೆಟ್ ಮತ್ತು ಕೋಡಿಂಗ್ ಎಂದರೆ ಖಯಾಲಿ. ಬಿಡುವಿನ ವೇಳೆಯಲ್ಲಿ ಅವರು ಡೀಪ್ ರಿಸರ್ಚ್ ಎಐ ಬಳಸಿ ಕ್ರಿಕೆಟ್ ಅನಾಲಿಸಿಸ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಭಾರತ ಮೂಲದ ಸತ್ಯ ನಾದೆಲ್ಲ ಅವರು ಕೆಲ ಕ್ರಿಕೆಟ್ ತಂಡಗಳ ಮಾಲೀಕರಾಗಿ ತಮ್ಮ ನೆಚ್ಚಿನ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.