ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.
ಅನಗತ್ಯ ಹೂಡಿಕೆಗಳ ಮೂಲಕ ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳದಿರಿ ಜೋಕೆ; ಗಮನಿಸಬೇಕಾದ ಸಂಗತಿಗಳಿವು
Investment Success: ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳದಿರುವ ಕಲೆ ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಅತಿ ಮುಖ್ಯ. ರಾಜೀವ್ ಠಕ್ಕರ್, ಎಸ್. ನರೇನ್ ಸಲಹೆಗಳ ಪ್ರಕಾರ, ಬಂಡವಾಳ ರಕ್ಷಣೆ, ಆಸ್ತಿ ಹಂಚಿಕೆ, ತುರ್ತು ನಿಧಿ ನಿರ್ವಹಣೆ ಮತ್ತು ಅನಗತ್ಯ ಟ್ರೇಡಿಂಗ್ ತಪ್ಪಿಸುವುದು ಯಶಸ್ವಿ ಹೂಡಿಕೆಗೆ ನಿರ್ಣಾಯಕ. ಮಾರುಕಟ್ಟೆಯ ಏರಿಳಿತದಿಂದ ಹಣವನ್ನು ರಕ್ಷಿಸಿ, ಶಿಸ್ತುಬದ್ಧ ಹೂಡಿಕೆಯ ಮೂಲಕ ಸ್ಥಿರ ಸಂಪತ್ತು ನಿರ್ಮಿಸಿ.
- Vijaya Sarathy SN
- Updated on: May 22, 2026
- 7:18 pm
ದೇಶದ ಅರ್ಧದಷ್ಟು ಜಿಡಿಪಿಗೆ ಹೊಟ್ಟೆ ತುಂಬಿಸುತ್ತಿರೋದು ಕರ್ನಾಟಕ ಸೇರಿ 5 ರಾಜ್ಯಗಳು ಮಾತ್ರ; ಇಲ್ಲಿವೆ ವರದಿಯ ಅಂಶಗಳು
India's Economic Divide: ಭಾರತವು ವಿಶ್ವದ ಅತಿ ವೇಗದ ಆರ್ಥಿಕತೆಗಳಲ್ಲಿ ಒಂದಾಗಿದ್ದರೂ, ರಾಜ್ಯಗಳ ನಡುವೆ ತೀವ್ರ ಅಸಮಾನತೆಗಳಿವೆ. ದೇಶದ ಒಟ್ಟು ಜಿಡಿಪಿಯ ಶೇ. 48ರಷ್ಟು ಪಾಲು ಕೇವಲ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ 5 ರಾಜ್ಯಗಳಿಂದ ಬರುತ್ತದೆ. ವಿದೇಶಿ ಹೂಡಿಕೆಯಲ್ಲೂ ಇದೇ ಪ್ರವೃತ್ತಿ. ಉತ್ತರ ಪ್ರದೇಶದ ಬೆಳವಣಿಗೆ ಸಕಾರಾತ್ಮಕವಾಗಿದ್ದು, ಆದರೆ ಆದಾಯ, ಉದ್ಯೋಗ ಸೃಷ್ಟಿಯಲ್ಲಿ ಇತರ ರಾಜ್ಯಗಳು ಹಿಂದುಳಿದಿವೆ. ಸಮಗ್ರ ಅಭಿವೃದ್ಧಿಗೆ ಎಲ್ಲ ರಾಜ್ಯಗಳ ಆರ್ಥಿಕ ಬೆಳವಣಿಗೆ ಅನಿವಾರ್ಯ.
- Vijaya Sarathy SN
- Updated on: May 22, 2026
- 6:42 pm
ಆರ್ಬಿಐನಿಂದ ಸರ್ಕಾರಕ್ಕೆ ಈ ವರ್ಷ 2.87 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಹೊಸ ದಾಖಲೆ
RBI Approves Record ₹2.87 Lakh Crore Dividend to Centre: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2025-26ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ ದಾಖಲೆ ಮಟ್ಟದ 2.87 ಲಕ್ಷ ಕೋಟಿ ರೂ. ಲಾಭಾಂಶ ನೀಡಿದೆ. ಇದು ಆರ್ಬಿಐ ಇತಿಹಾಸದಲ್ಲೇ ಅತಿ ದೊಡ್ಡ ವರ್ಗಾವಣೆಯಾಗಿದ್ದು, ಕಚ್ಚಾ ತೈಲ ಬೆಲೆ ಏರಿಕೆಯಂತಹ ಜಾಗತಿಕ ಸವಾಲುಗಳ ನಡುವೆ ಸರ್ಕಾರದ ವಿತ್ತೀಯ ಕೊರತೆ ನಿಯಂತ್ರಿಸಲು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು ಮಹತ್ವದ ಆರ್ಥಿಕ ಬಲ ನೀಡಲಿದೆ.
- Vijaya Sarathy SN
- Updated on: May 22, 2026
- 5:51 pm
ಐಟಿಆರ್ ಸಲ್ಲಿಸುತ್ತಿದ್ದೀರಾ? ಎಐಎಸ್ ಪರಿಶೀಲನೆ ಮರೆಯದಿರಿ; ಏನದರ ಮಹತ್ವ? ಇಲ್ಲಿದೆ ಡೀಟೇಲ್ಸ್
Understand Annual Information Statement to File Taxes Safely: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವಾಗ, ನಿಮ್ಮ ವಾರ್ಷಿಕ ಮಾಹಿತಿ ಹೇಳಿಕೆ (AIS) ಪರಿಶೀಲಿಸುವುದು ಕಡ್ಡಾಯ. ITR ಮತ್ತು AIS ಮಾಹಿತಿ ತಾಳೆಯಾಗದಿದ್ದರೆ, ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವ ಸಾಧ್ಯತೆ ಹೆಚ್ಚು. AIS ನಲ್ಲಿನ ದೋಷಗಳನ್ನು ತಕ್ಷಣ ಸರಿಪಡಿಸಿ ಅಥವಾ ಪರಿಷ್ಕೃತ ITR ಸಲ್ಲಿಸಿ. ಇದು ಅನಗತ್ಯ ತೊಂದರೆ ತಪ್ಪಿಸಿ, ನಿಮ್ಮ ತೆರಿಗೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಕೊನೆಯ ದಿನಾಂಕದ ಮೊದಲು ಈ ಪರಿಶೀಲನೆ ಪೂರ್ಣಗೊಳಿಸಿ, ಜಾಣತನದಿಂದ ತೆರಿಗೆ ಸಲ್ಲಿಸಿ.
- Vijaya Sarathy SN
- Updated on: May 22, 2026
- 4:06 pm
ಡಾಲರ್ ಎದುರು ರುಪಾಯಿ ಹೇಗೆ ಬೇಕಾದರೂ ಕುಸಿಯಲಿ ಬಿಡಿ, ಚಿಂತೆ ಬೇಡ: ಹಣಕಾಸು ಆಯೋಗ ಅಧ್ಯಕ್ಷ ಪನಗರಿಯಾ
Economist Panagariya Advises RBI Against Intervention to prevent Rupee fall: ಅರವಿಂದ್ ಪನಗರಿಯಾ ಪ್ರಕಾರ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ಆರ್ಬಿಐ ಹೆಚ್ಚು ಚಿಂತಿಸಬಾರದು. ರುಪಾಯಿ 100 ಗಡಿ ದಾಟಿದರೂ ಆತಂಕ ಬೇಡ, ಸಹಜವಾಗಿ ಕುಸಿಯಲು ಬಿಡಬೇಕು. ಫಾರೆಕ್ಸ್ ನಿಧಿ ವ್ಯಯಿಸುವುದು ಬೇಡ. ತಾತ್ಕಾಲಿಕ ಪರಿಹಾರಗಳು ಅನಗತ್ಯ. 2013ರ ಬಿಕ್ಕಟ್ಟಿಗಿಂತ ಈಗ ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದೆ, ಹಣದುಬ್ಬರ ನಿಭಾಯಿಸುವ ಶಕ್ತಿ ಇದೆ.
- Vijaya Sarathy SN
- Updated on: May 22, 2026
- 2:30 pm
‘ಕೆಳಗಿನ ಶೇ. 50 ಮಂದಿಗೆ ಆದಾಯ ತೆರಿಗೆ ‘3% ಅಲ್ಲ, 0% ಆಗಬೇಕು’- ಜೆಫ್ ಬೆಜೋಸ್
Bezos Calls for zero Federal Tax for Lower Earners: ಜೆಫ್ ಬೆಜೋಸ್ ಅಮೆರಿಕದ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಸೂಚಿಸಿದ್ದಾರೆ. ಕಡಿಮೆ ಆದಾಯ ಗಳಿಸುವ ಕೆಳಹಂತದ 50% ಜನರಿಗೆ ಫೆಡರಲ್ ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಅವರು ಪ್ರತಿಪಾದಿಸಿದ್ದಾರೆ. ಪ್ರಸ್ತುತ ಅವರು 3% ತೆರಿಗೆ ಪಾವತಿಸುತ್ತಿದ್ದು, ಇದನ್ನು ಶೂನ್ಯಕ್ಕೆ ಇಳಿಸುವುದು ಆರ್ಥಿಕ ಅಸಮಾನತೆ ನಿವಾರಣೆಗೆ ಮತ್ತು ಬಡವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಬೆಜೋಸ್ ಅಭಿಪ್ರಾಯಪಟ್ಟಿದ್ದಾರೆ. ಇದು ಸರ್ಕಾರಕ್ಕೆ ದೊಡ್ಡ ನಷ್ಟವಲ್ಲ, ಆದರೆ ಜನರಿಗೆ ದೊಡ್ಡ ಬೆಂಬಲ.
- Vijaya Sarathy SN
- Updated on: May 22, 2026
- 12:12 pm
Gold Rate: ಸತತ ಏರಿಕೆ ಬಳಿಕ ಕಡಿಮೆಗೊಂಡ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ
Gold Price 22 May 2026: ಚಿನ್ನದ ಬೆಲೆ ಇವತ್ತು ಶುಕ್ರವಾರ ಗ್ರಾಮ್ಗೆ 40 ರೂ ಹೆಚ್ಚಿದೆ. ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಆಭರಣ ಚಿನ್ನದ ಬೆಲೆ 14,660 ರೂನಿಂದ 14,620 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 15,949 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್ಗೆ 285 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 295 ರೂ ಇದೆ.
- Vijaya Sarathy SN
- Updated on: May 22, 2026
- 10:55 am
ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ?
India Semiconductor Mission 2.0: ಕೇಂದ್ರದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 (ISM 2.0) 12 ವರ್ಷಗಳಿಗೆ ವಿಸ್ತರಣೆಯಾಗಿದ್ದು, 1.5 ಲಕ್ಷ ಕೋಟಿ ರೂ. ನಿಧಿ ಮೀಸಲಿಡುವ ಸಾಧ್ಯತೆಯಿದೆ. ಚಿಪ್ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತು ಪೂರೈಸುವ MSME ಗಳಿಗೆ ಆದ್ಯತೆ ನೀಡಿ, ದೇಶೀಯ ಚಿಪ್ ವಿನ್ಯಾಸಕ್ಕೆ ಪ್ರೋತ್ಸಾಹ ನೀಡಲಾಗುವುದು. ಇದು ಭಾರತವನ್ನು ಜಾಗತಿಕ ಚಿಪ್ ತಯಾರಿಕಾ ಕೇಂದ್ರವಾಗಿಸಿ, ಆಮದು ಅವಲಂಬನೆ ಕಡಿಮೆಗೊಳಿಸಿ, 2030 ರೊಳಗೆ $100 ಶತಕೋಟಿ ಚಿಪ್ ಮಾರುಕಟ್ಟೆ ಗುರಿ ಸಾಧಿಸಲು ಸಹಕಾರಿಯಾಗಲಿದೆ.
- Vijaya Sarathy SN
- Updated on: May 21, 2026
- 6:50 pm
SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು?
Elon Musk wants world class engineers and physicists for SpaceXAI: ಸ್ಪೇಸ್ಎಕ್ಸ್ನ ಎಐ ವಿಭಾಗವಾದ ಸ್ಪೇಸ್ಎಕ್ಸ್ಎಐನಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಸಂಸ್ಥಾಪಕ ಇಲಾನ್ ಮಸ್ಕ್ ಅವರು ಎಕ್ಸ್ನಲ್ಲಿ ಇದನ್ನು ಪ್ರಕಟಿಸಿದ್ದು, ವರ್ಲ್ಡ್ ಕ್ಲಾಸ್ ಎಂಜಿನಿಯರುಗಳು ಮತ್ತು ಫಿಸಿಸಿಸ್ಟ್ಗಳು ಬೇಕಿದ್ದಾರೆ ಎಂದಿದ್ದಾರೆ. ಎಐ ಅನುಭವ ಇಲ್ಲದಿದ್ದರೂ ಪರವಾಗಿಲ್ಲ, ಆದರೆ, ಸ್ಮಾರ್ಟ್ ಜನರಾಗಿರಬೇಕು ಎಂಬುದು ಮಸ್ಕ್ ಅವರ ಷರತ್ತು.
- Vijaya Sarathy SN
- Updated on: May 21, 2026
- 5:49 pm
ಫೋನ್ ಖರೀದಿಸಿ, ಇಎಂಐ ಕಟ್ಟೋಕಾಗ್ತಿಲ್ವಾ? ಸಾಲಗಾರರು ನಿಮ್ಮ ಫೋನ್ ಲಾಕ್ ಮಾಡಬಹುದಾ? ಆರ್ಬಿಐ ಬಳಿ ಪ್ರಸ್ತಾಪ
Lenders Can Disable Smartphones for EMI Default: RBI ಹೊಸ ಪ್ರಸ್ತಾಪದಡಿ, ಸಾಲದ ಮೇಲೆ ಖರೀದಿಸಿದ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ಗಳ EMI ಕಟ್ಟಲು ವಿಫಲರಾದರೆ, ಸಾಲಗಾರರಿಗೆ ಆ ಗ್ಯಾಜೆಟ್ಗಳನ್ನು ನಿಷ್ಕ್ರಿಯಗೊಳಿಸುವ ಕಾನೂನು ಅಧಿಕಾರ ಲಭ್ಯವಾಗಲಿದೆ. ಸಾಲ ವಸೂಲಾತಿ ಕರಡು ನಿರ್ದೇಶನಗಳಲ್ಲಿ ಈ ಪ್ರಸ್ತಾಪ ಸೇರಿಸಲಾಗಿದ್ದು, ಬ್ಯಾಂಕ್ಗಳು ಮತ್ತು NBFCಗಳ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. EMI ಬಾಕಿ ಉಳಿದಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ.
- Vijaya Sarathy SN
- Updated on: May 21, 2026
- 4:35 pm
ಪೆಟ್ರೋಲ್ ಬಂಕ್ಗಳಲ್ಲಿ ಒಬ್ಬ ವ್ಯಕ್ತಿ ಅಥವಾ ವಾಹನಕ್ಕೆ ಎಷ್ಟು ಪೆಟ್ರೋಲ್, ಡೀಸಲ್ ನೀಡಲಾಗುತ್ತದೆ? ಇಲ್ಲಿದೆ ಡೀಟೇಲ್ಸ್
Petrol and Diesel supply at fuel outlets: ಇಂಧನ ಬಿಕ್ಕಟ್ಟು ಇರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸಲ್ ಸಿಗುತ್ತಿಲ್ಲ ಎನ್ನುವ ವದಂತಿ ಎಲ್ಲೆಡೆ ಸುಲಭವಾಗಿ ಹಬ್ಬುತ್ತಿದೆ. ಆದರೆ, ಸದ್ಯ ಅಂಥ ಪರಿಸ್ಥಿತಿ ಉದ್ಭವವಾಗಿಲ್ಲ. ಪೆಟ್ರೋಲ್, ಡೀಸಲ್ ಪೂರೈಕೆ ಸರಾಗವಾಗಿ ಆಗುತ್ತಿದೆ. ಆದರೆ, ಈಗಾಗಲೇ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸಲ್ ಖರೀದಿಗೆ ಕೆಲ ಮಿತಿಗಳು, ನಿರ್ಬಂಧಗಳು ಇವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
- Vijaya Sarathy SN
- Updated on: May 21, 2026
- 3:23 pm
ಮೋದಿ ಅವರ ಪಂಚ ರಾಷ್ಟ್ರ ಪ್ರವಾಸದ ಪರಿಣಾಮ ಭಾರತಕ್ಕೆ ಹರಿದುಬರಲಿರುವ ಹೂಡಿಕೆ ಎಷ್ಟು ಗೊತ್ತಾ?
Investments from Modi's 5-Nation Tour: ಪ್ರಧಾನಿ ಮೋದಿ ಅವರ ಐದು ರಾಷ್ಟ್ರಗಳ (ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ, ಇಟಲಿ) ಪ್ರವಾಸ ಭಾರತಕ್ಕೆ ₹3.5 ಲಕ್ಷ ಕೋಟಿ (40 ಬಿಲಿಯನ್ ಡಾಲರ್) ಹೂಡಿಕೆ ತರುವಲ್ಲಿ ಯಶಸ್ವಿಯಾಗಿದೆ. ಇಂಧನ ಭದ್ರತೆ ಮತ್ತು ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಮಹತ್ವದ ಒಪ್ಪಂದಗಳು ನಡೆದಿವೆ. ಇದು ಭಾರತದ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡಲಿದೆ. ಮೋದಿ ಅವರ ವಿದೇಶ ಪ್ರವಾಸದ ಆರ್ಥಿಕ ಪರಿಣಾಮಗಳ ಕುರಿತು ಲೇಖನ ಬೆಳಕು ಚೆಲ್ಲಲಿದೆ.
- Vijaya Sarathy SN
- Updated on: May 21, 2026
- 12:53 pm