ಸುಗ್ಗನಹಳ್ಳಿ ವಿಜಯಸಾರಥಿ

ಸುಗ್ಗನಹಳ್ಳಿ ವಿಜಯಸಾರಥಿ

Chief Sub Editor - TV9 Kannada

vijayasarathy.nanjappa@tv9.com

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow On:
ಬಜೆಟ್ ಸುತ್ತಲ ಸ್ವಾರಸ್ಯಕರ ಸಂಗತಿ

ಬಜೆಟ್ ಸುತ್ತಲ ಸ್ವಾರಸ್ಯಕರ ಸಂಗತಿ

Union Budget 2024: ಭಾರತದ ಚೊಚ್ಚಲ ಬಜೆಟ್​ನಿಂದ ಹಿಡಿದು ಕ್ರಾಂತಿಕಾರಿ ಬಜೆಟ್, ಶತಮಾನದ ಬಜೆಟ್​ವರೆಗೆ ಸ್ವಾರಸ್ಯಕರ ವಿಷಯಗಳು ಇಲ್ಲಿವೆ...

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

Fitch Ratings projection of India's GDP growth: ಭಾರತದ ಜಿಡಿಪಿ ಈ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಬೆಳೆಯಬಹುದು ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ಅಂದಾಜು ಮಾಡಿದೆ. ತನ್ನ ಗ್ಲೋಬಲ್ ಎಕನಾಮಿಕ್ ಔಟ್​ಲುಕ್ ವರದಿಯಲ್ಲಿ ಅದು ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ತನ್ನ ನಿಲುವನ್ನು ತುಸು ಬದಲಾಯಿಸಿಕೊಂಡಿದೆ. ಹಿಂದಿನ ವರದಿಯಲ್ಲಿ ಅದು ಭಾರತದ ಜಿಡಿಪಿ ಶೇ. 7ರಷ್ಟು ಹೆಚ್ಚಬಹುದು ಎಂದು ಹೇಳಿತ್ತು.

ಕೇಂದ್ರ ಬಜೆಟ್ 2024: ಏಕೀಕೃತ ಸಬ್ಸಿಡಿ, ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಸೇರಿದಂತೆ ಕೃಷಿ ವಲಯದ ವಿವಿಧ ಬೇಡಿಕೆಗಳಿವು…

ಕೇಂದ್ರ ಬಜೆಟ್ 2024: ಏಕೀಕೃತ ಸಬ್ಸಿಡಿ, ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಸೇರಿದಂತೆ ಕೃಷಿ ವಲಯದ ವಿವಿಧ ಬೇಡಿಕೆಗಳಿವು…

Agricultural sector expectations from Union Budget 2024: ಕೃಷಿ ಕ್ಷೇತ್ರದ ಸಂಘ ಸಂಸ್ಥೆಗಳು, ತಜ್ಞರು ಮೊದಲಾದವರು ಇಂದು (ಜೂನ್ 21) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ಸಿಗಲು ಯಾವೆಲ್ಲಾ ಅಂಶಗಳು ಬೇಕಾಗಬಹುದು ಎಂದು ಇವರು ಸಲಹೆ ನೀಡಿರುವುದು ತಿಳಿದುಬಂದಿದೆ. ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಕೊಡಬೇಕು, ಯೂರಿಯಾ ದರ ಏರಿಸಬೇಕು ಎಂಬಿತ್ಯಾದಿ ಬೇಡಿಕೆಗಳು ಈ ಸಂದರ್ಭದಲ್ಲಿ ವ್ಯಕ್ತವಾಗಿವೆ.

ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದಿದ್ದರೆ ಏನಾಗುತ್ತೆ? ಈ ಪರಿಣಾಮಗಳನ್ನು ತಿಳಿದಿರಿ

ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದಿದ್ದರೆ ಏನಾಗುತ್ತೆ? ಈ ಪರಿಣಾಮಗಳನ್ನು ತಿಳಿದಿರಿ

ITR filing updates: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ಜುಲೈ 31ರವರೆಗೆ ಗಡುವು ಇದೆ. ದಂಡ ಇಲ್ಲದೇ ನೀವು ಆ ದಿನದೊಳಗೆ ಐಟಿಆರ್ ಸಲ್ಲಿಸಬಹುದು. ಆ ವಾಯಿದೆ ಮೀರಿದರೆ ಸಮಸ್ಯೆಗಳು ಎದುರಾಗಬಹುದು. ದಂಡ ವಿಧಿಸಬಹುದು, ಟ್ಯಾಕ್ಸ್ ರೆಜಿಮೆಯೇ ಬದಲಾಗಬಹುದು. ಐಟಿಆರ್ ಅನ್ನು ಜುಲೈ 31ರೊಳಗೆ ಸಲ್ಲಿಸದಿದ್ದರೆ ಏನಾಗುತ್ತದೆ ಎಂಬ ವಿವರ ಇಲ್ಲಿದೆ...

ಸಿಲ್ವರ್ ಇಟಿಎಫ್ ಹೊಸ ಟ್ರೆಂಡ್; ನಿಮ್ಮ ಹೂಡಿಕೆ ಹೆಚ್ಚು ಲಾಭದಾಯಕ, ಹೆಚ್ಚು ಸುರಕ್ಷಿತ

ಸಿಲ್ವರ್ ಇಟಿಎಫ್ ಹೊಸ ಟ್ರೆಂಡ್; ನಿಮ್ಮ ಹೂಡಿಕೆ ಹೆಚ್ಚು ಲಾಭದಾಯಕ, ಹೆಚ್ಚು ಸುರಕ್ಷಿತ

Silver ETFs in trending: ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಟಿಎಫ್​ಗಳು ಜನಪ್ರಿಯತೆ ಪಡೆಯುತ್ತಿವೆ. ಇದರಲ್ಲೂ ಈಕ್ವಿಟಿ, ಡೆಟ್, ಗೋಲ್ಡ್ ಇತ್ಯಾದಿ ಬೇರೆ ಬೇರೆ ಅಸೆಟ್​ಗಳ ಇಟಿಎಫ್​ಗಳಿವೆ. ಇವುಗಳಲ್ಲಿ ಸಿಲ್ವರ್ ಇಟಿಎಫ್ ಟ್ರೆಂಡಿಂಗ್​ನಲ್ಲಿದೆ. ಎರಡೂವರೆ ವರ್ಷದ ಹಿಂದೆ ಆರಂಭವಾದ ಸಿಲ್ವರ್ ಇಟಿಎಫ್ ಫಂಡ್​ಗಳಲ್ಲಿ ಈಗಾಗಲೇ 5,400 ಕೋಟಿ ರೂ ಮೊತ್ತದಷ್ಟು ಹೂಡಿಕೆಗಳಾಗಿವೆ.

Gold Rates: ತೀರುತ್ತಿಲ್ಲ ಸೆಂಟ್ರಲ್ ಬ್ಯಾಂಕ್​ಗಳ ಚಿನ್ನದ ದಾಹ; ಈ ವರ್ಷ ಬೆಲೆ ಬಹಳ ಹೆಚ್ಚಾಗುವ ಭೀತಿ

Gold Rates: ತೀರುತ್ತಿಲ್ಲ ಸೆಂಟ್ರಲ್ ಬ್ಯಾಂಕ್​ಗಳ ಚಿನ್ನದ ದಾಹ; ಈ ವರ್ಷ ಬೆಲೆ ಬಹಳ ಹೆಚ್ಚಾಗುವ ಭೀತಿ

World Gold Council report: ವಿಶ್ವಾದ್ಯಂತ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಆರ್​ಬಿಐ ಸೇರಿದಂತೆ ವಿವಿಧ ಸೆಂಟ್ರಲ್ ಬ್ಯಾಂಕುಗಳು ಚಿನ್ನ ಖರೀದಿ ಹೆಚ್ಚಿಸಿವೆ. ಇದು ಬೆಲೆ ಏರಿಕೆಗೆ ಇರುವ ಪ್ರಮುಖ ಕಾರಣಗಳಲ್ಲಿ ಒಂದು. ಮುಂದಿನ ಒಂದು ವರ್ಷದಲ್ಲಿ ಇದೇ ರೀತಿ ಚಿನ್ನದ ಖರೀದಿ ಮಾಡುವುದಾಗಿ ಹೆಚ್ಚಿನ ಸೆಂಟ್ರಲ್ ಬ್ಯಾಂಕುಗಳು ಹೇಳಿವೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿಯಲ್ಲಿ ಈ ಅಂಶಗಳಿವೆ.

Gold Silver Price on 21st June: ಚಿನ್ನ, ಬೆಳ್ಳಿ ಎರಡೂ ಬೆಲೆ ಹೆಚ್ಚಳ; ಇಲ್ಲಿದೆ ಇವತ್ತಿನ ದರಪಟ್ಟಿ

Gold Silver Price on 21st June: ಚಿನ್ನ, ಬೆಳ್ಳಿ ಎರಡೂ ಬೆಲೆ ಹೆಚ್ಚಳ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024 June 21st: ಇಂದು ಶುಕ್ರವಾರ ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಏರಿಕೆ ಆಗಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,440 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 92.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 66,400 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,275 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

ಆನ್​ಲೈನ್ ಗೇಮಿಂಗ್ ರೀತಿಯಲ್ಲಿ ಷೇರು ಮಾರುಕಟ್ಟೆಯ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಮೇಲೆ ಅಧಿಕ ತೆರಿಗೆ ವಿಧಿಸುವ ಸಾಧ್ಯತೆ

ಆನ್​ಲೈನ್ ಗೇಮಿಂಗ್ ರೀತಿಯಲ್ಲಿ ಷೇರು ಮಾರುಕಟ್ಟೆಯ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಮೇಲೆ ಅಧಿಕ ತೆರಿಗೆ ವಿಧಿಸುವ ಸಾಧ್ಯತೆ

ನವದೆಹಲಿ, ಜೂನ್ 20: ಮುಂದಿನ ತಿಂಗಳು ಮಂಡಿಸಲಾಗುವ ಬಜೆಟ್​ನಲ್ಲಿ (Union Budget 2024) ಕೆಲ ಪ್ರಮುಖ ಕ್ರಮಗಳ ನಿರೀಕ್ಷೆ ಇದೆ. ಷೇರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಹಳ ಹೆಚ್ಚುತ್ತಿರುವ ಫ್ಯೂಚರ್ಸ್ ಮತ್ತು ಆಪ್ಷನ್ಸ್ ವ್ಯವಹಾರಗಳಿಗೆ (F & O Trading) ಅಧಿಕ ತೆರಿಗೆ ವಿಧಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೋಜಿಸಿರುವುದು ತಿಳಿದುಬಂದಿದೆ. ಈ ಬಗ್ಗೆ ಒಂದು ವರದಿ.

ಅಮೆರಿಕದ ಎನ್​ವಿಡಿಯಾದಂತೆ ಭಾರತದಲ್ಲೂ ಷೇರುಪೇಟೆ ಧೂಳೆಬ್ಬಿಸುತ್ತಿರುವ ಚಿಪ್ ಕಂಪನಿ ಮಾಸ್​ಚಿಪ್ ಟೆಕ್ನಾಲಜೀಸ್

ಅಮೆರಿಕದ ಎನ್​ವಿಡಿಯಾದಂತೆ ಭಾರತದಲ್ಲೂ ಷೇರುಪೇಟೆ ಧೂಳೆಬ್ಬಿಸುತ್ತಿರುವ ಚಿಪ್ ಕಂಪನಿ ಮಾಸ್​ಚಿಪ್ ಟೆಕ್ನಾಲಜೀಸ್

Moschip Technologies shares: ಹೈದರಾಬಾದ್ ಮೂಲದ ಮೋಸ್​ಚಿಪ್ ಟೆಕ್ನಾಲಜೀಸ್ ಸಂಸ್ಥೆ ಸೆಮಿಕಂಡ್ಟರ್ ಚಿಪ್ ಡಿಸೈನ್ ಸರ್ವಿಸ್ ನೀಡುತ್ತದೆ. ಭಾರತದ ಭವಿಷ್ಯದ ಚಿಪ್ ಡಿಸೈನಿಂಗ್ ಯೋಜನೆಗಳಿಗೆ ಇದು ಮುಖ್ಯ ಭಾಗವಾಗಬಹುದು. ಈ ಹಿನ್ನೆಲೆಯಲ್ಲಿ ಮೋಸ್​ಚಿಪ್ ಸಂಸ್ಥೆಯ ಷೇರುಗಳಿಗೆ ಬಹಳವೇ ಬೇಡಿಕೆ ಬಂದಿದೆ. ಮೂರೇ ತಿಂಗಳಲ್ಲಿ ಅದರ ಷೇರುಬೆಲೆ ಮೂರು ಪಟ್ಟು ಬೆಳೆದಿದೆ.

ಗ್ಯಾರಂಟಿ ಪೂರೈಕೆಗೆ ಹಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರ ಕಸರತ್ತು; ಆದಾಯ ಹೆಚ್ಚಿಸಲು ಸಲಹೆ ನೀಡಲಿರುವ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್

ಗ್ಯಾರಂಟಿ ಪೂರೈಕೆಗೆ ಹಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರ ಕಸರತ್ತು; ಆದಾಯ ಹೆಚ್ಚಿಸಲು ಸಲಹೆ ನೀಡಲಿರುವ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್

Boston Consulting Group works with Karnataka govt to kick up revenue: ಐದು ಗ್ಯಾರಂಟಿ ಯೋಜನೆಗಳನ್ನು ಪೂರ್ಣ ಅವಧಿ ಮುಂದುವರಿಸಲು ಕಟಿಬದ್ಧವಾಗಿರುವ ಸರ್ಕಾರ, ಅದಕ್ಕಾಗಿ ಹಣ ಹೊಂದಿಸಲು ಬಹಳ ಶ್ರಮ ಪಡುತ್ತಿದೆ. ರಾಜ್ಯದಲ್ಲಿ ಹಣ ಸೋರಿಕೆ ತಡೆಯಲು, ಆದಾಯವನ್ನು ಗರಿಷ್ಠವಾಗಿ ಹೆಚ್ಚಿಸಲು ಇರುವ ಮಾರ್ಗೋಪಾಯಗಳನ್ನು ಅವಲೋಕಿಸುತ್ತಿದೆ. ಅದಕ್ಕಾಗಿ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಜೊತೆ ಸರ್ಕಾರ ಕೈ ಜೋಡಿಸಿದೆ.

ಟ್ಯಾಕ್ಸ್ ಎಕ್ಸೆಂಪ್ಷನ್, ಟ್ಯಾಕ್ಸ್ ಡಿಡಕ್ಷನ್, ಟ್ಯಾಕ್ಸ್ ರಿಬೇಟ್ ಎಂದರೇನು? ಅವುಗಳ ಮಧ್ಯೆ ವ್ಯತ್ಯಾಸವೇನು, ತಿಳಿಯಿರಿ

ಟ್ಯಾಕ್ಸ್ ಎಕ್ಸೆಂಪ್ಷನ್, ಟ್ಯಾಕ್ಸ್ ಡಿಡಕ್ಷನ್, ಟ್ಯಾಕ್ಸ್ ರಿಬೇಟ್ ಎಂದರೇನು? ಅವುಗಳ ಮಧ್ಯೆ ವ್ಯತ್ಯಾಸವೇನು, ತಿಳಿಯಿರಿ

Tax Exemption, Tax Deduction and Tax Rebate differences: ಐಟಿ ರಿಟರ್ನ್ ಸಲ್ಲಿಸಲು ಜುಲೈ 31ರವರೆಗೂ ಕಾಲಾವಕಾಶ ಇದೆ. ಈ ವೇಳೆ ಟ್ಯಾಕ್ಸ್ ಎಕ್ಸೆಂಪ್ಷನ್, ಟ್ಯಾಕ್ಸ್ ಡಿಡಕ್ಷನ್, ಟ್ಯಾಕ್ಸ್ ರಿಬೇಟ್ ಬಗ್ಗೆ ಕೆಲವರಿಗೆ ಗೊಂದಲ ಇರಬಹುದು. ಟ್ಯಾಕ್ಸ್ ಎಕ್ಸೆಂಪ್ಷನ್ ಎಂಬುದು ನಿರ್ದಿಷ್ಟ ಪ್ರಮಾಣದ ಆದಾಯಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಟ್ಯಾಕ್ಸ್ ಡಿಡಕ್ಷನ್ ಎಂದರೆ ನಿರ್ದಿಷ್ಟ ಹೂಡಿಕೆಗಳಿಂದ ಪಡೆಯಬಹುದಾದ ತೆರಿಗೆ ವಿನಾಯಿತಿಯಾಗಿರುತ್ತದೆ. ಇನ್ನು ಟ್ಯಾಕ್ಸ್ ರಿಬೇಟ್ ಎಂಬುದು ಕಟ್ಟಬೇಕಾದ ಒಟ್ಟಾರೆ ತೆರಿಗೆಯಲ್ಲಿ ಸಿಗುವ ರಿಯಾಯಿತಿ.

‘ಹಮಾಲಿ ಆಡಿದ ಆ ಒಂದು ಮಾತು ಜೀವನದ ದಿಕ್ಕನ್ನೇ ಬದಲಿಸಿತು..!’- ಎನ್​ವಿಡಿಯಾ ಸಿಇಒ ಜೆನ್ಸನ್ ಬಿಚ್ಚಿಟ್ಟ ಅಚ್ಚರಿಯ ಕಥೆ

‘ಹಮಾಲಿ ಆಡಿದ ಆ ಒಂದು ಮಾತು ಜೀವನದ ದಿಕ್ಕನ್ನೇ ಬದಲಿಸಿತು..!’- ಎನ್​ವಿಡಿಯಾ ಸಿಇಒ ಜೆನ್ಸನ್ ಬಿಚ್ಚಿಟ್ಟ ಅಚ್ಚರಿಯ ಕಥೆ

Gardener's words change the career trajectory of Nvidia founder: ಅತಿ ಶಕ್ತಿಶಾಲಿ ಚಿಪ್​ಗಳನ್ನು ತಯಾರಿಸುವ ಕಂಪನಿಯಾದ ಎನ್​​ವಿಡಿಯಾ ಇದೀಗ ವಿಶ್ವದಲ್ಲೇ ಅತಿಹೆಚ್ಚು ಮಾರುಕಟ್ಟೆ ಸಂಪತ್ತಿರುವ ಸಂಸ್ಥೆ ಎನಿಸಿದೆ. ಇದರ ಸಿಇಒ ಮತ್ತು ಅಧ್ಯಕ್ಷ ಜೆನ್ಸೆನ್ ಹುವಾಂಗ್ ಕೆಲಸದಲ್ಲಿ ಹೊಂದಿರುವ ಶ್ರದ್ಧೆ ಕಾರ್ಪೊರೇಟ್ ವಲಯದಲ್ಲಿ ಜನಜನಿತವಾಗಿದೆ. ಅವರು ಈ ಗುಣ ಮೈಗೂಡಿಸಿಕೊಳ್ಳಲು ಜಪಾನ್​ನಲ್ಲಿ ಹಮಾಲಿಯೊಬ್ಬನ ಭೇಟಿ ಕಾರಣವಾಗಿತ್ತು.

ಪ್ರವಾಸಿ ತಾಣದಲ್ಲಿ ಇದೆಂಥಾ ಅನಾಚಾರ: ಜಲಪಾತದ ಬಳಿ ಪ್ರವಾಸಿಗರ ಎಣ್ಣೆ ಪಾರ್ಟಿ
ಪ್ರವಾಸಿ ತಾಣದಲ್ಲಿ ಇದೆಂಥಾ ಅನಾಚಾರ: ಜಲಪಾತದ ಬಳಿ ಪ್ರವಾಸಿಗರ ಎಣ್ಣೆ ಪಾರ್ಟಿ
ಪೆಟ್ರೋಲ್ ಬೆಲೆ ಹೆಚ್ಚಿಸಿ ಕಾಂಗ್ರೆಸ್ ಸರ್ಕಾರ ಜನರನ್ನು ವಂಚಿಸಿದೆ: ಸೋಮಣ್ಣ
ಪೆಟ್ರೋಲ್ ಬೆಲೆ ಹೆಚ್ಚಿಸಿ ಕಾಂಗ್ರೆಸ್ ಸರ್ಕಾರ ಜನರನ್ನು ವಂಚಿಸಿದೆ: ಸೋಮಣ್ಣ
ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ಮಾತಾಡಲ್ಲ, ತನಿಖೆ ನಡೆಯಲಿ: ಬಸನಗೌಡ ಯತ್ನಾಳ್
ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ಮಾತಾಡಲ್ಲ, ತನಿಖೆ ನಡೆಯಲಿ: ಬಸನಗೌಡ ಯತ್ನಾಳ್
ಬೆಂಗಳೂರಿಗೆ ಬಂದ ಕುಮಾರಸ್ವಾಮಿ, ಸೂರಜ್ ರೇವಣ್ಣ ಬಗ್ಗೆ ಕೇಳಿದಾಗ ಸಿಡುಕಿದರು
ಬೆಂಗಳೂರಿಗೆ ಬಂದ ಕುಮಾರಸ್ವಾಮಿ, ಸೂರಜ್ ರೇವಣ್ಣ ಬಗ್ಗೆ ಕೇಳಿದಾಗ ಸಿಡುಕಿದರು
ಜೆಡಿಎಸ್ ಕಾರ್ಯಕರ್ತನ ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರೀಡೆಗೆ ಬಳಸಿಕೊಂಡರೇ?
ಜೆಡಿಎಸ್ ಕಾರ್ಯಕರ್ತನ ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರೀಡೆಗೆ ಬಳಸಿಕೊಂಡರೇ?
ಸೂರಜ್​​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಗೃಹಸಚಿವರು ಹೇಳಿದ್ದೇನು?
ಸೂರಜ್​​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಗೃಹಸಚಿವರು ಹೇಳಿದ್ದೇನು?
ಚಲ್ಲಕುಮಾರ್, ಮೋಹನ್ ಕೊಂಡಜ್ಜಿಗೆ ಗೃಹಸಚಿವರನ್ನು ಭೇಟಿಯಾಗುವ ಅವಕಾಶವಿಲ!
ಚಲ್ಲಕುಮಾರ್, ಮೋಹನ್ ಕೊಂಡಜ್ಜಿಗೆ ಗೃಹಸಚಿವರನ್ನು ಭೇಟಿಯಾಗುವ ಅವಕಾಶವಿಲ!
ರೇಣುಕಾಸ್ವಾಮಿ ಕೊಲೆ ಪ್ರಕರಣ; ನಂದೀಶ್ ಕುಟುಂಬದ ಏಕೈಕ ಆಧಾರಸ್ತಂಭ: ಸಹೋದರಿ
ರೇಣುಕಾಸ್ವಾಮಿ ಕೊಲೆ ಪ್ರಕರಣ; ನಂದೀಶ್ ಕುಟುಂಬದ ಏಕೈಕ ಆಧಾರಸ್ತಂಭ: ಸಹೋದರಿ
ದರ್ಶನ್​ಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ಜನವರಿಯಲ್ಲೇ ಹೇಳಿದ್ದೆ; ವೈದ್ಯೆ
ದರ್ಶನ್​ಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ಜನವರಿಯಲ್ಲೇ ಹೇಳಿದ್ದೆ; ವೈದ್ಯೆ
ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕುವುದು ಕೂಡ ಶುಭವಲ್ಲ ಏಕೆ? ವಿಡಿಯೋ ನೋಡಿ
ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕುವುದು ಕೂಡ ಶುಭವಲ್ಲ ಏಕೆ? ವಿಡಿಯೋ ನೋಡಿ