AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕು ನಿರ್ವಹಿಸುವಷ್ಟು ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ? ಬೆಲೆ ಏರಿಕೆ ಇತ್ಯಾದಿ ಅಂಶಗಳನ್ನೂ ಮರೆಯದಿರಿ; ಇಲ್ಲಿದೆ ಟಿಪ್ಸ್

Regular income creation: ನಿಮಗೆ ಇವತ್ತಿನ ಸಂದರ್ಭದಲ್ಲಿ ತಿಂಗಳಿಗೆ 50,000 ರೂ ಆದಾಯದಲ್ಲಿ ಬದುಕು ನಡೆಸಬಲ್ಲಿರಿ ಎಂದಾದರೆ, ಮುಂದಿನ 40 ವರ್ಷಕ್ಕೆ ನಿರಂತರ ಮಾಸಿಕ ಆದಾಯ ಸೃಷ್ಟಿಸಿಕೊಳ್ಳುವ ಟಿಪ್ಸ್ ಇಲ್ಲಿದೆ. ಈ ಆದಾಯ ಬರಲು ಎಷ್ಟು ಕಾರ್ಪಸ್ ಇರಬೇಕು, ಅದನ್ನು ಎಲ್ಲೆಲ್ಲಿ ಹೂಡಿಕೆ ಮಾಡಬೇಕು ಎನ್ನುವ ವಿವರ ಇಲ್ಲಿದೆ.

ಬದುಕು ನಿರ್ವಹಿಸುವಷ್ಟು ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ? ಬೆಲೆ ಏರಿಕೆ ಇತ್ಯಾದಿ ಅಂಶಗಳನ್ನೂ ಮರೆಯದಿರಿ; ಇಲ್ಲಿದೆ ಟಿಪ್ಸ್
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 01, 2026 | 3:55 PM

Share

ಇವತ್ತಿನ ಎಐ ಯುಗದಲ್ಲಿ ಯಾರ ಕೆಲಸ ಯಾವಾಗ ಹೊರಟುಹೋಗುತ್ತೋ ಗೊತ್ತಿರುವುದಿಲ್ಲ. ಕೆಲಸ ಹೋದರೂ ಒಂದು ಖಾಯಂ ಆದ ಮಾಸಿಕ ವರಮಾನ ಬರಬೇಕೆನ್ನುವ ಅಪೇಕ್ಷೆ ಹಲವರಿಗೆ ಇರುತ್ತದೆ. ಹಾಗೆಯೇ, ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಇಲ್ಲದವರು ಮಾಸಿಕ ವರಮಾನಕ್ಕೆ ಏನು ಮಾಡುವುದು? ಇವತ್ತು ನೀವು ಬಾಡಿಗೆ ಮನೆಯಲ್ಲಿ ವಾಸ ಇದ್ದು ಬಹಳ ಸರಳ ಜೀವನ ನಡೆಸುತ್ತೇನೆಂದರೂ ತಿಂಗಳಿಗೆ 50,000 ರೂ ಬೇಕಾಗಬಹುದು. ಇಷ್ಟಾದರೂ ಮಾಸಿಕ ಆದಾಯ ಸೃಷ್ಟಿಸುವ ತಂತ್ರ ಇಲ್ಲಿದೆ.

ನಿಮ್ಮ ವಯಸ್ಸು ಈಗ 40 ವರ್ಷ ಇದ್ದು, ಈಗಿನಿಂದಲೇ ನೀವು ಉದ್ಯೋಗಕ್ಕೆ ಪೂರ್ಣ ವಿರಾಮ ಹಾಕಲು ಬಯಸುತ್ತೀರಿ ಎಂದಿಟ್ಟುಕೊಳ್ಳಿ. ನಿಮಗೆ ಈಗ 50,000 ರೂ ಮಾಸಿಕ ವೆಚ್ಚವಾಗುತ್ತಿದೆ ಎಂದಾದರೂ, ವರ್ಷದಿಂದ ವರ್ಷಕ್ಕೆ ಈ ವೆಚ್ಚವು ಹಣದುಬ್ಬರಕ್ಕೆ ಅನುಗುಣವಾಗಿ ಹೆಚ್ಚುತ್ತಾ ಹೋಗುತ್ತದೆ. ನಿಮಗೆ 40 ವರ್ಷ ವಯಸ್ಸಾಗಿದ್ದರೆ ನಿಮ್ಮ ಆಯುಸ್ಸು ಇನ್ನೂ 40 ವರ್ಷ ಎಂದು ಭಾವಿಸಿ ಅದರಂತೆ ಹಣಕಾಸು ಲೆಕ್ಕಾಚಾರ ಹಾಕಬಹುದು.

40 ವರ್ಷ ಎಂದರೆ 480 ತಿಂಗಳು. ನಿಮ್ಮ ತಿಂಗಳ ವೆಚ್ಚ 50,000 ರೂ ಎಂದರೆ ವರ್ಷಕ್ಕೆ 6 ಲಕ್ಷ ರೂ ಬೇಕಾಗುತ್ತದೆ. 40 ವರ್ಷ ಕಾಲ ಇಷ್ಟು ಹಣ ಹಿಂಪಡೆಯಬೇಕೆಂದರೆ ನಿಮ್ಮ ಬಳಿ ಒಂದೂವರೆ ಕೋಟಿ ರೂ ಹಣ ಇರಬೇಕು.

ಇದನ್ನೂ ಓದಿ: ಕ್ಯಾಷ್ ಪೆಮೆಂಟ್​ನಿಂದ ಹಿಡಿದು ವಿತ್​ಡ್ರಾಯಲ್​ವರೆಗೆ, ಆದಾಯ ತೆರಿಗೆ ಇಲಾಖೆಯ ಕಣ್ಣಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳಿವು…

ಈ ಹಣವನ್ನು ಉತ್ತಮ ರಿಟರ್ನ್ ತರಬಲ್ಲಂತಹ ಕಡೆ ಹೂಡಿಕೆ ಮಾಡಬೇಕು. ಹಣದುಬ್ಬರ ವರ್ಷಕ್ಕೆ ಶೇ. 6ರಷ್ಟು ಹೆಚ್ಚಬಹುದು ಎಂಬುದನ್ನು ಗಣನೆಗೆ ತೆಗೆದುಕೊಂಡು, ಅದನ್ನು ಮೀರಿಸುವಂತಹ ರಿಟರ್ನ್ ಸಿಗುವಂತಿರಬೇಕು.

ಎಲ್ಲಿ ಹೂಡಿಕೆ ಮಾಡಬಹುದು?

ಷೇರು ಮಾರುಕಟ್ಟೆ ಕೆಲವೊಮ್ಮೆ ಕುಸಿದು ಬೀಳಬಹುದು. ಉದಾಹರಣೆಗೆ, ಕಳೆದ ಒಂದು ವರ್ಷದಲ್ಲಿ ಷೇರುಪೇಟೆ ಹಿನ್ನಡೆ ಕಂಡಿದೆ. ಈ ರೀತಿ ಅಗಾಗ್ಗೆ ಮಾರುಕಟ್ಟೆ ಸಂಚಲನ ಕಾಣುತ್ತಿರುತ್ತದೆ. ಹೀಗಾಗಿ, ಎಲ್ಲಾ ಹಣವನ್ನು ಈಕ್ವಿಟಿಗಳಿಗೆ ಹೂಡಿಕೆ ಮಾಡುವುದು ತಪ್ಪು. ನಿಮ್ಮ ಬಳಿ 2 ಕೋಟಿ ರೂ ಕಾರ್ಪಸ್ ಇದೆ ಎಂದಿಟ್ಟುಕೊಳ್ಳೋಣ. ತಜ್ಞರು ಈ ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ ಎಂಬುದನ್ನು ತಿಳಿಸಿದ್ದಾರೆ:

  • ಈಕ್ವಿಟಿ ಮ್ಯೂಚುವಲ್ ಫಂಡ್: 90 ಲಕ್ಷ ರೂ (ಶೇ. 11 ರಿಟರ್ನ್ ನಿರೀಕ್ಷೆ)
  • ಡೆಟ್ ಫಂಡ್ಸ್ ಅಥವಾ ಬಾಂಡ್​ಗಳು: 60 ಲಕ್ಷ ರೂ (ಶೇ. 7.5 ರಿಟರ್ನ್ ನಿರೀಕ್ಷೆ)
  • ಸರ್ಕಾರಿ ಬಾಂಡ್​ಗಳು: 30 ಲಕ್ಷ ರೂ (ಶೇ. 8 ರಿಟರ್ನ್ ನಿರೀಕ್ಷೆ)
  • ಲಿಕ್ವಿಡ್ ಅಥವಾ ಎಮರ್ಜೆನ್ಸಿ ಫಂಡ್: 20 ಲಕ್ಷ ರೂ (ಶೇ. 7 ರಿಟರ್ನ್ ನಿರೀಕ್ಷೆ)

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಅಂದರೆ, ಶೇ. 45ರಷ್ಟು ಹಣವು ಈಕ್ವಿಟಿ ಫಂಡ್​ಗಳಲ್ಲಿ ಇರಬೇಕು. ಡೆಟ್ ಫಂಡ್​ಗಳಲ್ಲಿ ಶೇ. 30, ಸರ್ಕಾರಿ ಬಾಂಡ್​ಗಳಲ್ಲಿ ಅಥವಾ ಎಫ್​ಡಿಗಳಲ್ಲಿ ಶೇ. 15, ಎಮರ್ಜೆನ್ಸಿ ಫಂಡ್ ಆಗಿ ಶೇ. 10ರಷ್ಟು ಇರಬೇಕು ಎಂಬುದು ಸಲಹೆ. ಈಕ್ವಿಟಿ ಫಂಡ್​ಗಳಲ್ಲಿ ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್ ಆಯ್ಕೆ ಮಾಡಿಕೊಂಡು, ವರ್ಷಕ್ಕೆ ಶೇ. 4 ಅಥವಾ ಶೇ. 3 ಹಣವನ್ನು ಹಿಂಪಡೆಯುತ್ತಾ ಹೋಗಬಹುದು. ಮಾರುಕಟ್ಟೆ ಹಿನ್ನಡೆಯಲ್ಲಿದ್ದ ಸಂದರ್ಭದಲ್ಲಿ ಡೆಟ್ ಫಂಡ್​ಗಳಿಂದ ಹಣ ಹಿಂಪಡೆಯಲು ಯತ್ನಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ
ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ
ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?
ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?