‘ಇದ್ದಿದ್ದೇ ಒಂಬತ್ತು, ಆಗಿದ್ದೊಂದೇ ಒಂದು, ಈಗ ಕಾಂಗ್ರೆಸ್ ಬಿತ್ತು ಹಳ್ಳಕ್ಕೆ‘

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್​ ಗುಂಡೂರಾವ್ ಬರುವ ಮುನ್ನ ರಾಜ್ಯದಲ್ಲಿ 9 ಸಂಸದರಿದ್ದರು. ಈಗ ಕಾಂಗ್ರೆಸ್​ ಪಕ್ಷದಲ್ಲಿ ಒಬ್ಬ ಸಂಸದರಿದ್ದಾರೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ. ದಿನೇಶ್ ಗುಂಡೂರಾವ್ ಸರಿ ಇದ್ದಿದ್ದರೆ ನಾವು ಪಕ್ಷ ಬಿಟ್ಟು ಆಚೆ ಬರುವ ಪ್ರಮೇಯ ಬರ್ತಾ ಇರಲಿಲ್ಲ. ಅವರು ನೆಟ್ಟಗೆ ಇದ್ದಿದ್ರೆ ಸಮ್ಮಿಶ್ರ ಸರ್ಕಾರ ಸರಿ ಇರ್ತಿತ್ತು. ಒಂದಂತೂ ಸತ್ಯ ದಿನೇಶ್ ಗುಂಡೂರಾವ್ ರಂತಹ ಅಧ್ಯಕ್ಷರು ಇರುವ ತನಕ ಕಾಂಗ್ರೆಸ್ ಸ್ಥಿತಿ ಹೀಗೇ ಇರುತ್ತೆ ಎಂದು ಬೆಂಗಳೂರಿನಲ್ಲಿ ಬಿ.ಸಿ.ಪಾಟೀಲ್ […]

‘ಇದ್ದಿದ್ದೇ ಒಂಬತ್ತು, ಆಗಿದ್ದೊಂದೇ ಒಂದು, ಈಗ ಕಾಂಗ್ರೆಸ್ ಬಿತ್ತು ಹಳ್ಳಕ್ಕೆ‘
ಸಾಧು ಶ್ರೀನಾಥ್​

Updated on: Sep 30, 2019 | 4:18 PM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್​ ಗುಂಡೂರಾವ್ ಬರುವ ಮುನ್ನ ರಾಜ್ಯದಲ್ಲಿ 9 ಸಂಸದರಿದ್ದರು. ಈಗ ಕಾಂಗ್ರೆಸ್​ ಪಕ್ಷದಲ್ಲಿ ಒಬ್ಬ ಸಂಸದರಿದ್ದಾರೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.

ದಿನೇಶ್ ಗುಂಡೂರಾವ್ ಸರಿ ಇದ್ದಿದ್ದರೆ ನಾವು ಪಕ್ಷ ಬಿಟ್ಟು ಆಚೆ ಬರುವ ಪ್ರಮೇಯ ಬರ್ತಾ ಇರಲಿಲ್ಲ. ಅವರು ನೆಟ್ಟಗೆ ಇದ್ದಿದ್ರೆ ಸಮ್ಮಿಶ್ರ ಸರ್ಕಾರ ಸರಿ ಇರ್ತಿತ್ತು. ಒಂದಂತೂ ಸತ್ಯ ದಿನೇಶ್ ಗುಂಡೂರಾವ್ ರಂತಹ ಅಧ್ಯಕ್ಷರು ಇರುವ ತನಕ ಕಾಂಗ್ರೆಸ್ ಸ್ಥಿತಿ ಹೀಗೇ ಇರುತ್ತೆ ಎಂದು ಬೆಂಗಳೂರಿನಲ್ಲಿ ಬಿ.ಸಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಬಿ.ಸಿ.ಪಾಟೀಲ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದವರು ಒಂದು ಕಡೆ ಇರಬಾರದು. ಒಬ್ಬರಿಗೊಂದು ರೀತಿ, ಮತ್ತೊಬ್ಬರಿಗೊಂದು ರೀತಿ ಮಾಡಬಾರದು. ಈಗ ನಾನು ಕಾಂಗ್ರೆಸ್ ಪಕ್ಷದಿಂದ ಹೊರಬಂದಿದ್ದೇನೆ. ಆ ವಿಚಾರ ಮಾತನಾಡುವುದು ಸರಿ ಹೋಗಲ್ಲ ಎಂದರು.

ಬಿಎಸ್​ವೈ ಹೇಳಿಕೆ ಸ್ವಾಗತ:
ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರ ಹೇಳಿಕೆಯಿಂದ ಸಂತೋಷವಾಗಿದೆ. ಬಿಜೆಪಿಗೆ ಸೇರುವ ಬಗ್ಗೆ ಅನರ್ಹ ಶಾಸಕರು ಒಟ್ಟಿಗೆ ಕುಳಿತು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

Published On - 4:17 pm, Mon, 30 September 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us