ಚಿತ್ರದುರ್ಗಕ್ಕೂ ನಿಜಾಮುದ್ದೀನ್ ನಂಜು! ಮೂವರಿಂದ 33 ಮಂದಿಗೆ ಹಬ್ಬುವ ಭೀತಿ

ಚಿತ್ರದುರ್ಗ: ಗುಜರಾತ್​ನ ಅಹ್ಮದಾಬಾದ್​ನಿಂದ ಜಿಲ್ಲೆಗೆ ಬಂದಿರುವ ಮೂವರು ತಬ್ಲೀಗ್​ಗಳಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ ಎಂದು ಟಿವಿ9ಗೆ ಚಿತ್ರದುರ್ಗ ಡಿಹೆಚ್ಒ ಡಾ.ಪಾಲಾಕ್ಷ ಮಾಹಿತಿ ನೀಡಿದ್ದಾರೆ. ಗಮನಾರ್ಹವೆಂದ್ರೆ ಇದುವರೆಗೂ ಜಿಲ್ಲೆಯಲ್ಲಿ ಬೇರೆ ಯಾವುದೇ ಕೊರೊನಾ ಸೋಂಕಿತರು ಕಂಡುಬಂದಿರಲಿಲ್ಲ. ಮೇ 5ರಂದು ಗುಜರಾತ್​ನಿಂದ 15 ತಬ್ಲೀಗ್​ಗಳು ವಾಪಸ್ ಬಂದಿದ್ದರು. ಆ ಪೈಕಿ ನಾಲ್ವರಿಗೆ ಗುಜರಾತ್​ನಲ್ಲಿದ್ದಾಗಲೇ ಕೊರೊನಾ ಸೋಂಕು ತಗುಲಿದೆ. ಆದ್ರೆ ಗುಣಮುಖರಾದ ಬಳಿಕ ಚಿತ್ರದುರ್ಗಕ್ಕೆ ವಾಪಸಾಗಿದ್ದರು. ಇದೀಗ ನಾಲ್ವರ ಪೈಕಿ ಮೂವರಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಇನ್ನುಳಿದ 12 […]

ಚಿತ್ರದುರ್ಗಕ್ಕೂ ನಿಜಾಮುದ್ದೀನ್ ನಂಜು! ಮೂವರಿಂದ 33 ಮಂದಿಗೆ ಹಬ್ಬುವ ಭೀತಿ
ಸಾಧು ಶ್ರೀನಾಥ್​

Updated on: May 08, 2020 | 4:23 PM

ಚಿತ್ರದುರ್ಗ: ಗುಜರಾತ್​ನ ಅಹ್ಮದಾಬಾದ್​ನಿಂದ ಜಿಲ್ಲೆಗೆ ಬಂದಿರುವ ಮೂವರು ತಬ್ಲೀಗ್​ಗಳಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ ಎಂದು ಟಿವಿ9ಗೆ ಚಿತ್ರದುರ್ಗ ಡಿಹೆಚ್ಒ ಡಾ.ಪಾಲಾಕ್ಷ ಮಾಹಿತಿ ನೀಡಿದ್ದಾರೆ. ಗಮನಾರ್ಹವೆಂದ್ರೆ ಇದುವರೆಗೂ ಜಿಲ್ಲೆಯಲ್ಲಿ ಬೇರೆ ಯಾವುದೇ ಕೊರೊನಾ ಸೋಂಕಿತರು ಕಂಡುಬಂದಿರಲಿಲ್ಲ.

ಮೇ 5ರಂದು ಗುಜರಾತ್​ನಿಂದ 15 ತಬ್ಲೀಗ್​ಗಳು ವಾಪಸ್ ಬಂದಿದ್ದರು. ಆ ಪೈಕಿ ನಾಲ್ವರಿಗೆ ಗುಜರಾತ್​ನಲ್ಲಿದ್ದಾಗಲೇ ಕೊರೊನಾ ಸೋಂಕು ತಗುಲಿದೆ. ಆದ್ರೆ ಗುಣಮುಖರಾದ ಬಳಿಕ ಚಿತ್ರದುರ್ಗಕ್ಕೆ ವಾಪಸಾಗಿದ್ದರು. ಇದೀಗ ನಾಲ್ವರ ಪೈಕಿ ಮೂವರಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಇನ್ನುಳಿದ 12 ಜನರ ಕೊರೊನಾ ವರದಿ ನೆಗೆಟಿವ್ ಇದೆ ಎಂದು ಡಾ.ಪಾಲಾಕ್ಷ ತಿಳಿಸಿದ್ದಾರೆ.

ತುಮಕೂರಿನ 18 ಜನರಿಗೂ ಕ್ವಾರಂಟೈನ್!
ಗುಜರಾತ್​ನಿಂದ ಬಂದವರಿಗೆ ತಕ್ಷಣಕ್ಕೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ಮೂವರನ್ನು ಕೊವಿಡ್ ಆಸ್ಪತ್ರೆಗೆ ಶಿಫ್ಟ್​ ಮಾಡ್ತೇವೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಅಹಮದಾಬಾದ್​ನಿಂದ ಬಸ್​ನಲ್ಲಿ 33 ಜನ ಬಂದಿದ್ದರು. ಚಿತ್ರದುರ್ಗಕ್ಕೆ ಸೇರಿದ 15 ಜನ, ತುಮಕೂರಿನ 18 ಜನ ವಾಪಸ್ ಬಂದಿದ್ದರು. ಬಸ್​ನಲ್ಲಿ ಬಂದಿದ್ದ 33 ಜನರಿಗೂ ಕೊರೊನಾ ಸಾಧ್ಯತೆಯಿದೆ ಎಂದು ಹೇಳಲಾಗಿದೆ.



Published On - 4:03 pm, Fri, 8 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us