ಬೆಂಗಳೂರಲ್ಲಿ ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ​, ಗ್ರಾಹಕರಿಗೆ ಶುರುವಾಯ್ತು ಆತಂಕ!

ಬೆಂಗಳೂರು: ಅಬ್ಬಾ ಲಾಕ್​ಡೌನ್​ ಮುಗೀತು. ಇಷ್ಟು ದಿನ ಮನೆಯವರ ಸಪ್ಪೆ ಅಡುಗೆಯಿಂದ ಬ್ರೇಕ್​ ಸಿಕ್ತು. ಆಚೆ ಹೋಗಿ ಸ್ವಲ್ಪ ಕಬಾಬ್​ ತಿನ್ನೋಣ ಅಂತಾ ಏನಾದ್ರು ಪ್ಲಾನ್​ ಮಾಡಿದ್ರೆ ನಿಮ್ಮ ಎಚ್ಚರದಲ್ಲಿ ನೀವಿರೋದು ಒಳ್ಳೇದು. ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ:​ ಹೌದು, ಏನಕಪ್ಪಾ ಇಷ್ಟೊಂದು ಪೀಠಿಕೆ ಹಾಕ್ತಿರೋದು ಅಂದ್ರೆ ಬೆಂಗಳೂರಿನ RMV ಎರಡನೇ ಹಂತದಲ್ಲಿರುವ ಜನಪ್ರಿಯ ಕಬಾಬ್ ಸೆಂಟರ್​ನ ಮಾಲೀಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಡಾವಣೆಯ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿರುವ ಈ ಕಬಾಬ್ ಸೆಂಟರ್ ಇಡಿ […]

ಬೆಂಗಳೂರಲ್ಲಿ ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ​, ಗ್ರಾಹಕರಿಗೆ ಶುರುವಾಯ್ತು ಆತಂಕ!
ಸಾಧು ಶ್ರೀನಾಥ್​ Edited By:

Updated on: Jun 20, 2020 | 3:11 PM

ಬೆಂಗಳೂರು: ಅಬ್ಬಾ ಲಾಕ್​ಡೌನ್​ ಮುಗೀತು. ಇಷ್ಟು ದಿನ ಮನೆಯವರ ಸಪ್ಪೆ ಅಡುಗೆಯಿಂದ ಬ್ರೇಕ್​ ಸಿಕ್ತು. ಆಚೆ ಹೋಗಿ ಸ್ವಲ್ಪ ಕಬಾಬ್​ ತಿನ್ನೋಣ ಅಂತಾ ಏನಾದ್ರು ಪ್ಲಾನ್​ ಮಾಡಿದ್ರೆ ನಿಮ್ಮ ಎಚ್ಚರದಲ್ಲಿ ನೀವಿರೋದು ಒಳ್ಳೇದು.

ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ:​
ಹೌದು, ಏನಕಪ್ಪಾ ಇಷ್ಟೊಂದು ಪೀಠಿಕೆ ಹಾಕ್ತಿರೋದು ಅಂದ್ರೆ ಬೆಂಗಳೂರಿನ RMV ಎರಡನೇ ಹಂತದಲ್ಲಿರುವ ಜನಪ್ರಿಯ ಕಬಾಬ್ ಸೆಂಟರ್​ನ ಮಾಲೀಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಡಾವಣೆಯ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿರುವ ಈ ಕಬಾಬ್ ಸೆಂಟರ್ ಇಡಿ ಏರಿಯಾದಲ್ಲೇ ಫೇಮಸ್​. ನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ಕಬಾಬ್ ಸೆಂಟರ್. ಹಾಗಾಗಿ ಇದೀಗ ಇಲ್ಲಿಗೆ ಭೇಟಿಕೊಟ್ಟ ಗ್ರಾಹಕರಿಗೆ ಈಗ ಸೋಂಕಿನ ಭೀತಿ ಶುರುವಾಗಿದೆ.

ಕಬಾಬ್​ ಸೆಂಟರ್​ ಮಾಲೀಕ ಆಸ್ಪತ್ರೆಗೆ ಶಿಫ್ಟ್​:
ಸದ್ಯಕ್ಕೆ ಕಬಾಬ್ ಸೆಂಟರ್ ಮಾಲೀಕನನ್ನ ಕೆಸಿ ಜನರಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಅವರ ಪತ್ನಿ ಹಾಗೂ ಮಗನನ್ನೂ ಸಹ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಸೋಂಕಿನ ಭೀತಿಯಿಂದ ಅಕ್ಕಪಕ್ಕದ ಅಂಗಡಿಗಳು ಸೀಲ್​ಡೌನ್ ಮಾಡಲಾಗಿದೆ. ಹೀಗಾಗಿ ಇಲ್ಲಿ ಕಬಾಬ್ ತಿಂದವರು ಒಮ್ಮೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳೋದು ಉತ್ತಮ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us