
ಮೈಸೂರು: ಸೋಂಕಿನಿಂದ ನಿವೃತ್ತ ASIಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಸಾವಿನ ಸುದ್ದಿ ಕೇಳಿ ಅವರ ಪತ್ನಿಯು ಸಹ ಮನೆಯಲ್ಲಿ ಅಸುನೀಗಿರುವ ಹೃದಯ ವಿದ್ರಾವಕ ಘಟನೆ ನಗರದ ಉತ್ತನಹಳ್ಳಿಯಲ್ಲಿ ಇಂದು ನಡೆದಿದೆ.
ಕೊರೊನಾ ಪಾಸಿಟಿವ್ ಬಂಧ ನಂತರ ನಿವೃತ್ತ ASIರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ನಡುವೆ ವೃದ್ಧನ ಪತ್ನಿಗೂ ಸೋಂಕು ದೃಢಪಟ್ಟಿದ್ದು ಆಕೆಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ವೃದ್ಧ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಈ ವಿಚಾರ ತಿಳಿದ ಅವರ ಸೋಂಕಿತ ಮಡದಿಯೂ ದುಃಖದಿಂದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸರ್ಕಾರದ ನಿಯಮದಂತೆ ವೃದ್ಧ ದಂಪತಿಯ ಅಂತ್ಯಕ್ರಿಯೆಯನ್ನು ವಿಜಯನಗರದ ಮುಕ್ತಿಧಾಮದಲ್ಲಿ ನೆರೆವೇರಿಸಲಾಗಿದೆ. ಇದೀಗ, ವೃದ್ಧ ದಂಪತಿಯ ಸಾವಿನಿಂದಾಗಿ ಉತ್ತನಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
Published On - 7:29 pm, Tue, 21 July 20