AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುನಾಡು ಅನ್​ಲಾಕ್ ಆದ್ರೂ ಕಂಟೇನ್ಮೆಂಟ್‌ ಜೋನ್‌ಗಳಲ್ಲಿ ಖಡಕ್ ರೂಲ್ಸ್‌ ಜಾರಿ

ಬೆಂಗಳೂರು: ಮಹಾಮಾರಿಯನ್ನ ಓಡಿಸಲು ಮಾಸ್ಕೇ ಮದ್ದು.. ಕ್ರೂರಿ ಕೊರೊನಾವನ್ನ ಒದ್ದೋಡಿಸೋಕೆ ಅಂತರವೇ ಔಷಧ. ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರೋ ಸೋಂಕನ್ನ ತೊಲಗಿಸೋಕೆ ಲಾಕ್‌ಡೌನ್‌ ಒಂದೇ ಬ್ರಹ್ಮಾಸ್ತ್ರವಲ್ಲ. ಇದೆಲ್ಲವನ್ನ ಹೇಳಿರೋದು ರಾಜ್ಯದ ಮುಖ್ಯಮಂತ್ರಿಗಳು. ಯಾಕಂದ್ರೆ ಸೋಂಕಿನ ರಣಕೇಕೆ ಏರ್ತಿರೋವಾಗೆಲ್ಲಾ ಲಾಕ್‌ಡೌನ್‌ ಅಂತಿದ್ದ ರಾಜ್ಯ ಸರ್ಕಾರ ಅದನ್ನ ಬದಿಗಿಟ್ಟು ಹೋರಾಟಕ್ಕೆ ನಿಂತಿದೆ. ಕರುನಾಡು ಇನ್ಮುಂದೆ ಕಂಪ್ಲೀಟ್ ಅನ್​ಲಾಕ್! ಯೆಸ್‌.. ಬೆಂಗಳೂರಿಗೆ ಬಿದ್ದಿದ್ದ ಬೀಗ ಕಂಪ್ಲೀಟ್ ಓಪನ್‌ ಆಗ್ತಿದೆ. ಇದ್ರ ಜೊತೆ ಜೊತೆಗೆ ರಾಜ್ಯದ ಪ್ರತಿಯೊಂದು ಗಲ್ಲಿಗಳಿಗೆ ಬಿದ್ದಿರೋ ಲಾಕ್ ಇಂದಿನಿಂದಲೇ ತೆರೆಯಲಿದೆ. […]

ಕರುನಾಡು ಅನ್​ಲಾಕ್ ಆದ್ರೂ ಕಂಟೇನ್ಮೆಂಟ್‌ ಜೋನ್‌ಗಳಲ್ಲಿ ಖಡಕ್ ರೂಲ್ಸ್‌ ಜಾರಿ
ಆಯೇಷಾ ಬಾನು
| Updated By: |

Updated on:Jul 23, 2020 | 12:06 PM

Share

ಬೆಂಗಳೂರು: ಮಹಾಮಾರಿಯನ್ನ ಓಡಿಸಲು ಮಾಸ್ಕೇ ಮದ್ದು.. ಕ್ರೂರಿ ಕೊರೊನಾವನ್ನ ಒದ್ದೋಡಿಸೋಕೆ ಅಂತರವೇ ಔಷಧ. ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರೋ ಸೋಂಕನ್ನ ತೊಲಗಿಸೋಕೆ ಲಾಕ್‌ಡೌನ್‌ ಒಂದೇ ಬ್ರಹ್ಮಾಸ್ತ್ರವಲ್ಲ. ಇದೆಲ್ಲವನ್ನ ಹೇಳಿರೋದು ರಾಜ್ಯದ ಮುಖ್ಯಮಂತ್ರಿಗಳು. ಯಾಕಂದ್ರೆ ಸೋಂಕಿನ ರಣಕೇಕೆ ಏರ್ತಿರೋವಾಗೆಲ್ಲಾ ಲಾಕ್‌ಡೌನ್‌ ಅಂತಿದ್ದ ರಾಜ್ಯ ಸರ್ಕಾರ ಅದನ್ನ ಬದಿಗಿಟ್ಟು ಹೋರಾಟಕ್ಕೆ ನಿಂತಿದೆ.

ಕರುನಾಡು ಇನ್ಮುಂದೆ ಕಂಪ್ಲೀಟ್ ಅನ್​ಲಾಕ್! ಯೆಸ್‌.. ಬೆಂಗಳೂರಿಗೆ ಬಿದ್ದಿದ್ದ ಬೀಗ ಕಂಪ್ಲೀಟ್ ಓಪನ್‌ ಆಗ್ತಿದೆ. ಇದ್ರ ಜೊತೆ ಜೊತೆಗೆ ರಾಜ್ಯದ ಪ್ರತಿಯೊಂದು ಗಲ್ಲಿಗಳಿಗೆ ಬಿದ್ದಿರೋ ಲಾಕ್ ಇಂದಿನಿಂದಲೇ ತೆರೆಯಲಿದೆ. ಪ್ರತಿಯೊಂದು ಏರಿಯಾ.. ಪ್ರತಿಯೊಂದು ಕೇರಿ ಕಂಪ್ಲೀಟ್ ಫ್ರೀ.. ಫ್ರೀ.. ಇನ್ಮುಂದೆ ಎಲ್ಲೆಲ್ಲೂ ನಾರ್ಮಲ್ ಲೈಫ್. ಸಿಎಂ ಬಿಎಸ್‌ವೈ ಕೂಡ ಇನ್ಮುಂದೆ ರಾಜ್ಯದ ಯಾವ ಭಾಗದಲ್ಲೂ ಲಾಕ್‌ಡೌನ್‌ ಇರಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದ್ದಾರೆ. ಆದ್ರೆ, ಕೊರೊನಾ ಅರ್ಭಟಿಸ್ತಿರೋ ಕಂಟೇನ್ಮೆಂಟ್‌ ಜೋನ್‌ಗಳಲ್ಲಿ ಮಾತ್ರ ಬಿಗಿ ಕ್ರಮ ಅನ್ನೋದನ್ನ ಖಡಕ್ ಆಗೇ ಹೇಳಿದ್ದಾರೆ.

ಸಿಎಂ ಸಾಹೇಬ್ರು ಹೇಳಿದಂತೆ ರಾಜ್ಯದ ಹಲವೆಡೆ ಅಂಗಡಿಗಳು, ಮಾಲ್​ಗಳು ಸೇರಿದಂತೆ ಎಲ್ಲದಕ್ಕೂ ಬಿದ್ದಿದ್ದ ಬೀಗ ಓಪನ್ ಆಗಲಿದೆ. ಇದರ ಜೊತೆ ಜೊತೆಗೆ ಹೊಸ ಮಾರ್ಗಸೂಚಿ ಕೂಡ ರಿಲೀಸ್ ಮಾಡಲಾಗಿದೆ.

ಅನ್​​ಲಾಕ್​ ಮಾರ್ಗಸೂಚಿ..! ರಾಜ್ಯದಲ್ಲಿ ಲಾಕ್​ಡೌನ್ ತೆರವು ಹಿನ್ನೆಲೆತಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನ ರಿಲೀಸ್ ಮಾಡಿದೆ. ರಾತ್ರಿ 9ರಿಂದ ಮುಂಜಾನೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಪ್ರತಿ ಸಂಡೇ ಲಾಕ್​ಡೌನ್​ ಮುಂದುವರಿಯಲಿದೆ. ಎಲ್ಲಾ ಅಂಗಡಿಗಳನ್ನ ರಾತ್ರಿ 9 ಗಂಟೆಗೆ ಬಂದ್ ಮಾಡ್ಬೇಕು ಅನ್ನೋ ಖಡಕ್ ಆದೇಶ ಹೊರಡಿಸಲಾಗಿದೆ. ಜನಸಂದಣಿ ತಡೆಗಟ್ಟಲು ಮಾರ್ಕೆಟ್​ಗಳನ್ನ ಎಪಿಎಂಸಿ ಅಥವಾ ವಿಶಾಲ ಪ್ರದೇಶಗಳಿಗೆ ಸ್ಥಳಾಂತರ ಸೂಚಿಸಲಾಗಿದೆ.

ಅದ್ರಲ್ಲೂ ಇಂಪಾರ್ಟೆಂಟ್ ಅಂದ್ರೆ ಪಾರ್ಕ್​ಗಳಲ್ಲಿ ಜಿಮ್ ಸಲಕರಣೆಗಳ ಬಳಕೆಗೆ ಅವಕಾಶವಿಲ್ಲ. ಜೊತೆಗೆ ಪಾರ್ಕ್​ಗಳಲ್ಲಿ ಕುಳಿತುಕೊಳ್ಳುವ ಬೆಂಚ್​ಗಳ ಬಳಕೆ ನಿಷೇಧ ವಿಧಿಸಲಾಗಿದೆ. ಇನ್ನು ಜುಲೈ 31ರವರೆಗೆ ಪ್ರಸ್ತುತ ಮಾರ್ಗಸೂಚಿ ಜಾರಿಯಲ್ಲಿರಲಿದೆ ಅನ್ನೋದನ್ನ ಹೇಳಲಾಗಿದೆ. ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲು ಜಿಲ್ಲಾಡಳಿತದ ವಿವೇಚನೆ ಬಿಡಲಾಗಿದೆ.

ಸಿಎಂ ಸಾಹೇಬ್ರೇ ಲಾಕ್‌ಡೌನ್‌ ಕ್ಯಾನ್ಸಲ್ ಅನ್ನೋ ಆದೇಶ ಹೊರಡಿಸ್ತಿದ್ದಂತೆ ಲಾಕ್ ಆಗಿದ್ದ ಜಿಲ್ಲೆಗಳು ಇಂದಿನಿಂದಲೇ ಓಪನ್ ಆಗ್ತಿವೆ. ಲಾಕ್ ಆಗಿದ್ದ ಜನರ ಲೈಫ್ ನಾರ್ಮಲ್ ಆಗರಲಿದೆ..

ಲಾಕ್​​ಡೌನ್ ತೆರವು ಬಗ್ಗೆ ಹಲವು ಜಿಲ್ಲೆಯಲ್ಲಿ ಗೊಂದಲ! ಎಲ್ಲೂ ಲಾಕ್​​ಡೌನ್ ಮಾಡಂಗೇ ಇಲ್ಲ ಅಂಥಾ ಸಿಎಂ ಆದೇಶಿಸಿದ್ರೆ ಈಗಾಗಲೇ ಲಾಕ್ ಆಗಿರೋ ಹಲವು ಜಿಲ್ಲೆಗಳಲ್ಲಿ ಇನ್ನೂ ಗೊಂದಲ ಇದೆ. ಇದ್ರ ಜೊತೆಗೆ ಸಿಎಂ ಬಿಎಸ್​​ವೈ ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ನಿರ್ಧಾರ ಕೈಗೊಳ್ಳೋಕೆ ಜಿಲ್ಲಾಡಳಿತಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಹಲವು ಜಿಲ್ಲೆಗಳಲ್ಲಿ ಜಾರಿಯಲ್ಲಿರೋ ಲಾಕ್​ಡೌನ್ ತೆರವಿನ ಬಗ್ಗೆ ಇಂದು ನಿರ್ಧಾರ ಹೊರ ಬೀಳೋ ಸಾಧ್ಯತೆ ಹೆಚ್ಚಿದೆ.

ಒಟ್ನಲ್ಲಿ ಬೆಂಗಳೂರಿನಲ್ಲಿ ಮಾತ್ರವಲ್ಲ.. ಇಂದಿನಿಂದ ಇಡೀ ಕರುನಾಡಿಗೆ ಬಿದ್ದಿದ್ದ ಲಾಕ್ ಓಪನ್ ಆಗ್ತಿದೆ. ಆರ್ಥಿಕತೆ ಜವಬ್ದಾರಿ, ಖಜಾನೆ ಕೀಲಿ ಕೈ ಹೊಂದಿರೋ ಸಿಎಂ ಬಿಎಸ್‌ವೈ ಲಾಕ್‌ಡೌನ್‌ ಬೇಡ್ವೇ ಬೇಡ ಎಂದಿದ್ದಾರೆ. ಇತ್ತ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಮಾಡಿ ಸೋಂಕನ್ನ ನಿಯಂತ್ರಿಸಬೇಕು ಅಂತಾ ಜಿಲ್ಲಾಡಳಿತಗಳು ಸಜ್ಜಾಗಿರೋ ಹೊತ್ತಲ್ಲೇ ಸಿಎಂ ಅನ್​ಲಾಕ್ ಆದೇಶ ಹೊರಡಿಸಿದ್ದಾರೆ.

ಆದ್ರೆ, ಕೊರೊನಾ ಹೇಗೆ ಕಟ್ಟಿ ಹಾಕೋದು ಅನ್ನೋದು ಮುಂದಿರೋ ಸವಾಲು. ಕೊರೊನಾ ಈಗ್ಲೇ ಕಂಟ್ರೋಲ್​ಗೆ ಸಿಗ್ತಿಲ್ಲ. ಇನ್ನು ಫುಲ್ ಫ್ರೀ ಬಿಟ್ಟು, ಜನರು ಬೇಕಾಬಿಟ್ಟಿ ಓಡಾಡಿದ್ರೆ ಮುಂದೇನ್ ಗತಿ ಆಗುತ್ತೋ ಆ ದೇವರೇ ಬಲ್ಲ. ಯಾವುದಕ್ಕೂ ಜೀವ.. ಜೀವನದ ಬಗ್ಗೆ ತುಂಬಾ ಎಚ್ಚರ ವಹಿಸಿ. ಹೆಚ್ಚು ಕಮ್ಮಿಯಾದ್ರೆ ಆ ದೇವರು ಬಂದ್ರೂ ಕಾಪಾಡೋದು ಕಷ್ಟ.

Published On - 6:55 am, Wed, 22 July 20

‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?