ತಂದೆ ಗುಜರಿ ಅಂಗಡಿ ಮಾಲೀಕ.. ಮಗ ಡೆಲಿವರಿ ಬಾಯ್.. ಬೆಂಗಳೂರಿನ ಕಥೆ ಅಷ್ಟೇ!

ಬೆಂಗಳೂರು: ಮಂಗಮ್ಮನಪಾಳ್ಯದಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ನಿನ್ನೆ ಮಂಗಮ್ಮನಪಾಳ್ಯದಲ್ಲಿ ಪತ್ತೆಯಾದ P-654ನೇ ಸೋಂಕಿತನಿಂದ ಪತ್ನಿ, ಮಗನಿಗೆ ಸೋಂಕು ತಗುಲಿದೆ. P-654ನೇ ಸೋಂಕಿತನ ಮಗ ಆನ್‌ಲೈನ್ ಡೆಲಿವರಿ ಬಾಯ್. ಹೀಗಾಗಿ ಯುವಕ ಓಡಾಡಿದ್ದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ರೋಗಿ ನಂಬರ್ 654 ಗುಜರಿ ಅಂಗಡಿ ಮಾಲೀಕ. ಹಾಗೂ ಸೋಂಕಿತ ಮಗ ಡೆಲಿವರಿ ಬಾಯ್ ಆಗಿದ್ದರಿಂದ ಮಂಗಮ್ಮನಪಾಳ್ಯದಲ್ಲಿ ಟೆನ್ಷನ್ ಹೆಚ್ಚಾಗಿದೆ. ಸೋಂಕಿತ ಮಗ ಹೋಗಿರುವ ಮನೆಗಳನ್ನು ಪತ್ತೆ ಹಚ್ಚಬೇಕಾಗಿದೆ. ಆನ್​ಲೈನ್ ಡೆಲಿವರಿ ಮಾಡ್ತಿದ್ದ ಯುವಕನಿಂದ […]

ತಂದೆ ಗುಜರಿ ಅಂಗಡಿ ಮಾಲೀಕ.. ಮಗ ಡೆಲಿವರಿ ಬಾಯ್.. ಬೆಂಗಳೂರಿನ ಕಥೆ ಅಷ್ಟೇ!
ಸಾಧು ಶ್ರೀನಾಥ್​

Updated on: May 06, 2020 | 2:46 PM

ಬೆಂಗಳೂರು: ಮಂಗಮ್ಮನಪಾಳ್ಯದಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ನಿನ್ನೆ ಮಂಗಮ್ಮನಪಾಳ್ಯದಲ್ಲಿ ಪತ್ತೆಯಾದ P-654ನೇ ಸೋಂಕಿತನಿಂದ ಪತ್ನಿ, ಮಗನಿಗೆ ಸೋಂಕು ತಗುಲಿದೆ. P-654ನೇ ಸೋಂಕಿತನ ಮಗ ಆನ್‌ಲೈನ್ ಡೆಲಿವರಿ ಬಾಯ್. ಹೀಗಾಗಿ ಯುವಕ ಓಡಾಡಿದ್ದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ರೋಗಿ ನಂಬರ್ 654 ಗುಜರಿ ಅಂಗಡಿ ಮಾಲೀಕ. ಹಾಗೂ ಸೋಂಕಿತ ಮಗ ಡೆಲಿವರಿ ಬಾಯ್ ಆಗಿದ್ದರಿಂದ ಮಂಗಮ್ಮನಪಾಳ್ಯದಲ್ಲಿ ಟೆನ್ಷನ್ ಹೆಚ್ಚಾಗಿದೆ. ಸೋಂಕಿತ ಮಗ ಹೋಗಿರುವ ಮನೆಗಳನ್ನು ಪತ್ತೆ ಹಚ್ಚಬೇಕಾಗಿದೆ. ಆನ್​ಲೈನ್ ಡೆಲಿವರಿ ಮಾಡ್ತಿದ್ದ ಯುವಕನಿಂದ ಮತ್ತಷ್ಟು ಜನರಿಗೆ ಹರಡುತ್ತಾ ಸೋಂಕು ಎಂಬ ಶಂಕೆ ವ್ಯಕ್ತವಾಗಿದೆ.

Published On - 10:10 am, Wed, 6 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us