ಹೈದರಾಬಾದ್​​​ ಎಲೆಕ್ಟ್ರಿಕಲ್ ಡಿಇ‌ ಮನೆ ಮೇಲೆ ಎಸಿಬಿ ದಾಳಿ, ಅಪಾರ ಪ್ರಮಾಣದ ಆಸ್ತಿ ಪತ್ತೆ

ಹೈದರಾಬಾದ್: ಹೈದರಾಬಾದ್​​​ ಎಲೆಕ್ಟ್ರಿಕಲ್ ಡಿಇ‌ ಮುತ್ಯಂ ವೆಂಕಟ್ ರಮಣ್ ಎಂಬುವವರ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಭಾರಿ ಪ್ರಮಾಣದ ನಗದು, ಚಿನ್ನ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ವೆಂಕಟ್ ₹25 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ, ನಂತರ ಎಸಿಬಿ ಹೈದರಾಬಾದ್​​​ನ ಮಾದಾಪುರದಲ್ಲಿನ ಮನೆಗೆ ದಾಳಿ ಮಾಡಿದೆ. ಈ ವೇಳೆ ಆದಾಯ ಮೀರಿದ ಅಪಾರ ಆಸ್ತಿಪಾಸ್ತಿ ಪತ್ತೆಯಾಗಿದೆ. ಶೋಧ ವೇಳೆ 26.40 ಲಕ್ಷ ನಗದು, 600 ಗ್ರಾಂ ಚಿನ್ನಾಭರಣ, 2.93 ಕೋಟಿ ರೂಪಾಯಿಗೂ ಅಧಿಕ‌ ಮೌಲ್ಯದ ದಾಖಲೆಗಳು ಹಾಗೂ […]

ಹೈದರಾಬಾದ್​​​ ಎಲೆಕ್ಟ್ರಿಕಲ್ ಡಿಇ‌ ಮನೆ ಮೇಲೆ ಎಸಿಬಿ ದಾಳಿ, ಅಪಾರ ಪ್ರಮಾಣದ ಆಸ್ತಿ ಪತ್ತೆ
ಎಸಿಬಿ ದಾಳಿ

Updated on: Dec 13, 2019 | 10:56 AM

ಹೈದರಾಬಾದ್: ಹೈದರಾಬಾದ್​​​ ಎಲೆಕ್ಟ್ರಿಕಲ್ ಡಿಇ‌ ಮುತ್ಯಂ ವೆಂಕಟ್ ರಮಣ್ ಎಂಬುವವರ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಭಾರಿ ಪ್ರಮಾಣದ ನಗದು, ಚಿನ್ನ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ವೆಂಕಟ್ ₹25 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ, ನಂತರ ಎಸಿಬಿ ಹೈದರಾಬಾದ್​​​ನ ಮಾದಾಪುರದಲ್ಲಿನ ಮನೆಗೆ ದಾಳಿ ಮಾಡಿದೆ.

ಈ ವೇಳೆ ಆದಾಯ ಮೀರಿದ ಅಪಾರ ಆಸ್ತಿಪಾಸ್ತಿ ಪತ್ತೆಯಾಗಿದೆ. ಶೋಧ ವೇಳೆ 26.40 ಲಕ್ಷ ನಗದು, 600 ಗ್ರಾಂ ಚಿನ್ನಾಭರಣ, 2.93 ಕೋಟಿ ರೂಪಾಯಿಗೂ ಅಧಿಕ‌ ಮೌಲ್ಯದ ದಾಖಲೆಗಳು ಹಾಗೂ 8 ದುಬಾರಿ ಗಡಿಯಾರ, 5 ಡಿಜಿಟಲ್ ಕ್ಯಾಮರಾಗಳನ್ನು ವಶಕ್ಕೆ ಪಡೆಯಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us