Measles: ಮುಂಬೈನಲ್ಲಿ ದಡಾರ ಉಲ್ಬಣ: 1 ವರ್ಷದ ಮಗು ಸೇರಿ ವರ್ಷದಲ್ಲಿ 10 ಮಕ್ಕಳು ಸಾವು

ಮುಂಬೈನಲ್ಲಿ ದಡಾರ (Measles) ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ವರ್ಷದ ಮಗುವನ್ನು ಬಲಿ ಪಡೆದಿದೆ, ಈ ವರ್ಷ ಒಟ್ಟು 10 ಮಕ್ಕಳು ದಡಾರದಿಂದ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

Measles: ಮುಂಬೈನಲ್ಲಿ ದಡಾರ ಉಲ್ಬಣ:  1 ವರ್ಷದ ಮಗು ಸೇರಿ ವರ್ಷದಲ್ಲಿ 10 ಮಕ್ಕಳು ಸಾವು
Measles
Edited By:

Updated on: Nov 23, 2022 | 7:36 AM

ಮುಂಬೈನಲ್ಲಿ ದಡಾರ (Measles) ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ವರ್ಷದ ಮಗುವನ್ನು ಬಲಿ ಪಡೆದಿದೆ, ಈ ವರ್ಷ ಒಟ್ಟು 10 ಮಕ್ಕಳು ದಡಾರದಿಂದ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಇದೀಗ ಮತ್ತೊಂದು ಮಗು ಸಾವನ್ನಪ್ಪಿರುವುದು ಆತಂಕವನ್ನು ಹೆಚ್ಚಿಸಿದೆ, ಮಗುವಿನ ಸಾವಿಗೆ ತೀವ್ರ ಉಸಿರಾಟದ ತೊಂದರೆ, ದಡಾರ ಹಾಗೂ ಬ್ರಾಂಕೋಪ್ನುಮೋನಿಯಾ ಕಾರಣವೆಂದು ಹೇಳಲಾಗಿದೆ.

ರೋಗಲಕ್ಷಣಗಳು ಕಾಣಿಸಿಕೊಂಡ ಮೂರು ದಿನಗಳ ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ನವೆಮಬರ್ 11ರಂದು ಮಗುವಿಗೆ ಹೃದಯಸ್ತಂಭನವಾಗಿತ್ತು, ಮಕ್ಕಳ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಬಳಿಕ ಮಗು ಸಾವನ್ನಪ್ಪಿದೆ. ಮಹಾರಾಷ್ಟ್ರದಲ್ಲಿ ಒಟ್ಟು 20 ಹೊಸ ದಡಾರ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 220ಕ್ಕೆ ಏರಿಕೆಯಾಗಿದೆ ಎಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ.

ಮುಂಬೈನಲ್ಲಿ ದಡಾರ ಏಕಾಏಕಿ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ನಾಗರಿಕರು 9 ತಿಂಗಳಿಂದ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವಂತೆ ಮನವಿ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ 120 ಹಾಸಿಗೆಗಳನ್ನು ದಡಾರ ರೋಗಿಗಳಿಗೆ ಮೀಸಲಿಡಲಾಗಿದೆ. ಇದು 100 ಆಮ್ಲಜನಕ ಹಾಸಿಗೆಗಳು, 10 ವೆಂಟಿಲೇಟರ್‌ಗಳು ಮತ್ತು ತೀವ್ರ ನಿಗಾ ಘಟಕಗಳಲ್ಲಿ (ICU) 10 ಹಾಸಿಗೆಗಳನ್ನು ಒಳಗೊಂಡಿದೆ.

ಕಳೆದ ಎರಡು ವರ್ಷಗಳಿಂದ, ಆಸ್ಪತ್ರೆಯು ಮೀಸಲಾದ ಕೋವಿಡ್ -19 ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. 24 ಮುಂಬೈ ಸಿವಿಕ್ ವಾರ್ಡ್‌ಗಳಲ್ಲಿ 10 ರಲ್ಲಿ ಸುಮಾರು 21 ಸ್ಥಳಗಳಲ್ಲಿ ದಡಾರ ಏಕಾಏಕಿ ವರದಿಯಾಗಿದೆ. ಪ್ರಸ್ತುತ ಎಂಟು ಆಸ್ಪತ್ರೆಗಳು ಮುಂಬೈನಲ್ಲಿ ರೋಗಕ್ಕೆ ಚಿಕಿತ್ಸೆ ನೀಡುತ್ತಿವೆ.
ಮುಂಬೈ ಜೊತೆಗೆ, ದೇಶಾದ್ಯಂತ ದಡಾರ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಏಪ್ರಿಲ್ ಮತ್ತು ಸೆಪ್ಟೆಂಬರ್ 2022 ರ ನಡುವೆ ಭಾರತವು ವಿಶ್ವದ ಅತಿ ಹೆಚ್ಚು ದಡಾರ ಪ್ರಕರಣಗಳನ್ನು ವರದಿ ಮಾಡಿದೆ.

ಶಿಷ್ಟಾಚಾರದ ಪ್ರಕಾರ, ದಡಾರ ಸೋಂಕಿತ ರೋಗಿಗಳನ್ನು ಕಸ್ತೂರಬಾ ಆಸ್ಪತ್ರೆ, ಶಿವಾಜಿ ನಗರದ ಹೆರಿಗೆ ಮನೆ, ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆ, ರಾಜವಾಡಿ ಆಸ್ಪತ್ರೆ, ಶತಾಬ್ದಿ ಆಸ್ಪತ್ರೆ, ಕುರ್ಲಾ ಭಾಭಾ ಆಸ್ಪತ್ರೆ ಮತ್ತು ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಸೇರಿದಂತೆ ನಗರದ ಎಂಟು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ ಅಥವಾ ಚಿಕಿತ್ಸೆಗಾಗಿ ದಾಖಲಿಸಲಾಗುತ್ತದೆ.

ನಗರದಲ್ಲಿ ಹೆಚ್ಚುತ್ತಿರುವ ದಡಾರ ಪ್ರಕರಣಗಳನ್ನು ಪರಿಶೀಲಿಸಲು ಮಹಾರಾಷ್ಟ್ರ ಆರೋಗ್ಯ ಸಚಿವ ಡಾ ತಾನಾಜಿ ಸಾವಂತ್ ಮಂಗಳವಾರ ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು, ಬಿಎಂಸಿ ಅಧಿಕಾರಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಡಾ.ಮೀತಾ ವಾಶಿ ಮತ್ತು ಡಾ.ಅರುಣ್ ಗಾಯಕ್ವಾಡ್ ಭಾಗವಹಿಸಿದ್ದರು.

ರೋಗ ಹರಡುವುದನ್ನು ತಡೆಗಟ್ಟಲು, ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಿಎಂಸಿ ಮನೆ-ಮನೆಗೆ ಬೃಹತ್ ಅಭಿಯಾನಗಳನ್ನು ನಡೆಸುತ್ತಿದೆ. ಲಸಿಕೆ ಹಿಂಜರಿಕೆಯನ್ನು ಕಡಿಮೆ ಮಾಡಲು, BMC ಮಕ್ಕಳಿಗಾಗಿ ದಡಾರ ಲಸಿಕೆ ಅಭಿಯಾನವನ್ನು ಸಹ ಪ್ರಾರಂಭಿಸಿದೆ .

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Web contact

TV9 Kannada

Read More
Follow Us