AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Web

TV9 Web

tv9 - TV9 Kannada

webcontact@tv9.com

TV9 Kannada

Follow On:
CSK vs GT: ದುಬೆಗೆ 3 ಜೀವದಾನ; 5 ಕ್ಯಾಚ್ ಕೈಚೆಲ್ಲಿದ ಗುಜರಾತ್

CSK vs GT: ದುಬೆಗೆ 3 ಜೀವದಾನ; 5 ಕ್ಯಾಚ್ ಕೈಚೆಲ್ಲಿದ ಗುಜರಾತ್

IPL 2026 Catches Crisis: ಇತ್ತೀಚಿನ ಐಪಿಎಲ್ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರದ ಬದಲಿಗೆ ಆಟಗಾರರ ಕಳಪೆ ಫೀಲ್ಡಿಂಗ್ ಮತ್ತು ಕೈಚೆಲ್ಲಿದ ಕ್ಯಾಚ್‌ಗಳು ಸುದ್ದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ನಡೆದ ಮೂರು ಪಂದ್ಯಗಳಲ್ಲಿ 20ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಕೈಬಿಡಲಾಗಿದೆ. ಗುಜರಾತ್-ಚೆನ್ನೈ, ಪಂಜಾಬ್-ದೆಹಲಿ, ರಾಜಸ್ಥಾನ-ಹೈದರಾಬಾದ್ ಪಂದ್ಯಗಳಲ್ಲಿ ಈ ಕಳಪೆ ಪ್ರದರ್ಶನ ಎದ್ದು ಕಾಣಿಸಿದ್ದು, ಪಂದ್ಯಗಳ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ. ಶಿವಂ ದುಬೆಗೆ 3 ಜೀವದಾನ ಸಿಕ್ಕಿರುವುದು ಇದಕ್ಕೆ ಸ್ಪಷ್ಟ ನಿದರ್ಶನ.

ಥೈಲ್ಯಾಂಡ್​ ಫೋಟೋಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಪಾಯಲ್ ಚೆಂಗಪ್ಪ ಖಡಕ್ ಉತ್ತರ

ಥೈಲ್ಯಾಂಡ್​ ಫೋಟೋಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಪಾಯಲ್ ಚೆಂಗಪ್ಪ ಖಡಕ್ ಉತ್ತರ

ಪಾಯಲ್ ಚೆಂಗಪ್ಪ ಅವರ ಥೈಲ್ಯಾಂಡ್ ಬ್ಯಾಕ್‌ಲೆಸ್ ಫೋಟೋಗೆ ಬಂದ ನಕಾರಾತ್ಮಕ ಕಮೆಂಟ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಬೀಚ್ ಡ್ರೆಸ್ ಮತ್ತು ಟ್ರೋಲ್‌ಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇಂತಹ ಕಾಮೆಂಟ್‌ಗಳು ತಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳುವ ಮೂಲಕ, ಸೆಲೆಬ್ರಿಟಿಗಳು ಟೀಕೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ನಕಲಿ ಖಾತೆಗಳಿಂದ ಬರುವ ಕಮೆಂಟ್‌ಗಳನ್ನು ನಿರ್ಲಕ್ಷಿಸುವುದನ್ನು ಕಲಿತಿದ್ದಾರೆ.

ಪ್ರಭಾಸ್ ವಿರುದ್ಧ ಸಲ್ಮಾನ್ ಖಾನ್​​ನ ಎತ್ತಿಕಟ್ಟಿದ ಟಾಲಿವುಡ್ ಮಂದಿ

ಪ್ರಭಾಸ್ ವಿರುದ್ಧ ಸಲ್ಮಾನ್ ಖಾನ್​​ನ ಎತ್ತಿಕಟ್ಟಿದ ಟಾಲಿವುಡ್ ಮಂದಿ

ಪ್ರಭಾಸ್ ಅವರ 'ಸ್ಪಿರಿಟ್' ಹಾಗೂ ಸಲ್ಮಾನ್ ಖಾನ್ ಅವರ ಹೊಸ ಸಿನಿಮಾ (SVC 63) 2027ರ ಈದ್ ಹಬ್ಬದಂದು ಬಿಡುಗಡೆಯಾಗಲು ಸಜ್ಜಾಗಿವೆ. ಟಾಲಿವುಡ್ ಮಂದಿ ಸಲ್ಮಾನ್ ಖಾನ್ ಚಿತ್ರದ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಭಾಗಿಯಾಗಿರುವುದು ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಪ್ರಭಾಸ್ ವಿರುದ್ಧ ಸಲ್ಮಾನ್ ಅವರನ್ನು ಎತ್ತಿಕಟ್ಟುವ ಪ್ರಯತ್ನ ನಡೆದಿದೆಯೇ ಎಂಬ ಚರ್ಚೆ ಶುರುವಾಗಿದೆ.

IPL 2026: ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಎಸ್​ಕೆ ಆಟಗಾರನಿಗೆ ಮಾತೃ ವಿಯೋಗ

IPL 2026: ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಎಸ್​ಕೆ ಆಟಗಾರನಿಗೆ ಮಾತೃ ವಿಯೋಗ

Mukesh Choudhary Mother Demise: ಐಪಿಎಲ್ 2026ರ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪ್ರಮುಖ ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೂ ಮುನ್ನ ಯುವ ವೇಗಿ ಮುಕೇಶ್ ಚೌಧರಿ ಅವರ ತಾಯಿ ನಿಧನರಾಗಿದ್ದಾರೆ. ಸಿಎಸ್‌ಕೆ ಫ್ರಾಂಚೈಸಿ ದುಃಖ ವ್ಯಕ್ತಪಡಿಸಿದ್ದು, ಅವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದೆ.

Karnataka SSLC Result 2026: ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಪರೀಕ್ಷೆ ಬರೆದಿದ್ದ ಕುಸುಮಾ ಉತ್ತಮ ಸಾಧನೆ

Karnataka SSLC Result 2026: ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಪರೀಕ್ಷೆ ಬರೆದಿದ್ದ ಕುಸುಮಾ ಉತ್ತಮ ಸಾಧನೆ

ಕೋಲಾರ ಜಿಲ್ಲೆಯ ಕುಸುಮಾ ತೀವ್ರ ಅನಾರೋಗ್ಯದ ನಡುವೆಯೂ ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ದೃಢ ಸಂಕಲ್ಪ ಮತ್ತು ಛಲದಿಂದ ಪರೀಕ್ಷೆ ಎದುರಿಸಿದ ಅವರು ಪ್ರಥಮ ದರ್ಜೆಯಲ್ಲಿ (First Class) ಉತ್ತೀರ್ಣರಾಗಿದ್ದಾರೆ. ಅವರ ಈ ಅಸಾಧಾರಣ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಶಿಕ್ಷಣ ಇಲಾಖೆ ಹಾಗೂ ಇತರರ ಸಹಕಾರವೂ ಇದಕ್ಕೆ ಕಾರಣ.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಎಲ್ಲ ಕಾರ್ಯಕ್ಕೂ ಅನನುಕೂಲ, ದಿಟ್ಟ ನಿರ್ಧಾರ

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಎಲ್ಲ ಕಾರ್ಯಕ್ಕೂ ಅನನುಕೂಲ, ದಿಟ್ಟ ನಿರ್ಧಾರ

Horoscope Today 22 April : ಏಪ್ರಿಲ್ 22ರ ಇಂದಿನ ದೈನಿಕ ರಾಶಿ ಭವಿಷ್ಯದಲ್ಲಿ ನಿಮ್ಮ ಭವಿಷ್ಯವನ್ನು ಅರಿಯಿರಿ. ಈ ದಿನ ಹಣಕಾಸು, ಪ್ರೇಮ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಾವ ರಾಶಿಯವರಿಗೆ ಶುಭ, ಯಾರಿಗೆ ಅನನುಕೂಲ ಎಂದು ತಿಳಿಯಿರಿ. ಗ್ರಹಗಳ ಸ್ಥಾನ ಮತ್ತು ಜ್ಯೋತಿಷ್ಯದ ಆಧಾರದ ಮೇಲೆ, ಸವಾಲುಗಳನ್ನು ಎದುರಿಸಲು ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ಪಡೆಯಿರಿ.

“ಸಂಗ್ರಹವಾದ ಹಣದಲ್ಲಿ ಶೇ. 80ರಷ್ಟು ನ್ಯಾಯಾಂಗಕ್ಕೆ ಕೊಡಿ”: ಸಿಎಂ ಸಮ್ಮುಖದಲ್ಲೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಸುಪ್ರೀಂ ಕೋರ್ಟ್ ಜಡ್ಜ್

“ಸಂಗ್ರಹವಾದ ಹಣದಲ್ಲಿ ಶೇ. 80ರಷ್ಟು ನ್ಯಾಯಾಂಗಕ್ಕೆ ಕೊಡಿ”: ಸಿಎಂ ಸಮ್ಮುಖದಲ್ಲೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಸುಪ್ರೀಂ ಕೋರ್ಟ್ ಜಡ್ಜ್

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಅರವಿಂದ್ ಕುಮಾರ್ ಅವರು ಕರ್ನಾಟಕದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ರಾಜ್ಯ ಸರ್ಕಾರ ಮಂದಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚುತ್ತಿರುವ ವ್ಯಾಜ್ಯಗಳು, ಹುದ್ದೆಗಳ ಕಡಿತ ಮತ್ತು ಮೂಲಸೌಕರ್ಯದ ಕೊರತೆಯನ್ನು ಅವರು ಎತ್ತಿ ತೋರಿಸಿದರು. ನ್ಯಾಯಾಂಗವು ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ ತರುತ್ತಿದ್ದರೂ, ಅದರ ಅಭಿವೃದ್ಧಿಗೆ ಕನಿಷ್ಠ ಹಣ ನೀಡಲಾಗುತ್ತಿದೆ ಎಂದು ದೂರಿದರು. ತ್ವರಿತ ಅನುಮೋದನೆಗೆ ಆಗ್ರಹಿಸಿದರು.

ಹೈದರಾಬಾದ್‌ನಲ್ಲಿ ‘ಸೀನಿಯರ್ ಮ್ಯಾನೇಜರ್’, ಬೆಂಗಳೂರಿನಲ್ಲಿ ‘ಮ್ಯಾನೇಜರ್’!; ಎರಡು ಹುದ್ದೆಗೂ ಒಂದೇ ಸಂಬಳ: ಈಗ ನಗರ ಮುಖ್ಯವೋ ಅಥವಾ ಹುದ್ದೆಯೋ?

ಹೈದರಾಬಾದ್‌ನಲ್ಲಿ ‘ಸೀನಿಯರ್ ಮ್ಯಾನೇಜರ್’, ಬೆಂಗಳೂರಿನಲ್ಲಿ ‘ಮ್ಯಾನೇಜರ್’!; ಎರಡು ಹುದ್ದೆಗೂ ಒಂದೇ ಸಂಬಳ: ಈಗ ನಗರ ಮುಖ್ಯವೋ ಅಥವಾ ಹುದ್ದೆಯೋ?

ಐಟಿ ಉದ್ಯೋಗಿಗಳಿಗೆ ಈಗ ಹೊಸ ಗೊಂದಲ: ಹುದ್ದೆಯ ಹೆಸರು ಮುಖ್ಯವೋ ಅಥವಾ ವಾಸಿಸುವ ನಗರ ಮುಖ್ಯವೋ? ಪ್ರತಿಷ್ಠಿತ MNC ಯಲ್ಲಿ 8 ವರ್ಷಗಳ ಅನುಭವದ ಅಭ್ಯರ್ಥಿಯೊಬ್ಬರಿಗೆ ಹೈದರಾಬಾದ್‌ನಲ್ಲಿ 'ಸೀನಿಯರ್ ಮ್ಯಾನೇಜರ್' ಅಥವಾ ಬೆಂಗಳೂರಿನಲ್ಲಿ 'ಮ್ಯಾನೇಜರ್' ಹುದ್ದೆಯ ಆಯ್ಕೆ ನೀಡಲಾಗಿದೆ, ಎರಡಕ್ಕೂ ಸಂಬಳ ಒಂದೇ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದು, ವೃತ್ತಿ ಭವಿಷ್ಯ ಮತ್ತು ವೈಯಕ್ತಿಕ ಆಯ್ಕೆಗಳ ನಡುವಿನ ಸಂಘರ್ಷವನ್ನು ಎತ್ತಿ ತೋರಿಸಿದೆ.

ಈ ತಕ್ಷಣವೇ ರಾಜೀನಾಮೆ ನೀಡಿ: ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್‌ಗೆ ಸೂಚನೆ! ಮುಂದಿನ ತಲೆದಂಡ ಸಚಿವ ಜಮೀರ್?

ಈ ತಕ್ಷಣವೇ ರಾಜೀನಾಮೆ ನೀಡಿ: ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್‌ಗೆ ಸೂಚನೆ! ಮುಂದಿನ ತಲೆದಂಡ ಸಚಿವ ಜಮೀರ್?

ದಾವಣಗೆರೆ ದಕ್ಷಿಣ ಉಪಚುನಾವಣೆ ವರದಿ ಕಾಂಗ್ರೆಸ್ ಹೈಕಮಾಂಡ್‌ಗೆ ತಲುಪಿದ ನಂತರ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅಲ್ಪಸಂಖ್ಯಾತ ಶಾಸಕರಿಂದ ದೂರು ದಾಖಲಾದ ಹಿನ್ನೆಲೆಯಲ್ಲಿ ಶಿಸ್ತು ಕ್ರಮದ ಭೀತಿ ಎದುರಾಗಿದೆ. ಅಬ್ದುಲ್ ಜಬ್ಬಾರ್ ಮತ್ತು ನಜೀರ್ ಅಹ್ಮದ್ ರಾಜೀನಾಮೆ ನೀಡಿದ್ದು, ಸಚಿವ ಸಂಪುಟ ಪುನಾರಚನೆಯಲ್ಲಿ ಜಮೀರ್ ಖಾನ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯಿದೆ. ಖರ್ಗೆ ಜಾಣ ಮೌನ ವಹಿಸಿದ್ದಾರೆ.

ಜಿಬಿಎ ಚುನಾವಣೆ: ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?

ಜಿಬಿಎ ಚುನಾವಣೆ: ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?

ಉಪ ಚುನಾವಣೆ ಅಬ್ಬರದ ನಡುವೆ ಜಿಬಿಎ ಚುನಾವಣೆಗೂ ಪಕ್ಷಗಳು ತಯಾರಿ ನಡೆಸಿವೆ. ಆದರೆ ಮೈತ್ರಿಯಾಗಿಯೇ ಉಪ ಚುನಾವಣೆ ಎದುರಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್​​ ಈ ಹೊಂದಾಣಿಕೆಯನ್ನು ಗ್ರೇಟರ್​​ ಬೆಂಗಳೂರು ಪ್ರಾಧಿಕಾರದ ಚುನಾವಣೆಗೂ ಮುಂದುವರಿಸುತ್ತವಾ ಎಂಬ ಪ್ರಶ್ನೆ ಸದ್ಯಕ್ಕಿದೆ. ಈ ವಿಚಾರವಾಗಿ ಈ ಹಿಂದೆಯೂ ಕೆಲ ನಾಯಕರಿಂದ ಪರ-ವಿರೋಧ ಅಬಿಪ್ರಾಯಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆ ಮೈತ್ರಿ ನಿರ್ಧಾರದ ಬಗ್ಗೆ ವಿಪಕ್ಷ ನಾಯಕ ಆರ್​​.ಅಶೋಕ್​​ ಸ್ಪಷ್ಟನೆ ನೀಡಿದ್ದಾರೆ.

ಕೆ.ಆರ್. ಮಾರುಕಟ್ಟೆಗೆ ಸಿಗಲಿದೆ ಹೈಟೆಕ್ ಸ್ಪರ್ಶ: ಒಂದು ವಾರದೊಳಗೆ ಅಭಿವೃದ್ಧಿ ರಿಪೋರ್ಟ್ ನೀಡಲು ಮಹೇಶ್ವರ ರಾವ್ ಸೂಚನೆ

ಕೆ.ಆರ್. ಮಾರುಕಟ್ಟೆಗೆ ಸಿಗಲಿದೆ ಹೈಟೆಕ್ ಸ್ಪರ್ಶ: ಒಂದು ವಾರದೊಳಗೆ ಅಭಿವೃದ್ಧಿ ರಿಪೋರ್ಟ್ ನೀಡಲು ಮಹೇಶ್ವರ ರಾವ್ ಸೂಚನೆ

ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ತ್ಯಾಜ್ಯ ವಿಲೇವಾರಿ, ಸಿಸಿಟಿವಿ ಅಳವಡಿಕೆ, ಆಂತರಿಕ ರಸ್ತೆ ಕಾಂಕ್ರೀಟೀಕರಣದಂತಹ ಸುಧಾರಣೆಗಳಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮತ್ತೊಂದೆಡೆ, ಬನ್ನೇರುಘಟ್ಟ ರಸ್ತೆಯ ಮೆಟ್ರೋ ಕಾಮಗಾರಿಯಿಂದ ಧೂಳು, ಸಂಚಾರ ದಟ್ಟಣೆ ಮತ್ತು ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಮೂಲಸೌಕರ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಪ್ರಾಧಿಕಾರ ಗಮನ ಹರಿಸಿದೆ.

ವಾವ್ಹ್​​​​ ಏನ್​​ ಅದೃಷ್ಟ ಈ ರಾಶಿಯವರದ್ದು!: ಮುಟ್ಟಿದ್ದೆಲ್ಲಾ ಚಿನ್ನ, ಆದರೆ ಈ ವಿಷಯದಲ್ಲಿ ತಾಳ್ಮೆ ಮುಖ್ಯ

ವಾವ್ಹ್​​​​ ಏನ್​​ ಅದೃಷ್ಟ ಈ ರಾಶಿಯವರದ್ದು!: ಮುಟ್ಟಿದ್ದೆಲ್ಲಾ ಚಿನ್ನ, ಆದರೆ ಈ ವಿಷಯದಲ್ಲಿ ತಾಳ್ಮೆ ಮುಖ್ಯ

ಏಪ್ರಿಲ್ ೨೦೨೬ ಸಿಂಹ ರಾಶಿಯವರಿಗೆ ಪ್ರಮುಖ ತಿಂಗಳು. ಸೂರ್ಯನು ಉಚ್ಚಸ್ಥಾನಕ್ಕೇರುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ವೃತ್ತಿಜೀವನದಲ್ಲಿ ಮಿಶ್ರ ಫಲಗಳಿದ್ದರೂ, ಏ. ೧೪ರ ನಂತರ ಉತ್ತಮ ಅವಕಾಶಗಳು, ಆರ್ಥಿಕವಾಗಿ ಲಾಭ, ವಿದ್ಯಾರ್ಥಿಗಳಿಗೆ ಶುಭ ಕಾಲ. ವಿದೇಶ ಪ್ರಯಾಣದ ಯೋಗ ಬಲವಾಗಿದೆ. ಸಾಲ ಮತ್ತು ಆರೋಗ್ಯದ ಬಗ್ಗೆ ಗಮನವಿರಲಿ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ.