ಜಿಬಿಎ ಚುನಾವಣೆ: ಹೈಕಮಾಂಡ್ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಉಪ ಚುನಾವಣೆ ಅಬ್ಬರದ ನಡುವೆ ಜಿಬಿಎ ಚುನಾವಣೆಗೂ ಪಕ್ಷಗಳು ತಯಾರಿ ನಡೆಸಿವೆ. ಆದರೆ ಮೈತ್ರಿಯಾಗಿಯೇ ಉಪ ಚುನಾವಣೆ ಎದುರಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಈ ಹೊಂದಾಣಿಕೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೂ ಮುಂದುವರಿಸುತ್ತವಾ ಎಂಬ ಪ್ರಶ್ನೆ ಸದ್ಯಕ್ಕಿದೆ. ಈ ವಿಚಾರವಾಗಿ ಈ ಹಿಂದೆಯೂ ಕೆಲ ನಾಯಕರಿಂದ ಪರ-ವಿರೋಧ ಅಬಿಪ್ರಾಯಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆ ಮೈತ್ರಿ ನಿರ್ಧಾರದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ.
- Web contact
- Updated on: Apr 7, 2026
- 5:58 pm
ಕೆ.ಆರ್. ಮಾರುಕಟ್ಟೆಗೆ ಸಿಗಲಿದೆ ಹೈಟೆಕ್ ಸ್ಪರ್ಶ: ಒಂದು ವಾರದೊಳಗೆ ಅಭಿವೃದ್ಧಿ ರಿಪೋರ್ಟ್ ನೀಡಲು ಮಹೇಶ್ವರ ರಾವ್ ಸೂಚನೆ
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ತ್ಯಾಜ್ಯ ವಿಲೇವಾರಿ, ಸಿಸಿಟಿವಿ ಅಳವಡಿಕೆ, ಆಂತರಿಕ ರಸ್ತೆ ಕಾಂಕ್ರೀಟೀಕರಣದಂತಹ ಸುಧಾರಣೆಗಳಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮತ್ತೊಂದೆಡೆ, ಬನ್ನೇರುಘಟ್ಟ ರಸ್ತೆಯ ಮೆಟ್ರೋ ಕಾಮಗಾರಿಯಿಂದ ಧೂಳು, ಸಂಚಾರ ದಟ್ಟಣೆ ಮತ್ತು ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಮೂಲಸೌಕರ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಪ್ರಾಧಿಕಾರ ಗಮನ ಹರಿಸಿದೆ.
- Web contact
- Updated on: Apr 3, 2026
- 12:20 pm
ವಾವ್ಹ್ ಏನ್ ಅದೃಷ್ಟ ಈ ರಾಶಿಯವರದ್ದು!: ಮುಟ್ಟಿದ್ದೆಲ್ಲಾ ಚಿನ್ನ, ಆದರೆ ಈ ವಿಷಯದಲ್ಲಿ ತಾಳ್ಮೆ ಮುಖ್ಯ
ಏಪ್ರಿಲ್ ೨೦೨೬ ಸಿಂಹ ರಾಶಿಯವರಿಗೆ ಪ್ರಮುಖ ತಿಂಗಳು. ಸೂರ್ಯನು ಉಚ್ಚಸ್ಥಾನಕ್ಕೇರುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ವೃತ್ತಿಜೀವನದಲ್ಲಿ ಮಿಶ್ರ ಫಲಗಳಿದ್ದರೂ, ಏ. ೧೪ರ ನಂತರ ಉತ್ತಮ ಅವಕಾಶಗಳು, ಆರ್ಥಿಕವಾಗಿ ಲಾಭ, ವಿದ್ಯಾರ್ಥಿಗಳಿಗೆ ಶುಭ ಕಾಲ. ವಿದೇಶ ಪ್ರಯಾಣದ ಯೋಗ ಬಲವಾಗಿದೆ. ಸಾಲ ಮತ್ತು ಆರೋಗ್ಯದ ಬಗ್ಗೆ ಗಮನವಿರಲಿ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ.
- Web contact
- Updated on: Apr 2, 2026
- 2:22 pm
ಅಂಗಡಿಯಲ್ಲಿ ಸಿಗುವ 5 ರೂ. ಬೋಟಿಗೆ ಬೆಂಗಳೂರು ಪಬ್ನಲ್ಲಿ 150 ರೂ. ಪಾವತಿಸಿದ ಯುವಕ: ಇದು ದೋಚುವ ಒಂದು ಕಲೆ
ಬೆಂಗಳೂರಿನ ಪಬ್ಗಳಲ್ಲಿನ ದುಬಾರಿ ಆಹಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಇಂದಿರಾನಗರದ ಪಬ್ ಒಂದರಲ್ಲಿ 150 ರೂ.ಗೆ 'ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್' ಹೆಸರಿನಲ್ಲಿ ಕೇವಲ ಫ್ರೈಯಮ್ಸ್ ನೀಡಿದ ಘಟನೆ ವೈರಲ್ ಆಗಿದೆ. ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು, ಬೆಲೆ ವಂಚನೆ ಮತ್ತು ಬೆಂಗಳೂರಿನ ಊಟದ ಸಂಸ್ಕೃತಿಯನ್ನು ಟೀಕಿಸಿದ್ದಾರೆ. ಇದು ದುಬಾರಿ ಪಬ್ಗಳ ವಿರುದ್ಧ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
- Web contact
- Updated on: Apr 2, 2026
- 1:07 pm
ಬೆಂಗಳೂರಲ್ಲಿ ಪೊಲೀಸರು ಇದ್ದಾರಾ.. ಇಲ್ವಾ?: ಹೈವೇಯಲ್ಲೇ ಕಾರಿನ ರೂಫ್ ಟಾಪ್ ಓಪನ್ ಮಾಡಿ ಬಾಟಲಿ ಎತ್ತಿದ ವ್ಯಕ್ತಿ
ಬೆಂಗಳೂರು-ನೆಲಮಂಗಲ ಮಾರ್ಗದಲ್ಲಿ ಚಲಿಸುತ್ತಿದ್ದ ಕಾರಿನ ರೂಫ್ಟಾಪ್ನಿಂದ ಯುವಕನೊಬ್ಬ ಮದ್ಯ ಸೇವಿಸಿದ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಸಾರ್ವಜನಿಕ ಸ್ಥಳದಲ್ಲಿನ ಈ ಪುಂಡಾಟಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ಆಧರಿಸಿ ಸಂಚಾರಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಮುಂದಾಗಿದ್ದಾರೆ. ಇಂತಹ ಉಲ್ಲಂಘನೆಗಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
- Web contact
- Updated on: Mar 31, 2026
- 3:13 pm
Video: ನೀಚ ಕೃತ್ಯ: ಸೂಪರ್ ಮಾರ್ಕೆಟ್ನಲ್ಲಿ ವಸ್ತುಗಳ ಹುಡುಕುತ್ತಿದ್ದವಳ ಕಿವಿಗೆ ಪ್ಯಾಂಟ್ ಸಡಿಲಿಸಿ ಗುಪ್ತಾಂಗ ತಾಗಿಸಿದ ವ್ಯಕ್ತಿ
ಎಂಥಾ ನೀಚ ಕೃತ್ಯ, ಸಾರ್ವಜನಿಕ ಸ್ಥಳಗಳಲ್ಲೇ ಎಲ್ಲರೆದುರೇ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಆತಂಕಕಾರಿ ಸಂಗತಿ. ಲಾಸ್ ಏಂಜಲೀಸ್ನ ಸೂಪರ್ ಮಾರ್ಕೆಟ್ನಲ್ಲಿ ವ್ಯಕ್ತಿಯೊಬ್ಬ ಯುವತಿಗೆ ಲೈಂಗಿಕ ಕಿರುಕುಳ(Physical Harassment) ನೀಡಿರುವ ಘಟನೆ ವರದಿಯಾಗಿದೆ. ವಿಡಿಯೋ ಕೂಡ ವೈರಲ್ ಆಗಿದ್ದು, ಆತನ ಕೃತ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
- Web contact
- Updated on: Mar 31, 2026
- 10:10 am
TV9-Sensodyne Campaign | ನಿಮ್ಮ ಹಲ್ಲಿನ ಆರೋಗ್ಯಕ್ಕೆ ಮೊದಲ ಹೆಜ್ಜೆ: ದಂತ ವಯಸ್ಸಿನ ಬಗ್ಗೆ ಅರಿವು ಮೂಡಿಸಲು ಹೊಸ ಅಭಿಯಾನ
ಸೆನ್ಸೋಡೈನ್ ಮತ್ತು ಟಿವಿ9 ನೆಟ್ವರ್ಕ್ ನಿಮ್ಮ ದಂತ ವಯಸ್ಸು ತಿಳಿಯಿರಿ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಜನರು ತಮ್ಮ ಸಾಮಾನ್ಯ ಆರೋಗ್ಯಕ್ಕೆ ಗಮನ ನೀಡಿದರೂ ಹಲ್ಲಿನ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ನಿಮ್ಮ ನಿಜವಾದ ವಯಸ್ಸಿಗಿಂತ ಹಲ್ಲುಗಳ ವಯಸ್ಸು ಹೆಚ್ಚಿರಬಹುದು. ಈ ಅಭಿಯಾನವು ಹಲ್ಲಿನ ವಯಸ್ಸನ್ನು ಪರೀಕ್ಷಿಸಲು QR ಕೋಡ್ ಸ್ಕ್ಯಾನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ನೆರವಾಗುತ್ತದೆ, ಇದರಿಂದ ಹಲ್ಲಿನ ಸಮಸ್ಯೆಗಳನ್ನು ಮೊದಲೇ ಗುರುತಿಸಿ ತಡೆಗಟ್ಟಬಹುದು.
- Web contact
- Updated on: Mar 30, 2026
- 6:12 pm
ಬೆಂಗಳೂರು: ಕಾಣೆಯಾಗಿದ್ದ ಅಸ್ಸಾಂ ಮೂಲದ ಬಾಲಕಿ ಶವವಾಗಿ ಪತ್ತೆ; ಅತ್ಯಾಚಾರವೆಸಗಿ ಮುಖ ಜಜ್ಜಿ ಕೊಲೆ ಮಾಡಿದ ಕಿರಾತಕರು!
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿಯ ಭೀಕರ ಕೊಲೆಯಾಗಿದೆ. ಗುರುವಾರ ಸಂಜೆ ಕಾಣೆಯಾಗಿದ್ದ ಬಾಲಕಿಯ ನಗ್ನ ಶವ ಶನಿವಾರ ಬೋಳುಗುಟ್ಟದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದಾರೆ.
- Web contact
- Updated on: Mar 28, 2026
- 6:51 pm
‘ಧುರಂಧರ್ 2’ ಅಬ್ಬರಕ್ಕೆ ಮಕಾಡೆ ಮಲಗಿದ ಪವನ್ ಕಲ್ಯಾಣ್ ಸಿನಿಮಾ; ಹೀನಾಯ ಕಲೆಕ್ಷನ್
ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಚಿತ್ರವು 'ಧುರಂಧರ್ 2' ಅಬ್ಬರದ ಮುಂದೆ ನೆಲಕಚ್ಚಿದೆ. ಧುರಂಧರ್ 2 ವಿಶ್ವಾದ್ಯಂತ 1000 ಕೋಟಿಗೂ ಹೆಚ್ಚು ಗಳಿಸಿ ಭರ್ಜರಿ ಯಶಸ್ಸು ಕಂಡರೆ, ಉಸ್ತಾದ್ ಭಗತ್ ಸಿಂಗ್ ಭಾರತದಲ್ಲಿ ಕೇವಲ 66 ಕೋಟಿ ರೂಪಾಯಿ ಗಳಿಸಿದೆ. ರಾಜಕೀಯದಲ್ಲಿ ಬ್ಯುಸಿ ಆಗಿರುವ ಪವನ್ ಕಲ್ಯಾಣ್ ಅವರ ಸಿನಿಮಾ ಬದ್ಧತೆ ಕಳೆದುಕೊಂಡಿದ್ದು, ಇದು ಚಿತ್ರದ ಕಲೆಕ್ಷನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
- Web contact
- Updated on: Mar 27, 2026
- 7:03 am
ಮದುವೆಯಲ್ಲಿ ಜೀರಿಗೆ ಬೆಲ್ಲ ಏಕಿರಬೇಕು? ದಂಪತಿಗಳ ಬದುಕಿನಲ್ಲಿ ಬದಲಾವಣೆ ತರುವ ಈ ಶಾಸ್ತ್ರದ ಹಿಂದಿನ ಅಸಲಿ ಸತ್ಯ ಏನು?
ಹಿಂದೂ ವಿವಾಹ ಸಂಪ್ರದಾಯದಲ್ಲಿ ವಧು ವರರ ತಲೆಯ ಮೇಲೆ ಜೀರಿಗೆ ಬೆಲ್ಲ ಇಡುವ ವಿಧಿಗೆ ಮಹತ್ವವಿದೆ. ಇದು ಸಹಸ್ರಾರ ಚಕ್ರವನ್ನು ಜಾಗೃತಗೊಳಿಸಿ ಮೆದುಳಿನಲ್ಲಿ ಧನಾತ್ಮಕ ಶಕ್ತಿಯನ್ನು ಪ್ರಚೋದಿಸುತ್ತದೆ. ಜವಾಬ್ದಾರಿ ಪ್ರಜ್ಞೆ ಮೂಡಿಸಿ, ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಅನ್ಯೋನ್ಯತೆ ಹೆಚ್ಚಿಸುತ್ತದೆ. ಈ ಆಚರಣೆ ಕೇವಲ ಸಾಂಪ್ರದಾಯಿಕವಲ್ಲದೆ ಮಾನಸಿಕ ಪರಿವರ್ತನೆಗೂ ಸಹಕಾರಿಯಾಗಿದೆ.
- Web contact
- Updated on: Mar 26, 2026
- 10:13 am
ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ? ಬೆಂಗಳೂರಿನಲ್ಲಿ ಎಫ್ಐಆರ್ ದಾಖಲು
ಮಹಾರಾಷ್ಟ್ರದ ಮಾಜಿ ಡಿಸಿಎಂ ಅಜಿತ್ ಪವಾರ್ ಬಾರಾಮತಿ ವಿಮಾನ ಅಪಘಾತದಲ್ಲಿ ನಿಧನರಾಗಿದ್ದು, ಇದು ಆಕಸ್ಮಿಕವಲ್ಲ, ಸಂಚು ಎಂದು ರೋಹಿತ್ ಪವಾರ್ ಬೆಂಗಳೂರಿನಲ್ಲಿ ದೂರು ನೀಡಿದ್ದಾರೆ. ಹಾರಾಟಕ್ಕೆ ಅಯೋಗ್ಯ ವಿಮಾನ, ಅನುಮಾನಾಸ್ಪದ ಪೈಲಟ್ ನೇಮಕ, ಮತ್ತು ಅಂತಿಮ ಕ್ಷಣದ ಪ್ರಯಾಣ ಬದಲಾವಣೆಗಳ ಸುತ್ತ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕಿದೆ.
- Web contact
- Updated on: Mar 24, 2026
- 9:01 pm
Bengaluru Ola Ride Scam: 285 ರೂ. ಬಿಲ್ 5,950 ರೂ.ಗೆ ಏರಿಕೆ! ಕ್ಯಾಬ್ ಡ್ರೈವರ್ಗಳ ಹೊಸ ಆಟ ಶುರು
ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಚಾಲಕರು ತಾಂತ್ರಿಕವಾಗಿ ಪ್ರಯಾಣ ದರವನ್ನು ತಿರುಚಿ ಗ್ರಾಹಕರಿಗೆ ಸಾವಿರಾರು ರೂಪಾಯಿ ವಂಚಿಸುತ್ತಿದ್ದಾರೆ. 285 ರೂ. ರೈಡ್ಗೆ 5950 ರೂ. ಬಿಲ್ ಮಾಡಿ ಪ್ರಯಾಣಿಕರಿಗೆ ಆಘಾತ ನೀಡಿದ ಪ್ರಕರಣ ವೈರಲ್ ಆಗಿದೆ. ಪೊಲೀಸರು ಇಂತಹ ಘಟನೆಗಳನ್ನು ತಕ್ಷಣ 112 ಗೆ ಕರೆ ಮಾಡಿ ವರದಿ ಮಾಡುವಂತೆ ಸೂಚಿಸಿದ್ದಾರೆ. ಕಂಪನಿಗಳು ಸಹ ಆಪ್ನಲ್ಲಿ ಪಾವತಿ ಮತ್ತು ಅಧಿಕೃತ ಮಾರ್ಗಗಳ ಮೂಲಕ ದೂರು ನೀಡಲು ಸಲಹೆ ನೀಡಿವೆ.
- Web contact
- Updated on: Mar 19, 2026
- 2:47 pm