ನಿರ್ಜಲ ಏಕಾದಶಿಯ ದಿನ ಯಾರಿಗೆ ಒಲಿಯಲಿದೆ ಅದೃಷ್ಟ? ನಿಮ್ಮ ರಾಶಿಯ ಆರ್ಥಿಕ ಸ್ಥಿತಿ, ಉದ್ಯೋಗ ಭವಿಷ್ಯ ಹೇಗಿದೆ?
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 25 ಜೂನ್ 2026ರ ದಿನ ಭವಿಷ್ಯವನ್ನು ವಿವರಿಸಿದ್ದಾರೆ. ಈ ದಿನದ ಪಂಚಾಂಗ, ಶುಭಕಾಲ, ರಾಹುಕಾಲ, ಗ್ರಹಗಳ ಸಂಚಾರ ಹಾಗೂ ನಿರ್ಜಲ ಏಕಾದಶಿಯ ಮಹತ್ವವನ್ನು ತಿಳಿಸಿದ್ದಾರೆ. ಅಲ್ಲದೆ, ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಆರ್ಥಿಕ, ಕೌಟುಂಬಿಕ, ವೈವಾಹಿಕ ಮತ್ತು ಆರೋಗ್ಯದ ಕುರಿತು ವಿಸ್ತೃತ ಫಲಗಳನ್ನು ನೀಡಿದ್ದಾರೆ.
- Web contact
- Updated on: Jun 25, 2026
- 6:24 am
TV9 ಬಿಗ್ ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಅದೆಷ್ಟೋ ಆದಿವಾಸಿಗಳು ಕರ್ನಾಟಕದಲ್ಲೂ ಸಹ ಬದುಕಿದ್ದು ಸತ್ತಂತೆ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಚಾಮರಾಜನಗರದ ಕಾಡಿನಲ್ಲಿ ವಾಸಿಸುತ್ತಿರುವ ಆನೆ ದಿಂಬ ಹಾಡಿಯ ಜನರಿಗೆ ಮೂಲಸೌಲಭ್ಯಗಳು, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳೇ ಸಿಗುತ್ತಿಲ್ಲ. ಕಳೆದ 10 ವರ್ಷಗಳಿಂದ ಹಾಡಿಯ ವಾಸಿಗಳು ರೇಷನ್ ಕಾರ್ಡ್ ಗಾಗಿ ಕಚೇರಿಯಿಂದ ಕಚೇರಿ ಅಲೆದು ರೋಸಿ ಹೋಗಿದ್ದರು. ಆದರೂ ರೇಷನ್ ಕಾರ್ಡ್ ಸಿಕ್ಕಿಲಲ್. ಹೀಗಾಗಿ ಈ ಬಗ್ಗೆ ನಿಮ್ಮ ಟಿವಿ9, ಆದಿವಾಸಿ ಸೋಲಿಗರು ಶೀರ್ಷಿಕೆ ಅಡಿ ಸುದ್ದಿ ಬಿತ್ತರಿಸಿತ್ತು. ಈ ಸುದ್ದಿ ಬೆನ್ನಲ್ಲೇ ಆದಿವಾಸಿಗಳ ಹೊಟ್ಟೆಗೆ ಅನ್ನ ಸಿಕ್ಕಿದೆ.
- Web contact
- Updated on: Jun 24, 2026
- 4:52 pm
ತ್ರಿಷಾ ಹಂಚಿಕೊಂಡಿದ್ದು ಹಳೆಯ ಫೋಟೋ? ಸಾಕ್ಷಿ ತಂದ ಫ್ಯಾನ್ಸ್
ನಟಿ ತ್ರಿಷಾ ಕೃಷ್ಣನ್ ಅವರು ದಳಪತಿ ವಿಜಯ್ ಜನ್ಮದಿನದಂದು ಹಂಚಿಕೊಂಡಿದ್ದ ಫೋಟೋ ಈಗ ಭಾರೀ ಚರ್ಚೆಯಾಗುತ್ತಿದೆ. ಅಭಿಮಾನಿಗಳು ಈ ಫೋಟೋ ಇತ್ತೀಚಿನದಲ್ಲ, ಹಳೆಯದು ಎಂದು ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾರೆ. ವಿಜಯ್ ಅವರ ಉಡುಗೆ, ಕೇಶ ವಿನ್ಯಾಸವನ್ನು ಹಿಂದಿನ ಫೋಟೋಗಳೊಂದಿಗೆ ಹೋಲಿಸಿ, ಇದು ಹೊಸ ಫೋಟೋ ಅಲ್ಲ ಎಂದು ನೆಟ್ಟಿಗರು ಸ್ಪಷ್ಟಪಡಿಸಿದ್ದಾರೆ.
- Web contact
- Updated on: Jun 24, 2026
- 12:00 pm
ಇಂದಿನ ವಾಯು ಗುಣಮಟ್ಟ ವರದಿ: ರಾಜ್ಯದ ಈ ನಗರದಲ್ಲಿದೆ ಅತ್ಯಂತ ಸ್ವಚ್ಛ ವಾತಾವರಣ; ನಿಮ್ಮ ಊರಿನ AQI ಮಟ್ಟ ಚೆಕ್ ಮಾಡಿ
ರಾಜ್ಯದಲ್ಲಿ ನಿರಂತರ ಮಳೆ ಮತ್ತು ತಂಪು ಗಾಳಿಯಿಂದ ವಾಯು ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ 'ಉತ್ತಮ' AQI ದಾಖಲಾಗಿದೆ. ಮೈಸೂರಿನಲ್ಲಿ ರಾಜ್ಯದಲ್ಲೇ ಅತ್ಯಂತ ಶುದ್ಧ ಗಾಳಿ ಇದೆ. ಆದರೆ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಕೈಗಾರಿಕೆ, ನಿರ್ಮಾಣ ಕಾರ್ಯಗಳಿಂದ ಮಾಲಿನ್ಯ ಹೆಚ್ಚಿದ್ದು, ಅಸ್ತಮಾ ರೋಗಿಗಳಿಗೆ ಎಚ್ಚರಿಕೆ ನೀಡಲಾಗಿದೆ. N95 ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ.
- Web contact
- Updated on: Jun 20, 2026
- 7:30 am
Father’s Day 2026: ಅಪ್ಪಂದಿರ ದಿನದಂದು ನಿಮ್ಮ ಪ್ರೀತಿಯ ತಂದೆಗೆ ಈ ಸ್ಪೆಷಲ್ ಉಡುಗೊರೆಗಳನ್ನು ನೀಡಿ
ತಂದೆಯಂದಿರು ಹಾಗೆಯೇ, ತಮ್ಮ ಸ್ವಂತ ಅಗತ್ಯಗಳನ್ನು ಬದಿಗಿಟ್ಟು ಮಕ್ಕಳ ಸಂತೋಷಕ್ಕೆ ಮೊದಲ ಸ್ಥಾನ ನೀಡುತ್ತಾರೆ. ಮಕ್ಕಳ ಖುಷಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು ಶ್ರಮಿಸುತ್ತಾರೆ. ಇಂತಹ ತಂದೆಯಂದಿರನ್ನು ಗೌರವಿಸಲು ಪ್ರತಿವರ್ಷ ಜೂನ್ ಮೂರನೇ ಭಾನುವಾರದಂದು ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಜೂನ್ 21 ರಂದು ಫಾದರ್ಸ್ ಡೇ ಆಚರಿಸಲಾಗುತ್ತಿದ್ದು, ಈ ದಿನ ಕೆಲವೊಂದು ಸ್ಪೆಷಲ್ ಗಿಫ್ಟ್ಗಳನ್ನು ನೀಡುವ ಮೂಲಕ ನಿಮ್ಮ ತಂದೆಯ ಮುಖದಲ್ಲಿ ನಗು ತರಿಸಿ.
- Web contact
- Updated on: Jun 18, 2026
- 6:49 pm
ವಿಧಾನಪರಿಷತ್ ಎಲೆಕ್ಷನ್: ಎಚ್ಡಿಕೆ, ಡಿಕೆ ನಡುವಿನ ಪ್ರತಿಷ್ಠೆಯ ಕಣದಲ್ಲಿ ಗೆಲ್ಲೋರ್ಯಾರು? ಹೇಗಿದೆ ನಂಬರ್ ಗೇಮ್?
ಕರ್ನಾಟಕ ವಿಧಾನ ಪರಿಷತ್ನ 7 ಸ್ಥಾನಗಳಿಗೆ ನಾಳೆ (ಜೂನ್ 18) ಚುನಾವಣೆ ನಡೆಯಲಿದೆ. ಆದ್ರೆ, ಪರಿಷತ್ ಕಣದಲ್ಲಿ 8ನೇ ಅಭ್ಯರ್ಥಿ ಅಖಾಡಕ್ಕಿಳಿಸಿರುವುದು ಮೇಲ್ಮನೆ ಚುನಾವಣೆ ರಂಗೇರಿದೆ. ಕಾಂಗ್ರೆಸ್ ಪಕ್ಷದ ನಾಲ್ಕು ಅಭ್ಯರ್ಥಿಗಳ ಆಯ್ಕೆ ನಿರಾಯಸವಾಗಿದ್ದು, ಐದನೇ ಅಭ್ಯರ್ಥಿಯ ಗೆಲುವು ಸವಾಲಾಗಿದೆ. ಈ ನಡುವೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಗೋವಿಂದರಾಜು ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ ಚುನಾವಣೆ ಕಾವು ಪಡೆದುಕೊಂಡಿದ್ದು, ಸಿಎಂ ಡಿಕೆಶಿ, ಕುಮಾರಸ್ವಾಮಿಗೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್ 5ನೇ ಅಭ್ಯರ್ಥಿ ಕಣಕ್ಕಿಳಿಸೋ ಮೂಲಕ ಕದನ ಕಣ ಮತ್ತಷ್ಟು ರೋಚಕತೆ ಪಡೆದಿದೆ. ಕಾಂಗ್ರೆಸ್, ಎನ್ಡಿಎ ಮಧ್ಯೆ ಜಿದ್ದಾಜಿದ್ದಿನ ಫೈಟ್ ಇದ್ದು, ಎರಡೂ ಕಡೆಯ ನಂಬರ್ ಗೇಮ್ ಹೇಗಿದೆ? ಏನೆಲ್ಲಾ ಲೆಕ್ಕಚಾರಗಳು ನಡೆಯುತ್ತಿವೆ ಎನ್ನುವ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.
- Web contact
- Updated on: Jun 17, 2026
- 9:14 pm
‘ಬಿಗ್ ಬಾಸ್ನಿಂದ ಒಂದು ರೂಪಾಯಿಯೂ ಸಿಗಲಿಲ್ಲ’; ವಂಚನೆ ಬಗ್ಗೆ ಅಬ್ದು ರೋಜಿಕ್ ಮಾತು
ಭಾರತದಲ್ಲಿ ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿದ ಅಬ್ದು ರೋಜಿಕ್, ತಮಗೆ ಕಾರ್ಯಕ್ರಮದಿಂದ ಯಾವುದೇ ಸಂಭಾವನೆ ಸಿಕ್ಕಿಲ್ಲ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ತನ್ನ ಮಾಜಿ ಮ್ಯಾನೇಜ್ಮೆಂಟ್ ತಂಡವೇ ತನ್ನ ಸಂಪಾದನೆಯನ್ನು ವಂಚಿಸಿದೆ ಎಂದು ಆರೋಪಿಸಿದ್ದಾರೆ. ಜನ ತಮ್ಮನ್ನು ಶ್ರೀಮಂತರೆಂದು ಭಾವಿಸಿದರೂ, ವೈಯಕ್ತಿಕವಾಗಿ ಮನೆ, ಕಾರು ಇಲ್ಲದೆ ಕಷ್ಟಪಡುತ್ತಿರುವುದಾಗಿ ನೋವು ತೋಡಿಕೊಂಡಿದ್ದಾರೆ.
- Web contact
- Updated on: Jun 13, 2026
- 2:41 pm
ಆಧ್ಯಾತ್ಮಿಕ ಸ್ಥಳಗಳಿಗೆ ಪ್ರವಾಸ ಹೋಗುವವರಲ್ಲಿ ಜೆನ್ ಝೀ ಯುವಕರೇ ಹೆಚ್ಚು; ವರದಿ
ಹಿಂದೆಲ್ಲಾ ಹೆಚ್ಚಾಗಿ ಹಿರಿಯರೇ ಆಧ್ಯಾತ್ಮಿಕ ತಾಣಗಳಿಗೆ ಭೇಟಿ ನೀಡುತ್ತಿದ್ದರು, ತೀರ್ಥಯಾತ್ರೆಗಳನ್ನು ಕೈಗೊಳ್ಳುತ್ತಿದ್ದರು. ಆದರೆ ಇಂದು ಯುವ ಜನರು ಹೆಚ್ಚು ಹೆಚ್ಚು ಆಧ್ಯಾತ್ಮಿಕ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ವರದಿಯೊಂದರ ಪ್ರಕಾರ ಇತ್ತೀಚಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವವರಲ್ಲಿ ಶೇಕಡಾ 100 ರಲ್ಲಿ 53% ಕ್ಕಿಂತ ಹೆಚ್ಚು ಜೆನ್ ಝೀ ಯುವಕರು. ಇತ್ತೀಚಿಗೆ ಮೋಜು ಮಸ್ತಿಯ ತಾಣವನ್ನು ಬಿಟ್ಟು ತಿರುಪತಿ, ಋಷಿಕೇಶ ಮತ್ತು ವಾರಣಾಸಿಯಂತಹ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಯುವಜನರು ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದಾರೆ.
- Web contact
- Updated on: Jun 9, 2026
- 5:06 pm
ಬೆಂಗಳೂರು ವಿಶ್ವವಿದ್ಯಾಲಯದ 100 ಎಕರೆ ಜಾಗದ ಮೇಲೆ ಕಣ್ಣಾಕಿದ ಕೇಂದ್ರ ಸರ್ಕಾರ!
ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಜಾಗದ ಮೇಲೆ ಮೇಲಿಂದ ಮೇಲೆ ಕಣ್ಣು ಬೀಳುತ್ತಿದೆ. ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಮೀಸಲಾಗಿರುವ ವಿವಿ ಕ್ಯಾಂಪಸ್ನಲ್ಲಿ ಹಲವಾರು ಸಂಸ್ಥೆಗಳು ತಲೆ ಎತ್ತಿದ್ದು, ಕ್ಯಾಂಪಸ್ ಕಿರಿದಾಗಿದೆ. ಈಗ 100 ಎಕರೆ ಜಾಗ ಬೇಕೆಂದು ಕೇಂದ್ರ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಕೇಂದ್ರ 100 ಎಕರೆ ಕೊಡಿ ಎಂದು ಕೇಳಿದ್ಯಾಕೆ? ಪ್ಲ್ಯಾನ್ ಏನು? ಇದಕ್ಕೆ ವಿವಿ ಆಡಳಿ ಮಂಡಳಿ ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
- Web contact
- Updated on: Jun 5, 2026
- 10:05 pm
ನೇರಳೆ ಹಣ್ಣು ಮಧುಮೇಹ, ಜೀರ್ಣಕ್ರಿಯೆಗೆ ರಾಮಬಾಣ; ಸಂಪೂರ್ಣ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ
ನೇರಳೆ ಹಣ್ಣು ಭಾರತೀಯ ಸಂಸ್ಕೃತಿಯಲ್ಲಿ ಅತೀ ಮಹತ್ವದ ಔಷಧೀಯ ಫಲ. ಇದರ ಹಣ್ಣು, ಬೀಜ, ಎಲೆ ಮತ್ತು ತೊಗಟೆ—ಎಲ್ಲವೂ ಮಧುಮೇಹ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ, ರಕ್ತ ಶುದ್ಧೀಕರಣ ಹಾಗೂ ಬಾಯಿಯ ಆರೋಗ್ಯಕ್ಕೆ ಸಹಕಾರಿ. ಆಯುರ್ವೇದದಲ್ಲಿ ಕಷಾಯ ಗುಣ ಹೊಂದಿರುವ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಅತಿ ಸೇವನೆಯಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಜಾಗರೂಕರಾಗಿರುವುದು ಅವಶ್ಯಕ.
- Web contact
- Updated on: Jun 5, 2026
- 2:30 pm
ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್; ‘ನನಗೂ ಹೀಗೇ ಆಗಿತ್ತು’ ಎಂದ ನಟಿ
ರಣವೀರ್ ಸಿಂಗ್ 'ಡಾನ್ 3' ಚಿತ್ರದಿಂದ ನಿರ್ಗಮಿಸಿದ ನಂತರ ಬಾಲಿವುಡ್ನಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿದೆ. FWICE ಅಸಹಕಾರ ಆದೇಶ ಹೊರಡಿಸಿದ್ದು, ಎಕ್ಸೆಲ್ ಎಂಟರ್ಟೈನ್ಮೆಂಟ್ ₹45 ಕೋಟಿ ಪರಿಹಾರ ಕೇಳಿದೆ. ಸಂಭಾವನೆ ಹಾಗೂ ಸ್ಕ್ರಿಪ್ಟ್ ಭಿನ್ನಾಭಿಪ್ರಾಯ ಇದಕ್ಕೆ ಕಾರಣ. ಈ ವಿವಾದದ ಮಧ್ಯೆ, ನಟಿ ಕಂಗನಾ ರಣಾವತ್ ರಣವೀರ್ಗೆ ಸಾರ್ವಜನಿಕವಾಗಿ ಬೆಂಬಲ ಸೂಚಿಸಿ ಧೈರ್ಯ ತುಂಬಿದ್ದಾರೆ.
- Web contact
- Updated on: Jun 3, 2026
- 7:53 am
International Potato Day 2026: ಅಂತರರಾಷ್ಟ್ರೀಯ ಆಲೂಗಡ್ಡೆ ದಿನ; ಆರೋಗ್ಯದ ರಹಸ್ಯ ಮತ್ತು ಆಯುರ್ವೇದದ ಮಹಿಮೆ!
ಅಂತರರಾಷ್ಟ್ರೀಯ ಆಲೂಗಡ್ಡೆ ದಿನ: ಮೇ 30ರಂದು ಆಚರಿಸಲಾಗುವ ಈ ದಿನ ಆಲೂಗಡ್ಡೆಯ ಜಾಗತಿಕ ಮಹತ್ವವನ್ನು ಸಾರುತ್ತದೆ. ಇದು ಕೇವಲ ತರಕಾರಿಯಲ್ಲ, ಕೋಟ್ಯಂತರ ಜನರ ಆಹಾರ ಭದ್ರತೆ ಮತ್ತು ರೈತರ ಜೀವನಾಧಾರ. ಕಡಿಮೆ ನೀರು, ಹೆಚ್ಚು ಪೌಷ್ಟಿಕಾಂಶ ನೀಡುವ ಆಲೂಗಡ್ಡೆಯ ಇತಿಹಾಸ, ಆರೋಗ್ಯಕರ ಬಳಕೆ ಹಾಗೂ ಆಯುರ್ವೇದದ ದೃಷ್ಟಿಕೋನಗಳನ್ನು ಈ ಲೇಖನದಲ್ಲಿ ತಿಳಿಯಿರಿ. ಇದರ ಸರಿಯಾದ ಸೇವನೆ ನಮ್ಮ ಆರೋಗ್ಯಕ್ಕೆ ಉತ್ತಮ ಮಿತ್ರ.
- Web contact
- Updated on: May 30, 2026
- 1:21 pm