IND vs ENG: ಶತಕದ ಪಂದ್ಯದಲ್ಲಿ 78ನೇ ಏಕದಿನ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
Virat Kohli's Historic Half-Centuryಕಾರ್ಡಿಫ್ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಸೋಫಿಯಾ ಗಾರ್ಡನ್ಸ್ನಲ್ಲಿ ತಮ್ಮ ಮೊದಲ ರನ್ ಮತ್ತು 78ನೇ ಅಂತರರಾಷ್ಟ್ರೀಯ ಅರ್ಧಶತಕವನ್ನು ಪೂರೈಸಿದರು. ಇಂಗ್ಲೆಂಡ್ ವಿರುದ್ಧ ಇದು ಅವರ 14ನೇ 50+ ಸ್ಕೋರ್ ಆಗಿದ್ದು, ವಿವ್ ರಿಚರ್ಡ್ಸ್ ದಾಖಲೆ ಸರಿಗಟ್ಟಿದರು. ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಜೊತೆಗೂಡಿ ಪ್ರಮುಖ ಜೊತೆಯಾಟ ಕಟ್ಟಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.:
- Web contact
- Updated on: Jul 16, 2026
- 8:04 pm
‘ರಾಜಕುಮಾರ್ ನನ್ನ ವಸ್ತು, ನನ್ನವರಾಗೇ ಉಳಿದರು’; ಅಣ್ಣಾವ್ರ ಬಗ್ಗೆ ಪಾರ್ವತಮ್ಮ ಆಡಿದ್ದ ಮಾತಿದು
ಕನ್ನಡ ಚಿತ್ರರಂಗದ ಆದರ್ಶ ದಂಪತಿಗಳಾದ ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರ 53 ವರ್ಷಗಳ ಅಪರೂಪದ ದಾಂಪತ್ಯ ಬದುಕಿನ ಭಾವುಕ ಕ್ಷಣವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ರಾಜಕುಮಾರ್ ನನ್ನ ವಸ್ತು, ಅವರನ್ನು ನನ್ನಿಂದ ಯಾರೂ ಕಿತ್ಕೊಳ್ಳೋಕೆ ಆಗಲ್ಲ" ಎಂದು ಪಾರ್ವತಮ್ಮ ಅವರು ಅಣ್ಣಾವ್ರ ಮೇಲಿದ್ದ ಪ್ರೀತಿಯನ್ನು ಹೆಮ್ಮೆಯಿಂದ ಹಂಚಿಕೊಂಡಿರುವ ಹಳೆಯ ಸಂದರ್ಶನದ ವಿಡಿಯೋ ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.
- Web contact
- Updated on: Jul 15, 2026
- 10:46 am
ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ಹಾರ್ಮುಜ್ ಜಲಸಂಧಿಯಲ್ಲಿ 3 ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರ
ಅಮೆರಿಕವು ಇರಾನ್ ಮೇಲೆ ಭೀಕರ ವಾಯುದಾಳಿ ನಡೆಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ ಕಾರಣ ಅಮೆರಿಕ ಪ್ರತೀಕಾರ ತೀರಿಸಿದೆ. ಈ ಘಟನೆಯಿಂದ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಹಳಿ ತಪ್ಪುವ ಭೀತಿ ಎದುರಾಗಿದೆ. ಇರಾನ್ನ ತೈಲ ಪರವಾನಗಿ ರದ್ದು ಮತ್ತು ಜಲಸಂಧಿ ನಿಯಂತ್ರಣ ವಿವಾದದಿಂದ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆ ಕಂಡಿವೆ. ಇದು ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
- Web contact
- Updated on: Jul 8, 2026
- 7:48 am
ಕೆ ಸುಧಾಕರ್ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ? ಎಸ್ಆರ್ ವಿಶ್ವನಾಥ್ ಹೇಳಿದ್ದಿಷ್ಟು
ಬಿಜೆಪಿ ಸಭೆಯಲ್ಲಿ ಮುಖಂಡರಾದ ಎಸ್.ಆರ್. ವಿಶ್ವನಾಥ್ ಮತ್ತು ಕೆ. ಸುಧಾಕರ್ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಅಂತ್ಯಗೊಂಡಿವೆ. ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಅವರ ಮಧ್ಯಸ್ಥಿಕೆಯಿಂದ ಮಾತುಕತೆ ನಡೆದು ಸಮಸ್ಯೆ ಬಗೆಹರಿದಿದೆ. ಇನ್ನು ಮುಂದೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಪ್ರಕಟವಾಗುವುದಿಲ್ಲ ಎಂದು ಇಬ್ಬರೂ ಮುಖಂಡರು ಸ್ಪಷ್ಟಪಡಿಸಿದ್ದಾರೆ.
- Web contact
- Updated on: Jul 5, 2026
- 10:29 pm
ಗರ್ಭಿಣಿ ಆಗಿದ್ದರೂ ವರ್ಕೌಟ್ ನಿಲ್ಲಿಸದ ಸಮಂತಾ: ವಿಡಿಯೋ ನೋಡಿ
Samantha Ruth Prabhu: ಗರ್ಭಿಣಿ ಆಗುತ್ತಿರುವ ಸಮಂತಾ ಋತ್ ಪ್ರಭು, ತಾಯ್ತನಕ್ಕೆ ತಯಾರಾಗುತ್ತಿದ್ದಾರೆ. ವಿಶೇಷ ಡಯಟ್, ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ಬದಲಾವಣೆಗಳನ್ನು ಸಹ ನಟಿ ಮಾಡಿಕೊಂಡಿದ್ದಾರೆ. ತಾಯ್ತನಕ್ಕಾಗಿ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರಾದರೂ ಸಹ ಒಂದು ವಿಷಯದಲ್ಲಿ ಮಾತ್ರ ಬದಲಾವಣೆ ಮಾಡಿಕೊಂಡಿಲ್ಲ, ಅದುವೇ ವರ್ಕೌಟ್.
- Web contact
- Updated on: Jul 3, 2026
- 1:36 pm
ಅಕ್ಷಯ್ ಸಿನಿಮಾನಲ್ಲಿ ನಟಿಸಿ ಅವರಿಗೇ ಟಾಂಗ್ ಕೊಟ್ಟ ರವೀನಾ ಟಂಡನ್
Raveena Tandon-Akshay Kumar: ‘ವೆಲ್ ಕಮ್ ಟು ಜಂಗಲ್’ ಸಿನಿಮಾನಲ್ಲಿ ಬಾಲಿವುಡ್ನ ಹಲವಾರು ಮಂದಿ ನಟ, ನಟಿಯರು ನಟಿಸಿದ್ದಾರೆ. ಭಾರಿ ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾಕ್ಕಿದೆ. ಸಿನಿಮಾನಲ್ಲಿ ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್, ರವೀನಾ ಟಂಡನ್, ಮಾನುಷಿ ಚಿಲ್ಲರ್, ಲಾರಾ ದತ್ತ ಅಂಥಹಾ ಸ್ಟಾರ್ ನಟಿಯರು ಸಹ ಇದ್ದಾರೆ. ನಟಿ ರವೀನಾ ಟಂಡನ್ ಸಹ ಸಿನಿಮಾನಲ್ಲಿ ನಟಿಸಿದ್ದಾರೆ, ಆದರೆ ಸಿನಿಮಾ ಹಿಟ್ ಆದ ಬಳಿಕ ಸಿನಿಮಾದ ಬಗ್ಗೆ ಟೀಕೆ ಮಾಡಿದ್ದಾರೆ.
- Web contact
- Updated on: Jul 3, 2026
- 12:39 pm
ಯಶ್ ‘ಟಾಕ್ಸಿಕ್’ ವಿರುದ್ಧ ಸೆಣೆಸಲು ವಿವಾದ ಬಗೆಹರಿಸಿಕೊಂಡ ಶ್ರದ್ಧಾ ಕಪೂರ್
ಬಾಲಿವಿಡ್ ನಟಿ ಶ್ರದ್ಧಾ ಕಪೂರ್ ಅವರ 'ಈಥಾ' ಸಿನಿಮಾ ಬಿಡುಗಡೆಗೂ ಮುನ್ನವೇ ಎದುರಿಸುತ್ತಿದ್ದ ಶೀರ್ಷಿಕೆ ವಿವಾದಕ್ಕೆ ಈಗ ತೆರೆ ಬಿದ್ದಿದೆ. ವಿಠಾಬಾಯಿ ಅವರ ಕುಟುಂಬಸ್ಥರು ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ಚಿತ್ರಕ್ಕಿದ್ದ ಆರಂಭಿಕ ವಿಘ್ನವನ್ನು ನಿವಾರಿಸಿದ್ದಾರೆ. ವಿವಾದ ಮುಕ್ತವಾಗಿರುವ ಈ ಚಿತ್ರವು ಆಗಸ್ಟ್ 28 ರಂದು ಬಿಡುಗಡೆಯಾಗಲಿದ್ದು, ಆಗಸ್ಟ್ 26 ಕ್ಕೆ ಬರಲಿರುವ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾದೊಂದಿಗೆ ಬಾಕ್ಸ್ ಆಫೀಸ್ನಲ್ಲಿ ಭಾರಿ ಮುಖಾಮುಖಿಯಾಗಲು ಸಜ್ಜಾಗಿದೆ.
- Web contact
- Updated on: Jul 3, 2026
- 12:33 pm
ಅಂತರರಾಷ್ಟ್ರೀಯ ಕ್ರಿಕೆಟ್ಗೆ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ವಿದಾಯ
Ben Stokes Retires Mid-Match: ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ನಡುವೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಈ ಅನಿರೀಕ್ಷಿತ ಪ್ರಕಟಣೆ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿತು. ಮೈದಾನದಲ್ಲಿ ಬೌಲಿಂಗ್ ಮಾಡುತ್ತಿದ್ದಾಗಲೇ ಸುದ್ದಿ ಹೊರಬಿದ್ದಿದ್ದು, ಸ್ಟೋಕ್ಸ್ ತಮ್ಮ ನಿರ್ಧಾರದ ಬಗ್ಗೆ ತಂಡದ ಮುಂದೆ ಮೊದಲೇ ತಿಳಿಸಿದ್ದರು. ಅವರ ಅದ್ಭುತ ವೃತ್ತಿಜೀವನ ಮತ್ತು 2019 ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ಸ್ಮರಣೀಯ.
- Web contact
- Updated on: Jun 28, 2026
- 9:20 pm
ನಿರ್ಜಲ ಏಕಾದಶಿಯ ದಿನ ಯಾರಿಗೆ ಒಲಿಯಲಿದೆ ಅದೃಷ್ಟ? ನಿಮ್ಮ ರಾಶಿಯ ಆರ್ಥಿಕ ಸ್ಥಿತಿ, ಉದ್ಯೋಗ ಭವಿಷ್ಯ ಹೇಗಿದೆ?
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 25 ಜೂನ್ 2026ರ ದಿನ ಭವಿಷ್ಯವನ್ನು ವಿವರಿಸಿದ್ದಾರೆ. ಈ ದಿನದ ಪಂಚಾಂಗ, ಶುಭಕಾಲ, ರಾಹುಕಾಲ, ಗ್ರಹಗಳ ಸಂಚಾರ ಹಾಗೂ ನಿರ್ಜಲ ಏಕಾದಶಿಯ ಮಹತ್ವವನ್ನು ತಿಳಿಸಿದ್ದಾರೆ. ಅಲ್ಲದೆ, ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಆರ್ಥಿಕ, ಕೌಟುಂಬಿಕ, ವೈವಾಹಿಕ ಮತ್ತು ಆರೋಗ್ಯದ ಕುರಿತು ವಿಸ್ತೃತ ಫಲಗಳನ್ನು ನೀಡಿದ್ದಾರೆ.
- Web contact
- Updated on: Jun 25, 2026
- 6:24 am
TV9 ಬಿಗ್ ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಅದೆಷ್ಟೋ ಆದಿವಾಸಿಗಳು ಕರ್ನಾಟಕದಲ್ಲೂ ಸಹ ಬದುಕಿದ್ದು ಸತ್ತಂತೆ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಚಾಮರಾಜನಗರದ ಕಾಡಿನಲ್ಲಿ ವಾಸಿಸುತ್ತಿರುವ ಆನೆ ದಿಂಬ ಹಾಡಿಯ ಜನರಿಗೆ ಮೂಲಸೌಲಭ್ಯಗಳು, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳೇ ಸಿಗುತ್ತಿಲ್ಲ. ಕಳೆದ 10 ವರ್ಷಗಳಿಂದ ಹಾಡಿಯ ವಾಸಿಗಳು ರೇಷನ್ ಕಾರ್ಡ್ ಗಾಗಿ ಕಚೇರಿಯಿಂದ ಕಚೇರಿ ಅಲೆದು ರೋಸಿ ಹೋಗಿದ್ದರು. ಆದರೂ ರೇಷನ್ ಕಾರ್ಡ್ ಸಿಕ್ಕಿಲಲ್. ಹೀಗಾಗಿ ಈ ಬಗ್ಗೆ ನಿಮ್ಮ ಟಿವಿ9, ಆದಿವಾಸಿ ಸೋಲಿಗರು ಶೀರ್ಷಿಕೆ ಅಡಿ ಸುದ್ದಿ ಬಿತ್ತರಿಸಿತ್ತು. ಈ ಸುದ್ದಿ ಬೆನ್ನಲ್ಲೇ ಆದಿವಾಸಿಗಳ ಹೊಟ್ಟೆಗೆ ಅನ್ನ ಸಿಕ್ಕಿದೆ.
- Web contact
- Updated on: Jun 24, 2026
- 4:52 pm
ತ್ರಿಷಾ ಹಂಚಿಕೊಂಡಿದ್ದು ಹಳೆಯ ಫೋಟೋ? ಸಾಕ್ಷಿ ತಂದ ಫ್ಯಾನ್ಸ್
ನಟಿ ತ್ರಿಷಾ ಕೃಷ್ಣನ್ ಅವರು ದಳಪತಿ ವಿಜಯ್ ಜನ್ಮದಿನದಂದು ಹಂಚಿಕೊಂಡಿದ್ದ ಫೋಟೋ ಈಗ ಭಾರೀ ಚರ್ಚೆಯಾಗುತ್ತಿದೆ. ಅಭಿಮಾನಿಗಳು ಈ ಫೋಟೋ ಇತ್ತೀಚಿನದಲ್ಲ, ಹಳೆಯದು ಎಂದು ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾರೆ. ವಿಜಯ್ ಅವರ ಉಡುಗೆ, ಕೇಶ ವಿನ್ಯಾಸವನ್ನು ಹಿಂದಿನ ಫೋಟೋಗಳೊಂದಿಗೆ ಹೋಲಿಸಿ, ಇದು ಹೊಸ ಫೋಟೋ ಅಲ್ಲ ಎಂದು ನೆಟ್ಟಿಗರು ಸ್ಪಷ್ಟಪಡಿಸಿದ್ದಾರೆ.
- Web contact
- Updated on: Jun 24, 2026
- 12:00 pm
ಇಂದಿನ ವಾಯು ಗುಣಮಟ್ಟ ವರದಿ: ರಾಜ್ಯದ ಈ ನಗರದಲ್ಲಿದೆ ಅತ್ಯಂತ ಸ್ವಚ್ಛ ವಾತಾವರಣ; ನಿಮ್ಮ ಊರಿನ AQI ಮಟ್ಟ ಚೆಕ್ ಮಾಡಿ
ರಾಜ್ಯದಲ್ಲಿ ನಿರಂತರ ಮಳೆ ಮತ್ತು ತಂಪು ಗಾಳಿಯಿಂದ ವಾಯು ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ 'ಉತ್ತಮ' AQI ದಾಖಲಾಗಿದೆ. ಮೈಸೂರಿನಲ್ಲಿ ರಾಜ್ಯದಲ್ಲೇ ಅತ್ಯಂತ ಶುದ್ಧ ಗಾಳಿ ಇದೆ. ಆದರೆ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಕೈಗಾರಿಕೆ, ನಿರ್ಮಾಣ ಕಾರ್ಯಗಳಿಂದ ಮಾಲಿನ್ಯ ಹೆಚ್ಚಿದ್ದು, ಅಸ್ತಮಾ ರೋಗಿಗಳಿಗೆ ಎಚ್ಚರಿಕೆ ನೀಡಲಾಗಿದೆ. N95 ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ.
- Web contact
- Updated on: Jun 20, 2026
- 7:30 am