KSCA ಅಂಡರ್ 14 ಕ್ರಿಕೆಟ್: ಬೆಂಗಳೂರಿನ ವಿದ್ಯಾನಿಕೇತನ ಶಾಲೆಗೆ 410 ರನ್ಗಳ ಭರ್ಜರಿ ಜಯ
2025-26ನೇ ಸಾಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಬಿ.ಟಿ.ಆರ್ 14 ವರ್ಷದೊಳಗಿನವರ ಎರಡನೇ ಡಿವಿಷನ್ ಕ್ರಿಕೆಟ್ ಪಂದ್ಯದಲ್ಲಿ ಬೆಂಗಳೂರಿನ ವಿದ್ಯಾನಿಕೇತನ ಶಾಲೆ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ , ಬೌಲಿಂಗ್ನ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕಾರ್ಮೆಲ್ ಶಾಲೆಯನ್ನು ಮಣಿಸಿದೆ. ಅದು ಬರೋಬ್ಬರಿ 410 ರನ್ಗಳಿಂದ ಗೆಲುವಿನ ನಗೆ ಬೀರಿದೆ.
- Web contact
- Updated on: Dec 25, 2025
- 9:11 pm
ಹೋಟೆಲ್, ರೆಸ್ಟೋರೆಂಟ್, ಬೇಕರಿಗಳ ಮೇಲೆ ಅಧಿಕಾರಿಗಳ ದಾಳಿ: 2-3 ದಿನದ ಹಳೆಯ ಮಾಂಸ, ಪನ್ನೀರ್ ಪತ್ತೆ
ರಾಯಚೂರಿನ ಹೋಟೆಲ್, ರೆಸ್ಟೋರೆಂಟ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿ, ಕಳಪೆ ಹಾಗೂ ಕಲಬೆರಕೆ ಆಹಾರ ಪದಾರ್ಥಗಳನ್ನು ಪತ್ತೆ ಮಾಡಿದೆ. ಹಳೆಯ ಮಾಂಸ, ಪನ್ನೀರ್, ಅನೈರ್ಮಲ್ಯ ಮತ್ತು ಪರವಾನಗಿ ಇಲ್ಲದಿರುವುದು ಕಂಡುಬಂದಿದೆ. ಅಪಾಯಕಾರಿ ಸಿಲಿಂಡರ್ಗಳನ್ನು ಸಹ ಜಪ್ತಿ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿದ 19 ಸಂಸ್ಥೆಗಳಿಗೆ 1.08 ಲಕ್ಷ ದಂಡ ವಿಧಿಸಿ, ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಎಚ್ಚರದಿಂದಿರಲು ಸಲಹೆ.
- Web contact
- Updated on: Dec 25, 2025
- 1:13 pm
‘ಇದು ಬೆಂಗಳೂರಿನಲ್ಲಿ ಸಹಿಸಲಾಗದ ಕ್ಷಣ’: ಟ್ರಾಫಿಕ್ನಲ್ಲಿ ಕಸದ ಲಾರಿಯ ಪಕ್ಕದಲ್ಲಿ ಸಿಲುಕಿಕೊಂಡ ಆಟೋದಲ್ಲಿದ್ದ ಮಹಿಳೆ
ಬೆಂಗಳೂರಿನ ಟ್ರಾಫಿಕ್ ಮತ್ತು ನೈರ್ಮಲ್ಯದ ಸಮಸ್ಯೆಗಳನ್ನು ಪವಿತ್ರಾ ಕುಲಕರ್ಣಿ ಅವರ ವೈರಲ್ ವಿಡಿಯೋದ ಮೂಲಕ ತಿಳಿಸಿದ್ದಾರೆ. ತಮ್ಮ ರಿಕ್ಷಾ ಪಕ್ಕದಲ್ಲೇ ಕಸ ಲಾರಿಯೊಂದು ಬಂದು ನಿಂತಿದೆ. ತನ್ನ ಗಮ್ಯಸ್ಥಾನವನ್ನು ತಲುಪಲು 78 ನಿಮಿಷಗಳು ಬೇಕು. ಜತೆಗೆ ಟ್ರಾಫಿಕ್, ಅದರ ನಡುವೆ ಈ ಕಸ ವಾಸನೆ, ಇದು ಪ್ರತಿದಿನದ ನರಕಯಾತನೆ ಎಂದು ಹೇಳಿದ್ದಾರೆ.
- Web contact
- Updated on: Dec 23, 2025
- 11:35 am
Pushya Masa: ಪಿತೃ, ಶನಿ ದೋಷದಿಂದ ಮುಕ್ತಿ ಪಡೆಯಲು ಪುಷ್ಯ ಮಾಸದಲ್ಲಿ ಈ ರೀತಿ ಮಾಡಿ
ಪುಷ್ಯ ಮಾಸವು ಚಂದ್ರನ ಕ್ಯಾಲೆಂಡರ್ನ 10ನೇ ಮಾಸ. ಇದು ಮಕರ ಸಂಕ್ರಾಂತಿಯಿಂದ ಆರಂಭವಾಗಿ ಉತ್ತರಾಯಣಕ್ಕೆ ದಾರಿ ಮಾಡಿಕೊಡುತ್ತದೆ. ಆಧ್ಯಾತ್ಮಿಕವಾಗಿ ಮಹತ್ವಪೂರ್ಣವಾಗಿದ್ದರೂ, ಇದನ್ನು 'ಶೂನ್ಯ ಮಾಸ' ಎಂದು ಪರಿಗಣಿಸಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಪಿತೃ ದೋಷ, ಶನಿ ದೋಷ ನಿವಾರಣೆಗೆ ಪೂಜೆ, ತೈಲಾಭಿಷೇಕ ಮತ್ತು ದಾನ ಮಾಡುವುದು ವಿಶೇಷ ಫಲಗಳನ್ನು ನೀಡುತ್ತದೆ. ಲಕ್ಷ್ಮಿ ನಾರಾಯಣ ಆರಾಧನೆ, ಪವಿತ್ರ ಸ್ನಾನ, ವೇದ ಅಧ್ಯಯನಕ್ಕೆ ಉತ್ತಮ.
- Web contact
- Updated on: Dec 20, 2025
- 9:32 am
‘ನಾನು ನಿಮ್ಮ ಭಾಷೆ ಕಲಿತಿದ್ದು ಪುನೀತ್ಗಾಗಿ’; ಕನ್ನಡದ ಬಗ್ಗೆ ಪ್ರೀತಿ ಹೊರ ಹಾಕಿದ ಪ್ರಿಯಾ ಆನಂದ್
ನಟಿ ಪ್ರಿಯಾ ಆನಂದ್ ಅವರು ಪುನೀತ್ ರಾಜ್ಕುಮಾರ್ ಅವರಿಗಾಗಿ ಕನ್ನಡ ಕಲಿತೆ ಎಂದಿದ್ದಾರೆ. ‘ರಾಜಕುಮಾರ’ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ, ಪುನೀತ್ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು. ಇತ್ತೀಚೆಗೆ ‘ಬಲರಾಮನ ದಿನಗಳು’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ಕನ್ನಡ ಕಲಿಯಲು ಪ್ರೇರಣೆ ನೀಡಿದರು ಎಂದರು.
- Web contact
- Updated on: Dec 18, 2025
- 12:51 pm
ಸಚಿವ ಕೃಷ್ಣಭೈರೇಗೌಡ ವಿರುದ್ಧ 21 ಎಕರೆ ಜಮೀನು ಕಬಳಿಕೆ ಆರೋಪ: ಬಿಜೆಪಿಯಿಂದ ದಾಖಲೆ ಬಿಡುಗಡೆ
ಕಂದಾಯ ಸಚಿವ ಕೃಷ್ಣಭೈರೇಗೌಡ ಒಂದ ರೀತಿಯ ವೈಟ್ ಕಾಲರ್ ರಾಜಕಾರಣಿ. ಅವರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳು ಇಲ್ಲ. ಹೀಗಾಗಿ ಅವರ ಕಾರ್ಯ ವೈಖರಿ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಹಾಸನಾಂಬೆ ಉತ್ಸದಲ್ಲಿ ಖುದ್ದು ಮೈಕ್ ಹಿಡಿದು ಓಡಾಡಿದ್ದು, ಅಭಿವೃದ್ಧಿ ಕೆಲಸ, ಇಲಾಖೆ ಕಾರ್ಯದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಬಗ್ಗೆ ಶ್ಲಾಘನೆಗಳು ವ್ಯಕ್ತವಾಗಿವೆ. ಆದ್ರೆ, ಇದೀಗ ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದದೆ. ಇನ್ನು ಇದಕ್ಕೆ ಸಚಿವರು ಸಹ ಸ್ಪಷ್ಟನೆ ನೀಡಿದ್ದಾರೆ.
- Web contact
- Updated on: Dec 17, 2025
- 3:31 pm
ಕೃತಕ ಬುದ್ಧಿಮತ್ತೆ ಮತ್ತು ಮಾನವೀಯತೆ: ಬೆಂಗಳೂರಿನ ಪ್ರೆಸಿಡೆನ್ಸಿ ವಿವಿಯಲ್ಲಿ ಸ್ಪ್ಯಾನಿಷ್ ರಾಯಭಾರಿಯಿಂದ ಪುಸ್ತಕ ಬಿಡುಗಡೆ
ಸ್ಪೇನ್ ರಾಯಭಾರಿ ಜುವಾನ್ ಆಂಟೋನಿಯೊ ಮಾರ್ಚ್ ಪೂಜೋಲ್ ಅವರು ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ‘ದಿ ಗ್ರೇಟ್ ರೀಸೆಟ್’ ಪುಸ್ತಕ ಬಿಡುಗಡೆ ಮಾಡಿ, ಕೃತಕ ಬುದ್ಧಿಮತ್ತೆ ಮತ್ತು ಮಾನವರ ನಡುವಿನ ನೈತಿಕ ಛೇದಕದ ಕುರಿತು ಮಾತನಾಡಿದರು. AI ಯುಗದಲ್ಲಿ ಮಾನವ ಕೇಂದ್ರಿತ ಚಿಂತನೆ, ಸೃಜನಶೀಲತೆ ಮತ್ತು ನೈತಿಕ ಜವಾಬ್ದಾರಿಯ ಅಗತ್ಯವನ್ನು ಒತ್ತಿ ಹೇಳಿದರು.
- Web contact
- Updated on: Dec 17, 2025
- 10:43 am
ಎಣ್ಣೆ ಪಾರ್ಟಿಗೆ ಬಂದು ಗೆಳೆಯನ ಹೆಂಡ್ತಿ ಜತೆ ಚಕ್ಕಂದ: ಕಣ್ಣಾರೆ ಕಂಡ ಪತಿ ಮಾಡಿದ್ದೇನು ಗೊತ್ತಾ?
ಇಬ್ಬರು ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟದೇ ಇರಬಹುದು. ಆದರೆ ಒಂದೇ ತಟ್ಟೆಯಲ್ಲಿ ಉಂಡು- ಕುಡಿದು ಬೆಳೆದವರು. ಆದರೆ ತಮ್ಮನ ರೀತಿಯಲ್ಲಿ ಗೆಳೆಯನನ್ನು ಮನೆಗೆ ಕರೆದು ಎಣ್ಣೆ ಕೊಟ್ಟು ಊಟ ಹಾಕಿದ್ದಾನೆ. ಆದ್ರೆ, ಸ್ನೇಹಿತ ಮಾತ್ರ ಆತನ ಮಡದಿ ಮೇಲೆ ಕಣ್ಣು ಹಾಕಿದ್ದಾನೆ. ಎಣ್ಣೆಗೆ ಸೈಡ್ಸ್ ತರಲು ಹೋದಾಗ ಗೆಳೆಯ ತನ್ನ ಹೆಂಡ್ತಿ ಜತೆ ಚಕ್ಕಂದವಾಡತ್ತಿರುವುದನ್ನು ಕಣ್ಣಾರೆ ಕಂಡಿದ್ದಾನೆ. ಮೇಲೆ ನಡೆದಿದ್ದು ಎಲ್ಲವೂ ರಕ್ತಸಿಕ್ತ ಚರಿತ್ರೆ.
- Web contact
- Updated on: Dec 12, 2025
- 10:37 pm
ಚಿಕ್ಕಬಳ್ಳಾಪುರ: ಸರಣಿ ಅಪಘಾತಕ್ಕೆ ವೃದ್ದ ಬಲಿ; ಆಟೋ ಛಿದ್ರ ಛಿದ್ರ
ಚಿಕ್ಕಬಳ್ಳಾಪುರ ಜಿಲ್ಲೆ ಭಾಗ್ಯನಗರ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದ ಸರಣಿ ಅಪಘಾತದಲ್ಲಿ ಓರ್ವ ವೃದ್ದ ಅಸುನೀಗಿದ್ದಾರೆ. ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ರಿಕ್ಷಾ ಬಸ್ಗೆ ಗುದ್ದಿದೆ. ಘಟನೆಯಲ್ಲಿ 10 ಜನ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.
- Web contact
- Updated on: Dec 9, 2025
- 7:32 pm
ದುಬೈನಲ್ಲಿ ಅಮ್ಮನ 60ನೇ ಹುಟ್ಟುಹಬ್ಬ: ‘ಇದು ನಿನ್ನ ಮದುವೆಯಂತೆ ಭಾಸವಾಯಿತು ಅಮ್ಮ’
ಉದ್ಯಮಿ ಆಕಾಶ್ ಮೆಹ್ತಾ ತಮ್ಮ ತಾಯಿಯ 60ನೇ ಹುಟ್ಟುಹಬ್ಬವನ್ನು ದುಬೈನಲ್ಲಿ ಅದ್ದೂರಿಯಾಗಿ ಆಚರಿಸಿದ್ದಾರೆ. ಮಗನ ಈ ಅದ್ಭುತ ಆಯೋಜನೆ ಮತ್ತು ತಾಯಿಯ ಮೇಲಿನ ಪ್ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಭಕ್ತಿಗೀತೆಗಳು, ಮರುಭೂಮಿ ಸಫಾರಿ ಸೇರಿದಂತೆ ಅನೇಕ ವಿಚಾರಗಳನ್ನು ಒಳಗೊಂಡ ಈ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದ್ದು, ಹಲವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
- Web contact
- Updated on: Dec 8, 2025
- 10:13 am
ಆರ್ಸಿಬಿ ಅಭಿಮಾನಿಗಳಿಗೆ ಡಿಕೆ ಶಿವಕುಮಾರ್ ಗುಡ್ ನ್ಯೂಸ್ ನೀಡಿದ ಬೆನ್ನಲ್ಲೇ ಬೆಂಗಳೂರಲ್ಲಿ ಐಪಿಎಲ್ಗೆ ಎದುರಾಯ್ತು ಹೊಸ ವಿಘ್ನ!
IPL 2026: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಪ್ರಯತ್ನಗಳಿಗೆ ಹಿರಿಯ ವಕೀಲ ಅಮೃತೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಪಂದ್ಯಗಳನ್ನು ಆಯೋಜಿಸದಂತೆ ಸರ್ಕಾರ ಹಾಗೂ ಹೈಕೋರ್ಟ್ಗೆ ಅವರು ಮನವಿ ಮಾಡಿದ್ದಾರೆ. ಐಪಿಎಲ್ ಸೇರಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯ ಆಯೋಜನೆಗೆ ಪ್ರಯತ್ನಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ ಬೆನ್ನಲ್ಲೇ ಈ ಮನವಿ ಸಲ್ಲಿಕೆಯಾಗಿರುವುದು ಮಹತ್ವ ಪಡೆದಿದೆ.
- Web contact
- Updated on: Dec 8, 2025
- 9:43 am
ಇಂಡಿಗೋ ವೈಫಲ್ಯದ ಜೊತೆಗೆ ವಿದೇಶಿ ಕೈವಾಡ? ಭಾರತೀಯ ವಿಮಾನಯಾನದ ಬೆನ್ನೆಲುಬು ಮುರಿದದ್ದು ಯಾರು?
ಭಾರತದ ವಿಮಾನಯಾನ ಕ್ಷೇತ್ರವು ಪ್ರಸ್ತುತ ಒಂದು ಕಠಿಣ ವಾಸ್ತವವನ್ನು ಎದುರಿಸುತ್ತಿದೆ. ಮಾರುಕಟ್ಟೆಯಲ್ಲಿ ಬಹುತೇಕ ಏಕಸ್ವಾಮ್ಯವನ್ನು ಸಾಧಿಸಿರುವ ಇಂಡಿಗೋ (IndiGo) ವಿಮಾನಯಾನ ಸಂಸ್ಥೆಯ ಇತ್ತೀಚಿನ ತಲ್ಲಣಗಳು, ಕೇವಲ ತಾಂತ್ರಿಕ ದೋಷಗಳು ಅಥವಾ ಸಣ್ಣಪುಟ್ಟ ನಿರ್ವಹಣಾ ವೈಫಲ್ಯಗಳಾಗಿ ಉಳಿದಿಲ್ಲ. ಈ ಬಿಕ್ಕಟ್ಟು, ದೇಶದ ಆರ್ಥಿಕತೆಗೆ ಮತ್ತು ವಾಯುಯಾನ ಕ್ಷೇತ್ರದ ಭವಿಷ್ಯಕ್ಕೆ ದೊಡ್ಡ ಸವಾಲಾಗಿದೆ.
- Web contact
- Updated on: Dec 6, 2025
- 10:31 am