ವಾರದ ಪ್ರೇಮ – ಪ್ರೀತಿ ಭವಿಷ್ಯ: ಆಗಸ್ಟ್ 30 ರಿಂದ ಸೆಪ್ಟೆಂಬರ್ 5ರವರೆಗೆ ಪ್ರೇಮಿಗಳ ಬಾಳಲ್ಲಿ ಶುಕ್ರ ತರಲಿದ್ದಾನೆ ಹೊಸ ಚೈತನ್ಯ
ಆಗಸ್ಟ್ 30ರಿಂದ ಸಪ್ಟೆಂಬರ್ 05, 2026ರವರೆಗೆ ಅನುರಾಗ ಕಾರಕ ಶುಕ್ರನ ಪ್ರಭಾವದಿಂದ ಪ್ರೇಮ ಸಂಬಂಧಗಳು ಹೊಸ ತಿರುವು ಪಡೆಯಲಿವೆ. ಭಿನ್ನಾಭಿಪ್ರಾಯಗಳು ನಿವಾರಣೆಯಾಗಲು ಸುವರ್ಣಾವಕಾಶವಿದೆ. ಪ್ರತಿ ರಾಶಿಯವರು ಪ್ರೀತಿಯಲ್ಲಿ ಹೇಗೆ ಸಾಗಬೇಕು, ಗ್ರಹಗಳ ಪ್ರಭಾವದಿಂದ ಯಾವ ಬದಲಾವಣೆಗಳು ನಿರೀಕ್ಷಿತವೆಂದು ಈ ವಾರದ ಪ್ರೇಮ ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ನಿಮ್ಮ ಪ್ರೇಮ ಜೀವನವನ್ನು ಸುಧಾರಿಸಲು ಈ ಸಲಹೆಗಳು ಸಹಾಯಕವಾಗಿವೆ.
- Web contact
- Updated on: Aug 29, 2026
- 5:13 pm
ವಾರ ಭವಿಷ್ಯ: ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ರಾಶಿಯವರಿಗೆ ವೃತ್ತಿರಂಗದಲ್ಲಿ ಗೋಲ್ಡನ್ ಟೈಮ್
ಉದ್ಯೋಗ ಭವಿಷ್ಯ: ಸೆಪ್ಟೆಂಬರ್ ತಿಂಗಳಿನಲ್ಲಿ ಔದ್ಯೋಗಿಕ ಪ್ರಗತಿ ಕಂಡುಬರಲಿದ್ದು, ಕಾರ್ಯದಲ್ಲಿ ಉತ್ಸಾಹ ಹೆಚ್ಚಲಿದೆ. ಆರ್ಥಿಕ ವೃದ್ಧಿ ಸಾಧಾರಣವಾಗಿದ್ದರೂ, ನೆಮ್ಮದಿ ಲಭಿಸುತ್ತದೆ. ಹವ್ಯಾಸದಿಂದ ವೃತ್ತಿ ಕೈಗೊಂಡವರಿಗೆ ಸೃಜನಾತ್ಮಕತೆ ಹೆಚ್ಚಲಿದೆ. ವಿವಿಧ ರಾಶಿಗಳಿಗೆ ಹೊಸ ಅವಕಾಶಗಳು, ಬಡ್ತಿ, ವಿದೇಶಿ ಉದ್ಯೋಗ ಹಾಗೂ ಕೆಲವು ಸವಾಲುಗಳು ಎದುರಾಗಲಿವೆ. ತಾಳ್ಮೆ ಮತ್ತು ಸೃಜನಾತ್ಮಕ ನಿರ್ಧಾರಗಳು ವೃತ್ತಿ ಯಶಸ್ಸಿಗೆ ಮುಖ್ಯ.
- Web contact
- Updated on: Aug 29, 2026
- 4:56 pm
ನೇಪಾಳ-ಟಿಬೆಟ್ ಜಲಪ್ರಳಯ: ಸಾವಿನ ಸಂಖ್ಯೆ 584ಕ್ಕೆ ಏರಿಕೆ, 2,482 ಮಂದಿ ನಾಪತ್ತೆ, 320 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ
ನೇಪಾಳ ಮತ್ತು ಟಿಬೆಟ್ನಲ್ಲಿ ಸಂಭವಿಸಿದ ಭೀಕರ ಭೋಟೆಕೋಶಿ-ತ್ರಿಶೂಲಿ ಪ್ರಕೃತಿ ವಿಕೋಪದಿಂದಾಗಿ 584 ಮಂದಿ ಮೃತಪಟ್ಟು, 2,482ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ದುರಂತದಲ್ಲಿ 320ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ಸಂಪರ್ಕ ಕಳೆದುಕೊಂಡಿದ್ದಾರೆ. ಜಲವಿದ್ಯುತ್ ಯೋಜನೆಯ 400ಕ್ಕೂ ಹೆಚ್ಚು ಸಿಬ್ಬಂದಿ ಸುರಂಗದಲ್ಲಿ ಸಿಲುಕಿಕೊಂಡಿದ್ದು, ಆಹಾರ ಮತ್ತು ನೀರಿಲ್ಲದೆ ಪರದಾಡುತ್ತಿದ್ದಾರೆ. ಪ್ರವಾಹ ಮತ್ತು ಹಿಮಪಾತದ ಭೀತಿ ಮುಂದುವರಿದಿದೆ.
- Web contact
- Updated on: Aug 29, 2026
- 9:45 am
ನೇಪಾಳದ ಪ್ರವಾಹದಿಂದ ರಕ್ಷಿಸಲ್ಪಟ್ಟ ತಮಿಳುನಾಡಿನ 21 ಯಾತ್ರಿಕರನ್ನು ಸ್ವಾಗತಿಸಿದ ವಿದೇಶಾಂಗ ಸಚಿವ ಜೈಶಂಕರ್
ಪ್ರವಾಹದಿಂದಾಗಿ ನೇಪಾಳದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 538ಕ್ಕೇರಿದ್ದು, ಇನ್ನೂ 320ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ಸಾಗಿದ್ದು, ಭಾರತ ಸರ್ಕಾರವು ನೇಪಾಳಕ್ಕೆ ವೈದ್ಯಕೀಯ ನೆರವು, ಪರಿಹಾರ ಸಾಮಗ್ರಿಗಳು ಮತ್ತು ತಾಂತ್ರಿಕ ತಂಡಗಳನ್ನು ಕಳುಹಿಸಿಕೊಡುತ್ತಿದೆ. ತಮಿಳುನಾಡು ಸರ್ಕಾರದ ಸಚಿವರಾದ ಆಧವ್ ಅರ್ಜುನ ಮತ್ತು ರಾಜ್ಮೋಹನ್ ಸೇರಿದಂತೆ ಹಲವು ಪ್ರಮುಖರು ಈ ವೇಳೆ ಉಪಸ್ಥಿತರಿದ್ದು, ಯಾತ್ರಿಕರನ್ನು ಭೇಟಿಯಾಗಿ ಅವರ ಕ್ಷೇಮ ಸಮಾಚಾರ ವಿಚಾರಿಸಿದರು. ಇದೇ ವೇಳೆ ಸಚಿವರು ದೆಹಲಿಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಮತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಅದರ ಕಾರ್ಯಾಚರಣೆಯನ್ನು ಪರಿಶೀಲಿಸಿದರು.
- Web contact
- Updated on: Aug 28, 2026
- 7:56 pm
ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 8.89 ಕೋಟಿ ರೂ. ಹಗರಣ: ‘ಟೆಂಪಲ್ ರನ್’ ಮಾಡುತ್ತಿದ್ದ ಪ್ರಮುಖ ರೂವಾರಿ ಸೇರಿ ಮೂವರ ಬಂಧನ
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (KUDA) ನಡೆದ ₹8.89 ಕೋಟಿ ಸೈಟ್ ಅಕ್ರಮ ಮತ್ತು ಹಣ ವಂಚನೆ ಪ್ರಕರಣದಲ್ಲಿ ಪ್ರಮುಖ ರೂವಾರಿ ಹೊರಗುತ್ತಿಗೆ ನೌಕರ ರವೀಂದ್ರಕುಮಾರ್, ಪತ್ನಿ ರಮಾ, ಸಹೋದರ ಅನಿಲ್ ಕುಮಾರ್ ಬಂಧನವಾಗಿದೆ. 40ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದ್ದು, 3 ಕೋಟಿ ರೂ.ಗೂ ಅಧಿಕ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಮಾಜಿ ಆಯುಕ್ತರ ಬಂಧನಕ್ಕೂ ಬಲೆ ಬೀಸಲಾಗಿದೆ. ಸಚಿವರು ಆಗಸ್ಟ್ 30ರಂದು ಕೊಪ್ಪಳಕ್ಕೆ ಭೇಟಿ ನೀಡಲಿದ್ದಾರೆ.
- Web contact
- Updated on: Aug 28, 2026
- 3:52 pm
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
ಸಿಂದಗಿ ಪಟ್ಟಣದ ಹಳೆ ಬಜಾರ್ನಲ್ಲಿ ಕಿಯಾ ಕಾರೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ನಡೆದಿದೆ. ಕಾರಿನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎನ್ನಲಾಗಿದ್ದು, ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಹೊರಗೆ ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಮಾರ್ಕಪ್ಪನಹಳ್ಳಿ ಗ್ರಾಮದ ಅನಂದ ಮದುವೆಯಾಗಲೆಂದು ಕನ್ಯೆ ನೋಡಲು ಸಿಂದಗಿ ಬಂದಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ.
- Web contact
- Updated on: Aug 26, 2026
- 6:24 pm
FIR ಹಾಕಿದ್ರೂ ಬೆದರಬೇಡಿ: ನೈಸ್ ರಸ್ತೆಯಲ್ಲಿ ಟೋಲ್ ಕಟ್ಟದಂತೆ ಕುಮಾರಸ್ವಾಮಿ ಮತ್ತೆ ಕರೆ
ನೈಸ್ ರಸ್ತೆ ಟೋಲ್ ಪಾವತಿ ವಿಚಾರವಾಗಿ ವಾಹನ ಸವಾರರಲ್ಲಿ ಗೊಂದಲ ಉಂಟಾಗಿದೆ. ವಾಹನ ಸವಾರರು ನೈಸ್ ರಸ್ತೆ ಬಳಕೆಗೆ ಟೋಲ್ ಕಟ್ಟಬೇಡಿ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದು, ಇದಾದ ಬಳಿಕ ಜನರು ಟೋಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ನಿತ್ಯ ವಾಗ್ದಾದ , ಗಲಾಟೆಗಳು ನಡೆಯುತ್ತಿವೆ. ಇದರ ಮಧ್ಯೆ ಇದೀಗ ಮತ್ತೊಮ್ಮೆ ಕುಮಾರಸ್ವಾಮಿ, ಟೋಲ್ ಕಟ್ಟದಂತೆ ಕರೆ ನೀಡಿದ್ದಾರೆ.
- Web contact
- Updated on: Aug 21, 2026
- 5:26 pm
ಕರ್ನಾಟಕದಲ್ಲಿ 4 ತಿಂಗಳ ಅವಧಿಯಲ್ಲಿ 725 ಬಾಲಕಿಯರ ಗರ್ಭಧಾರಣೆಯ ಪ್ರಕರಣ ಬೆಳಕಿಗೆ
2024-25ಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕಿಶೋರಿಯರ ಗರ್ಭಧಾರಣೆ ಪ್ರಮಾಣ ಇಳಿಕೆಯಾಗಿದ್ದರೂ, ಕಳೆದ 4 ತಿಂಗಳಲ್ಲಿ 725 ಬಾಲಕಿಯರು ಗರ್ಭಿಣಿಯಾಗಿರುವುದು ಸರ್ಕಾರದ ಅಂಕಿಅಂಶದಿಂದ ಬಹಿರಂಗವಾಗಿದೆ. ರಾಯಚೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು 100 ಪ್ರಕರಣಗಳು ದಾಖಲಾಗಿವೆ. ಬಾಲ್ಯ ವಿವಾಹಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಕಿಶೋರಿಯರ ಗರ್ಭಧಾರಣೆಗೆ ಹಲವು ಇತರ ಕಾರಣಗಳು ಕಾರಣವಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
- Web contact
- Updated on: Aug 20, 2026
- 4:36 pm
ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಮೂತ್ರ ಕುಡಿಸಿದ ಸಹಪಾಠಿ, ಬಾಯಿ ರುಚಿ ಕೆಟ್ಟಿದ್ದರೆ ಚಾಕೊಲೇಟ್ ತಿನ್ನಿ ಎಂದ ಮುಖ್ಯೋಪಾಧ್ಯಾಯರು
ಮಧ್ಯಪ್ರದೇಶದ ಗುನಾ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. 5ನೇ ತರಗತಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯರಿಗೆ ಮೂತ್ರ ಕುಡಿಸಿದ್ದಾನೆ. ಮುಖ್ಯೋಪಾಧ್ಯಾಯರು ದೂರಿಗೆ ನಿರ್ಲಕ್ಷ್ಯದಿಂದ 'ಚಾಕೊಲೇಟ್ ತಿನ್ನಿ' ಎಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಜಿಲ್ಲಾಡಳಿತ ತನಿಖೆಗೆ ಆದೇಶಿಸಿದ್ದು, ಮಕ್ಕಳ ಸುರಕ್ಷತೆ ಹಾಗೂ ಶಿಕ್ಷಣ ಇಲಾಖೆಯ ಹೊಣೆಗಾರಿಕೆಯ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.
- Web contact
- Updated on: Aug 19, 2026
- 11:25 am
‘ಬಂಟಿ ಔರ್ ಬಬ್ಲಿ’ ಶೈಲಿಯಲ್ಲಿ ಐಷಾರಾಮಿ ಕಾರುಗಳ ಕಳವು: ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ರಾಜಸ್ಥಾನದ ಹೈಟೆಕ್ ಪ್ರೇಮಿಗಳು
ಬೆಂಗಳೂರು ಪೊಲೀಸರು 'ಬಂಟಿ ಔರ್ ಬಬ್ಲಿ' ಎಂದೇ ಖ್ಯಾತರಾಗಿದ್ದ ಐಷಾರಾಮಿ ಕಾರು ಕಳ್ಳರ ಜೋಡಿಯನ್ನು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಸತ್ಯೇಂದ್ರ ಸಿಂಗ್ ಮತ್ತು ಪ್ರಮೀಳಾ ಠಾಕೂರ್ ನಕಲಿ ಕೀಗಳನ್ನು ಬಳಸಿ, ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ದುಬಾರಿ ಕಾರುಗಳನ್ನು ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಯಶಸ್ವಿಯಾಗಿ ಸೆರೆಹಿಡಿದು, ಕದ್ದ ಫಾರ್ಚೂನರ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಿಂದ ಅಂತರರಾಜ್ಯ ಕಳ್ಳರ ಜಾಲ ಭೇದಿಸಿದಂತಾಗಿದೆ.
- Web contact
- Updated on: Aug 19, 2026
- 9:10 am
ಸಾರಿಗೆ ಇಲಾಖೆಗೆ ತೆರಿಗೆ ವಂಚಿಸುತ್ತಿದ್ದ ಕಾರು ಮಾಲೀಕರಿಗೆ ಶಾಕ್: 3 ಕೋಟಿ ರೂ. ದಂಡ ವಸೂಲಿ ಮಾಡಿದ RTO
ಬೆಂಗಳೂರು ಆರ್ಟಿಒ ಇಂದು ತೆರಿಗೆ ವಂಚಿಸುತ್ತಿದ್ದ ಹೊರರಾಜ್ಯ ನೋಂದಣಿಯ 200ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿ, 3 ಕೋಟಿ ರೂ. ದಂಡ ವಸೂಲಿ ಮಾಡಿದೆ. ಕರ್ನಾಟಕದಲ್ಲಿ ರಸ್ತೆ ತೆರಿಗೆ ಕಟ್ಟದೆ ಐಷಾರಾಮಿ ವಾಹನಗಳನ್ನು ಚಲಾಯಿಸುತ್ತಿದ್ದವರ ವಿರುದ್ಧ ಈ ಬೃಹತ್ ಕಾರ್ಯಾಚರಣೆ ನಡೆಸಲಾಗಿದೆ. ರಾಜ್ಯ ಸಾರಿಗೆ ಇಲಾಖೆಗೆ ನೂರಾರು ಕೋಟಿ ರಾಜಸ್ವ ನಷ್ಟವಾಗುತ್ತಿದ್ದು, ಈ ತಿಂಗಳಾಂತ್ಯದವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ.
- Web contact
- Updated on: Aug 17, 2026
- 2:37 pm
ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್ ಪಡೆದಿಲ್ಲ, ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದ ಖಾದರ್
ಕರ್ನಾಟಕದಲ್ಲಿ ನಿಕೋಟಿನ್ ಯುಕ್ತ ಗುಟ್ಕಾ, ಪಾನ್ ಮಸಾಲ ನಿಷೇಧಿಸಿರುವ ಸರ್ಕಾರದ ಕ್ರಮದ ಬಗ್ಗೆ ಆರೋಪ ಪ್ರತ್ಯಾರೋಪಗಳು ಶುರುವಾಗಿವೆ. ರಾಜ್ಯ ಸರ್ಕಾರದ ಕ್ರಮಕ್ಕೆ ಅಡಿಕೆ ಬೆಳೆಯುವ ಪ್ರದೇಶದ ಶಾಸಕರುಗಳು ಪಕ್ಷಾತೀತವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಅಡಿಕೆ ಬೆಳೆಗಾರರಿಗೆ ಮಾರಕವಾಗಿರುವ ನಿಷೇಧವನ್ನು ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿ ಆದೇಶ ವಾಪಸ್ಗೆ ಸೂಚನೆ ನೀಡಿದ್ದಾರೆ. ಇನ್ನೊಂದೆಡೆ ಸಚಿವ ಖಾದರ್ ಆದೇಶ ಪಡೆದಿಲ್ಲ ಎಂದಿದ್ದಾರೆ.
- Web contact
- Updated on: Aug 15, 2026
- 5:14 pm