ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ಗಣೇಶ ಉತ್ಸವದಲ್ಲಿ ಮಣ್ಣಿನ ಗಣೇಶ ಪೂಜೆ ಸಾಮಾನ್ಯವಾದರೂ, ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೋ ಎಂಬ ಗೊಂದಲವಿದೆಯೇ? ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ಬೆಳ್ಳಿ ಗಣೇಶ ಸಂಪತ್ತು, ಸಮೃದ್ಧಿ, ಕೀರ್ತಿ ಮತ್ತು ಶಾಂತಿಯನ್ನು ತರುತ್ತದೆ. ಸರಿಯಾದ ದಿಕ್ಕಿನಲ್ಲಿ ಸ್ಥಾಪಿಸಿ, ನಿತ್ಯ ಪೂಜಿಸುವುದರಿಂದ ಸಾಲಬಾಧೆ ಮುಕ್ತಿ ಹೊಂದಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ಇದರ ಪ್ರಯೋಜನಗಳನ್ನು ತಿಳಿದುಕೊಳ್ಳಿ.
- Web contact
- Updated on: Sep 19, 2026
- 4:28 pm
‘ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ’; ಕಾಂಗ್ರೆಸ್ಗೆ ಪ್ರಲ್ಹಾದ್ ಜೋಶಿ ತಿರುಗೇಟು
ಯುಪಿಐ ವ್ಯವಸ್ಥೆ ಜಾರಿಗೆ ತರಲು ಮತ್ತು ಅದನ್ನು ಜನರಿಗೆ ಅಭ್ಯಾಸ ಮಾಡಿಸಲು ಸರ್ಕಾರ ಸಾವಿರಾರು ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ ಎಂದು ಅವರು ಸ್ಪಷ್ಟಪಡಿಸಿದರು. ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಗಳು ಆಧಾರರಹಿತ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಯುಪಿಐ ವಹಿವಾಟುಗಳಲ್ಲಿ ವಿಧಿಸಲಾಗುವ ಶುಲ್ಕದ ಬಗ್ಗೆ ಮಾತನಾಡಿದ ಅವರು, 2000 ರೂ.ವರೆಗಿನ ವಹಿವಾಟುಗಳಿಗೆ ಮತ್ತು ಬೀದಿಬದಿ ವ್ಯಾಪಾರಸ್ಥರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಕೇವಲ 0.04% ಶುಲ್ಕವು ದೊಡ್ಡ ಪ್ರಮಾಣದ ವಹಿವಾಟುಗಳನ್ನು ನಡೆಸುವ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇದರಿಂದ 96% ವಹಿವಾಟುದಾರರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
- Web contact
- Updated on: Sep 17, 2026
- 9:22 pm
ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಕಾರ್ಯ ವಿಳಂಬ ಹಾಗೂ ಅನ್ಯರಿಂದ ಅಪಮಾನ…
ಸೆಪ್ಟೆಂಬರ್ 16, 2026ರ ನಿತ್ಯ ಭವಿಷ್ಯ ಇಲ್ಲಿದೆ. ಈ ದಿನದ ರಾಶಿ ಭವಿಷ್ಯವು ನಿಮ್ಮ ಕಾರ್ಯ ವಿಳಂಬ, ಆರೋಗ್ಯದ ಸ್ಥಿತಿ, ಉದ್ಯೋಗದಲ್ಲಿ ಸ್ಥಿರತೆ, ಆರ್ಥಿಕ ಪರಿಸ್ಥಿತಿ, ಸಂಬಂಧಗಳು ಹಾಗೂ ಅದೃಷ್ಟದ ಬಗ್ಗೆ ವಿವರಗಳನ್ನು ನೀಡುತ್ತದೆ. ಕಾನೂನು ಹೋರಾಟ, ಹಣಕಾಸಿನ ವ್ಯವಹಾರಗಳು, ವೈವಾಹಿಕ ಜೀವನ ಮತ್ತು ವೈಯಕ್ತಿಕ ಬೆಳವಣಿಗೆಗಳ ಕುರಿತು ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
- Web contact
- Updated on: Sep 16, 2026
- 6:35 am
ಕುದ್ಮುಲ್ ರಂಗರಾವ್ ಕನಸಿಗೆ ತೊಡಕು: ಯೋಜನೆಗಳಿದ್ದರೂ ನೆರವೇರದ ಕೊರಗ ಸಮುದಾಯದ ‘ಸೂರು’ ಕಲ್ಪನೆ
ಕರಾವಳಿಯ ಕೊರಗ ಸಮುದಾಯಕ್ಕೆ ವಸತಿ ದೊಡ್ಡ ಸವಾಲಾಗಿದೆ. ಸರ್ಕಾರದ PM Janman, ರಾಜೀವ್ ಗಾಂಧಿ ವಸತಿ ಯೋಜನೆಗಳಿದ್ದರೂ, ಮನೆ ನಿರ್ಮಾಣಕ್ಕೆ ಲಭ್ಯವಿರುವ 4.5 ಲಕ್ಷ ರೂ. ಅಸಮರ್ಪಕ. ನಿರಕ್ಷರತೆ, ಆನ್ಲೈನ್ ನಿಯಮಗಳು, CIBIL ಸಮಸ್ಯೆಗಳು, ಹಳೆಯ ಜಮೀನು ದಾಖಲೆಗಳು, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆ ಮನೆಗಳನ್ನು ಪೂರ್ಣಗೊಳಿಸಲು ಅಡ್ಡಿಯಾಗಿವೆ. ಉಡುಪಿಯಲ್ಲಿ ಹೆಗ್ಗುಂಜೆ ರಾಜು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಉಚಿತ ಮನೆಗಳ ನಿರ್ಮಾಣ ಮಾದರಿ ಭರವಸೆ ಮೂಡಿಸಿದೆ.
- Web contact
- Updated on: Sep 14, 2026
- 12:25 pm
ಟ್ರೇಲರ್ ಇಲ್ಲದೆ ಬರ್ತಿದೆ ‘ಪ್ಯಾರಡೈಸ್’ ಸಿನಿಮಾ; ಪ್ರೇಕ್ಷಕರು ಇದನ್ನು ಒಪ್ಪುತ್ತಾರಾ?
ನಟ ನಾನಿ ಅಭಿನಯದ 'ಪ್ಯಾರಡೈಸ್' ಸಿನಿಮಾ ಸೆಪ್ಟೆಂಬರ್ 24ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಚಿತ್ರೀಕರಣ ಹಾಗೂ ಅಂತಿಮ ಹಂತದ ಕೆಲಸಗಳು ಬಾಕಿ ಇರುವುದೇ ಇದಕ್ಕೆ ಕಾರಣ ಎನ್ನಲಾಗಿದ್ದು, ಟ್ರೇಲರ್ ಇಲ್ಲದೆ ಪ್ರಚಾರಕ್ಕಿಳಿಯುತ್ತಿರುವುದು ಸಿನಿಮಾ ವಲಯದಲ್ಲಿ ದೊಡ್ಡ ಮಟ್ಟದ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.
- Web contact
- Updated on: Sep 12, 2026
- 11:43 am
ನಾಯಿ-ನರಿ, ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ: ಜಿಲ್ಲಾಡಳಿತ, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಚಿತ್ರದುರ್ಗ ನಗರದ ಹೃದಯಭಾಗದಲ್ಲಿರುವ ಗುರುಭವನವು ದುರವಸ್ಥೆಗೆ ತಲುಪಿದೆ. ಒಂದು ಕಾಲದಲ್ಲಿ ಶಿಕ್ಷಕರು ಹಾಗೂ ಸಾರ್ವಜನಿಕರ ಶುಭಕಾರ್ಯಗಳಿಗೆ ವೇದಿಕೆಯಾಗಿದ್ದ ಈ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇವಿಎಂ ಯಂತ್ರಗಳ ಸಂಗ್ರಹದ ನಂತರ ನಿರ್ಲಕ್ಷ್ಯಕ್ಕೊಳಗಾಗಿ ಹಾಳಾಗಿದೆ. ಸಾರ್ವಜನಿಕರು ಗುರುಭವನದ ಕೂಡಲೇ ದುರಸ್ತಿಗೆ ಆಗ್ರಹಿಸಿದ್ದಾರೆ.
- Web contact
- Updated on: Sep 9, 2026
- 5:03 pm
ಹೋಟೆಲ್ಗಳಲ್ಲಿ ರೂಮ್ ನಂಬರ್ 13 ಇಲ್ಲದಿರುವುದರ ಹಿಂದಿದೆ ಈ ಕಾರಣ
ನೀವು ದೊಡ್ಡ ದೊಡ್ಡ ರೆಸ್ಟೋರೆಂಟ್ ಅಥವಾ ಹೋಟೆಲ್ಗಳಿಗೆ ಹೋಗಿದ್ದೀರಬಹುದು. ಹೌದು, ಹೋಟೆಲ್ಗಳಲ್ಲಿ 13 ನಂಬರ್ ರೂಮ್ ಇರಲ್ಲ. 12 ರ ನಂತರ ನೇರವಾಗಿ ರೂಮ್ ನಂಬರ್ 14 ಎಂದು ಬರೆದಿರುತ್ತದೆ. 13 ದುರಾದೃಷ್ಟ ಸಂಖ್ಯೆ ಅಥವಾ ಸಾವಿನ ಸಂಖ್ಯೆ ಎಂಬ ನಂಬಿಕೆ ಇವತ್ತಿಗೂ ಜನರಲ್ಲಿ ಇದೆ. ಹೀಗಾಗಿ ಈ ನಂಬರ್ ರೂಮ್ ಇರಲ್ಲ.
- Web contact
- Updated on: Sep 8, 2026
- 3:04 pm
64ನೇ ಬೆಂಗಳೂರು ಗಣೇಶೋತ್ಸವ: ಶೂನ್ಯ ತಾಜ್ಯ, ಪರಿಸರ ಸ್ನೇಹಿ ಆಚರಣೆಗೆ ಹೆಜ್ಜೆ
ಬೆಂಗಳೂರು ಗಣೇಶೋತ್ಸವ ಈ ಬಾರಿ 64ನೇ ಆವೃತ್ತಿಯಲ್ಲಿ ಶೂನ್ಯ ತ್ಯಾಜ್ಯ ಮತ್ತು ಸುಸ್ಥಿರ ಆಚರಣೆಗೆ ಒತ್ತು ನೀಡಿದೆ. 15 ವರ್ಷಗಳಿಂದ ಪ್ಲಾಸ್ಟಿಕ್ ಮುಕ್ತವಾಗಿದ್ದ ಉತ್ಸವದಲ್ಲಿ, ಬಿದಿರು, ಹುಲ್ಲು, ಜೇಡಿಮಣ್ಣು ಹಾಗೂ ಗಂಗಾ ನದಿ ಮಣ್ಣಿನಿಂದ ತಯಾರಿಸಿದ 21 ಅಡಿ ಎತ್ತರದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರಮುಖ ಆಕರ್ಷಣೆಯಾಗಿದೆ. ಶ್ರೀ ವಿದ್ಯಾರಣ್ಯ ಯುವಕ ಸಂಘವು ಈ ಪರಿಸರ ಕಾಳಜಿಯ ಆಚರಣೆಯನ್ನು ಆಯೋಜಿಸುತ್ತಿದೆ.
- Web contact
- Updated on: Sep 8, 2026
- 5:29 pm
ನಿತ್ಯ ಭವಿಷ್ಯ : ಇಂದು ಈ ರಾಶಿಯವರು ಯಾರ ಮಾತಿಗೂ ಮನಸ್ಸು ಬದಲಿಸಿಕೊಳ್ಳರು…
ಶಾಲಿವಾಹನ ಶಕ 1949, ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಾದಶಿ ಮಂಗಳವಾರದ ನಿತ್ಯ ಭವಿಷ್ಯ ಇಲ್ಲಿದೆ. ಇಂದು ಹಣಕಾಸಿನ ಸಮಸ್ಯೆಗಳು, ಸಂತೋಷದ ವಾತಾವರಣ, ಉದ್ಯೋಗಿಗಳಿಗೆ ಕಳಂಕ, ಹಾಗೂ ವಿವಾಹಕ್ಕೆ ಒಪ್ಪಿಗೆಯಂತಹ ವಿಶೇಷ ಸಂಗತಿಗಳು ಕೆಲವು ರಾಶಿಗಳಿಗಿವೆ. ಈ ಲೇಖನದಲ್ಲಿ ನಿಮ್ಮ ರಾಶಿ ಚಿಹ್ನೆಯ ಆಧಾರದ ಮೇಲೆ ದೈನಂದಿನ ಅದೃಷ್ಟ, ಪ್ರೀತಿ, ವೃತ್ತಿ ಮತ್ತು ಆರೋಗ್ಯದ ಕುರಿತು ವಿವರವಾದ ಮಾಹಿತಿಯನ್ನು ಪಡೆಯಿರಿ.
- Web contact
- Updated on: Sep 8, 2026
- 3:16 am
ಕೆಇಎ ಯುಜಿಸಿಇಟಿ 2026: 3ನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ಕಾಲೇಜು ಪ್ರವೇಶ ಕಡ್ಡಾಯ, ತಪ್ಪಿದರೆ ಕಾನೂನು ಕ್ರಮ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) UGCET 2026ರ 3ನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದೆ. ಎಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ಗಳ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು. ಸೆಪ್ಟೆಂಬರ್ 8-10ರೊಳಗೆ ಶುಲ್ಕ ಪಾವತಿಸಿ, ಸೆಪ್ಟೆಂಬರ್ 11ರ ಸಂಜೆ 6 ಗಂಟೆಯೊಳಗೆ ಕಾಲೇಜಿಗೆ ವರದಿ ಮಾಡುವುದು ಕಡ್ಡಾಯ. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
- Web contact
- Updated on: Sep 7, 2026
- 7:18 pm
ರಾಹುಲ್ ಗಾಂಧಿ ವಿರುದ್ಧದ ವಿವಾದಾತ್ಮಕ ಪೋಸ್ಟ್ ಪ್ರಕರಣ: ಆರಗ ಜ್ಞಾನೇಂದ್ರ ಆಪ್ತನಿಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕರಣದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಆಪ್ತ ರಾಜೇಶ್ ಹಿರಿಮನೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿದೆ. ಕೆಳ ನ್ಯಾಯಾಲಯದ ಸಂಪೂರ್ಣ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥನ ಫೋಟೋ ಎಡಿಟ್ ಮಾಡಿ ರಾಹುಲ್ ಗಾಂಧಿ ವಿರುದ್ಧ ಪೋಸ್ಟ್ ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು.
- Web contact
- Updated on: Sep 7, 2026
- 3:41 pm
ಬೆಂಗಳೂರಲ್ಲಿ ಕಸದ ಹಾವಳಿಗೆ ಜಿಬಿಎ ಕಠಿಣ ಬ್ರೇಕ್: ರಸ್ತೆಗೆ ತ್ಯಾಜ್ಯ ಎಸೆದರೆ ಕ್ಷಮೆಯಿಲ್ಲ ಎಂದ ಸಚಿವ ಕೃಷ್ಣಬೈರೇಗೌಡ
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಭೆಯಲ್ಲಿ ಸಿಲಿಕಾನ್ ಸಿಟಿಯ ತ್ಯಾಜ್ಯ ನಿರ್ವಹಣೆ ಕುರಿತು ಗಂಭೀರ ಚರ್ಚೆ ನಡೆಯಿತು. ಸಚಿವ ಕೃಷ್ಣಬೈರೇಗೌಡರು ಸ್ವಚ್ಛತೆಗೆ ಬಿಗಿ ಕ್ರಮ ಎಚ್ಚರಿಸಿದರು. ಮನೆ ಬಾಗಿಲಿಗೆ ಕಸ ಸಂಗ್ರಹ ವಾಹನ, ಸಾರ್ವಜನಿಕರ ಸಹಭಾಗಿತ್ವ ಕಡ್ಡಾಯ. ನಗರದ ಮೂಲಸೌಕರ್ಯ, ರಸ್ತೆ, ಸಂಚಾರ ಸುಧಾರಣೆಗೂ ಸರ್ವಪಕ್ಷ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು. ಸ್ವಚ್ಛ ಹಾಗೂ ಸುಂದರ ಬೆಂಗಳೂರು ನಿರ್ಮಾಣಕ್ಕೆ GBA ಬದ್ಧ.
- Web contact
- Updated on: Sep 5, 2026
- 6:29 pm