ಭಾರೀ ಮಳೆಗೆ ಪ್ರಖ್ಯಾತ ಸ್ವಾಮಿನಾರಾಯಣ್‌ ದೇಗುಲ ಜಲಾವೃತ

ರಾಜಕೋಟ್‌: ಗುಜರಾತ್‌ನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರಖ್ಯಾತ ಸ್ವಾಮಿನಾರಾಯಣ್‌ ದೇವಾಲಯ ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದೆ. ಕಳೆದ ಕೆಲ ದಿನಗಳಿಂದ ಗುಜರಾತ್‌ನ ಕೆಲ ಭಾಗಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ಕೆಲವೆಡೆ ಪ್ರವಾಹ ಕೂಡಾ ಬಂದಿದೆ. ಅದರಲ್ಲೂ ಗುಜರಾತ್‌ನ ರಾಜಕೋಟ್‌ ಜಿಲ್ಲೆಯ ಗೊಂದಾಲ್‌ ನಗರದಲ್ಲಿರುವ ಖ್ಯಾತ ಸ್ವಾಮಿನಾರಾಯಣ್‌ ದೇವಾಲಯ ಬಹುತೇಕ ಜಲಾವೃತಗೊಂಡಿದೆ. ಪ್ರವಾಹದ ನೀರು ಬಹುತೇಕ ದೇವಸ್ಥಾನದ ಗೋಪುರದ ವರೆಗೂ ತಲುಪಿದೆ. ಭಕ್ತಾದಿಗಳು ದೇವಸ್ಥಾನಕ್ಕೆ ಹೋಗುವ ಸಾಧ್ಯತೆಯೇ ಇಲ್ಲವಾಗಿದೆ. ಕೇವಲ ಗೋಪುರ ಮತ್ತು ಮೇಲ್ಛಾವಣಿ […]

ಭಾರೀ ಮಳೆಗೆ ಪ್ರಖ್ಯಾತ ಸ್ವಾಮಿನಾರಾಯಣ್‌ ದೇಗುಲ ಜಲಾವೃತ
Guru

Updated on: Aug 30, 2020 | 8:16 PM

ರಾಜಕೋಟ್‌: ಗುಜರಾತ್‌ನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರಖ್ಯಾತ ಸ್ವಾಮಿನಾರಾಯಣ್‌ ದೇವಾಲಯ ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದೆ.

ಕಳೆದ ಕೆಲ ದಿನಗಳಿಂದ ಗುಜರಾತ್‌ನ ಕೆಲ ಭಾಗಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ಕೆಲವೆಡೆ ಪ್ರವಾಹ ಕೂಡಾ ಬಂದಿದೆ. ಅದರಲ್ಲೂ ಗುಜರಾತ್‌ನ ರಾಜಕೋಟ್‌ ಜಿಲ್ಲೆಯ ಗೊಂದಾಲ್‌ ನಗರದಲ್ಲಿರುವ ಖ್ಯಾತ ಸ್ವಾಮಿನಾರಾಯಣ್‌ ದೇವಾಲಯ ಬಹುತೇಕ ಜಲಾವೃತಗೊಂಡಿದೆ.

ಪ್ರವಾಹದ ನೀರು ಬಹುತೇಕ ದೇವಸ್ಥಾನದ ಗೋಪುರದ ವರೆಗೂ ತಲುಪಿದೆ. ಭಕ್ತಾದಿಗಳು ದೇವಸ್ಥಾನಕ್ಕೆ ಹೋಗುವ ಸಾಧ್ಯತೆಯೇ ಇಲ್ಲವಾಗಿದೆ. ಕೇವಲ ಗೋಪುರ ಮತ್ತು ಮೇಲ್ಛಾವಣಿ ಮಾತ್ರ ಕಾಣುತ್ತಿದೆ.

Also Read: ಭಾರೀ ಪ್ರವಾಹಕ್ಕೆ ಪ್ರಖ್ಯಾತ ಪಶುಪತಿನಾಥ ದೇವಸ್ಥಾನ ನೀರಲ್ಲಿ ಮುಳುಗಡೆ

Published On - 3:24 pm, Mon, 24 August 20

Guru
Follow Us