AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026: ಜಾಹೀರಾತಿನಿಂದಲೇ 1500 ಕೋಟಿ ರೂ. ಆದಾಯ..!

T20 World Cup 2026: 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಟೂರ್ನಿಯಿಂದ ಐಸಿಸಿಗೆ ಜಾಹೀರಾತು ಪ್ರಸಾರದಿಂದಲೇ ಬರೋಬ್ಬರಿ 1500 ಕೋಟಿ ರೂ.ಗೂ ಅಧಿಕ ಆದಾಯ ಹರಿದುಬಂದಿದೆ. ಭಾರತ-ಪಾಕ್ ಪಂದ್ಯ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಈ ಆದಾಯದ ಬಹುಪಾಲು ಗಳಿಕೆಗೆ ಪ್ರಮುಖ ಕಾರಣವಾಗಿವೆ. ಪ್ರಾಯೋಜಕರ ಭಾರಿ ಹೂಡಿಕೆ ಐಸಿಸಿಯ ಖಜಾನೆಯನ್ನು ತುಂಬಿಸಿದೆ.

ಪೃಥ್ವಿಶಂಕರ
|

Updated on: Mar 13, 2026 | 7:06 PM

Share
2026 ರ ಟಿ20 ವಿಶ್ವಕಪ್​ಗೆ ಅದ್ಧೂರಿ ತೆರೆಬಿದ್ದಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಗೆಲುವಿಗಾಗಿ ಭಾರತ ತಂಡಕ್ಕೆ ಐಸಿಸಿ ಹಾಗೂ ಬಿಸಿಸಿಐ ಎರಡರಿಂದಲೂ ಭರ್ಜರಿ ಬಹುಮಾನ ಸಿಕ್ಕಿದೆ. ಇನ್ನು ಈ ಟೂರ್ನಿ ಆಯೋಜಿಸಿದ್ದ ಐಸಿಸಿಗೆ ಸಿಕ್ಕ ಹಣವೆಷ್ಟು ಎಂಬುದು ಇದುವರೆಗೂ ತಿಳಿದುಬಂದಿಲ್ಲ.

2026 ರ ಟಿ20 ವಿಶ್ವಕಪ್​ಗೆ ಅದ್ಧೂರಿ ತೆರೆಬಿದ್ದಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಗೆಲುವಿಗಾಗಿ ಭಾರತ ತಂಡಕ್ಕೆ ಐಸಿಸಿ ಹಾಗೂ ಬಿಸಿಸಿಐ ಎರಡರಿಂದಲೂ ಭರ್ಜರಿ ಬಹುಮಾನ ಸಿಕ್ಕಿದೆ. ಇನ್ನು ಈ ಟೂರ್ನಿ ಆಯೋಜಿಸಿದ್ದ ಐಸಿಸಿಗೆ ಸಿಕ್ಕ ಹಣವೆಷ್ಟು ಎಂಬುದು ಇದುವರೆಗೂ ತಿಳಿದುಬಂದಿಲ್ಲ.

1 / 5
ಆದಾಗ್ಯೂ ಸದ್ಯ ಹೊರಬಿದ್ದಿರುವ ಮಾಹಿತಿ ಪ್ರಕಾರ, ಕೇವಲ ಜಾಹೀರಾತು ಪ್ರಸಾರದಿಂದಲೇ ಐಸಿಸಿ ಖಜಾನೆಗೆ 1500 ಕೋಟಿಗೂ ಅಧಿಕ ಆದಾಯ ಹರಿದುಬಂದಿದೆ ಎಂದು ವರದಿಯಾಗಿದೆ. ಅದರಲ್ಲೂ ಈ ಆದಾಯದ ಬಹುಪಾಲು ಕೇವಲ 3 ಪಂದ್ಯಗಳಿಂದಲೇ ಬಂದಿರುವುದು ಐಸಿಸಿಯ ಖಜಾನೆಯನ್ನು ತುಂಬಿ ತುಳುಕುವಂತೆ ಮಾಡಿದೆ.

ಆದಾಗ್ಯೂ ಸದ್ಯ ಹೊರಬಿದ್ದಿರುವ ಮಾಹಿತಿ ಪ್ರಕಾರ, ಕೇವಲ ಜಾಹೀರಾತು ಪ್ರಸಾರದಿಂದಲೇ ಐಸಿಸಿ ಖಜಾನೆಗೆ 1500 ಕೋಟಿಗೂ ಅಧಿಕ ಆದಾಯ ಹರಿದುಬಂದಿದೆ ಎಂದು ವರದಿಯಾಗಿದೆ. ಅದರಲ್ಲೂ ಈ ಆದಾಯದ ಬಹುಪಾಲು ಕೇವಲ 3 ಪಂದ್ಯಗಳಿಂದಲೇ ಬಂದಿರುವುದು ಐಸಿಸಿಯ ಖಜಾನೆಯನ್ನು ತುಂಬಿ ತುಳುಕುವಂತೆ ಮಾಡಿದೆ.

2 / 5
ಎಕ್ಸ್‌ಚೇಂಜ್ ಫಾರ್ ಮೀಡಿಯಾದ ವರದಿಯ ಪ್ರಕಾರ, ಕೇವಲ ಜಾಹೀರಾತಿನಿಂದಲೇ 15 ಬಿಲಿಯನ್ ಅಂದರೆ ಸುಮಾರು 1500 ಕೋಟಿ ರೂಗಳ ಆದಾಯವನ್ನು ಐಸಿಸಿ ಗಳಿಸಿದೆ. ಮೇಲೆ ಹೇಳಿದಂತೆ ಇಷ್ಟು ಆದಾಯದ ಬಹುಪಾಲು ಮೂರೇ ಮೂರು ಪಂದ್ಯಗಳಿಂದ ಬಂದಿದೆ ಎಂದು ವರದಿಯಾಗಿದೆ.

ಎಕ್ಸ್‌ಚೇಂಜ್ ಫಾರ್ ಮೀಡಿಯಾದ ವರದಿಯ ಪ್ರಕಾರ, ಕೇವಲ ಜಾಹೀರಾತಿನಿಂದಲೇ 15 ಬಿಲಿಯನ್ ಅಂದರೆ ಸುಮಾರು 1500 ಕೋಟಿ ರೂಗಳ ಆದಾಯವನ್ನು ಐಸಿಸಿ ಗಳಿಸಿದೆ. ಮೇಲೆ ಹೇಳಿದಂತೆ ಇಷ್ಟು ಆದಾಯದ ಬಹುಪಾಲು ಮೂರೇ ಮೂರು ಪಂದ್ಯಗಳಿಂದ ಬಂದಿದೆ ಎಂದು ವರದಿಯಾಗಿದೆ.

3 / 5
ಆ ಮೂರು ಪಂದ್ಯಗಳು ಯಾವುವು ಎಂದರೆ.. ಭಾರತ ಮತ್ತು ಪಾಕಿಸ್ತಾನ ಪಂದ್ಯ, ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳಾಗಿವೆ. ವರದಿಯ ಪ್ರಕಾರ, ನಿಯಮಿತ ಪಂದ್ಯಗಳಿಗೆ 10 ಸೆಕೆಂಡುಗಳ ಜಾಹೀರಾತಿನ ದರ ಸುಮಾರು 7.5 ಲಕ್ಷವಾಗಿದ್ದರೂ, ಪಂದ್ಯಾವಳಿ ಮುಂದುವರೆದಂತೆ ಈ ಬೆಲೆ 15 ರಿಂದ 16 ಲಕ್ಷಕ್ಕೆ ಏರಿತು ಎಂದು ಹೇಳಿದೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ 10 ಸೆಕೆಂಡುಗಳ ಜಾಹೀರಾತು ಸ್ಲಾಟ್ 20-25 ಲಕ್ಷಗಳಾಗಿತ್ತು ಎಂದು ವರದಿಯಾಗಿದೆ.

ಆ ಮೂರು ಪಂದ್ಯಗಳು ಯಾವುವು ಎಂದರೆ.. ಭಾರತ ಮತ್ತು ಪಾಕಿಸ್ತಾನ ಪಂದ್ಯ, ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳಾಗಿವೆ. ವರದಿಯ ಪ್ರಕಾರ, ನಿಯಮಿತ ಪಂದ್ಯಗಳಿಗೆ 10 ಸೆಕೆಂಡುಗಳ ಜಾಹೀರಾತಿನ ದರ ಸುಮಾರು 7.5 ಲಕ್ಷವಾಗಿದ್ದರೂ, ಪಂದ್ಯಾವಳಿ ಮುಂದುವರೆದಂತೆ ಈ ಬೆಲೆ 15 ರಿಂದ 16 ಲಕ್ಷಕ್ಕೆ ಏರಿತು ಎಂದು ಹೇಳಿದೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ 10 ಸೆಕೆಂಡುಗಳ ಜಾಹೀರಾತು ಸ್ಲಾಟ್ 20-25 ಲಕ್ಷಗಳಾಗಿತ್ತು ಎಂದು ವರದಿಯಾಗಿದೆ.

4 / 5
ಇನ್ನು ನಾಕೌಟ್ ಸುತ್ತಿನಲ್ಲಿ ಜಾಹೀರಾತು ದರ ಮತ್ತಷ್ಟು ದುಬಾರಿಯಾಗಿದ್ದು, ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳ ಜಾಹೀರಾತು ಸ್ಲಾಟ್‌ಗಳ ಬೆಲೆ 150,000 ರಿಂದ 200,000 ಲಕ್ಷಕ್ಕೆ ತಲುಪಿತ್ತು. ಐಸಿಸಿಯ ಮೂರು ಪ್ರಮುಖ ಪ್ರಾಯೋಜಕರಾದ ಅರಾಮ್ಕೊ, ಡಿಪಿ ವರ್ಲ್ಡ್ ಮತ್ತು ಎಮಿರೇಟ್ಸ್ ಜಾಹೀರಾತಿಗಾಗಿ ತಲಾ 750 ಕೋಟಿ ರೂ. ಖರ್ಚು ಮಾಡಿದರೆ, ಇತರ ಪ್ರಾಯೋಜಕ ಕಂಪನಿಗಳು 150 ಕೋಟಿ ರೂ. ಖರ್ಚು ಮಾಡಿವೆ ಎಂದು ವರದಿ ಬಹಿರಂಗಪಡಿಸಿದೆ.

ಇನ್ನು ನಾಕೌಟ್ ಸುತ್ತಿನಲ್ಲಿ ಜಾಹೀರಾತು ದರ ಮತ್ತಷ್ಟು ದುಬಾರಿಯಾಗಿದ್ದು, ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳ ಜಾಹೀರಾತು ಸ್ಲಾಟ್‌ಗಳ ಬೆಲೆ 150,000 ರಿಂದ 200,000 ಲಕ್ಷಕ್ಕೆ ತಲುಪಿತ್ತು. ಐಸಿಸಿಯ ಮೂರು ಪ್ರಮುಖ ಪ್ರಾಯೋಜಕರಾದ ಅರಾಮ್ಕೊ, ಡಿಪಿ ವರ್ಲ್ಡ್ ಮತ್ತು ಎಮಿರೇಟ್ಸ್ ಜಾಹೀರಾತಿಗಾಗಿ ತಲಾ 750 ಕೋಟಿ ರೂ. ಖರ್ಚು ಮಾಡಿದರೆ, ಇತರ ಪ್ರಾಯೋಜಕ ಕಂಪನಿಗಳು 150 ಕೋಟಿ ರೂ. ಖರ್ಚು ಮಾಡಿವೆ ಎಂದು ವರದಿ ಬಹಿರಂಗಪಡಿಸಿದೆ.

5 / 5
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?